Tag: Arudra

  • ದೇಶದ್ರೋಹಿಯನ್ನು ಭೇಟಿಯಾಗಲು ಪರಪ್ಪನ ಅಗ್ರಹಾರಕ್ಕೆ ಬಂದ ಆರ್ದ್ರಾ ಕುಟುಂಬಸ್ಥರು

    ದೇಶದ್ರೋಹಿಯನ್ನು ಭೇಟಿಯಾಗಲು ಪರಪ್ಪನ ಅಗ್ರಹಾರಕ್ಕೆ ಬಂದ ಆರ್ದ್ರಾ ಕುಟುಂಬಸ್ಥರು

    ಬೆಂಗಳೂರು: ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿದ ಅಮೂಲ್ಯ ಪ್ರಕರಣದ ಬೆನ್ನಲ್ಲೇ ಕಾಶ್ಮೀರ ಮುಕ್ತಿ, ದಲಿತ ಮುಕ್ತಿ, ಆದಿವಾಸಿ ಮುಕ್ತಿ ಎನ್ನುವ ಭಿತ್ತಿಪತ್ರ ಹಿಡಿದ ಆರೋಪದ ಅಡಿ 14 ದಿನಗಳ ನ್ಯಾಯಾಂಗ ಬಂಧನದಲ್ಲಿರುವ ಆರ್ದ್ರಾ ಳನ್ನು ಕುಟುಂಬಸ್ಥರು ಭೇಟಿಮಾಡಿದ್ದಾರೆ.

    ದ್ರೋಶದ್ರೋಹಿ ಘೋಷಣೆ ಕೂಗಿ ಪರಪ್ಪನ ಅಗ್ರಹಾರ ಸೇರಿರುವ ಆರ್ದ್ರಾ ಳನ್ನು ಇಂದು ಆಕೆಯ ತಂದೆ ಹಾಗೂ ಕುಟುಂಬ ವರ್ಗ ಭೇಟಿ ಮಾಡಿ ಕೆಲ ಕಾಲ ಚರ್ಚೆ ನಡೆಸಿ ಹಿಂತಿರುಗಿದ್ದಾರೆ.

    ಆರ್ದ್ರಾ ಳ ಆರೋಗ್ಯದಲ್ಲಿ ಸಾಕಷ್ಟು ಏರುಪೇರಾದ ಹಿನ್ನೆಲೆ ಆಕೆಯ ತಂದೆ ಶನಿವಾರ ಜೈಲಿಗೆ ಬಂದು ಮನೆಯಿಂದ ತಂದಿದ್ದ ಮಾತ್ರೆಗಳನ್ನು ಕೊಟ್ಟು ಹೋಗಿದ್ದರು. ಬಳಿಕ ಇಂದು ಆರ್ದ್ರಾ ತಂದೆ ಹಾಗೂ ಕುಟುಂಬ ವರ್ಗದವರು ಭೇಟಿಗೆ ಅನುಮತಿ ಪಡೆದು ಔಷಧಿಗಳ ಜೊತೆ ಆಗಮಿಸಿದ್ದರು. ಆಕೆಯನ್ನು ಭೇಟಿ ಮಾಡಿ ಆರೋಗ್ಯದ ಬಗ್ಗೆ ವಿಚಾರಿಸಿ ಮುಂದಿನ ಕಾನೂನು ಹೋರಾಟದ ಬಗ್ಗೆ ಕೆಲ ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

    ಮಗಳ ಭೇಟಿಯ ನಂತರ ಜೈಲಿನಿಂದ ಹೊರಬಂದ ಆರ್ದ್ರಾ ಕುಟುಂಬದವರು, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿ ಹಿಂತಿರುಗಿದ್ದಾರೆ.

  • ನಿನ್ನೆ ಅಮೂಲ್ಯ, ಇಂದು ಆರ್ದ್ರಾ- ಹಿಂದೂ ಸಂಘಟನೆ ಪ್ರತಿಭಟನೆಯಲ್ಲಿ ದೇಶದ್ರೋಹಿಯ ಬಂಧನ

    ನಿನ್ನೆ ಅಮೂಲ್ಯ, ಇಂದು ಆರ್ದ್ರಾ- ಹಿಂದೂ ಸಂಘಟನೆ ಪ್ರತಿಭಟನೆಯಲ್ಲಿ ದೇಶದ್ರೋಹಿಯ ಬಂಧನ

    – ಬೆಂಗಳೂರಲ್ಲಿ ಪಾಕ್ ಪಿಶಾಚಿಗಳ ಅಬ್ಬರ

    ಬೆಂಗಳೂರು: ಗುರುವಾರ ಅಮೂಲ್ಯಾ ಲಿಯೋನ ವೈರಿ ರಾಷ್ಟ್ರ ಪರ ಘೋಷಣೆ ಕೂಗಿ ಪರಪ್ಪನ ಅಗ್ರಹಾರ ಸೇರಿಕೊಂಡಿದ್ದಾಳೆ. ಇಂದು ಅಮೂಲ್ಯಾಳ ಹೇಳಿಕೆ ಖಂಡಿಸಿ ಹಿಂದೂ ಸಂಘಟನೆ ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಮತ್ತೊಮ್ಮೆ ಪಾಕ್ ಪ್ರೇಮಿ ಆರ್ದ್ರಾ ಎಂಬ ಯುವತಿಯ ಬಂಧನವಾಗಿದೆ.

    ಬೆಂಗಳೂರಿನ ಟೌನ್ ಹಾಲ್ ಮುಂಭಾಗದಲ್ಲಿ ಅಮೂಲ್ಯಾ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿತ್ತು. ಪ್ರತಿಭಟನಾ ಸ್ಥಳಕ್ಕೆ ಮುಕ್ತಿ ಮುಸ್ಲಿಂ, ಮುಕ್ತಿ ಕಾಶ್ಮೀರ್, ಮುಕ್ತಿ ದಲಿತ್ ಕಾರ್ಡ್ ಭಿತ್ತಿಪತ್ರ ಹಿಡಿದು ಬಂದ ಆರ್ದ್ರಾ ಪಾಕ್ ಪರ ಘೋಷಣೆ ಕೂಗಲಾರಂಭಿಸಿದ್ದಾಳೆ. ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಆರ್ದ್ರಾಳನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ.

    ಎಸ್.ಜೆ.ಪಾರ್ಕ್ ಪೊಲೀಸ್ ಠಾಣೆಯಲ್ಲಿ ಆರ್ದ್ರಾ ವಿರುದ್ಧ ಹಿಂದೂ ಪರ ಸಂಘಟನೆಗಳು ದೂರು ದಾಖಲಿಸಿವೆ. ಮುನ್ನೇಚ್ಚರಿಕೆ ಕ್ರಮವಾಗಿ ಆರ್ದ್ರಾಳನ್ನು ಪೊಲೀಸರು ಬಿಗಿ ಬಂದೋಬಸ್ತ್ ನಲ್ಲಿ ಇರಿಸಲಾಗಿದೆ. ಬೆಂಗಳೂರಿನ ಮಲ್ಲೇಶ್ವರಂ ನಿವಾಸಿ ನಾರಾಯಣ ಎಂಬವರ ಪುತ್ರಿಯಾಗಿರುವ ಆರ್ದ್ರಾ ಆರ್ಕಿಟೆಕ್ ಆಗಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿವೆ.