Tag: Ashwin Kumar

  • ಬೇಸಾಯ ಸ್ಥಳದಲ್ಲೇ ಎಂಜಿನಿಯರ್ ಸೃಷ್ಟಿ- ದೇಸಿ ಜೆಸಿಬಿ ತಯಾರಿಸಿದ್ದಾರೆ ಅಶ್ವಿನ್ ಕುಮಾರ್

    ಬೇಸಾಯ ಸ್ಥಳದಲ್ಲೇ ಎಂಜಿನಿಯರ್ ಸೃಷ್ಟಿ- ದೇಸಿ ಜೆಸಿಬಿ ತಯಾರಿಸಿದ್ದಾರೆ ಅಶ್ವಿನ್ ಕುಮಾರ್

    ಮಡಿಕೇರಿ: ಬೇರೆಲ್ಲ ಕ್ಷೇತ್ರಗಳಿಗೆ ಹೋಲಿಸಿದರೆ ಕೃಷಿ ರಂಗದಲ್ಲಿ ಪ್ರಯೋಗಗಳು ಅಷ್ಟಾಗಿ ಹೆಚ್ಚೇನೂ ಆಗೋದಿಲ್ಲ. ಹೀಗಾಗಿ ನಮ್ಮ ದೇಶ ಕೃಷಿ ಪ್ರದಾನ ರಾಷ್ಟ್ರವಾದರೂ ಬಹಳ ಹಿಂದೆನೇ ಉಳಿದಿದೆ. ಆದರೆ ಪ್ರತಿ ಹಳ್ಳಿಗೆ ಅಲ್ಲ, ಪ್ರತಿ ಜಿಲ್ಲೆಗೊಬ್ಬ ಇಂತಹ ಅಸಾಧಾರಣ ರೈತನಿದ್ದರೆ ಖಂಡಿತವಾಗಿಯೂ ಕೃಷಿ ಕ್ಷೇತ್ರದಲ್ಲೂ ನಮ್ಮ ದೇಶ ಕೂಡ ಪ್ರಗತಿ ಸಾಧಿಸಬಹುದು.

    ಹೌದು. ಮಡಿಕೇರಿಯ ಹುಲಿತಾಳದ ರೈತ ಅಶ್ವಿನ್ ಕುಮಾರ್ ಅವರು ದೇಸಿ ಜೆಸಿಬಿಯ ರೂವಾರಿಯಾಗಿದ್ದಾರೆ. ಬಿಎಸ್ಸಿ ಪದವಿಧರರಾದ ಅಶ್ವಿನ್‍ಗೆ ಹೊಸ ಹೊಸ ಆವಿಷ್ಕಾರಗಳನ್ನ ಮಾಡೋದಂದರೆ ಎಲ್ಲಿಲ್ಲದ ಆಸಕ್ತಿ. ತಮ್ಮ ಕೃಷಿಯ ಅನುಕೂಲಕ್ಕೆ ಜೆಸಿಬಿ ಯಂತ್ರವನ್ನು ಹೋಲುವ ಮಿನಿ ಮಷಿನ್ ತಯಾರಿಸಿ, ಎಲ್ಲರ ಗಮನ ಸೆಳೆದಿದ್ದಾರೆ.

    ಸಾಮಾನ್ಯವಾಗಿ ಎಲ್ಲ ಕೃಷಿಕರು ಎದುರಿಸೋ ಕಾರ್ಮಿಕರ ಕೊರತೆಯನ್ನ ಅಶ್ವಿನ್ ಕೂಡ ಎದುರಿಸಿದ್ದರು. ಈ ವೇಳೆ ಅಶ್ವಿನ್ ತಲೆಯಲ್ಲಿ ಹೊಳೆದಿದ್ದೇ ಮಿನಿ ಜೆಸಿಬಿ ತಯಾರಿ. ಮೊದಲ ಪ್ರಯತ್ನದಲ್ಲಿ ಸ್ವಲ್ಪ ಎಡವಿದರೂ ನಂತರ ಯಶಸ್ಸನ್ನು ಕಂಡರು. ದೇಸಿ ಜೆಸಿಬಿಗೆ ಬಳಸಿರೋದು ಆಟೋ ರಿಕ್ಷಾದ 8 ಹೆಚ್‍ಪಿ ಸಾಮಥ್ರ್ಯದ ಎಂಜಿನ್. ಜೊತೆಗೆ ಹೈಡ್ರಾಲಿಕ್ ಟ್ಯಾಂಕ್, ಹೈಡ್ರಾಲಿಕ್ ಪಂಪ್, ಹೈಡ್ರಾಲಿಕ್ ಫಿಲ್ಟರ್, ಪ್ರೆಶರ್ ರೆಗ್ಯುಲೇಟರ್ ಬಳಸಲಾಗಿದೆ.

    ಮಣ್ಣು ಅಗೆಯುವ ಬಕೆಟ್ ಹಾಗೂ ಸಮತಟ್ಟು ಮಾಡುವ ಬ್ಲೇಡ್‍ನ ಚಲನೆಗಾಗಿ ಬೂಮ್ ಸಿಲಿಂಡರ್ ಕೂಡ ಅಳವಡಿಸಲಾಗಿದೆ. ಜೆಸಿಬಿಯಂತೆ ಗೇರ್‍ಗಳ ನೆರವಿನಿಂದ ಅವುಗಳನ್ನು ಚಲಿಸುವಂತೆ ಮಾಡಲಾಗಿದೆ. ಯಂತ್ರ ತಯಾರಿಸಲು ಖರ್ಚಾಗಿದ್ದು ಕೇವಲ ಎರಡೂವರೆ ಲಕ್ಷ. ಅರ್ಧ ಲೀಟರ್ ಡೀಸೆಲ್ ಇದ್ದರೆ ಒಂದು ಗಂಟೆ ಕೆಲಸ ಮಾಡಬಹುದಾಗಿದೆ ಎಂದು ಅಶ್ವಿನ್ ಹೇಳುತ್ತಾರೆ.

    ಸದ್ಯ ಈ ದೇಸಿ ಜೆಸಿಬಿಯನ್ನ ತೋಟದಲ್ಲಿ ಚರಂಡಿ ತೆಗೆಯಲು, ಮಣ್ಣು ಸಮತಟ್ಟು ಮಾಡಲು ಬಳಸುತ್ತಿದ್ದಾರೆ. ಹೊಸದಾಗಿ ಬಾಳೆ ಕೃಷಿ ಮಾಡುತ್ತಿದ್ದು, ಬಾಳೆ ತೋಟದಲ್ಲಿ ಸಣ್ಣ ಸಣ್ಣ ಗುಂಡಿ ತೆಗೆಯಲು ಇದನ್ನು ಪ್ರಾಯೋಗಿಕವಾಗಿ ಬಳಸಿ ಯಶಸ್ಸು ಕಂಡಿದ್ದಾರೆ. ಈ ದೇಸಿ ಜೆಸಿಬಿ ನೋಡಲು ಪ್ರತಿನಿತ್ಯ ಅನೇಕರು ಬರುತ್ತಾರೆ.

  • ನಾನು ಬಿಜೆಪಿಗೆ ಹೋಗೋದಿಲ್ಲ -ಶಾಸಕ ಅಶ್ವಿನ್ ಕುಮಾರ್ ಸ್ಪಷ್ಟನೆ

    ನಾನು ಬಿಜೆಪಿಗೆ ಹೋಗೋದಿಲ್ಲ -ಶಾಸಕ ಅಶ್ವಿನ್ ಕುಮಾರ್ ಸ್ಪಷ್ಟನೆ

    ಮೈಸೂರು: ನನಗೆ ಬಿಜೆಪಿಯಿಂದ ಯಾವ ಆಫರ್ ಬಂದಿಲ್ಲ. ನನ್ನ ರಾಜಕೀಯ ಜೀವನವನ್ನು ಸಿಎಂ ನೆರಳಲ್ಲೇ ಮುಗಿಸುತ್ತೇನೆ. ಯಾರೂ ನನ್ನನ್ನು ಸಂಪರ್ಕ ಮಾಡಿಲ್ಲ ಎಂದು ಶಾಸಕ ಅಶ್ವಿನ್ ಕುಮಾರ್ ತಿಳಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅಶ್ವಿನ್ ಕುಮಾರ್, ನಾನು ಬಿಜೆಪಿಗೆ ಹೋಗುತ್ತೇನೆ. ಬಿಜೆಪಿಯಿಂದ 10 ಕೋಟಿ ಆಫರ್ ಬಂದಿದೆ ಎಂದು ಮಾಧ್ಯಮಗಳಲ್ಲಿ ಬಂದಿದೆ ಎಂದು ಕೇಳಿದ್ದೆ. ಆದರೆ ನನ್ನ ರಾಜಕೀಯ ಜೀವನ ಶುರುವಾಗಿದ್ದು ಸಿಎಂ ನೆರಳಲ್ಲಿ. ಅವರ ನೆರಳಲ್ಲಿಯೇ ನನ್ನ ರಾಜಕೀಯ ಜೀವನವನ್ನು ಮುಗಿಸುತ್ತೇನೆ. ಇದರಲ್ಲಿ ಯಾವುದೇ ಸಂದೇಹ, ಅನುಮಾನ ಬೇಡ ಎಂದು ಸ್ಪಷ್ಟಪಡಿಸಿದ್ದಾರೆ.

    ನನಗೆ ಬಿಜೆಪಿಯಿಂದ ಆ ರೀತಿ ಯಾವ ಆಫರೂ ಬಂದಿಲ್ಲ. ಯಾರು ನನ್ನನ್ನು ಸಂಪರ್ಕ ಮಾಡಿಲ್ಲ. ಇದು ಕೇವಲ ಊಹಾಪೋಹಗಳು ಅಷ್ಟೆ. ನನ್ನನ್ನು ಯಾರು ಕೂಡ ಮಾತನಾಡಿಸುವುದಿಲ್ಲ. ನನಗೂ ಬಿಜೆಪಿಯಲ್ಲಿ ಹಲವರು ಸ್ನೇಹಿತರಿದ್ದಾರೆ. ಆದರೆ ನನ್ನನ್ನು ಯಾರು ಕೂಡ ಸಂಪರ್ಕ ಮಾಡಿಲ್ಲ. ನಾನು ಕೊನೆಯವರೆಗೂ ಜೆಡಿಎಸ್‍ನಲ್ಲಿಯೇ ಇರುತ್ತೇನೆ ಎಂದು ಅಶ್ವಿನ್ ಹೇಳಿದ್ದಾರೆ.

    ಟಿ.ನರಸೀಪುರ ಕ್ಷೇತ್ರದ ಶಾಸಕ ಅಶ್ವಿನ್ ಕುಮಾರ್‌ಗೆ ಬಿಜೆಪಿಯಿಂದ 10 ಕೋಟಿ ಆಫರ್ ಬಂದಿದೆ. ಅವರು ಬಿಜೆಪಿಗೆ ಸೇರುತ್ತಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬಂದಿತ್ತು. ಇದೀಗ ಸ್ವತಃ ಅಶ್ವಿನ್ ಅವರೇ ಈ ಬಗ್ಗೆ ಸ್ಪಷ್ಟನೆ ಕೊಡುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]