Tag: arrest

  • ಹಾಡಹಗಲೇ ಡಾಕ್ಟರ್ ಹೊಟ್ಟೆಗೆ ಚಾಕು ಇರಿತ – ವ್ಯಕ್ತಿ ಅರೆಸ್ಟ್

    ಹಾಡಹಗಲೇ ಡಾಕ್ಟರ್ ಹೊಟ್ಟೆಗೆ ಚಾಕು ಇರಿತ – ವ್ಯಕ್ತಿ ಅರೆಸ್ಟ್

    ಕಲಬುರಗಿ: ಹಾಡಹಗಲೇ ವ್ಯಕ್ತಿಯೊಬ್ಬ ವೈದ್ಯರ ಹೊಟ್ಟೆಗೆ ಚಾಕುವಿನಿಂದ ಇರಿದು ಇದೀಗ ಪೊಲೀಸರ ಅತಿಥಿಯಾದ ಘಟನೆ ಕಲಬುರಗಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದಿನ ಸಿದ್ದಗಂಗಾ ಡೆಂಟಲ್ ಆಸ್ಪತ್ರೆ ಮುಂದೆ ನಡೆದಿದೆ.

    ಡಾ. ವಿಶ್ವನಾಥ್ ಪಾಟೀಲ್ ಚಾಕು ಇರಿತಕ್ಕೊಳಗಾದ ವೈದ್ಯ. ಇವರು ರಸ್ತೆ ಬದಿ ಡಸ್ಟರ್ ಕಾರು ನಿಲ್ಲಿಸಿ ಕಾಂಪ್ಲೆಕ್ಸ್ ವೊಂದರ ಕಡೆ ಹೋಗ್ತಿದ್ದರು. ಈ ವೇಳೆ ಏಕಾಏಕಿ ಬಂದ ಅನಾಮಧೇಯ ವ್ಯಕ್ತಿ ವೈದ್ಯರಿಗೆ ಚಾಕುವಿನಿಂದ ಇರಿದಿದ್ದಾನೆ.

    ಚಾಕು ಇರಿತದಿಂದ ವಿಶ್ವನಾಥ್ ಹೊಟ್ಟೆಯಿಂದ ರಕ್ತಸ್ರಾವವಾಗಿದೆ. ಇತ್ತ ಚಾಕು ಇರಿದ ವ್ಯಕ್ತಿಯ ಬಳಿ ನೋಟ್ ಬುಕ್ ಹಾಗೂ ಅದರಲ್ಲಿ ಡಾ. ವಿಶ್ವನಾಥ್‍ರ ಡಿಟೈಲ್ಸ್ ಪತ್ತೆಯಾಗಿದೆ. ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಚಾಕು ಇರಿದಿರುವ ಶಂಕೆ ವ್ಯಕ್ತವಾಗಿದೆ.

    ಸ್ಥಳಕ್ಕೆ ಸ್ಟೇಷನ್ ಬಜಾರ್ ಠಾಣೆ ಪೊಲೀಸರು ಭೇಟಿ ನೀಡಿ ವ್ಯಕ್ತಿಯನ್ನ ಬಂಧಿಸಿದ್ದಾರೆ.

  • ಎಸ್‍ಪಿ ಹೆಸರು ಹೇಳಿ ಪಿಎಸ್‍ಐಗೆ ಮಕ್ಮಲ್ ಟೋಪಿ ಹಾಕಿದವ ಅರೆಸ್ಟ್

    ಎಸ್‍ಪಿ ಹೆಸರು ಹೇಳಿ ಪಿಎಸ್‍ಐಗೆ ಮಕ್ಮಲ್ ಟೋಪಿ ಹಾಕಿದವ ಅರೆಸ್ಟ್

    ಕಲಬುರಗಿ: ಜಿಲ್ಲೆಯ ಎಸ್‍ಪಿ ಸಿಮಿ ಮರಿಯಮ್ ಜಾರ್ಜ್ ಹೆಸರಲ್ಲಿ ಪಿಎಸ್‍ಐ ಬಳಿ ಹಣ ಪಡೆದು ವಂಚನೆ ಮಾಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

    ಜಿಲ್ಲೆಯ ಜೇವರ್ಗಿ ಪೊಲೀಸ್ ಠಾಣೆಯ ಪಿಎಸ್‍ಐ ಮಂಜುನಾಥ್ ಹೂಗಾರಗೆ ಜೇವರ್ಗಿ ತಾಲೂಕಿನ ಕೊಂಡಗುಳಿ ಗ್ರಾಮದ ಖಾಸಿಂ ಪಟೇಲ್ ಕೆಲ ತಿಂಗಳ ಹಿಂದೆ ಪರಿಚಯ ಮಾಡಿಕೊಂಡಿದ್ದು, ನನಗೆ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ರಾಜಕೀಯ ನಾಯಕರ ಎಲ್ಲರೊಂದಿಗೆ ಒಳ್ಳೆಯ ಒಡನಾಟವಿದೆ ಅಂತ ಪಿಎಸ್‍ಐಗೆ ವಂಚಕ ಹೇಳಿದ್ದಾನೆ. ವಂಚಕನ ಜಾಲಕ್ಕೆ ಬಿದ್ದ ಪಿಎಸ್‍ಐ ಹೂಗಾರ ನಿಜಕ್ಕೂ ಈತ ಒಳ್ಳೆಯ ಪ್ರೊಫೈಲ್ ವ್ಯಕ್ತಿ ಎಂದು ನಂಬಿ ಸ್ನೇಹ ಬೆಳೆಸಿಕೊಂಡಿದ್ದಾರೆ.

    ಇದನ್ನೇ ಎನ್‍ಕ್ಯಾಶ್ ಮಾಡಿಕೊಂಡ ವಂಚಕ ಖಾಸಿಂ, ಕೆಲ ದಿನಗಳ ನಂತರ ಕಾನೂನು ಸುವ್ಯವಸ್ಥೆಯಲ್ಲಿ ತೊಡಕು ಉಂಟಾದ್ರೆ ಎಸ್‍ಪಿ ಮೇಡಂಗೇ ಹೇಳಿ ಬಗೆಹರಿಸೋದಾಗಿ ನಂಬಿಸಿದ್ದಾನೆ. ಎಸ್‍ಪಿ ಸಿಮಿ ಮರಿಯಮ್ ಜಾರ್ಜ್ ಅವರ ಡಿಪಿಯನ್ನು ಇಟ್ಟು ಎಸ್‍ಪಿ ಮೇಡಂ ಅವರು ಕೆಲವೇ ಕೆಲವು ಜನರಿಗೆ ಅವರ ನಂಬರ್ ನೀಡಿದ್ದಾರೆ. ಅದರಲ್ಲಿ ನಾನು ಸಹ ಒಬ್ಬನಾಗಿದ್ದೆನೆ. ನಿಮ್ಮ ಬಳಿ ಸಹ ಈ ನಂಬರ್ ಇರಲಿ. ಆದರೆ ಯಾವುದೇ ಕಾರಣಕ್ಕು ಅವರಿಗೆ ಕಾಲ್ ಮಾಡಬೇಡಿ, ಏನೇ ಸಮಸ್ಯೆಯಾದ್ರೆ ಬರೀ ವಾಟ್ಸಪ್ ಅಂತ ಹೇಳಿದ್ದಾನೆ.

    ಕೆಲ ದಿನಗಳ ನಂತರ ಎಸ್‍ಎಂಜಿ ನಂಬರ್ ನಿಂದ ತುರ್ತಾಗಿ ಹಣ ಬೇಕಾಗಿದೆ ಅಂತ ಪಿಎಸ್‍ಐ ಕಡೆಯಿಂದ 2.5 ಲಕ್ಷ ಪಡೆದಿದ್ದಾನೆ. ನಂತರ ಕೆಲ ದಿನಗಳ ಬಳಿಕ ಮತ್ತೆ 6 ಲಕ್ಷ ಹಣ ಪಡೆದಿದ್ದಾನೆ.

    ಪಿಎಸ್‍ಐ ಹಣ ನೀಡಿದ್ದು ಯಾಕೆ..?
    ವಂಚಕ ಖಾಸೀಂ ತನ್ನ ಪರ್ಸನಲ್ ನಂಬರನ್ನೇ ಎಸ್‍ಪಿ ಅವರ ಮೊಬೈಲ್ ನಂಬರ್ ಅಂತ ನಂಬಿಸಿ ಬಿಟ್ಟಿದ್ದ. ಅದಾದ ಬಳಿಕ ನಮ್ಮ ತಂದೆಯವರಿಗೆ ಕೇರಳದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತುರ್ತು ಹಣ ಬೇಕು ಅಂತ ವಾಟ್ಸಪ್ ಮೇಸೆಜ್ ಕಳುಹಿಸಿದ್ದಾನೆ. ಈ ವೇಳೆ ಮಂಜುನಾಥ ಹೂಗಾರ ಅವರು ಎಸ್‍ಪಿ ಅವರಿಗೆ ಹಣದ ಅವಶ್ಯಕತೆ ಇದೆ ಅಂತ ಮೊದಲಿಗೆ ತನ್ನ ಸ್ನೇಹಿತನಿಂದ ಎರಡೂವರೆ ಲಕ್ಷ ಸಾಲ ಪಡೆದಿದ್ದರು. ನಂತರ 6 ಲಕ್ಷ ಹಣ ಬೇಕು ಅಂತ ಎರಡನೇ ಬಾರಿ ವಾಟ್ಸಪ್ ಮೆಸೇಜ್ ಬಂದಾಗ ಪಿಎಸ್‍ಐ ಹೂಗಾರ ತನ್ನ ಸ್ಟೇಷನ್ ಬಜಾರ್ ವ್ಯಾಪ್ತಿಯ ಎಸ್‍ಬಿಐ ಬ್ಯಾಂಕಿನಲ್ಲಿಟ್ಟ ಫಿಕ್ಸ್ಡ್ ಡೆಪಾಸಿಟ್ ಹಣವನ್ನು ಕ್ಯಾನ್ಸಲ್ ಮಾಡಿಸಿ ಆರೋಪಿಗೆ ನೀಡಿದ್ದಾರೆ.

    ಪ್ರಕರಣ ಬೆಳಕಿಗೆ: ಎರಡು ದಿನದ ಹಿಂದೆ ಅದೇ ನಂಬರ್ ನಿಂದ ಪಿಎಸ್‍ಐಗೆ ಒಂದು ವಾಟ್ಸಪ್ ವಾಯ್ಸ್ ಕಾಲ್ ಬಂದಿದ್ದು, ವಾಯ್ಸ್ ಕಾಲ್ ನಲ್ಲಿ ಉರ್ದು ಮಿಶ್ರಿತ ಹಿಂದಿ ಭಾಷೆಯಲ್ಲಿ ಹೆಣ್ಣು ಮಕ್ಕಳು ಮಾತಾಡಿರುವ ಧ್ವನಿ ಕೇಳಿ ಅನುಮಾನ ಬಂದಿದೆ. ಈ ಹಿನ್ನೆಲೆ ಪಿಎಸ್‍ಐ ಅವರು ವಂಚಕ ಖಾಸಿಂ ಪಟೇಲ್ ಮೇಲೆ ಅನುಮಾನ ಬಂದು ಎಸ್‍ಪಿ ಅವರನ್ನು ಸಂಪರ್ಕಿಸಿದ್ದಾರೆ. ಅದು ನನ್ನ ನಂಬರ್ ಅಲ್ಲ ನಿಮಗೆ ಮೋಸ ಮಾಡಿದ್ದಾನೆ ಹೋಗಿ ಪ್ರಕರಣ ದಾಖಲಿಸಿ ಎಂದು ಎಸ್ಪಿ ಸೂಚನೆ ನೀಡಿದ್ದಾರೆ.

    ಹೀಗಾಗಿ ಕಲಬುರಗಿ ನಗರದ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ವಂಚಕನ ವಿರುದ್ಧ ಪಿಎಸ್‍ಐ ಮಂಜುನಾಥ್ ಹೂಗಾರ ದೂರು ಸಲ್ಲಿಸಿದ್ದಾರೆ. ಸದ್ಯ ಆರೋಪಿಯನ್ನು ಸ್ಟೇಷನ್ ಬಜಾರ್ ಪೊಲೀಸರು ಆರೋಪಿ ಖಾಸಿಂ ಪಟೇಲ್ ಬಂಧಿಸಿದ್ದು, ಬಂಧಿತನಿಂದ 2 ಲಕ್ಷ ಹಣ ವಶಪಡಿಸಿಕೊಂಡಿದ್ದಾರೆ.

  • ಮಂಡ್ಯದಲ್ಲಿ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡ್ತಿದ್ದ ಶಿಕ್ಷಕ ಅರೆಸ್ಟ್

    ಮಂಡ್ಯದಲ್ಲಿ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡ್ತಿದ್ದ ಶಿಕ್ಷಕ ಅರೆಸ್ಟ್

    ಮಂಡ್ಯ: ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಗ್ರಾಮವೊಂದರ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಶಿಕ್ಷಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಶಿಕ್ಷಕನನ್ನು ಬಿ.ಟಿ.ಕೃಷ್ಣೇಗೌಡ ಎಂದು ಗುರುತಿಸಲಾಗಿದೆ. ಈತ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸುವುದರ ಜೊತೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಯಾರಿಗಾದರೂ ಹೇಳಿದರೆ ಫೇಲ್ ಮಾಡುತ್ತೇನೆ ಎಂದು ಸಹ ಹೆದರಿಸುತ್ತಿದ್ದ.

    ಕೊನೆಗೆ ಈತನ ಕಿರುಕುಳ ತಾಳಲಾರದೆ ವಿದ್ಯಾರ್ಥಿಯನಿಬ್ಬರು ತಮ್ಮ ಪೋಷಕರಿಗೆ ಈ ಬಗ್ಗೆ ವಿಷಯ ತಿಳಿಸಿದ್ದಾರೆ. ಆದರೆ ಪೋಷಕರು ಮರ್ಯಾದೆಗೆ ಅಂಜಿ ಶಿಕ್ಷಕ ಕೃಷ್ಣೇಗೌಡನನ್ನು ಗದರಿಸಿ ದೂರು ನೀಡದೆ ಸುಮ್ಮನಾಗಿದ್ದಾರೆ. ಇದಾದ ಬಳಿಕವು ಈ ಶಿಕ್ಷಕನ ಕಿರುಕುಳ ಮುಂದುವರಿದ ಕಾರಣ ಕೆಲ ಗ್ರಾಮಸ್ಥರು ಈತನ ಬಗ್ಗೆ ಬಿಇಓ ಬಸವರಾಜು ಅವರಿಗೆ ದೂರು ನೀಡಿದ್ದಾರೆ.

    ಬಿಇಓ ಈ ಬಗ್ಗೆ ಶಾಲೆಗೆ ಬಂದು ಸೂಕ್ತ ರೀತಿಯಲ್ಲಿ ತನಿಖೆ ನಡೆಸಿದಾಗ ಕೃಷ್ಣೇಗೌಡ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವುದು ಖಚಿತವಾಗಿದೆ. ಬಳಿಕ ಕೃಷ್ಣೇಗೌಡನ ವಿರುದ್ಧ ಕೆಆರ್ ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಪೊಲೀಸರು ಪೋಕ್ಸೋ ಮತ್ತು ಎಸ್‍ಸಿ-ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಂಡು ಕೃಷ್ಣೇಗೌಡನನ್ನು ಬಂಧಿಸಿದ್ದಾರೆ.

  • ಚಿನ್ನಕ್ಕಾಗಿ ಅನ್ನ ನೀಡಿದ ಒಡೆಯನನ್ನು ಕೊಂದ ಪಾಪಿ ಕೆಲಸಗಾರ ಅರೆಸ್ಟ್

    ಚಿನ್ನಕ್ಕಾಗಿ ಅನ್ನ ನೀಡಿದ ಒಡೆಯನನ್ನು ಕೊಂದ ಪಾಪಿ ಕೆಲಸಗಾರ ಅರೆಸ್ಟ್

    – ಕೊಲೆಯಾದ 4 ಗಂಟೆಯಲ್ಲೇ ಆರೋಪಿ ಬಂಧನ

    ಯಾದಗಿರಿ: ಚಿನ್ನಕ್ಕಾಗಿ ಉದ್ಯಮಿ ಮಗನನ್ನ ಹತ್ಯೆ ಮಾಡಿದ ಪಾಪಿಗಳನ್ನು ಕೊನೆಗೂ ಬಂಧಿಸಲಾಗಿದೆ. ಕೊಲೆ ನಡೆದ ನಾಲ್ಕೇ ಗಂಟೆಯಲ್ಲಿ ಆರೋಪಿಗಳನ್ನು ಹುಣಸಗಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

    ಜನವರಿ 13 ರಂದು ಯಾದಗಿರಿ ಜಿಲ್ಲೆ ಹುಣಸಗಿ ಪಟ್ಟಣದ ರಾಜಸ್ಥಾನ ಮೂಲದ ಚಿನ್ನದ ವ್ಯಾಪಾರಿ ಜಗದೀಶ್ ಎಂಬವರ ಪುತ್ರ ನರೇಂದ್ರ(22)ನನ್ನು ಆತನ ಕೋಣೆಯಲ್ಲಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ನರೇಂದ್ರನ ಜೊತೆಗಿದ್ದ ಕಿಶೋರ್ ಎಂಬಾತ ಈ ಕೊಲೆಯ ಸೂತ್ರಧಾರಿ. ಮಹಾರಾಷ್ಟ್ರ ಮೂಲದ ಅಜಿತ್ ಎಂಬಾತನ ಸಹಾಯದಿಂದ ತನ್ನ ಯಜಮಾನನ್ನೇ ಹತ್ಯೆ ಮಾಡಿದ್ದ ಕಿಶೋರ್, ರೂಮ್ ನಲ್ಲಿದ್ದ 1 ಕೆಜಿ 570 ಗ್ರಾಂ ಚಿನ್ನ, 2 ಕೆಜಿ ಬೆಳ್ಳಿ ಮತ್ತು ಒಂದು ಬೈಕ್ ಸೇರಿದಂತೆ ಒಟ್ಟು 1 ಕೋಟಿ ಮೌಲ್ಯದ ಚಿನ್ನಾಭರಣ ಕದ್ದು ಪಾರಾರಿಯಾಗಿದ್ದ. ಅಲ್ಲದೆ ನರೇಂದ್ರನನ್ನು ಕೊಲೆ ಮಾಡಿದ್ದ ದುಷ್ಕರ್ಮಿಗಳು ಕಿಶೋರ್ ನನ್ನು ಸಹ ಅಪಹರಿಸಿದ್ದಾರೆಂಬಂತೆ ಬಿಂಬಿಸಿದ್ದ. ಹಾಡಹಗಲೇ ನಡೆದಿದ್ದ ಈ ಕೊಲೆ ಇಡೀ ಯಾದಗಿರಿ ಜನರನ್ನು ತಲ್ಲಣಗೊಳಿಸಿತ್ತು.

    ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿ ಯಾದಗಿರಿ ಪೊಲೀಸರು ಸುರಪುರ ಡಿವೈಎಸ್ಪಿ ವೆಂಕಟೇಶ್ ಉಗಿಬಂಡಿ, ಸಿಪಿಐ ದೌಲತ್ ಮತ್ತು ಪಿಎಸ್‍ಐ ಬಾಪುಗೌಡ ಮತ್ತು ಸಿಬ್ಬಂದಿ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಿದರು. ಕೊಲೆಯಾದ 4 ಗಂಟೆಯಲ್ಲಿ ಆರೋಪಿಗಳನ್ನು ಪತ್ತೆ ಮಾಡಿದ ಪೊಲೀಸರು, ಬಂಧಿತರಿಂದ 1 ಕೆಜಿ 570 ಗ್ರಾಂ. ಚಿನ್ನ, 2 ಕೆಜಿ ಬೆಳ್ಳಿ ಮತ್ತು ಒಂದು ಬೈಕ್ ಸೇರಿದಂತೆ ಒಟ್ಟು 1 ಕೋಟಿ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

  • ಡ್ರಗ್ ಕೇಸ್ – ಮಹಾರಾಷ್ಟ್ರದ ಸಚಿವರ ಸೋದರಳಿಯ ಅರೆಸ್ಟ್

    ಡ್ರಗ್ ಕೇಸ್ – ಮಹಾರಾಷ್ಟ್ರದ ಸಚಿವರ ಸೋದರಳಿಯ ಅರೆಸ್ಟ್

    – ಡ್ರಗ್ಸ್ ಡೀಲರ್ ಜೊತೆ ವ್ಯವಹಾರ

    ಮುಂಬೈ: ಮಹಾರಾಷ್ಟ್ರದ ಸಚಿವ ನವಾಬ್ ಮಲ್ಲಿಕ್ ಸೋದರಳಿಯ ಸಮೀರ್ ಖಾನ್‍ರನ್ನು ಎನ್‍ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಬುಧವಾರ ಬೆಳಗ್ಗೆ ವಿಚಾರಣೆಗೆಂದು ಕರೆಸಿದ್ದ ಅವರನ್ನು ಹಲವು ವಿಚಾರಣೆಗಳ ಬಳಿಕ ಇದೀಗ ಬಂಧಿಸಿದ್ದಾರೆ.

    ಬ್ರಿಟಿಷ್ ಮೂಲದ ಕರಣ್ ಸಜ್ನಾನಿ ಎಂಬಾತನ ಜೊತೆ ಸಮೀರ್ ಖಾನ್ 20 ಸಾವಿರ ರೂ.ಯಷ್ಟು ವ್ಯವಹಾರ ನಡೆಸಿದ ಹಿನ್ನೆಲೆ ವಿಚಾರಣೆಗೆ ಕರೆಸಲಾಗಿತ್ತು. ಕಳೆದ ವಾರ ಕರಣ್ ಮತ್ತು ಇಬ್ಬರು ಮಹಿಳೆಯರನ್ನ ಪೊಲೀಸರು ಬಂಧಿಸಿ, ಮೂವರ ಬಳಿಯಲ್ಲಿದ್ದ 200 ಕೆಜಿ ಡ್ರಗ್ಸ್ ವಶಕ್ಕೆ ಪಡೆದುಕೊಂಡಿದ್ದರು.

    ಕಳೆದ ವಾರ ಬಾಂದ್ರಾ ವೆಸ್ಟ್‍ಗೆ ಕೊರಿಯರ್ ಮೂಲಕ ಬಂದ ಗಾಂಜಾವನ್ನ ಅಧಿಕಾರಿಗಳು ವಶಪಡಿಕೊಂಡು ತನಿಖೆ ನಡೆಸಿದ್ದರು. ತನಿಖೆಯಲ್ಲಿ ಕರಣ್ ಗಾಂಜಾ ಆಮದು ಮಾಡಿಕೊಳ್ಳುತ್ತಿರುವ ವಿಷಯ ಬೆಳಕಿಗೆ ಬಂದಿತ್ತು. ಎನ್‍ಡಿಪಿಎಸ್ ಕಾಯ್ದೆ ಅಡಿ ಎನ್‍ಸಿಬಿ ಅಧಿಕಾರಿಗಳು ರಹಿಲ್ ಫರ್ನಿಚರ್ ವಾಲಾ, ಸಹಿಸ್ತಾ ಫರ್ನಿಚರ್ ವಾಲಾ ಮತ್ತು ರಾಮ್ ಕುಮಾರ್ ಅಲಿಯಾಸ್ ಪಾನ್‍ವಾಲಾನನ್ನು ಬಂಧಿಸಿದ್ದರು.

    ಕರಣ್ ವಿಚಾರಣೆ ವೇಳೆ ಡ್ರಗ್ಸ್ ವ್ಯವಹಾರದಲ್ಲಿ ಸಮೀರ್ ಖಾನ್ ಪಾತ್ರವೂ ಕಂಡು ಬಂದ ಹಿನ್ನೆಲೆ ಎನ್‍ಸಿಬಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಸುದೀರ್ಘ ವಿಚಾರಣೆ ಬಳಿಕ ಸಮೀರ್ ಖಾನ್ ನನ್ನ ಬಂಧಿಸಲಾಗಿದೆ.

  • ಔಷಧಿ ಹಚ್ಚೋ ನೆಪದಲ್ಲಿ ಮಹಿಳಾ ರೋಗಿಯ ಖಾಸಗಿ ಅಂಗ ಮುಟ್ಟಿ ವಾರ್ಡ್ ಬಾಯ್ ಕಿರುಕುಳ!

    ಔಷಧಿ ಹಚ್ಚೋ ನೆಪದಲ್ಲಿ ಮಹಿಳಾ ರೋಗಿಯ ಖಾಸಗಿ ಅಂಗ ಮುಟ್ಟಿ ವಾರ್ಡ್ ಬಾಯ್ ಕಿರುಕುಳ!

    – ಕುಟುಂಬಸ್ಥರು ನೀಡಿದ ದೂರಿನಿಂದ ಆರೋಪಿ ಅರೆಸ್ಟ್

    ಮುಂಬೈ: ಖಾಸಗಿ ಆಸ್ಪತ್ರೆಯ ವಾರ್ಡ್ ಬಾಯ್ ಒಬ್ಬ ಮಹಿಳಾ ರೋಗಿಗೆ ಕಿರುಕುಳ ನೀಡಿ ಇದೀಗ ಪೊಲೀಸರ ಅತಿಥಿಯಾಗಿರುವ ಘಟನೆ ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ನಡೆದಿದೆ.

    ಆರೋಪಿಯನ್ನು ಮುಕೇಶ್ ಪ್ರಜಾಪತಿ(25) ಎಂದು ಗುರುತಿಸಲಾಗಿದೆ. ಈತ ಸರ್ಜರಿಗೆಂದು ಬಂದು ಆಸ್ಪತ್ರೆಗೆ ದಾಖಲಾದ ಮಹಿಳೆಗೆ ಕಿರುಕುಳ ನೀಡಿದ್ದಾನೆ.

    ಡಿಸೆಂಬರ್ 16ರಂದು 29 ವರ್ಷದ ಮಹಿಳೆ ಸರ್ಜರಿಗಾಗಿ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಡಿಸೆಂಬರ್ 17ರಂದು ರಾತ್ರಿ 25 ವರ್ಷದ ಯುವಕ ಮಹಿಳೆಯ ಬಳಿ ಬಂದು ನಿಮ್ಮ ದೇಹಕ್ಕೆ ಔಷಧಿ ಹಚ್ಚಬೇಕು ಎಂದು ಹೇಳಿದ್ದಾನೆ. ಆರೋಪಿ ಮಾತನ್ನು ನಂಬಿದ ಮಹಿಳೆ ಆಯ್ತು ಎಂದು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಮೊದಲೇ ಪ್ಲಾನ್ ಮಾಡಿಕೊಂಡಿದ್ದ ಆರೋಪಿ ಮಹಿಳೆಯ ಖಾಸಗಿ ಅಂಗವನ್ನು ಮುಟ್ಟಿ ಕಿರುಕುಳ ನೀಡಿದ್ದಾನೆ.

    ಆರೋಪಿಯಿಂದ ಕಿರುಕುಳ ಎದರಿಸಿದ ಮಹಿಳೆ ಮರುದಿನ ನಡೆದ ಘಟನೆಯನ್ನು ತಮ್ಮ ಸಂಬಂಧಿಕರ ಮುಂದೆ ವಿವರಿಸಿದ್ದಾರೆ. ಇದರಿಂದ ಎಚ್ಚೆತ್ತ ಸಂತ್ರಸ್ತೆ ಕುಟುಂಬ ಕೂಡಲೇ ಆಸ್ಪತ್ರೆಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಅಲ್ಲದೆ ತಡರಾತ್ರಿ ವಾರ್ಡ್ ಬಾಯ್ ಮಹಿಳೆ ಇದ್ದ ರೂಮಿನೊಳಗೆ ಹೇಗೆ ಬಂದ ಎಂದು ಪ್ರಶ್ನಿಸಿದ್ದಾರೆ.

    ಸಂತ್ರಸ್ತೆ ಕುಟುಂಬ ಪೊಲೀಸರಿಗೂ ದೂರು ನೀಡಿದರು. ಹೀಗಾಗಿ ಡಿಸೆಂಬರ್ 18ರಂದು ವಾರ್ಡ್ ಬಾಯ್ ನನ್ನು ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಬಸ್ಸಿಗಾಗಿ ಕಾಯ್ತಿದ್ದ ಯುವತಿಯನ್ನು ಆಟೋದಲ್ಲಿ ಕರ್ಕೊಂಡು ಹೋಗಿ ಚಾಲಕ ರೇಪ್!

    ಬಸ್ಸಿಗಾಗಿ ಕಾಯ್ತಿದ್ದ ಯುವತಿಯನ್ನು ಆಟೋದಲ್ಲಿ ಕರ್ಕೊಂಡು ಹೋಗಿ ಚಾಲಕ ರೇಪ್!

    – ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ನೀಚ ಕೃತ್ಯ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಡೆದಿದ್ದ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಂದು ನೀಚ ಕೃತ್ಯ ಬಯಲಾಗಿದೆ. ಆಟೋ ಚಾಲಕನೊಬ್ಬ ಯುವತಿಯನ್ನು ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

    ಆರೋಪಿಯನ್ನು ಮುಬಾರಕ್(28) ಎಂದು ಗುರುತಿಸಲಾಗಿದೆ. ದೇವನಹಳ್ಳಿ ನಿವಾಸಿಯಾಗಿರುವ ಈತನನ್ನು ಸಂಪಿಗೆಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ವಿದ್ಯಾರ್ಥಿನಿಯ ರೇಪ್ & ಮರ್ಡರ್

    ಸಂತ್ರಸ್ತೆ ಕಂಪ್ಯೂಟರ್ ಸೈನ್ಸ್ ಕೋರ್ಸ್ ಜೊತೆಗೆ ಮದುವೆಗಳಲ್ಲಿ ಸ್ವಾಗಕಾರರಾಗಿ ಪಾರ್ಟ್ ಟೈಂ ಕೆಲಸ ಮಾಡುತ್ತಿದ್ದಳು. ಹೀಗೆ ವಿವಾಹ ಸಮಾರಂಭಕ್ಕೆ ತೆರಳಿದ್ದ ಯುವತಿ ಕಾರ್ಯಕ್ರಮ ಮುಗಿಯುವಾಗ ತಡವಾದ ಹಿನ್ನೆಲೆಯಲ್ಲಿ ಮಂಟಪದಲ್ಲಿಯೇ ಉಳಿದುಕೊಂಡಿದ್ದಾಳೆ. ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಥಣಿಸಂದ್ರ ಮುಖ್ಯರಸ್ತೆ ಬಳಿ ಬಸ್ಸಿಗಾಗಿ ಕಾಯುತ್ತಿದ್ದಳು. ಕೆಲ ಹೊತ್ತಾದರೂ ಬಸ್ಸು ಬಂದಿರಲಿಲ್ಲ. ಈ ವೇಳೆ ಅಲ್ಲಿಗೆ ಬಂದ ಆಟೋದವನು ಎಲ್ಲಿಗೆ ಹೋಗಬೇಕು ಎಂದು ಕೇಳಿದ್ದಾನೆ. ನಾಗವಾರ ಕಡೆ ಎಂದು ಸಂತ್ರಸ್ತೆ ಹೇಳಿದ್ದಾನೆ. ಆಗ ಆರೋಪಿ ಮುಬಾರಕ್ ನಾನು ಆ ಕಡೆನೆ ಹೋಗಬೇಕು ಎಂದು ಹೇಳಿ ಆಟೋ ಹತ್ತಿಸಿಕೊಂಡಿದ್ದಾನೆ.

    ಹೀಗೆ ಹೋಗುವಾಗ ನಾಗವಾರ ಸಿಗ್ನಲ್ ಬಳಿ ಬರುತ್ತಿದ್ದಂತೆಯೇ ಸಂತ್ರಸ್ತೆ ಆಟೋ ನಿಲ್ಲಿಸುವಂತೆ ಸೂಚಿಸಿದ್ದಾಳೆ. ಆದರೆ ಮುಬಾರಕ್ ಯುವತಿಯ ಮಾತನ್ನು ಕೇಳದೆ ಮುಂದೆ ಸಾಗಿದ್ದಾನೆ. ಇದರಿಂದ ಗಾಬರಿಗೊಂಡ ಯುವತಿ ಚೀರಾಡಿದಾಗ, ನನಗೆ ಸ್ನೇಹಿತರೊಬ್ಬರಿಗೆ ಹಣ ಕೊಡಬೇಕು. ಅವರಿಂದ ಹಣ ಪಡೆದ ಕೂಡಲೇ ನೀವು ಹೇಳಿದ ಜಾಗಕ್ಕೆ ಕರೆದುಕೊಂಡು ಹೋಗಿ ಬಿಡುತ್ತೇನೆ ಎಂದು ಹೇಳಿದ್ದಾನೆ. ನಂತರ ನಿರ್ಜನ ಪ್ರದೇಶವೊಂದರಲ್ಲಿ ಆಟೋ ನಿಲ್ಲಿಸಿ, ಆಟೋದೊಳಗಿಂದ ಸಂತ್ರಸ್ತೆಯನ್ನು ಎಳೆದೊಯ್ದು ಆಕೆಯ ಮೇಲೆ ಕಾಮ ತೃಷೆ ತೀರಿಸಿಕೊಂಡಿದ್ದಾನೆ. ಬಳಿಕ ಯುವತಿಯನ್ನು ಅಲ್ಲಿಯೇ ಬಿಟ್ಟು ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಇದನ್ನೂ ಓದಿ: ಸೆಕ್ಸ್ ವೇಳೆ ಮೂರ್ಛೆ ಹೋದ್ಳು, ನಾನು ಕೊಲೆ ಮಾಡಿಲ್ಲ ಅಂದ ಆರೋಪಿ! 

    ನಿರ್ಜನ ಪ್ರದೇಶದಿಂದ ಹತ್ತಿರದ ಮುಸ್ಯರಸ್ತೆಗೆ ನಡೆದುಕೊಂಡು ಬಂದ ಸಂತ್ರಸ್ತೆ ಬೈಕಿನಲ್ಲಿ ತೆರಳುತ್ತಿದ್ದವರ ಸಹಾಯ ಪಡೆದು ಮನೆ ಸೇರಿದ್ದಾಳೆ. ಬಳಿಕ ಪೊಲೀಸ್ ಠಾಣೆಗೆ ತೆರಳಿದ ಯುವತಿ ಆರೋಪಿಯ ಆಟೋ ನೋಂದಣಿ ಸಂಖ್ಯೆಯನ್ನು ಪೊಲೀಸರಿಗೆ ತಿಳಿಸಿದ್ದಾಳೆ. ಅಂತೆಯೇ ಸಂಪಿಗೆಹಳ್ಳಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಯುವತಿ ನೀಡಿದ ಆಟೋ ನಂಬರ್ ಪತ್ತೆ ಹಚ್ಚಿ, ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.

  • ನಟಿ ವಿ.ಜೆ ಚಿತ್ರಾ ಸಾವು ಪ್ರಕರಣ- ಸತತ 6 ದಿನಗಳ ತನಿಖೆಯ ಬಳಿಕ ಪತಿ ಅರೆಸ್ಟ್

    ನಟಿ ವಿ.ಜೆ ಚಿತ್ರಾ ಸಾವು ಪ್ರಕರಣ- ಸತತ 6 ದಿನಗಳ ತನಿಖೆಯ ಬಳಿಕ ಪತಿ ಅರೆಸ್ಟ್

    ಚೆನ್ನೈ: ಖ್ಯಾತ ಧಾರಾವಾಹಿ ನಟಿ ವಿ.ಜೆ ಚಿತ್ರಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆಕೆಯ ಪತಿ ಹೇಮನಾಥ್ ನನ್ನು ಚೆನ್ನೈನ ನಜರತ್ ಪೇಟೆ ಪೊಲೀಸರು ಬಂಧಿಸಿದ್ದಾರೆ.

    ಕಳೆದ ವಾರ ಚೆನ್ನೈನ ಹೋಟೆಲೊಂದರಲ್ಲಿ ವಿ.ಜೆ ಚಿತ್ರಾ ಮೃತದೇಹ ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಪತ್ತೆಯಾಗಿತ್ತು. ಈ ಪ್ರಕರಣ ಕೈಗೆತ್ತಿಕೊಂಡು ಪೊಲೀಸರು, ಚಿತ್ರಾ ಸಾವಿಗೆ ಮಾನಸಿಕ ಒತ್ತಡವೇ ಕಾರಣವಾಯಿತೇ…? ತನ್ನ ತಾಯಿ ಹಾಗೂ ಮದುವೆಯಾಗಬೇಕಿದ್ದ ಹುಡುಗನಿಂದಾಗಿಯೇ ಚಿತ್ರಾ ಸಾವನ್ನಪ್ಪಿದರಾ ಎಂಬ ಪ್ರಶ್ನೆಗೆ ಉತ್ತರ ಹುಡುಕಲು ತನಿಖೆ ಆರಂಭಿಸಿದ್ದರು. ಈ ವೇಳೆ ಮಹತ್ವದ ಅಂಶಗಳು ಬಯಲಾಗಿದೆ ಎನ್ನಲಾಗಿತ್ತು.

    ಈ ಹಿನ್ನೆಲೆಯಲ್ಲಿ ಚಿತ್ರಾ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಹೇಮನಾಥ್ ನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ನಡೆದು ಸುಮಾರು 6 ದಿನಗಳ ಕಾಲ ತನಿಖೆ ನಡೆಸಿದ ಬಳಿಕ ಪೊಲೀಸರು ಇಂದು ಹೇಮನಾಥ್ ನನ್ನು ಬಂಧಿಸಿ, ನ್ಯಾಯಾಂಗ ಬಂಧನದಲ್ಲಿ ಇರಿಸಿದ್ದಾರೆ. ಅಲ್ಲದೆ ಹೇಮನಾಥ್ ವಿರುದ್ಧ ಐಪಿಸಿ ಸೆಕ್ಷನ್ 306 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

    ತಾಯಿ ವಿಜಯ ಹಾಗೂ ಪ್ರಿಯಕರ ಹೇಮನಾಥ್ ಅವರಿಂದ ಚಿತ್ರಾ ಅವರ ಮೇಲೆ ತೀವ್ರ ಒತ್ತಡವಿತ್ತು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು. ಇವರಿಬ್ಬರ ಒತ್ತಡದಿಂದಾಗಿ ಚಿತ್ರಾ ಮಾನಸಿಕವಾಗಿ ತುಂಬಾ ನೊಂದಿದ್ದರು. ಅಲ್ಲದೇ ಸೀರಿಯಲ್ ಶೂಟಿಂಗ್ ಲೊಕೇಷನ್‍ಗೆ ಹೇಮನಾಥ್ ಮದ್ಯಸೇವಿಸಿ ಬಂದು ಚಿತ್ರಾ ಜೊತೆ ಗಲಾಟೆ ಮಾಡಿದ್ದ ಎಂಬ ಅಂಶವೂ ತನಿಖೆ ವೇಳೆ ಬಯಲಿಗೆ ಬಂದಿತ್ತು.

    ಈ ವಿಚಾರ ಗೊತ್ತಾದ ಮೇಲೆ ತಾಯಿ ವಿಜಯಾ ಅವರು ಹೇಮನಾಥ್‍ನನ್ನು ಮದುವೆಯಾಗಬೇಡ, ಬದಲಿಗೆ ಬೇರೆ ಯಾರನ್ನು ಬೇಕಾದರೂ ಮದುವೆಯಾಗು ಎಂದು ಹಠ ಹಿಡಿದಿದ್ದರು. ಆದರೆ ವಿವಾಹ ನಿಶ್ಚಿತಾರ್ಥ ನಡೆದ ಬಳಿಕ ಫೆಬ್ರವರಿಯಲ್ಲಿ ಮದುವೆ ದಿನಾಂಕ ನಿಗದಿಯಾಗಿದ್ದರೂ ಮನೆಯವರಿಗೆ ಹೇಳದೇ ಇಬ್ಬರೂ ರಿಜಿಸ್ಟರ್ ಮದುವೆ ಆಗಿದ್ದರು. ಒಂದು ಕಡೆ ಅಮ್ಮನ ಒತ್ತಡ, ಇನ್ನೊಂದು ಕಡೆ ಭಾವಿ ಪತಿಯ ಗಲಾಟೆಯಿಂದಾಗಿ ಚಿತ್ರಾ ತುಂಬಾ ನೊಂದಿದ್ದರು ಎಂದು ಪೊಲೀಸರು ಹೇಳಿದ್ದರು.

  • ಉಗ್ರರ ಪರ ಗೋಡೆ ಬರಹ ಪ್ರಕರಣ- ಮಂಗಳೂರಲ್ಲಿ ಓರ್ವ ಅರೆಸ್ಟ್

    ಉಗ್ರರ ಪರ ಗೋಡೆ ಬರಹ ಪ್ರಕರಣ- ಮಂಗಳೂರಲ್ಲಿ ಓರ್ವ ಅರೆಸ್ಟ್

    ಮಂಗಳೂರು: ನಗರದಲ್ಲಿ ಉಗ್ರರ ಪರ ಗೋಡೆಯಲ್ಲಿ ಬರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಓರ್ವನನ್ನು ಬಂಧಿಸಲಾಗಿದೆ.

    ಬಂಧಿತನನ್ನು ಮಹಮ್ಮದ್ ನಝೀರ್ ಎಂದು ಗುರುತಿಸಲಾಗಿದೆ. ಈತ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ನಿವಾಸಿ. ಮೊಬೈಲ್ ಟವರ್ ಲೊಕೇಶನ್ ಆಧಾರದಲ್ಲಿ ಓರ್ವನನ್ನು ಮಂಗಳೂರು ಕದ್ರಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

    ಶಂಕಿತನನ್ನು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಇತ್ತೀಚೆಗೆ ಮಂಗಳೂರಿನ ಸಕ್ರ್ಯೂಟ್ ಹೌಸ್ ರಸ್ತೆಯಲ್ಲಿರೋ ಅಪಾರ್ಟ್‍ಮೆಂಟ್ ಗೋಡೆಯ ಮೇಲೆ ಹ್ಯಾಷ್ ಟ್ಯಾಗ್ ಹಾಕಿ ‘ಲಷ್ಕರ್ ಜಿಂದಾಬಾದ್’ ಎಂದು ಕಿಡಿಗೇಡಿಗಳು ಬರೆದಿದ್ದರು. ಕಾಂಪೌಂಡ್ ಮೇಲೆ ‘ಡು ನಾಟ್ ಫೋರ್ಸ್ ಅಸ್ ಟು ಇನ್ವೈಟ್ ತಾಲಿಬಾನ್ ಆ?ಯಂಡ್ ಲಷ್ಕರ್-ಇ-ತೊಯ್ಬಾ ಟು ಡೀಲ್ ವಿತ್ ಸಂಘೀಸ್ ಆ್ಯಂಡ್ ಮನ್ವೇದಿಸ್’ ಎಂದು ಇಂಗ್ಲೀಷ್‍ನಲ್ಲಿ ಬರೆಯಲಾಗಿತ್ತು. ಅಂದರೆ ಸಂಘಿಗಳು ಮತ್ತು ಮನುವಾದಿಗಳ ವಿರುದ್ಧ ಹೋರಾಟಕ್ಕೆ ಲಷ್ಕರ್-ಇ-ತೊಯ್ಬಾ, ತಾಲಿಬಾನ್ ಸಂಘಟನೆಗೆ ಆಹ್ವಾನಿಸಲು ನಮ್ಮನ್ನು ಪ್ರೇರೇಪಿಸಬೇಡಿ ಎಂದಾಗಿತ್ತು. ಈ ಮೂಲಕ ಲಷ್ಕರ್ ಉಗ್ರರನ್ನ ಕರೆಸುವುದಾಗಿ ಬೆದರಿಕೆ ಹಾಕಿದ್ದರು. ಈ ವಿಚಾರ ಮಂಗಳೂರಿನಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿತ್ತು.

    ಈ ಸಂಬಂಧ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿದ್ದ ವೇಲೇ ಬೈಕಿನಲ್ಲಿ ಬಂದು ಗೋಡೆಯಲ್ಲಿ ಬರೆದು ಪರಾರಿಯಾಗಿದ್ದು ಬೆಳಕಿಗೆ ಬಂದಿತ್ತು. ಇದೀಗ ಖಚಿತ ಮೊಬೈಲ್ ಲೊಕೇಶನ್ ಅಧರಿಸಿ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಉಳಿದವರ ಪತ್ತೆಗೆ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಪ್ರವಾದಿಗೆ ಕೋಪ ಬಂದ್ರೆ ದೇಹದಿಂದ ತಲೆ ಬೇರ್ಪಡುತ್ತೆ- ಮಂಗಳೂರಲ್ಲಿ ಮತ್ತೆ ಗೋಡೆಬರಹ

  • ನ್ಯಾಯಾಧೀಶರ ಪತ್ನಿಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ – ನಿವೃತ್ತ ನ್ಯಾಯಮೂರ್ತಿ ಕರ್ಣನ್ ಅರೆಸ್ಟ್

    ನ್ಯಾಯಾಧೀಶರ ಪತ್ನಿಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ – ನಿವೃತ್ತ ನ್ಯಾಯಮೂರ್ತಿ ಕರ್ಣನ್ ಅರೆಸ್ಟ್

    ಚೆನ್ನೈ: ನ್ಯಾಯಾಧೀಶರ ಪತ್ನಿಯರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ನಿವೃತ್ತ ನ್ಯಾಯಾಮೂರ್ತಿ ಸಿಎಸ್ ಕರ್ಣನ್ ಅವರನ್ನು ಬಂಧಿಸಲಾಗಿದೆ.

    ಕರ್ಣನ್ ಅವರು ಹೈಕೋರ್ಟ್ ನ್ಯಾಯಾಧೀಶರ ಪತ್ನಿಯರು ಮತ್ತು ಮಹಿಳಾ ನ್ಯಾಯಾಮೂರ್ತಿಗಳು ಹಾಗೂ ಕೋರ್ಟಿನಲ್ಲಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿ ವಿರುದ್ಧ ಅಸಭ್ಯವಾಗಿ ಮಾತನಾಡಿ, ಆ ವಿಡಿಯೋವನ್ನು ಯೂಟ್ಯೂಬ್‍ಗೆ ಅಪ್ಲೋಡ್ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು.

    ಈ ವಿಚಾರವಾಗಿ ಕರ್ಣನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮದ್ರಾಸ್ ಹೈಕೋರ್ಟಿನ ಹಿರಿಯ ವಕೀಲರೊಬ್ಬರು ಸುಪ್ರೀಂ ಕೋರ್ಟ್ ಮುಖ್ಯನ್ಯಾಯಾಧೀಶ ಎಸ್‍ಎ ಬೊಬ್ಡೆ ಅವರಿಗೆ ಪತ್ರ ಕೂಡ ಬರೆದಿದ್ದರು. ನಂತರ ವಕೀಲರೊಬ್ಬರು ಕರ್ಣನ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರನ್ನು ದಾಖಲಿಸಿಕೊಂಡಿದ್ದ ಚೆನ್ನೈ ಸೈಬರ್ ಕ್ರೈಮ್ ವಿಭಾಗದ ಪೊಲೀಸರು ಒಂದು ತಿಂಗಳು ತನಿಖೆ ಮಾಡಿ ಇಂದು ಕರ್ಣನ್ ಅವರನ್ನು ಬಂಧಿಸಿದ್ದಾರೆ.

    ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಲ್ಲಿರುವ ಕರ್ಣನ್ ಮೊದಲು 2009ರಲ್ಲಿ ಮದ್ರಾಸ್ ಹೈಕೋರ್ಟಿನಲ್ಲಿ ನ್ಯಾಯಾಮೂರ್ತಿಯಾಗಿದ್ದರು. ನಂತರ 2016ರಲ್ಲಿ ಕೋಲ್ಕತ್ತಾ ಹೈಕೋರ್ಟಿಗೆ ನ್ಯಾಯಾಧೀಶರನ್ನಾಗಿ ನೇಮಕ ಮಾಡಲಾಗಿತ್ತು. ಆದರೆ 2017ರಲ್ಲಿ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಕರ್ಣನ್ ಅವರನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಅವರು ಆರು ತಿಂಗಳು ಜೈಲುವಾಸ ಕೂಡ ಅನುಭವಿಸಿದ್ದರು.