Tag: assassination

  • ಗೌರಿ ಲಂಕೇಶ್ ಹತ್ಯೆ ತನಿಖೆ: ಕವಿತಾ ಲಂಕೇಶ್ ಅಸಮಾಧಾನ

    ಗೌರಿ ಲಂಕೇಶ್ ಹತ್ಯೆ ತನಿಖೆ: ಕವಿತಾ ಲಂಕೇಶ್ ಅಸಮಾಧಾನ

    ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಎಸ್‍ಐಟಿ ತನಿಖೆ ವಿಳಂಬವಾಗುತ್ತಿರುವ ಕುರಿತು ಸಹೋದರಿ ಕವಿತಾ ಲಂಕೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ತಮ್ಮ ಮುಂದಿನ ಚಿತ್ರದ ಸಮ್ಮರ್ ಹಾಲಿಡೇಸ್ ಟ್ರೇಲರ್ ಲಾಂಚ್ ವೇಳೆ ಮಾತನಾಡಿದ ಅವರು, ಸಹೋದರಿ ಗೌರಿ ಲಂಕೇಶ್ ಅವರನ್ನು ನೆನೆದು ಭಾವುಕರಾದರು. ಗೃಹ ಸಚಿವ ರಾಮಲಿಂಗ ರೆಡ್ಡಿ ಅವರು ಕಳೆದ ಎರಡು ತಿಂಗಳಿನಿಂದ ಎರಡು ವಾರದಲ್ಲಿ ತನಿಖೆ ಮುಕ್ತಾಯವಾಗುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ ತನಿಖೆ ಬಗ್ಗೆ ಯಾವುದೇ ಸ್ಪಷ್ಟನೇ ಸಿಕ್ಕಿಲ್ಲ ಎಂದರು.

    ಗೃಹ ಸಚಿವರ ಮೇಲೆ ನಂಬಿಕೆ ಇಡ್ಬೇಕಾ ಬೇಡ್ವಾ ಅನ್ನುವ ಅನುಮಾನ ಕಾಡ್ತಿದೆ. ಎಸ್‍ಐಟಿ ತನಿಖಾಧಿಕಾರಿ ಬಿಕೆ ಸಿಂಗ್ ಅವರು ಇನ್ನು 2 ವಾರಗಳಲ್ಲಿ ತನಿಖೆ ಪೂರ್ಣಗೊಳ್ಳುತ್ತದೆ ಎಂದು ತಿಳಿಸಿದ್ದಾರೆ. ಅವರ ಹೇಳಿಕೆ ಹಿನ್ನೆಲೆ ನಂಬಿಕೆ ಬಂದಿದೆ ಎಂದು ಹೇಳಿದರು.

    ತಮ್ಮ ಸಮ್ಮರ್ ಹಾಲಿಡೇಸ್ ಸಿನಿಮಾದಲ್ಲಿ ಗೌರಿ ಲಂಕೇಶ್ ಸಾಮಾಜಿಕ ಹೋರಾಟಗಾರ್ತಿಯ ಸಣ್ಣ ಪಾತ್ರವನ್ನು ಮಾಡಿದ್ದಾರೆ. ನಿಜ ಜೀವನದಲ್ಲೂ ಅವರು ಹಾಗೆಯೇ ಇದ್ದರು. ಅವರ ಸಾಮಾಜಿಕ ಹೋರಾಟವೇ ಅವರ ಪ್ರಾಣಕ್ಕೆ ಕಂಟಕವಾಗುತ್ತದೆ ಎಂದು ತಿಳಿದಿಲಿಲ್ಲ. ನಮ್ಮ ತಂದೆ ಲಂಕೇಶ್ ಅವರು ಸರ್ಕಾರ ವಿರುದ್ಧ ಹಲವು ಬರಹಗಳನ್ನು ಪ್ರಕಟಿಸಿದ್ದರು ಎಂದು ನೆನಪಿಸಿಕೊಂಡರು.

    ನಿಮ್ಮ ಹಾಗೂ ಸಹೋದರ ಇಂದ್ರಜಿತ್ ಲಂಕೇಶ್ ಅವರಿಗೆ ಯಾವುದಾರರು ಜೀವ ಬೆದರಿಕೆ ಕುರಿತ ಪ್ರಶ್ನೆಗೆ ಉತ್ತರಿಸದ ಅವರು ನಮಗೇ ಇಂತಹ ಯಾವುದೇ ಜೀವ ಬೆದರಿಕೆ ಇಲ್ಲ, ಆದರೆ ಗೌರಿ ಹತ್ಯೆ ನಂತರ ಅತಂಕಕ್ಕೆ ಒಳಗಾಗಿದ್ದೇವು ಎಂದು ತಿಳಿಸಿದರು.

     

  • ಶೀಘ್ರವೇ ಗೌರಿ ಹತ್ಯೆ ಆರೋಪಿಗಳು ಅರೆಸ್ಟ್: ರಾಮಲಿಂಗಾರೆಡ್ಡಿ

    ಶೀಘ್ರವೇ ಗೌರಿ ಹತ್ಯೆ ಆರೋಪಿಗಳು ಅರೆಸ್ಟ್: ರಾಮಲಿಂಗಾರೆಡ್ಡಿ

    ಚಿಕ್ಕಬಳ್ಳಾಪುರ: ಹಿರಿಯ ಪತ್ರಕರ್ತೆ ಹಾಗೂ ವಿಚಾರವಾದಿ ಗೌರಿ ಲಂಕೇಶ್ ಹತ್ಯೆ ಪ್ರಕರಣ ತನಿಖೆ ಬಹುತೇಕ ಮುಗಿದಿದ್ದು ಸದ್ಯದಲ್ಲೇ ಹಂತಕರನ್ನು ಬಂಧಿಸುತ್ತೇವೆಂದು ಗೃಹಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

    ಇಂದಿರಾ ನಮನ ಕಾರ್ಯಕ್ರಮದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಈ ಹಿಂದೆ ಕೂಡ ಸಾಕಷ್ಟು ಬಾರಿ ಹೇಳಿದ್ದೇನೆ. ತನಿಖೆ ಮಾಡಲಾಗಿದ್ದು, ಹಂತಕರು ಯಾರು ಅಂತ ತಿಳಿದಿದೆ. ಶೀಘ್ರದಲ್ಲೇ ಆರೋಪಿಗಳು ಯಾರು ಅಂತ ಪ್ರಕಟಿಸಲಾಗುತ್ತೆ. 100 ಕ್ಕೆ 100 ರಷ್ಟು ಹಂತಕರನ್ನ ಬಂಧಿಸುತ್ತೇವೆ. ಆರೋಪಿಗಳ ಬಂಧನಕ್ಕೆ ಇನ್ನೂ ಸ್ವಲ್ಪ ದಿನಗಳ ಕಾಲ ಕಾಯಬೇಕು ಎಂದರು.

    ರಾಜ್ಯದ 30 ಜಿಲ್ಲೆಗಳಲ್ಲೂ ಕಾನೂನು ಸುವ್ಯವಸ್ಥೆ ಚೆನ್ನಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರ ಹಾಗೂ ಪೊಲೀಸ್ ಇಲಾಖೆ ಎಲ್ಲಾ ಅಗತ್ಯ ಕ್ರಮಗಳನ್ನ ಕೈಗೊಂಡಿದೆ ಎಂದು ಹೇಳಿದ್ದಾರೆ.

    https://youtu.be/L8QXSCaOqbM

     

  • ಗಾಯಕಿ ಹರ್ಷಿತಾ ದಹಿಯಾ ಶೂಟೌಟ್ ಪ್ರಕರಣಕ್ಕೆ ಟ್ವಿಸ್ಟ್

    ಗಾಯಕಿ ಹರ್ಷಿತಾ ದಹಿಯಾ ಶೂಟೌಟ್ ಪ್ರಕರಣಕ್ಕೆ ಟ್ವಿಸ್ಟ್

    ಚಂಡೀಗಢ: ಹರಿಯಾಣದ ಗಾಯಕಿ ಹರ್ಷಿತಾ ದಹಿಯಾ ಶೂಟೌಟ್ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ದಹಿಯಾ ಅವರ ಸಹೋದರಿ ತನ್ನ ಗಂಡನೇ ಕೊಲೆ ಮಾಡಿಸಿರುವುದಾಗಿ ಆರೋಪಿಸಿದ್ದಾರೆ.

    ಹರ್ಷಿತಾ ದಹಿಯಾ ಶೂಟೌಟ್ ಕುರಿತು ಮಾಧ್ಯಮಗಳಿಗೆ ಹೀಳಿಕೆ ನೀಡಿರುವ ದಹಿಯಾ ಸಹೋದರಿ, ತನ್ನ ಪತಿ ದಿನೇಶ್ ಹತ್ಯೆ ಮಾಡಿಸಿದ್ದಾರೆ ಎಂದು ಆರೋಪಿಸಿದರು. ದಹಿಯಾ ತಾಯಿಯ ಕೊಲೆ ಪ್ರಕರಣದಲ್ಲಿ ಅವರು ಪ್ರಮುಖ ಸಾಕ್ಷಿಯಾಗಿದ್ದರಿಂದ ಹತ್ಯೆ ಮಾಡಲಾಗಿದೆ ಎಂದು ಹೇಳಿದ್ದಾರೆ.

    ಹರಿಯಾಣ ಮೂಲದ ಗಾಯಕಿ ಹಾಗೂ ಕಲಾವಿದೆಯಾಗಿದ್ದ ಹರ್ಷಿತಾ ಅವರನ್ನು ಪಾಣಿಪತ್ ಜಿಲ್ಲೆಯ ಚಾಮರಾರಾ ಹಳ್ಳಿಯ ಪ್ರದೇಶದಲ್ಲಿ ಮಂಗಳವಾರ ದುಷ್ಕರ್ಮಿಗಳು ಆರು ಬಾರಿ ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಈ ಕುರಿತು ಪೊಲೀಸರು ಕುಟುಂಬ ಸದಸ್ಯರಿಂದ ಮಾಹಿತಿಯನ್ನು ಪಡೆದಿದ್ದರು.

    ಶೂಟೌಟ್ ಕುರಿತು ಎಲ್ಲಾ ಮೂಲಗಳಿಂದಲೂ ತನಿಖೆಯನ್ನು ನಡೆಸುತ್ತಿದ್ದು, ಶೀಘ್ರವೇ ಹಂತಕರನ್ನು ಬಂಧಿಸಲಾಗುದು ಎಂದು ಪಾಣಿಪತ್ ಪೊಲೀಸರ್ ಅಧಿಕಾರಿ ದಿನೇಶ್ ತಿಳಿಸಿದ್ದಾರೆ. ಹರ್ಷಿತಾ ಅವರ ತಾಯಿಯವರನ್ನು 2014ರಲ್ಲಿ ದೆಹಲಿಯಲ್ಲಿ ಹತ್ಯೆ ಮಾಡಲಾಗಿತ್ತು, ಈ ಪ್ರಕರಣದಲ್ಲಿ ದಿನೇಶ್ ಆರೋಪಿಯಾಗಿದ್ದು, ಹರ್ಷಿತಾ ಪ್ರಮುಖ ಸಾಕ್ಷಿಯಾಗಿದ್ದರು. ಅಲ್ಲದೇ ದಹಿಯಾ ಸಹೋದರಿಯ ಪತಿ ದಿನೇಶ್ ಈಗಾಗಲೇ ಹಲವು ಕ್ರಮಿನಲ್ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಸದ್ಯ ಜೈಲಿನಲ್ಲಿದ್ದಾನೆ ಎಂದು ಪಾಣಿಪತ್ ಡಿಎಸ್‍ಪಿ ದೇಶ್ ರಾಜ್ ಮಾಹಿತಿ ನೀಡದ್ದಾರೆ.

    ಗಾಯಕಿ ದಹಿಯಾ ದೆಹಲಿಯ ನರೇಲಾ ಪ್ರದೇಶದಲ್ಲಿ ವಾಸವಾಗಿದ್ದರು, ಹರಿಯಾಣದಲ್ಲಿ ಕಾರ್ಯಕ್ರಮವೊಂದನ್ನ ಮುಗಿಸಿಕೊಂಡು ಹಿಂದಿರುಗುವ ವೇಳೆ ದಹಿಯಾ ಕಾರನ್ನು ಓವರ್ ಟೇಕ್ ಮಾಡಿದ ದುಷ್ಕರ್ಮಿಗಳು ಹರ್ಷಿತಾ ಅವರ ಕಾರನ್ನ ಅಡ್ಡಗಟ್ಟಿ ಗುಂಡು ಹಾರಿಸಿದ್ದರು.

    ಹರಿಯಾಣ ಚಿತ್ರೋದ್ಯಮದ ಕೆಲವು ವ್ಯಕ್ತಿಗಳಿಂದಲೂ ಜೀವಬೇದರಿಕೆ ಇತ್ತು ಎಂದು ಹರ್ಷಿತಾ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಹೇಳಿಕೊಂಡಿದ್ದರು. ನಮ್ಮ ಇಂಡಸ್ಟ್ರಿಯವರೇ, ಹರಿಯಾಣದ ಕಲಾವಿದರೇ ಬೆದರಿಕೆ ಹಾಕುತ್ತಿದ್ದಾರೆ. ವಿಡಿಯೋ ಡಿಲೀಟ್ ಮಾಡು, ಇಲ್ಲವಾದ್ರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಸುತ್ತಿದ್ದಾರೆ. ನಾನು ತಪ್ಪೇನೂ ಹೇಳಿಲ್ಲ. ನಾನು ಯಾರಿಗೂ ಹೆದರಲ್ಲ. ಏನಾದ್ರೂ ಮಾಡಿಕೊಳ್ಳಿ. ನಾನು ವಿಡಿಯೋ ಡಿಲೀಟ್ ಮಾಡಲ್ಲ. ನನಗೆ ಸಾವಿನ ಭಯವಿಲ್ಲ ಎಂದು ಹರ್ಷಿತಾ ವಿಡಿಯೋದಲ್ಲಿ ಹೇಳಿರುವುದಾಗಿ ವರದಿಯಾಗಿದೆ. ಆದ್ರೆ ಆಕೆ ಯಾವ ವಿಡಿಯೋ ಬಗ್ಗೆ ಮಾತನಾಡಿದ್ದರು ಎಂಬುದು ಸ್ಪಷ್ಟವಾಗಿಲ್ಲ.

  • ಪ್ರಿಯಕರನನ್ನು ಹತ್ಯೆ ಮಾಡಿ ಫ್ರಿಡ್ಜ್ ನಲ್ಲಿ ಬಚ್ಚಿಟ್ಟ ವಿವಾಹಿತ ಮಹಿಳೆ ಅರೆಸ್ಟ್

    ಪ್ರಿಯಕರನನ್ನು ಹತ್ಯೆ ಮಾಡಿ ಫ್ರಿಡ್ಜ್ ನಲ್ಲಿ ಬಚ್ಚಿಟ್ಟ ವಿವಾಹಿತ ಮಹಿಳೆ ಅರೆಸ್ಟ್

    ಲಕ್ನೋ: ಸಹೋದರನ ಜೊತೆಗೂಡಿ ಪ್ರಿಯಕರನನ್ನು ಹತ್ಯೆ ಮಾಡಿ ಮನೆಯ ಫ್ರಿಡ್ಜ್ ನಲ್ಲಿ ಬಚ್ಚಿಟ್ಟು ನಂತರ ಹತ್ತಿರದ ರೈಲ್ವೇ ಹಳಿಯಲ್ಲಿ ಎಸೆದ ವಿವಾಹಿತ ಮಹಿಳೆಯನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ.

    ಸಹರಾನ್ಪೂರದ ಇಂದಿರಾನಗರದ ನಿವಾಸಿ ಅತೀಶ್ ಕೊಲೆಯಾದ ವ್ಯಕ್ತಿ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೇರಣಾ ಮತ್ತು ಆಕೆಯ ಸಹೋದರನನ್ನು ಪೊಲೀಸರು ಬಂಧಿಸಿದ್ದಾರೆ. ಸೆ.24ರಂದು ಈ ಹತ್ಯೆ ನಡೆದಿದ್ದು ಸೆ.26ರಂದು ಮೃತ ದೇಹ ದೊರೆತಿತ್ತು ಎಂದು ಸಹರಾನ್ಪೂರ್ ಜಿಲ್ಲಾ ಪೊಲೀಸ್ ಅಧಿಕಾರಿ ಪ್ರತಾಪ್ ಸಿಂಗ್ ಹೇಳಿದ್ದಾರೆ.

    ಏನಿದು ಪ್ರಕರಣ?
    ಅಪರಿಚಿತ ವ್ಯಕ್ತಿಯ ಮೃತದೇಹವೊಂದು ಸಹರಾನ್ಪೂರ್‍ದ ಶಿವಪುರಿ ಶಂಶಾನ್‍ಘಾಟ್ ಬಳಿಯ ರೈಲ್ವೇ ಹಳಿಯಲ್ಲಿ ಪತ್ತೆಯಾಗಿತ್ತು. ಹಳಿಯಲ್ಲಿ ಶವ ಪತ್ತೆಯಾದ ಹಿನ್ನೆಲೆಯಲ್ಲಿ ಆರಂಭದಲ್ಲಿ ಪೊಲೀಸರು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆಯ ಫಲಿತಾಂಶ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದೆ ಎಂದು ವರದಿ ನೀಡಿತ್ತು. ಕೊಲೆಯಾದ ವ್ಯಕ್ತಿ ಅತೀಶ್ ಬೆಳಕಿಗೆ ಬಂದ ನಂತರ ಪ್ರೇರಣಾ ಎಸ್‍ಎಸ್‍ಪಿ ಕಚೇರಿಗೆ ನೇರವಾಗಿ ತೆರಳಿ ಈ ಕೊಲೆಯನ್ನು ನಾನೇ ಮಾಡಿದ್ದೇನೆ ಎಂದು ತಿಳಿಸಿದ್ದಳು.

    ಪ್ರೇರಣಾ ಹೇಳಿದ್ದು ಏನು?
    ನಾನು ವಿವಾಹಿತ ಮಹಿಳೆಯಾಗಿದ್ದು, 6 ತಿಂಗಳ ಹಿಂದೆ ಗಂಡನ ಮನೆಯನ್ನು ಬಿಟ್ಟು ತವರು ಮನೆ ಸೇರಿದ್ದೆ. ಮದುವೆಯಾಗುವ ಮೊದಲು ನನಗೆ ಮತ್ತು ಅತೀಶ್ ನಡುವೆ ಅಕ್ರಮ ಸಂಬಂಧ ಇತ್ತು. ಸಮೀಪದ ಮನೆಯಲ್ಲಿ ವಾಸವಾಗಿದ್ದ ಈತ ನಾನು ತವರು ಮನೆಗೆ ಬಂದ ಬಳಿಕವೂ ಸೆಕ್ಸ್ ಗೆ ಒತ್ತಾಯಿಸುತ್ತಿದ್ದ. ನಾವಿಬ್ಬರೂ ಕೆಲವೊಮ್ಮೆ ರೆಡ್‍ಹ್ಯಾಂಡ್ ಗೆ ಸಿಕ್ಕಿಬಿದ್ದಿದ್ವಿ. ಇಷ್ಟಾಗ್ಯೂ ಆತ ಪ್ರತಿ ದಿನ ನೀನು ನನಗೆ ಸುಖ ಕೊಡಬೇಕು ಎಂದು ಒತ್ತಾಯಿಸುತ್ತಿದ್ದ.

    ಈತನ ಈ ವಿಚಿತ್ರ ಬೇಡಿಕೆಯಿಂದ ನಾನು ರೋಸಿ ಹೋಗಿದ್ದೆ. ನಮ್ಮಿಬ್ಬರ ಸಂಬಂಧವನ್ನು ಮುಕ್ತಾಯಗೊಳಿಸುವ ಸಲುವಾಗಿ ಸೆ.24 ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತನನ್ನು ಕರೆದು, ಇಲ್ಲಿಯವರೆಗೆ ನಡೆದಿದ್ದನ್ನು ಮರೆತು ಬಿಡು ಎಂದು ನಾನು ಮನವಿ ಮಾಡಿ ಬೇಡಿಕೊಂಡೆ. ಈ ವೇಳೆ ನನ್ನ ಸಹೋದರ ಬಂದ. ಈ ವೇಳೆ ಇವರಿಬ್ಬರ ಮಧ್ಯೆ ಜಗಳ ಪ್ರಾರಂಭವಾಯಿತು.

    ಗಲಾಟೆ ಜೋರಾಗಿ ನನ್ನ ಸಹೋದರ ದುಪ್ಪಟ್ಟದಿಂದ ಆತನನ್ನು ಕೊಲೆ ಮಾಡಿದ. ಬಳಿಕ ಆತನ ದೇಹವನ್ನು ಯಾರಿಗೆ ತಿಳಿಯದೇ ಇರಲಿ ಎಂದು ಫ್ರಿಡ್ಜ್ ಒಳಗಡೆ ಇಟ್ಟೆವು. ಮನೆಯಲ್ಲಿ ಶವ ಇದ್ದರೆ ನಾವೇ ಕೊಲೆ ಮಾಡಿದ್ದೇವೆ ಎಂದು ತಿಳಿಯುವ ಕಾರಣ ಫ್ರಿಡ್ಜ್ ಮಾರಾಟ ಮಾಡಲು ತೀರ್ಮಾನಿಸಿದೆವು. ಮಾರಾಟ ಮಾಡುವ ನೆಪದಲ್ಲಿ ಫ್ರಿಡ್ಜ್ ಮನೆಯಿಂದ ವಾಹನಕ್ಕೆ ತುಂಬಿಸಿದೆವು. ದಾರಿ ಮಧ್ಯೆ ಶವವನ್ನು ರೈಲ್ವೇ ಟ್ರಾಕ್ ನಲ್ಲಿ ಎಸೆದು ನಂತರ ಫ್ರಿಡ್ಜ್ ಮಾರಾಟ ಮಾಡಿದೆವು ಎಂದು ಪ್ರೇರಣಾ ವಿಚಾರಣೆ ವೇಳೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ.

  • ರಜೆ ಮೇಲೆ ಮನೆಗೆ ಬಂದಿದ್ದ ಬಿಎಸ್‍ಎಫ್ ಯೋಧನನ್ನು ಗುಂಡಿಟ್ಟು ಕೊಂದ ಉಗ್ರರು

    ರಜೆ ಮೇಲೆ ಮನೆಗೆ ಬಂದಿದ್ದ ಬಿಎಸ್‍ಎಫ್ ಯೋಧನನ್ನು ಗುಂಡಿಟ್ಟು ಕೊಂದ ಉಗ್ರರು

    ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಭಯೋತ್ಪದಾಕರ ಅಟ್ಟಹಾಸ ಮುಂದುವರೆದಿದ್ದು, ಗುರುವಾರ ಬಿಎಸ್‍ಎಫ್ ಯೋಧನ ಮನೆಯಲ್ಲಿ ಗುಂಡಿನ ದಾಳಿಯನ್ನು ನಡೆಸಿದ್ದಾರೆ. ಭಯೋತ್ಪದಾಕರ ದಾಳಿಗೆ ಯೋಧ ಮೊಹ್ಮದ್ ರಮ್ಜಾನ್ ಪ್ರಯರ್ ಸ್ಥಳದಲ್ಲಿ ಮೃತಪಟಿದ್ದು, ಕುಟುಂಬದ ನಾಲ್ವರು ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ.

    ಪ್ರರಯ್ ಜಮ್ಮು ಕಾಶ್ಮೀರ ಗಡಿನಿಯಂತ್ರಣ ಪಡೆಯ 73ನೇ ಬೇಟಾಲಿಯಾನ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದು, ಕೆಲವು ದಿನಗಳ ಹಿಂದಷ್ಟೇ ರಜೆ ಪಡೆದು ಜಮ್ಮು ಕಾಶ್ಮೀರದ ಬಂಡೀಪುರ ಜಿಲ್ಲೆಯ ನಿವಾಸಿಕ್ಕೆ ಬಂದಿದ್ದರು. ಭಯೋತ್ಪದಾಕರು ರಮ್ಜಾನ್ ಅವರನ್ನು ಅಪಹರಣ ಮಾಡಲು ಯತ್ನಿಸಿದ್ದಾರೆ. ಆದರೆ ಇದಕ್ಕೆ ಪ್ರತಿರೋಧ ತೋರಿದ ವೇಳೆ ಪ್ರರಯ್‍ರನ್ನು ಮನೆ ಹೊರಗಡೆ ಎಳೆದು ತಂದು ಹತ್ಯೆ ಮಾಡಿದ್ದಾರೆ.

    ಘಟನೆಯ ಕುರಿತು ಟ್ವೀಟ್ ಮಾಡಿರುವ ಉತ್ತರ ಕಾಶ್ಮೀರ ಪೊಲೀಸ್ ಮುಖ್ಯಸ್ಥ ನಿತೀಶ್ ಕುಮಾರ್, ರಮ್ಜಾನ್ ಕುಟುಂಬದ ನಾಲ್ವರು ಸದಸ್ಯರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

    ಯೋಧ ನಿರಾಯುಧರಾಗಿದ್ದ ಸಂದರ್ಭದಲ್ಲಿ ದಾಳಿ ನಡೆಸಿರುವುದು ಅತ್ಯಂತ ಅನಾಗರಿಕ ಮತ್ತು ಅಮಾನವೀಯವಾಗಿದ್ದು, ಭಯೋತ್ಪದಾಕರ ಕೃತ್ಯಕ್ಕೆ ತಕ್ಕ ಶಿಕ್ಷೆಯನ್ನು ನೀಡಲಾಗುವುದು ಎಂದು ಜಮ್ಮು ಕಾಶ್ಮೀರ ಪೊಲೀಸ್ ಮುಖ್ಯಸ್ಥ ಎಸ್‍ಪಿ ವೈದ್ ಹೇಳಿದ್ದಾರೆ.

    ಪಾಕಿಸ್ತಾನ ಭಯೋತ್ಪಾದರು ಕಳೆದ ಮೇ ತಿಂಗಳಿನಲ್ಲಿ ಲೆ. ಉಮ್ಮರ್ ಫಯಾಜ್(22)ರನ್ನು ಹತ್ಯೆ ಮಾಡಿರುವ ಕುರಿತು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ ಮಹಾ ಅಧಿವೇಶನದಲ್ಲಿ ಭಾರತ ಪ್ರಸ್ತಾಪ ಮಾಡಿ, ಪಾಕಿಸ್ತಾನದಿಂದ ಹೊರಹೊಮ್ಮುತ್ತಿರುವ ಭಯೋತ್ಪಾದನೆಗೆ ಉದಾಹರಣೆ ನೀಡಿತ್ತು. ಇದೊಂದು ನೈಜ ಚಿತ್ರಣವಾಗಿದ್ದು, ಕಠಿಣ ವಾಸ್ತವಿಕತೆ ಹಾಗೂ ದುರಂತವನ್ನು ಸೂಚಿಸುತ್ತದೆ ಎಂದು ಭಾರತದ ಪ್ರತಿನಿಧಿ 22 ವರ್ಷದ ಸೇನಾ ಧಿಕಾರಿಯ ಫೋಟೋ ಹಿಡಿದು ಪಾಕಿಸ್ತಾನದ ದುಷ್ಕೃತ್ಯಗಳನ್ನು ವಿವರಿಸಿದ್ದರು.

    https://twitter.com/nitishcop/status/913104415476682752

    ಲೆ.ಉಮ್ಮರ್ ಫಯಾಜ್ ಕೂಡ ಕರ್ತವ್ಯದಲ್ಲಿಲ್ಲದ ಸಂದರ್ಭದಲ್ಲಿ ನಿರಾಯುಧರಾಗಿದ್ದಾಗ ಕಿಡ್ನ್ಯಾಪ್ ಆಗಿದ್ದರು. ಸಂಬಂಧಿಗಳ ಮದುವೆಯ ಸಂಭ್ರಮದಲ್ಲಿದ್ದ ಉಮ್ಮರ್‍ರನ್ನು ದಕ್ಷಿಣ ಜಮ್ಮವಿನ ಜಿಲ್ಲೆಯಿಂದ ಅಪಹರಣ ಮಾಡಲಾಗಿತ್ತು. ಉಗ್ರರು ಅವರನ್ನು ಬಿಟ್ಟುಬಿಡುತ್ತಾರೆ ಎಂದುಕೊಂಡು ಕುಟುಂಬಸ್ಥರು ಈ ವಿಚಾರವನ್ನು ಪೊಲೀಸರಿಗೆ ತಿಳಿಸಿರಲಿಲ್ಲ. ಮರುದಿನ ಗ್ರಾಮದ 30 ಕಿ.ಮೀ ದೂರದಲ್ಲಿ ಸೇನಾಧಿಕಾರಿಯ ಮೃತದೇಹ ಪತ್ತೆಯಾಗಿತ್ತು. ಅವರ ತಲೆ ಹಾಗೂ ಹುಟ್ಟೆಯ ಭಾಗದಲ್ಲಿ ಬುಲೆಟ್ ಪತ್ತೆಯಾಗಿತ್ತು.

    ಜಮ್ಮು ಕಾಶ್ಮೀರದ ಮಾಜಿ ಮುಖ್ಯ ಮಂತ್ರಿ ಓಮರ್ ಅಬ್ದುಲ್ಲಾ ಟ್ವೀಟ್ ಮಾಡಿ ತಮ್ಮ ಸಂತಾಪವನ್ನು ಸೂಚಿಸಿದ್ದಾರೆ. ಭಯೋತ್ಪಾದಕರ ಕೃತ್ಯ ಅತ್ಯಂತ ಅಸಹನೀಯವಾದುದು ಎಂದು ಹೇಳಿದ್ದಾರೆ.

  • ಮಗನ ಸಾವಿಗೆ ಪ್ರತೀಕಾರವಾಗಿ ಅಣ್ಣನ ಮಗನನ್ನೇ ಕೊಂದ!

    ಮಗನ ಸಾವಿಗೆ ಪ್ರತೀಕಾರವಾಗಿ ಅಣ್ಣನ ಮಗನನ್ನೇ ಕೊಂದ!

    ಹೈದರಾಬಾದ್: ತನ್ನ ಮಗನ ಸಾವಿಗೆ ಸೇಡು ತೀರಿಸಿಕೊಳ್ಳಲು ವ್ಯಕ್ತಿಯೊಬ್ಬ ಅಣ್ಣನ ಮಗನನ್ನೇ ಅಪಹರಣ ಮಾಡಿ ಹತ್ಯೆ ಮಾಡಿರುವ ಘಟನೆ ಹೈದರಾಬಾದ್‍ನಲ್ಲಿ ಶುಕ್ರವಾರ ನಡೆದಿದ್ದು, ಆರೋಪಿ ಚಿಕ್ಕಪ್ಪನ್ನು ಪೊಲೀಸರು ಬಂಧಿಸಿದ್ದಾರೆ.

    ಹೈದರಾಬಾದ್‍ನ ದಾದೀಪುರದಲ್ಲಿ ಈ ಘಟನೆ ನಡೆದಿದ್ದು, 7 ವರ್ಷದ ಅಬ್ಬಾಸ್ ಹುಸೈನ್ ರಿಜ್ವಿ ಹತ್ಯೆಯಾದ ಬಾಲಕ. ಚಿಕ್ಕಪ್ಪ ಜಾದವ್ ಅಲಿ ಕೊಲೆ ಆರೋಪಿಯಾಗಿದ್ದು, ಹಳೆ ವೈಷಮ್ಯವೆ ಬಾಲಕನ ಹತ್ಯೆಗೆ ಕಾರಣ ಎಂದು ತಿಳಿದುಬಂದಿದೆ. 2008ರಲ್ಲಿ ಅಬ್ಬಾಸ್ ಹುಸೈನ್ ರಿಜ್ವಿಯ ಪೋಷಕರು ಜಾವದ್ ಅಲಿ ಮಗನ ಸಾವಿಗೆ ಕಾರಣರಾಗಿದ್ದರು. ಹೀಗಾಗಿ ಪೋಷಕರ ಮೇಲಿನ ದ್ವೇಷದಿಂದ ಸೇಡು ತೀರಿಸಿಕೊಳ್ಳಲು ಬಾಲಕನನ್ನು ಅಪಹರಣ ಮಾಡಿ ಕೊಲೆ ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

    ಕೆಲ ದಿನಗಳ ಹಿಂದೆ ಬಾಲಕ ತನ್ನ ಪೋಷಕರ ಜೊತೆ ಮೊಹರಂ ಹಬ್ಬಕ್ಕೆಂದು ದಾದೀಪುರದಲ್ಲಿರುವ ತನ್ನ ಅಜ್ಜ ಖಮರ್ ಹುಸೈನ್ ರಿಜ್ವಿ ಮನೆಗೆ ಹೋಗಿದ್ದನು. ಶುಕ್ರವಾರದಂದು ಮೊಹರಂ ಮೊದಲ ದಿನವಾದ್ದರಿಂದ ಅಲಮ್ ಕೂರಿಸಲು ತಯಾರಿ ನಡೆಸುತ್ತಿದ್ದ. ಇದೇ ಸಂದರ್ಭದಲ್ಲಿ ಚಿಕ್ಕಪ್ಪ ಜಾವಿದ್ ಅಲಿ ಬಾಲಕನನ್ನು ಉಪಾಯದಿಂದ ಕರೆದೊಯ್ದು ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ್ದಾನೆ. ಇಲ್ಲಿನ ರೇನ್ ಬಜಾರ್ ಪ್ರದೇಶದ ನಾಗಾಬೌಲಿ ಸ್ಮಶಾನದಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ.

    ಆರೋಪಿ ಜಾವದ್ ಅಲಿ ತನ್ನ ಮಗನ ಸಾವಿಗೆ ಬಾಲಕನ ಅಜ್ಜನನ್ನು ಹೊಣೆಯಾಗಿಸಿದ್ದಾನೆ. ಜಾವದ್ ಸೌದಿ ಅರೇಬಿಯಾದಲ್ಲಿದ್ದಾಗ ತನ್ನ ಮಗನನ್ನು ಖಮರ್ ಹುಸೇನ್ ರಿಜ್ವಿಯ ಆಶ್ರಯದಲ್ಲಿ ಬಿಟ್ಟಿದ್ದ. ಹೀಗಾಗಿ ಮಗನ ಸಾವಿಗೆ ಸೇಡು ತೀರಿಸಿಕೊಳ್ಳಲು ಅಬ್ಬಾಸ್ ಹುಸೇನ್ ರಿಜ್ವಿಯನ್ನ ಕೊಲೆ ಮಾಡಿದ್ದಾನೆ.

    ರಿಜ್ವಿ ಅಜ್ಜ ಇಲ್ಲಿನ ಬಿಬಿ ಕಾ ಆಲಮ್‍ನಲ್ಲಿ ಅಲಮ್ ಬಾರ್ದರ್ ಆಗಿ ಕೆಲಸ ಮಾಡುತ್ತಿದ್ದು, ಅಜ್ಜನಂತೆ ಬಾಲಕ ಕೂಡ ಅಲಮ್ ಬಾರ್ದರ್ ಆಗಬಹುದು ಎಂದು ಜಾವದ್ ಭಾವಿಸಿದ್ದ. ಹೀಗಾಗಿ ಆತನನ್ನು ಕೊಲ್ಲಲು ನಿರ್ಧರಿಸಿದ್ದ. ಈ ಸಂಬಂಧ ಆರೋಪಿ ಜಾವದ್ ಅಲಿ ವಿರುದ್ಧ ಐಪಿಸಿ ಸೆಕ್ಷನ್ 363 ಮತ್ತು 302ರಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಡಿಸಿಪಿ ವಿ. ಸತ್ಯನಾರಾಯಣ ತಿಳಿಸಿದ್ದಾರೆ.

  • ಗೌರಿ ಲಂಕೇಶ್ ಹತ್ಯೆ ತನಿಖೆ ಈಗ ಎಲ್ಲಿಯವರೆಗೆ ಬಂದಿದೆ?

    ಗೌರಿ ಲಂಕೇಶ್ ಹತ್ಯೆ ತನಿಖೆ ಈಗ ಎಲ್ಲಿಯವರೆಗೆ ಬಂದಿದೆ?

    ಬೆಂಗಳೂರು: ದೇಶಾದ್ಯಂತ ಸಂಚಲನವನ್ನು ಸೃಷ್ಟಿಸಿದ್ದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ನಡೆಸುತ್ತಿರುವ ವಿಶೇಷ ತನಿಖಾ ದಳದ(ಎಸ್‍ಐಟಿ) ಪೊಲೀಸರು ಈಗ ಕರ್ನಾಟಕದ ಎಲ್ಲಾ ಜೈಲುಗಳಲ್ಲಿ ಇರುವ ಸುಪಾರಿ ಹಂತಕರ ವಿಚಾರಣೆ ನಡೆಸಲು ಮುಂದಾಗಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ಸಿಕ್ಕಿದೆ.

    ಉತ್ತರ ಕರ್ನಾಟಕ ಜೈಲುಗಳು ಸೇರಿದಂತೆ, ಉಡುಪಿ, ಬಿಜಾಪುರ, ಮಂಗಳೂರು, ಬೆಂಗಳೂರು ಜೈಲುಗಳಿಗೆ ಭೇಟಿ ನೀಡಿ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಗೌರಿ ಅವರ ಹತ್ಯೆಗೆ ನಾಡ ಪಿಸ್ತೂಲು ಬಳಕೆಯಾಗಿರುವ ಅಂಶ ಬೆಳಕಿಗೆ ಬಂದಿದ್ದು, ನಾಡಾ ಪಿಸ್ತೂಲು ಮಾರಾಟ ಮಾಡುತ್ತಿದ್ದ ಗ್ಯಾಂಗ್ ಸದಸ್ಯರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಅಲ್ಲದೆ ನಾಡಾ ಪಿಸ್ತೂಲು ಮಧ್ಯಪ್ರದೇಶದಿಂದ ಪೂರೈಕೆಯಾಗಿರುವ ಕುರಿತು ಅನುಮಾನ ಮೂಡಿದ್ದು, ಕರ್ನಾಟಕದ ಬೇರೆಂದು ಗ್ಯಾಂಗ್ ಪಿಸ್ತೂಲು ರವಾನೆ ಮಾಡಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

    ಈ ಮದ್ಯೆ ಉಡುಪಿಯ ಜಿಲ್ಲಾ ಕಾರಾಗೃಹಕ್ಕೆ ತನಿಖಾ ತಂಡ ಭೇಟಿ ನೀಡಿದ್ದು, ಯಾವುದೇ ಮಾಹಿತಿ ಲಭಿಸದೆ ಹಿಂದಿರುಗಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದ ಸುತ್ತಮುತ್ತ ಚಾಲ್ತಿಯಲ್ಲಿರುವ ರೌಡಿ ಶೀಟರ್‍ಗಳ ಬಗ್ಗೆಯು ವಿಚಾರಣೆಯನ್ನು ನಡೆಸಲಾಗುತ್ತಿದೆ ಎನ್ನುವ ಮಾಹಿತಿ ಮೂಲಗಳಿಂದ ಸಿಕ್ಕಿದೆ

    ಪ್ರಕರಣದ ಕುರಿತು ಮತ್ತಷ್ಟು ಸುಳಿವುಗಳನ್ನು ಪಡೆಯುವ ಸಲುವಾಗಿ ವಿಧಿ ವಿಜ್ಞಾನ ಪ್ರಯೋಗಾಲಯದ ತಂಡ ಮತ್ತೆ ಕಾಟ್ರೇಜ್‍ಗಳ ಮರು ಪರೀಕ್ಷೆಯನ್ನು ನಡೆಸುತ್ತಿದೆ.

  • ರೌಡಿಶೀಟರ್‍ನನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ 6 ಆರೋಪಿಗಳ ಬಂಧನ

    ರೌಡಿಶೀಟರ್‍ನನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ 6 ಆರೋಪಿಗಳ ಬಂಧನ

    ರಾಮನಗರ: ರೌಡಿಶೀಟರ್‍ನನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ ಆರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

    ಎರಡು ದಿನದ ಹಿಂದೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಸೋಲೂರು ಸಮೀಪ ಈ ಘಟನೆ ನಡೆದಿತ್ತು. ಬೆಂಗಳೂರಿನ ನಂದಿನಿ ಲೇಔಟ್ ನ ಇಮ್ರಾನ್‍ನನ್ನು ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಕುದೂರು ಪೊಲೀಸರು ಆರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಪ್ರೇಮ್ ಕುಮಾರ್, ಜಮೀರ್ ಪಾಷಾ, ಇಮ್ರಾನ್ ಖಾನ್, ಬಾಜಿ, ಬಾಬು, ಇನಾಯತ್ ಖಾನ್ ಬಂಧಿತ ಆರೋಪಿಗಳು. ಕೊಲೆಯಾದ ರೌಡಿಶೀಟರ್ ಕಿರುಕುಳ ತಾಳಲಾರದೆ ಕೊಲೆ ಮಾಡಿರುವುದಾಗಿ ಆರೋಪಿಗಳು ಬಾಯ್ ಬಿಟ್ಟಿದ್ದಾರೆ.

    ಮಾಗಡಿ ತಾಲೂಕಿನ ಕುದೂರು ಪೊಲೀಸರು ಮಿಂಚಿನ ಕಾರ್ಯಚರಣೆ ನಡೆಸಿ ಮಾರಕಾಸ್ತ್ರಗಳನ್ನ ವಶಪಡಿಸಿಕೊಂಡಿದ್ದು, ವಿಚಾರಣೆ ಮುಂದುವರೆಸಿದ್ದಾರೆ. ಈ ಆರೋಪಿಗಳು ಇಮ್ರಾನ್‍ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಕುದೂರು-ಸೋಲೂರು ರಸ್ತೆಯ ಭೈರವೇಶ್ವರ ಫಾರ್ಮ್ ಹೌಸ್ ಬಳಿ ಶವವನ್ನು ನಿರ್ಜನ ಪ್ರದೇಶದಲ್ಲಿ ಬಿಸಾಡಿದ್ದರು.

    ಕೊಲೆಯಾದ ಇಮ್ರಾನ್ ಮೇಲೆ 2014 ರಲ್ಲಿ ರೌಡಿಶೀಟ್ ತೆರೆಯಲಾಗಿತ್ತು ಎಂದು ತಿಳಿದುಬಂದಿದೆ.