Tag: atm

  • ಇಯರ್ ಎಂಡ್‍ನಲ್ಲಿ ಬೆಂಗಳೂರಿನ ಎಟಿಎಂಗಳಿಗೆ ಸರ್ಜಿಕಲ್ ಸ್ಟ್ರೈಕ್!

    ಇಯರ್ ಎಂಡ್‍ನಲ್ಲಿ ಬೆಂಗಳೂರಿನ ಎಟಿಎಂಗಳಿಗೆ ಸರ್ಜಿಕಲ್ ಸ್ಟ್ರೈಕ್!

    – ನಗರದಲ್ಲಿ ಶೇ.30 ರಿಂದ 40 ರಷ್ಟು ಎಟಿಎಂ ಕ್ಲೋಸ್?
    – ಬಹುತೇಕ ಎಟಿಎಂ ಮುಂದೆ ರಾರಾಜಿಸುತ್ತಿದೆ ನೋ ಕ್ಯಾಶ್ ಬೋರ್ಡ್

    ಬೆಂಗಳೂರು: ಈಗಾಗಲೇ ನಗರದ ಅನೇಕ ಎಟಿಎಂಗಳಲ್ಲಿ ನೋ ಕ್ಯಾಶ್ ಬೋರ್ಡ್ ಬಿದ್ದಿದೆ. ಈಗ ವರ್ಷದ ಕೊನೆಯಲ್ಲಿ ಸರ್ಜಿಕಲ್ ಸ್ಟ್ರೈಕ್ ನೋಟ್ ಬ್ಯಾನಿನ ನಂತರ ಮತ್ತೆ ಹಣ ಪಡೆಯಲು ಜನರು ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಾ ಎನ್ನುವ ಪ್ರಶ್ನೆ ಎದ್ದಿದೆ.

    ಇತ್ತೀಚೆಗೆ ನಗರದ ಕೆಲ ಎಟಿಎಂಗೆ ಹೋದರೆ ಅಲ್ಲಿ ನೋ ಕ್ಯಾಶ್ ಬೋರ್ಡ್ ಹಾಕಿರುತ್ತದೆ. ಈಗ ಸದ್ದಿಲ್ಲದೇ ನಗರದಲ್ಲಿ ಎಟಿಎಂಗಳು ಮಾಯವಾಗುತ್ತಿದ್ದು, ಈಗಾಗಲೇ ನಗರದಲ್ಲಿ ಶೇ.30 ರಿಂದ 40 ರಷ್ಟು ಎಟಿಎಂಗಳು ಕ್ಲೋಸ್ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅದರಲ್ಲೂ ರಾಷ್ಟ್ರೀಕೃತ ಬ್ಯಾಂಕ್‍ಗಳ ಎಟಿಎಂಗಳೇ ಹೆಚ್ಚು ಅನ್ನೋ ಮಾಹಿತಿಯನ್ನು ಬ್ಯಾಂಕ್ ಯೂನಿಯನ್‍ಗಳು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿವೆ. ಇದನ್ನೂ ಓದಿ: ಎಟಿಎಂಗೆ ಹಣ ತುಂಬಲು ಸಮಯ ನಿಗದಿ- ಗೃಹ ಸಚಿವಾಲಯದಿಂದ ಆದೇಶ

    ಎಟಿಎಂ ಕ್ಲೋಸ್ ಆಗಿದ್ಯಾಕೆ?
    1. ಆರ್ ಬಿಐ ಮಾರ್ಚ್ 2019ಕ್ಕೆ ಎಟಿಎಂಗಳಿಗೆ ಕೆಲವೊಂದು ಸುರಕ್ಷತಾ ಮಾನದಂಡ ಅಳವಡಿಸಲು ಡೆಡ್‍ಲೈನ್ ನೀಡಿದೆ. ಇದರಿಂದ ನಿರ್ವಹಣಾ ವೆಚ್ಚ ಹೆಚ್ಚಾಗಲಿದ್ದು, ಇದನ್ನು ಭರಿಸಲು ಸಾಧ್ಯವಿಲ್ಲ ಅನ್ನೋದು ಎಟಿಎಂ ಉದ್ಯಮ ಒಕ್ಕೂಟ ಹಾಗೂ ಬ್ಯಾಂಕುಗಳ ವಾದವಾಗಿದೆ.
    2. ನಿರ್ವಹಣಾ ವೆಚ್ಚ ಹೆಚ್ಚಾಗಿರುವುದರಿಂದ ನಷ್ಟದ ಪ್ರಮಾಣ ತಡೆಯಲು ಸಾಧ್ಯವಿಲ್ಲ ಎಂದು ಹೇಳಿ ಎಟಿಎಂ ಕ್ಲೋಸ್.
    3. ಆರ್ ಬಿಐನಿಂದ ನಗದು ವಿತರಣೆ ಕಡಿಮೆಯಾಗುತ್ತಿದೆ. ಉದ್ದೇಶ ಪೂರ್ವಕವಾಗಿ ದುಡ್ಡು ಸರಬಾರಾಜು ಕಡಿಮೆ ಮಾಡಿದ್ದಾರೆ. ಎಟಿಎಂಗಳಿಗೆ ಕ್ಯಾಶ್ ತುಂಬಿಸಲು ಆಗುತ್ತಿಲ್ಲ ಅನ್ನೋದು ಬ್ಯಾಂಕ್‍ಗಳ ದೂರು.

    ಬ್ಯಾಂಕ್‍ಗಳ ವಾದ ಇದಾಗಿದ್ದರೆ ಜನ ಬೇಸತ್ತು ಹೋಗಿದ್ದಾರೆ. ಬಹುತೇಕ ಎಟಿಎಂಗಳು ಕ್ಲೋಸ್ ಆಗಿರುವುದರಿಂದ ತೊಂದರೆಯಾಗುತ್ತಿದೆ. ಬ್ಯಾಂಕ್‍ಗಳಲ್ಲಿ ಕ್ಯೂ ಇರುವುದರಿಂದ ಕ್ಯಾಶ್ ತೆಗೆದುಕೊಳ್ಳೋಕೆ ಸಾಧ್ಯವಾಗುವುದಿಲ್ಲ ಎಂದು ಗ್ರಾಹಕ ನವೀನ್ ದೂರಿದ್ದಾರೆ.

    ಏಕೆ ಎಟಿಎಂ ಮುಚ್ಚಲಾಗುತ್ತಿದೆ?:
    ಎಟಿಎಂಗಳ ಸಾಫ್ಟ್ ವೇರ್ ಹಾಗೂ ಹಾರ್ಡ್ ವೇರ್, ಹಣ ಸಾಗಾಣಿಕೆ ವಾಹನ, ಎಟಿಎಂನ ಕೆಸೆಟ್ ಸಾಕೆಟ್ ಅಭಿವೃದ್ಧಿ (ಹೊಸ ನೋಟುಗಳನ್ನು ಇಡಲು ಆಗುವಂತೆ ಟ್ರೇಗಳನ್ನು ಮರುಹೊಂದಾಣಿಕೆಗೆ) ಭಾರೀ ವೆಚ್ಚ ಮಾಡಲಾಗುತ್ತಿದೆ. ಹೀಗಾಗಿ ದೇಶದಲ್ಲಿರುವ ಎಲ್ಲಾ ಎಟಿಎಂಗಳನ್ನು ಅಭಿವೃದ್ಧಿ ಪಡಿಸಲು ಆರ್ಥಿಕ ಹೊರೆ ಆಗಲಿದೆ. ಕೇವಲ ಕೆಸೆಟ್ ಅಭಿವೃದ್ಧಿಗೆ ಒಟ್ಟು 3.5 ಸಾವಿರ ಕೋಟಿ ರೂ. ವೆಚ್ಚ ಮಾಡಬೇಕಾಗುತ್ತದೆ ಎಂದು ಎಟಿಎಂ ಉದ್ಯಮ ಒಕ್ಕೂಟ(ಸಿಎಟಿಎಂಐ) ನಿರ್ದೇಶಕ ವಿ.ಬಾಲಸುಬ್ರಹ್ಮಣ್ಯಂ ತಿಳಿಸಿದ್ದರು.

    ಗೃಹ ಸಚಿವಾಲಯ ಇತ್ತೀಚೆಗೆ ಸೂಚನೆ ನೀಡಿದಂತೆ ಜಿಪಿಎಸ್, ಸಿಸಿಟಿವಿ ಕ್ಯಾಮೆರಾ ಅಳವಡಿಸಿರುವ 300 ವಾಹನಗಳ ಖರೀದಿಗೆ 100 ಕೋಟಿ ರೂ. ಅಗತ್ಯವಾಗುತ್ತದೆ. ಅದರಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ, ಇಬ್ಬರು ಅಧಿಕಾರಿಗಳು ಹಾಗೂ ಓರ್ವ ಚಾಲಕ ಪ್ರಯಾಣಿಸಬಲ್ಲರು. ಜೊತೆಗೆ ಸಾಫ್ಟ್ ವೇರ್ ಅನ್ನು ವಿಂಡೋಸ್ ಎಕ್ಸ್ ಪಿ ಯಿಂದ ವಿಂಡೋಸ್-10 ಗೆ ಅಭಿವೃದ್ಧಿಪಡಿಸಲು ಹಣ ಖರ್ಚು ಮಾಡಬೇಕಾಗುತ್ತದೆ ಎಂದು ವಿವರಿಸಿದ್ದಾರೆ.

    ಸಾಫ್ಟ್ ವೇರ್, ಹಾರ್ಡ್ ವೇರ್ ಬದಲಾವಣೆ, ನಿರ್ವಹಣೆಗೆ ಒಂದು ಎಟಿಎಂಗೆ ಪ್ರತಿ ತಿಂಗಳಿಗೆ 1.50 ಲಕ್ಷ ರೂ. ವೆಚ್ಚವಾಗುತ್ತದೆ. ಇದೇ ರೀತಿ ದೇಶದ 2.38 ಲಕ್ಷ ಎಟಿಎಂಗಳನ್ನು ನಿರ್ವಹಣೆ ಮಾಡುವುದು ಕಷ್ಟಕರ. ಈ ರೀತಿಯ ದುಂದು ವೆಚ್ಚಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಎಟಿಎಂ ಸಂಖ್ಯೆಯನ್ನು ಕಡಿಮೆ ಮಾಡಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.

    ದೇಶದಲ್ಲಿರುವ ಎಟಿಎಂಗಳಲ್ಲಿ ಶೇ.10ರಷ್ಟು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಹೀಗಾಗಿ ದೇಶದ ಜನಸಂಖ್ಯೆ ಪ್ರಕಾರ ಒಂದು ಲಕ್ಷ ಎಟಿಎಂಗಳು ನಿರಂತರವಾಗಿ ಕಾರ್ಯನಿರ್ವಹಿಸಿದರೆ ಸಾಕಾಗುತ್ತದೆ ಎನ್ನಲಾಗುತ್ತದೆ. 2.38 ಲಕ್ಷ ಎಟಿಎಂಗಳಲ್ಲಿ ಶೇ. 80ರಷ್ಟು ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಗ್ರಾಮೀಣ ಪ್ರದೇಶದಲ್ಲಿಯೇ ಹೆಚ್ಚಿನ ಸಂಖ್ಯೆಯ ಎಟಿಎಂಗಳು ಮುಚ್ಚಲಿವೆ. ಇದರಿಂದ ಸರ್ಕಾರದ ಆರ್ಥಿಕ ಸೇರ್ಪಡೆ ಪ್ರಯತ್ನದ ಮೇಲೆಯೂ ನಕಾರಾತ್ಮಕ ಪರಿಣಾಮ ಬೀರಲಿದೆ. ಫಲಾನುಭವಿಗಳಿಗೆ ಸರ್ಕಾರದ ಸಬ್ಸಿಡಿ ಹಣ ಪಡೆಯುವುದು ಕಷ್ಟವಾಗಲಿದೆ ಎಂದು ವಿ.ಬಾಲಸುಬ್ರಹ್ಮಣ್ಯಂ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜಿರಳೆ ಔಷಧಿ ಸ್ಪ್ರೇ ಮಾಡಿ ಹೈಟೆಕ್ ಆಗಿ ಎಟಿಎಂ ಕಳ್ಳತನಕ್ಕಿಳಿದ ಕಿರಾತಕ ಅಂದರ್

    ಜಿರಳೆ ಔಷಧಿ ಸ್ಪ್ರೇ ಮಾಡಿ ಹೈಟೆಕ್ ಆಗಿ ಎಟಿಎಂ ಕಳ್ಳತನಕ್ಕಿಳಿದ ಕಿರಾತಕ ಅಂದರ್

    ಬೆಂಗಳೂರು: ಒಬ್ಬಂಟಿಯಾಗಿ ಯಾರ ಸಹಾಯವನ್ನು ಪಡೆಯದೆ, ಯಾವುದೇ ಗ್ಯಾಂಗ್ ಕಟ್ಟಿಕೊಳ್ಳದೆ ಎಟಿಎಂ ಸ್ಕಿಮ್ಮಿಂಗ್ ಮಾಡುತ್ತಿದ್ದ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ.

    ನಗರದಲ್ಲಿನ ಪ್ರಮುಖ ಎಟಿಎಂಗಳನ್ನು ಟಾರ್ಗೆಟ್ ಮಾಡುತ್ತಿದ್ದ ನೈಜಿರಿಯಾ ಮೂಲದ ಆರೋಪಿ ಸೆಕ್ಯೂರಿಟಿಗೂ ಗೊತ್ತಾಗದ್ದಂತೆ ಎಟಿಎಂಗೆ ಸ್ಕಿಮ್ಮಿಂಗ್ ಮಿಷನ್ ಅಳವಡಿಸುತ್ತಿದ್ದನು. ಸ್ಕಿಮ್ಮಿಂಗ್ ಮಿಷನ್ ನಿಂದ ಮಾಹಿತಿ ಕಳ್ಳತನ ಮಾಡುತ್ತಿದ್ದ ಈತ, ಗ್ರಾಹಕರಿಗೆ ತಿಳಿಯದೆ ಹಣ ಎಗರಿಸುತ್ತಿದ್ದನು. ಸದ್ಯ ಈತನ ಕೃತ್ಯ ಬೆಳಕಿಗೆ ಬಂದಿದ್ದು, ರಾಜಾಜಿನಗರ ಪೊಲೀಸರು ಆರೋಪಿಯನು ಬಂಧಿಸಿದ್ದಾರೆ.

    ಜಿರಳೆ ಔಷಧಿ ಬಳಕೆ: ಎಟಿಎಂ ನಲ್ಲಿ ಸ್ಕಿಮ್ಮಿಂಗ್ ಮಿಷನ್ ಅಳವಡಿಸುತ್ತಿದ್ದ ಆರೋಪಿ ಈ ವೇಳೆ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗದಂತೆ ಮಾಡಲು ಜಿರಳೆ ಔಷಧಿ ಬಳಕೆ ಮಾಡುತ್ತಿದ್ದನು. ತನ್ನೊಂದಿಗೆ ಜಿರಳೆ ಔಷಧಿ ಸ್ಪ್ರೇ ತರುತ್ತಿದ್ದ ಆರೋಪಿ ಅದನ್ನು ಕ್ಯಾಮೆರಾಗೆ ಸ್ಪ್ರೇ ಮಾಡುತ್ತಿದ್ದನು. ಇದರಿಂದ ಕ್ಯಾಮೆರಾ ಮಬ್ಬಾಗಿ ಕಾಣುತ್ತದೆ. ಈ ವೇಳೆ ತನ್ನ ಕೃತ್ಯ ಎಸಗುತ್ತಿದ್ದನು.ಇದನ್ನು ಓದಿ: ನಿಮಗೆ ತಿಳಿಯದೆ ಖಾತೆಯಿಂದ ಹಣ ಡ್ರಾ ಆಗೋದು ಹೇಗೆ- 1.35 ನಿಮಿಷದ ವೈರಲ್ ವಿಡಿಯೋ ನೋಡಿ 

    ಆರೋಪಿಯ ಚಲನವಲನಗಳು ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದ್ದು, ಕ್ಯಾಮೆರಾದಲ್ಲಿ ದಾಖಲಾದ ದೃಶ್ಯಗಳು ಮಬ್ಬಾಗಿರುವುದನ್ನು ಕಂಡ ಬ್ಯಾಂಕ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬ್ಯಾಂಕ್ ಮಾಹಿತಿಯ ಆಧಾರದ ಮೇಲೆ ರಾಜಾಜಿನಗರ ಪೊಲೀಸರು ಕಾರ್ಯಚಾರಣೆ ನಡೆಸಿ ಆರೋಪಿಯನ್ನ ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಹೊಸ 500, 2 ಸಾವಿರ ರೂ. ನೋಟುಗಳ ಕುರಿತ ಸ್ಫೋಟಕ ಸುದ್ದಿ..!

    ಹೊಸ 500, 2 ಸಾವಿರ ರೂ. ನೋಟುಗಳ ಕುರಿತ ಸ್ಫೋಟಕ ಸುದ್ದಿ..!

    ಬೆಂಗಳೂರು: ಹೊಸ 500 ಮತ್ತು 2000 ರೂ ಮುಖಬೆಲೆಯ ನೋಟುಗಳ ಮರು ಬಳಕೆಯೇ ಅಸಾಧ್ಯ ಎಂದು ನೂತನ ನೋಟುಗಳ ಕುರಿತ ಸ್ಫೋಟಕ ಸುದ್ದಿಯೊಂದು ಹೊರಬಿದ್ದಿದೆ.

    500 ಮತ್ತು 1000 ರೂ. ನೋಟುಗಳನ್ನು ಒಂದು ಬಾರಿ ಬಳಕೆಯಾದರೆ, ಮತ್ತೆ ಆ ನೋಟುಗಳನ್ನು ಬಳಸಲು ಸಾಧ್ಯವೇ ಇಲ್ಲ. ಎಟಿಎಂಗಳಲ್ಲಿ ಈ ನೋಟುಗಳನ್ನು ಇಡಲು ಸಾಧ್ಯವಾಗುತ್ತಿಲ್ಲ. ಈಗ ನೋಟು ನಿಷೇಧ ಬಳಿಕ ಬಂದಿರುವ 500 ಮತ್ತು 2 ಸಾವಿರ ರೂ. ನೋಟುಗಳ ಗುಣಮಟ್ಟದ ಬಗ್ಗೆ ಅನುಮಾನ ಮೂಡಿದೆ ಎಂದು ಈ ಬಗ್ಗೆ ಮಾಧ್ಯಮವೊಂದು ವರದಿ ಮಾಡಿದೆ.

    2016ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರರು ನೋಟು ನಿಷೇಧ ಮಾಡಿದ್ದರು. ಬಳಿಕ 500 ಹಾಗೂ 2000 ರೂ. ಮುಖಬೆಲೆಯನ್ನು ಚಲಾವಣೆಗೆ ತಂದಿದ್ದಾರೆ. ಈ ಮೊದಲೆ ನೋಟುಗಳ ಗುಣಮಟ್ಟದ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಈಗ ಮತ್ತೆ ಹೊಸ ನೋಟುಗಳ ಗುಣಮಟ್ಟದ ಬಗ್ಗೆ ಅನುಮಾನ ವ್ಯಕ್ತವಾಗಿದೆ.

    ಒಂದು ಬಾರಿ ನೂತನ ನೋಟುಗಳನ್ನು ಬಳಸಿದರೆ ಮತ್ತೆ ಎಟಿಎಂಗೆ ಬಳಸಿದ ನೋಟುಗಳನ್ನು ಹಾಕಲು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಬಳಸಿದ ನೋಟನ್ನು ಎಟಿಎಂಗೆ ಹಾಕಿದರೆ, ಜನರು ಹಣ ಡ್ರಾ ಮಾಡುವಾಗ ಎಟಿಎಂನಲ್ಲಿ ಅಳವಡಿಸಿರುವ ಸೆನ್ಸಾರ್ ಬಳಸಿದ ನೋಟನ್ನು ಸೆನ್ಸಾರ್ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬಳಸಿದ ನೋಟುಗಳನ್ನು ‘ಅನುಪಯುಕ್ತ ನೋಟು’ ಗಳೆಂದು ವಿಂಗಡಿಸಿ ಆರ್ ಬಿಐ  ಗೆ ಬ್ಯಾಂಕುಗಳು ವಾಪಸ್ ಕಳಿಸುತ್ತಿದೆ ಎಂದು ವರದಿಯಾಗಿದೆ.

    ಆರ್ ಬಿಐ ಈ ಬಗ್ಗೆ ಪ್ರತಿಕ್ರಿಯಿಸಿ, ನೋಟಿನ ಗುಣಮಟ್ಟ ಉತ್ತಮವಾಗಿದೆ. ಯಾವುದೇ ತೊಂದರೆ ಇಲ್ಲ ಎಂದು ಹೇಳಿದೆ. ಆದರೆ ಬ್ಯಾಂಕ್ ಗಳು ಮಾತ್ರ ಬಳಸಿದ ನೋಟುಗಳನ್ನು ಅನುಪಯುಕ್ತ ನೋಟು ಎಂದು ವಾಪಸ್ ಕಳುಹಿಸುತ್ತಿದೆ. ಇದೇ ರೀತಿ ಅನುಪಯುಕ್ತ ನೋಟುಗಳನ್ನು ವಾಸಪ್ ಕಳುಹಿಸಿದರೆ ನೋಟುಗಳ ಚಲಾವಣೆಯಲ್ಲಿ ಕಡಿಮೆಯಾಗುತ್ತದೆ. ಮತ್ತೆ ಹೊಸ ನೋಟುಗಳನ್ನು ಮುದ್ರಣ ಮಾಡಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎಟಿಎಂ ಒಳಗೆ ಮಹಿಳೆಯ ಮೇಲೆ ಗ್ಯಾಂಗ್‍ರೇಪ್

    ಎಟಿಎಂ ಒಳಗೆ ಮಹಿಳೆಯ ಮೇಲೆ ಗ್ಯಾಂಗ್‍ರೇಪ್

    ಭುವನೇಶ್ವರ: ಇಬ್ಬರು ಕಾಮುಕರು ಎಟಿಎಂ ಒಳಗೆ ಮಹಿಳೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ಒಡಿಶಾದ ಕಟಕ್ ನಲ್ಲಿ ನಡೆದಿದೆ.

    ಕಟಕ್ ನಗರದ ಪಿಲ್‍ಗ್ರೀಮ್ ರಸ್ತೆಯ ಎಟಿಎಂ ನಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತೆಯನ್ನು ಎಟಿಎಂ ಕೌಂಟರ್ ಒಳಗೆ ಆರೋಪಿಗಳಿಬ್ಬರು ಅಪಹರಿಸಿ ಬಳಿಕ ಆಕೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಅಷ್ಟೇ ಅಲ್ಲದೇ ಅತ್ಯಾಚಾರ ಬಳಿಕ ಹೊರಗೆ ತಳ್ಳಿ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

    ಸ್ಥಳೀಯರು ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆಯನ್ನು ನೋಡಿ ತಕ್ಷಣ ಮಾಲ್ಗೋಡೌನ್ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಸಂತ್ರಸ್ತೆಯನ್ನು ರಕ್ಷಣೆ ಮಾಡಿದ್ದು, ವೈದ್ಯಕೀಯ ಪರೀಕ್ಷೆ ಮತ್ತು ಚಿಕಿತ್ಸೆಗಾಗಿ ಸಮೀಪದ ಎಸ್‍ಸಿಬಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಸಂತ್ರಸ್ತೆ ಹೇಳಿಕೆಯ ಮೇರೆಗೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಈ ಘಟನೆ ಸಂಬಂಧಿಸಿದಂತೆ ಎಟಿಎಂನ ಭದ್ರತಾ ಸಿಬ್ಬಂದಿ ಮತ್ತು ಆರೋಪಿಗಳ ಸ್ನೇಹಿತರಲ್ಲಿ ಒಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಗಮನಿಸಿ, ಎಸ್‍ಬಿಐ ಎಟಿಎಂ ವಿಥ್ ಡ್ರಾ ಮಿತಿ ಇಳಿಕೆ- ಅ.31 ರಿಂದ ಜಾರಿ

    ಗಮನಿಸಿ, ಎಸ್‍ಬಿಐ ಎಟಿಎಂ ವಿಥ್ ಡ್ರಾ ಮಿತಿ ಇಳಿಕೆ- ಅ.31 ರಿಂದ ಜಾರಿ

    ನವದೆಹಲಿ: ಭಾರತದ ಅತಿ ದೊಡ್ಡ ಬ್ಯಾಂಕಿಂಗ್ ಸಂಸ್ಥೆಯಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‍ಬಿಐ) ಗ್ರಾಹಕರ ಎಟಿಎಂ ಡ್ರಾ ಮಿತಿಯನ್ನು ಕಡಿತಗೊಳಿಸಲು ಮುಂದಾಗಿದೆ. ದಿನವೊಂದರ ಗ್ರಾಹಕರ ಎಟಿಎಂ ಡ್ರಾ ಮಿತಿ ಸದ್ಯ 40 ಸಾವಿರ ರೂಪಾಯಿ ಇದ್ದು, ಇದನ್ನು 20 ಸಾವಿರ ರೂಪಾಯಿಗೆ ಇಳಿಸಲು ನಿರ್ಧಾರ ಮಾಡಿದೆ.

    ಈ ನೂತನ ನಿಯಮವು ಇದೇ ಅಕ್ಟೋಬರ್ 31 ರಿಂದ ಜಾರಿಗೆ ಬರಲಿದೆ. ಇನ್ನು ಮುಂದೆ ಕ್ಲಾಸಿಕ್ ಮತ್ತು ಮೆಸ್ಟ್ರೊ ಕಾರ್ಡ್ ಹೊಂದಿದವರು ದಿನಕ್ಕೆ ಗರಿಷ್ಟ ಕೇವಲ 20 ಸಾವಿರ ರೂ. ಮಾತ್ರ ಡ್ರಾ ಮಾಡಬಹುದು ಎಂದು ಎಸ್‍ಬಿಐ ತನ್ನ ವೆಬ್‍ಸೈಟ್ ನಲ್ಲಿ ಹೇಳಿದೆ.

    ಎಸ್‍ಬಿಐ ಗೋಲ್ಡ್ ಮತ್ತು ಪ್ಲಾಟಿನಂ ಬಳಕೆದಾರರಿಗೆ ಹೊಸ ನಿಯಮ ಅನ್ವಯವಾಗುವುದಿಲ್ಲ. ಗೋಲ್ಡ್ ಕಾರ್ಡ್ ಹೊಂದಿರುವವರು 50 ಸಾವಿರ, ಪ್ಲಾಟಿನಂ ಕಾರ್ಡ್ ಹೊಂದಿರುವವರು 1 ಲಕ್ಷ ರೂ. ವರೆಗೆ ಹಣವನ್ನು ಡ್ರಾ ಮಾಡಿಕೊಳ್ಳಬಹುದು. ಇದನ್ನು ಓದಿ: ಎಸ್‍ಬಿಐ ಎಟಿಎಂ ವಿತ್ ಡ್ರಾವಲ್ ಲಿಮಿಟ್ ಹಿಂದಿರುವ ಅಸಲಿ ಸತ್ಯ ಏನು? ಸೈಬರ್ ತಜ್ಞರು ಹೇಳ್ತಾರೆ ಓದಿ

    ಕ್ಲಾಸಿಕ್ ಮತ್ತು ಮೆಸ್ಟ್ರೊ ಡೆಬಿಟ್ ಕಾರ್ಡ್ ಬಳಕೆದಾರರು ತಮ್ಮ ದಿನನಿತ್ಯದ ಎಟಿಎಂ ಹಣ ಪಡೆಯುವ ಮಿತಿಯನ್ನ ಹೆಚ್ಚಿಸಿಕೊಳ್ಳಬೇಕಾದರೆ ಅಧಿಕ ಮಿತಿಯ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕು. ದೇಶದಲ್ಲಿ ಎಟಿಎಂ ನಿಂದ ಹಣ ಕಳವು, ಮೋಸದ ವ್ಯವಹಾರಗಳನ್ನ ತಡೆಯಲು ಮತ್ತು ಡಿಜಿಟಲ್ ವ್ಯವಹಾರವನ್ನ ಉತ್ತೇಜಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಎಸ್‍ಬಿಐ ತಿಳಿಸಿದೆ. ಇದನ್ನು ಓದಿ: ಯಾಕೆ ಹಳೆ ಎಟಿಎಂ ಕಾರ್ಡ್ ಚೇಂಜ್ ಮಾಡಬೇಕು? ಏನಿದು ಇಎಂವಿ ಚಿಪ್ ಕಾರ್ಡ್? ಎಲ್ಲಿ ಸಿಗುತ್ತೆ?

    ಇತ್ತೀಚಿನ ದಿನಗಳಲ್ಲಿ ಎಸ್‍ಬಿಐ ತನ್ನ ಗ್ರಾಹಕರಿಗೆ ಅನುಕೂಲವಾಗುವಂತೆ ಕಾರ್ಯವೈಖರಿಯನ್ನು ಬದಲಾಯಿಸುತ್ತಿದೆ. ಗ್ರಾಹಕರು ತಮ್ಮ 15ಜಿ/ಹೆಚ್ (ಶ್ರೀಸಾಮಾನ್ಯರು/ಹಿರಿಯನಾಗರಿಕರು) ಅರ್ಜಿಯನ್ನ ಯಾವ ಶಾಖೆಯಲ್ಲಿ ಬೇಕಾದರೂ ಸಲ್ಲಿಸಬಹುದು ಮತ್ತು ಆನ್‍ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಸೌಲಭ್ಯವನ್ನು ಕೂಡ ಕಲ್ಪಿಸಿದೆ ಎಂದು ತಿಳಿಸಿದೆ.

    ಒಟ್ಟು 39.50 ಕೋಟಿ ಗ್ರಾಹಕರಿಗೆ ಡೆಬಿಟ್ ಕಾರ್ಡ್ ಗಳನ್ನ ವಿತರಿಸಿದ್ದು, ಸುಮಾರು 26 ಕೋಟಿ ದಿನನಿತ್ಯ ಬಳಕೆದಾರರಿದ್ದಾರೆ ಎಂದು ಎಸ್‍ಬಿಐ ಮಾರ್ಚ್ ನಲ್ಲಿ ತಿಳಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಯಾಕೆ ಹಳೆ ಎಟಿಎಂ ಕಾರ್ಡ್ ಚೇಂಜ್ ಮಾಡಬೇಕು? ಏನಿದು ಇಎಂವಿ ಚಿಪ್ ಕಾರ್ಡ್? ಎಲ್ಲಿ ಸಿಗುತ್ತೆ?

    ಯಾಕೆ ಹಳೆ ಎಟಿಎಂ ಕಾರ್ಡ್ ಚೇಂಜ್ ಮಾಡಬೇಕು? ಏನಿದು ಇಎಂವಿ ಚಿಪ್ ಕಾರ್ಡ್? ಎಲ್ಲಿ ಸಿಗುತ್ತೆ?

    ಬೆಂಗಳೂರು: ಎಟಿಎಂ ಡೆಬಿಟ್ ಕಾರ್ಡ್ ಬಳಸುವ ಮಂದಿಯ ಮೊಬೈಲ್ ಗೆ ಈಗಾಗಲೇ ಬ್ಯಾಂಕ್ ಗಳು ಮ್ಯಾಗ್ನೆಟಿಕ್ ಸ್ಟ್ರೈಪ್ ಬದಲು ಇಎಂವಿ ಚಿಪ್ ಇರುವ ಎಟಿಎಂ ಕಾರ್ಡ್ ಬಳಸಿ ಎಂದು ಮೆಸೇಜ್ ಕಳುಹಿಸಲು ಆರಂಭಿಸಿವೆ. ಬ್ಯಾಂಕ್ ಕಳುಹಿಸಿದ ಈ ಮಸೇಜ್ ಬಗ್ಗೆ ಯಾವುದೇ ತಲೆಕೆಡಿಸಿಕೊಳ್ಳದೇ ಸ್ಪಾಮ್ ಮೆಸೇಜ್ ಎಂದು ಭಾವಿಸಿಬೇಡಿ. ಈ ಮಸೇಜ್ ನಿರ್ಲಕ್ಷಿಸಿದರೆ ಡಿಸೆಂಬರ್ 31 ರ ನಂತರ ನಿಮ್ಮ ಎಟಿಎಂ ಕಾರ್ಡ್ ನಿಷ್ಕ್ರೀಯವಾಗಲಿದೆ.

    ಹೌದು, ದೇಶದಲ್ಲಿ ಆನ್‍ಲೈನ್ ವಂಚಕರ ಹಾವಳಿ ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಆರ್‌ಬಿಐ ಎಲ್ಲ ಬ್ಯಾಂಕ್ ಗಳಿಗೆ ಇಎಂವಿ ಚಿಪ್ ಇರುವ ಡೆಬಿಟ್ ಕಾರ್ಡ್ ನೀಡುವಂತೆ ಸೂಚಿಸಿದೆ. ಹೀಗಾಗಿ ಏನಿದು ಇಎಂವಿ ಚಿಪ್? ಹೇಗೆ ಭಿನ್ನ? ಬ್ಯಾಂಕ್ ಖಾತೆಗಳಿಗೆ ಸುರಕ್ಷತೆ ನೀಡುತ್ತಾ ಎನ್ನುವ ಪ್ರಶ್ನೆಗೆ ಇಲ್ಲಿ ಉತ್ತರ ನೀಡಲಾಗಿದೆ.

    ಏನಿದು ಇಎಂವಿ ಚಿಪ್ ಕಾರ್ಡ್?
    ಸುಲಭವಾಗಿ ಹೇಳುವುದಾದರೆ ಮೊಬೈಲ್ ನಲ್ಲಿ ಕರೆ ಮಾಡಬೇಕಾದರೆ ಒಂದು ಸಿಮ್ ಇರಬೇಕೋ ಹಾಗೆಯೇ ಈ ಇಎಂವಿಯಲ್ಲೂ ಒಂದು ಚಿಪ್ ಇರುತ್ತದೆ. ಯುರೊಪೇ  ಮಾಸ್ಟರ್‌ಕಾರ್ಡು ವೀಸಾ ಹೃಸ್ವ ರೂಪವೇ ಇಎಂವಿ. ಈ ಹಿಂದೆ ಬಳಕೆಯಾಗುತ್ತಿದ್ದ ಮ್ಯಾಗ್ನೆಟಿಕ್ ಸ್ಟ್ರೈಪ್ ಕಾರ್ಡ್ ಗಿಂತ ಈ ಕಾರ್ಡ್ ಹೆಚ್ಚು ರಕ್ಷಣೆ ನೀಡುವ ಕಾರಣ ಎಲ್ಲ ಬ್ಯಾಂಕ್ ಗಳು ಈಗ ಇಎಂವಿ ಚಿಪ್ ಇರುವ ಎಟಿಎಂ ಕಾರ್ಡ್ ಗಳನ್ನೇ ನೀಡುತ್ತಿವೆ.

    ಹಳೆ ಎಟಿಎಂ ಕಾರ್ಡ್ ಅಪಾಯಕಾರಿ ಯಾಕೆ?
    ಕಾರ್ಡ್ ಹಿಂದಿರುವ ಕಪ್ಪು ಬಣ್ಣದ ಮ್ಯಾಗ್ನೆಟಿಕ್ ಸ್ಟ್ರೈಪ್ ನಲ್ಲಿ ಎನ್ ಕ್ರಿಪ್ಟ್ ಆಗಿರುವ ಡೇಟಾಗಳನ್ನು ಕದಿಯುವುದು ಸುಲಭ. ಗ್ರಾಹಕರ ಕಾರ್ಡ್ ಕಳೆದು ಹೋದರೆ ಅಥವಾ ಕಳ್ಳರ ಪಾಲಾದರೆ ಸುಲಭವಾಗಿ ಖಾತೆಯಿಂದಲೇ ಹಣವನ್ನು ಎಗರಿಸಲು ಸಾಧ್ಯವಿದೆ. ಈಗ ನೀವು ಎಟಿಎಂನಲ್ಲಿ ಹಣ ಡ್ರಾ ಮಾಡಿದವರ ಖಾತೆಯಿಂದ ಕಳ್ಳರು ಹಣ ದೋಚಿದ ಸುದ್ದಿಯನ್ನು ನೀವು ಓದಿರಬಹುದು. ಎಟಿಎಂ ಗ್ರಾಹಕರ ಕಾರ್ಡ್ ಕಳೆದು ಹೋದರೆ, ಇಲ್ಲವೇ ಕಳ್ಳರ ಪಾಲಾದರೆ ಸುಲಭವಾಗಿ ಹಣ ದೋಚಲು ಹಳೆಯ ಕಾರ್ಡ್ ಗಳಲ್ಲಿ ಅವಕಾಶವಿದೆ. ಇವಿಎಂ ಚಿಪ್ ಆಧಾರಿತ ಕಾರ್ಡುಗಳು ಗ್ರಾಹಕರನ್ನು ರಕ್ಷಿಸುತ್ತದೆ. ಎಟಿಎಂ ಯಂತ್ರಗಳಿಗೆ ವಂಚಕರು ಪುಟ್ಟ ಸ್ಕಿಮ್ಮಿಂಗ್ ಉಪಕರಣವನ್ನು ಇಟ್ಟು ಕಳವು ಮಾಡುತ್ತಾರೆ. ಇವುಗಳನ್ನು ತಡೆಯಲು ಇಎಂವಿ ಕಾರ್ಡ್ ಸಮರ್ಥವಾಗಿದೆ.

     

    ಭಿನ್ನ ಹೇಗೆ?
    ಹಿಂದಿನ ಎಟಿಎಂ ಕಾರ್ಡ್ ನಲ್ಲಿ ಗ್ರಾಹಕರ ಮಾಹಿತಿಗಳು ಮ್ಯಾಗ್ನೆಟಿಕ್ ಸ್ಟ್ರೈಪ್ ನಲ್ಲಿ ಎನ್ ಕ್ರಿಪ್ಟ್ ಮಾಡಲಾಗಿರುತ್ತದೆ. ಆದರೆ ಇಎಂವಿಯಲ್ಲಿ ಗ್ರಾಹಕರ ಮಾಹಿತಿಗಳು ಚಿಪ್ ಒಳಗಡೆ ಇರುತ್ತದೆ. ಇಎಂವಿ ಚಿಪ್ ಕಾರ್ಡ್ ಮೂಲಕ ನಡೆದ ವಹಿವಾಟಿನ ಪರಿಶೀಲನೆಗೆ ಒಂದು ವಿಶೇಷ ವಹಿವಾಟು ಕೋಡ್ ಇರುತ್ತದೆ. ಈ ಕೋಡ್ ಬಳಕೆದಾರರ ವೆರಿಫಿಕೇಶನ್ ಮಾಡುತ್ತದೆ.

    ಹೊಸ ಎಟಿಎಂ ಎಲ್ಲಿ ಸಿಗುತ್ತೆ?
    ಗ್ರಾಹಕರು ಮೊಬೈಲ್ ಅಪ್ಲಿಕೇಶನ್ ಅಥವಾ ನೆಟ್ ಬ್ಯಾಕಿಂಗ್ ಮೂಲಕ ಹೊಸ ಎಟಿಎಂ ಕಾರ್ಡ್ ಪಡೆದುಕೊಳ್ಳಬಹುದು. ಅಥವಾ ನೇರವಾಗಿ ಬ್ಯಾಂಕ್ ಖಾತೆಗೆ ತೆರಳಿ ಕಾರ್ಡ್ ಗಾಗಿ ಮನವಿ ಸಲ್ಲಿಸಬಹುದು. ಈ ಸೇವೆಗೆ ಯಾವುದೇ ಶುಲ್ಕ ನೀಡುವ ಅಗತ್ಯವಿಲ್ಲ.

     

  • ಗ್ರಾಹಕರ ಮೊಬೈಲ್‍ಗೆ ಒಟಿಪಿ ಬಂದ್ರೂ ಬ್ಯಾಂಕ್ ಖಾತೆಗೆ ಕನ್ನ: ಖದೀಮರ ತಂತ್ರ ಏನು? ಈ ಸುದ್ದಿ ನೀವ್ ಓದ್ಲೇಬೇಕು

    ಗ್ರಾಹಕರ ಮೊಬೈಲ್‍ಗೆ ಒಟಿಪಿ ಬಂದ್ರೂ ಬ್ಯಾಂಕ್ ಖಾತೆಗೆ ಕನ್ನ: ಖದೀಮರ ತಂತ್ರ ಏನು? ಈ ಸುದ್ದಿ ನೀವ್ ಓದ್ಲೇಬೇಕು

    ಬೆಂಗಳೂರು: ಸ್ಪಾಮ್ ಮೇಲ್ ಕಳುಹಿಸಿ ಜನರ ಮಾಹಿತಿ ಕದ್ದು ಬ್ಯಾಂಕ್ ಖಾತೆಗೆ ಕನ್ನ ಹಾವುದು ಹಳೆಯ ಸಂಗತಿ. ಈಗ ಸೈಬರ್ ಕಳ್ಳರು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಗ್ರಾಹಕರ ಮೊಬೈಲ್‍ಗೆ ಒಟಿಪಿ ಬಂದರೂ ದೂರದಲ್ಲಿದ್ದುಕೊಂಡೇ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.

    ಹೌದು, ಬ್ಯಾಂಕ್ ಖಾತೆಯಿಂದಲೇ ಹಣ ಎಗರಿಸುತ್ತಿದ್ದ ಖತರ್ನಾಕ್ ಇಬ್ಬರು ಕಳ್ಳರನ್ನು ಬೆಂಗಳೂರಿನ ಸೈಬರ್ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗದ ರಾಘವೇಂದ್ರ (24) ಹಾಗೂ ರಾಕೇಶ್ ಕುಮಾರ್ (24) ಬಂಧಿತ ಆರೋಪಿಗಳು. ಬಂಧಿತರಿಂದ ಒಂದು ಸ್ವೈಪಿಂಗ್ ಯಂತ್ರ, 5 ಎಟಿಎಂ ಕಾರ್ಡ್, ಒಂದು ಕಾರು, 7 ಮೊಬೈಲ್, ಎರಡು ಹೆಚ್ಚುವರಿ ಸಿಮ್ ಕಾರ್ಡ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ನಕಲಿ ಕಂಪನಿ ಓಪನ್ ಮಾಡಿದ್ರು:
    ರಾಘವೇಂದ್ರ ಬಿಕಾಂ ಪದವೀಧರನಾಗಿದ್ದು, ಈ ಹಿಂದೆ ಹಣಕಾಸು ವಹಿವಾಟು ಸಂಬಂಧಿಸಿದ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಇದರಿಂದಾಗಿ ಆನ್‍ಲೈನ್ ಮೂಲಕ ಹಣ ವರ್ಗಾವಣೆ ಬಗ್ಗೆ ಹೆಚ್ಚಿ ಜ್ಞಾನ ಪಡೆದುಕೊಂಡಿದ್ದ. ಆರ್ಥಿಕವಾಗಿ ಬೇಗ ಅಭಿವೃದ್ಧಿ ಹೊಂದಬೇಕು, ಬೇಗನೇ ಹಣಗಳಿಸಬೇಕು ಎನ್ನುವ ಉದ್ದೇಶದಿಂದ ‘ಲೀಡ್ ಮ್ಯಾನೇಜ್ ಮೆಂಟ್’ ಹೆಸರಿನಲ್ಲಿ ನಕಲಿ ಕಂಪೆನಿ ಪ್ರಾರಂಭಿಸಿದ್ದಾನೆ. ಹಣ ವರ್ಗಾವಣೆ ಮಾಡಿಕೊಳ್ಳಲು 2017ರಂದು ಹೊಸೂರು ರಸ್ತೆಯ ಎಸ್‍ಬಿಐ ನಲ್ಲಿ ಲೀಡ್ ಮ್ಯಾನೇಜ್‍ಮೆಂಟ್ ಕಂಪೆನಿ ಹೆಸರಿನಲ್ಲಿ ಖಾತೆ ತೆರೆದಿದ್ದಾನೆ. ಈ ಕೃತ್ಯಕ್ಕೆ ತನ್ನ ಸ್ನೇಹಿತ ರಾಕೇಶ್‍ನನ್ನು ರಾಘವೇಂದ್ರ ಸೇರಿಸಿಕೊಂಡಿದ್ದಾನೆ.

    ಗ್ರಾಹಕರಿಗೆ ಕರೆ:
    ಇಬ್ಬರು ಸೇರಿದ ನಂತರ ಜಸ್ಟ್ ಡಯಲ್ ಮೂಲಕ ಲಾಜೆಸ್ಟಿಕ್ ಡೀಲರ್ಸ್, ಅರ್ಥ್ ಮೂವರ್ಸ್, ಸೋಲಾರ್ ಡೀಲರ್ಸ್ ಸೇರಿದಂತೆ ಕೆಲವು ವ್ಯಾಪಾರಿಗಳ ದೂರವಾಣಿ ಸಂಖ್ಯೆ ಕಲೆಹಾಕಿದ್ದಾರೆ. ವ್ಯಾಪಾರಿಗಳಿಗೆ ಕರೆ ಮಾಡಿ, ನಾವು ಕಸ್ಟಮರ್ ಲೀಡ್ ಕಂಪನಿ ನಡೆಸುತ್ತಿದ್ದು, ಕಮಿಷನ್ ಆಧಾರದಲ್ಲಿ ಗ್ರಾಹಕರನ್ನು ಹುಡುಕಿಕೊಡುತ್ತೇವೆ ಅಂತಾ ಹೇಳಿಕೊಂಡು, ನಿಮ್ಮನ್ನು ಭೇಟಿಯಾಗಬೇಕು ಅಂತಾ ಕೇಳುತ್ತಿದ್ದರು.

    ಷರತ್ತು ಹೇಳಿ ಫೋಟೋ ತೆಗೆದ್ರು:
    ಆರೋಪಿಗಳ ಕರೆಗೆ ಪ್ರತಿಕ್ರಿಯಿಸಿದ್ದ ವ್ಯಾಪಾರಿಗಳು ಭೇಟಿಗೆ ಸಮಯ ನೀಡುತ್ತಿದ್ದರು. ವ್ಯಾಪಾರಿಗಳ ಬಳಿಗೆ ಹೋಗುತ್ತಿದ್ದ ರಾಘವೇಂದ್ರ ಹಾಗೂ ರಾಕೇಶ್ ಆತ್ಮೀಯವಾಗಿ ಮಾತುಕತೆ ನಡೆಸುತ್ತಿದ್ದರು. ನಮ್ಮ ಕಂಪನಿಯಿಂದ ನಿಮಗೆ ಸೇವೆ ಒದಗಿಸಲು ಕೆಲವು ಷರತ್ತುಗಳಿವೆ. ನಿಮ್ಮ ಬಳಿ ಇರುವ ಎಟಿಎಂ ಕಾರ್ಡ್ ನಿಂದ 200 ರೂ. ಪಾವತಿ ಮಾಡಬೇಕು. ಕಂಪನಿಯ ಫಾರ್ಮ್ ನಲ್ಲಿ ತುಂಬಿ, ಸಹಿ ಮಾಡಬೇಕು ಅಂತಾ ಹೇಳುತ್ತಿದ್ದರು.

    ಇಬ್ಬರ ಮಾತಿಗೆ ಮರುಳಾಗುವ ವ್ಯಾಪಾರಿಗಳು ತಮ್ಮ ಎಟಿಎಂ/ ಕ್ರೆಡಿಟ್ ಕಾರ್ಡ್ ಇವರಿಗೆ ನೀಡುತ್ತಿದ್ದರು. ಕಾರ್ಡ್ ಸಿಕ್ಕಿದ ಕೂಡಲೇ ತಮ್ಮ ಸ್ವೈಪಿಂಗ್ ಯಂತ್ರದಿಂದ ಹಣವನ್ನು ಖಾತೆಗೆ ಜಮ ಮಾಡುತ್ತಾರೆ. ಈ ವೇಳೆ ಫಾರ್ಮ್ ಭರ್ತಿ ಮಾಡುವಂತೆ ಹೇಳಿ ವ್ಯಾಪಾರಿಗಳ ಗಮನವನ್ನು ಬೇರೆ ಕಡೆಗೆ ಸೆಳೆದು ಕಾರ್ಡ್ ನ ಎರಡೂ ಬದಿಯ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಅಷ್ಟಕ್ಕೆ ಬಿಡದೇ ಅವರ ಬಳಿ ಮೊಬೈಲ್ ಪಡೆದು, ಲೀಡ್ ಮ್ಯಾನೇಜ್ ಮೆಂಟ್ ಆ್ಯಪ್ ಡೌನ್‍ಲೋಡ್ ಹಾಗೂ ‘ಮೈ ಎಸ್‍ಎಂಎಸ್ ಆ್ಯಪ್’ ಗಳನ್ನು ಕೂಡ ಡೌನ್‍ಲೋಡ್ ಮಾಡಿ ಮಸೇಜ್‍ಗಳನ್ನು ಸಿಂಕ್ ಮಾಡಿ ಪಾಸ್‍ವರ್ಡ್ ಪಡೆದು ಅಲ್ಲಿಂದ ಹೊರಡುತ್ತಿದ್ದರು.

    ಅಸಲಿ ಆಟ ಆರಂಭ:
    ಆನ್‍ಲೈನ್ ವ್ಯವಹಾರ ಗಳನ್ನು ಡೆಬಿಟ್/ ಕ್ರೆಡಿಟ್ ಕಾರ್ಡ್ ಗಳಿಂದ ಅಥವಾ ಆನ್‍ಲೈನ್ ಖಾತೆಗಳಿಂದ ಮಾಡಬಹುದು. ಹೀಗಾಗಿ ಇವರು ತಮ್ಮ ವ್ಯವಹಾರಗಳನ್ನು ಕಾರ್ಡ್ ಮೂಲಕವೇ ಮಾಡುತ್ತಿದ್ದರು. ಫೋಟೋ ಕ್ಲಿಕ್ಕಿಸಿದ್ದರಿಂದ ಕಾರ್ಡ್ ನ 16 ಸಂಖ್ಯೆ ಜೊತೆಗೆ ವಿವರ ಸಹ ಲಭ್ಯವಾಗುತ್ತದೆ. ಹಿಂದುಗಡೆ ಫೋಟೋ ಕ್ಲಿಕ್ ಮಾಡಿದ್ದರಿಂದ ಸಿವಿವಿ ನಂಬರ್ ಸಹ ಸಿಕ್ಕಿರುತ್ತದೆ. ಈ ನಂಬರ್ ಗಳನ್ನು ಹಾಕಿ ವ್ಯವಹಾರ ಆರಂಭಿಸಿದ ಒಂದನೇ ಸ್ಟೆಪ್ ಮುಗಿದ ಕೂಡಲೇ ಗ್ರಾಹಕರ ಮೊಬೈಲಿಗೆ ಒಟಿಪಿ ಸಂಖ್ಯೆ ಬರುತ್ತದೆ. ಕೂಡಲೇ ಆರೋಪಿ ರಾಘವೇಂದ್ರ ಗ್ರಾಹಕರ ‘ಮೈ ಎಸ್‍ಎಂಎಸ್ ಆ್ಯಪ್’ ಖಾತೆ ಲಾಗಿನ್ ಆಗಿ ಆ ಒಟಿಪಿಯನ್ನು ಪಡೆದು ಪಡೆದು ಖಾತೆಯಿಂದಲೇ ಹಣವನ್ನು ಎಗರಿಸುತ್ತಿದ್ದ.

    ಸಿಕ್ಕಿಬಿದ್ದಿದ್ದು ಹೇಗೆ?:
    ನಾಗರಬಾವಿ ವ್ಯಕ್ತಿಯೊಬ್ಬರಿಂದ ರಾಘವೇಂದ್ರ ಹಾಗೂ ರಾಕೇಶ್ ಮಾಹಿತಿ ಪಡೆದಿದ್ದರು. ಕೆಲ ದಿನಗಳ ನಂತರ ಮಾಹಿತಿ ನೀಡಿದ ವ್ಯಕ್ತಿಯ ಬ್ಯಾಂಕ್ ಖಾತೆಯಿಂದ 75 ಸಾವಿರ ರೂ. ವರ್ಗಾವಣೆ ಆಗಿದೆ. ಯಾವುದೇ ವ್ಯವಹಾರ ನಡೆಸದೇ ಹಣ ಡ್ರಾ ಆಗಿದ್ದನ್ನು ನೋಡಿ ಅವರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣವನ್ನು ಬೆನ್ನತ್ತಿದ್ದ ಸಿಸಿಬಿ ಪೊಲೀಸರಿಗೆ ವಂಚಕರ ಈ ಕೃತ್ಯ ಬೆಳಕಿಗೆ ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿಲಿಕಾನ್ ಸಿಟಿಯಲ್ಲಿ ಎಟಿಎಂ ವಾಹನವನ್ನೇ ಕದಿಯಲು ಯತ್ನಿಸಿದ ಕಳ್ಳರು

    ಸಿಲಿಕಾನ್ ಸಿಟಿಯಲ್ಲಿ ಎಟಿಎಂ ವಾಹನವನ್ನೇ ಕದಿಯಲು ಯತ್ನಿಸಿದ ಕಳ್ಳರು

    – ಸ್ಥಳೀಯರ ಚೇಸಿಂಗ್‍ನಿಂದ ಆಪರೇಷನ್ ಫೇಲ್

    ಬೆಂಗಳೂರು: ಹಾಡಹಗಲೇ ಎಟಿಎಂ ವಾಹನ ಕದ್ದ ಕಳ್ಳರು ವಾಹನ ಸಮೇತ ಎಸ್ಕೇಪ್ ಆಗಲು ಯತ್ನಿಸಿದ್ದು, ಆದರೆ ಸ್ಥಳೀಯರು ಕಳ್ಳರನ್ನು ಚೇಸ್ ಮಾಡಲು ಯತ್ನಿಸಿದ್ದರಿಂದ ದರೋಡೆ ವಿಫಲವಾಗಿರುವ ಘಟನೆ ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಬಾಣಸವಾಡಿಯ ಕಲ್ಯಾಣನಗರದಲ್ಲಿ ಈ ಘಟನೆ ನಡೆದಿದ್ದು, ಎಟಿಎಂ ಗೆ ಹಣ ತುಂಬಲು ಸಿಬ್ಬಂದಿ ವಾಹನದಿಂದ ಕೆಳಗಡೆ ಇಳಿಯುತ್ತಿದಂತೆ, ಕಳ್ಳ ವಾಹನ ಚಾಲನೆ ಮಾಡಿ ಹೊರಟಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರು ಕೂಡಲೇ ಎಚ್ಚೆತ್ತು ಕಳ್ಳನನ್ನು ಚೇಸ್ ಮಾಡಿದ್ದರು.

    ಘಟನೆ ವೇಳೆ ವಾಹನದಲ್ಲಿ 11 ಲಕ್ಷ ರೂ. ಇತ್ತು. 6 ಲಕ್ಷ ಹಣವನ್ನು ಎಟಿಎಂ ತುಂಬಲು ಕೆಳಗಡೆ ಇಳಿದಿದ್ದರು. ಈ ವೇಳೆ ಚಾಲಾಕಿ ಕಳ್ಳ ವಾಹನದೊಂದಿಗೆ ಎಸ್ಕೇಪ್ ಆಗಲು ಯತ್ನಿಸಿದ್ದ. ಆದರೆ ಸಾರ್ವಜನಿಕರು ಆತನನ್ನು ಚೇಸ್ ಮಾಡುತ್ತಿದ್ದಾರೆ ಎಂದು ತಿಳಿದ ಕೂಡಲೇ ಕಳ್ಳ ವಾಹನ ಚಾಲನೆ ಮಾಡುತ್ತಿದಂತೆ ಹೊರಕ್ಕೆ ಜಿಗಿದು ಎಸ್ಕೇಪ್ ಆಗಿದ್ದಾನೆ. ಈ ವೇಳೆ ಎಟಿಎಂ ಹಣ ಹೊಂದಿದ್ದ ಹಣ ಅಲ್ಲೇ ಇದ್ದ ಟಿಪ್ಪರ್ ಲಾರಿಗೆ ಡಿಕ್ಕಿಯಾಗಿತ್ತು. ಬಳಿಕ ಪೊಲೀಸರು ಸ್ಥಳಕ್ಕೆ ಸಾರ್ವಜನಿಕರ ಮಾಹಿತಿ ಮೇರೆಗೆ ಪರಿಶೀಲನೆ ನಡೆಸಿದ್ದಾರೆ.

    ಅಂದಹಾಗೇ ದರೋಡೆ ಮಾಡಲು ಯತ್ನಿಸಿದ ಎಟಿಎಂ ಹಣದ ವಾಹನ ರೇಡಿಯಂಟ್ ಏಜೆನ್ಸಿಗೆ ಸೇರಿದ್ದು, ವಾಹನದಲ್ಲಿ ಒಟ್ಟು 68 ಲಕ್ಷ ರೂ. ಹಣವಿತ್ತು. ಬೆಳಗ್ಗೆ ಯಿಂದ ವಿವಿಧ ಎಟಿಎಂ ಗಳಿಗೆ ಹಣ ತುಂಬಿದ ಬಳಿಕ ಕಲ್ಯಾಣನಗರದ ಎಟಿಎಂ ಗೆ 6 ಲಕ್ಷ ಹಣ ತುಂಬಲು\ ಮುಂದಾಗಿದ್ದರು. ಈ ವೇಳೆ ಘಟನೆ ನಡೆದಿದ್ದು, ಸದ್ಯ ಪ್ರಕರಣದ ಸಂಬಂಧ ನಾಲ್ವರನ್ನು ವಶಕ್ಕೆ ಪಡೆದಿರುವ ಬಾಣಸವಾಡಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

    ಕಳ್ಳತನದಲ್ಲಿ ಭಾಗಿಯಾದ್ರಾ ಸಿಬ್ಬಂದಿ..?
    ಪ್ರಕರಣದಲ್ಲಿ ಏಜೆನ್ಸಿಯವರ ಪಾತ್ರ ಇದೆಯಾ ಎಂದು ಪೊಲೀಸರು ತನಿಖೆ ನಡೆಸಿದ್ದು, ಇದಕ್ಕೆ ಪ್ರಮುಖ ಕಾರಣ ವಾಹನ ಕಳುವು ಮಾಡಲು ನಕಲಿ ಕೀ ಬಳಕೆ ಮಾಡಿದ್ದಾರೆ ಎಂಬ ಅನುಮಾನ ಮೂಡಿದೆ. ವಾಹನದ ಚಾಲಕ ವಿಚಾರಣೆ ವೇಳೆ ಕೀ ನನ್ನ ಬಳಿ ಇದೆ ಎಂದು ಹೇಳಿದ್ದು, ಸದ್ಯ ವಾಹನ ಕಳವು ಮಾಡಲು 2ನೇ ಕೀ ಎಲ್ಲಿ ಲಭ್ಯವಾಗಿದೆ ಎಂದು ಪೊಲೀಸರು ಹೆಚ್ಚಿನ ತನಿಖೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಎಸ್‍ಬಿಐ ಎಟಿಎಂ ವಿತ್ ಡ್ರಾವಲ್ ಲಿಮಿಟ್ ಹಿಂದಿರುವ ಅಸಲಿ ಸತ್ಯ ಏನು? ಸೈಬರ್ ತಜ್ಞರು ಹೇಳ್ತಾರೆ ಓದಿ

    ಎಸ್‍ಬಿಐ ಎಟಿಎಂ ವಿತ್ ಡ್ರಾವಲ್ ಲಿಮಿಟ್ ಹಿಂದಿರುವ ಅಸಲಿ ಸತ್ಯ ಏನು? ಸೈಬರ್ ತಜ್ಞರು ಹೇಳ್ತಾರೆ ಓದಿ

    ಬೆಂಗಳೂರು: ಎಸ್‍ಬಿಐ ಸೇರಿದಂತೆ ಇತರೆ ಬ್ಯಾಂಕುಗಳು ಎಟಿಎಂ ವಿತ್ ಡ್ರಾವನ್ನು ಕಡಿಮೆಗೊಳಿಸಲು ಹೊರಟಿರುವ ನೂತನ ನಿಯಮ ಹಾಸ್ಯಸ್ಪದವಾಗಿದೆ ಎಂದು ಸೈಬರ್ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

    ಹೌದು, ದೇಶದಲ್ಲಿ ಎಟಿಎಂ ವಂಚನೆ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವುದಿಂದ, ಭಾರತದ ಅತಿದೊಡ್ಡ ಬ್ಯಾಂಕಿಂಗ್ ಸಂಸ್ಥೆಯಾದ ಎಸ್‍ಬಿಐ ಸೇರಿದಂತೆ ಹಲವು ಬ್ಯಾಂಕ್‍ಗಳು ಗ್ರಾಹಕರಿಗೆ ನೀಡಿದ್ದ ಎಟಿಎಂ ವಿತ್‍ಡ್ರಾ ಲಿಮಿಟ್‍ನ್ನು ಕಡಿತಗೊಳಿಸಲು ಮುಂದಾಗಿವೆ. ಆದರೆ ಇದಕ್ಕೆ ಸೈಬರ್ ತಜ್ಞರು ವಿತ್‍ಡ್ರಾ ಮಿತಿ ಕಡಿಮೆಗೊಳಿಸಿದರೆ ಸೈಬರ್ ವಂಚಕರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಬ್ಯಾಂಕುಗಳು ಜಾರಿಗೆ ತರಲು ಹೊರಟಿರುವ ವಿತ್‍ಡ್ರಾ ಲಿಮಿಟ್ ಹಾಸ್ಯಾಸ್ಪದ ಸಂಗತಿ ಎಂದು ಸೈಬರ್ ತಜ್ಞ ಹರ್ಷ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಎಟಿಎಂ ಚೋರರ ಪ್ರಕರಣಗಳು ದಿನೇ ದಿನೇ ದಾಖಲಾಗುತ್ತಿದ್ದರಿಂದ, ಆರ್‌ಬಿಐ ಕೂಡ 2019ರ ಮಾರ್ಚ್ ಒಳಗಡೆ ಎಟಿಎಂಗಳಲ್ಲಿ ಸೈಬರ್ ಸೆಕ್ಯೂರಿಟಿ ಹಾಗೂ ಆಂಟಿ ಸ್ಕಿಮ್ಮಿಂಗ್ ಡಿವೈಸ್ ಅಳವಡಿಸುವಂತೆ ನಿರ್ದೇಶನ ನೀಡಿತ್ತು. ಆದರೆ ಇದುವರೆಗೂ ದೇಶದ ಬಹುತೇಕ ಎಟಿಎಂಗಳಲ್ಲಿ ಆಂಟಿ ಸ್ಕಿಮ್ಮಿಂಗ್ ಡಿವೈಸ್‍ಗಳನ್ನು ಬ್ಯಾಂಕುಗಳು ಸ್ಥಾಪಿಸಿಲ್ಲ. ಇದನ್ನು ಮಾಡದ ಬ್ಯಾಂಕುಗಳು ಎಟಿಎಂ ವಂಚನೆ ಕೇಸ್ ಕಡಿಮೆ ಮಾಡಲು ಎಟಿಎಂ ವಿತ್ ಡ್ರಾ ಲಿಮಿಟ್ಸ್ ಕಡಿಮೆ ಮಾಡಿದ್ದೇವೆ ಎಂದು ಹೇಳುತ್ತಿವೆ ಎಂದಿದ್ದಾರೆ.

    ಎಟಿಎಂಗೆ ಕನ್ನ ಹಾಕುವ ಡಿಜಿಟಲ್ ಹ್ಯಾಕರ್ಸ್‍ಗಳು ಎಟಿಎಂ ಮೆಷಿನ್ ನೊಳಗೆ ಗ್ರಾಹಕರು ಕಾರ್ಡನ್ನು ಹಾಕಿದ ತಕ್ಷಣ ಮಾಹಿತಿಗಳನ್ನು ರವಾನಿಸಿಕೊಳ್ಳುವ ತಂತ್ರಜ್ಞಾನ ಹೊಂದಿದ್ದು, ನೇರವಾಗಿ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡುತ್ತಾರೆ. ಈ ವಿತ್ ಡ್ರಾ ಲಿಮಿಟ್ ಕಡಿತದಿಂದ ಎಟಿಎಂ ಹ್ಯಾಕರ್ಸ್ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದು ಹರ್ಷ ಹೇಳಿದ್ದಾರೆ.

    ಆಕ್ಟೋಬರ್ 31 ರಿಂದ 40 ಸಾವಿರದಿಂದ 20 ಸಾವಿರಕ್ಕೆ ಎಟಿಎಂ ವಿತ್ ಡ್ರಾ ಲಿಮಿಟ್ಸ್ ಕಡಿತಗೊಳಿಸಲು ಎಸ್‍ಬಿಐ ಮುಂದಾಗಿದೆ ಎನ್ನಲಾಗಿದೆ. ಎಟಿಎಂ ವಂಚನೆಗಳನ್ನು ಕಡಿಮೆ ಮಾಡಿ ಡಿಜಿಟಲ್ ವ್ಯವಹಾರವನ್ನು ಹೆಚ್ಚಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಎಟಿಎಂ ವಿತ್‍ ಡ್ರಾ ಮಿತಿ ಕಡಿತಗೊಳಿಸಲು ಎಸ್‍ಬಿಐ ಚಿಂತನೆ: ಎಷ್ಟಿತ್ತು? ಎಷ್ಟಾಗುತ್ತೆ?

    ಏನಿದು ಸ್ಕಿಮ್ಮಿಂಗ್ ಮಷಿನ್?
    ಕಳ್ಳರು ಎಟಿಎಂ ಮಷಿನ್ ಮೇಲೆ ಹಿಡನ್ ಕ್ಯಾಮೆರಾ ಫಿಕ್ಸ್ ಮಾಡುತ್ತಾರೆ. ಕಾರ್ಡ್ ಸ್ಪೈಪ್ ಮಾಡುವ ಜಾಗದಲ್ಲಿ ಸಣ್ಣದೊಂದು ಕಾರ್ಡ್ ಹಾಕ್ತಾರೆ. ಗ್ರಾಹಕರು ಸ್ಪೈಪ್ ಮಾಡಿದ ಕೂಡಲೇ ಕಾರ್ಡ್‍ನಲ್ಲಿದ್ದ ಮ್ಯಾಗ್ನೆಟ್ಟಿಂಗ್ ಸ್ಟ್ರೇಬ್ಸ್ ಹ್ಯಾಕ್ ಆಗುತ್ತೆ. ಬಳಿಕ ಹಿಡನ್ ಕ್ಯಾಮೆರಾದಿಂದ ಪಾಸ್‍ವರ್ಡ್‍ನ್ನು ಕ್ಯಾಪ್ಚರ್ ಮಾಡ್ತಾರೆ. ಬಳಿಕ ನಕಲಿ ಕಾರ್ಡ್ ತಯಾರಿಸಿ ಹಣ ಡ್ರಾ ಮಾಡುತ್ತಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಎಟಿಎಂ ವಿತ್‍ ಡ್ರಾ ಮಿತಿ ಕಡಿತಗೊಳಿಸಲು ಎಸ್‍ಬಿಐ ಚಿಂತನೆ: ಎಷ್ಟಿತ್ತು? ಎಷ್ಟಾಗುತ್ತೆ?

    ಎಟಿಎಂ ವಿತ್‍ ಡ್ರಾ ಮಿತಿ ಕಡಿತಗೊಳಿಸಲು ಎಸ್‍ಬಿಐ ಚಿಂತನೆ: ಎಷ್ಟಿತ್ತು? ಎಷ್ಟಾಗುತ್ತೆ?

    ನವದೆಹಲಿ: ಭಾರತದ ಅತಿ ದೊಡ್ಡ ಬ್ಯಾಂಕಿಂಗ್ ಸಂಸ್ಥೆಯಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‍ಬಿಐ) ಗ್ರಾಹಕರ ಎಟಿಎಂ ಡ್ರಾ ಮಿತಿಯನ್ನು ಕಡಿತಗೊಳಿಸಲು ಚಿಂತನೆ ನಡೆಸಿದೆ ಎನ್ನಲಾಗಿದೆ.

    ಹೌದು, ಎಸ್‍ಬಿಐ ದಿನವೊಂದರ ಗ್ರಾಹಕರ ಎಟಿಎಂ ಡ್ರಾ ಮಿತಿಯನ್ನು ಸದ್ಯ 40 ಸಾವಿರ ರೂಪಾಯಿ ಇದ್ದು, ಇದನ್ನು 20 ಸಾವಿರ ರೂಪಾಯಿಗೆ ಇಳಿಸಲು ನಿರ್ಧಾರ ಮಾಡಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಈ ನೂತನ ನಿಯಮವು ಇದೇ ಅಕ್ಟೋಬರ್ 31 ರಿಂದ ಜಾರಿಗೆ ಬರಲಿದೆ ಎಂದು ಹೇಳಲಾಗುತ್ತಿದೆ.

    ಎಟಿಎಂ ವಹಿವಾಟುಗಳಲ್ಲಿನ ವಂಚನೆ ಪ್ರಕರಣ ದಿನೇ ದಿನೇ ಜಾಸ್ತಿಯಾಗುತ್ತಿರುವುದರಿಂದ ಎಸ್‍ಬಿಐ ಈ ಮಹತ್ವ ನಿರ್ಧಾರಕ್ಕೆ ಮುಂದಾಗಿದೆ. ಸದ್ಯ ಎಸ್‍ಬಿಐ ಗ್ರಾಹಕರು 40 ಸಾವಿರ ರೂಪಾಯಿಯನ್ನು ಎಟಿಎಂ ಮೂಲಕ ಡ್ರಾ ಮಾಡಿಕೊಳ್ಳಬಹುದಾಗಿತ್ತು. ಆದರೆ ನೂತನ ನಿಯಮ ಜಾರಿಯಾದ ಮೇಲೆ 20 ಸಾವಿರ ರೂಪಾಯಿಯನ್ನು ಮಾತ್ರ ಡ್ರಾ ಮಾಡಿಕೊಳ್ಳಬೇಕಾಗುತ್ತದೆ.

    ಈ ನೂತನ ನಿಯಮವು ನಗದು ರಹಿತ ವಹಿವಾಟನ್ನು ಉತ್ತೇಜಿಸಲು ಸಹ ಸಹಕಾರಿಯಾಗುತ್ತದೆ. ಅಲ್ಲದೇ ಈ ಬಗ್ಗೆ ತನ್ನ ಅಧೀನದಲ್ಲಿ ಬರುವ ಎಲ್ಲಾ ಬ್ಯಾಂಕುಗಳಿಗೆ ನಿರ್ದೇಶನ ನೀಡಿದ್ದು, ಗ್ರಾಹಕರಿಗೆ  ತಿಳಿಸಲು ಸೂಚನಾ ಫಲಕಗಳನ್ನು ಅಳವಡಿಸುವಂತೆ ಆಡಳಿತ ಮಂಡಳಿಗಳಿಗೆ ಸೂಚನೆ ನೀಡಿದೆ ಎನ್ನಲಾಗಿದೆ.

    ಈ ಬಗ್ಗೆ ಎಸ್‍ಬಿಐನ ವ್ಯವಸ್ಥಾಪಕ ನಿರ್ದೇಶಕ ಪಿ.ಕೆ.ಗುಪ್ತಾ ಮಾತನಾಡಿ, ಎಟಿಎಂ ಸಂಬಂಧಿಸಿದ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಸಂಬಂಧ ಎಟಿಎಂ ಡ್ರಾ ಮಿತಿಯನ್ನು ಕಡಿಮೆಗೊಳಿಸಲು ಚಿಂತನೆ ನಡೆಸಿದ್ದೇವೆ. ಸದ್ಯ 40 ಸಾವಿರ ರೂಪಾಯಿಯಿಂದ 20 ಸಾವಿರ ರೂಪಾಯಿಗೆ ಡ್ರಾ ಮಿತಿಯನ್ನು ಕಡಿಮೆಗೊಳಿಸಲಿದ್ದೇವೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv