Tag: Artwork

  • ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಹುಟ್ಟು ಹಬ್ಬಕ್ಕೆ ಸಿಕ್ತು ಭರ್ಜರಿ ಗಿಫ್ಟ್

    ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಹುಟ್ಟು ಹಬ್ಬಕ್ಕೆ ಸಿಕ್ತು ಭರ್ಜರಿ ಗಿಫ್ಟ್

    ನಿನ್ನೆ ತಮ್ಮ 40ನೇ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ. ಈ ಬಾರಿ ಅವರು ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲು ಜಪಾನ್ ಗೆ ತೆರಳಿದ್ದರು. ಹಾಗಾಗಿ ಅವರ ನಟನೆಯ ಹಾಗೂ ನಿರ್ಮಾಣದ ಯಾವುದೇ ಪೋಸ್ಟರ್ ರಿಲೀಸ್ ಆಗಿರಲಿಲ್ಲ. ಈ ಕಾರಣದಿಂದಾಗಿಯೇ ಅಭಿಮಾನಿಗಳಿಗೆ ಸಹಜವಾಗಿಯೇ ನಿರಾಸೆ ಆಗಿತ್ತು. ಆ ನಿರಾಸೆಯನ್ನು ಹೋಗಲಾಡಿಸಿದ್ದಾರೆ. ಖ್ಯಾತ ಯುವ ಚಿತ್ರಕಲಾವಿದ ಬಾದಲ್ ನಂಜುಂಡ ಸ್ವಾಮಿ.

    ತಮ್ಮ ವಿಶೇಷ ಕಲಾಕೃತಿ ಮತ್ತು ಅದನ್ನು ಪ್ರಸೆಂಟ್ ಮಾಡುವ ರೀತಿಯಲ್ಲಿ ಯಾವಾಗಲೂ ವಿಶೇಷವನ್ನೇ ಕಾಯ್ದುಕೊಂಡು ಬಂದಿರುವ ಬಾದಲ್, ಈ ಬಾರಿ ರಮ್ಯಾ ಅವರ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿಸಿದ್ದಾರೆ. ಯಲಹಂಕ ಸಮೀಪದ ಗೋಡೆಯ ಮೇಲೆ 35 ಫೀಟ್ ರಮ್ಯಾ ಚಿತ್ರವನ್ನು ಬಿಡಿಸಿದ್ದಾರೆ. ಇದೇ ಮೊದಲ ಬಾರಿಗೆ ಸ್ಯಾಂಡಲ್ ವುಡ್ ನಟಿಯೊಬ್ಬರ ಚಿತ್ರವು ಈ ಪ್ರಮಾಣದಲ್ಲಿ ಮೂಡಿ ಬಂದಿದೆ ಎನ್ನುವುದು ಮತ್ತೊಂದು ವಿಶೇಷ. ಇದನ್ನೂ ಓದಿ: ಜಪಾನ್ ನಲ್ಲಿ ಕುತ್ಕೊಂಡು ತನಗೀಗ 40 ವರ್ಷ ಎಂದು ಘೋಷಿಸಿಕೊಂಡ ರಮ್ಯಾ

    ಸದ್ಯ ರಮ್ಯಾ ಅವರು ಜಪಾನ್ ಗೆ ಹಾರಿದ್ದು, ಅಲ್ಲಿಂದಲೇ ಅಭಿಮಾನಿಗಳಿಗೆ ವಯಸ್ಸಿನ ಮೇಘ ಸಂದೇಶವನ್ನೂ ಕಳುಹಿಸಿದ್ದಾರೆ. ಇವತ್ತು ತಮಗೀಗ 40 ವರ್ಷ ತುಂಬಿದ್ದು, ನಲವತ್ತರ ಕ್ಲಬ್ ನ ಸದಸ್ಯೆಯಾಗಿ ಬಡ್ತಿ ಪಡೆದಿದ್ದಾರೆ. ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಸ್ವತಃ ರಮ್ಯಾ ಅವರೇ ಹಂಚಿಕೊಂಡಿದ್ದರಿಂದ ಒಂದು ರೀತಿಯಲ್ಲಿ ಅಚ್ಚರಿಯೂ ವ್ಯಕ್ತವಾಗಿತ್ತು.

    ರಮ್ಯಾ ಅವರಿಗೆ ಡಾಲಿ ಧನಂಜಯ್, ನಿರ್ಮಾಪಕ ಕಾರ್ತಿಕ್ ಗೌಡ ಸೇರಿದಂತೆ ಸಾಕಷ್ಟು ಕಲಾವಿದರು ಮತ್ತು ತಂತ್ರಜ್ಞರು ಶುಭಾಶಯ ಕೋರಿದ್ದಾರೆ. ಬಹುತೇಕ ಸಂದೇಶಗಳಿಗೆ ಅವರು ಪ್ರತಿಕ್ರಿಯೆ ಕೂಡ ನೀಡಿದ್ದಾರೆ.  ಈ ಹುಟ್ಟು ಹಬ್ಬಕ್ಕೆ ರಮ್ಯಾ ಅವರಿಗೆ ಡಬಲ್ ಧಮಾಕಾ. ಒಂದು ಕಡೆ ಅವರ ನಿರ್ಮಾಣ ಸಂಸ್ಥೆಯಿಂದ ಬರುತ್ತಿರುವ ಸಿನಿಮಾ ಶೂಟಿಂಗ್ ಮುಗಿಸಿದೆ. ಮತ್ತೊಂದು ಕಡೆ ಇನ್ನಷ್ಟೇ ಅವರ ನಟನೆಯ ಉತ್ತರ ಕಾಂಡ ಚಿತ್ರ ಶೂಟಿಂಗ್ ಆಗಬೇಕಿದೆ. ಹಾಗಾಗಿ ರಮ್ಯಾ ಅವರಿಗೆ ಈ ಹುಟ್ಟು ಹಬ್ಬ ವಿಶೇಷವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಅಕ್ಕಸಾಲಿಗನ ಕೈಯಲ್ಲಿ ಅರಳಿತು ಅಕ್ಕಿ ಕಾಳಿಗಿಂತ ಚಿಕ್ಕದಾದ ಗೋಲ್ಡ್ ಮೋದಿ ಕಲಾಕೃತಿ

    ಅಕ್ಕಸಾಲಿಗನ ಕೈಯಲ್ಲಿ ಅರಳಿತು ಅಕ್ಕಿ ಕಾಳಿಗಿಂತ ಚಿಕ್ಕದಾದ ಗೋಲ್ಡ್ ಮೋದಿ ಕಲಾಕೃತಿ

    ಶಿವಮೊಗ್ಗ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 70ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಕ್ಕಸಾಲಿಗರೊಬ್ಬರು ಅಕ್ಕಿಕಾಳಿಗಿಂತ ಚಿಕ್ಕದಾದ ಚಿನ್ನದ ಮೋದಿ ಕಲಾಕೃತಿಯನ್ನು ರಚನೆ ಮಾಡಿದ್ದಾರೆ.

    ಲಾಕ್‍ಡೌನ್‍ನಲ್ಲಿ ಸಮಯ ಮಾಡಿಕೊಂಡ ಅಕ್ಕಸಾಲಿಗರೊಬ್ಬರು, ಚಿನ್ನದಲ್ಲಿ ತನ್ನೊಳಗಿನ ಕಲಾಕೌಶಲ್ಯವನ್ನು ಅರಳಿಸಿದ್ದಾರೆ. ಗೋಲ್ಡ್‍ನಲ್ಲಿ ಮೋದಿ ಅರಳಿಸಿ, ಮನೆಮಾತಾಗಿದ್ದಾರೆ. ಅಂದಹಾಗೆ ಈ ಕಲಾಕೃತಿಗಳನ್ನು ರಚಿಸಿದ ಕಲಾವಿದನ ಹೆಸರು ರವಿಚಂದ್ರ. ಶಿವಮೊಗ್ಗ ಜಿಲ್ಲೆ ಭದ್ರಾವತಿ ನಗರದಲ್ಲಿ ಅಕ್ಕಸಾಲಿಗರಾಗಿರುವ ಇವರಿಗೆ ಏನಾದರೊಂದು ವಿಭಿನ್ನವಾಗಿ ಪ್ರಯತ್ನಿಸಬೇಕೆಂಬ ತುಡಿತವಿದ್ದು, ಇದೀಗ ಈ ಕಲಾಕೃತಿಗಳ ಮಾಡಿದ್ದಾರೆ.

    ಅಂದಹಾಗೆ ಇದೀಗ ಸಣ್ಣದರಲ್ಲಿಯೇ ಅತಿ ಸಣ್ಣ ಚಿಕ್ಕ ಮೋದಿಯನ್ನು ರಚಿಸಿ, ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. 20 ಮಿ.ಗ್ರಾಂ ಬಂಗಾರದ 3.75 ಮಿ.ಮೀ. ಎತ್ತರದ, 3 ಮಿ.ಮೀ. ಅಗಲದ, ಅಕ್ಕಿ ಕಾಳಿಗಿಂತ ಚಿಕ್ಕದಾದ ಪ್ರಧಾನಿ ನರೇಂದ್ರ ಮೋದಿಯವರ ಕಲಾಕೃತಿಯನ್ನು ರಚಿಸಿ ಸೈ ಎನಿಸಿಕೊಂಡಿದ್ದಾರೆ. ಇಂದು ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬವಿದ್ದು, ಇದನ್ನು ಅವರಿಗೆ ಸಮರ್ಪಿಸಿದ್ದಾರೆ.

    ಅಲ್ಲದೇ ಈ ಲಾಕ್‍ಡೌನ್ ಬಿಡುವಿನ ಸಮಯವನ್ನೆ ಉಪಯೋಗಿಸಿಕೊಂಡು ಈ ಚಿಕ್ಕ ಕಲಾಕೃತಿ ರಚಿಸಲು ಸಾಕಷ್ಟು ಪ್ರಯತ್ನ ಪಟ್ಟು ಕೊನೆಗೆ ಸಕ್ಸಸ್ ಕಂಡಿದ್ದಾರೆ. ಕಳೆದ 2 ತಿಂಗಳಿನಿಂದ ಪ್ರತಿದಿನ ಒಂದೆರಡು ಗಂಟೆಗಳ ಕಾಲ ಈ ಕಲಾಕೃತಿ ರಚಿಸಲು ಸಮಯ ವ್ಯಯಿಸಿದ್ದು, ಕೊನೆಗೆ ಈ ಸೂಕ್ಷ್ಮ ಕಲಾಕೃತಿ ರಚಿಸುವಲ್ಲಿ ಸಫಲರಾಗಿದ್ದಾರೆ. ಮೋದಿಯವರು ಓಕೆ ಅಂದರೆ ಸಾಕು ದೆಹಲಿಗೆ ಹೋಗಿ ಇದನ್ನು ಕೊಟ್ಟು ಬರುತ್ತೇನೆ ಎಂಬ ಆಶಯ ಹೊಂದಿದ್ದಾರೆ.

  • ಪರಿಸರ ಜಾಗೃತಿ ಮೂಡಿಸಲು ಉದ್ಭವಿಸಿದ ಪ್ಲಾಸ್ಟಿಕ್ ಬಾಟಲ್ ವಿಘ್ನೇಶ್ವರ

    ಪರಿಸರ ಜಾಗೃತಿ ಮೂಡಿಸಲು ಉದ್ಭವಿಸಿದ ಪ್ಲಾಸ್ಟಿಕ್ ಬಾಟಲ್ ವಿಘ್ನೇಶ್ವರ

    ಭುವನೇಶ್ವರ: ಪರಿಸರ ಜಾಗೃತಿ ಮೂಡಿಸಲು ಹಲವಾರು ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತದೆ. ಆದರೂ ಕೂಡ ಪರಿಸರ ಉಳಿಸಬೇಕಾದ ನಾವು ಪ್ಲಾಸ್ಟಿಕ್, ಕೆಮಿಕಲ್ ಇನ್ನಿತರ ವಸ್ತುಗಳ ಬಳಕೆ, ವಾಯು ಮಾಲಿನ್ಯ, ಜಲ ಮಾಲಿನ್ಯ ಮಾಡಿ ನಿಸರ್ಗದ ಉಸಿರು ಗಟ್ಟಿಸುತ್ತಿದ್ದೇವೆ. ಆದ್ದರಿಂದ ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲು ಪ್ಲಾಸ್ಟಿಕ್‍ನಿಂದ ಹಾಗೂ ಮರಳಿನಲ್ಲಿ ಗಣಪತಿಯನ್ನು ತಯಾರಿಸಿ ಕಲಾವಿದರೊಬ್ಬರು ಎಲ್ಲರ ಮೆಚ್ಚುಗೆ ಪಡೆದಿದ್ದಾರೆ.

    ಒಡಿಶಾ ಮೂಲದ ಅಂತರಾಷ್ಟ್ರೀಯ ಮಟ್ಟದಲ್ಲಿ ಮರಳು ಕಲಾಕೃತಿ ಮಾಡುವಲ್ಲಿ ಹೆಸರು ಗಳಿಸಿರುವ ಸುದರ್ಶನ್ ಪಟ್ನಾಯಕ್ ಅವರು ಈ ವಿಶೇಷ ಗಣಪನ ಕಲಾಕೃತಿ ಮಾಡಿದ್ದಾರೆ. ಪುರಿ ಬೀಚ್‍ನಲ್ಲಿ ಈ ಅದ್ಭುತ ಗಣಪನ ಕಲಾಕೃತಿಯನ್ನು ಮಾಡಲಾಗಿದೆ. ಬೀಚ್ ಮರಳಿನಲ್ಲಿ ಸಿಕ್ಕ ಸುಮಾರು 1 ಸಾವಿರ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಿ ಗಣಪನ ಕಲಾಕೃತಿಯನ್ನು ವಿಶೇಷವಾಗಿ ತಯಾರಿಸಿದ್ದಾರೆ. ಅಲ್ಲದೆ ಅದರ ಮುಂದೆ ಒಮ್ಮೆ ಮಾತ್ರ ಬಳಕೆಗೆ ಬರುವ ಪ್ಲಾಸ್ಟಿಕ್ ಉಪಯೋಗಿಸಬೇಡಿ, ಪರಿಸರವನ್ನು ಉಳಿಸಿ ಎಂದು ಬರೆದು ಒಂದೊಳ್ಳೆ ಸಂದೇಶವನ್ನು ಸಾರಿದ್ದಾರೆ.

    ಪ್ರಧಾನಿ ಮೋದಿ ಅವರ ಏಕ-ಬಳಕೆ ಪ್ಲಾಸ್ಟಿಕ್ ತ್ಯಜಿಸಿ ಅಭಿಯಾನದಿಂದ ಪ್ರೇರಿತರಾಗಿ ಈ ಕಲಾಕೃತಿ ತಯಾರಿಸಿದ್ದೇನೆ ಎಂದು ಪಟ್ನಾಯಕ್ ಹೇಳಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮೋದಿ ಅವರು ರೆಡಿಯೋದಲ್ಲಿ ಪ್ರಸಾರವಾಗುವ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಈ ಅಭಿಯಾದ ಬಗ್ಗೆ ಹೇಳಿದ್ದರು. ಇದನ್ನು ಆಲಿಸಿದ್ದ ಪಟ್ನಾಯಕ್ ಅವರು ಒಂದು ವಿಶೇಷ ಪ್ರಯತ್ನದ ಮೂಲಕ ಸಾರ್ವಜನಿಕರಲ್ಲಿ ಪರಿಸರ ಉಳಿಸಿ ಎಂದು ವಿನಂತಿ ಮಾಡಿದ್ದಾರೆ.

    ಬರೋಬ್ಬರಿ 5 ಟನ್ ಮರಳನ್ನು ಬಳಸಿ ಪಟ್ನಾಯಕ್ ಅವರು 10 ಅಡಿ ಎತ್ತರದ ಗಣೇಶನ ಕಲಾಕೃತಿಯನ್ನು ಮಾಡಿದ್ದಾರೆ. ಅದರ ಸುತ್ತ ಸುಮಾರು 1 ಸಾವಿರ ಪ್ಲಾಸ್ಟಿಕ್ ಬಾಟೆಲ್‍ಗಳನ್ನು ಇರಿಸಿ ಏಕ-ಬಳಕೆ ಪ್ಲಾಸ್ಟಿಕ್ ಬಳಸಬೇಡಿ, ಪರಿಸರ ಉಳಿಸಿ ಎಂದು ಸಂದೇಶವನ್ನು ಕೂಡ ಕಲಾಕೃತಿಯ ಎದುರು ಬರೆದಿದ್ದಾರೆ. ಅದ್ಭುತ ಕಲಾಕೃತಿ ಜೊತೆಗೆ ಪರಿಸರ ಜಾಗೃತಿ ಮೂಡಿಸಿ ಪಟ್ನಾಯಕ್ ಅವರು ಜನರ ಮನ ಗೆದ್ದಿದ್ದಾರೆ.

  • ಅಮೆರಿಕದ ದಾಖಲೆಯನ್ನೇ ಪುಡಿಪುಡಿ ಮಾಡಿ ವರ್ಲ್ಡ್ ರೆಕಾರ್ಡ್ ಮಾಡಿದ ಕೋಲಾರದ ಕುವರ

    ಅಮೆರಿಕದ ದಾಖಲೆಯನ್ನೇ ಪುಡಿಪುಡಿ ಮಾಡಿ ವರ್ಲ್ಡ್ ರೆಕಾರ್ಡ್ ಮಾಡಿದ ಕೋಲಾರದ ಕುವರ

    ಕೋಲಾರ: ಜಿಲ್ಲೆಯ ಮಲ್ಲಿಕಾರ್ಜುನ ರೆಡ್ಡಿ ಎಂಬ ವ್ಯಕ್ತಿ ವಿಶ್ವದ ದಿಗ್ಗಜ ರಾಷ್ಟ್ರ ಅಮೆರಿಕದ ದಾಖಲೆಯನ್ನೇ ಪುಡಿಪುಡಿ ಮಾಡಿ, ಸೂಕ್ಷ್ಮ ಕಲಾಕೃತಿಗಳ ರಚನೆಯಲ್ಲಿ ಗಿನ್ನೀಸ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾರೆ.

    ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಗಡಿ ತೊಪ್ಪನಹಳ್ಳಿಯ ಮಲ್ಲಿಕಾರ್ಜುನ್ ರೆಡ್ಡಿ, ಸೀಮೆ ಸುಣ್ಣದಲ್ಲೇ ಅದ್ಭುತವಾದ ಸಾವಿರಾರು ವಿವಿಧ ಕಲಾಕೃತಿಗಳನ್ನು ಬಿಡಿಸಿ ಸೂಕ್ಷ್ಮ ಕಲಾವಿದನ ಸಾಲಿನಲ್ಲಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸೇರಿದಂತೆ ಇನ್ನೂ ಹಲವಾರು ಸಾಧನೆ ಮಾಡಿದ್ದಾರೆ.

    ಟೂತ್‍ಪಿಕ್‍ನಲ್ಲಿ 17 ಚೈನ್ ಲಿಂಕ್ ಮಾಡಿ ದಾಖಲೆ ಮಾಡಿದ್ದ ಅಮೆರಿಕದ ದಾಖಲೆಯನ್ನು ಮುರಿದು, ಟೂತ್‍ಪಿಕ್‍ನಲ್ಲಿ 28 ಲಿಂಕ್ ಮಾಡುವ ಮೂಲಕ 2005ರ ಫೆಬ್ರವರಿ 21 ರಂದು ಮಲ್ಲಿಕಾರ್ಜುನ ರೆಡ್ಡಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್‍ನಲ್ಲಿ ದಾಖಲೆ ಪುಟ ಸೇರಿದ್ದಾರೆ.

    ಗ್ರಾಮೀಣ ಪ್ರದೇಶದಲ್ಲಿ ಜನಿಸಿದ್ದರು ಬಿ.ಎಸ್.ಸಿ ಬಯೋ ಟೆಕ್ನಾಲಜಿ ವಿದ್ಯಾರ್ಹತೆ ಹೊಂದಿರುವ ಮಲ್ಲಿಕಾರ್ಜುನ್ ಸದ್ಯ ಹಿರಿಯ ಸಂಶೋಧಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚಿಕ್ಕಂದಿನಿಂದಲೇ ಸೂಕ್ಷ್ಮ ಕಲೆಗಳಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಇವರು ಬಾಲ್ಯದಿಂದಲೇ ಸಾವಿರಾರು ವಿವಿಧ ಸೂಕ್ಷ್ಮ ಕಲಾಕೃತಿಗಳನ್ನು ನಿರ್ಮಿಸಿದ್ದಾರೆ.

    ಸೀಮೆ ಸುಣ್ಣದಲ್ಲಿ 62 ಸಾವಿರ ವಿವಿಧ ಗಣ್ಯರ, ಸ್ಥಳಗಳು, ದೇವರ ವಿಗ್ರಹಗಳನ್ನು ಕೆತ್ತನೆ ಮಾಡಿರುವ ಇವರು, ಒಂದೇ ಒಂದು ಅಕ್ಕಿ ಕಾಳಿನಲ್ಲಿ 18 ವಿವಿಧ ವಿಗ್ರಹಗಳನ್ನು ಮಾಡಿರುವುದು ಮತ್ತೊಂದು ವಿಶೇಷ ಸಾಧನೆಯಾಗಿದೆ. ಚಿಕ್ಕಂದಿನಿಂದ ವಿದ್ಯಾಭ್ಯಾಸಕ್ಕಿಂತ ಸೂಕ್ಷ್ಮ ಕಲೆಗಳಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಮಲ್ಲಿಕಾರ್ಜುನ್ ಲಾಸ್ಟ್ ಬೆಂಚ್ ವಿದ್ಯಾರ್ಥಿ. ಕೊನೆ ಬೆಂಚ್‍ನಲ್ಲಿ ಕುಳಿತುಕೊಂಡು ತನ್ನ ಕೈಗೆ ಸುಲಭವಾಗಿ ಸಿಗುತ್ತಿದ್ದ ಅಕ್ಕಿ ಕಾಳು, ಸೀಮೆ ಸುಣ್ಣ, ಟೂತ್ ಪಿಕ್‍ನಲ್ಲಿ ವಿವಿಧ ಕಲಾಕೃತಿಗಳನ್ನು ಬಿಡಿಸುತ್ತಾ ಸಾಧನೆ ಮಾಡಿದ ಅಪ್ಪಟ ಹಳ್ಳಿ ಪ್ರತಿಭೆ.

    ಅದಾದ ನಂತರ ಸ್ನೇಹಿತರ ಸಮ್ಮುಖದಲ್ಲಿ ವಿಶ್ವ ದಾಖಲೆಯ ಹಂತ ತಲುಪಿರುವ ಇವರು, ಸದ್ಯ ಹರಪ್ಪ-ಮಹೆಂಜೋದಾರೋ ಸಂಸ್ಕೃತಿ ಕುರಿತು ಹೆಚ್ಚಿನ ಸಂಶೋಧನ ಅಧ್ಯಯನ ಮಾಡುತ್ತಿದ್ದಾರೆ. ಇವರ ಸಾಧನೆ ಪರಿಗಣಿಸಿ ವಿವಿಧ ವಿಶ್ವವಿದ್ಯಾಲಯಗಳು ವಿಶೇಷ ಪುರಸ್ಕಾರಗಳನ್ನು ನೀಡಿ ಗೌರವಿಸಿದರೆ, ದೇಶದ ವಿವಿಧ ಗಣ್ಯರಿಂದ ಪ್ರಶಂಸೆಗಳು ದೊರೆತಿವೆ. ಸದ್ಯ ತೊಪ್ಪನಹಳ್ಳಿಯಲ್ಲಿ ತಂದೆ ತಾಯಿಯ ಜೊತೆಗೆ ಸಮಾಜ ಸೇವೆ ಮಾಡುತ್ತಾ ಸಂಶೋಧನೆಗಳಲ್ಲಿ ತೊಡಗಿದ್ದಾರೆ.

    ಒಟ್ಟಿನಲ್ಲಿ ಸೂಕ್ಷ್ಮ ಕಲೆಯಿಂದಲೇ ದೊಡ್ಡ ಸಾಧನೆ ಮಾಡುವ ಮೂಲಕ ವಿಶ್ವದ ಗಮನ ಸೆಳೆದಿರುವ ಮಲ್ಲಿಕಾರ್ಜುನ ರೆಡ್ಡಿ ಗಿನ್ನಿಸ್ ದಾಖಲೆ ಬರೆದ ವ್ಯಕ್ತಿಯಾಗಿದ್ದಾರೆ. ಹೀಗೆ ಮತ್ತಷ್ಟು ಮೊಗದಷ್ಟು ಸಾಧನೆ ಮಾಡಬೇಕೆನ್ನುವ ದಾಹದಿಂದ ದೊಡ್ಡ ಸಂಶೋಧನೆಗಳನ್ನು ಮಾಡಲು ಮುಂದಾಗಿರುವ ಇವರಿಗೆ ಹೆಚ್ಚು ಪ್ರೋತ್ಸಾಹ ಸಿಗಬೇಕಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಕೋಳಿ ಮೊಟ್ಟೆಯಲ್ಲಿ ಅರಳಿದ ಕಲಾಕೃತಿ!

    ಕೋಳಿ ಮೊಟ್ಟೆಯಲ್ಲಿ ಅರಳಿದ ಕಲಾಕೃತಿ!

    ಬೆಂಗಳೂರು: ಸಿಲಿಕಾನ್ ಸಿಟಿಯ ಯುವಕನೊಬ್ಬ ತನ್ನ ಸಾಧನೆಯ ಮೂಲಕ ಇತರರಿಗೆ ಮಾರ್ಗದರ್ಶಿಯಾಗಿದ್ದು, ಮೊಟ್ಟೆಯಲ್ಲಿ ಕಲಾಕೃತಿಗಳನ್ನು ಮಾಡಿದ್ದಾರೆ.

    ಮಲ್ಲೇಶ್ವರಂನ ನಿವಾಸಿಯಾದ ಅಭಿಷೇಕ್ ಅವರು ಕೈಯಿಂದ ವಿಶಿಷ್ಟ ಹಾಗೂ ವಿಭಿನ್ನವಾಗಿ ಮೊಟ್ಟೆಗಳ ಕಲಾಕೃತಿಗಳ ಸಾಧನೆ ಮಾಡಿದ್ದಾರೆ. ಚಿಕ್ಕವಯಸ್ಸಿನಿಂದಲೇ ಇವರ ತಂದೆ ಮಾಡುತ್ತಿದ್ದ ಕೊಬ್ಬರಿಯ ಕಲೆಯನ್ನ ನೋಡಿ ಬೆಳೆದವರು. ತಾನೂ ಕೂಡ ಅಪ್ಪನಂತೆ ಕಲೆಯಲ್ಲಿ ತೊಡಗಿಸಿಕೊಳ್ಳಬೇಕು ಅಂತ ನಿರ್ಧಾರ ಮಾಡಿದ್ದರು.

    ನಾನು ತಂದೆಗಿಂತಲೂ ವಿಭಿನ್ನವಾಗಿ ಕಲೆಯಲ್ಲಿ ಸಾಧನೆ ಮಾಡಬೇಕು ಅಂತ ಯೋಚನೆ ಮಾಡಿದ್ದೆ. ಅದೇ ರೀತಿ ಕೋಳಿ ಮೊಟ್ಟೆಯನ್ನೇ ಸ್ಪೂರ್ತಿಯಾಗಿಸಿಕೊಂಡು ನಾನು ಕಳೆದ 2 ವರ್ಷಗಳಿಂದ ಮೊಟ್ಟೆಯ ಸಿಪ್ಪೆಗಳಿಗೆ ಜೀವ ತುಂಬುತ್ತಿದ್ದೇನೆ. ಇದುವರೆಗೂ ಸುಮಾರು 60ಕ್ಕೂ ಹೆಚ್ಚು ಮೊಟ್ಟೆಯ ಸಿಪ್ಪೆಗಳಿಗೆ ಅದ್ಭುತ ರೂಪವನ್ನ ನೀಡಿದ್ದೇನೆ. ಕಲೆಗೆ ಹಾಗೂ ಕಲಾವಿದರಿಗೆ ಜಾತಿ ಹಾಗೂ ಮತದ ಬಂಧನವಿಲ್ಲ ಎಂದು ಕಲಾವಿದ ಅಭಿಷೇಕ್ ಹೇಳಿದ್ದಾರೆ.

    ಸಾಧಿಸುವ ಭರದಲ್ಲಿ ಅಭಿಷೇಕ್ ಮನೆಗೆ ಕೆ.ಜಿ ಗಟ್ಟಲೇ ಮೊಟ್ಟೆಯನ್ನ ತಂದಿಟ್ಟಿದ್ದನು. ನಾವು ಮೊದಲೇ ಬ್ರಾಹ್ಮಣರು, ಮನೇಲಿ ಮೊಟ್ಟೆ ತಂದರೆ ಜನ ಏನು ಅಂದುಕೊಳ್ತಾರೆ. ಮೊದಲು ಅದನ್ನು ಹೊರಗೆ ಹಾಕು ಇಲ್ಲಾಂದರೆ ನಿನ್ನನ್ನ ನಾವು ಹೊರಗೆ ಹಾಕುತ್ತೀವಿ ಅಂತ ಹೇಳಿದ್ದೆವು. ಆದರೆ ದಿನ ಕಳೆದಂತೆ ಅವರ ಕಲೆಯನ್ನ ನೋಡಿದ ನಾವು ಪ್ರೋತ್ಸಾಹ ನೀಡಿದೆವು ಎಂದು ಅಭಿಷೇಕ್ ತಂದೆ ಪ್ರಕಾಶ್ ಅವರು ಹೇಳಿದ್ದಾರೆ.

    ಯಾವುದೇ ಕೆಲಸವನ್ನ ಕಷ್ಟಪಟ್ಟು ಮಾಡುವುದಕ್ಕಿಂತ ಇಷ್ಟಪಟ್ಟು ಮಾಡಿದರೆ ಯಶಸ್ಸು ಸಾಧಿಸಬಹುದು. ಇನ್ನು ಅಭಿಷೇಕ್ ಮುಂದೊಂದು ದಿನ ಅವರು ಮಾಡಿದ ಕಲಾಕೃತಿಗಳನ್ನ ಪ್ರದರ್ಶಿಸುವ ಆಸೆಯನ್ನ ಹೊಂದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv