Tag: arrest

  • ಬಾಲಿವುಡ್ ನಟಿ ರಾಖಿ ಸಾವಂತ್ ಬಂಧನ

    ಬಾಲಿವುಡ್ ನಟಿ ರಾಖಿ ಸಾವಂತ್ ಬಂಧನ

    ಮುಂಬೈ: ಪಂಜಾಬ್ ಪೊಲೀಸರು ಇಂದು ಮುಂಬೈ ನಲ್ಲಿ ಬಾಲಿವುಡ್ ನಟಿ ರಾಖಿ ಸಾವಂತ್ ರನ್ನು ಬಂಧಿಸಿದ್ದಾರೆ. ವಾಲ್ಮಿಕಿ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ರಾಖಿ ಸಾವಂತ್ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

    ಏನಿದು ಪ್ರಕರಣ?: ಕಳೆದ ವರ್ಷ ಖಾಸಗಿ ಸುದ್ದಿವಾಹಿನಿಯೊಂದರ ಕಾರ್ಯಕ್ರಮದ ವೇಳೆ ರಾಖಿ ಸಾವಂತ್, ರಾಮಾಯಣ ಬರೆದ ವಾಲ್ಮಿಕಿ ಮತ್ತು ವಾಲ್ಮಿಕಿ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರೆಂದು ಆರೋಪಿಸಿ ದೂರು ದಾಖಲಿಸಲಾಗಿತ್ತು.

    ಪ್ರಕರಣ ಸಂಬಂಧಿಸಿದಂತೆ ಮಾರ್ಚ್ 9ರಂದು ನ್ಯಾಯಾಲಯದಲ್ಲಿ ನಡೆಯುವ ವಿಚಾರಣೆಗೆ ಹಾಜರಾಗುವಂತೆ ರಾಖಿ ಸಾವಂತ್ ಗೆ ಸಮನ್ಸ್ ಜಾರಿ ಮಾಡಲಾಗಿತ್ತು. ಆದ್ರೆ ರಾಖಿ ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ ಸೋಮವಾರ ರಾಖಿ ಸಾವಂತ್ ವಿರುದ್ಧ ಕೋರ್ಟ್ ಅರೆಸ್ಟ್ ವಾರೆಂಟ್ ಜಾರಿ ಮಾಡಿತ್ತು. ಇದೀಗ ಪಂಜಾಬ್ ಪೊಲೀಸರು ನಟಿಯನ್ನು ಬಂಧಿಸಿದ್ದು, ಏಪ್ರಿಲ್ 10ರಂದು ವಿಚಾರಣೆ ನಡೆಯಲಿದೆ.

  • ಅನುಮತಿ ಇಲ್ಲದೇ ಮಂಗಳೂರಿನಲ್ಲಿ ಪ್ರತಿಭಟನೆ: ಪಿಎಫ್‍ಐ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್

    ಅನುಮತಿ ಇಲ್ಲದೇ ಮಂಗಳೂರಿನಲ್ಲಿ ಪ್ರತಿಭಟನೆ: ಪಿಎಫ್‍ಐ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್

    ಮಂಗಳೂರು: ಪೊಲೀಸರ ಅನುಮತಿ ಇಲ್ಲದೆ ಮಂಗಳೂರು ಕಮಿಷನರೇಟ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಪಾಪ್ಯುಲರ್ ಫ್ರಂಟ್ ಆಫ್‍ಇಂಡಿಯಾ (ಪಿಎಫ್‍ಐ) ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.

    ಸುರತ್ಕಲ್ ಠಾಣೆ ವ್ಯಾಪ್ತಿಯ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರು ಮಂದಿ ಪಿಎಫ್‍ಐ ಕಾರ್ಯಕರ್ತರನ್ನು ಬಂಧಿಸಿದ್ದರು. ಆದರೆ ಪೊಲೀಸರು ಕಾರ್ಯಕರ್ತರನ್ನು ಬಂಧಿಸಿ ಅಕ್ರಮವಾಗಿ ಕೂಡಿಟ್ಟು ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಿ ಇವತ್ತು ಬೆಳಗ್ಗೆ ಕಮಿಷನರೇಟ್ ಮುಂದೆ ಪಿಎಫ್‍ಐ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಗಿತ್ತು.

    ಅನುಮತಿ ಪಡೆಯದೇ ಪ್ರತಿಭಟನೆಗೆ ಮುಂದಾಗಿದ್ದ ಕಾರ್ಯಕರ್ತರಿಗೆ ಪೊಲೀಸರು ಎಚ್ಚರಿಕೆ ನೀಡಿದ್ರೂ, ಜಗ್ಗದ ಪ್ರತಿಭಟನಾ ನಿರತರನ್ನು ಚದುರಿಸಲು ಪೊಲೀಸರು ಲಾಠಿ ಬೀಸಿದರು. ನೂರಾರು ಕಾರ್ಯಕರ್ತರು ಸೇರಿದ್ದರಿಂದ ಉದ್ವಿಗ್ನ ಸ್ಥಿತಿ ನೆಲೆಸಿತ್ತು. ಬಳಿಕ ಕೆಲವು ಕಾರ್ಯಕರ್ತರನ್ನು ಬಲವಂತವಾಗಿ ಹೊತ್ತೊಯ್ದು ಪೊಲೀಸರು ಬಂಧಿಸಿದರು.

     

  • ಮಹಾರಾಣಿ ಕಾಲೇಜು ಹಾಸ್ಟೆಲ್‍ನಲ್ಲಿ ಬೆತ್ತಲೆಯಾಗಿ ಓಡಾಡಿ ಬೆಚ್ಚಿಬೀಳಿಸಿದ್ದ ಸೈಕೋ ಬಂಧನ

    ಮಹಾರಾಣಿ ಕಾಲೇಜು ಹಾಸ್ಟೆಲ್‍ನಲ್ಲಿ ಬೆತ್ತಲೆಯಾಗಿ ಓಡಾಡಿ ಬೆಚ್ಚಿಬೀಳಿಸಿದ್ದ ಸೈಕೋ ಬಂಧನ

    – ಮಹಿಳೆಯರ ಒಳ ಉಡುಪು ಕದ್ದು ಈತ ಏನು ಮಾಡ್ತಿದ್ದ ಅಂತ ಕೇಳಿದ್ರೆ ಶಾಕ್ ಆಗ್ತೀರ

    ಬೆಂಗಳೂರು: ಮಹಾರಾಣಿ ಕಾಲೇಜು ಹಾಸ್ಟೆಲ್ ಸುತ್ತಮುತ್ತ ಹುಡುಗಿಯರ ಒಳಉಡುಪು ಧರಿಸಿ ಓಡಾಡಿ ಬೆಚ್ಚಿಬೀಳಿಸಿದ್ದ ವ್ಯಕ್ತಿಯನ್ನು ಹೈಗ್ರೌಂಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಅಬು ತಾಲೀಮ್ ಎಂದು ಗುರುತಿಸಲಾಗಿದೆ. ಈತ ರೇಸ್ ಕೋರ್ಸ್‍ನಲ್ಲಿ ಕುದುರೆ ನೋಡಿಕೊಳ್ಳುವ ಕಾರ್ಮಿಕನಾಗಿದ್ದಾನೆ.

    ಅಬು ತಾಲೀಮ್ ಮೂಲತಃ ಬಿಹಾರ್ ರಾಜ್ಯದವನು. 13 ವರ್ಷಗಳಿಂದ ಬಿಟಿಸಿಯಲ್ಲಿ ಕೆಲಸ ಮಾಡುತ್ತಿದ್ದ ಈತ ತನ್ನ ಅಣ್ಣನೊಟ್ಟಿಗೆ 1991ರಿಂದಲೂ ಬೆಂಗಳೂರಿನಲ್ಲಿ ನಲೆಸಿದ್ದಾನೆ. ಸಹೋದರರಿಬ್ಬರೂ ರೇಸ್‍ಕೋರ್ಸ್‍ನಲ್ಲಿ ಕುದುರೆ ತೊಳೆದು, ಅವುಗಳಿಗೆ ಹಲ್ಲು ಹಾಕಿ ಸಾಕುವ ಕೆಲಸ ಮಾಡುತ್ತಿದ್ದರು. ಇಬ್ಬರು ಮಕ್ಕಳ ತಂದೆಯಾಗಿರುವ ಆರೋಪಿ ಅಬು ತಾಲೀಮ್ ಬಿಹಾರದಲ್ಲಿದ್ದಾಗಲೂ ರಾತ್ರಿ ವೇಳೆ ಹುಡುಗಿಯರ ಒಳ ಉಡುಪು ಕದಿಯುತ್ತಿದ್ದ ಎನ್ನಲಾಗಿದೆ. ಚಿಕ್ಕ ವಯಸ್ಸಿನಲ್ಲೇ ಈ ರೀತಿ ವರ್ತಿಸುತ್ತಿದ್ದ. ನಿದ್ದೆಯಲ್ಲಿ ನಡೆದಾಡುವ ಕಾಯಿಲೆಯಿದೆ ಎಂದು ಹೇಳಿಕೊಂಡು ಈ ರೀತಿ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

    ಒಳ ಉಡುಪು ಕದ್ದು ಏನು ಮಾಡ್ತಿದ್ದ?: ಮಂಗಳಮುಖಿಯರ ಸಹವಾಸ ಜಾಸ್ತಿಯಿದ್ದ ಅಬು ತಾಲೀಮ್ ವಾರಕ್ಕೊಮ್ಮೆ ಹಾಸ್ಟೆಲ್ ಗೆ ನುಗ್ಗಿ ಹೆಣ್ಣು ಮಕ್ಕಳ ಒಳ ಉಡುಪು ಕಳ್ಳತನ ಮಾಡುತ್ತಿದ್ದ. ಬಳಿಕ ಅದನ್ನ ಅವನು ವಾಸವಿರೋ ಜಾಗಕ್ಕೆ ತೆಗೆದುಕೊಂಡು ಹೋಗ್ತಿದ್ದ. ಒಂದು ವಾರ ಆದ್ಮೇಲೆ ಎಲ್ಲಾ ಉಡುಪುಗಳನ್ನು ರಸ್ತೆಯಲ್ಲಿ ಬಿಸಾಡಿ ಹೋಗ್ತಿದ್ದ. ಮಾತ್ರವಲ್ಲದೆ ಕಳವು ಮಾಡಿದ ಬಟ್ಟೆಯಲ್ಲಿ ಹುಡುಗಿ ರೀತಿ ಬೊಂಬೆ ಮಾಡ್ತಿದ್ದ. ಎರಡೆರಡು ದಿನ ಹುಡುಗಿಯರ ಒಳುಡುಪನ್ನು ಹಾಕಿಕೊಂಡು ಕಾಲ ಕಳೆಯುತ್ತಿದ್ದ. ಅಲ್ಲದೆ ತನ್ನ ಹೆಂಡತಿಯ ಒಳ ಉಡುಪು ಹಾಕಿಕೊಂಡು ಬರುತ್ತಿದ್ದ ಎನ್ನಲಾಗಿದೆ.

    ಆರೋಪಿಯ ಹೋಲಿಕೆಗಳನ್ನಿಟ್ಟುಕೊಂಡು ಮಂಗಳವಾರ ಇಡೀ ರಾತ್ರಿ ಹೈಗ್ರೌಂಡ್ ಪೊಲೀಸರು 500ಕ್ಕೂ ಹೆಚ್ಚು ರೇಸ್ ಕೋರ್ಸ್ ಸಿಬ್ಬಂದಿಯ ವಿಚಾರಣೆ ನಡೆಸಿದ್ದರು. ಆರೋಪಿ ಅಬುತಾಲೀಮ್ ಚಂದನ್ ಷಾ ಎಂಬವರ ಕುದುರೆ ನೋಡಿಕೊಳ್ಳುತ್ತಿದ್ದ ಎಂದು ತಿಳಿದುಬಂದಿದೆ. ಆರೋಪಿಗೆ ಎರಡು ಸುಳಿ ಇದ್ದಿದ್ದರಿಂದ ಆರೋಪಿ ಪತ್ತೆ ಸುಲಭವಾಯಿತು ಎಂದು ಪೊಲೀಸರು ಹೇಳಿದ್ದಾರೆ.

    ಅಬು ತಾಲೀಮ್ ಎರಡು ದಿನಗಳ ಹಿಂದೆ ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿಲಯಕ್ಕೆ ನುಗ್ಗಿ ವಿದ್ಯಾರ್ಥಿನಿಯರ ಒಳ ಉಡುಪುಗಳನ್ನು ಕದ್ದು ಪರಾರಿಯಾಗುತ್ತಿರೋ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಮಾತ್ರವಲ್ಲದೇ ಈತ ಕಿಟಕಿಯಿಂದ ಹುಡುಗಿಯರ ರೂಮಿನೊಳಗೆ ಇಣುಕಿ ನೋಡುತ್ತಿದ್ದು, ಈ ಬಗ್ಗೆ ಹಾಸ್ಟೆಲ್ ವಿದ್ಯಾರ್ಥಿನಿಯರು ಕಾಲೇಜಿನ ಆಡಳಿತ ಮಂಡಳಿಗೆ ದೂರು ನೀಡಿದ್ದರು.

    ಇದನ್ನೂ ಓದಿ: ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿಲಯದಲ್ಲಿ ಸೈಕೋ ಪ್ರತ್ಯಕ್ಷ: ವಿಡಿಯೋ ನೋಡಿ

    https://www.youtube.com/watch?v=_yf0IfLtJFE

  • ಬಿಜೆಪಿ ಮುಖಂಡ ವಾಸು ಹತ್ಯೆಯ ಆರೋಪಿ ಸತೀಶ್ ಬಂಧನ

    ಬಿಜೆಪಿ ಮುಖಂಡ ವಾಸು ಹತ್ಯೆಯ ಆರೋಪಿ ಸತೀಶ್ ಬಂಧನ

    ಚಿತ್ರದುರ್ಗ: ಬೆಂಗಳೂರಿನ ಬಿಜೆಪಿ ಮುಖಂಡ ವಾಸು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಸತೀಶ್ ಎಂಬಾತನನ್ನು ಬಂಧಿಸುವಲ್ಲಿ ಪೊಲೀಸರು ಯಶ್ವಸಿಯಾಗಿದ್ದಾರೆ.

    ಸತೀಶ್ ವಾಸು ಅವರನ್ನು ಹತ್ಯೆಗೈದು ಚಿತ್ರದುರ್ಗ ಜಿಲ್ಲೆಯ ಹೊಳಲ್ಕರೆ ತಾಲೂಕಿನ ಉಗಣೆಕಟ್ಟೆ ವಡರಹಟ್ಟಿ ಗ್ರಾಮದ ಅಜ್ಜಿ ಮನೆಯಲ್ಲಿ ತಲೆಮರೆಸಿಕೊಂಡಿದ್ದನು. ಇಂದು ಸತೀಶ್ ಅಜ್ಜಿಯ ಮನೆಯಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಆರೋಪಿಯನ್ನು ಬೆಂಗಳೂರಿನ ಹೊಸಕೋಟೆ ಪೊಲೀಸರ ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ.

    ಇದನ್ನೂ ಓದಿ: ಪುರಸಭೆ ಅಧ್ಯಕ್ಷ ಗಾದಿಗಾಗಿ ಬಿಜೆಪಿ ಮುಖಂಡನ ಕೊಲೆ

    ಮಾರ್ಚ್ 14 ರಂದು ಬೆಳಗಿನ ಜಾವ 5 ಗಂಟೆಯಲ್ಲಿ ಬೊಮ್ಮಸಂದ್ರದ ಪುರಸಭಾ ಸದಸ್ಯ ವಾಸು ಅಲಿಯಾಸ್ ಶ್ರೀನಿವಾಸ್ ಪ್ರಸಾದ್ ಅವರನ್ನು ಹೊಸೂರು ರಸ್ತೆಯ ಬಿಟಿಎಲ್ ಕಾಲೇಜು ಮುಂಭಾಗದಲ್ಲಿ ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಕೊಲೆ ಮಾಡಿದ್ದರು.

    ಇದನ್ನೂ ಓದಿ: ಬಿಜೆಪಿ ಮುಖಂಡನನ್ನು ಬರ್ಬರವಾಗಿ ಕೊಚ್ಚಿ ಕೊಂದ ದುಷ್ಕರ್ಮಿಗಳು

     

  • 36 ವರ್ಷದ ಬಳಿಕ ಮಂಡ್ಯ ಪೊಲೀಸರಿಂದ ದಂಡುಪಾಳ್ಯ ಗ್ಯಾಂಗ್‍ನಲ್ಲಿದ್ದ ಕಳ್ಳ ಅರೆಸ್ಟ್!

    36 ವರ್ಷದ ಬಳಿಕ ಮಂಡ್ಯ ಪೊಲೀಸರಿಂದ ದಂಡುಪಾಳ್ಯ ಗ್ಯಾಂಗ್‍ನಲ್ಲಿದ್ದ ಕಳ್ಳ ಅರೆಸ್ಟ್!

    ಮಂಡ್ಯ: ದಂಡುಪಾಳ್ಯ ಗ್ಯಾಂಗ್‍ನಲ್ಲಿ ಗುರುತಿಸಿಕೊಂಡಿದ್ದ ಓರ್ವ ಸೇರಿದಂತೆ ಇಬ್ಬರು ಕಳ್ಳರನ್ನು 36 ವರ್ಷದ ಬಳಿಕ ಮಂಡ್ಯದ ನಾಗಮಂಗಲ ತಾಲೂಕಿನ ಬೆಳ್ಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಮಾಗಡಿ ತಾಲೂಕಿನ ಮಲ್ಲಪ್ಪನಹಳ್ಳಿ ಗ್ರಾಮದ ದೊಡ್ಡಮುನಿಯ ಮತ್ತು ಚಿಕ್ಕಮುನಿಯ ಬಂಧಿತ ಆರೋಪಿಗಳು. ಈ ಇಬ್ಬರು ಆರೋಪಿಗಳು ಅಣ್ಣ-ತಮ್ಮಂದಿರಾಗಿದ್ದು, 1981ರಲ್ಲಿ ಬೆಳ್ಳೂರು ಠಾಣಾ ವ್ಯಾಪ್ತಿಯಲ್ಲಿ ಒಂದು ಮತ್ತು 1984ರಲ್ಲಿ ನಾಗಮಂಗಲ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮೂರು ಮನೆಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದರು. ಇವರ ವಿರುದ್ಧ ರಾಜ್ಯದ ವಿವಿಧ ಠಾಣೆಯಲ್ಲಿ 35ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇನ್ನು ಬಂಧಿತರ ಪೈಕಿ ದೊಡ್ಡಮುನಿಯ ಕುಖ್ಯಾತ ದಂಡುಪಾಳ್ಯದ ತಂಡದಲ್ಲಿ ಗುರುತಿಸಿಕೊಂಡಿದ್ದ.

    ಸುಮಾರು ವರ್ಷ ತಲೆಮರೆಸಿಕೊಂಡಿದ್ದ ಈ ಇಬ್ಬರು ಕಳ್ಳರನ್ನು ಖಚಿತ ಮಾಹಿತಿ ಮೇರೆಗೆ ಮಾರ್ಚ್ 6ರಂದು ಮಾಗಡಿ ತಾಲೂಕಿನ ಮಲ್ಲಪ್ಪನಹಳ್ಳಿಯಲ್ಲಿ ಬಂಧಿಸಲಾಗಿದೆ. ನಾಗಮಂಗಲ ಸಿಪಿಐ ಹರೀಶ್ ಬಾಬು, ಎಎಸೈ ರವಿ, ಮುಖ್ಯಪೇದೆ ಸೋಮಶೇಖರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

    ಬಂಧನದ ಬಳಿಕ ಆರೋಪಿಗಳನ್ನ ನಾಗಮಂಗಲ ಪಟ್ಟಣದ ಜೆಎಂಎಫ್‍ಸಿ ನ್ಯಾಯಾಲಯದ ಎದುರು ಹಾಜರುಪಡಿಸಲಾಗಿದೆ. ವಿಚಾರಣೆ ನಡೆಸಿದ ನ್ಯಾಯಾಧೀಶರು, ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ. ಬಂಧಿತ ಆರೋಪಿಗಳು ಕೇವಲ ಕಳ್ಳತನದಲ್ಲಷ್ಟೇ ಭಾಗಿಯಾಗಿದ್ದಾರೆಯೇ ಅಥವಾ ಬೇರೆ ಪ್ರಕರಣದಲ್ಲಿ ಇದ್ದಾರೆಯೇ ಎಂಬುದು ವಿಚಾರಣೆ ಬಳಿಕವಷ್ಟೇ ತಿಳಿಯಬೇಕಿದೆ.

     

  • ದೆಹಲಿ ಶಾಕಿಂಗ್: ಕಾಮುಕರಿಂದ ಪಾರಾಗಲು ಅಪಾರ್ಟ್‍ಮೆಂಟ್‍ನಿಂದ ಬೆತ್ತಲೆಯಾಗಿ ಕೆಳಕ್ಕೆ ಹಾರಿದ ಯುವತಿ!

    ದೆಹಲಿ ಶಾಕಿಂಗ್: ಕಾಮುಕರಿಂದ ಪಾರಾಗಲು ಅಪಾರ್ಟ್‍ಮೆಂಟ್‍ನಿಂದ ಬೆತ್ತಲೆಯಾಗಿ ಕೆಳಕ್ಕೆ ಹಾರಿದ ಯುವತಿ!

    – ಸಹಾಯಕ್ಕಾಗಿ ಅಂಗಲಾಚಿದ್ರೂ ಯಾರೊಬ್ಬರೂ ಬರ್ಲಿಲ್ಲ

    ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಯುವತಿಯೊಬ್ಬಳು ಕಾಮುಕರಿಂದ ಪಾರಾಗಲು ಬೆತ್ತಲೆಯಾಗಿ ಅಪಾರ್ಟ್‍ಮೆಂಟ್‍ನಿಂದ ಹಾರಿ ತನ್ನ ಮಾನ ಮತ್ತು ಪ್ರಾಣವನ್ನು ಉಳಿಸಿಕೊಂಡಿದ್ದಾಳೆ.

    ಕಾಮುಕರಿಂದ ಯುವತಿ ಹೇಗೋ ತಪ್ಪಿಸಿಕೊಂಡು ಅಪಾರ್ಟ್‍ಮೆಂಟಿನ ಮೊದಲ ಮಹಡಿಯಿಂದ ಬೆತ್ತಲೆಯಾಗಿಯೇ ಹಾರಿ ಬಳಿಕ ಸಹಾಯಕ್ಕಾಗಿ ಅಂಗಲಾಚಿದ್ದಾಳೆ. ಆದ್ರೂ ಯಾರೋಬ್ಬರೂ ಆಕೆಯ ಸಹಾಯಕ್ಕೆ ಬಾರದಿರುವ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ.

    ಏನಿದು ಪ್ರಕರಣ?: 23 ವರ್ಷದ ನೇಪಾಳದ ಯುವತಿಯ ಮೇಲೆ ಗ್ಯಾಂಗ್ ರೇಪ್ ಮಾಡಲು ಐವರು ಯುವಕರು ಮುಂದಾಗಿದ್ದರು. ಈ ಕಾಮುಕರಿಂದ ಪಾರಾಗಲು ಬೆಳಗ್ಗೆ 5.45ರ ವೇಳೆಗೆ ದೆಹಲಿಯ ಪಾಂಡವ ನಗರದ ಅಪಾರ್ಟ್‍ಮೆಂಟಿನ ಮೊದಲನೇ ಮಹಡಿಯಿಂದ ಹಾರಿದ್ದಾಳೆ. ಬಳಿಕ ರೋಡಿನಲ್ಲಿ ಬೆತ್ತಲೆಯಾಗಿಯೇ ನಡೆದುಕೊಂಡು ಜನರ ಸಹಾಯಕ್ಕಾಗಿ ಅಂಗಲಾಚಿದ್ದಾಳೆ. ಆದ್ರೆ ರೋಡಿನಲ್ಲಿ ಯಾರೊಬ್ಬರೂ ಆಕೆಗೆ ಸಹಾಯ ಮಾಡದೆ ಅಮಾನವೀಯತೆ ಮೆರೆದಿದ್ದಾರೆ.

    ಕೊನೆಗೆ ಆಕೆ ರಿಕ್ಷಾವೊಂದನ್ನು ನಿಲ್ಲಿಸಿ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಅಂತೆಯೇ ಆಟೋ ಚಾಲಕ ಆಕೆಯ ಸಹಾಯಕ್ಕೆ ಬಂದಿದ್ದಾರೆ. ಈಕೆ ಆಟೋ ಚಾಲಕನ ಜೊತೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಅಲ್ಲಿದ್ದವರು ಆಕೆಯನ್ನೇ ನೋಡುತ್ತಿದ್ದರೇ ಹೊರತು ಆಕೆಗೆ ಬಟ್ಟೆ ಕೊಟ್ಟು ಮಾನ ಮುಚ್ಚಿಕೊಳ್ಳಲು ಸಹಾಯ ಮಾಡಲಿಲ್ಲ.

    ಯುವತಿಯ ದೂರಿನ ಬಳಿಕ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಕಟ್ಟಡಿಂದ ಜಿಗಿದಿದ್ದ ಪರಿಣಾಮ ಕಾಲುಗಳಿಗೆ ಗಾಯಗಳಾದ ಹಿನ್ನೆಲೆಯಲ್ಲಿ ಪೊಲೀಸರು ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈಕೆ ನಗರದ ಮುನಿರ್ಕಾ ಪ್ರದೇಶದಲ್ಲಿ ವಾಸವಾಗಿದ್ದಳು ಅಂತಾ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.

    ದೂರಿನಲ್ಲೇನಿತ್ತು?: ಗೆಳೆಯ ವಿಕಾಸ್ ಎಂಬ ಗೆಳೆಯ ಪಾರ್ಟಿಗೆ ಕರೆದಿದ್ದನು. ಹೀಗಾಗಿ ನಾನು ಪಾಂಡವ್ ನಗರಕ್ಕೆ ತೆರಳಿದ್ದೆ. ನಾನು ಆತನ ರೆಸಿಡೆನ್ಸಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ವಿಕಾಸ್‍ನ ಇಬ್ಬರು ಗೆಳೆಯರು ದಾರಿ ಮಧ್ಯೆ ಸಿಕ್ಕಿದ್ದರು. ನಾವು ಮೂವರು ಸೇರಿ ವಿಕಾಸ್ ಮನೆಗೆ ಹೋಗಿದ್ದೇವು. ಅದಾಗಲೇ ವಿಕಾಸ್ ಮನೆಯಲ್ಲಿ ಇಬ್ಬರು ಹಾಜರಿದ್ದರು. ಆದ್ರೆ ಈ ವೇಳೆ ನನಗೆ ಸ್ವಲ್ಪ ಕೆಲಸ ಇದೆ ಹೊರಗೆ ಹೋಗಿ ಬರ್ತೀನಿ ಅಂತಾ ವಿಕಾಸ್ ನನ್ನ ಜೊತೆ ಹೇಳಿ ಹೋಗಿದ್ದನು. ಈತ ಹೋದ ಬಳಿಕ ಉಳಿದ ಗೆಳೆಯರು ಸೇರಿ ಒತ್ತಾಯ ಮಾಡಿ ಆಲ್ಕೋಹಾಲ್ ಕುಡಿಸಿದ್ದಾರೆ. ಆ ಬಳಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.

    ಪ್ರಕರಣ ಸಂಬಂಧ ಆರೋಪಿಗಳಾದ ನವೀನ್ ಕುಮಾರ್, ಪ್ರತೀಕ್ ಕುಮಾರ್, ವಿಕಾಸ್ ಮೆಹ್ರಾ, ಸರ್ವ್‍ಜೀತ್ ಹಾಗೂ ಲಕ್ಷ್ಯ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಇವರೆಲ್ಲರೂ ಕಾಲ್‍ಸೆಂಟರ್ ಉದ್ಯೋಗಿಗಳಾಗಿದ್ದಾರೆ. ಸದ್ಯ ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 376ಡಿ(ಗ್ಯಾಂಗ್ ರೇಪ್), ಸೆಕ್ಷನ್ 323(ಕೈಯಿಂದ ಹಲ್ಲೆ), ಸೆಕ್ಷನ್ 506(ಜೀವ ಬೆದರಿಕೆ), ಸೆಕ್ಷನ್ 342 (ಅಕ್ರಮ ಬಂಧನ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

  • ಬಸ್‍ನಲ್ಲಿ ಗಾಂಜಾ ಸಾಗಿಸುತ್ತಿದ್ದ ನಾಲ್ಕು ಮಹಿಳೆಯರ ಬಂಧನ

    ಬಸ್‍ನಲ್ಲಿ ಗಾಂಜಾ ಸಾಗಿಸುತ್ತಿದ್ದ ನಾಲ್ಕು ಮಹಿಳೆಯರ ಬಂಧನ

    ಬೀದರ್: ಬಸ್‍ನಲ್ಲಿ ಗಾಂಜಾ ಸಾಗಿಸುತ್ತಿದ್ದ ನಾಲ್ಕು ಮಹಿಳೆಯರನ್ನು ಬೀದರ್ ತಾಲೂಕಿನ ಚಾಂಬೋಳ ಗ್ರಾಮದಲ್ಲಿ ಇಂದು ಪೊಲೀಸರು ಬಂಧಿಸಿದ್ದಾರೆ.

    ಕಮಲಾಬಾಯಿ (33), ಅಂಬಾಬಾಯಿ (35), ರಮಾಬಾಯಿ (36) ಹಾಗೂ ರೇಖಾಬಾಯಿ (31) ಬಂಧಿತ ಮಹಿಳೆಯರು. ಈ ನಾಲ್ವರು ಬೀದರ್ ಜಿಲ್ಲೆಯ ಔರಾದ್ ತಾಲೂಕಿನಿಂದ ಮಹಾರಾಷ್ಟ್ರ ರಾಜ್ಯದ ಲಾಥೂರ್ ನಗರಕ್ಕೆ ಗಾಂಜಾ ಸಾಗಿಸುತ್ತಿದ್ದರು ಎಂದು ತಿಳಿದುಬಂದಿದೆ.

    ಬಂಧಿತರಿಂದ 22 ಕೆ.ಜಿ. ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಹಿಳೆಯರು ಬಸ್‍ನಲ್ಲಿ ಗಾಂಜಾ ಸಾಗಿಸುವ ಖಚಿತ ಮಾಹಿತಿ ಮೇರೆಗೆ ತಹಶೀಲ್ದಾರ್ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಸದ್ಯ ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಈ ಕುರಿತು ಜನವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ರೌಡಿಶೀಟರ್ ಸುನಿಲ್ ಕೊಲೆ ಪ್ರಕರಣ- ಸ್ಪಾಟ್ ನಾಗ ಸೇರಿ 9 ಆರೋಪಿಗಳ ಬಂಧನ

    ರೌಡಿಶೀಟರ್ ಸುನಿಲ್ ಕೊಲೆ ಪ್ರಕರಣ- ಸ್ಪಾಟ್ ನಾಗ ಸೇರಿ 9 ಆರೋಪಿಗಳ ಬಂಧನ

    – ಆಂಧ್ರದಲ್ಲಿ ಸೆರೆಸಿಕ್ಕ ಆರೋಪಿಗಳು

    ಬೆಂಗಳೂರು: ಬಸವೇಶ್ವರ ನಗರದಲ್ಲಿ ನಡೆದ ರೌಡಿ ಶೀಟರ್ ಸುನಿಲ್ ಕೊಲೆ ಪ್ರಕರಣ ಸಂಬಂಧ 9 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಕೊಲೆ ಪ್ರಕರಣ ಸಂಬಂಧ ಪೊಲೀಸರು ನಾಲ್ಕು ವಿಶೇಷ ತಂಡಗಳನ್ನು ರಚಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಆಂಧ್ರ ಮತ್ತು ಧರ್ಮಸ್ಥಳಕ್ಕೆ ಪೊಲೀಸರ ತಂಡ ತೆರಳಿತ್ತು. ಇನ್ನೆರಡು ತಂಡ ಬೆಂಗಳೂರಿನಲ್ಲಿಯೇ ಹುಡುಕಾಟ ಆರಂಭಿಸಿತ್ತು. ಆಂಧ್ರದಲ್ಲಿ ಗುರುವಾರ ರಾತ್ರಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ನಾಗರಾಜ ಅಲಿಯಾಸ್ ಸ್ಪಾಟ್ ನಾಗ ಸೇರಿ 9 ಮಂದಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ನಡೆದಿದ್ದೇನು?: ಕಳೆದ ಬುಧವಾರ ಬಸವೇಶ್ವರ ನಗರದಲ್ಲಿರೋ ಸುನಿಲ್ ಮನೆಗೆ ನುಗ್ಗಿದ ನಾಲ್ವರ ತಂಡ ಆತನನ್ನು ಮನೆಯಿಂದ ಹೊರಗೆಳೆದು ಮಾರಕಾಸ್ತ್ರಗಳಿಂದ ದಾಳಿ ಮಾಡಿ ಹತ್ಯೆಗೈದಿತ್ತು. ಬಳಿಕ ಗ್ಯಾಂಗ್ ಅಲ್ಲಿಂದ ಕಾಲ್ಕಿತ್ತಿತ್ತು. ಈ ವೇಳೆ ಸುನಿಲ್ ಪೋಷಕರಿಗೂ ಗಾಯಗಳಾಗಿತ್ತು.

    ಹಿಂದಿನ ದಾಳಿಗೆ ಸೇಡು: ಸ್ಪಾಟ್ ನಾಗನ ಮೇಲೆ ರೌಡಿ ಸುನಿಲ್ ಗ್ಯಾಂಗ್ 2016ರ ಮಾರ್ಚ್ ನಲ್ಲಿ ಮಾರಣಾಂತಿಕ ಹಲ್ಲೆ ಮಾಡಿದ್ದರು. ಈ ಘಟನೆಯಿಂದ ಹೆಂಡತಿ ಮತ್ತು ಮಕ್ಕಳು ನಾಗನನ್ನು ತೊರೆದಿದ್ದರು. ಈ ಪ್ರಕರಣದಲ್ಲಿ ಜೈಲು ಸೇರಿದ್ದ ಸುನಿಲ್ 10 ದಿನದ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ. ಬಿಡುಗಡೆಯಾದ ಬಳಿಕವೂ ನಾಗನನ್ನು ಕುಂಟ ಎಂದು ಲೇವಡಿ ಮಾಡುತ್ತಿದ್ದ. ಹಲ್ಲೆ ಮತ್ತು ಲೇವಡಿಯಿಂದ ಮನನೊಂದಿದ್ದ ನಾಗ ಒಂದು ವರ್ಷದ ಹಿಂದಿನ ದಾಳಿಗೆ ಸುನಿಲ್‍ನನ್ನು ಬುಧವಾರದಂದು ಕೊಲೆ ಮಾಡಿದ್ದ.

    https://www.youtube.com/watch?v=a3vmsD9DKZw

  • ರಾಜ್ಯದಲ್ಲಿ ನಡೆಯಬಹುದಾಗಿದ್ದ ಗ್ಯಾಂಗ್‍ವಾರ್‍ಗೆ ಶಿವಮೊಗ್ಗ ಪೊಲೀಸರಿಂದ ಫುಲ್‍ಸ್ಟಾಪ್!

    ಶಿವಮೊಗ್ಗ: ರಾಜ್ಯದಲ್ಲಿ ನಡೆಯಬಹುದಾಗಿದ್ದ ಗ್ಯಾಂಗ್ ವಾರ್ ಗೆ ಪೊಲೀಸರು ಕಡಿವಾಣ ಹಾಕಿದ್ದಾರೆ. ಬೆಂಗಳೂರಿನಲ್ಲಿರುವ ರೌಡಿ ಶೀಟರ್ ಕೊರಂಗು ಕೃಷ್ಣನ ಹತ್ಯೆಗೆ ಸವಿದೇಶದಲ್ಲಿ ಭೂಗತನಾಗಿರುವ ಹೆಬ್ಬೆಟ್ಟು ಮಂಜ ರೂಪಿಸಿದ ಈ ಸಂಚನ್ನು ಶಿವಮೊಗ್ಗ ಪೊಲೀಸರು ವಿಫಲಗೊಳಿಸಿದ್ದಾರೆ.

    ಹೆಬ್ಬೆಟ್ಟು ಮಂಜನ ತನ್ನ ಸಹಚರ ಅಂಬರೀಶ್ ಎಂಬಾತನ ಮೂಲಕ ಶಿವಮೊಗ್ಗದಲ್ಲಿ ಇರುವ ಸಹಪಾಠಿ ಅಶ್ರಫ್ ಗೆ ಒಂದು ಪಿಸ್ತೂಲ್ ತಲುಪಿಸಿದ್ದ. ಅಲ್ಲದೆ ಈತನಿಂದಲೇ ಒರಿಸ್ಸಾದ ಬೆಹರಾಂಪುರದಿಂದ ಐದು ಪಿಸ್ತೂಲ್ ತರಿಸಿದ್ದ. ಒಟ್ಟು ಆರು ಪಿಸ್ತೂಲ್ ತಲುಪಿಸಿ, ನಾ ಹೇಳುವವರೆಗೂ ನಿನ್ನ ಬಳಿಯೇ ಇರಲಿ, ಬೆಂಗಳೂರಿನಿಂದ ನನ್ನ ಕಡೆಯವರು ಬಂದು ತೆಗೆದುಕೊಂಡು ಹೋಗುತ್ತಾರೆ ಎಂದು ಹೇಳಿದ್ದ.

    ಬೇರೆಬೇರೆ ವ್ಯವಹಾರ ಮಾಡಿ, ನಷ್ಟದಲ್ಲಿದ್ದ ಆಶ್ರಫ್ ಈ ಪಿಸ್ತೂಲ್ ಗಳನ್ನು ಮಾರಾಟ ಮಾಡಲು ಮುಂದಾದ. ಇದಕ್ಕಾಗಿ ಸ್ನೇಹಿತ ನದೀಮ್ ಎಂಬಾತನ ನೆರವು ಪಡೆದ. ಇವುಗಳಲ್ಲಿ ಎರಡು ಪಿಸ್ತೂಲ್ ಗಳನ್ನು ಮಂಡಗದ್ದೆ ಬಳಿ ಲಿಂಗಾಪುರದ ಮಥಾಯ್ ಎಂಬಾತನಿಗೆ ಮಾರಿದ್ದ. ಆದರೆ ಗುಂಡುಗಳನ್ನು ಕೊಟ್ಟಿರಲಿಲ್ಲ. ಕಳೆದ ವಾರ ಗುಂಡು ಕೊಡಲು ಹಾಗೂ ಉಳಿದ ಪಿಸ್ತೂಲ್ ಗಳ ಮಾರಾಟಕ್ಕೆ ಮುಂದಾದಾಗ ಶಿವಮೊಗ್ಗ ಪೊಲೀಸರ ಕೈಗೆ ಸಿಕ್ಕು ಬಿದ್ದಿದ್ದಾರೆ. ಪೊಲೀಸರು ನಾಲ್ಕು ಪಿಸ್ತೂಲ್ ಹಾಗೂ 48 ರೌಂಡ್ಸ್ ವಶ ಪಡಿಸಿಕೊಂಡಿದ್ದಾರೆ.

    ಇವುಗಳಲ್ಲಿ ಮೂರು ಪಿಸ್ತೂಲ್ ವಿದೇಶಿ ಕಂಪನಿಯವು. ಒಂದು ದೇಶಿ. ಈ ಮುಂಚೆಯೇ ಮಾರಾಟ ಮಾಡಿದ್ದ ಎರಡು ಪಿಸ್ತೂಲ್ ಸಮೇತ ನಾಪತ್ತೆ ಆಗಿರುವ 5 ಮಂದಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.