Tag: Ashoka Symbol

  • ರಾಷ್ಟ್ರೀಯ ಹೊಸ ಲಾಂಛನಕ್ಕೆ ವಿಪಕ್ಷಗಳ ಆಕ್ರೋಶ – ಆಕ್ರಮಣಕಾರಿ ಲಾಂಛನ ಅಂತ ಕಟು ಟೀಕೆ

    ರಾಷ್ಟ್ರೀಯ ಹೊಸ ಲಾಂಛನಕ್ಕೆ ವಿಪಕ್ಷಗಳ ಆಕ್ರೋಶ – ಆಕ್ರಮಣಕಾರಿ ಲಾಂಛನ ಅಂತ ಕಟು ಟೀಕೆ

    ನವದೆಹಲಿ: ನೂತನ ಸಂಸತ್ ಭವನದಲ್ಲಿ ಪ್ರಧಾನಿ ಮೋದಿ ಅನಾವರಣ ಮಾಡಿರುವ ಕಂಚಿನ ಬೃಹತ್ ರಾಷ್ಟ್ರೀಯ ಲಾಂಛನದ ಸ್ವರೂಪದ ಬಗ್ಗೆ ಆಕ್ಷೇಪಗಳು ವ್ಯಕ್ತವಾಗುತ್ತದೆ.

    ಸಾರನಾಥದ ಅಶೋಕ ಸ್ತಂಭದಲ್ಲಿರುವಂತೆ ಸೌಮ್ಯ ಸ್ವಭಾವದ ಸಿಂಹದ ಬದಲು ಇಲ್ಲಿ ಆಕ್ರಮಣಕಾರಿ, ಘರ್ಜಿಸುತ್ತಿರುವ, ಕೋರೆಹಲ್ಲುಗಳು ಪ್ರಮುಖವಾಗಿ ಕಾಣುವ ಸಿಂಹದ ಮುಖವನ್ನು ರೂಪಿಸಲಾಗಿದೆ. ಇದು ರಾಷ್ಟ್ರೀಯ ಲಾಂಛನಕ್ಕೆ ಮಾಡಿದ ಅವಮಾನ ಎಂದು ಹಲವರು ಆಕ್ರೋಶ ಹೊರಹಾಕುತ್ತಿದ್ದಾರೆ. ಇದನ್ನೂ ಓದಿ: “ಗಾಂಧಿಯಿಂದ ಗೋಡ್ಸೆಯವರೆಗೆ”..ರಾಷ್ಟ್ರ ಲಾಂಛನಕ್ಕೆ ಅವಮಾನ – ಮೋದಿ ವಿರುದ್ಧ ಕಿಡಿ

    ಕಾಂಗ್ರೆಸ್, ಟಿಎಂಸಿ, ಎಂಐಎಂ ಸೇರಿ ಹಲವು ಪಕ್ಷಗಳು ಕೇಂದ್ರದ ವಿರುದ್ಧ ಕಿಡಿಕಾರಿವೆ. ಇದು ಮೋದಿ ಭಾರತದ ಎಫೆಕ್ಟ್ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ, ಸಂಸತ್ ಭವನದ ಮೇಲೆ ರಾಷ್ಟ್ರೀಯ ಲಾಂಛನದ ಅನಾವರಣ ಸಂವಿಧಾನ ವಿರೋಧಿ ಕೆಲಸ ಎಂದು ವಿಪಕ್ಷಗಳು ಅಭಿಪ್ರಾಯ ವ್ಯಕ್ತಪಡಿಸಿವೆ.

    ಭಾರತದ ಸಂವಿಧಾನ ನಮ್ಮ ಪ್ರಜಾಪ್ರಭುತ್ವದ ಮೂರು ವ್ಯವಸ್ಥೆಗಳನ್ನು ಸ್ಪಷ್ಟವಾಗಿ ಬೇರೆ ಮಾಡಿ ತೋರಿಸಿದೆ. ಆದರೆ ಶಾಸಕಾಂಗದ ಭಾಗವಾಗಿರುವ ಪ್ರಧಾನಿ ಹೀಗೆ ಮಾಡಬಾರದಿತ್ತು. ಇದು ಸಂವಿಧಾನದ ಸ್ಪಷ್ಟ ಉಲ್ಲಂಘನೆ ಎಂದು ಸಿಪಿಎಂ ನೇತಾರ ಸೀತಾರಾಂ ಯೆಚೂರಿ, ಎಂಐಎಂನ ಓವೈಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ಬಿಜೆಪಿ ಮಾತ್ರ ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದೆ. ವಿಪಕ್ಷದವರು ವಿರೋಧ ಮಾಡಬೇಕು ಅಂತಾ ವಿರೋಧ ಮಾಡುತ್ತಿದ್ದಾರೆ ಅಷ್ಟೇ ಎಂದಿದೆ. ಇದನ್ನೂ ಓದಿ: ಅನ್ನ ಹಾಕಿದ ಮನೆಗೆ ದ್ರೋಹ ಬಗೆದ – ಪ್ರೇಯಸಿಗಾಗಿ ಮಾಲೀಕರಿಗೆ ಉಂಡೆ ನಾಮ ಹಾಕಿದ ಖದೀಮ

    ಈ ಎಲ್ಲಾ ಟೀಕೆಗಳ ಮಧ್ಯೆ ವಿನ್ಯಾಸಕಾರರಾದ ಸುನೀಲ್ ದಿಯೋರಾ-ರೋಮಿಯೆಲ್ ಮೋಸೆಸ್ ಸ್ಪಷ್ಟನೆ ನೀಡಿದ್ದು, ರಾಷ್ಟ್ರೀಯ ಲಾಂಛನದ ಸಿಂಹಗಳಲ್ಲಿ ಬದಲಾವಣೆ ಮಾಡಿಲ್ಲ, ಹಿಂದಿನಂತೆಯೇ ಇವೆ. ಸಣ್ಣ ವ್ಯತ್ಯಾಸಗಳು ಆಗಿರಬಹುದಷ್ಟೇ. ಇದು ಬೃಹತ್ ಆಕಾರದಲ್ಲಿದ್ದು, ಕೆಳಭಾಗದಿಂದ ನೋಡಿದಾಗ ಮಾತ್ರ ಅದು ಆಕ್ರಮಣಕಾರಿಯಾಗಿ ಕಾಣುತ್ತಿದೆ ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • “ಗಾಂಧಿಯಿಂದ ಗೋಡ್ಸೆಯವರೆಗೆ”..ರಾಷ್ಟ್ರ ಲಾಂಛನಕ್ಕೆ ಅವಮಾನ – ಮೋದಿ ವಿರುದ್ಧ ಕಿಡಿ

    “ಗಾಂಧಿಯಿಂದ ಗೋಡ್ಸೆಯವರೆಗೆ”..ರಾಷ್ಟ್ರ ಲಾಂಛನಕ್ಕೆ ಅವಮಾನ – ಮೋದಿ ವಿರುದ್ಧ ಕಿಡಿ

    ನವದೆಹಲಿ: ಹೊಸ ಸಂಸತ್ ಭವನದಲ್ಲಿ ಅನಾವರಣಗೊಂಡ 9,500 ಕೆಜಿ ಕಂಚಿನ ರಾಷ್ಟ್ರೀಯ ಲಾಂಛನ ಈಗ ವಿವಾದಕ್ಕೆ ಕಾರಣವಾಗಿದೆ.

    ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ರಾಷ್ಟ್ರೀಯ ಲಾಂಛನವನ್ನು ವಿರೂಪಗೊಳಿಸಿದೆ ಎಂದು ವಿರೋಧ ಪಕ್ಷಗಳು  ಟೀಕೆ ವ್ಯಕ್ತಪಡಿಸಿವೆ.

    ವಿವಾದ ಏನು?
    ಸಾರನಾಥದ ಅಶೋಕ ಸ್ತಂಭದಲ್ಲಿರುವ ನಾಲ್ಕು ಮುಖಗಳ ಸಿಂಹ ಭಾರತ ರಾಷ್ಟ್ರ ಲಾಂಛನವಾಗಿದೆ. ಮೋದಿ ಅನಾವರಣಗೊಳಿಸಿರುವ ಲಾಂಛನದಲ್ಲಿ ಸಿಂಹಗಳು ಬಾಯಿ ತೆರೆದಿದ್ದು ಎರಡು ಕೋರೆ ಹಲ್ಲುಗಳು ಕಾಣುತ್ತಿದ್ದು ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ಹೊಸ ಸಂಸತ್ ಭವನದಲ್ಲಿ 9,500 ಕೆಜಿ ಕಂಚಿನ ರಾಷ್ಟ್ರೀಯ ಲಾಂಛನ ಅನಾವರಣ – ಏನಿದರ ವಿಶೇಷ?

    ರಾಷ್ಟ್ರೀಯ ಜನತಾ ದಳ, ಮೂಲ ಲಾಂಛನದಲ್ಲಿ ನಾಲ್ಕು ಸಿಂಹಗಳ ಮುಖದಲ್ಲಿ ಸೌಮ್ಯವಿದೆ. ಆದರೆ ಹೊಸದಾಗಿ ಅನಾವರಣಗೊಂಡ ಸಿಂಹಗಳು ಬಾಯಿ ತೆರೆದಿದ್ದು ಎಲ್ಲವನ್ನೂ ನುಂಗುವ ಪ್ರವೃತ್ತಿಯಲ್ಲಿದೆ ಎಂದು ಟೀಕಿಸಿದೆ.

    ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ʼಗಾಂಧಿಯಿಂದ ಗೋಡ್ಸೆಯವರೆಗೆʼ ಎಂದು ಬರೆದು ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. “ಗಾಂಧಿಯಿಂದ ಗೋಡ್ಸೆಯವರೆಗೆ; ನಮ್ಮ ರಾಷ್ಟ್ರೀಯ ಲಾಂಛನದಲ್ಲಿ ಸಿಂಹಗಳು ಭವ್ಯವಾಗಿ ಮತ್ತು ಶಾಂತಿಯುತವಾಗಿ ಕುಳಿತಿವೆ. ಸೆಂಟ್ರಲ್‌ ವಿಸ್ತಾದಲ್ಲಿ ನಿರ್ಮಾಣವಾಗುತ್ತಿರುವ ಹೊಸ ಸಂಸತ್ ಕಟ್ಟಡದ ಮೇಲ್ಭಾಗದಲ್ಲಿ ಅನಾವರಣಗೊಂಡ ಹೊಸ ರಾಷ್ಟ್ರೀಯ ಲಾಂಛನಗಳು ಕೋರೆಹಲ್ಲುಗಳನ್ನು ಹೊಂದಿರುವ ಕೆರಳಿರುವ ಸಿಂಹಗಳು. ಇದು ಮೋದಿಯ ನವ ಭಾರತ ಎಂದು ವ್ಯಂಗ್ಯವಾಡಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಷ್ಟ್ರೀಯ ಲಾಂಛನದಲ್ಲಿರುವ ಸಿಂಹಗಳಿಗೆ ಯಾವುದೇ ರೀತಿಯಲ್ಲಿ ಅವಮಾನವಾಗಿಲ್ಲ. ಮೇಲಿನಿಂದ ಫೋಟೋ ತೆಗೆದರೆ ಎಲ್ಲ ಸಿಂಹಗಳು ಸೌಮ್ಯ ರೀತಿಯಲ್ಲೇ ಕಾಣುತ್ತಿವೆ. ಆದರೆ ಕೆಳಗಡೆಯಿಂದ ಮೇಲುಗಡೆ ಇರುವ ಸಿಂಹದ ಫೋಟೋ ತೆಗೆದಾಗ ಎರಡು ಕೋರೆ ಹಲ್ಲುಗಳು ಕಾಣುತ್ತವೆ ಎಂದಿದ್ದಾರೆ.

    ಇನ್ನು ಕೆಲವರು ಕಾಂಗ್ರೆಸ್‌ ಆಡಳಿತದ ಕಾಲದಲ್ಲಿ ಭಾರತ ವಿದೇಶಗಳಿಗೆ ತಲೆ ಬಾಗಿತ್ತು. ಆದರೆ ಮೋದಿ ಅವಧಿಯಲ್ಲಿ ಸಿಂಹದಂತೆ ಭಾರತ ಘರ್ಜಿಸುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]