Tag: artist

  • ಒಡತಿಯನ್ನು ಕೊಲೆ ಮಾಡಿ ಎಸ್ಕೇಪ್ ಆಗುವ ಭರದಲ್ಲಿ ತಾನೇ ಹೆಣವಾದ

    ಒಡತಿಯನ್ನು ಕೊಲೆ ಮಾಡಿ ಎಸ್ಕೇಪ್ ಆಗುವ ಭರದಲ್ಲಿ ತಾನೇ ಹೆಣವಾದ

    ಪಣಜಿ: 65 ವರ್ಷದ ಕಲಾವಿದರೊಬ್ಬರನ್ನು ತೋಟದ ಕೆಲಸಗಾರ ಕೊಲೆ ಮಾಡಿ ಎಸ್ಕೇಪ್ ಆಗುವ ಭರದಲ್ಲಿ ತಾನೆ ಹೆಣವಾದ ಘಟನೆ ಗೋವಾದಲ್ಲಿ ನಡೆದಿದೆ.

    ಮುಂಬೈ ಮೂಲದ ಚಿತ್ರಕಲಾವಿದರಾದ ಶಿರಿನ್ ಮೋಡಿ(65) ಕೊಲೆಯಾದ ದುರ್ದೈವಿ. ಮನೆಯೊಳಗೆ ಮಾರಕಾಸ್ತ್ರಗಳಿಂದ ಅವರ ತೋಟದ ಮಾಲಿ ಪ್ರಫುಲ್ಲಾ ಶಿರಿನ್‍ರನ್ನು ಕೊಲೆ ಮಾಡಿದ್ದಾನೆ. ಉತ್ತರ ಗೋವಾ ಜಿಲ್ಲೆಯ ಅರಪೊರಾ ಗ್ರಾಮದಲ್ಲಿ ಶಿರಿನ್ ಆರ್ಟ್ ಸ್ಟುಡಿಯೋ ಹೊಂದಿದ್ದರು. ಹೀಗಾಗಿ ಅವರು ಮುಂಬೈ ಬಿಟ್ಟು ಅರಪೊರಾ ಗ್ರಾಮದಲ್ಲೇ ವಾಸಿಸುತ್ತಿದ್ದರು.

    ಅವರ ತೋಟದಲ್ಲಿ ಅಸ್ಸಾಂ ಮೂಲದ ಪ್ರಫುಲ್ಲಾ ತೋಟದ ಮಾಲಿಯಾಗಿ ಕೆಲಸ ಮಾಡುತ್ತಿದ್ದನು. ಆದರೆ ಭಾನುವಾರ ಪ್ರಫುಲ್ಲಾ ಮನೆಯೊಳಗೆ ಮಾರಕಾಸ್ತ್ರಗಳಿಂದ ಶಿರಿನ್ ಅವರ ಮೇಲೆ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆ ಮಾಡಿ, ಬಳಿಕ ಅಲ್ಲಿಂದ ತಪ್ಪಿಸಿಕೊಳ್ಳುವ ಬರದಲ್ಲಿ ಗಾರ್ಡ್‌ನ್ ನಲ್ಲಿ ಜಾರಿ ಬಿದ್ದು ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾನೆ.

    ಈ ವೇಳೆ ಗಾರ್ಡ್‌ನ್ ನಲ್ಲಿ ಬಿದ್ದಿದ್ದ ಮಾಲಿಯನ್ನು ಕಂಡ ಅಕ್ಕಪಕ್ಕದ ಮನೆಯವರು ಆತನನ್ನು ಆಸ್ಪತ್ರಗೆ ದಾಖಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಷ್ಟರಲ್ಲಿ ಆರೋಪಿ ಮೃತಪಟ್ಟಿದ್ದನು. ಬಳಿಕ ಈ ಬಗ್ಗೆ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದರು.

    ಆಗ ಅಕ್ಕಪಕ್ಕದ ಮನೆಯವರು, ಮಾಲಿ ಹಾಗೂ ಶಿರಿನ್ ಅವರ ನಡುವೆ ಜಗಳ ನಡೆದಿತ್ತು. ಬಳಿಕ ಮಾಲಿ ಮನೆಯಿಂದ ಹೊರಗೆ ಓಡಿಬರುತ್ತಿದ್ದಾಗ ಆಯತಪ್ಪಿ ಬಿದ್ದು ಸಾವನ್ನಪ್ಪಿದ. ಬಹುಶಃ ಆತನೇ ಶಿರಿನ್‍ರನ್ನು ಕೊಲೆ ಮಾಡಿ ತಪ್ಪಿಸಿಕೊಳ್ಳಲು ಓಡಿ ಬರುತ್ತಿದ್ದನು ಎನಿಸುತ್ತದೆ ಎಂದು ಪೊಲೀಸರ ಬಳಿ ಹೇಳಿದ್ದಾರೆ.

    ಇತ್ತ ಮನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದ್ದು, ಘಟನೆ ನಡೆದ ಬಳಿಕ ಮಾಲಿ ತಪ್ಪಿಸಿಕೊಳ್ಳಲು ಪ್ರಯತ್ನ ನಡೆಸಿದ್ದು ಕಂಡು ಬಂದಿದೆ. ಆತ ಮನೆಯಿಂದ ಹೊರಗೆ ಓಡಿ ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

    ಸದ್ಯ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಕೊಲೆ ಮಾಡಲು ನಿಖರ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಆದರೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಬೆಂಗ್ಳೂರಿನ ಕಲಾವಿದನ ಕೈಯಲ್ಲಿ ಮೂಡಿತು ಚಿನ್ನದ ಚಂದ್ರಯಾನ-2

    ಬೆಂಗ್ಳೂರಿನ ಕಲಾವಿದನ ಕೈಯಲ್ಲಿ ಮೂಡಿತು ಚಿನ್ನದ ಚಂದ್ರಯಾನ-2

    ಬೆಂಗಳೂರು: ಚಂದ್ರಯಾನ-2 ಉಪಗ್ರಹ ಚಂದ್ರನ ಮುತ್ತಿಕ್ಕುವ ಕ್ಷಣವನ್ನು ಕಣ್ತುಂಬಿಕೊಳ್ಳಲು ಇಡೀ ಭಾರತ ಕಾತುರದಿಂದ ಕಾಯುತ್ತಿದೆ. ಆದರೆ ಸಿಲಿಕಾನ್ ಸಿಟಿಯ ಕಲಾವಿದರೊಬ್ಬರು ತಮ್ಮ ಕಲೆಯ ಮೂಲಕ ವಿಭಿನ್ನವಾಗಿ ಚಂದ್ರಯಾನ-2ಕ್ಕೆ ಶುಭಹಾರೈಸಿದ್ದಾರೆ.

    ಬೆಂಗಳೂರಿನ ಶ್ರೀರಾಮ್‍ಪುರದ ನಿವಾಸಿ ಅಕ್ಕಸಾಲಿಗರಾದ ನಾಗರಾಜ್ ರೇವಣಕರ್ ಚಿನ್ನದಲ್ಲಿ ಮಿನಿ ಚಂದ್ರಯಾನ-2 ಆಕೃತಿ ತಯಾರಿಸಿದ್ದಾರೆ. ನಾಗರಾಜ್ ಅವರು ಕಲಾವಿದರಾಗಿದ್ದು, 2 ಗ್ರಾಂ 700 ಮಿಲಿಗ್ರಾಂ ಚಿನ್ನದಲ್ಲಿ ಬಾಹುಬಲಿ ರಾಕೆಟ್ ತಯಾರಿಸಿದ್ದು, ಈ ಆಕೃತಿ ಸ್ಟಾಂಡ್ ಸೇರಿ 4.5 ಸೆಂಟಿಮೀಟರ್ ಎತ್ತರವಿದೆ. ಜೊತೆಗೆ ತ್ರಿವರ್ಣ ಧ್ವಜ, ಇಂಡಿಯಾ ಹಾಗೂ ಇಸ್ರೋ ಹೆಸರನ್ನು ಕೂಡ ಇದರ ಮೇಲೆ ಬರೆಯಲಾಗಿದೆ.

    ಈ ಚಿನ್ನದ ಚಂದ್ರಯಾನ ತಯಾರಿಸಲು ನಾಗರಾಜ್ ಅವರು ಬರೋಬ್ಬರಿ 30 ಗಂಟೆಗಳ ಕಾಲ ಶ್ರಮಪಟ್ಟಿದ್ದಾರೆ. ಈ ಗೋಲ್ಡ್ ರಾಕೆಟ್ ಅನ್ನು ಭಾರತೀಯ ವಿಜ್ಞಾನಿಗಳಿಗೆ ಅರ್ಪಿಸುವುದಾಗಿ ನಾಗರಾಜ್ ತಿಳಿಸಿದ್ದಾರೆ. ಈ ಮಿನಿ ಚಂದ್ರಯಾನ-2ರ ಚಿನ್ನದ ಆಕೃತಿ ಸದ್ಯ ಎಲ್ಲರ ಗಮನ ಸೆಳೆದಿದೆ. ಇದನ್ನೂ ಓದಿ:ಇಸ್ರೋ ಐತಿಹಾಸಿಕ ಸಾಧನೆಗೆ ಕೆಲವೇ ಗಂಟೆ ಬಾಕಿ – ಚಂದ್ರನ ಅಂಗಳಕ್ಕೆ ಇಳಿಯಲಿವೆ ವಿಕ್ರಮ್ ಲ್ಯಾಂಡರ್, ಪ್ರಜ್ಞಾನ್ ರೋವರ್

    ಭೂಮಿಯ ನೈಸರ್ಗಿಕ ಉಪಗ್ರಹ ಚಂದ್ರನಲ್ಲಿನ ರಹಸ್ಯಗಳನ್ನು ಅರಿಯಲು `ಚಂದ್ರಯಾನ-2’ನ ವಿಕ್ರಮ್ ನೌಕೆ ಚಂದ್ರನ ಮೇಲೆ ಇಂದು ತಡರಾತ್ರಿ 1.30ರಿಂದ 2.30ರ ವೇಳೆ(ಶನಿವಾರ ನಸುಕಿನಲ್ಲಿ) ಲ್ಯಾಂಡ್ ಆಗಲಿದೆ. ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದ್ದು, ಇಲ್ಲಿಯ ವರೆಗೆ ಯಾವುದೇ ಬಾಹ್ಯಾಕಾಶ ಸಂಸ್ಥೆಯು ತೆರಳದ ದಕ್ಷಿಣ ಧ್ರುವದ ಮೇಲೆ ಐತಿಹಾಸಿಕ ಲ್ಯಾಂಡಿಂಗ್‍ಗೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ.

    ಮೋದಿ ಅವರೊಂದಿಗೆ ಪ್ರೌಢಶಾಲೆಗಳ 70 ವಿದ್ಯಾರ್ಥಿಗಳು ಸಹ ಈ ವಿಸ್ಮಯವನ್ನು ಆನಂದಿಸಲಿದ್ದಾರೆ. ಮೋದಿ ಹಾಗೂ ಮಕ್ಕಳಿಗಾಗಿ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)ಯಲ್ಲಿ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ವಿವಿಧ ಟಿವಿ ವಾಹಿನಿಗಳಲ್ಲೂ ಈ ಕಾರ್ಯಕ್ರಮ ನೇರಪ್ರಸಾರವಾಗಲಿದೆ.

    ಈ ವೆರೆಗೆ ವಿಶ್ವದ ಮೂರು ದೇಶಗಳು ಮಾತ್ರ ಚಂದ್ರನ ಮೇಲೆ ನೌಕೆ ಇಳಿಸಿವೆ. ಇಂದು ಚಂದ್ರಯಾನ-2 ನೌಕೆ ಯಶಸ್ವಿಯಾಗಿ ಚಂದ್ರನಂಗಳಕ್ಕೆ ಇಳಿದರೆ ರಷ್ಯಾ, ಅಮೇರಿಕ ಹಾಗೂ ಚೀನಾ ಬಳಿಕ ಈ ಸಾಧನೆ ಮಾಡಿದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ. ವಿಶೇಷವೆಂದರೆ ಯಾವ ದೇಶವೂ ಕಾಲಿಡದ ಹಾಗೂ ಬಿಸಿಲು ಕಾಣದ ಚಂದ್ರನ ದಕ್ಷಿಣ ಧ್ರುವಕ್ಕೆ ಚಂದ್ರಯಾನ-2 ನೌಕೆ ಕಾಲಿಡಲಿದೆ.

  • ಮೋದಿ, ಅಭಿನಂದನ್, ಸಿಂಧು ಜೊತೆ ನಿಂತ ಗಣಪ

    ಮೋದಿ, ಅಭಿನಂದನ್, ಸಿಂಧು ಜೊತೆ ನಿಂತ ಗಣಪ

    ಮೈಸೂರು: ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ವಿವಿಧ ವಿನ್ಯಾಸದ ಗಣೇಶ ಮೂರ್ತಿಗಳು ಮಾರುಕಟ್ಟೆಗೆ ಬಂದಿವೆ. ಅದರಲ್ಲೂ ಜಿಲ್ಲೆಯ ಕಲಾವಿದರೊಬ್ಬರು ಗಣ್ಯರೊಂದಿಗೆ ಗಣಪನ ಮೂರ್ತಿಯನ್ನು ವಿನ್ಯಾಸಗೊಳಿಸಿ ಎಲ್ಲರ ಗಮನ ಸೆಳೆದಿದ್ದಾರೆ.

    ಮೈಸೂರಿನ ಕಲಾವಿದರಾದ ಕುಂಬಾರಗೇರಿಯ ರೇವಣ್ಣ ಹಲವು ಅವರು ಗಣ್ಯರೊಂದಿಗೆ ಗಣಪನ ಮೂರ್ತಿಯನ್ನು ವಿನ್ಯಾಸಗೊಳಿಸಿ ಹೊಸ ಪ್ರಯತ್ನ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ವಿಂಗ್ ಕಮಾಂಡರ್ ಅಭಿನಂದನ್, ಬ್ಯಾಡ್ಮಿಂಟನ್ ಚಾಂಪಿಯನ್ ಪಿ.ವಿ. ಸಿಂಧು ಅವರೊಂದಿಗೆ ಗಣಪತಿ ನಿಂತಿರುವ ಮೂರ್ತಿಗಳನ್ನು ಕಲಾವಿದರು ಮಾಡಿದ್ದಾರೆ. ಮತ್ತೊಂದು ವಿನ್ಯಾಸದಲ್ಲಿ ಇತ್ತೀಚೆಗೆ ನಿಧನರಾದ ಬಿಜೆಪಿ ನಾಯಕರು ಅನಂತಕುಮಾರ್, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಅವರ ಮೂರ್ತಿಗಳ ಜೊತೆ ಗಣಪ ನಿಂತಿರುವುದನ್ನು ಕೂಡ ಮಾಡಿದ್ದಾರೆ.

    ಇದಲ್ಲದೇ, ಸಿಎಂ ಯಡಿಯೂರಪ್ಪ ಹಾಗೂ ಈ ಬಾರಿಯ ದಸರಾ ಉದ್ಘಾಟಕರಾದ ಸಾಹಿತಿ ಡಾ.ಎಸ್.ಎಲ್ ಭೈರಪ್ಪ ಅವರ ಜೊತೆಯೂ ಗಣಪ ನಿಂತಿರುವ ಪೂರ್ತಿಗಳು ಇವೆ. ಜೊತೆಗೆ ಶಿವನ ಹಸ್ತದ ಒಳಗೆ ಮೋದಿ ಧ್ಯಾನ ಸ್ಥಿತಿಯಲ್ಲಿ ಕೂತಿರುವಂತೆ ಒಂದು ಮೂರ್ತಿಯನ್ನು ಮಾಡಲಾಗಿದೆ. ಈ ವೈಶಿಷ್ಟ್ಯಪೂರ್ಣ ವಿನ್ಯಾಸಗಳು ಈಗ ಜನರ ಗಮನ ಸೆಳೆಯುತ್ತಿವೆ.

    ಈ ಬಗ್ಗೆ ಮಾತನಾಡಿದ ಕಲಾವಿದ ರೇವಣ್ಣ ಅವರು, ನಾನು ಸುಮಾರು 35 ವರ್ಷದಿಂದ ಮೈಸೂರಿನಲ್ಲಿ ಗೌರಿ, ಗಣಪತಿಯನ್ನು ತಯಾರಿ ಮಾಡಿಕೊಂಡು ಬಂದಿದ್ದೇನೆ. ಜೇಡಿ ಮಣ್ಣಿನಿಂದ ಪರಿಸರ ಸ್ನೇಹಿ ಗಣಪನನ್ನು ನಾನು ತಯಾರಿಸುತ್ತಾ ಬಂದಿದ್ದೇನೆ. ಕಳೆದ 20 ವರ್ಷದಿಂದ ನನ್ನದೇ ಪರಿಕಲ್ಪನೆಯಲ್ಲಿ ವಿಶೇಷ ವಿನ್ಯಾಸದ ಗಣಪತಿಗಳನ್ನು ನಾನು ಮಾಡಿಕೊಂಡು ಬಂದಿದ್ದೇನೆ ಎಂದರು.

    ನಾನು ಈ ಬಾರಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಮೋದಿ ಸರ್ಕಾರವನ್ನು ಮನದಲ್ಲಿ ಇಟ್ಟುಕೊಂಡು ಗಣಪತಿಗಳನ್ನು ತಯಾರಿಸಿದ್ದೇನೆ ಎಂದು ಹೇಳಿದರು. ಜೊತೆಗೆ ತಮ್ಮ ದೇಶಕ್ಕೆ ಕೀರ್ತಿ ತಂದ ಹೆಮ್ಮೆಯ ಐಎಎಫ್ ವಿಂಗ್ ಕಮಾಂಡರ್ ಅಭಿನಂದನ್ ಹಾಗೂ ಆಟಗಾರ್ತಿ ಪಿ.ವಿ ಸಿಂಧು ಅವರ ಮೂರ್ತಿಯೊಂದಿಗೆ ಕೂಡ ಗಣಪ ಇರುವ ಮೂರ್ತಿಯನ್ನು ರೇವಣ್ಣ ತಯಾರಿಸಿದ್ದಾರೆ.

  • ಕಾಫಿ ಪುಡಿಯಲ್ಲಿ ಅರಳಿದ ಕಾಫಿ ಕಿಂಗ್ – ಕಲಾವಿದನ ವಿಡಿಯೋ

    ಕಾಫಿ ಪುಡಿಯಲ್ಲಿ ಅರಳಿದ ಕಾಫಿ ಕಿಂಗ್ – ಕಲಾವಿದನ ವಿಡಿಯೋ

    ತುಮಕೂರು: ಕಾಫಿ ಕಿಂಗ್ ಸಿದ್ಧಾರ್ಥ್ ಅವರು ನಿಗೂಢವಾಗಿ ಸಾವನ್ನಪ್ಪಿದ್ದು, ಇದೀಗ ಅವರನ್ನು ನೆನೆದು ಅಭಿಮಾನಿಗಳು ಮತ್ತು ಹಿತೈಷಿಗಳು ಕಣ್ಣೀರಿಡುತ್ತಿದ್ದಾರೆ. ಅಷ್ಟೇ ಅಲ್ಲದೆ ಅವರನ್ನು ತಮ್ಮದೇ ಆದ ರೀತಿಯಲ್ಲಿ ಸ್ಮರಿಸುತ್ತಿದ್ದಾರೆ. ಹೀಗೆ ತುಮಕೂರಿನ ಚಿತ್ರ ಕಲಾವಿದನೊಬ್ಬ ಕಾಫಿ ಪುಡಿಯಿಂದ ವಿಭಿನ್ನವಾಗಿ ಅವರ ಚಿತ್ರವನ್ನ ಬರೆಯುವ ಮೂಲಕ ಅಂತಿಮ ನಮನ ಸಲ್ಲಿಸಿದ್ದಾರೆ.

    ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಪರಮೇಶ್ ಇಂಟೀರಿಯರ್ ಡೆಕೋರೇಟರ್ ಸಿದ್ಧಾರ್ಥ್ ಹೆಗಡೆಯವರ ಭಾವಚಿತ್ರವನ್ನು ಕಾಫಿ ಪುಡಿ ಬಳಸಿ ತಯಾರಿಸಿರುವುದು ಗಮನಾರ್ಹವಾಗಿದೆ. ತುಮಕೂರು ನಗರದಲ್ಲಿರುವ ಕೆಫೆ ಕಾಫಿ ಡೇ ಗೆ ಬಂದ ಪರಮೇಶ್ ಅಲ್ಲಿನ ಸಿಬ್ಬಂದಿಯ ಅನುಮತಿಯ ಮೇರೆಗೆ ಅಲ್ಲಿಯೇ ಕಾಫಿ ಪುಡಿಯನ್ನು ಖರೀದಿ ಮಾಡಿ ಸಿದ್ಧಾರ್ಥ್ ಅವರ ಭಾವಚಿತ್ರವನ್ನು ರಚಿಸಿದ್ದಾರೆ.

    ಪರಮೇಶ್ ರಚಿಸಿರುವ ಭಾವಚಿತ್ರ ಸಿದ್ಧಾರ್ಥ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಸಿದ್ಧಾರ್ಥ್ ಅವರು ಸಾವಿರಾರು ಜನರಿಗೆ ಉದ್ಯೋಗ ಕೊಟ್ಟಿದ್ದಾರೆ. ಅವರು ತುಂಬಾ ಸರಳವಾದ ವ್ಯಕ್ತಿಯಾಗಿದ್ದು, ಕನ್ನಡದವರು ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿರುವುದು ಹೆಮ್ಮೆಯಾಗಿದೆ. ಹೀಗಾಗಿ ನಾನು ಅವರಿಗಾಗಿ ಒಂದು ಸಣ್ಣ ಅರ್ಪಣೆ ಮಾಡಬೇಕು ಎಂದು ವಿಶೇಷವಾಗಿ ಕಾಫಿಪುಡಿಯಲ್ಲಿ ಅವರ ಚಿತ್ರವನ್ನು ಬಿಡಿಸಿದ್ದೇನೆ. ಮೊದಲಿಗೆ ಗಮ್‍ನಲ್ಲಿ ಚಿತ್ರ ಬಿಡಿಸಿ ಅದರ ಮೇಲೆ ಕಾಫಿಪುಡಿ ಹಾಕಿ ಅವರ ಚಿತ್ರ ಬಿಡಿಸಿದ್ದೇನೆ. ಅವರ ಸಾವಿನಿಂದ ನನಗೂ ತುಂಬಾ ದುಃಖವಾಗಿದೆ ಎಂದು ಕಲಾವಿದ ಬೇಸರ ವ್ಯಕ್ತಪಡಿಸಿದ್ದಾರೆ.

    https://www.youtube.com/watch?v=Ebj1rDA8_uA

  • ಮಲ್ಪೆ ಕಡಲ ತೀರದಲ್ಲಿ ಮೋದಿ ಸ್ಯಾಂಡ್ ಆರ್ಟ್- ಯುವ ಕಲಾವಿದರಿಂದ ಪ್ರಧಾನಿಗೆ ಶುಭಾಶಯ

    ಮಲ್ಪೆ ಕಡಲ ತೀರದಲ್ಲಿ ಮೋದಿ ಸ್ಯಾಂಡ್ ಆರ್ಟ್- ಯುವ ಕಲಾವಿದರಿಂದ ಪ್ರಧಾನಿಗೆ ಶುಭಾಶಯ

    ಉಡುಪಿ: ಎರಡನೇ ಬಾರಿಗೆ ನರೇಂದ್ರ ಮೋದಿ ಅವರು ದೇಶದ ಆಡಳಿತ ಚುಕ್ಕಾಣಿ ಹಿಡಿದಿದ್ದು, ಈ ನಡುವೆ ಉಡುಪಿ ಜಿಲ್ಲೆಯ ಕುಂದಾಪುರದ ಮರಳು ಶಿಲ್ಪ ಕಲಾವಿದ ಹರೀಶ್ ಸಾಗಾ ಅವರ ತಂಡ ಪ್ರಧಾನಿ ಮೋದಿಗೆ ವಿಭಿನ್ನವಾಗಿ ವಿಶ್ ಮಾಡಿದ್ದಾರೆ.

    ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಸ್ಲೋಗನ್ ಅಡಿಯಲ್ಲಿ ರಚಿಸಿದ ಮರಳು ಶಿಲ್ಪ ಮಲ್ಪೆ ಕಡಲ ತೀರದ ಪ್ರವಾಸಿಗರನ್ನು ಆಕರ್ಷಿಸಿತು. ಅನೇಕ ಪ್ರವಾಸಿಗರು ಮೋದಿ ಅಭಿಮಾನಿಗಳು ಮರಳು ಶಿಲ್ಪದ ಎದುರು ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡರು. ಮರಳ ಶಿಲ್ಪದಲ್ಲಿ ಸಂಸದ್ ಭವನ, ಪ್ರಧಾನಿ ಮೋದಿಯನ್ನು ರಚಿಸಲಾಗಿದ್ದು ಬಹಳ ಆಕರ್ಷಕವಾಗಿದೆ.

    ಸಂಜೆ ಸೂರ್ಯಾಸ್ತ ನೋಡಲು ಬಂದ ಪ್ರವಾಸಿಗರಿಗೆ ಮರಳುಶಿಲ್ಪ ನೋಡುವ ಅವಕಾಶ ಸಿಕ್ಕಿದೆ. ಕಲಾವಿದ ಹರೀಶ್ ಸಾಗಾ ಮಾತನಾಡಿ, ನರೇಂದ್ರ ಮೋದಿ ಬಹುಮತದಿಂದ ಗೆದ್ದಿದ್ದಾರೆ. ಮೊದಲ ಭಾಷಣದಲ್ಲಿ ಎಲ್ಲರ ಜೊತೆಯಾಗಿದ್ದು, ಎಲ್ಲರ ಅಭಿವೃದ್ಧಿ ಮಾಡುತ್ತಾ, ಎಲ್ಲರ ವಿಶ್ವಾಸ ಗಳಿಸುವ ಘೋಷಣೆ ಮಾಡಿದ್ದಾರೆ. ಇದು ಉತ್ತಮ ಬೆಳವಣಿಗೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಮುಂಚೂಣಿಗೆ ಬರಲಿ. ಪ್ರಬಲ ದೇಶವಾಗಿ ಬೆಳೆಯಲಿ ಎಂಬ ಉದ್ದೇಶದಿಂದ ಈ ಆರ್ಟ್ ಮಾಡಿರುವುದಾಗಿ ಹೇಳಿದರು.

  • ವಿಶಿಷ್ಟ ರೀತಿಯಲ್ಲಿ ಮೃತ ವಿದ್ಯಾರ್ಥಿನಿಗೆ ಶ್ರದ್ಧಾಂಜಲಿ ಸಲ್ಲಿಸಿದ ಕಲಾವಿದ

    ವಿಶಿಷ್ಟ ರೀತಿಯಲ್ಲಿ ಮೃತ ವಿದ್ಯಾರ್ಥಿನಿಗೆ ಶ್ರದ್ಧಾಂಜಲಿ ಸಲ್ಲಿಸಿದ ಕಲಾವಿದ

    ರಾಯಚೂರು: ಜಿಲ್ಲೆಯ ಎಂಜಿನಿಯರಿಂಗ್ ವಿದ್ಯಾರ್ಥಿನಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ತುಮಕೂರಿನ ಕಲಾವಿದರೊಬ್ಬರು ವಿಶಿಷ್ಟ ರೀತಿಯಲ್ಲಿ ಮೃತ ವಿದ್ಯಾರ್ಥಿನಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

    ಪಂಚ ಕುಂಚ ಕಲಾವಿದ ತುಮಕೂರಿನ ಪರಮೇಶ್ ಗುಬ್ಬಿ ಮೃತ ವಿದ್ಯಾರ್ಥಿನಿಯ ಚಿತ್ರ ಬಿಡಿಸಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ವಿದ್ಯಾರ್ಥಿನಿ ಅಸಹಜ ಸಾವಿಗೆ ನ್ಯಾಯಕ್ಕಾಗಿ ಆಗ್ರಹಿಸಿ ದೇಶದೆಲ್ಲೆಡೆ ಕೂಗೂ ಜೋರಾಗಿದೆ. ಪ್ರಕರಣದಲ್ಲಿ ಇನ್ನಷ್ಟು ಆರೋಪಿಗಳು ಭಾಗಿಯಾಗಿದ್ದಾರಾ ಎನ್ನುವುದು ಬೆಳಕಿಗೆ ಬರಬೇಕು. ಈ ರೀತಿಯ ಘಟನೆಗಳು ಮರುಕಳಿಸದಂತೆ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಕಲಾವಿದ ಪರಮೇಶ್ ಆಗ್ರಹಿಸಿದ್ದಾರೆ. ಪರಮೇಶ್ ಅವರು ಚಿತ್ರ ಬಿಡಿಸಿದ ವಿಡಿಯೋ ಹಾಗೂ ಅವರು ಸ್ವತಃ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ವಿಡಿಯೋದಲ್ಲಿ ಪರಮೇಶ್ ಗುಬ್ಬಿ, “ಸರ್ಕಾರ ಈ ಕ್ರೂರಿಗಳಿಗೆ ಶಿಕ್ಷೆ ಕೊಡಬೇಕು. ಅಲ್ಲದೇ ಆ ಆರೋಪಿ ಜೊತೆ ಇದ್ದ ಉಳಿದ ಸಹಚರರನ್ನು ಹಿಡಿದು ಶಿಕ್ಷೆ ಕೊಡಿಸಿ ವಿದ್ಯಾರ್ಥಿನಿಗೆ ತಕ್ಕ ನ್ಯಾಯ ಒದಗಿಸಬೇಕು ಎಂದು ಕೇಳಿಕೊಳ್ಳುತ್ತೇನೆ. ಇದೇ ರೀತಿ ಹೆಣ್ಣು ಮಕ್ಕಳ ಮೇಲೆ ತುಂಬಾ ತೊಂದರೆ ಆಗುತ್ತಿದೆ. ಈ ರೀತಿ ಮಾಡಿದವರನ್ನು ಸರ್ಕಾರ ದೊಡ್ಡ ಶಿಕ್ಷೆ ಕೊಟ್ಟರೆ ಈ ರೀತಿ ಯಾರು ಮಾಡುವುದಿಲ್ಲ ಎಂಬುದು ನನ್ನ ಅನಿಸಿಕೆ” ಎಂದು ಹೇಳಿದ್ದಾರೆ.

    ಸದ್ಯ ರಾಜ್ಯಾದ್ಯಂತ ವಿದ್ಯಾರ್ಥಿಗಳು ಹಾಗೂ ವಿವಿಧೆಡೆಯಿಂದ ಆಕ್ರೋಶ ಹೆಚ್ಚಾದ ಹಿನ್ನೆಲೆಯಲ್ಲಿ ಕೊಲೆ ಮತ್ತು ಅತ್ಯಾಚಾರ ಪ್ರಕರಣ ತನಿಖೆಯನ್ನು ಸಿಐಡಿಗೆ ಒಪ್ಪಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಆಂದೋಲನ ತೀವ್ರ ಸ್ವರೂಪ ಪಡೆಯುತ್ತಿರುವುದರಿಂದ ರಾಯಚೂರು ಡಿವೈಎಸ್‍ಪಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು.

    ಏನಿದು ಪ್ರಕರಣ?
    ಏಪ್ರಿಲ್ 16 ರಂದು ಮೃತ ವಿದ್ಯಾರ್ಥಿನಿ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಪೊಲೀಸರು ಡೆತ್‍ನೋಟ್ ನೋಡಿ ಇದು ಆತ್ಮಹತ್ಯೆ ಎಂದು ಪ್ರಕರಣ ದಾಖಲಿಸಿದ್ದರು. ಬಳಿಕ ಮೃತ ಮಧು ತಾಯಿ ಇದು ಕೊಲೆಯಲ್ಲ. ನನ್ನ ಮಗಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ದೂರು ದಾಖಲಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಮೃತ ವಿದ್ಯಾರ್ಥಿನಿಯ ಗೆಳೆಯ ಸುದರ್ಶನ್‍ನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

    https://www.youtube.com/watch?v=1ol72NiFAPg

  • ಕೆಜಿಎಫ್ ಅರೆಹುಚ್ಚ ಪಾತ್ರಧಾರಿ ಲಕ್ಷ್ಮೀಪತಿ ಇನ್ನಿಲ್ಲ!

    ಕೆಜಿಎಫ್ ಅರೆಹುಚ್ಚ ಪಾತ್ರಧಾರಿ ಲಕ್ಷ್ಮೀಪತಿ ಇನ್ನಿಲ್ಲ!

    – ಚಿತ್ರ ನೋಡಿ ಸಂಭ್ರಮಿಸುವ ಮೊದಲೇ ಕೊನೆಯುಸಿರೆಳೆದ ಕೆಜಿಎಫ್ ಕಲಾವಿದ

    ಬೆಂಗಳೂರು: ಕೆಜಿಎಫ್ ನಿರೀಕ್ಷೆಗೂ ಮೀರಿದ ಗೆಲುವನ್ನು ಸಾಧಿಸಿದ್ದು, ಸಿನಿಮಾ ಲೋಕದಲ್ಲಿ ಅನೇಕ ದಾಖಲೆಗಳನ್ನು ಧೂಳೀಪಟ ಮಾಡಿರೋದರ ಬೆನ್ನಲ್ಲೇ ಕೆಜಿಎಫ್ ಅಭಿಮಾನಿಗಳಿಗೆ ಬೇಸರ ಮೂಡುವಂತಾ ಸುದ್ದಿ ಹೊರಬಿದ್ದಿದೆ. ಕೆಜಿಎಫ್ ಚಿತ್ರದಲ್ಲಿ ಕಾರ್ಮಿಕರ ನೋವನ್ನು ಬಿಚ್ಚಿಟ್ಟ ಕಲಾವಿದರೊಬ್ಬರು ತನ್ನ ಪಾತ್ರವನ್ನು ತೆರೆಯ ಮೇಲೆ ನೋಡಿ ಸಂಭ್ರಮಿಸುವ ಮೊದಲೇ ಕೊನೆಯುಸಿರೆಳೆದಿದ್ದಾರೆ.

    ನಿತ್ಯ ನೊಂದ ಕಾರ್ಮಿಕರ ಎದುರು ಭರವಸೆಯ ಕಥೆಗಳನ್ನು ಹೇಳಿ ಕ್ಷಣಕಾಲ ದುಃಖ ಮರೆಯುವಂತೆ ಮಾಡುವ ಹುಚ್ಚನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಲಕ್ಷ್ಮೀಪತಿ ಅವರು ಚಿತ್ರ ತೆರೆಕಾಣುವ ಮುನ್ನವೇ ಮೃತಪಟ್ಟಿದ್ದಾರೆ. ನಿಧನದ ಸುದ್ದಿಯನ್ನು ಕೆಜಿಎಫ್ ತಂಡವು ಇದೀಗ ಬಹಿರಂಗಪಡಿಸಿದೆ.

    ಕೆಜಿಎಫ್ ಚಿತ್ರದ ಛಾಯಾಗ್ರಾಹಕ ಭುವನ್ ಗೌಡ ಅವರು, ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಲಕ್ಷ್ಮೀಪತಿ ನಿಧನದ ಸುದ್ದಿ ಹಾಗೂ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಚಿತ್ರದಲ್ಲಿ ಹುಚ್ಚನ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ ಲಕ್ಷ್ಮೀಪತಿ ಅವರು ನಿಧನರಾಗಿದ್ದಾರೆ. ಜಾಂಡೀಸ್ ನಿಂದ ಬಳಲುತ್ತಿದ್ದ ಅವರು ಚಿತ್ರ ತೆರೆಕಾಣುವುದಕ್ಕೂ ಮುನ್ನವೇ ನಮ್ಮನ್ನು ಅಗಲಿದ್ದಾರೆ ಎಂದು ಪೋಸ್ಟ್ ಮಾಡಿದ್ದಾರೆ.

    https://www.facebook.com/bhuvan.gowda.18/videos/2074427639262562/

    ಕೆಜಿಎಫ್ ಚಿತ್ರದಲ್ಲಿ ನರಾಚಿ ಕಾರ್ಖಾನೆಯ ಕಾರ್ಮಿಕರ ದುಗುಡ ದುಮ್ಮಾನಗಳನ್ನು ಲಕ್ಷ್ಮೀಪತಿ ವಿವರಿಸುತ್ತಿರುವ ದೃಶ್ಯ ಈಗ ವೈರಲ್ ಆಗಿದೆ. ಈ ವೀಡಿಯೋದಲ್ಲಿ ಲಕ್ಷ್ಮೀಪತಿ ಅವರು ತಮ್ಮ ಪಾತ್ರದಲ್ಲಿ, ‘ಸುಡುವ ಬೆಂಕಿಯಲ್ಲಿ ಸುರಿವ ಮಳೆಯಂತೆ, ಮೃತ್ಯುವಿನ ಮನೆಯಲ್ಲಿ ಮೃತ್ಯುಂಜಯನಂತೆ, ದೌಲತ್ತಿನೆದುರು ದಂಗೆಯಾ ರೂಪದಲ್ಲಿ, ದಶಕಂಠನೆದುರು ಧನುಜಾರಿ ರೀತಿಯಲ್ಲಿ, ಉರಿವ ಜಮದಗ್ನಿಯ ಬೆದರಿಸಿ, ಸರ್ವವೂ ತಾನೆಂದು ಪರಮಾತ್ಮನನ್ನು ಪ್ರಶ್ನಿಸಿ, ಸಿಡಿಲಂತೆ ಸಿಡಿದ ಧೀರನೊಬ್ಬನ ಕಥೆ’ ಎನ್ನುತ್ತಾ ಪಾತ್ರಕ್ಕೆ ಜೀವ ತುಂಬಿದ್ದರು.

    ಭುವನ್ ಗೌಡ ಅವರು ಹಾಕಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಶೇರ್ ಮಾಡಿಕೊಂಡು ಕಲಾವಿದನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಬೇಡಿಕೊಂಡಿದ್ದಾರೆ. ಇತ್ತ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಕೂಡ ಲಕ್ಷ್ಮೀಪತಿ ಅವರ ವೀಡಿಯೋ ಟ್ವೀಟ್ ಮಾಡುವ ಮೂಲಕ ನಮನ ಸಲ್ಲಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಜ್ಜಿಗೆ ಇಳಿ ವಯಸ್ಸಾದ್ರೂ ಹಾಡುಗಾರಿಕೆಯಲ್ಲಿ ಹದಿಹರೆಯ-6 ದಶಕಗಳು ರಂಜಿಸಿದ ಕಲಾವಿದೆಗೆ ಬೇಕಿದೆ ಸಹಾಯ

    ಅಜ್ಜಿಗೆ ಇಳಿ ವಯಸ್ಸಾದ್ರೂ ಹಾಡುಗಾರಿಕೆಯಲ್ಲಿ ಹದಿಹರೆಯ-6 ದಶಕಗಳು ರಂಜಿಸಿದ ಕಲಾವಿದೆಗೆ ಬೇಕಿದೆ ಸಹಾಯ

    ಕಲಬುರಗಿ: ನಮ್ಮ ಗ್ರಾಮೀಣ ಭಾಗದಲ್ಲಿ ಮೌಖಿಕ ಬುರ್ರಾ ಕಥೆ ಜಾನಪದ ಕಲೆ ಇದೀಗ ನಶಿಸಿ ಹೋಗುತ್ತಿದೆ. ಇಂತಹದರಲ್ಲಿ ಕಲಬುರಗಿಯ ವೃದ್ಧ ದಂಪತಿ ಇಂದಿಗೂ ಅದೇ ಕಲೆಯನ್ನು ಜೀವಾಳವಾಗಿ ಮಾಡಿಕೊಂಡಿದ್ದಾರೆ. ದುರಂತ ಅಂದ್ರೆ ಆ ಕಲೆಗೆ ಇದೀಗ ಬೆಲೆಯಿಲ್ಲದ ಕಾರಣ ವೃದ್ಧ ದಂಪತಿ ಸಂಕಷ್ದಲ್ಲಿದ್ದಾರೆ.

    ಜಾನಪದ ಕಥೆಗಳನ್ನು ಹಾಡಿನ ರೂಪದಲ್ಲಿ ಹಾಡುವ ಅಜ್ಜಿಯ ಹೆಸರು ಶಂಕ್ರಮ್ಮ. ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ರಾಮತೀರ್ಥ ಗ್ರಾಮದ ನಿವಾಸಿಯಾಗಿದ್ದು, ಈ ಇಳಿ ವಯಸ್ಸಿನಲ್ಲಿ ಸಹ ಇವರು ಹರಿಹರೆಯದವರು ನೋಡಿ ನಾಚುವಂತಹ ಎನರ್ಜಿ ಹೊಂದಿದ್ದಾರೆ. ಒಮ್ಮೆ ಕಥೆಗಳನ್ನು ಹೇಳಲು ಆರಂಭಿಸಿದ್ರೆ ಸಾಕು ಗಂಟೆಗಳು ಸಾಲೋದಿಲ್ಲ. ಅಜ್ಜಿ ಅನಕ್ಷರಸ್ಥೆ ಅಲ್ಲದೆ ಎಲ್ಲಿಯೂ ಓದಿ ಕಲಿತಿದಲ್ಲ. ಬದಲಾಗಿ ಆಡು ಮಾತುಗಳನ್ನು ಕಥೆಗಳನ್ನಾಗಿ ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲಿ ಕಥೆ ಹೇಳುತ್ತಾರೆ.

    ಅಜ್ಜಿ 10 ವರ್ಷದವಳಿದ್ದಾಗ ಅವರ ತಾಯಿ ಕಥೆಗಳನ್ನ ಹೇಳುತ್ತಾ ಜೀವನ ಸಾಗಿಸುತ್ತಿದ್ದರು. ಅವರ ಜೊತೆ ಹೋಗಿ ಬಾಯಿಂದನೆ ಕಲಿತ ವಿದ್ಯಯಿದು, ಬುರ್ರಾ ಕಥೆಗಳ ಅಂದ್ರೆ ಹಳೆಯ ಕಾಲದ ಇತಿಹಾಸವನ್ನ ಮತ್ತು ದೇವರ ಕಥೆಗಳನ್ನ ಹೇಳುತ್ತಾರೆ. ಇದೇ ರೀತಿ ಹಳ್ಳಿ ಹಳ್ಳಿಗೆ ಹೋಗಿ ತಮ್ಮ ಕುಟುಂಬವನ್ನು ನಿರ್ವಹಣೆ ಮಾಡಿಕೊಂಡು ಬಂದಿದ್ದಾರೆ. ಆದರೆ ಇಂತಹ ದಂಪತಿಗಿಗೆ ವಯಸ್ಸಾದ ಹಿನ್ನಲೆ ಆ ಶಕ್ತಿ ಉಳಿದಿಲ್ಲ.

    ಅಜ್ಜಿ ಶಂಕ್ರಮ್ಮರ ಗಂಡನಾದ ಮಹದೇವಪ್ಪ ಸಾಥ್ ನೀಡಿದ್ದು ಅವರು ಸಹ ಹಗಲುವೇಷ ಮತ್ತು ಹಾರ್ಮೋನಿಯಂ ನುಡಿಸುತ್ತಾರೆ. ಇಂತಹ ಕಲಾವಿದ ದಂಪತಿಗೆ ಇಲ್ಲಿಯವರೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾವಿದರಿಗೆ ನೀಡುವ ಪಿಂಚಣಿ ಸಹ ನೀಡಿಲ್ಲ. ಇನ್ನು ಸ್ವಂತ ಮನೆಯಿಲ್ಲದ ಕಾರಣ ಈ ದಂಪತಿ ಮತ್ತು ಮಗ ಮಾರುತಿ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ವೃದ್ಯಾಪ ಮಾಶಾಸನ ಪಡೆಯಬೇಕು ಅಂದ್ರೆ ತಹಶೀಲ್ದಾರ್ ಕಚೇರಿಯ ಸಿಬ್ಬಂದಿ ಆಟವಾಡುತ್ತಿದ್ದಾರೆ. ಹೀಗಾಗಿ ಸರ್ಕಾರ ನಮ್ಮ ತಂದೆ-ತಾಯಿಯ ನೆರವಿಗೆ ಬರಲಿ ಎಂದು ಮಾರುತಿ ಮಗ ವಿನಂತಿಸುತ್ತಿದ್ದಾರೆ.

    ಶಂಕ್ರಮ್ಮ ಅವರ ಬುರ್ರಾ ಕಥೆಗಳ ಕನ್ನಡ ಮತ್ತು ತೆಲುಗು ತವಲಾನಿಕ ಅಧ್ಯಯನ ಕನ್ನಡ ವಿಶ್ವವಿದ್ಯಾಲಯದಲ್ಲಿ ಮಾಣಿಕಪ್ಪ ಎಂಬವರು ಪಿಎಚ್‍ಡಿ ಅವಾರ್ಡ್ ಪಡೆದಿದ್ದಾರೆ. ಇಷ್ಟಾದರೂ ಸರ್ಕಾರ ಮಾತ್ರ ಇವರ ಕಲೆಗೆ ಬೆಲೆ ನೀಡದಿರುವದು ದುರಂತ. ಹೀಗಾಗಿ ಈ ಕಲಾವಿದರು ಸ್ವಂತ ಮನೆ, ವೃದ್ಯಾಪ ಪಿಂಚಣಿ ಮತ್ತು ಕಲಾವಿದರಿಗೆ ಸಿಗಬೇಕಾದ ಮಾಶಾಸನದ ನೀರಿಕ್ಷೆಯಲ್ಲಿದ್ದಾರೆ.

    https://www.youtube.com/watch?v=bVErt77iCRs

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಚಿತ್ರ ಕಲಾವಿದನಿಗೆ ಸಹಾಯ ಹಸ್ತ ಚಾಚಿದ್ರು ರಾಜೇಶ್ ಕೃಷ್ಣನ್

    ಚಿತ್ರ ಕಲಾವಿದನಿಗೆ ಸಹಾಯ ಹಸ್ತ ಚಾಚಿದ್ರು ರಾಜೇಶ್ ಕೃಷ್ಣನ್

    ಬೆಂಗಳೂರು: ಸ್ಯಾಂಡಲ್‍ವುಡ್ ಗಾಯಕ ರಾಜೇಶ್ ಕೃಷ್ಣನ್ ಅವರು ಚಿತ್ರ ಕಲಾವಿದ ನಾಗರಾಜ್ ಅವರಿಗೆ ಸಹಾಯ ಹಸ್ತ ಚಾಚಿದ್ದಾರೆ.

    ಚಿತ್ರಕಲೆಯನ್ನೇ ನಂಬಿ ಬದುಕಿದ್ದ ನಾಗರಾಜ್ ಅವರಿಗೆ ಓಪನ್ ಹಾರ್ಟ್ ಸರ್ಜರಿ ಆಗಿದ್ದು, ವೈದ್ಯರು ಅವರಿಗೆ ವಿಶ್ರಾಂತಿ ಪಡೆಯಲು ಹೇಳಿದ್ದಾರೆ. ಆದರೆ ನಾಗರಾಜ್ ಅವರ ಮನೆಯಲ್ಲಿ ಅವರು ಬಿಟ್ಟರೆ ಬೇರೆ ಯಾರೂ ದುಡಿಯುವವರಿಲ್ಲ.

    ನಾಗರಾಜ್ ಈ ಕಲೆಯಿಂದಲೇ ತಮ್ಮ ಪತ್ನಿ ಹಾಗೂ ಮಕ್ಕಳನ್ನು ಸಾಕುತ್ತಿದ್ದರು. ಈಗ ಕೂಡ ಈ ಕಲೆಯಿಂದಲೇ ತಮ್ಮ ಪತ್ನಿ ಹಾಗೂ ಮಕ್ಕಳನ್ನು ಸಾಕಬೇಕಿದೆ. ಹೀಗಾಗಿ ಆರ್ಥಿಕ ಸಂಕಷ್ಟದಲ್ಲಿರುವ ನಾಗರಾಜ್ ಅವರಿಗೆ ಸಹಾಯ ಮಾಡಲು ರಾಜೇಶ್ ಕೃಷ್ಣನ್ ಅವರು ಶೇಷಾದ್ರಿಪುರಂ ಕಾಲೇಜಿನಲ್ಲಿ ಸಂಗೀತಾ ಕಾರ್ಯಕ್ರಮವನ್ನು ನಡೆಸಿದ್ದಾರೆ. ಅಲ್ಲದೇ ಆ ಕಾರ್ಯಕ್ರಮದಲ್ಲಿ ಬಂದ ಹಣವನ್ನು ನಾಗರಾಜ್ ಅವರ ಕುಟುಂಬಕ್ಕೆ ನೀಡಿ ಸಹಾಯ ಮಾಡಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಸದಾ ನಿಮ್ಮೊಂದಿಗೆ’ ಕಾರ್ಯಕ್ರಮದಲ್ಲಿ ಈ ವಾರ ಗಾಯಕ ರಾಜೇಶ್ ಕೃಷ್ಣನ್ ಭಾಗವಹಿಸುತ್ತಿದ್ದಾರೆ. ಸದ್ಯ ಈ ಕಾರ್ಯಕ್ರಮದ ಶೀರ್ಷಿಕೆ ಹಾಡನ್ನು ಕೂಡ ರಾಜೇಶ್ ಕೃಷ್ಣನ್ ಅವರೇ ಹಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 5 ಬೆರಳಿಗೆ ಕುಂಚ ಕಟ್ಟಿಕೊಂಡು ಸಲೀಸಾಗಿ ಚಿತ್ರ ಬಿಡಿಸ್ತಾರೆ ಕಲಾವಿದ

    5 ಬೆರಳಿಗೆ ಕುಂಚ ಕಟ್ಟಿಕೊಂಡು ಸಲೀಸಾಗಿ ಚಿತ್ರ ಬಿಡಿಸ್ತಾರೆ ಕಲಾವಿದ

    ಹಾವೇರಿ: ಕುಂಚ ಹಿಡಿದುಕೊಂಡು ಒಂದು ಕೈಯಲ್ಲಿ ಚಿತ್ರ ಬಿಡಿಸುವ ಕಲಾವಿದರನ್ನು ನೀವು ನೋಡಿರಬಹುದು. ಆದರೆ ಜಿಲ್ಲೆಯ ಕಲಾವಿದರೊಬ್ಬರು ಕೈಯಲ್ಲಿನ ಐದೂ ಬೆರಳಿಗೆ ಕುಂಚ ಕಟ್ಟಿಕೊಂಡು ಸಲೀಸಾಗಿ ಚಿತ್ರ ಬಿಡಿಸುತ್ತಾರೆ.

    ಬ್ಯಾಡಗಿ ಪಟ್ಟಣದ ಹೂಗಾರ ನಿವಾಸಿ ಸುಭಾಶ್ ಅವರು 5 ಬೆರಳಿನಲ್ಲಿ ಕುಂಚವನ್ನು ಕಟ್ಟಿಕೊಂಡು ಚಿತ್ರ ಬಿಡಿಸಿ ಫೇಮಸ್ ಆಗಿದ್ದಾರೆ. ವೃತ್ತಿಯಲ್ಲಿ ಚಿತ್ರಕಲಾ ಶಿಕ್ಷಕರಾಗಿರುವ ಸುಭಾಶ್ ಸದಾ ಹೊಸ ಹೊಸ ಪ್ರಯತ್ನ ಮಾಡುತ್ತಿರುತ್ತಾರೆ. ಬಾಲ್ಯದಿಂದಲೂ ಚಿತ್ರ ಬಿಡಿಸುವುದನ್ನು ಕರಗತ ಮಾಡಿಕೊಂಡಿರುವ ಸುಭಾಶ್ ಈಗಾಗಲೇ ಸಾವಿರಾರು ಚಿತ್ರಗಳನ್ನು ಬಿಡಿಸಿದ್ದಾರೆ.

    ಆರಂಭದಲ್ಲಿ ಸುಭಾಶ್ ಸಹ ಕೈಯಲ್ಲಿ ಕುಂಚ ಹಿಡಿದುಕೊಂಡು ಚಿತ್ರ ಬಿಡಿಸುತ್ತಿದ್ದರು. ಆಗ ಒಂದು ಚಿತ್ರ ಬಿಡಿಸಲು ಹೆಚ್ಚಿನ ಸಮಯ ಬೇಕಾಗುತ್ತಿತ್ತು. ಹೀಗಾಗಿ ಕೈಯಲ್ಲಿನ ಐದೂ ಬೆರಳಿಗೆ ಕುಂಚ ಕಟ್ಟಿಕೊಂಡು ಚಿತ್ರ ಬಿಡಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಏಕಕಾಲಕ್ಕೆ ಐದೂ ಬೆರಳಿಗೆ ಕುಂಚ ಕಟ್ಟಿಕೊಂಡು ಚಿತ್ರ ಬಿಡಿಸುವುದರಿಂದ ಕಡಿಮೆ ಅವಧಿಯಲ್ಲಿ ಚಿತ್ರವನ್ನು ಸುಲಭವಾಗಿ ಬಿಡಿಸಬಹುದು ಎಂದು ಹೇಳುತ್ತಾರೆ.

    ಬೆರಳಿಗೆ ಕುಂಚ ಕಟ್ಟಿಕೊಂಡು ಗೀಚಾಟ ಶುರು ಮಾಡಿದರೆ ಸಾಕು ನೋಡ ನೋಡುತ್ತಿದ್ದಂತೆ ಚಿತ್ರಗಳು ನಮ್ಮೆದುರಿಗೆ ನಿಲ್ಲುತ್ತವೆ. ನಿಸರ್ಗ, ಜಾನಪದ ಕಲೆ, ಮಹಾಪುರುಷರ ಚಿತ್ರಗಳು, ವಿಭಿನ್ನವಾದ ಕಲೆಗಳು ಜೀಗೆ ತರಹೇವಾರಿ ಚಿತ್ರಗಳನ್ನು ಕಲಾವಿದ ಸುಭಾಶ್ ಪಟಾಪಟ್ ಅಂತಾ ಬಿಡಿಸ್ತಾರೆ. ಬೆರಳಿಗೆ ಕುಂಚ ಕಟ್ಟಿಕೊಂಡು ಬಣ್ಣಗಳನ್ನು ರೆಡಿ ಮಾಡಿಕೊಂಡು ಚಿತ್ರಗಳನ್ನು ಸೊಗಸಾಗಿ ಬಿಡಿಸುತ್ತಾರೆ.

    ಸುಭಾಶ್ ಕೈಯಲ್ಲಿ ಅರಳಿದ ಚಿತ್ರಗಳು ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ಈಗಾಗಲೇ ಪ್ರದರ್ಶನ ಕಂಡಿವೆ. ಕನಿಷ್ಟ 10 ಸಾವಿರ ರೂ. ಹಾಗೂ ಲಕ್ಷ ಲಕ್ಷಕ್ಕೂ ಮಾರಾಟ ಆಗಿದೆ. ಅನೇಕ ಬಾರಿ ಚಿತ್ರ ಸಂತೆಗಳಲ್ಲಿ ಸುಭಾಶ್‍ರ ಕೈಯಲ್ಲಿ ಅರಳಿದ ಸಾಕಷ್ಟು ಚಿತ್ರಗಳು ಮಾರಾಟ ಆಗಿದೆ. ಶಿಕ್ಷಕ ಸುಭಾಶ್‍ರ ಚಿತ್ರಕಲೆಗೆ ಮನಸೋಲದವರೆ ಇಲ್ಲ. ಇವರ ಚಿತ್ರಗಳನ್ನು ನೋಡುತ್ತಾ ನಿಂತರೆ ಮನಸ್ಸಿಗೆ ಮುದ, ಕಣ್ಣಿಗೆ ಹಬ್ಬ ಉಂಟು ಮಾಡುತ್ತವೆ ಎಂದು ಸ್ಥಳೀಯರು ಹೇಳುತ್ತಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv