Tag: Artists

  • ಪ್ರಸಿದ್ಧ ಭಾಗವತ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ನೂತನ ಯಕ್ಷಗಾನ ಮೇಳ

    ಪ್ರಸಿದ್ಧ ಭಾಗವತ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ನೂತನ ಯಕ್ಷಗಾನ ಮೇಳ

    – ಪಾವಂಜೆ ಜ್ಞಾನಶಕ್ತಿ ಕೃಪಾಪೋಷಿತ ಯಕ್ಷಗಾನ ಮಂಡಳಿ
    – ದೇವಿ ಮಹಾತ್ಮೆ ಪ್ರದರ್ಶನಕ್ಕಾಗಿಯೇ ತಂಡ

    ಮಂಗಳೂರು: ತೆಂಕುತಿಟ್ಟು ಯಕ್ಷಗಾನದ ಮೇರು ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರ ಪ್ರಧಾನ ಭಾಗವತಿಕೆಯೊಂದಿಗೆ ಹೊಸ ಯಕ್ಷಗಾನ ಮೇಳ ಆರಂಭಗೊಂಡಿದ್ದು, ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಯಕ್ಷಗಾನ ರಂಗಸ್ಥಳದಲ್ಲಿ ಮೇಳೈಸಲಿದ್ದಾರೆ.

    ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮೇಳದಿಂದ ಹೊರ ಬಂದ ಬಳಿಕ ಪಟ್ಲ ಅವರು ಹೊಸ ಯಕ್ಷಗಾನ ಮೇಳ ಮಾಡುತ್ತಾರೆ ಎಂಬ ಸುದ್ದಿ ಇತ್ತು, ಅದು ಈಗ ನಿಜವಾಗಿದೆ. ನವೆಂಬರ್ ತಿಂಗಳ 27ರಿಂದ ಪಾವಂಜೆ ಜ್ಞಾನಶಕ್ತಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಪ್ರದರ್ಶನ ಆರಂಭವಾಗಲಿದೆ ಎಂದು ಪಾವಂಜೆ ದೇವಳದ ಆಡಳಿತ ಮೊಕ್ತೇಸರ ಶಶೀಂದ್ರ ಕುಮಾರ್ ಹೇಳಿದ್ದಾರೆ.

    ಮೇಳದ ಯಕ್ಷಗಾನ ಪ್ರದರ್ಶನವು ಕಾಲಮಿತಿಯದ್ದಾಗಿದ್ದು, ಸಾಮಾನ್ಯವಾಗಿ ಸಂಜೆ 6 ಗಂಟೆಯಿಂದ 11ರವರೆಗಿನ ಅವಧಿಯಲ್ಲಿ ನಡೆಯಲಿದೆ. ಈ ಎಲ್ಲಾ ಪ್ರದರ್ಶನಗಳನ್ನು ಕೋವಿಡ್-19ರ ಪರಿಸ್ಥಿತಿಯಲ್ಲಿ ಸರ್ಕಾರ ನೀಡುವ ನಿರ್ದೇಶನಗಳಿಗೆ ಒಳಪಟ್ಟು ನಡೆಸಲಾಗುವುದು ಎಂದು ಪಟ್ಲ ಸತೀಶ್ ಶೆಟ್ಟಿ ಹೇಳಿದ್ದಾರೆ.

    ನೂತನ ಮೇಳದ ಕಲಾವಿದರು
    ಪಾವಂಜೆ ಜ್ಞಾನಶಕ್ತಿ ಕೃಪಾಪೋಷಿತ ಯಕ್ಷಗಾನ ಮಂಡಳಿಯಲ್ಲಿ ಪಟ್ಲ ಸತೀಶ್ ಶೆಟ್ಟಿ ಅವರು ಪ್ರಧಾನ ಭಾಗವತರಾಗಿದ್ದು, ಪ್ರಫುಲ್ಲಚಂದ್ರ ನೆಲ್ಯಾಡಿ ಭಾಗವತಿಕೆಯಲ್ಲಿ ಸಾಥ್ ನೀಡಲಿದ್ದಾರೆ. ಹಿಮ್ಮೇಳದಲ್ಲಿ ಪದ್ಮನಾಭ ಉಪಾಧ್ಯಾಯ, ಗುರುಪ್ರಸಾದ್ ಬೊಳ್ಳಿಂಜಡ್ಕ, ಪ್ರಶಾಂತ್ ವಗೆನಾಡು, ಪೂರ್ಣೇಶ್ ಆಚಾರ್ಯ ಇರಲಿದ್ದಾರೆ. ಉಜಿರೆ ನಾರಾಯಣ, ಸಂದೇಶ್ ಮಂದಾರ ಹಾಸ್ಯ ಪಾತ್ರಧಾರಿಗಳಾಗಿ ಬಣ್ಣ ಹಚ್ಚಲಿದ್ದಾರೆ.

    ಅಕ್ಷಯ್ ಕುಮಾರ್, ರಾಜೇಶ್ ನಿಟ್ಟೆ, ಯೋಗೀಶ್ ಕಡಬ, ವಿಶ್ವಾಸ್ ಕಾವೂರು ಸ್ತ್ರೀಪಾತ್ರಧಾರಿಗಳಾಗಲಿದ್ದಾರೆ. ಪ್ರಧಾನ ವೇಷಧಾರಿಗಳಾಗಿ ರಾಧಾಕೃಷ್ಣ ನಾವಡ, ದಿವಾಣ ಶಿವಶಂಕರ ಭಟ್, ಸಂತೋಷ್ ಮಾನ್ಯ, ರಾಕೇಶ್ ರೈ, ಸತೀಶ್ ನೈನಾಡು, ಮಾಧವ ಕೊಳ್ತಮಜಲು, ಮೋಹನ್ ಬೆಳ್ಳಿಪ್ಪಾಡಿ, ಮನೀಷ್ ಪಾಟಾಳಿ, ಲೋಕೇಶ ಮುಚ್ಚೂರು, ಹರಿರಾಜ್ ಕಿನ್ನಿಗೋಳಿ, ರೋಹಿತ್, ದಿವಾಕರ, ಲಕ್ಷಣ, ಮಧುರಾಜ್, ಭುವನ್ ಮತ್ತಿತರು ಇರಲಿದ್ದಾರೆ.

    ದೇವಿ ಮಹಾತ್ಮೆ ಪ್ರದರ್ಶನಕ್ಕಾಗಿಯೇ ತಂಡ
    ಕಟೀಲು ಮೇಳದಲ್ಲಿ ಪ್ರಧಾನ ಭಾಗವತರಾಗಿದ್ದ ಸತೀಶ್ ಪಟ್ಲರಿಗೆ ಶ್ರೀದೇವಿ ಮಹಾತ್ಮೆ ಪ್ರಸಂಗ ಸಾಕಷ್ಟು ಪ್ರಖ್ಯಾತಿ ತಂದು ಕೊಟ್ಟಿದ್ದು, ಇಲ್ಲಿಯೂ ಕೂಡ ದೇವಿ ಮಹಾತ್ಮೆ ಪ್ರಸಂಗಕ್ಕೆ ಕಲಾವಿದರು ಸೆಟ್ ಆದಂತೆ ಇದ್ದಾರೆ. ಅಕ್ಷಯ್ ಕುಮಾರ್ ದೇವಿ, ರಾಜೇಶ್ ನಿಟ್ಟೆ ಮಾಲಿನಿ, ಸತೀಶ್ ನೈನಾಡು ಮಹಿಷಾಸುರ, ರಾಧಾಕೃಷ್ಣ ನಾವಡ ರಕ್ತಬೀಜ, ಲೋಕೇಶ್ ಮುಚ್ಚೂರು ಮತ್ತು ಬೆಳ್ಳಿಪಾಡಿ ಮೋಹನ್ ಚಂಡ- ಮುಂಡರು ಹೀಗೆ ದೇವಿ ಮಹಾತ್ಮೆ ಪ್ರಸಂಗಕ್ಕೆ ಸೆಟ್ ಆಗುವಂತೆ ಕಲಾವಿದರ ಆಯ್ಕೆ ಆದಂತೆ ಇದೆ.

    ಯಕ್ಷಗಾನದ ಬುಕಿಂಗ್ ಪ್ರಕ್ರಿಯೆ ಆರಂಭವಾಗಿದ್ದು, ಪಟ್ಲ ಸತೀಶ್ ಶೆಟ್ಟಿ ಅವರ ಕಂಠಸಿರಿಯನ್ನು ಅವರೇ ನೇತೃತ್ವವಹಿಸಿದ ಯಕ್ಷಗಾನ ಮೇಳದೊಂದಿಗೆ ನೋಡಿ ಆನಂದಿಸಲು ಅವರ ಅಭಿಮಾನಿಗಳು ಕಾತುರರಾಗಿರೋದಂತು ಸತ್ಯ. ಹಿಂದಿನಿಂದಲೂ ಪಾವಂಜೆ ಕ್ಷೇತ್ರ ಯಕ್ಷಗಾನಕ್ಕೆ ಗರಿಷ್ಠ ಮಟ್ಟದಲ್ಲಿ ಪ್ರೋತ್ಸಾಹ ನೀಡುತ್ತಿದ್ದು, ಇಲ್ಲಿಂದ ಹೊರಡುವ ನೂತನ ಮೇಳ ಯಶಸ್ಸಾಗುವುದರಲ್ಲಿ ಸಂಶಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

  • ರಜನಿಕಾಂತ್ ಸಂಘಟನೆಯಿಂದ ಹಿರಿಯ ಕಲಾವಿದರಿಗೆ ಸಹಾಯ

    ರಜನಿಕಾಂತ್ ಸಂಘಟನೆಯಿಂದ ಹಿರಿಯ ಕಲಾವಿದರಿಗೆ ಸಹಾಯ

    – 40 ಹಿರಿಯ ಕಲಾವಿದರಿಗೆ ದಿನಸಿ ಕಿಟ್ ವಿತರಣೆ

    ಬೆಂಗಳೂರು: ಕರ್ನಾಟಕ ರಾಜ್ಯ ರಜನಿಕಾಂತ್ ಸಂಘಟನೆಯ ರಜನಿ ಸಂತೋಷ್ ಮತ್ತು ತಂಡದವರು ಸುಮಾರು 40 ಜನ ಹಿರಿಯ ಕಲಾವಿದರಿಗೆ ಒಂದು ತಿಂಗಳಿಗಾಗುವಷ್ಟು ದಿನಸಿ ಕಿಟ್‍ಗಳನ್ನು ನೀಡುವ ಮೂಲಕ ಸಹಾಯ ಮಾಡಿದ್ದಾರೆ.

    ಪಬ್ಲಿಕ್ ಟಿವಿ ಕಚೇರಿಗೆ ಕರೆ ಮಾಡಿ ಮಾಹಿತಿ ಪಡೆದು. ಬೆಂಗಳೂರಿನಿಂದ ಸುಮಾರು 70 ಕಿ.ಮೀ.ದೂರದಲ್ಲಿರುವ ಕುಂಬಳೆ ಗ್ರಾಮದ ಹಿರಿಯ ಕಲಾವಿದರಿಗೆ ದಿನಸಿ ಕಿಟ್‍ಗಳನ್ನು ವಿತರಿಸಿದ್ದಾರೆ. ಸುಮಾರು ಎರಡು ತಿಂಗಳಿಂದ ಈ ಬಡ ಕಲಾವಿದರಿಗೆ ಯಾವುದೇ ಕೆಲಸವಿಲ್ಲದೆ ಊಟಕ್ಕೆ ಪರದಾಡುತ್ತಿದ್ದರು. ವಿಷಯ ತಿಳಿದ ಕರ್ನಾಟಕ ರಾಜ್ಯ ರಜನಿಕಾಂತ್ ಸಂಘಟನೆಯ ರಜನಿ ಸಂತೋಷ್ ಮತ್ತು ತಂಡ ಬೆಂಗಳೂರಿನಿಂದ ಸುಮಾರು 70 ಕಿ.ಮೀ.ದೂರ ತೆರಳಿ ಕಲಾವಿದರಿಗೆ ಸಹಾಯ ಮಾಡಿದೆ.

    ಸಂಘಟನೆಯ ಸದಸ್ಯರು ಸುಮಾರು 40 ಹಿರಿಯ ಕಲಾವಿದರಿಗೆ ಒಂದು ತಿಂಗಳಿಗಾಗುವಷ್ಟು ದಿನಸಿ ಕಿಟ್ ನೀಡಿ ಮಾನವೀಯತೆ ಮೆರೆದಿದ್ದಾರೆ. ದಿನಸಿ ಪಡೆದ ಕಲಾವಿದರು ಸಂತಸ ವ್ಯಕ್ತಪಡಿಸಿದ್ದು, ದಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.

  • ಕಾರವಾರಕ್ಕೆ ದಿಢೀರ್ ಭೇಟಿ ನೀಡಿದ ಅಮಿತ್ ಶಾ, ಅಮಿತಾಬ್ ಬಚ್ಚನ್- ಸಮೋಸ ನೀಡಿ ಸ್ವಾಗತಿಸಿದ ಸರ್ವರ್ ರಾಮು

    ಕಾರವಾರಕ್ಕೆ ದಿಢೀರ್ ಭೇಟಿ ನೀಡಿದ ಅಮಿತ್ ಶಾ, ಅಮಿತಾಬ್ ಬಚ್ಚನ್- ಸಮೋಸ ನೀಡಿ ಸ್ವಾಗತಿಸಿದ ಸರ್ವರ್ ರಾಮು

    ಕಾರವಾರ: ರಾತ್ರೋ ರಾತ್ರಿ ಅಮಿತ್ ಶಾ, ಅಮಿತಾಬ್ ಬಚ್ಚನ್, ಸುದೀಪ್, ಪುನೀತ್ ರಾಜ್ ಕುಮಾರ್ ಕಾರವಾರದ ನಗರದ ಮಾರುತಿ ಗಲ್ಲಿಯ ಬೀದಿಯಲ್ಲಿ ಬಂದು ನಿಂತಿದ್ದರು. ಇವರನ್ನು ನೋಡಲು ಸಾವಿರಾರು ಜನರು ಮುಗಿಬಿದ್ದು, ಇವರ ಜೊತೆ ಸೆಲ್ಫಿ ತಗೆದುಕೊಂಡರು. ಅರೇ ಒಂದೊಂದು ದಿಕ್ಕಿನಲ್ಲಿರುವ ಈ ಗಣ್ಯರು ಒಟ್ಟಿಗೆ ಕಾರವಾರದಲ್ಲಿ ಬಂದಿದ್ದು ಏಕೆ ಅಂತೀರಾ? ಕನ್ಫ್ಯೂಸ್ ಆಗಬೇಡಿ ಇಲ್ಲಿದೆ ವಿಶೇಷ.

    ಪ್ರತಿವರ್ಷ ಡಿಸೆಂಬರ್ ತಿಂಗಳ ಮಧ್ಯಭಾಗದಲ್ಲಿ ಕಾರವಾರ ನಗರದ ಮಾರುತಿ ದೇವಸ್ಥಾನದ ಜಾತ್ರೋತ್ಸವ ನಡೆಯುತ್ತದೆ. ಈ ಜಾತ್ರೋತ್ಸವ ರಂಗೋಲಿ ಜಾತ್ರೆ ಎಂದೇ ಪ್ರಸಿದ್ಧಿ ಪಡೆದಿದೆ. ಕಾರವಾರ ನಗರದಲ್ಲಿಯೇ ಈ ಜಾತ್ರೆ ವಿಶೇಷ ಮಹತ್ವ ಹೊಂದಿದ್ದು, ಜಾತ್ರೆಯ ದಿನ ರಾತ್ರಿ ದೇವರ ಪಲ್ಲಕ್ಕಿ ಮಾರುತಿ ಗಲ್ಲಿ ಹಾಗೂ ಬ್ರಾಹ್ಮಣ ಗಲ್ಲಿಗಳಲ್ಲಿ ಪ್ರದಕ್ಷಿಣೆ ಹಾಕುತ್ತದೆ. ಈ ವೇಳೆ ತಳಿರು ತೋರಣ ಹಾಗೂ ರಂಗೋಲಿ ಬಿಡಿಸಿ ಅನಾದಿಕಾಲದಿಂದಲೂ ದೇವರನ್ನು ಬರಮಾಡಿಕೊಳ್ಳುವುದು ವಾಡಿಕೆ. ಆದರೇ ಇದರ ಜೊತೆಗೆ ಪ್ರತಿ ಮನೆಯ ಮುಂದೆಯೇ ಆಂಜನೇಯನ ಸೇವೆ ರೂಪದಲ್ಲಿ ಒಬ್ಬರಿಗಿಂತ ಒಬ್ಬರು ವಿಶೇಷ ರಂಗೋಲಿ ಬಿಡಿಸುವ ಸಂಪ್ರದಾಯ ಬೆಳೆದುಕೊಂಡು ಬಂದಿದೆ.

    ಹೀಗೆ ಬೆಳೆದುಕೊಂಡು ಬಂದ ಸಂಪ್ರದಾಯವನ್ನು ಉಳಿಸಿಕೊಳ್ಳಲು ದೇವಸ್ಥಾನದ ಆಡಳಿತ ವರ್ಗವೇ ರಂಗೋಲಿ ಸ್ಪರ್ಧೆಯನ್ನಿಡುತ್ತದೆ. ರಂಗೋಲಿ ಹಾಕುವುದು, ಸ್ಪರ್ದೆಯಲ್ಲಿ ಗೆಲ್ಲುವುದು ಆಂಜನೇಯ ಸ್ವಾಮಿ ದೇವಸ್ಥಾನದ ಸುತ್ತಮುತ್ತ ಇರುವ ಗಲ್ಲಿಯ ಜನರ ಪ್ರತಿಷ್ಠೆಯಾಗಿ ಬದಲಾಯಿತು.

    ಸಾಮಾಜಿಕ ಕಳಕಳಿಯನ್ನು ಬಿಂಬಿಸುತ್ತೆ ರಂಗೋಲಿ:
    ಕಾರವಾರದ ಮಾರುತಿ ಗಲ್ಲಿಯಲ್ಲಿ ರಂಗೋಲಿ ನೋಡುವುದೇ ಒಂದು ಹಬ್ಬದ ಸಂಭ್ರಮ. ಸಂಪ್ರದಾಯಿಕ ರಂಗೋಲಿ ಜೊತೆ ಕೆಲವರು ತಮಗೆ ಇಷ್ಟವಾದ ಚಲನಚಿತ್ರ ನಟ, ರಾಜಕಾರಣಿಗಳ ಚಿತ್ರ ಬಿಡಿಸಿದರೆ, ಇನ್ನೂ ಕೆಲವರು ಸಾಮಾಜಿಕ ಕಳಕಳಿ ಬಿಂಬಿಸುವ ಚಿತ್ರಗಳನ್ನು ಬಿಡಿಸುತ್ತಾರೆ. ಜೊತೆಗೆ ರಂಗೋಲಿ ಬಿಡಿಸುವವರಿಗೆ ಇಷ್ಟವಾದ ಜನರು ಕೂಡ ಈ ಜಾತ್ರೆಯ ದಿನ ಈ ಬೀದಿಯಲ್ಲಿ ರಂಗೋಲಿಯಲ್ಲಿ ಮೂಡುತ್ತಾರೆ.

    ಕಾರವಾರದ ಹೊಟಲ್ ಸರ್ವರ್ ರಂಗೋಲಿಯಲ್ಲಿ:
    ಕಾರವಾರದಲ್ಲಿರುವ ಉಡುಪಿ ಮೂಲದ ಹೋಟಲ್ ಒಂದರಲ್ಲಿ 40 ವರ್ಷಗಳಿಂದ ಸರ್ವರ್ ಆಗಿ ಕೆಲಸ ಮಾಡುತ್ತಿರುವ ರಾಮು ಎಂಬವರ ನಿಸ್ವಾರ್ಥ ಸೇವೆಯನ್ನು ನೋಡಿದ ಕಾರವಾರ ನಗರದ ಮಾರುತಿ ಗಲ್ಲಿಯ ವಸಂತ್ ವಾಡ್ಕರ್‍ರವರು ಅವರ ಭಾವಚಿತ್ರವನ್ನು ರಂಗೋಲಿಯಲ್ಲಿ ಮೂಡಿಸುವ ಮೂಲಕ ಅವರ ಸೇವೆಯನ್ನು ಸ್ಮರಿಸಿದ್ದಾರೆ. ಆದರೆ ವಾಡ್ಕರ್ ಹೋಟೆಲ್ ಮಾಲೀಕರಲ್ಲ. ಈ ಹೋಟೆಲ್ ಗೆ ಗ್ರಾಹಕರು. ಆದರೂ ಸರ್ವರ್ ಒಬ್ಬರ ನಿಸ್ವಾರ್ಥ ಸೇವೆಯನ್ನು ಇಲ್ಲಿ ಸ್ಮರಿಸಿದ್ದು ಎಲ್ಲರ ಮೆಚ್ಚುಗೆಗೆ ಕಾರಣವಾಗುವ ಜೊತೆಗೆ ಸರ್ವರ್ ರಾಮು ಸೆಲಬ್ರಿಟಿಯಾಗಿಬಿಟ್ಟಿದ್ದಾರೆ.

    ಈ ಜಾತ್ರೆಯು ರಾತ್ರಿಯಿಂದ ಮುಂಜಾನೆವರೆಗೆ ನಡೆಯುತ್ತದೆ. ಒಂದೆಡೆ ಈ ಬಾರಿ ದುಬಾರಿಯಾದ ಈರುಳ್ಳಿಯಿಂದ ಮಾಡಿದ ಕಲಾಕೃತಿ, ಧಾನ್ಯ ಕಲಾಕೃತಿ, ಹೂವುಗಳ ರಂಗೋಲಿ ಚಿತ್ರಗಳು ಎಲ್ಲರ ಗಮನ ಸೆಳೆಯಿತು. ಇನ್ನೊಂದೆಡೆ ಯಕ್ಷಗಾನ, ಸಿನಿಮಾ ನಟರ ರಂಗೋಲಿ ಚಿತ್ರಗಳು ಕಲಾವಿದನ ಕೈನಲ್ಲಿ ಅರಳಿ ಎದ್ದು ಬಂದಂತೆ ಭಾಸವಾಗುತಿತ್ತು. ಜಾತ್ರೆ ನೋಡಲು ಕೇವಲ ಕಾರವಾರಿಗರು ಮಾತ್ರ ಇರದೇ ನೆರೆಯ ಗೋವಾ, ಮಹರಾಷ್ಟ್ರ, ರಾಜಸ್ತಾನನಿಂದ ಸಹ ಇಲ್ಲಿಗೆ ಜನರು ಬಂದು ಈ ವಿಶೇಷ ರಂಗೋಲಿ ಜಾತ್ರೆಯನ್ನು ನೋಡಿ ಕಣ್ತುಂಬಿಕೊಂಡರು.

  • ಮಂಡ್ಯಗೆ 5 ಸಾವಿರ ಕೋಟಿ-ಬೆಳಗಾವಿಗೆ ಚಿಲ್ಲರೆ ಕಾಸು

    ಮಂಡ್ಯಗೆ 5 ಸಾವಿರ ಕೋಟಿ-ಬೆಳಗಾವಿಗೆ ಚಿಲ್ಲರೆ ಕಾಸು

    ಬೆಳಗಾವಿ: ಹೆಚ್.ಡಿ.ಕುಮಾರಸ್ವಾಮಿ ಸರ್ಕಾರ ಕೇವಲ ಮೈಸೂರು ಕರ್ನಾಟಕಕ್ಕೆ ಮಾತ್ರ ಸೀಮಿತ ಅನ್ನೋ ಟೀಕೆ ನಡುವೆಯೇ, ಇದನ್ನು ರುಜುವಾತು ಮಾಡಿಸುವ ಘಟನೆ ಬೆಳಕಿಗೆ ಬಂದಿದೆ. ಮಂಡ್ಯಗೆ 5 ಸಾವಿರ ಕೋಟಿ ಬಿಡುಗಡೆ ಮಾಡೋ ಸರ್ಕಾರ, ಬೆಳಗಾವಿಯ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಉತ್ಸವಗಳ ಕಲಾವಿದರಿಗೆ ಲಕ್ಷಾಂತರ ರೂಪಾಯಿಗಳನ್ನು ಬಾಕಿ ಉಳಿಸಿಕೊಂಡಿದೆ.

    ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ನಮ್ಮ ದೇಶದ ಹೆಮ್ಮೆ. ಚೆನ್ನಮ್ಮನ ತ್ಯಾಗ ಬಲಿದಾನ ಹಾಗೂ ಸಂಗೊಳ್ಳಿ ರಾಯಣ್ಣನ ಶೌರ್ಯವನ್ನು ಈ ಪೀಳಿಗೆಗೆ ಮುಟ್ಟಿಸಬೇಕೆಂಬ ದೃಷ್ಟಿಯಿಂದ 3 ದಿನಗಳ ಕಾಲ ಪ್ರತಿ ವರ್ಷ ಸರ್ಕಾರ ಉತ್ಸವ ನಡೆಸಿಕೊಂಡು ಬರುತ್ತಿದ್ದು, ಇವು ಕಾಟಾಚಾರಕ್ಕೆ ಸೀಮಿತವಾಗಿವೆ. ಯಾಕಂದ್ರೆ, ಉತ್ಸವದಲ್ಲಿ ಭಾಗವಹಿಸಿರೋ ಕಲವಾವಿದರಿಗೆ 30 ಲಕ್ಷಕ್ಕೂ ಹೆಚ್ಚಿನ ಹಣ ಬಾಕಿ ಉಳಿಸಿಕೊಳ್ಳಲಾಗಿದೆ. ಕಲಾವಿದರ ತಂಡ ಹಾಗೂ ಪೆಂಡಾಲ್ ಸೇರಿದಂತೆ ಇನ್ನಿತರ ಕೆಲಸಗಾರರಿಗೂ ಜಿಲ್ಲಾಡಳಿತ ಹಣ ರಿಲೀಸ್ ಮಾಡಿಲ್ಲ. ಇದರ ಮಧ್ಯೆ ಕಳೆದ ವರ್ಷ ಭಾಗವಹಿಸಿದ್ದ ಕೆಲವು ಕಲಾವಿದರಿಗೆ ನೀಡಲಾಗಿದ್ದ ಚೆಕ್‍ಗಳು ಬೌನ್ಸ್ ಆಗಿವೆ.

    ಸದ್ಯ ಬೆಳವಡಿ ಉತ್ಸವ ಕೂಡ ಫೆ.28, 29 ಎರಡು ದಿನ ನಡೆಯಲಿದೆ. ಹೀಗಾಗಿ ಈ ಉತ್ಸವವೂ ಸಹ ನಿರ್ಲಕ್ಷ್ಯಕ್ಕೊಳಗಾಗಿದೆ. ಇತ್ತ ಕಲಾವಿದರು ಬೈಲಹೊಂಗಲ ಎಸಿ ಶಿವಾನಂದ ಬಳಿ ಹೋದ್ರೇ ಕನ್ನಡ ಸಂಸ್ಕೃತಿ ಇಲಾಖೆಯನ್ನ ಕೇಳಿ ಎನ್ನುತ್ತಿದ್ದಾರೆ. ಇದನ್ನು ಮಾಧ್ಯಮಗಳಿಗೆ ಹೇಳಿದರೆ ಮುಂದಿನ ದಿನಗಳಲ್ಲಿ ಯಾವುದೇ ಅವಕಾಶ ಕೊಡಲ್ಲ ಅಂತಲೂ ಧಮಕಿ ಹಾಕ್ತಿದ್ದಾರೆ.

    ಒಟ್ಟಿನಲ್ಲಿ ಮಂಡ್ಯಗೆ ಮೊನ್ನೆಯಷ್ಟೇ 5 ಸಾವಿರ ಕೋಟಿ ರಿಲೀಸ್ ಮಾಡಿರೋ ದೋಸ್ತಿ ಸರ್ಕಾರ, ಬೆಳಗಾವಿಗ್ಯಾಕೆ ಈ ಪರಿ ತಾರತಮ್ಯ ಮಾಡ್ತಿದೆ ಎಂದು ಕಲಾವಿದರು ಪ್ರಶ್ನೆ ಮಾಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿದ್ದಗಂಗಾ ಶ್ರೀಗಳಿಗೆ ಕುಂಚ ನಮನ

    ಸಿದ್ದಗಂಗಾ ಶ್ರೀಗಳಿಗೆ ಕುಂಚ ನಮನ

    ಮೈಸೂರು/ಬೆಳಗಾವಿ: ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳಿಗೆ ನಾಡಿನ ಹಲವು ಕಲಾವಿದರು ಶ್ರೀಗಳ ಭಾವಚಿತ್ರ ಬಿಡಿಸುವ ಮೂಲಕ ನಮನ ಸಲ್ಲಿಸಿದ್ದಾರೆ.

    ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಕಲಾವಿದ ಶ್ರೀಶೈಲ್ ಗಸ್ತಿ ಸಾರ್ವಜನಿಕವಾಗಿ ಬಾಯಲ್ಲಿ ಕುಂಚ ಹಿಡಿದು ಸಿದ್ದಗಂಗಾ ಶ್ರೀಗಳ ಭಾವಚಿತ್ರ ರಚನೆ ಮಾಡಿ ಶಿವೈಕ್ಯರಾದ, ಶಿವಕುಮಾರ ಶ್ರೀಗಳಿಗೆ ನಮನ ಸಲ್ಲಿಸಿದರು. ಇದೇ ವೇಳೆ ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿ ಸಹಿ ಸಂಗ್ರಹ ಅಭಿಯಾನ ನಡೆಸಿದರು. ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿಗಳಿಗೆ ಭಾರತ ರತ್ನ ನೀಡಿ ಪ್ರಶಸ್ತಿಯ ಗೌರವ ಹೆಚ್ಚಿಸಬೇಕೆಂಬ ಆಗ್ರಹ ಸಾರ್ವಜನಿಕರಿಂದ ಕೇಳಿ ಬಂತು.

    ಇತ್ತ ಮೈಸೂರಿನಲ್ಲೂ ಹಲವು ಕಲಾವಿದರು ನಗರದ ಕೆ.ಆರ್ ವೃತ್ತದಲ್ಲಿ ಶ್ರೀಗಳ ಚಿತ್ರ ಬರೆದು ಗೌರವ ನಮನ ಸಲ್ಲಿಸಿದರು. ಮೈಸೂರು ಕುಂಚ ಕಲಾವಿದರ ಸಂಘದಿಂದ ಶ್ರೀಗಳಿಗೆ ನಮನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವೇಳೆ ಶ್ರೀಗಳ ಚಿತ್ರಗಳ ಮೇಲೆ ದಾಸೋಹ ರತ್ನ ತಿಲಕ, ವಿದ್ಯಾ ರತ್ನ ತಿಲಕ ಎಂದು ಬರೆದು ಕಲಾವಿದರು ಗೌರವ ಸಲ್ಲಿಸಿದರು.

    ಉಜಿರೆ ಕಲಾವಿದ ವಿಲಾಸ್ ನಾಯ್ಕ್ ಶ್ರೀಗಳ ಭಾವಚಿತ್ರ ಬಿಡಿಸುವ ಮೂಲಕ ಗೌರವ ಸಲ್ಲಿಸಿದ್ದಾರೆ. ವಿಲಾಸ್ ನಾಯ್ಕ್ ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 2018ರಲ್ಲಿ ಸಿನಿ ಕುಟುಂಬಕ್ಕೆ ಪಾದಾರ್ಪಣೆ ಮಾಡಿದ ಮುದ್ದು ಕಂದಮ್ಮಗಳು

    2018ರಲ್ಲಿ ಸಿನಿ ಕುಟುಂಬಕ್ಕೆ ಪಾದಾರ್ಪಣೆ ಮಾಡಿದ ಮುದ್ದು ಕಂದಮ್ಮಗಳು

    ಸಿನಿಮಾ ತಾರೆಯರ ಬಗ್ಗೆ ತಿಳಿದುಕೊಳ್ಳಲು ಬಹುತೇಕರು ಇಷ್ಟಪಡುತ್ತಾರೆ. ತೆರೆಯ ಮೇಲೆ ಅಬ್ಬರಿಸಿ, ಬೊಬ್ಬಿರಿಯುವ ತಾರೆಯರ ಖಾಸಗಿ ಜೀವನ ಹೇಗಿರುತ್ತೆ ಎಂಬ ಕುತೂಹಲವನ್ನು ಹೊಂದಿರುತ್ತಾರೆ. 2018ರಲ್ಲಿ ಹಲವು ಕಲಾವಿದರು ಸಾಂಸಾರಿಕ ಜೀವನಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅಂತೆಯೇ ಹಲವು ಕಲಾವಿದರು ನಿಜ ಜೀವನದಲ್ಲಿ ಪೋಷಕ ಸ್ಥಾನಕ್ಕೆ ಪದವಿಯನ್ನು ಪಡೆದುಕೊಂಡಿದ್ದಾರೆ. ಈ ವರ್ಷ ತಂದೆ/ತಾಯಿ ಸ್ಥಾನಕ್ಕೆ ಪದವಿ ಪಡೆದ ತಾರೆಯರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. ಇದನ್ನೂ ಓದಿ: 2018ರಲ್ಲಿ ಸಿನಿಮಾರಂಗ ಕಳೆದುಕೊಂಡ ಕಲಾವಿದರು

    1. ನಿಖಿತಾ ತುಕ್ರಾಲ್:
    ನಿಖಿತಾ 2016 ಅಕ್ಟೋಬರ್ 16 ರಂದು ಮುಂಬೈ ಮೂಲದ ಉದ್ಯಮಿ ಗಗನ್ ದೀಪ್ ಸಿಂಗ್ ಮಾಗೋ ಅವರನ್ನು ಮದುವೆಯಾಗಿದ್ದರು. ನಿಖಿತಾ ತಮ್ಮ ಮಗುವಿನೊಂದಿಗೆ ಇರುವ ಫೊಟೋವನ್ನು ಫೆಬ್ರವರಿ 28ರಂದು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದರು. ನಿಖಿತಾ ಮಗುವಿಗೆ `ಜಸ್ಮಿರಾ’ ಎಂದು ಹೆಸರಿಟ್ಟಿದ್ದು, ನಿಖಿತಾ ಸ್ಯಾಂಡಲ್‍ವುಡ್ ನಲ್ಲಿ ದರ್ಶನ್, ಸುದೀಪ್ ಮತ್ತು ಪುನೀತ್ ರಾಜ್‍ಕುಮಾರ್ ಸ್ಟಾರ್ ಗಳ ಜೊತೆ ನಾಯಕಿಯಾಗಿ ನಟಿಸಿದ್ದು, ಬಿಗ್ ಬಾಸ್ ಸೀಸನ್ ಒಂದರಲ್ಲಿ ಸ್ಪರ್ಧಿಸಿದ್ದರು.

    2. ಸನ್ನಿ ಲಿಯೋನ್:
    2017ರಲ್ಲಿ ನಿಶಾ ಎಂಬ ಹೆಣ್ಣು ಮಗುವನ್ನು ದತ್ತು ಪಡೆದುಕೊಂಡಿದ್ದ ಬಾಲಿವುಡ್ ಮಾದಕ ಚೆಲುವೆ ಸನ್ನಿ ಲಿಯೋನ್ ಬಾಡಿಗೆ ತಾಯ್ತನದ ಮೂಲಕ ಮತ್ತೆರಡು ಮಕ್ಕಳಿಗೆ ತಾಯಿಯಾದ್ರು. ಮಾರ್ಚ್ 5ರಂದು ಸನ್ನಿ ಲಿಯೋನ್, ನಾನು ಮತ್ತು ಡೇನಿಯಲ್ ಮಕ್ಕಳಿಗಾಗಿ ಬಾಡಿಗೆ ತಾಯಿಯ ಮೊರೆ ಹೋಗಿದ್ದೇವೆ. ಇಂದು ನಮ್ಮ ಕುಟುಂಬ ಪರಿಪೂರ್ಣವಾಗಿದ್ದು, ಮಕ್ಕಳಿಗೆ ಕಿರೆನ್ ಮತ್ತು ನೋಹಾ ಎಂದು ಹೆಸರಿಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.

    3. ಅನು ಪ್ರಭಾಕರ್:
    ಸ್ಯಾಂಡಲ್‍ವುಡ್ ನಟಿ ಅನು ಪ್ರಭಾಕರ್ ಸ್ವಾತಂತ್ರ್ಯ ದಿನಾಚರಣೆಯಂದೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ನಟಿ ಅನು ಪ್ರಭಾಕರ್ ಹಾಗೂ ನಟ ರಘು ಮುಖರ್ಜಿ ಅವರು 2016 ಏಪ್ರಿಲ್ 25 ರಂದು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಇಬ್ಬರಿಗೂ ಇದು ಎರಡನೇ ಮದುವೆಯಾಗಿದೆ. ಇದನ್ನೂ ಓದಿ: 2018ರ ಸಿನಿ ಲೋಕದ ಸುಂದರ ಪ್ರೇಮ ಕಹಾನಿಗಳು

    4. ಹೇಮಾ ಪಂಚಮುಖಿ:
    ‘ಅಮೆರಿಕಾ ಅಮೆರಿಕಾ’ ಚಿತ್ರದಿಂದ ನಾಯಕಿಯಾಗಿ ಗುರುತಿಸಿಕೊಂಡ ನಟಿ ಹೇಮಾ ಪಂಚಮುಖಿ ಸೆಪ್ಟೆಂಬರ್ ನಲ್ಲಿ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ನಟಿ ಹೇಮಾ ಅವರಿಗೆ ಈಗಾಗಲೇ ಒಬ್ಬಳು ಮಗಳಿದ್ದಾಳೆ. ಹೇಮಾ ಭರತನಾಟ್ಯ ಅಭಿನೇತ್ರಿಯಾಗಿದ್ದು, ‘ರಂಗೋಲಿ’ ಚಿತ್ರದ ನಟ ಪ್ರಶಾಂತ್ ಗೋಪಾಲ್ ಅವರ ಜೊತೆ ಎರಡನೇ ಮದುವೆ ಮಾಡಿಕೊಂಡಿದ್ದರು. ಹೇಮಾ ಅಮೆರಿಕಾ ಅಮೆರಿಕಾ, ದೊರೆ, ಸಂಭ್ರಮ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಸದ್ಯಕ್ಕೆ ಹೇಮಾ ಹಾಗೂ ಅವರ ಪತಿ ಪ್ರಶಾಂತ್ ನಾಟ್ಯ ಶಾಲೆ ಮೂಲಕ ಮಕ್ಕಳಿಗೆ ನೃತ್ಯ ಹೇಳಿಕೊಡುತ್ತಿದ್ದಾರೆ.

    5. ನೇಹಾ ಧುಪಿಯಾ:
    ಮದುವೆಯಾದ ಆರು ತಿಂಗಳಿಗೆ ನಟಿ ನೇಹಾ ಧುಪಿಯಾ ಹೆಣ್ಣು ಮಗುವಿಗೆ ನವೆಂಬರ್ 18ರಂದು ಜನ್ಮ ನೀಡಿದ್ದರು. ನೇಹಾ ಧುಪಿಯಾ ತನ್ನ ಬಹುಕಾಲದ ಗೆಳೆಯ ಅಂಗದ್ ಬೇಡಿ ಜೊತೆ ಮೇ ತಿಂಗಳಲ್ಲಿ ಯಾರಿಗೂ ತಿಳಿಸದೇ ಖಾಸಗಿಯಾಗಿ ನವದೆಹಲಿಯ ಗುರುದ್ವಾರದಲ್ಲಿ ಮದುವೆ ಆಗಿದ್ದರು. ಮದುವೆಯಾಗಿ ಕೆಲವೇ ತಿಂಗಳಲ್ಲಿ ಅಂಗದ್ ತಮ್ಮ ಪತ್ನಿ ನೇಹಾ ಗರ್ಭಿಣಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು

    6. ಅಜಯ್ ರಾವ್:
    ಸ್ಯಾಂಡಲ್‍ವುಡ್ ಕೃಷ್ಣ ಎಂದೇ ಖ್ಯಾತರಾಗಿರುವ ಅಜಯ್ ರಾವ್ ನವೆಂಬರ್ 23ರಂದು ಹೆಣ್ಣು ಮಗುವಿಗೆ ತಂದೆಯಾದರು. ನಗರದ ಖಾಸಗಿ ಆಸ್ಪತ್ರೆಯಲ್ಲಿ ಸ್ವಪ್ನ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಅಜಯ್ ಅಂದೇ ಸಾಮಾಜಿಕ ಜಾಲತಾಣದಲ್ಲಿ ಮಗುವಿನ ಫೋಟೋ ಹಾಕಿಕೊಂಡು ತಮ್ಮ ಸಂತಸವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.

    7. ಯಶ್:
    ಚಂದನವನದ ಮಿಸ್ಟರ್ ರಾಮಾಚಾರಿ ಡಿಸೆಂಬರ್ 2ರಂದು ಹೆಣ್ಣು ಮಗುವಿನ ತಂದೆಯಾದರು. ಪತ್ನಿ ಸ್ಯಾಂಡಲ್‍ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದಸರಾಗೆ ಅಡ್ಡಿಯಾಗದ ಬರ ಹಂಪಿ ಉತ್ಸವಕ್ಕೆ ಹೇಗೆ ಸಮಸ್ಯೆ ಆಗುತ್ತೆ – ಸರ್ಕಾರದ ವಿರುದ್ಧ ಬಳ್ಳಾರಿಯಲ್ಲಿ ಆಕ್ರೋಶ

    ದಸರಾಗೆ ಅಡ್ಡಿಯಾಗದ ಬರ ಹಂಪಿ ಉತ್ಸವಕ್ಕೆ ಹೇಗೆ ಸಮಸ್ಯೆ ಆಗುತ್ತೆ – ಸರ್ಕಾರದ ವಿರುದ್ಧ ಬಳ್ಳಾರಿಯಲ್ಲಿ ಆಕ್ರೋಶ

    ಬಳ್ಳಾರಿ: ದಸರಾ ಆಚರಣೆಗೆ ಅಡ್ಡಿಯಾಗದ ಬರ ಹಂಪಿ ಉತ್ಸವಕ್ಕೆ ಎದುರಾಗಿದೆಯಾ ಎಂದು ಪ್ರಶ್ನೆ ಮಾಡಿರುವ ಬಳ್ಳಾರಿ ಜನರು ವಿಶ್ವ ವಿಖ್ಯಾತ ಹಂಪಿ ಉತ್ಸವವನ್ನು ನಡೆಸಲೇಬೇಕೆಂದು ಪಟ್ಟು ಹಿಡಿದಿದ್ದು, ಸರ್ಕಾರದ ವಿರುದ್ಧ ಹೋರಾಟಕ್ಕಿಳಿದಿದ್ದಾರೆ.

    ಉತ್ಸವಕ್ಕೆ ಸರ್ಕಾರ ಹಣ ನೀಡಿದಿದ್ದರೂ ಪರವಾಗಿಲ್ಲ ನಾವೇ ಹಣ ಸಂಗ್ರಹಿಸಿ ಉತ್ಸವ ನಡೆಸುವುದಾಗಿ ಸಾರ್ವಜನಿಕರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಹೂವಿನಹಡಗಲಿಯ ಮಾಗಳ ಗ್ರಾಮಸ್ಥರು ಸ್ವತಃ ಹಣ ಸಂಗ್ರಹಿಸಿ ಗ್ರಾಮ ಪಂಚಾಯತ್ ಪಿಡಿಓಗೆ ನೀಡಿದ್ದಾರೆ. ಇದಲ್ಲದೇ ಉತ್ಸವ ಅನ್ನುವುದು ನಮ್ಮ ಜಿಲ್ಲೆಯ ಹೆಮ್ಮೆ, ಇದಕ್ಕಾಗಿ ಹಣ ನೀಡಲು ಸಿದ್ಧ ಎನ್ನುತ್ತಿದ್ದಾರೆ.

    ಇದರೊಂದಿಗೆ ಬಳ್ಳಾರಿಯಲ್ಲಿ ಕಲಾವಿದರು ಕೂಡ ಪ್ರತಿಭಟನೆ ನಡೆಸಿದ್ದು, ಉತ್ಸವಕ್ಕೆ ಬಾಲಿವುಡ್ ಕಲಾವಿದರನ್ನ ಕರೆಸದೇ ಸ್ಥಳೀಯ ಜಾನಪದ ಕಲಾವಿದರಿಗೆ ಅವಕಾಶ ನೀಡಿ ಅರ್ಥಪೂರ್ಣವಾಗಿ ಆಚರಿಸಬಹುದು ಎಂದು ಹೇಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬರಗಾಲದ ನೆಪ ಒಡ್ಡಿ ಆಚರಣೆಗಳನ್ನು ರದ್ದುಗೊಳಿಸುವುದರಲ್ಲಿ ಅರ್ಥವಿಲ್ಲ. ಬರಗಾಲದ ಸಂದರ್ಭದಲ್ಲೂ ಅನಗತ್ಯ ಹಾಗೂ ಅದ್ಧೂರಿ ಎನಿಸುವ ಖರ್ಚುಗಳಿಗೆ ಲಗಾಮು ಹಾಕಿ ಉತ್ಸವ ನಡೆಸಬಹುದು. ಅಲ್ಲದೇ ಬಾಲಿವುಡ್ ಕಲಾವಿದರನ್ನ ಹಂಪಿ ಉತ್ಸವಕ್ಕೆ ಆಹ್ವಾನ ನೀಡದೇ ಸ್ಥಳೀಯ ಜಾನಪದ ಕಲಾವಿದರಿಗೆ ಅವಕಾಶ ನೀಡಿ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಬಹುದು. ಯಾವುದೇ ಸಂಭಾವನೆ ಪಡೆಯದೇ ಉತ್ಸವದಲ್ಲಿ ಕಾರ್ಯಕ್ರಮ ಕೊಡಲು ಸ್ಥಳೀಯ ಕಲಾವಿದರು ತಯಾರಿದ್ದಾರೆ. ಇಷ್ಟೆಲ್ಲ ಸಾಧ್ಯತೆಗಳಿದ್ದರೂ ಸರ್ಕಾರ ಏಕಾಏಕಿ ಹಂಪಿ ಉತ್ಸವವನ್ನು ರದ್ದುಗೊಳಿಸಿದೆ. ಡಿಸೆಂಬರ್ ತಿಂಗಳಲ್ಲಿ ಉತ್ಸವ ಮಾಡದಿದ್ರೆ ರಾಜ್ಯವ್ಯಾಪಿ ಹೋರಾಟ ನಡೆಸಲಾಗುವುದು ಎಂದು ಕಲಾವಿದರು ಎಚ್ಚರಿಸಿದರು.

    https://www.youtube.com/watch?v=Ea6m7EwRnxI

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೊಡಗಿಗಾಗಿ ಮಿಡಿದ ಉಡುಪಿ ಕಲಾವಿದರ ಹೃದಯ – ತ್ರಿವರ್ಣದಿಂದ 50 ಸಾವಿರ ಸಹಾಯಧನ

    ಕೊಡಗಿಗಾಗಿ ಮಿಡಿದ ಉಡುಪಿ ಕಲಾವಿದರ ಹೃದಯ – ತ್ರಿವರ್ಣದಿಂದ 50 ಸಾವಿರ ಸಹಾಯಧನ

    ಉಡುಪಿ: ನೆರೆಯಿಂದ ಸಂಕಷ್ಟಕ್ಕೆ ಒಳಗಾಗಿದ್ದ ಕೊಡಗಿನ ಜನತೆಗೆ ಹೇಗೆಲ್ಲಾ ಸಹಾಯ ಮಾಡಲು ಸಾಧ್ಯವಾಗುತ್ತೋ ಅದನ್ನೆಲ್ಲಾ ಜನ ಮಾಡಿದ್ದಾರೆ. ಇದೀಗ ಉಡುಪಿ ಕಲಾವಿದರು ವಿಶೇಷ ರೀತಿಯಲ್ಲಿ ಕೊಡಗು ಸಂತ್ರಸ್ತರಿಗೆ ಸಹಾಯ ಮಾಡಿದ್ದಾರೆ.

    ಉಡುಪಿ ಜಿಲ್ಲೆಯ ಮಣಿಪಾಲ ಮತ್ತು ಕುಂದಾಪುರದ ತ್ರಿವರ್ಣ ಕಲಾಕೇಂದ್ರದ 39 ಯುವ ಕಲಾವಿದರು ಒಂದು ಚಿತ್ರ ಕಲಾ ಪ್ರದರ್ಶನ ಏರ್ಪಡಿಸಿ ಇಲ್ಲಿ ಸಂಗ್ರಹಗೊಂಡ ಹಣವನ್ನು ಕೊಡಗಿಗೆ ನೀಡಲು ಮುಂದಾಗಿದ್ದಾರೆ. ಕಲಾವಿದರು ತಾವು ರಚಿಸಿದ ಚಿತ್ರಗಳನ್ನು ಪ್ರದರ್ಶನಕ್ಕಿಟ್ಟು ಬೆಲೆ ನಿಗದಿ ಮಾಡಿ ಮಾಡಿದ್ದರು. ಮಾರಾಟದಲ್ಲಿ ಬಂದ ದುಡ್ಡಿನಲ್ಲಿ ಒಂದು ರೂಪಾಯಿ ಇಟ್ಟುಕೊಳ್ಳದೇ ಎಲ್ಲವನ್ನೂ ಕೊಡಗು ಜಿಲ್ಲೆಗೆ ಕೊಡಲಿದ್ದಾರೆ.

    ಈ ವಿಭಿನ್ನ ಪ್ರಯತ್ನದ ಸಾರಥಿ ಹರೀಶ್ ಸಾಗ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ನಮ್ಮ ಕಲಾವಿದರು ಹೆಚ್ಚು ಶ್ರೀಮಂತರಲ್ಲ. ಆದರೂ ಕಷ್ಟದಲ್ಲಿ ಇರುವ ಕೊಡಗಿಗೆ ನಮ್ಮ ಕೈಯಿಂದ ಏನು ಸಹಾಯ ಆಗಬಹುದು ಅಂತ ಆಲೋಚನೆ ಮಾಡಿದಾಗ ಈ ಐಡಿಯಾ ಹೊಳೆಯಿತು. ಕಲಾಕೃತಿ ಮಾರಿ ಒಂದು ಲಕ್ಷವಾದರೂ ಕೊಡಬೇಕೆಂದಿತ್ತು. 45 ಸಾವಿರ ರೂಪಾಯಿ ಸಂಗ್ರಹವಾಗಿದೆ. ಸ್ವಲ್ಪ ಹಣ ಒಟ್ಟು ಮಾಡಿ ಕೊಡಗು ಜಿಲ್ಲೆಗೆ 50 ಸಾವಿರ ರೂಪಾಯಿ ಕೊಡುತ್ತೇವೆ ಎಂದು ಹೇಳಿದರು.

    ಗೋ ನಿಧಿ ಎಂಬ ಕಾನ್ಸೆಪ್ಟ್ ರೆಡಿ ಮಾಡಿದ ಈ ಟೀಂ, ದೇಶಾದ್ಯಂತ ಗೋವಿನ ರಕ್ಷಣೆ ಆಗಬೇಕು. ಅದರ ಜೊತೆ ಕೊಡಗಿನ ಸಂತ್ರಸ್ತರಿಗೂ ಸಹಾಯವಾಗಬೇಕೆಂದು ಈ ಆಲೋಚನೆಯನ್ನು ಮಾಡಿದ್ದಾರೆ. ಮೂರು ದಿನಗಳ ಕಾಲ ಮಣಿಪಾಲದಲ್ಲಿ ಪ್ರದರ್ಶನ ಮಾಡಿದ್ದು ನಾಲ್ಕೈದು ಕಲೆಗಳಿಗೆ ಬೇಡಿಕೆ ಬಂದಿದೆ. ಹಲವಾರು ಮಾಧ್ಯಮಗಳಲ್ಲಿ ವಿದ್ಯಾರ್ಥಿಗಳು ಕಲಾಕೃತಿ ಬರೆದಿದ್ದು ಗೋವನ್ನೂ ವಿವಿಧ ದೃಷ್ಟಿಕೋನದಲ್ಲಿ ನೋಡಿದ್ದಾರೆ.

    ಕಲಾವಿದೆ ಪವಿತ್ರ ಮಾತನಾಡಿ, ಚಲನಚಿತ್ರ ನಟರು, ಶ್ರೀಮಂತರು ನಾವು ಕೊಟ್ಟ ಮೌಲ್ಯವನ್ನು ಒಬ್ಬರೇ ಕೊಟ್ಟಿರಬಹುದು. ಹನಿಗೂಡಿ ಹಳ್ಳ ಎಂಬಂತೆ ನಮ್ಮ ಕೈಲಾದ ಸಹಾಯ ಮಾಡುತ್ತಿದ್ದೇವೆ. ಕಷ್ಟದಲ್ಲಿರುವವರಿಗೆ ಸ್ಪಂದಿಸುವ ಮನೋಭಾವನೆ ಎಲ್ಲರಲ್ಲೂ ಬಂದಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಲೆ, ಸಂಸ್ಕೃತಿಗಾಗಿ ಸರ್ಕಾರಿ ನೌಕರಿಗೆ ಗುಡ್‍ಬೈ ಅಂದ್ರು ಹಗರಿಬೊಮ್ಮನಹಳ್ಳಿಯ ರಾಜಾರಾವ್

    ಕಲೆ, ಸಂಸ್ಕೃತಿಗಾಗಿ ಸರ್ಕಾರಿ ನೌಕರಿಗೆ ಗುಡ್‍ಬೈ ಅಂದ್ರು ಹಗರಿಬೊಮ್ಮನಹಳ್ಳಿಯ ರಾಜಾರಾವ್

    ಬಳ್ಳಾರಿ: ರಾಜ್ಯದಲ್ಲಿ ಎಷ್ಟೋ ಮಂದಿ ಎಲೆಮರೆ ಕಾಯಿಯಂತೆ ಕಲಾವಿದರಿದ್ದಾರೆ. ಈ ರೀತಿಯಿದ್ದ ನೂರಾರು ಕಲಾವಿದರನ್ನ ಪ್ರವರ್ಧಮಾನಕ್ಕೆ ಕರೆ ತಂದಿದ್ದು, ಅದಕ್ಕಾಗಿ ಸರ್ಕಾರಿ ಸೇವೆಗೆ ಗುಡ್‍ಬೈ ಹೇಳಿದ್ದಾರೆ ನಮ್ಮ ಪಬ್ಲಿಕ್ ಹೀರೋ.

    ಹಗರಿಬೊಮ್ಮನಹಳ್ಳಿ ನಿವಾಸಿ ತಟ್ಟಿ ರಾಜಾರಾವ್ ಅವರು ಬಳ್ಳಾರಿಯ ಬಹುತೇಕ ಕಲಾವಿದರಿಗೆ ಚಿರಪರಿಚಿತರು. ಗ್ರಾಮೀಣ ಕಲೆ-ಕಲಾವಿದರ ಉಳಿಸಿಲು ಪಣತೊಟ್ಟು, ಸರ್ಕಾರಿ ನೌಕರಿಗೆ ಗುಡ್‍ಬೈ ಹೇಳಿದ್ದಾರೆ. ಪಿಯುಸಿ ಓದಿರುವ ಇವರಿಗೆ 1976ರಲ್ಲಿ ಕೃಷಿ ಇಲಾಖೆಯಲ್ಲಿ ಕೃಷಿ ಸಹಾಯಕರ ಕೆಲಸ ಸಿಕ್ಕಿತ್ತು. ಆದರೆ ವಿಆರ್‍ಎಸ್ ಪಡೆದಿದ್ದಾರೆ. ಕುಕನೂರ ರಹೀಮಾನವ್ವ ನಾಟಕ ಕಂಪನಿ, ಗುಡಿಗೇರಿ ಎನ್ ಬಸವರಾಜರ ನಾಟಕ ಕಂಪನಿ, ಸುಳ್ಳ ದೇಸಾಯಿಯವರ ನಾಟಕ ಕಂಪನಿಗಳಲ್ಲಿ ರಂಗಗೀತೆ, ಜಾನಪದ ಹಾಡುಗಳನ್ನ ಹಾಡುತ್ತಿದ್ದ ಇವರಿಗೆ ಕಲೆಯೇ ಜಗತ್ತು ಆಗಿದೆ.

    ಹಳ್ಳಿ ಹಳ್ಳಿಗಳಲ್ಲಿ ಕಲಾವಿದರನ್ನು ಗುರುತಿಸಿ, ಅವರ ಪ್ರತಿಭೆಯ ಅನಾವರಣಕ್ಕೆ ವೇದಿಕೆ ನಿರ್ಮಿಸಿಕೊಡ್ತಿದ್ದಾರೆ. ಸೋಬಾನೆ ಪದದ ಹಾಡುಗಾರರು, ಸುಡುಗಾಡು ಸಿದ್ದರು, ಡೊಳ್ಳು ಕುಣಿತ, ಬಯಲಾಟ, ದೊಡ್ಡಾಟ, ಕೋಲಾಟ, ಸುಗ್ಗಿ ಹಾಡುಗಳು ಸೇರಿದಂತೆ ಹಳ್ಳಿ ಸೊಗಡಿನ ಕಲಾವಿದರನ್ನು ಕಲಾ ಜಗತ್ತಿಗೆ ಪರಿಚಯಿಸುತ್ತಿದ್ದಾರೆ.

    ಇವರಿಂದ ತರಬೇತಿ ಪಡೆದ ನೂರಾರು ಕಲಾವಿದರು ರಾಜ್ಯದೆಲ್ಲೆಡೆ ಕಲಾಪ್ರದರ್ಶನ ನೀಡುತ್ತಿದ್ದಾರೆ. ಜೊತೆಗೆ ಮಾಸಾಶನವೂ ಸಿಗುವಂತೆ ಮಾಡಿದ್ದಾರೆ. ರಾಜಾರಾವ್‍ರ ಕಲಾಸೇವೆಗೆ ಪತ್ನಿ ಜ್ಯೋತಿ ಸಹ ಸಾಥ್ ನೀಡಿದ್ದಾರೆ.

    https://www.youtube.com/watch?v=3cSjfiSR810

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews