Tag: ashes

  • ರತನ್ ಟಾಟಾ ಚಿತಾ ಭಸ್ಮವನ್ನು ಅರಬ್ಬಿ ಸಮುದ್ರದಲ್ಲಿ ವಿಸರ್ಜಿಸಲು ನಿರ್ಧಾರ

    ರತನ್ ಟಾಟಾ ಚಿತಾ ಭಸ್ಮವನ್ನು ಅರಬ್ಬಿ ಸಮುದ್ರದಲ್ಲಿ ವಿಸರ್ಜಿಸಲು ನಿರ್ಧಾರ

    ಮುಂಬೈ: ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ (Ratan Tata) ಅವರ ಚಿತಾ ಭಸ್ಮವನ್ನು (Ashes) ಅರಬ್ಬಿ ಸಮುದ್ರದಲ್ಲಿ (Arabian Sea) ವಿಸರ್ಜಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಅನಾರೋಗ್ಯದಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ (Breach Candy Hospital) ದಾಖಲಾಗಿದ್ದ ಟಾಟಾ ಸಮೂಹದ ಮುಖ್ಯಸ್ಥ ರತನ್ ಟಾಟಾ (86) ಅ.9 ರಂದು ಕೊನೆಯುಸಿರೆಳೆದರು. ಅ.10 ರಂದು ಅಂತಿಮ ವಿಧಿವಿಧಾನಗಳನ್ನು ಮುಂಬೈನ (Mumbai) ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗಿತ್ತು. ಇದನ್ನೂ ಓದಿ: ಸ್ಯಾಂಡಲ್‌ವುಡ್‌ ನಟಿ ಅಮೂಲ್ಯ ಸಹೋದರ ದೀಪಕ್‌ ಅರಸ್‌ ನಿಧನ

    ಇದೀಗ ಅವರ ಆಸೆಯಂತೆ ಅವರ ಚಿತಾ ಭಸ್ಮವನ್ನು ಅರಬ್ಬಿ ಸಮುದ್ರದಲ್ಲಿ ವಿಸರ್ಜಿಸುವುದಾಗಿ ಟಾಟಾ ಕುಟುಂಬ ನಿರ್ಧಾರ ಕೈಗೊಂಡಿದೆ. ಮುಂಬೈನ ಗೇಟ್ ವೇ ಆಫ್ ಇಂಡಿಯಾದಿಂದ (Gate Way Of India) ಹಡಗಿನಲ್ಲಿ ಮೆರವಣಿಗೆಯ ಮೂಲಕ ಚಿತಾ ಭಸ್ಮವನ್ನು ವಿಸರ್ಜಿಸಲಾಗುವುದು. ಈ ಸಂದರ್ಭದಲ್ಲಿ ಅವರ ಕುಟುಂಬ, ಅವರ ಸ್ನೇಹಿತರು ಸೇರಿದಂತೆ ಇನ್ನಿತರರು ಭಾಗಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ರತನ್ ಟಾಟಾ ಮುಂಬೈ ನಗರದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದರು. ಜೊತೆಗೆ ತಮ್ಮ ಜೀವನದ ಬಹುಪಾಲು ದಿನಗಳನ್ನು ಅವರು ಅಲ್ಲಿಯೇ ಕಳೆದಿದ್ದು, ಟಾಟಾ ಗ್ರೂಪ್ಸ್ (Tata Groups) ಎಂಬ ವ್ಯವಹಾರ ಸಾಮ್ರಾಜ್ಯಕ್ಕೆ ಮುಂಬೈನಲ್ಲಿ ಅಡಿಪಾಯ ಹಾಕಿದ್ದರು. ಅರಬ್ಬಿ ಸಮುದ್ರದ ನೀರು ಪ್ರಶಾಂತವಾದ ನೀರು. ಒಬ್ಬ ವ್ಯಕ್ತಿಗೆ ಅಂತಿಮ ವಿಶ್ರಾಂತಿಯನ್ನು ನೀಡುತ್ತದೆ ಎಂಬ ಅಭಿಪ್ರಾಯದೊಂದಿಗೆ ಈ ನಿರ್ಧಾರ ಕೈಗೊಳ್ಳಲಾಗಿದೆ.ಇದನ್ನೂ ಓದಿ: ಭಾರತದಲ್ಲಿರುವ ಶೇಖ್ ಹಸೀನಾ ವಿರುದ್ಧ ಅರೆಸ್ಟ್‌ ವಾರೆಂಟ್‌ ಜಾರಿ

  • ಓವರ್‌ಕಾನ್ಫಿಡೆನ್ಸ್‌ಗೆ ಇಂಗ್ಲೆಂಡ್‌ ಬಲಿ – ಕ್ರಿಕೆಟ್‌ ಅಭಿಮಾನಿಗಳಿಂದ ಫುಲ್‌ ಕ್ಲಾಸ್‌

    ಓವರ್‌ಕಾನ್ಫಿಡೆನ್ಸ್‌ಗೆ ಇಂಗ್ಲೆಂಡ್‌ ಬಲಿ – ಕ್ರಿಕೆಟ್‌ ಅಭಿಮಾನಿಗಳಿಂದ ಫುಲ್‌ ಕ್ಲಾಸ್‌

    ಬರ್ಮಿಂಗ್‌ಹ್ಯಾಮ್‌: ಆ್ಯಶಸ್ ಟೆಸ್ಟ್‌ ಸರಣಿಯ (Ashes Test Series) ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ (Australia) 2 ವಿಕೆಟ್‌ಗಳ ರೋಚಕ ಜಯ ಸಾಧಿಸಿದ ಬೆನ್ನಲ್ಲೇ ಕ್ರಿಕೆಟ್‌ ಅಭಿಮಾನಿಗಳು ಇಂಗ್ಲೆಂಡ್‌ (England) ತಂಡವನ್ನು ಟೀಕಿಸಲು ಆರಂಭಿಸಿದ್ದಾರೆ. ಅತಿಯಾದ ಆತ್ಮವಿಶ್ವಾಸಕ್ಕೆ (Overconfidence) ಇಂಗ್ಲೆಂಡ್‌ ತಂಡ ಬಲಿಯಾಗಿದೆ ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

    ಕ್ರಿಕೆಟ್‌ ಅಭಿಮಾನಿಗಳು ಇಂಗ್ಲೆಂಡ್‌ ತಂಡವನ್ನು ತರಾಟೆಗೆ ತೆಗೆದುಕೊಳ್ಳಲು ಕಾರಣವಿದೆ. ಗೆಲುವಿಗೆ 281 ರನ್‌ಗಳ ಗುರಿಯನ್ನು ಪಡೆದ ಆಸ್ಟ್ರೇಲಿಯಾ 4ನೇ ದಿನದ ಅಂತ್ಯಕ್ಕೆ 3 ವಿಕೆಟ್‌ ನಷ್ಟಕ್ಕೆ 174 ರನ್‌ಗಳಿಸಿತ್ತು. ಕೊನೆಯ ದಿನ ಇನ್ನೂ 4.3 ಓವರ್‌ ಬಾಕಿ ಇರುವಂತೆ 8 ವಿಕೆಟ್‌ ಕಳೆದುಕೊಂಡು 282 ರನ್‌ ಹೊಡೆದು ರೋಚಕ ಜಯಗಳಿಸಿತು.

    ಕೊನೆಯಲ್ಲಿ ಅಲೆಕ್ಸ್‌ ಕ್ಯಾರಿ 20 ರನ್‌, ನಾಯಕ ಪ್ಯಾಟ್‌ ಕಮ್ಮಿನ್ಸ್‌ 44 ರನ್‌, ನಥನ್‌ ಲಿಯಾನ್‌ 16 ರನ್‌ ಸಾಹಸದಿಂದ ಆಸ್ಟ್ರೇಲಿಯಾ ಗೆಲುವಿನ ನಗೆ ಬೀರಿತು.

    ಮುಳುವಾಯಿತು ಅತಿಯಾದ ಆತ್ಮವಿಶ್ವಾಸ:
    ಇಂಗ್ಲೆಡ್‌ ತಂಡ 8 ವಿಕೆಟ್‌ ನಷ್ಟಕ್ಕೆ 393 ರನ್‌ ಗಳಿಸಿದ್ದಾಗ ಮೊದಲ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತ್ತು. ಡಿಕ್ಲೇರ್‌ ಮಾಡಿಕೊಳ್ಳುವ ವೇಳೆ ಜೋ ರೂಟ್‌ 118 ರನ್‌, ಒಲಿ ರಾಬಿನ್‌ಸನ್‌ 17 ರನ್‌ ಗಳಿಸಿ ಕ್ರೀಸ್‌ನಲ್ಲಿ ಇದ್ದರು.

    https://twitter.com/PrGo1976/status/1671403572104183808

    ಸಾಧಾರಣವಾಗಿ ಮೊದಲ ಇನ್ನಿಂಗ್ಸ್‌ನಲ್ಲಿ 500ಕ್ಕಿಂತಲೂ ಹೆಚ್ಚು ರನ್‌ ಗಳಿಸಿ ತಂಡಗಳು ಡಿಕ್ಲೇರ್‌ ಮಾಡಿಕೊಳ್ಳುತ್ತವೆ. ಆದರೆ ಇಂಗ್ಲೆಂಡ್‌ 393 ರನ್‌ಗಳಿಸಿದ್ದಾಗ ಡಿಕ್ಲೇರ್‌ ಮಾಡಿಕೊಂಡಿದ್ದು ಯಾಕೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.  ಇದನ್ನೂ ಓದಿ: ಭಾರತ ತಂಡ ಪಾಕಿಸ್ತಾನಕ್ಕೆ ಬರದಿದ್ರೆ ನಾವೂ ಹೋಗಲ್ಲ – ಜಾವೆದ್‌ ಮಿಯಾಂದದ್‌

    ಜೋ ರೂಟ್‌ ಶತಕ ಬಾರಿಸಿ ಉತ್ತಮ ಆಟ ಆಡುತ್ತಿದ್ದರು. ರೂಟ್‌ ಮತ್ತು ಒಲಿ ರಾಬಿನ್‌ಸನ್‌ ಮುರಿಯದ 9ನೇ ವಿಕೆಟಿಗೆ 43 ರನ್‌ ಜೊತೆಯಾಟವಾಡಿದ್ದರು. ಉತ್ತಮ ಜೊತೆಯಾಟ ನಡೆಯುತ್ತಿದ್ದಾಗ ಮತ್ತು ಕಡಿಮೆ ಸ್ಕೋರ್‌ ಇದ್ದಾಗ ಡಿಕ್ಲೇರ್‌ ಮಾಡಿಕೊಂಡಿದ್ದು ಸರಿಯಲ್ಲ. ತವರು ನೆಲದಲ್ಲಿ ಕಡಿಮೆ ರನ್‌ಗಳಿಸಿದರೂ ಜಯಗಳಿಸುತ್ತೇವೆ ಎಂಬ ಅತಿಯಾದ ಆತ್ಮವಿಶ್ವಾಸವೇ ಇಂಗ್ಲೆಂಡ್‌ ತಂಡವನ್ನು ಮುಳುಗಿಸಿದೆ ಎಂದು ನೆಟ್ಟಿಗರು ಕಮೆಂಟ್‌ ಮಾಡುತ್ತಿದ್ದಾರೆ.

    ಸಂಕ್ಷಿಪ್ತ ಸ್ಕೋರ್‌
    ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌ 393/8 ಡಿಕ್ಲೇರ್‌
    ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ 386
    ಇಂಗ್ಲೆಂಡ್‌ ಎರಡನೇ ಇನ್ನಿಂಗ್ಸ್‌ 273
    ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್‌ 282/8

  • ಕೊನೆಗೂ ಸಿಕ್ತು ಮಹಾತ್ಮ ಗಾಂಧೀಜಿ ಚಿತಾಭಸ್ಮಕ್ಕೆ ಶಾಶ್ವತ ಸ್ಮಾರಕ

    ಕೊನೆಗೂ ಸಿಕ್ತು ಮಹಾತ್ಮ ಗಾಂಧೀಜಿ ಚಿತಾಭಸ್ಮಕ್ಕೆ ಶಾಶ್ವತ ಸ್ಮಾರಕ

    ಮಡಿಕೇರಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ನಾಥೂರಾಮ್ ಗೋಡ್ಸೆಯ ಗುಂಡೇಟಿಗೆ ಬಲಿಯಾಗಿ 74 ವರ್ಷಗಳೇ ಸಂದಿವೆ. ಆದರೆ ಅವರ ಆತ್ಮಕ್ಕೆ ಮುಕ್ತಿ ದೊರಕಿಸುವ ಕಾರ್ಯವನ್ನು ಆ ಊರಿನ ಜಿಲ್ಲಾಡಳಿತ ಅಷ್ಟು ವರ್ಷಗಳಿಂದ ಮಾಡಲೇ ಇಲ್ಲ ಎನ್ನೋದು ವಿಪರ್ಯಾಸ. ಆದರೆ ಕೊನೆಗೂ ಅವರ ಆತ್ಮಕ್ಕೆ ಶಾಂತಿ ದೊರಕಿಸುವ ಕಾಲ ಕೂಡಿ ಬಂದಿದೆ. ಇದೇನು ಅಂತ ಅಚ್ಚರಿ ಪಡಬೇಡಿ.

    ಹೌದು, 1948ರ ಜನವರಿಯಲ್ಲಿ ಬಾಪೂ ಅವರ ಹತ್ಯೆಯಾಗಿ ಸಂಸ್ಕಾರ ನೆರವೇರಿದ ಬಳಿಕ ಅವರ ಚಿತಾಭಸ್ಮವನ್ನು ಕೊಡಗಿಗೂ ತರಲಾಗಿತ್ತು. ಅಂದಿನಿಂದ ಇಂದಿನವರೆಗೆ ಅವರ ಚಿತಾಭಸ್ಮವನ್ನು ಶಾಶ್ವತವಾಗಿ ಒಂದೆಡೆ ಇರಿಸಿ ಗೌರವ ಸಲ್ಲಿಸಲು ಸಾಧ್ಯವೇ ಆಗಿರಲಿಲ್ಲ. ಬದಲಾಗಿ ಜಿಲ್ಲಾ ಖಜಾನೆಯಲ್ಲಿ ಚಿತಾಭಸ್ಮವನ್ನು ಇರಿಸಲಾಗಿತ್ತು.

    ಪ್ರತಿವರ್ಷ ಅವರ ಪುಣ್ಯಸ್ಮರಣೆ ದಿನದಂದು ಅವರ ಚಿತಾಭಸ್ಮವನ್ನು ಸರ್ಕಾರಿ ಗೌರವದೊಂದಿಗೆ ಮೆರವಣಿಗೆಯಲ್ಲಿ ತರಲಾಗುತ್ತಿದೆ. 1934 ಫೆಬ್ರವರಿ 21ರಂದು ಗಾಂಧೀಜಿ ಅವರು ಕೊಡಗಿಗೆ ಭೇಟಿ ನೀಡಿ, ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕುವಂತೆ ಜನರನ್ನು ಉದ್ದೇಶಿಸಿ ಮಾತನಾಡಿದ್ದ ಸ್ಥಳದಲ್ಲಿ ಚಿತಾಭಸ್ಮವನ್ನು ಇರಿಸಲಾಗಿತ್ತು. ಬಳಿಕ ಸರ್ವಧರ್ಮ ಪ್ರಾರ್ಥನೆ ಸಲ್ಲಿಸಿ ಚಿತಾಭಸ್ಮವನ್ನು ಮತ್ತೆ ಖಜಾನೆಯಲ್ಲೇ ಇರಿಸಲಾಗುತಿತ್ತು. ಆದರೆ ಅವರ ಚಿತಾಭಸ್ಮಕ್ಕೆ ದೆಹಲಿಯಲ್ಲಿರುವ ರಾಜ್‍ಘಾಟ್‍ನಂತೆ ಮಡಿಕೇರಿಯಲ್ಲೂ ಗಾಂಧಿ ಭವನ ನಿರ್ಮಿಸಬೇಕೆಂದು ಸರ್ವೋದಯ ಸಮಿತಿ ಸೇರಿದಂತೆ ನೂರಾರು ಜನರು ಹೋರಾಟ ನಡೆಸುತ್ತಿದ್ದರು.

    ಕಳೆದ ಬಜೆಟ್‌ನಲ್ಲಿ ಈಗಿರುವ ಗಾಂಧಿ ಮೈದಾನದಲ್ಲಿ ಗಾಂಧಿ ಭವನ ನಿರ್ಮಾಣಕ್ಕೆ ಸರ್ಕಾರ 50 ಲಕ್ಷ ರೂ. ಘೋಷಿಸಿತ್ತು. ವಿಪರ್ಯಾಸವೆಂದರೆ ಜಾಗದ ದಾಖಲೆಗಳ ಸಮಸ್ಯೆಯಿಂದಾಗಿ ಆ ಕನಸು ಈಡೇರಿರಲೇ ಇಲ್ಲ. ಹಲವು ಜಿಲ್ಲಾಧಿಕಾರಿಗಳು ಬಂದು ಹೋದರೂ ಯಾರೂ ಅದನ್ನು ಸಾಕಾರಗೊಳಿಸಲೇ ಇಲ್ಲ. ಇದೀಗ ಜಿಲ್ಲೆಗೆ ಬಂದಿರುವ ಜಿಲ್ಲಾಧಿಕಾರಿ ಡಾ. ಬಿ.ಸಿ.ಸತೀಶ್ ಅವರು 32 ಸೆಂಟ್ ಜಾಗವನ್ನು ಗಾಂಧಿ ಭವನಕ್ಕಾಗಿ ಮಂಜೂರು ಮಾಡಿದ್ದಾರೆ. ಇದು ಗಾಂಧಿ ಸ್ಮಾರಕಕ್ಕಾಗಿ ಹಲವು ವರ್ಷಗಳಿಂದ ಹೋರಾಡುತ್ತಿದ್ದ ಸರ್ವೋದಯ ಸಮಿತಿ ಮತ್ತಿತರರಿಗೆ ಖುಷಿ ತಂದಿದೆ.

    ಅದಕ್ಕಿಂತ ಮುಖ್ಯವಾಗಿ ಗಾಂಧೀಜಿ ಅವರ ಆತ್ಮಕ್ಕೆ ಕೊನೆಗೂ ಮುಕ್ತಿ ಸಿಗುವ ಕಾಲ ಕೂಡಿ ಬಂದಿದೆ. ರಾಜ್ ಘಾಟಿನಲ್ಲಿ ಇರುವಂತೆ ಅದ್ಭುತವಾದ ಸ್ಮಾರಕ ನಿರ್ಮಿಸಬೇಕು. ಆ ಮೂಲಕ ಕೊಡಗಿಗೆ ಬರುವ ಸಾವಿರಾರು ಜನರು ಬಾಪೂ ಅವರ ಚಿತಾಭಸ್ಮದ ದರ್ಶನ ಪಡೆದು ಅವರ ಆದರ್ಶಗಳನ್ನು ಪಾಲಿಸುವಂತೆ ಮಾಡಬೇಕಾಗಿದೆ ಎನ್ನುವುದು ಹಿರಿಯ ರಾಜಕೀಯ ಮುತ್ಸದಿ ಎಂ. ಸಿ ನಾಣಯ್ಯ ಅವರ ಅಭಿಪ್ರಾಯವಾಗಿದೆ. ಝೊಮ್ಯಾಟೊ ಡೆಲಿವರಿ ಬಾಯ್ ಆದ ಶಿಕ್ಷಕ- ಕಥೆಯೇ ರೋಚಕ!

    ಈಗಾಗಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಭವನದ ನೀಲನಕ್ಷೆ ಸೇರಿದಂತೆ ಯೋಜನೆಯ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಸದ್ಯ ಕಳೆದ ಬಜೆಟ್‌ನಲ್ಲೇ ಘೋಷಣೆ ಆಗಿದ್ದ ಹಣ ವಾಪಸ್ ಆಗಿದ್ದು, ಆ ಹಣದ ಬಿಡುಗಡೆಗೆ ಒತ್ತಾಯಿಸುತ್ತೇವೆ ಎಂದು ಸರ್ವೋದಯ ಸಮಿತಿ ಮುಖಂಡ ಟಿ.ಪಿ. ರಮೇಶ್ ಹೇಳಿದ್ದಾರೆ. ಸಪ್ತಪದಿ ಯೋಜನೆಗೆ ಮರುಚಾಲನೆ ನೀಡಿದ ಶಶಿಕಲಾ ಜೊಲ್ಲೆ

    ಒಟ್ಟಿನಲ್ಲಿ ಇಷ್ಟು ದಿನಗಳ ಕಾಲ ಜಿಲ್ಲಾಡಳಿತದ ಖಜಾನೆಯಲ್ಲಿ ಇಟ್ಟು ವರ್ಷದ ಎರಡು ದಿನಗಳು ಮಾತ್ರ ಗಾಂಧೀಜಿ ಅವರ ಚಿತಾಭಸ್ಮಕ್ಕೆ ಗೌರವ ಕೊಡುತ್ತಿತ್ತು. ಇದೀಗ ಗಾಂಧೀಜಿ ಚಿತಾಭಸ್ಮಕ್ಕೆ ಶಾಶ್ವತ ಸ್ಮಾರಕ ಮಾಡಲು ಮುಂದಾಗಿರುವುದು ನಿಜಕ್ಕೂ ಗಾಂಧೀಜಿ ಅವರ ಆತ್ಮಕ್ಕೆ ಶಾಂತಿ ದೊರಕಿಸುವ ಕಾಲ ಕೂಡಿ ಬಂದಿದೆ.

  • ಪೋಷಕರ ಚಿತಾಭಸ್ಮ ಸ್ವೀಕರಿಸಿದ ಬಿಪಿನ್ ರಾವತ್ ಪುತ್ರಿಯರು – ಹರಿದ್ವಾರದಲ್ಲಿ ಅಸ್ಥಿ ವಿಸರ್ಜನೆ

    ಪೋಷಕರ ಚಿತಾಭಸ್ಮ ಸ್ವೀಕರಿಸಿದ ಬಿಪಿನ್ ರಾವತ್ ಪುತ್ರಿಯರು – ಹರಿದ್ವಾರದಲ್ಲಿ ಅಸ್ಥಿ ವಿಸರ್ಜನೆ

    ನವದೆಹಲಿ: ಭಾರತದ ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್ ಅವರ ಪುತ್ರಿಯರಾದ ಕೃತಿಕಾ ಮತ್ತು ತಾರಿಣಿ ಅವರು ಇಂದು ಬೆಳಿಗ್ಗೆ ದೆಹಲಿ ಕಂಟೋನ್ಮೆಂಟ್‍ನ ಬ್ರಾರ್ ಸ್ಕ್ವೇರ್ ಸ್ಮಶಾನದಲ್ಲಿ ತಮ್ಮ ಪೋಷಕರ ಚಿತಾಭಸ್ಮವನ್ನು ಸ್ವೀಕರಿಸಿದರು.

    ಬಿಪಿನ್ ರಾವತ್ ಮತ್ತು ಮಧುಲಿಕಾ ರಾವತ್ ಅವರ ಅಂತ್ಯಕ್ರಿಯೆಯನ್ನು ಬ್ರಾರ್ ಸ್ಕ್ವೇರ್ ಸ್ಮಶಾನದಲ್ಲಿ ನಡೆಸಲಾಗಿತ್ತು. ಇದೀಗ ಅವರ ಚಿತಾಭಸ್ಮವನ್ನು ಉತ್ತರಾಖಂಡದ ಹರಿದ್ವಾರದಲ್ಲಿರುವ ಗಂಗಾ ನದಿಯಲ್ಲಿ ವಿಸರ್ಜಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.  ಇದನ್ನೂ ಓದಿ: ವೀರ ಸೇನಾನಿಗಳಿಗೆ ಗಣ್ಯರ ನಮನ – ಪ್ರಧಾನಿ, ರಕ್ಷಣಾ ಸಚಿವ, ತ್ರಿದಳ ಮುಖ್ಯಸ್ಥರಿಂದ ಗೌರವಾರ್ಪಣೆ

    bipin rawat

    ಶುಕ್ರವಾರ ಅಂತ್ಯಕ್ರಿಯೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಬಿಪಿನ್ ರಾವತ್ ಅವರ ಸೋದರ ಮಾವ ಯಶ್ ವರ್ಧನ್ ಸಿಂಗ್ ಅವರು, ನಾವು ಮುಂಜಾನೆ ಕಲಶದಲ್ಲಿ ಚಿತಾಭಸ್ಮವನ್ನು ತೆಗೆದುಕೊಂಡು ಹರಿದ್ವಾರಕ್ಕೆ ಹೋಗಿ ಪವಿತ್ರ ಗಂಗೆಯಲ್ಲಿ ಬಿಡುತ್ತೇವೆ ಮತ್ತು ಕೆಲವು ಧಾರ್ಮಿಕ ಕ್ರಿಯೆಗಳನ್ನು ನಡೆಸುವುದಾಗಿ ಹೇಳಿದ್ದಾರೆ.

    ರಾವತ್ ಅವರ ಪುತ್ರಿಯರು ಇಂದು ಚಿತಾಭಸ್ಮ ಸ್ವೀಕರಿಸುವ ವೇಳೆ ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ಮತ್ತು ರಾಜ್ಯದ ಹಲವಾರು ಹಿರಿಯ ಗಣ್ಯರು ಉಪಸ್ಥಿತರಿದ್ದರು. ಇದನ್ನೂ ಓದಿ: ಸಕಲ ಸೇನಾ ಗೌರವಗಳೊಂದಿಗೆ ಸಿಡಿಎಸ್ ಬಿಪಿನ್ ರಾವತ್ ದಂಪತಿ ಅಂತ್ಯಕ್ರಿಯೆ

    ಡಿಸೆಂಬರ್ 8 ರಂದು ತಮಿಳುನಾಡಿನ ಕೂನೂರಿನಲ್ಲಿ ಹೆಲಿಕಾಪ್ಟರ್ ದುರಂತದಲ್ಲಿ ಬಿಪಿನ್ ರಾವತ್ ಸೇರಿ 13 ಮಂದಿ ದುರ್ಮರಣಕ್ಕೀಡಾದರು. ಜನರಲ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್ ಅವರನ್ನು ಶುಕ್ರವಾರ ದೆಹಲಿ ಕಂಟೋನ್ಮೆಂಟ್‍ನ ಬ್ರಾರ್ ಸ್ಕ್ವೇರ್ ಸ್ಮಶಾನದಲ್ಲಿ ಸಕಲ ಸೇನಾ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು.