Tag: Aryavardhan

  • Breaking-‘ಬಿಗ್ ಬಾಸ್’ ಮನೆಗೆ ಜೊತೆ ಜೊತೆಯಲಿ ಆರ್ಯವರ್ಧನ್ ಅಲಿಯಾಸ್ ನಟ ಅನಿರುದ್ಧ ಹೋಗೋದು ಪಕ್ಕಾ

    Breaking-‘ಬಿಗ್ ಬಾಸ್’ ಮನೆಗೆ ಜೊತೆ ಜೊತೆಯಲಿ ಆರ್ಯವರ್ಧನ್ ಅಲಿಯಾಸ್ ನಟ ಅನಿರುದ್ಧ ಹೋಗೋದು ಪಕ್ಕಾ

    ಬಿಗ್ ಬಾಸ್ ಕನ್ನಡ ಓಟಿಟಿ ಫಿನಾಲೆ ಹಂತ ತಲುಪಿದೆ. ಇದೇ ವಾರ ಕೊನೆಯ ಆಟ ಆಗಿರುವುದರಿಂದ ಬಿಗ್ ಬಾಸ್ ಸೀಸನ್ 9ರ ಬಗ್ಗೆ ಕುತೂಹಲ ಹೆಚ್ಚಾಗಿದೆ. ಈಗಾಗಲೇ ವಾಹಿನಿಯು ಸೀಸನ್ 9ರ ಪ್ರೊಮೊಗಳನ್ನು ಹಾಕಲು ಶುರು ಮಾಡಿದ್ದು, ಈ ಬಾರಿ ಬಿಗ್ ಬಾಸ್ ಮನೆಗೆ ಯಾರೆಲ್ಲ ಹೋಗಲಿದ್ದಾರೆ ಎನ್ನುವ ಚರ್ಚೆ ಕೂಡ ನಡೆದಿದೆ. ಮೂಲಗಳ  ಪ್ರಕಾರ ಜೊತೆ ಜೊತೆಯಲಿ ಧಾರಾವಾಹಿಯಿಂದ ಹೊರ ಬಂದಿರುವ ಅನಿರುದ್ಧ (Aniruddha) ಅವರು ಬಿಗ್ ಬಾಸ್ ಮನೆಗೆ ಹೋಗಲಿದ್ದಾರಂತೆ.

    ಬಿಗ್ ಬಾಸ್ (Bigg Boss Kannada) ಮತ್ತೆ ಶುರುವಾಗಲಿದೆ ಎಂದು ಸುದ್ದಿ ಹರಡಿದಾಗಲೇ ‘ಜೊತೆ ಜೊತೆಯಲಿ’ ಸೀರಿಯಲ್ ಸೆಟ್ ನಲ್ಲಿ ಈ ಬಾರಿ ಅನಿರುದ್ಧ ಬಿಗ್ ಬಾಸ್ ಮನೆಗೆ ಹೋಗುತ್ತಾರಂತೆ. ಅದಕ್ಕಾಗಿ ಅವರು ಧಾರಾವಾಹಿ ಬಿಡಲಿದ್ದಾರೆ ಅಥವಾ ಬೇಗ ಧಾರಾವಾಹಿಯನ್ನು ಮುಗಿಸಲು ತಿಳಿಸಿದ್ದಾರೆ ಅಂತೆಲ್ಲ ಮಾತುಗಳು ಕೇಳಿ ಬಂದಿದ್ದು ನಿಜ. ವಾಹಿನಿಯೂ ಕೂಡ ಅನಿರುದ್ಧ ಅವರನ್ನು ಆಹ್ವಾನಿಸಿದ್ದು ಸುಳ್ಳಲ್ಲ. ಹೀಗಾಗಿ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಅನಿರುದ್ಧ ಇರಲಿದ್ದಾರೆ ಎನ್ನುತ್ತವೆ ಬಲ್ಲ ಮೂಲಗಳು. ಇದನ್ನೂ ಓದಿ:ನಂದಿನಿ ಔಟ್ ಆದ್ಮೇಲೆ ಸಾನ್ಯ ಜೊತೆ ಜಶ್ವಂತ್ ಲವ್ವಿ-ಡವ್ವಿ: ರೂಪೇಶ್‌ಗೆ ಟೆನ್ಷನ್ ಶುರು

    ಧಾರಾವಾಹಿ ಮತ್ತು ಯಾವುದೇ ರಿಯಾಲಿಟಿ ಶೋಗಳಲ್ಲಿ ಅನಿರುದ್ಧ ಅವರನ್ನು ಬಳಸಿಕೊಳ್ಳಬೇಡಿ ಎಂದು ಕರ್ನಾಟಕ ಟೆಲಿವಿಷನ್ ಅಸೋಷಿಯೇಷನ್ ಅಂಗ ಸಂಸ್ಥೆಯಾದ ಟೆಲಿವಿಷನ್ ನಿರ್ದೇಶಕರ ಸಂಘ ಈಗಾಗಲೇ ಕನ್ನಡದ ಅಷ್ಟೂ ಮನರಂಜನಾ ವಾಹಿನಿಗಳಿಗೆ ಮನವಿ ಮಾಡಿವೆ. ಜೊತೆ ಜೊತೆಯಲಿ ಟೀಮ್ ಜೊತೆ ಕಿರಿಕ್ ಮಾಡಿಕೊಂಡ ಸಂದರ್ಭದಲ್ಲಿಇಂಥದ್ದೊಂದು ನಿರ್ಧಾರವನ್ನು ನಿರ್ಮಾಪಕರು ತಗೆದುಕೊಂಡಿದ್ದಾರೆ. ಆದರೆ, ವಾಹಿನಿಗಳು ಎಷ್ಟರ ಮಟ್ಟಿಗೆ ಇದನ್ನು ಪಾಲಿಸುತ್ತವೆ ಎನ್ನುವುದೇ ಈಗಿರುವ ಪ್ರಶ್ನೆ.

    ಬಿಗ್ ಬಾಸ್ ಸೀಸನ್ 9ಕ್ಕೆ (Bigg Boss Season 9) ಹೋಗಲು ಅನಿರುದ್ಧ ಅವರು ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ, ಈ ಕುರಿತು ವಾಹಿನಿಯಾಗಲಿ ಅಥವಾ ಅನಿರುದ್ಧ ಆಗಲಿ ಖಚಿತ ಪಡಿಸಿಲ್ಲ. ಆದರೂ, ಕೂಡ ಇಂಥದ್ದೊಂದು ಸುದ್ದಿಯು ಕಿರುತೆರೆ ವಲಯದಲ್ಲಿ ಹರಿದಾಡುತ್ತಿದೆ. ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಆರ್ಯವರ್ಧನ್ (Aryavardhan) ಪಾತ್ರಕ್ಕೆ ಬೇರೆ ಶೇಪು ಕೊಟ್ಟಿರುವುದರಿಂದ ಅನಿರುದ್ಧ ಅವರು ಮತ್ತೆ ಆ ಧಾರಾವಾಹಿಯಲ್ಲಿ ನಟಿಸುವ ಆಸೆಯನ್ನು ಕೈ ಬಿಟ್ಟಿದ್ದಾರೆ. ಬಂದಿರುವ ಬಿಗ್ ಬಾಸ್ ಅವಕಾಶವನ್ನು ಒಪ್ಪಿಕೊಂಡಿದ್ದಾರಂತೆ.

    Live Tv
    [brid partner=56869869 player=32851 video=960834 autoplay=true]

  • ಏನ್ ಐಡ್ಯಾ ಗುರೂ: ಆರ್ಯವರ್ಧನ್ ಪಾತ್ರಕ್ಕೆ ಹರೀಶ್ ರಾಜ್ ಫಿಕ್ಸ್: ಫೇಸ್ ಟ್ರಾನ್ಸ್ ಪ್ಲಾಂಟ್ ಬಳಸಿ ಅನಿರುದ್ಧಗೆ ಗೇಟ್ ಪಾಸ್

    ಏನ್ ಐಡ್ಯಾ ಗುರೂ: ಆರ್ಯವರ್ಧನ್ ಪಾತ್ರಕ್ಕೆ ಹರೀಶ್ ರಾಜ್ ಫಿಕ್ಸ್: ಫೇಸ್ ಟ್ರಾನ್ಸ್ ಪ್ಲಾಂಟ್ ಬಳಸಿ ಅನಿರುದ್ಧಗೆ ಗೇಟ್ ಪಾಸ್

    ಜೊತೆ ಜೊತೆಯಲಿ (jothe jotheyali) ಧಾರಾವಾಹಿಯಲ್ಲಿ ಊಹಿಸದೇ ಇರುವಂತಹ ಮಹಾ ತಿರುವು ನೀಡುವ ಮೂಲಕ ಪ್ರೇಕ್ಷಕರಲ್ಲಿ ಅಚ್ಚರಿ ಮೂಡಿಸಿದ್ದಾರೆ ಸೀರಿಯಲ್ ತಂಡ. ಧಾರಾವಾಹಿಯಿಂದ ಅನಿರುದ್ಧಗೆ (Aniruddha) ಗೇಟ್ ಪಾಸ್ ಕೊಟ್ಟ ಬಳಿಕ ಆರ್ಯವರ್ಧನ್ (Aryavardhan) ಪಾತ್ರವನ್ನು ಏನು ಮಾಡುತ್ತಾರೆ ಎಂಬ ಕುತೂಹಲ ಸಹಜವಾಗಿ ನೋಡುಗರಿಗೆ ಇತ್ತು. ಕಲಾವಿದರು ಬದಲಾಗುತ್ತಾರಾ? ಅಥವಾ ಪಾತ್ರವನ್ನೇ ಇಲ್ಲವಾಗಿಸುತ್ತಾರೆ ಎಂಬ ಚರ್ಚೆ ಶುರುವಾಗಿತ್ತು. ಎಲ್ಲ ಚರ್ಚೆಯನ್ನೂ ಮೀರಿ ಹೊಸ ಕಲ್ಪನೆಯೊಂದಿಗೆ ಆರ್ಯವರ್ಧನ್ ಪಾತ್ರವನ್ನು ಉಳಿಸಿಕೊಂಡಿದ್ದಾರೆ ನಿರ್ದೇಶಕರು

    ಆರ್ಯವರ್ಧನ್ ಪಾತ್ರಕ್ಕೆ ಹರೀಶ್ ರಾಜ್ (Harish Raj) ಆಯ್ಕೆಯಾಗಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಆರ್ಯವರ್ಧನ್ ಅವರ ಸಹೋದರ ಸುಭಾಷ್ ದೇಸಾಯಿ ಪಾತ್ರವನ್ನು ಹರೀಶ್ ರಾಜ್ ನಿರ್ವಹಿಸುತ್ತಿದ್ದಾರೆ. ಹರೀಶ್ ರಾಜ್ ಪಾತ್ರ ಬಂದು ಇನ್ನೂ ಒಂದು ವಾರವಾಗಿಲ್ಲ. ಆಗಲೇ ಆ ಪಾತ್ರಕ್ಕೆ ಆಕ್ಸಿಡೆಂಟ್ ಮಾಡಿ, ಸಾಯಿಸೇ ಬಿಟ್ಟಿದ್ದಾರೆ. ಅರರೇ.. ಇಷ್ಟು ಬೇಗ ಪಾತ್ರ ಸತ್ತು ಹೋಯಿತಾ ಎನ್ನುವಷ್ಟರಲ್ಲೇ ಅಲ್ಲೊಂದು ಟ್ವಿಸ್ಟ್ ಕೊಟ್ಟಿದೆ ಧಾರಾವಾಹಿ ತಂಡ. ಆಕ್ಸಿಡೆಂಟ್ ಎನ್ನುವ ಘಟನೆಯೊಂದನ್ನು ಸೃಷ್ಟಿ ಮಾಡಿ, ಆರ್ಯವರ್ಧನ್ ಮತ್ತು ಸುಭಾಷ್ ದೇಸಾಯಿ (Subhash Desai) ಪಾತ್ರವನ್ನು ಜೀವಂತವಾಗಿಡುವ ತಂತ್ರವನ್ನು ಬಳಸಿಕೊಳ್ಳಲಾಗುತ್ತಿದೆ.  ಇದನ್ನೂ ಓದಿ:‘ಈ ಶನಿವಾರ ನಿನ್ನ ಮನೆಗೆ ಕಳಿಸ್ತಾರೆ’ ಎಂದು ಗುರೂಜಿಗೆ ಭವಿಷ್ಯ ನುಡಿದ ಸೋನು ಶ್ರೀನಿವಾಸ್ ಗೌಡ

    ಒಂದು ಕಡೆ ಆರ್ಯವರ್ಧನ್ ಗೆ ಕಾರು ಅಪಘಾತವಾಗಿ ಆಸ್ಪತ್ರೆಗೆ ಸೇರಿದ್ದಾನೆ. ಮತ್ತೊಂದು ಕಡೆ ಆತ್ಮಹತ್ಯೆಗೆ ಯತ್ನಿಸಿದ್ದ ಸುಭಾಷ್ ದೇಸಾಯಿಯನ್ನೂ ಅದೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರ್ಯವರ್ಧನ್ ಮುಖ ನುಜ್ಜುಗುಜ್ಜಾಗಿರುವುದರಿಂದ ಪ್ಲಾಸ್ಟಿಕ್ ಸರ್ಜರಿಗೆ ವೈದ್ಯರು ಸಜೆಸ್ಟ್ ಮಾಡಿದ್ದಾರೆ. ಈ ಕಡೆ ಸುಭಾಷ್ ದೇಸಾಯಿ ಸತ್ತಿರುವ ಕುರಿತು ಮಾತುಕತೆ ಆಗಿದೆ. ಇಬ್ಬರ ಮಕ್ಕಳನ್ನು ಈ ಸ್ಥಿತಿಯಲ್ಲಿ ಕಂಡು ಅಳುತ್ತಿರುವ ತಾಯಿಗೆ ವೈದ್ಯರೊಂದು ಸಲಹೆ ನೀಡುತ್ತಾರೆ. ಅದುವೇ ಫೇಸ್ ಟ್ರಾನ್ಸ್‍ ಪ್ಲಾಂಟ್ (Face TransPlant).

     

    ವೈದ್ಯಕೀಯ ಲೋಕದ ಹೊಸ ಆವಿಷ್ಕಾರ ಫೇಸ್ ಟ್ರಾನ್ಸ್‍ಪ್ಲಾಂಟ್. ಒಬ್ಬರ ಮುಖಕ್ಕೆ ಇನ್ನೊಬ್ಬರ ಮುಖ ಜೋಡಿಸುವುದು. ಹಾಗಾಗಿ ಹರೀಶ್ ರಾಜ್ ಮುಖವನ್ನು ಅನಿರುದ್ಧ ಮುಖಕ್ಕೆ ಅಂಟಿಸಿ, ಹೊಸ ಆರ್ಯವರ್ಧನ್ ಪಾತ್ರವನ್ನು ಸೃಷ್ಟಿ ಮಾಡಲಾಗುತ್ತಿದೆ. ಹಾಗಾಗಿ ಅನಿರುದ್ಧಗೆ ಗೇಟ್ ಪಾಸ್ ಕೊಟ್ಟು ಆರ್ಯವರ್ಧನ್ ಪಾತ್ರಕ್ಕೆ ಹರೀಶ್ ರಾಜ್ ಅವರನ್ನು ಫಿಕ್ಸ್ ಮಾಡುವ ತಂತ್ರವನ್ನು ಹೆಣೆಯಲಾಗಿದೆ. ಇದು ಯಾರೂ ಊಹಿಸದೇ ಇರುವಂತಹ ತಂತ್ರ. ಮೊದಲ ಬಾರಿಗೆ ಕಿರುತೆರೆಯಲ್ಲಿ ಅದನ್ನು ಬಳಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ‘ಈ ಶನಿವಾರ ನಿನ್ನ ಮನೆಗೆ ಕಳಿಸ್ತಾರೆ’ ಎಂದು ಗುರೂಜಿಗೆ ಭವಿಷ್ಯ ನುಡಿದ ಸೋನು ಶ್ರೀನಿವಾಸ್ ಗೌಡ

    ‘ಈ ಶನಿವಾರ ನಿನ್ನ ಮನೆಗೆ ಕಳಿಸ್ತಾರೆ’ ಎಂದು ಗುರೂಜಿಗೆ ಭವಿಷ್ಯ ನುಡಿದ ಸೋನು ಶ್ರೀನಿವಾಸ್ ಗೌಡ

    ರಿಗೆ ಭವಿಷ್ಯ ಹೇಳುವ ಆರ್ಯವರ್ಧನ್ ಗುರೂಜಿಗೆ ಈ ಬಾರಿ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಭವಿಷ್ಯ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಆ ಭವಿಷ್ಯ ನಿಜವಾಗತ್ತೋ ಬಿಡತ್ತೋ. ಆದರೆ, ನಿಜವಾದರೆ ಸೋನು ಗೌಡನ ಬಾಯಿಗೆ ನೂರು ತೆಂಗಿನಕಾಯಿ ಒಡೆಯುವುದಾಗಿ ಗುರೂಜಿ ಹೇಳಿದ್ದಾರೆ. ಅಲ್ಲಿಗೆ ಈ ಶನಿವಾರ ಬಿಗ್ ಬಾಸ್ ಮನೆಯಿಂದ ಗುರೂಜಿ ಹೊರ ಬೀಳುತ್ತಾರಾ? ಅಥವಾ ಫಿನಾಲೆ ವಾರಕ್ಕೆ ಜಂಪ್ ಆಗ್ತಾರೆ ಎನ್ನುವುದು ಸದ್ಯದ ಕುತೂಹಲ.

    ಆರ್ಯವರ್ಧನ್ (Aryavardhan) ಗುರೂಜಿದು ದಢೂತಿ ದೇಹವಿದ್ದರೂ ಸದಾ ಚಟುವಟಿಕೆಯಿಂದಲೇ ಇರುತ್ತಾರೆ. ಅಡುಗೆ ಮನೆಗೂ ಸೈ, ಆಟಕ್ಕೂ ಜೈ ಎನ್ನುವ ಅವರಿಗೆ ಮತ್ತೆ ಮತ್ತೆ ಮನೆ ನೆನಪಾಗುತ್ತಿದೆ. ‘ಮನೆಯಲ್ಲಿ ತಿಂದುಂಡು ಆರಾಮಾಗಿದ್ದವನನ್ನು ಯಾಕಪ್ಪ ಕರ್ಕೊಂಡ್ ಬಂದು ಹಿಂಸೆ ಕೊಡ್ತಿದ್ದೀರಿ’ ಎಂದು ನೇರವಾಗಿಯೇ ತಮಾಷೆಯ ನುಡಿಗಳಲ್ಲಿ ಆರ್ಯವರ್ಧನ್ ಬಿಗ್ ಬಾಸ್ ಮನೆಯಲ್ಲಿ ಮಾತನಾಡಿದ್ದಾರೆ. ನನಗೆ ಇಲ್ಲಿ ಇರೋಕೆ ಆಗ್ತಿಲ್ಲ ಎಂದೂ ಹೇಳಿಕೊಂಡಿದ್ದಾರೆ. ಇಷ್ಟೂ ವಿಷಯಗಳು ತಮಾಷೆ ಅನಿಸಿದರೂ, ಒಂದಷ್ಟು ವಿಷಯದಲ್ಲಿ ಅವರಿಗೆ ಬೇಸರವಾಗಿದೆ. ಇದನ್ನೂ ಓದಿ:ಪಾಕಿಸ್ತಾನಿ ಬೌಲರ್ ನಸೀಮ್ ಶಾಗೆ ಬೋಲ್ಡ್ ಆದ `ಐರಾವತ’ ನಟಿ

    ಪದೇ ಪದೇ ‘ಯಾಕಪ್ಪ ನನ್ನ ಇಲ್ಲಿಗೆ ಕರ್ಕೊಂಡು ಬಂದ್ರಿ’ ಎಂದು ಗುರೂಜಿ (Guruji) ಆಡಿದಾಗ, ತಕ್ಷಣವೇ ಮಾತು ಪೋಣಿಸಿದ ಸೋನು ಶ್ರೀನಿವಾಸ್ ಗೌಡ ‘ಅಷ್ಟೊಂದು ನೊಂದ್ಕೊಬೇಡಿ. ಈ ಶನಿವಾರ ನಿಮ್ಮನ್ನ ಮನೆಗೆ ಕಳಿಸ್ತಾರೆ ಬಿಡಿ’ ಎನ್ನುತ್ತಾರೆ. ‘ಅಯ್ಯೋ.. ಹಾಗ್ ಏನಾದರೂ ಮಾಡಿದರೆ, ನಿನ್ನ ಬಾಯಿಗೆ ನೂರು ತೆಂಗಿನ ಕಾಯಿ ಒಡೆಯುತ್ತೇನೆ’ ಎಂದು ಸೋನುಗೆ ಹೇಳುತ್ತಾರೆ ಗುರೂಜಿ. ಸೋನು ಭವಿಷ್ಯ ನುಡಿದಂತೆ ಆಗತ್ತಾ? ಅಥವಾ ಗುರೂಜಿ ಸೇಫ್ ಆಗಿ ಮನೆಯಲ್ಲೇ ಉಳಿಯುತ್ತಾರಾ ಎನ್ನುವುದು ಸದ್ಯಕ್ಕಿರುವ ಕುತೂಹಲ.

    ಸೋನು ಶ್ರೀನಿವಾಸ್ ಗೌಡ ಮತ್ತು ಗುರೂಜಿ ಇತ್ತೀಚಿನ ದಿನಗಳಲ್ಲಿ ತುಂಬಾ ಆತ್ಮೀಯರಾಗುತ್ತಿದ್ದಾರೆ. ಗುರೂಜಿ ಅಡುಗೆ ಮನೆಯಲ್ಲಿದ್ದರೆ, ಅವರ ಸಹಾಯಕ್ಕೆ ಸೋನು ಬರುತ್ತಾರೆ. ವಾಕಿಂಗ್ ಮಾಡುತ್ತಿದ್ದರೆ ಜೊತೆಯಾಗಿಯೇ ಹೆಜ್ಜೆ ಹಾಕುತ್ತಾರೆ. ಗುರೂಜಿ ಮಾತಿಗೆ ಸಖತ್ ಕೌಂಟರ್ ಕೊಡುತ್ತಾ ಮನರಂಜಿಸುತ್ತಿದ್ದಾರೆ. ಈ ವಾರದಲ್ಲಿ (Big Boss) ಮನೆಯಿಂದ ಸೋನು ಆಚೆ ಬರುತ್ತಾರಾ ಅಥವಾ ಗುರೂಜಿಗೆ ಏನಾದರೂ ಕೆಟ್ಟ ಭವಿಷ್ಯ ಕಾದಿದೆಯಾ ನೋಡಬೇಕು.

    Live Tv
    [brid partner=56869869 player=32851 video=960834 autoplay=true]

  • ‘ಜೊತೆ ಜೊತೆಯಲಿ’ ಆರ್ಯವರ್ಧನ್ ಪಾತ್ರಕ್ಕೆ ಪ್ಲಾಸ್ಟಿಕ್ ಸರ್ಜರಿ ಫಿಕ್ಸ್: ಎರಡೆರಡು ಆಘಾತ

    ‘ಜೊತೆ ಜೊತೆಯಲಿ’ ಆರ್ಯವರ್ಧನ್ ಪಾತ್ರಕ್ಕೆ ಪ್ಲಾಸ್ಟಿಕ್ ಸರ್ಜರಿ ಫಿಕ್ಸ್: ಎರಡೆರಡು ಆಘಾತ

    ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಜೊತೆ ಜೊತೆಯಲಿ (Jothe Jotheyaali) ಧಾರಾವಾಹಿಯ ಕಥೆಯಲ್ಲಿ ಭಾರೀ ಬದಲಾವಣೆ ಆಗಲಿದೆ. ಅನಿರುದ್ಧ (Aniruddha) ನಿರ್ವಹಿಸುತ್ತಿದ್ದ ಆರ್ಯವರ್ಧನ್ (Aryavardhan) ಪಾತ್ರವನ್ನು ಮುಗಿಸಲೆಂದೋ ಅಥವಾ ಹೊಸ ಕಲಾವಿದನ ಎಂಟ್ರಿಗೋ ಕಥೆಯಲ್ಲೊಂದು ಜಾಗ ಕಲ್ಪಿಸಿದ್ದಾರೆ. ಹಾಗಾಗಿ ಆರ್ಯವರ್ಧನ್ ಪಾತ್ರ ಇರತ್ತಾ? ಅಥವಾ ಹೊಸ ಕಲಾವಿದನ ಆಗಮನವಾಗತ್ತಾ ಎನ್ನುವ ಕುತೂಹಲ ಮೂಡಿದೆ.

    ಆರ್ಯವರ್ಧನ್ ಪಾತ್ರಕ್ಕೆ ನಟ ಹರೀಶ್ ರಾಜ್ (Harish Raj) ಆಯ್ಕೆಯಾಗಿದ್ದಾರೆ ಎನ್ನುವ ಸುದ್ದಿಯಿತ್ತು. ಆದರೆ, ಹರೀಶ್ ರಾಜ್ ಮಾಡುತ್ತಿರುವುದು ಆರ್ಯವರ್ಧನ್ ಸಹೋದರನ ಪಾತ್ರ. ವಿಶ್ವಾಸ್ ದೇಸಾಯಿ ಹೆಸರಿನ ಪಾತ್ರವನ್ನು ಹರೀಶ್ ರಾಜ್ ನಿರ್ವಹಿಸುತ್ತಿದ್ದಾರೆ. ಈಗ ಎರಡೂ ಪಾತ್ರಗಳು ಆಸ್ಪತ್ರೆ ಪಾಲಾಗಿವೆ. ಕೋಟಿ ಕೋಟಿ ನಷ್ಟ ಮಾಡಿಕೊಂಡಿರುವ ವಿಶ್ವಾಸ್ ದೇಸಾಯಿ ಕೆರೆಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅವನನ್ನು ರಕ್ಷಿಸಿ ಸದ್ಯ ಆಸ್ಪತ್ರೆಗೆ ಸೇರಿಸಿದ್ದಾರೆ. ಈ ಕಡೆ ಆರ್ಯವರ್ಧನ್ ಕಾರು ಅಪಘಾತವಾಗಿ (Accident) ಅವನು ಅದೇ ಆಸ್ಪತ್ರೆ ಸೇರಿದ್ದಾನೆ. ಇದನ್ನೂ ಓದಿ:ನಿನ್ನ ತಲೆಯ ಮೇಲೆ ತೆಂಗಿನಕಾಯಿ ಒಡೆದು ಬಿಗ್ ಬಾಸ್ ಮನೆಯಿಂದ ಹೋಗ್ತೀನಿ: ಸೋನುಗೆ ಗುರೂಜಿ ವಾರ್ನಿಂಗ್

    ವಿಶ್ವಾಸ್ ದೇಸಾಯಿ ಮತ್ತು ಆರ್ಯವರ್ಧನ್ ಒಂದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರ್ಯವರ್ಧನ್ ಮುಖಕ್ಕೆ ತೀವ್ರವಾದ ಪೆಟ್ಟಾಗಿರುವುದರಿಂದ ಪ್ಲಾಸ್ಟಿಕ್ ಸರ್ಜರಿ (Plastic Surgery) ಮಾಡುವುದು ಅನಿವಾರ್ಯ ಎಂದು ವೈದ್ಯರು ತಿಳಿಸಿದ್ದಾರೆ. ಅಲ್ಲಿಗೆ ಈ ಪಾತ್ರ ಏನಾಗುತ್ತದೆ ಎನ್ನುವ ಕುತೂಹಲ ನೋಡುಗರದ್ದು. ಪ್ಲಾಸ್ಟಿಕ್ ಸರ್ಜರಿ ಮಾಡಿದರೆ, ಮುಖ ಬದಲಾವಣೆಯೊಂದರೆ ಹೊಸ ಕಲಾವಿದರಿಗೆ ಅವಕಾಶ ಸಿಗತ್ತಾ? ಅಥವಾ ಸರ್ಜರಿಯಲ್ಲಿ ಯಡವಟ್ಟಾಗಿ ಇನ್ನೇನಾದರೂ ಕಥೆಯಲ್ಲಿ ಬದಲಾವಣೆ ಆಗತ್ತಾ ಎನ್ನುವುದು ಸದ್ಯಕ್ಕೆ ಸಸ್ಪೆನ್ಸ್.

    ಆರ್ಯವರ್ಧನ್ ಪಾತ್ರಕ್ಕೆ ಅಪಘಾತವಾದಾಗಲೇ ಕಥೆಯಲ್ಲಿ ಏನೋ ಒಂದು ಆಗುತ್ತದೆ ಎಂಬ ಅನುಮಾನ ಬಂದಿತ್ತು. ಪ್ಲಾಸ್ಟಿಕ್ ಸರ್ಜರಿಯೇ ಈ ಅಪಘಾತ ಮಾಡಿಸಲು ಕಾರಣ ಎನ್ನುವ ಅಂಶವೂ ಪ್ರಸ್ತಾಪವಾಗಿತ್ತು. ಕೊನೆಗೂ ಪ್ರೇಕ್ಷಕ ಊಹಿಸಿದಂತೆಯೇ ಆಗಿದೆ. ಅನಿರುದ್ಧ ಮಾಡುತ್ತಿದ್ದ ಪಾತ್ರಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡುವಂತಹ ಗಳಿಗೆ ಕೂಡಿ ಬಂದಿದೆ.

    Live Tv
    [brid partner=56869869 player=32851 video=960834 autoplay=true]

  • ‘ಜೊತೆ ಜೊತೆಯಲಿ’ ಸೀರಿಯಲ್ ಆರ್ಯವರ್ಧನ್ ಗೆ ಭೀಕರ ಕಾರು ಅಪಘಾತ: ಅನಿರುದ್ಧ ನಟಿಸುತ್ತಿದ್ದ ಪಾತ್ರ ಖತಂ?

    ‘ಜೊತೆ ಜೊತೆಯಲಿ’ ಸೀರಿಯಲ್ ಆರ್ಯವರ್ಧನ್ ಗೆ ಭೀಕರ ಕಾರು ಅಪಘಾತ: ಅನಿರುದ್ಧ ನಟಿಸುತ್ತಿದ್ದ ಪಾತ್ರ ಖತಂ?

    ಜೀ ಕನ್ನಡ ವಾಹಿನಿಯು ಜೊತೆ ಜೊತೆಯಲಿ ಧಾರಾವಾಹಿಯ ಪ್ರೊಮೋವೊಂದನ್ನು ರಿಲೀಸ್ ಮಾಡಿದ್ದು, ಧಾರಾವಾಹಿಯ ಕಥೆಗೆ ಮೇಜರ್ ತಿರುವು ನೀಡಲಾಗಿದೆ. ಈವರೆಗೂ ಆರ್ಯವರ್ಧನ್ ಪಾತ್ರವನ್ನು ಕಥೆಯಲ್ಲಿ ಇಟ್ಟುಕೊಳ್ಳಲಾಗುವುದು ಎಂದಿದ್ದ ನಿರ್ಮಾಪಕರು ಆ ಪಾತ್ರವನ್ನು ಸಾಯಿಸಲು ಪ್ಲ್ಯಾನ್ ಮಾಡಿದ್ದಾರೆ ಎನ್ನುವ ಅನುಮಾನ, ಆ ಪ್ರೋಮೋ ನೋಡಿದ ಮೇಲೆ ವ್ಯಕ್ತವಾಗಿದೆ. ಆರ್ಯವರ್ಧನ್ ಸ್ಪೀಡ್ ಆಗಿ ಕಾರು ಓಡಿಸಿಕೊಂಡು ಹೋಗುತ್ತಿದ್ದು, ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಪಲ್ಟಿ ಹೊಡೆಯುತ್ತಾ ಸಾಗಿದೆ.

    ಈಗಾಗಲೇ ಆರ್ಯವರ್ಧನ್ ಅವರ ಸಹೋದರನ ಪಾತ್ರಕ್ಕೆ ನಟ ಹರೀಶ್ ರಾಜ್ ಆಯ್ಕೆಯಾಗಿದ್ದಾರೆ. ಅವರ ನಟನೆಯ ದೃಶ್ಯಗಳು ಕೂಡ ಪ್ರಸಾರವಾಗುತ್ತಿವೆ. ಆರ್ಯವರ್ಧನ್ ನನ್ನು ಕೊಲ್ಲುವ ಮೂಲಕ, ಆತನ ಸಾಮ್ರಾಜ್ಯಕ್ಕೆ ಹರೀಶ್ ರಾಜ್ ಪಾತ್ರ ಅಧಿಪತಿ ಆಗತ್ತಾ ಎನ್ನುವ ಅನುಮಾನ ಕೂಡ ಮೂಡುತ್ತಿದೆ. ಅಥವಾ ಹರೀಶ್ ರಾಜ್ ಪಾತ್ರವೇ ಆರ್ಯವರ್ಧನ್ ನ ಸಾಯಿಸ್ತಾ ಎನ್ನುವ ಪ್ರಶ್ನೆ ಮೂಡುವಂತೆಯೂ ಪ್ರೊಮೋದಲ್ಲಿ ತೋರಿಸಲಾಗಿದೆ. ಇದನ್ನೂ ಓದಿ: ಜಶ್ವಂತ್‍ನಿಂದ ನಂದಿನಿ ಅಂತರ ಕಾಯ್ದುಕೊಳ್ಳುತ್ತಿರುವುದ್ಯಾಕೆ..?

    ಸಾಮಾನ್ಯವಾಗಿ ಧಾರಾವಾಹಿಗಳಲ್ಲಿ ಪಾತ್ರಧಾರಿಗಳನ್ನು ಬದಲಾಯಿಸಲು ಒಂದು ತಂತ್ರವನ್ನು ಉಪಯೋಗಿಸಲಾಗುತ್ತದೆ. ಆಕ್ಸಿಡೆಂಟ್ ಮಾಡಿಸಿ, ಪ್ಲಾಸ್ಟಿಕ್ ಸರ್ಜರಿ ಮೂಲಕ ಹೊಸ ಕಲಾವಿದನನ್ನು ಪರಿಚಯ ಮಾಡಿಸಲಾಗುತ್ತದೆ. ಅದೇ ಹಳೆ ತಂತ್ರವನ್ನು ಜೊತೆ ಜೊತೆಯಲಿ ಧಾರಾವಾಹಿ ತಂಡ ಮಾಡುತ್ತಾ ಎನ್ನುವುದು ಹಲವರ ಪ್ರಶ್ನೆಯಾಗಿದೆ. ಮುಂದಿನ ದಿನಗಳಲ್ಲಿ ಇದು ಕೂಡ ಗೊತ್ತಾಗಲಿದೆ. ಅಥವಾ ಪರ್ಮನೆಂಟ್ ಆಗಿ ಪಾತ್ರವನ್ನೇ ಮುಗಿಸುತ್ತಾರಾ ಅದು ಕೂಡ ಸಾಧ್ಯತೆ ಇದೆ.

    ಇಂದು ರಿಲೀಸ್ ಆಗಿರುವ ಪ್ರೊಮೋ ನೋಡಿದರೆ ಇಂತಹ ಹತ್ತು ಹಲವು ಪ್ರಶ್ನೆಗಳು ಮೂಡುತ್ತಿದ್ದು, ಸ್ವತಃ ಧಾರಾವಾಹಿ ತಂಡವೇ ಕಥೆಯಲ್ಲಿ ರೋಚಕ ತಿರುವು ಎಂದು ಹೇಳಿಕೊಂಡಿದ್ದರಿಂದ ಅಂತಹ ತಿರುವು ಏನು? ಯಾವ ತಂತ್ರವನ್ನು ಹೆಣೆದು ಆರ್ಯವರ್ಧನ್ ಪಾತ್ರವನ್ನು ಉಳಿಸಿಕೊಳ್ಳುತ್ತಾರಾ? ಅಥವಾ ಮನೆಗೆ ಕಳುಹಿಸುತ್ತಾರೆ ಎನ್ನುವುದು ಸದ್ಯಕ್ಕಿರುವ ಸಸ್ಪೆನ್ಸ್.

    Live Tv
    [brid partner=56869869 player=32851 video=960834 autoplay=true]

  • ಅನಿರುದ್ಧಗೆ ಮತ್ತೆ ಅವಕಾಶ ಕೊಡಿ, ವಾಹಿನಿ ಮುಂದೆ ಅಭಿಮಾನಿಗಳು ಪ್ರತಿಭಟನೆ

    ಅನಿರುದ್ಧಗೆ ಮತ್ತೆ ಅವಕಾಶ ಕೊಡಿ, ವಾಹಿನಿ ಮುಂದೆ ಅಭಿಮಾನಿಗಳು ಪ್ರತಿಭಟನೆ

    ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟಿಸಲು ಅನಿರುದ್ಧ ಅವರಿಗೆ ಮತ್ತೆ ಅವಕಾಶ ನೀಡಬೇಕು ಎಂದು ಅನಿರುದ್ಧ ಅಭಿಮಾನಿಗಳು ಜೀ ಕನ್ನಡ ವಾಹಿನಿಯ ಮುಂದೆ ಪ್ರತಿಭಟನೆ ನಡೆಸಿದರು. ಏಕಾಏಕಿ ಒಬ್ಬ ನಟನಿಗೆ ಹೀಗೆ ಮಾಡುವುದು ಸರಿಯಲ್ಲ. ನಿರ್ಮಾಪಕರ ಮತ್ತು  ಅನಿರುದ್ಧ ನಡುವಿನ ಸಮರಕ್ಕೆ, ವಾಹಿನಿಯು ಮಧ್ಯಸ್ತಿಕೆ ವಹಿಸಿ ಸರಿ ಮಾಡಬೇಕು ಎಂದು ಅಭಿಮಾನಿಗಳು ಮನವಿ ಮಾಡಿದರು. ಆರ್ಯವರ್ಧನ್ ಪಾತ್ರಕ್ಕೆ ಇನ್ನೂ ಯಾರೂ ಆಯ್ಕೆ ಆಗದೇ ಇರುವ ಕಾರಣಕ್ಕಾಗಿ ಮತ್ತೆ ಅನಿರುದ್ಧ ಅವರನ್ನೇ ವಾಪಸ್ಸು ಕರೆಯಿಸಿಕೊಳ್ಳಿ ಎಂಬ ಬೇಡಿಕೆ ಇಟ್ಟರು.

    ಜೊತೆ ಜೊತೆಯಲಿ ಧಾರಾವಾಹಿಯ ನಿರ್ಮಾಪಕರಿಗೂ ಮತ್ತು ಅನಿರುದ್ಧ ಅವರಿಗೂ ವೈಮನಸ್ಸಿನ ಕಾರಣದಿಂದಾಗಿ ಅನಿರುದ್ಧ ಅವರನ್ನೂ ಸೀರಿಯಲ್ ನಿಂದ ಕೈ ಬಿಡಲಾಗಿದೆ. ಅನಿರುದ್ಧ ನಿರ್ವಹಿಸುತ್ತಿದ್ದ ಆರ್ಯವರ್ಧನ್ ಪಾತ್ರವನ್ನು ಕಥೆಯಲ್ಲೇ ಹಾಗೆಯೇ ಜೀವಂತವಾಗಿಟ್ಟು, ಹೊಸ ಪಾತ್ರಗಳ ಮೂಲಕ ಕಥೆಯನ್ನು ಹೇಳಲಾಗುತ್ತಿದೆ. ಹೊಸ ಪಾತ್ರ ಬಂದರೂ, ಆರ್ಯವರ್ಧನ್ ಪಾತ್ರವೂ ಕಥೆಯಲ್ಲಿದೆ. ಹಾಗಾಗಿ ಮತ್ತೆ ಅನಿರುದ್ಧ ಧಾರಾವಾಹಿ ತಂಡ ಸೇರಿಕೊಳ್ಳಲಿ ಎನ್ನುವುದು ಅಭಿಮಾನಿಗಳ ಆಸೆ. ಇದನ್ನೂ ಓದಿ: ‘ಶ್ಯಾನುಭೋಗರ ಮಗಳಾ’ದ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ

    ಅನಿರುದ್ಧ ಅವರನ್ನು ಕೇವಲ ಸೀರಿಯಲ್ ನಿಂದ ಮಾತ್ರ ಕೈ ಬಿಟ್ಟಿಲ್ಲ. ಮತ್ತೆ ಅವರೊಂದಿಗೆ ಯಾರೂ ಕೆಲಸ ಮಾಡದಂತೆ, ಟೆಲಿವಿಷನ್ ಅಸೋಷಿಯೇಷನ್ ನಿರ್ಮಾಪಕರ ಸಂಘವು ನಿರ್ಣಯ ತಗೆದುಕೊಂಡಿದೆ. ಒಂದು ರೀತಿಯಲ್ಲಿ ಅದು ಬ್ಯಾನ್ ಎನ್ನಲಾಗುತ್ತಿದೆ. ಹೀಗಾಗಿ ಮತ್ತೆ ಅನಿರುದ್ಧ ಅವರನ್ನು ಸೀರಿಯಲ್ ತಂಡದಲ್ಲಿ ಸೇರಿಸಿಕೊಳ್ಳುವುದು ಕಷ್ಟ ಎನ್ನಲಾಗುತ್ತಿದೆ. ಮತ್ತೆ ಪಾತ್ರ ಮಾಡಲು ಅನಿರುದ್ಧ ಅವರಿಗೆ ಆಸೆ ಇದ್ದರೂ, ನಿರ್ಮಾಪಕರು ಮಾತ್ರ ಮನಸ್ಸು ಬದಲಾಯಿಸುತ್ತಿಲ್ಲ.

    ಧಾರಾವಾಹಿ ಲೋಕದ ಬಹುತೇಕ ನಿರ್ಮಾಪಕರು ಸೇರಿ, ಮಾಧ್ಯಮಗೋಷ್ಠಿಯಲ್ಲೇ ಅನಿರುದ್ಧ ಅವರ ಜೊತೆ ತಾವ್ಯಾರೂ ಕೆಲಸ ಮಾಡುವುದಿಲ್ಲ ಎಂದು ಘೋಷಿಸಿದ್ದಾರೆ. ಜೀ ಕನ್ನಡ ವಾಹಿನಿಯ ಪ್ರತಿನಿಧಿಯೇ ಮಾಧ್ಯಮ ಗೋಷ್ಠಿಯಲ್ಲಿ ಪಾಲ್ಗೊಂಡು ತಾವು ನಿರ್ಮಾಪಕರ ನಿರ್ಧಾರವನ್ನು ಗೌರವಿಸುತ್ತೇವೆ ಎಂದು ಹೇಳಿದ್ದಾರೆ. ಹಾಗಾಗಿ ಏನೇ ಹೋರಾಟ ನಡೆದರೂ, ಅನಿರುದ್ಧ ಅವರಿಗೆ ಮತ್ತೆ ಆ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲು ಎಲ್ಲ ಬಾಗಿಲುಗಳು ಮುಚ್ಚಿವೆ.

    Live Tv
    [brid partner=56869869 player=32851 video=960834 autoplay=true]

  • ‘ಜೊತೆ ಜೊತೆಯಲಿ’ ಧಾರಾವಾಹಿ: ಆರ್ಯವರ್ಧನ್ ಅಲ್ಲ, ಅವನ ಸಹೋದರನ ಪಾತ್ರದಲ್ಲಿ ಹರೀಶ್ ರಾಜ್

    ‘ಜೊತೆ ಜೊತೆಯಲಿ’ ಧಾರಾವಾಹಿ: ಆರ್ಯವರ್ಧನ್ ಅಲ್ಲ, ಅವನ ಸಹೋದರನ ಪಾತ್ರದಲ್ಲಿ ಹರೀಶ್ ರಾಜ್

    ಜೊತೆ ಜೊತೆಯಲಿ ಧಾರಾವಾಹಿಗೆ ನಟ ಹರೀಶ್ ರಾಜ್ ಎಂಟ್ರಿ ಕೊಟ್ಟಿದ್ದಾರೆ. ಎರಡು ದಿನಗಳಿಂದ ಹರೀಶ್ ರಾಜ್ ದೃಶ್ಯಗಳು ಪ್ರಸಾರವಾಗುತ್ತಿವೆ. ಹರೀಶ್ ರಾಜ್ ಈ ಧಾರಾವಾಹಿಯಲ್ಲಿ ಅನಿರುದ್ಧ ಬಿಟ್ಟು ಹೋಗಿದ್ದ ಆರ್ಯವರ್ಧನ್ ಪಾತ್ರವನ್ನು ನಿರ್ವಹಿಸುತ್ತಾರೆ ಎನ್ನಲಾಗಿತ್ತು. ಆದರೆ, ಆರ್ಯವರ್ಧನ್ ತಮ್ಮನಾಗಿ ಹರೀಶ್ ರಾಜ್ ಧಾರಾವಾಹಿಗೆ ಪ್ರವೇಶ ಮಾಡಿದ್ದಾರೆ. ಅದೂ ವಿಶ್ವಾಸ್ ದೇಸಾಯಿ ಪಾತ್ರದಲ್ಲಿ ಎನ್ನುವುದು ವಿಶೇಷ.

    ಪ್ರಿಯದರ್ಶಿನಿಗೆ ಇಬ್ಬರು ಮಕ್ಕಳು. ಒಬ್ಬ ಆರ್ಯವರ್ಧನ್, ಮತ್ತೊಬ್ಬ ವಿಶ್ವಾಸ್ ದೇಸಾಯಿ. ವಿದೇಶದಲ್ಲಿ ಬ್ಯುಸಿನೆಟ್ ಮಾಡುತ್ತಿದ್ದ ವಿಶ್ವಾಸ ಇದೀಗ ಸ್ವದೇಶಕ್ಕೆ ಬಂದಿದ್ದಾನೆ. ಅದೂ 700 ಕೋಟಿ ಲಾಸ್ ಮಾಡಿಕೊಂಡು. ಈ ಲಾಸ್ ಕಟ್ಟಿಕೊಡಲು ಏನು ಮಾಡಬೇಕು ಎನ್ನುವ ಒದ್ದಾಟ ಅವನದ್ದು. ಕಿರಿ ಮಗನ ಸಂಕಟ ನೋಡಲಾಗಿದೆ. ಆರ್ಯವರ್ಧನ್ ಸಹಾಯ ಕೇಳುವುದಾಗಿ ಪ್ರಿಯದರ್ಶಿನಿ ಹೇಳಿದ್ದಾರೆ. ಇದರ ಮಧ್ಯೆ ಧಾರಾವಾಹಿ ತಂಡ ಮತ್ತೊಂದು ಟ್ವಿಸ್ಟ್ ಕೊಟ್ಟಿದೆ. ಅದು ಜೋಗತಿ ಮೂಲಕ. ಇದನ್ನೂ ಓದಿ: ನೂಡಲ್ಸ್ ಬಿಡಿಸು ಅಂದ್ರೆ ಮೂಲಂಗಿ ಬಿಡಿಸ್ತಾಳೆ – ಸೋನು ಪೇಂಟಿಂಗ್‌ಗೆ ರಾಕೇಶ್ ಫುಲ್ ಶಾಕ್..!

    ಮನೆಗೆ ಬರುವ ಜೋಗತಿ, ‘ನಿಮ್ಮಿಬ್ಬರ ಮಕ್ಕಳಲ್ಲಿ ಒಬ್ಬರಿಗೆ ಕಂಟಕ ಎದುರಾಗಲಿದೆ’ ಎಂದು ಪ್ರಿಯದರ್ಶಿನಿಗೆ ಹೇಳಿದ್ದಾಳೆ. ಜೋಗತಿ ಹೇಳಿದಂತೆ ಆಗುವುದರಿಂದ ಪ್ರಿಯದರ್ಶಿನಿಗೆ ಆತಂಕ ಶುರುವಾಗಿದೆ. ಯಾವ ಮಗನಿಗೆ ಏನು ಆಗಲಿದೆ ಎನ್ನುವುದು ಆಕೆಯ ಸಂಕಟ. ಇಂತಹ ಕುತೂಹಲದೊಂದಿಗೆ ಹರೀಶ್ ರಾಜ್ ಪಾತ್ರ ಆಗಮನವಾಗಿದೆ. ಆರ್ಯವರ್ಧನಿಗೆ ಸಂಕಟ ತಂದು ಮನೆಯಿಂದ ಕಳುಹಿಸುತ್ತಾರಾ? ಅಥವಾ ಆ ಪಾತ್ರಕ್ಕೆ ಬೇರೆಯವರನ್ನು ಆಯ್ಕೆ ಮಾಡಿಕೊಳ್ಳುತ್ತಾರಾ ಕಾದು ನೋಡಬೇಕು.

    Live Tv
    [brid partner=56869869 player=32851 video=960834 autoplay=true]

  • ಅನಿರುದ್ದಗೆ ಸವಾಲು ಹಾಕಿದ ಜೊತೆ ಜೊತೆಯಲಿ ಸೀರಿಯಲ್ ಟೀಮ್

    ಅನಿರುದ್ದಗೆ ಸವಾಲು ಹಾಕಿದ ಜೊತೆ ಜೊತೆಯಲಿ ಸೀರಿಯಲ್ ಟೀಮ್

    ಜೊತೆ ಜೊತೆಯಲಿ ಧಾರಾವಾಹಿಯಿಂದ ಅನಿರುದ್ಧ ಅವರನ್ನು ಹೊರ ಹಾಕಿದ ನಂತರ, ಆರ್ಯವರ್ಧನ್ ಪಾತ್ರವನ್ನು ಯಾರು ಮಾಡಲಿದ್ದಾರೆ? ಅನಿರುದ್ಧ ಇಲ್ಲದೇ ಸೀರಿಯಲ್ ಮುಂದುವರೆಯುತ್ತಾ? ಅವರಿಲ್ಲದೇ ಧಾರಾವಾಹಿಯನ್ನು ಜನ ನೋಡುತ್ತಾರೆ ಹೀಗೆ ಹತ್ತಾರು ಪ್ರಶ್ನೆಗಳು ಎದ್ದಿದ್ದವು. ಅನಿರುದ್ಧ ಇಲ್ಲದೇ ನಾವು ಧಾರಾವಾಹಿ ನೋಡುವುದಿಲ್ಲ ಎಂದು ಕೆಲವರು ಸೋಷಿಯಲ್ ಮೀಡಿಯಾದಲ್ಲೂ ಬರೆದುಕೊಂಡಿದ್ದಾರೆ. ಆದರೂ, ಅನಿರುದ್ಧ ಅವರಿಗೆ ಸವಾಲು ಹಾಕುವಂತಹ ಕೆಲಸ ನಡೆದಿದೆ.

    ಸೀರಿಯಲ್ ಗೆ ಅನಿರುದ್ಧ ಅವರಿಗಿಂತ ಕಂಟೆಂಟ್ ಮುಖ್ಯ ಎಂದು ಈ ಹಿಂದೆಯೇ ನಿರ್ಮಾಪಕ ಆರೂರು ಜಗದೀಶ್ ಹೇಳಿಕೆ ನೀಡಿದ್ದರು. ಕಥೆಯೇ ಧಾರಾವಾಹಿಯ ಹೀರೋ ಎಂದು ಮಾಧ್ಯಮಗಳ ಮುಂದೆಯೇ ಮಾತನಾಡಿದ್ದರು. ಈಗ ಆಡಿದಂತೆಯೇ ಮಾಡಿ ತೋರಿಸಿದ್ದಾರೆ. ಅನಿರುದ್ಧ ಅವರನ್ನು ಕೈ ಬಿಟ್ಟು ಧಾರಾವಾಹಿಯನ್ನು ಮುಂದುವರೆಸಿದ್ದಾರೆ. ಕೇವಲ ಅನಿರುದ್ಧ ಅವರನ್ನು ಮಾತ್ರವಲ್ಲ, ಆರ್ಯವರ್ಧನ್ ಪಾತ್ರವಿಲ್ಲದೇ ಧಾರಾವಾಹಿ ನಡೆಸುತ್ತೇವೆ ಎನ್ನುವ ಸೂಚನೆಯನ್ನೂ ಕೊಟ್ಟಿದ್ದಾರೆ. ಇದನ್ನೂ ಓದಿ:ದುಬಾರಿ ಸಂಭಾವನೆ ಕೇಳಿ, ಅವಕಾಶ ಕಳೆದುಕೊಂಡ `ವಜ್ರಕಾಯ’ ನಟಿ ನಭಾ ನಟೇಶ್

    ಆರ್ಯವರ್ಧನ್ ಪಾತ್ರಕ್ಕಾಗಿ ಹಲವು ಕಲಾವಿದರನ್ನು ಹುಡುಕಿದ್ದರು. ಕೊನೆಯ ಕ್ಷಣದಲ್ಲಿ ಆ ಪಾತ್ರವನ್ನು ಬಿಟ್ಟು, ಹೊಸದೊಂದು ಪಾತ್ರವನ್ನು ಸೃಷ್ಟಿ ಮಾಡಿದೆ ಧಾರಾವಾಹಿ ತಂಡ. ಆ ಹೊಸ ಪಾತ್ರವನ್ನು ಹರೀಶ್ ರಾಜ್ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಕಥೆಗೆ ಬೇರೊಂದು ತಿರುವು ದೊರೆತಿದೆ. ಈ ಹೊಸ ಕಥೆಯನ್ನು ನೋಡುಗ ಹೇಗೆ ತಗೆದುಕೊಳ್ಳುತ್ತಾನೆ ಎನ್ನುವುದೇ ಸದ್ಯಕ್ಕಿರುವ ಕುತೂಹಲ.

    Live Tv
    [brid partner=56869869 player=32851 video=960834 autoplay=true]

  • ‘ಜೊತೆ ಜೊತೆಯಲಿ’ ಸೀರಿಯಲ್ ಗೆ ನಟ ಹರೀಶ್ ರಾಜ್ ಅಧಿಕೃತ ಎಂಟ್ರಿ: ಪ್ರೊಮೋ ರಿಲೀಸ್

    ‘ಜೊತೆ ಜೊತೆಯಲಿ’ ಸೀರಿಯಲ್ ಗೆ ನಟ ಹರೀಶ್ ರಾಜ್ ಅಧಿಕೃತ ಎಂಟ್ರಿ: ಪ್ರೊಮೋ ರಿಲೀಸ್

    ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟ ಹರೀಶ್ ರಾಜ್ ನಟಿಸಲಿದ್ದಾರೆ ಎನ್ನುವ ಸುದ್ದಿಯನ್ನು ಈ ಹಿಂದೆಯೇ ಪಬ್ಲಿಕ್ ಟಿವಿ ಡಿಜಿಟಲ್ ಬಹಿರಂಗ ಪಡಿಸಿತ್ತು. ಈ ಸೀರಿಯಲ್ ನಲ್ಲಿ ಅವರು ಆರ್ಯವರ್ಧನ್ ಪಾತ್ರದ ಬದಲು ಬೇರೆ, ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ಎಕ್ಸ್ ಕ್ಲೂಸಿವ್ ಸುದ್ದಿ ಮಾಡಿತ್ತು. ಅದೀಗ ನಿಜವಾಗಿದೆ. ಹರೀಶ್ ರಾಜ್ ಜೊತೆ ಜೊತೆಯಲಿ ಟೀಮ್ ಸೇರಿಕೊಂಡಿದ್ದು, ಅವರು ನಟಿಸಿರುವ ಪ್ರೊಮೋ ಕೂಡ ವಾಹಿನಿ ರಿಲೀಸ್ ಮಾಡಿದೆ.

    ಹರೀಶ್ ರಾಜ್ ಹೊಸ ಬಗೆಯ ಪಾತ್ರ ಮಾಡಿದ್ದು, ನೂರಾರು ಕೋಟಿ ಒಡೆಯನಾಗಿ ಅವರು ಕಾಣಿಸಿಕೊಂಡಿದ್ದಾರೆ. ಅಲ್ಲದೇ, ಆರ್ಯವರ್ಧನ್ ಪಾತ್ರವೂ ಇನ್ನೂ ಧಾರಾವಾಹಿಯಲ್ಲಿದೆ. ಆ ಪಾತ್ರಕ್ಕೂ ಹರೀಶ್ ರಾಜ್ ಇರುವ ಪಾತ್ರಕ್ಕೂ ಕೊಂಡಿ ಬೆಳೆಸಿ ಕಥೆ ಮಾಡಿದ್ದಾರೆ ಧಾರಾವಾಹಿ ತಂಡ. ಹಾಗಾಗಿ ಆರ್ಯವರ್ಧನ್ ಪಾತ್ರ ಇಲ್ಲದೇ, ಈ ಪಾತ್ರದ ಮೂಲಕ ಹೊಸ ಕಥೆ ಹೇಳುವ ತಂತ್ರವನ್ನು ಸೀರಿಯಲ್ ತಂಡ ಮಾಡಿದಂತಿದೆ. ಇದನ್ನೂ ಓದಿ:ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ‘ಗಂಡುಮಗ’ ಎಂದು ಹಾಡಿ ಹೊಗಳಿದ ಜಗ್ಗೇಶ್

    ಆರ್ಯವರ್ಧನ್ ಪಾತ್ರದಲ್ಲೇ ಅನಿರುದ್ಧ ಕಾಣಿಸಿಕೊಂಡಿರುವುದರಿಂದ ಹರೀಶ್ ರಾಜ್ ಅವರು ಆರ್ಯವರ್ಧನ್ ಪಾತ್ರದ ಬದಲು ಬೇರೊಂದು ಪಾತ್ರ ಮಾಡಿದ್ದಾರೆ ಎನ್ನುವುದು ಸ್ಪಷ್ಟ. ಆದರೆ, ಆರ್ಯವರ್ಧನ್ ಪಾತ್ರವನ್ನು ಕಥೆಯಲ್ಲಿ ಹೇಗೆ ತಗೆದುಕೊಂಡು ಹೋಗುತ್ತಾರೆ ಎನ್ನುವುದೇ ಸದ್ಯಕ್ಕಿರುವ ಕುತೂಹಲ. ಸದ್ಯ ಜೀ ವಾಹಿನಿಯು ಹರೀಶ್ ರಾಜ್ ಅವರ ಪ್ರೊಮೋ ರಿಲೀಸ್ ಮಾಡಿದ್ದು, ಅನಿರುದ್ಧ ಅಭಿಮಾನಿಗಳು, ಮತ್ತೆ ತಮ್ಮ ನಟಿ ಈ ಸೀರಿಯಲ್ ನಲ್ಲಿ ನಟಿಸಲಿ ಎಂದು ಆಗ್ರಹಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಆರ್ಯವರ್ಧನ್ ಗುರೂಜಿಯವರಲ್ಲಿ ಅಪ್ಪನ ಪ್ರೀತಿ ಕಂಡೆ: ರೂಪೇಶ್ ಭಾವುಕ

    ಆರ್ಯವರ್ಧನ್ ಗುರೂಜಿಯವರಲ್ಲಿ ಅಪ್ಪನ ಪ್ರೀತಿ ಕಂಡೆ: ರೂಪೇಶ್ ಭಾವುಕ

    ಬಿಗ್ ಬಾಸ್ ಮನೆಯಲ್ಲಿ ಉಳಿದಿರುವುದು ಈಗ ಕೇವಲ ಹನ್ನೊಂದು ಮಂದಿ. ಈಗ ಇರುವವರ ನಡುವೆ ಬೆಸೆದಿರುವ ಸ್ನೇಹ ಎಂಥದ್ದು ಎಂಬುದು ತುಂಬಾ ಮುಖ್ಯವಾಗುತ್ತದೆ. ಅಂತೆಯೇ ಇತ್ತೀಚೆಗೆ ರೂಪೇಶ್ ಗೆ ಗುರೂಜಿ ಎಷ್ಟು ಮುಖ್ಯ ಎಂಬುದು ಸಾಬೀತಾಗಿದೆ.

    ಬಿಗ್ ಬಾಸ್ ಇಂದು ಮನೆ ಸದಸ್ಯರಿಗೆ ಹೊಸದೊಂದು ಗೇಮ್ ನೀಡಿದ್ದರು. ಅದು ಇಷ್ಟ-ಕಷ್ಟ ಎಂಬುದಾಗಿತ್ತು. ಈ ಆಟದಿಂದ ಯಾರ ಮನಸ್ಸಲ್ಲಿ ಯಾರಿಗೆ ಎಷ್ಟು ಸ್ಥಾನ ಇದೆ ಎಂಬುದು ಕೂಡ ಸ್ಪಷ್ಟವಾಗಿತ್ತು. ನೀಲಿ ಮತ್ತು ಕೆಂಪು ಬಣ್ಣದ ದೊಡ್ಡ ಬಾಕ್ಸ್ ನಲ್ಲಿ ಒಂದಷ್ಡು ಗಿಫ್ಟ್ ಐಟಂ ಗಳನ್ನು ಇಟ್ಟಿದ್ದರು. ಅದರಲ್ಲಿ ಯಾವುದಾದರೊಂದು ಗಿಫ್ಟನ್ನು ತಾನು ಇಷ್ಟಪಟ್ಟವರಿಗೆ ವಿವರಣೆ ಸಮೇತ ನೀಡಬೇಕಾಗಿತ್ತು.

    ಮೊದಲು ಹೋದ ಆರ್ಯವರ್ಧನ್, ಒಂದು ಗೊಂಬೆಯನ್ನು ಎತ್ತಿಕೊಂಡರು. ಅದನ್ನು ತನ್ನ ಮಗಳೆಂದರು. ನನಗೆ ನನ್ನ ಮಗಳೆಂದರೆ ತುಂಬಾನೇ ಪ್ರೀತಿ. ಈ ಪ್ರೀತಿಯ ಗೊಂಬೆಯನ್ನು ನನ್ನ ಮಗಳೆಂದೇ ಅಂದುಕೊಂಡಿದ್ದೀನಿ. ಇದನ್ನು ನಾನು ತುಂಬಾ ಇಷ್ಟಪಡುವ ರೂಪೇಶ್‍ಗೆ ಕೊಡುತ್ತೀನಿ ಎಂದಿದ್ದಾರೆ. ರೂಪೇಶ್ ತನ್ನ ಮೇಲೆ ಬರೆದಿದ್ದ ಹಾಡು ತುಂಬಾನೇ ಇಷ್ಟವಾಯಿತು. ಹೀಗಾಗಿ ಈ ಗೊಂಬೆಯನ್ನು ರೂಪೇಶ್ ಗೆ ಕೊಡುತ್ತಿದ್ದೀನಿ ಎಂದರು.  ಇದನ್ನೂ ಓದಿ: ನನಗೇನೂ 18 ವರ್ಷವಲ್ಲ. ನಾನು 23 ವರ್ಷದ ಹುಡುಗಿ, ನನಗೆ ಎಲ್ಲಾ ಗೊತ್ತಿದೆ ಅಂದ ಸೋನು

    ಇತ್ತ ರೂಪೇಶ್ ನ ಸರದಿ ಬಂದಾಗ, ಅಲ್ಲಿ ಸಾನ್ಯಾ ಕೂಡ ತುಂಬಾ ಮುಖ್ಯವಾಗಿದ್ದಳು. ಆದರೆ ರೂಪೇಶ್ ಇಬ್ಬರನ್ನು ತುಂಬಾ ಅದ್ಭುತವಾಗಿ ಮೆಂಟೈನ್ ಮಾಡಿದರು. ಸಾನ್ಯಾ ನನ್ನ ಬೆಸ್ಟ್ ಫ್ರೆಂಡ್. ನಾನು ಒಂಟಿಯಾಗಿದ್ದಾಗೆಲ್ಲ ನನ್ನ ಕಣ್ಣೀರು ಒರೆಸಿದ್ದಾಳೆ. ಯಾರು ಏನೇ ಹೇಳಲಿ ಅವಳನ್ನು ನಾನು ಎಂದಿಗೂ ಬಿಟ್ಟುಕೊಡುವುದಿಲ್ಲ. ನಂಗೆ ಲೈಫ್ ನಲ್ಲಿ ಸಿಕ್ಕಂತ ಒಳ್ಳೆ ಫ್ರೆಂಡ್. ಯಾವಾಗಲೂ ಕಾಪಾಡಿಕೊಳ್ಳುತ್ತೀನಿ. ಆದರೆ ಈ ಗಿಫ್ಟ್ ಅನ್ನು ಆರ್ಯವರ್ಧನ್ ಅವರಿಗೆ ಕೊಡಬೇಕು ಎನಿಸಿದೆ ಅಂದ್ರು. ಇದನ್ನೂ ಓದಿ: ಸೋನುಗೆ ಚೈತ್ರಾ ಚಪ್ಪಲಿ ಗಿಫ್ಟ್ ಕೊಟ್ಟಿದ್ಯಾಕೆ..?

    ಅಲ್ಲದೆ ಅದಕ್ಕೆ ಕಾರಣ ಕೂಡ ನೀಡಿದರು. ನಾನು ಅಮ್ಮನನ್ನು ಬೇಗ ಕಳೆದುಕೊಂಡೆ, ತಂದೆಯ ಪ್ರೀತಿ ಬೇಕು ಎಂಬ ಹಂಬಲ ಇತ್ತು. ಆದರೆ ಅಪ್ಪನಿಗೆ ಮೂವರು ಮಕ್ಕಳನ್ನು ನೋಡಿಕೊಳ್ಳುವುದರ ಜೊತೆಗೆ, ಮನೆಯ ಜವಾಬ್ದಾರಿ ಕೂಡ ಇತ್ತು. ಹೀಗಾಗಿ ಅಪ್ಪನ ಪ್ರೀತಿ ಹೆಚ್ಚು ಸಿಗಲಿಲ್ಲ. ಆದರೆ ಆರ್ಯವರ್ಧನ್ ಅವರಲ್ಲಿ ನನ್ನ ಅಪ್ಪನನ್ನು ಕಂಡೆ ಎಂದು ಭಾವುಕರಾಗಿದ್ದಾರೆ.

    ಇಂದು ಬೆಳಗ್ಗೆ ಅಪ್ಪನ ಕನಸು ಕೂಡ ಬಿದ್ದಿದೆ. ಗುರೂಜಿ ಅವರ ಜೀವನ ಯಾವತ್ತು ಬೆಳಗುತ್ತಾ ಇರಲಿ, ನೀವೂ ಬೆಳಗುತ್ತಾ ಇರಬೇಕು ಎಂದು ಆ ಗಿಫ್ಟ್ ನೀಡಿದ್ದಾರೆ. ಜೊತೆಗೆ ಆರ್ಯವರ್ಧನ್ ನನ್ನನ್ನು ಮಗ, ಕಂದಾ ಎಂದು ಮಾತನಾಡುವಾಗ ನನಗೆ ತಂದೆ ಕರೆದಷ್ಟೇ ಖುಷಿಯಾಗುತ್ತದೆ ಎಂದಿದ್ದಾರೆ. ಗಿಫ್ಟ್ ತೆಗೆದುಕೊಳ್ಳಲು ಹೋದಾಗ ಆರ್ಯವರ್ಧನ್ ತುಂಬಾ ಖುಷಿಪಟ್ಟಿದ್ದಾರೆ. ಜೀವನದಲ್ಲಿ ರೂಪೇಶ್ ಬರೆದಿರುವ ಹಾಡನ್ನು ಯಾವತ್ತಿಗೂ ಮರೆಯಲ್ಲ. ಇವನು ಬರೆದಿರುವ ಹಾಡನ್ನು ಬೆಳ್ಳಿಯಲ್ಲಿ ಬರೆಸುತ್ತೀನಿ. ಬೆಳ್ಳಿ ಫ್ರೇಮ್ ಹಾಕಿ ಮನೆಯಲ್ಲಿ ಇಟ್ಟುಕೊಳ್ಳುತ್ತೀನಿ ಎಂದ ಗುರೂಜಿ ಮತ್ತೊಮ್ಮೆ ಆ ಪ್ರೀತಿಗಾಗಿ ಆ ಹಾಡನ್ನು ಹಾಡು ಎಂದು ರಿಕ್ವೆಸ್ಟ್ ಮಾಡಿದ್ದಾರೆ. ಎಲ್ಲರ ಅನುಮತಿ ಪಡೆದ ರೂಪೇಶ್ ಮತ್ತೊಮ್ಮೆ ಆ ಬ್ರಹ್ಮ ಬರೆದ ಬರಹ ನೀನು ಎಂಬ ಹಾಡನ್ನು ಹಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]