Tag: arrest

  • ಉಗ್ರಪ್ಪಗೆ ವೋಟ್ ಹಾಕಿ ಜೈಲು ಸೇರಿದ!

    ಉಗ್ರಪ್ಪಗೆ ವೋಟ್ ಹಾಕಿ ಜೈಲು ಸೇರಿದ!

    ಬಳ್ಳಾರಿ: ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಅವರಿಗೆ ಮತ ನೀಡಿ ಫೋಟೋ ಕ್ಲಿಕ್ಕಿಸಿಕೊಂಡ ವ್ಯಕ್ತಿಯೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ.

    ಹೊಸಪೇಟೆಯಲ್ಲಿ ಮತದಾನದ ವೇಳೆ ಮೊಬೈಲ್ ತೆಗೆದುಕೊಂಡು ಮತಗಟ್ಟೆಗೆ ತೆರಳಿದ್ದ ರಜಾಕ್ ಎಂಬಾತನನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ. ಮತಗಟ್ಟೆ ಸಂಖ್ಯೆ 62ರ ಇವಿಎಂನಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ ಕುರಿತು ಸಾಕ್ಷಿಗಾಗಿ ರಜಾಕ್ ಫೋಟೋ ಸೆರೆಹಿಡಿದಿದ್ದ. ಅಲ್ಲದೇ ತಾನು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದೇನೆ ಎಂದು ತೋರಿಸಲು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾನೆ.

    ಈ ಕುರಿತು ಮಾಹಿತಿ ಪಡೆದ ಚುನಾವಣಾಧಿಕಾರಿ ಲೋಕೇಶ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಇದರ ಅನ್ವಯ ಪೊಲೀಸರು ರಜಾಕ್ ನನ್ನು ಬಂಧಿಸಿದ್ದಾರೆ. ರಹಸ್ಯ ಮತದಾನ ನಿಯಮ ಉಲ್ಲಂಘಿಸಿದ ಹಿನ್ನೆಲೆಯ ಆರೋಪದಲ್ಲಿ ರಜಾಕ್ ಬಂಧನವಾಗಿದೆ. ನಿಯಮಗಳ ಅನ್ವಯ ಮತಗಟ್ಟೆಯಲ್ಲಿ ಮೊಬೈಲ್ ತೆಗೆದುಕೊಂಡು ಹೋಗಲು ನಿಷೇಧವಿದೆ. ಆದರೂ ಮತಗಟ್ಟೆಯಲ್ಲಿ ಮೊಬೈಲ್ ಸಂಚಾರ ಸರ್ವೆ ಸಾಮಾನ್ಯ, ಮತಗಟ್ಟೆಯ ಅಧಿಕಾರಿಗಳ ನಿರ್ಲಕ್ಷವೇ ಕಿಡಿಗೇಡಿಗಳ ಕೃತ್ಯಕ್ಕೆ ಕಾರಣ ಎಂಬ ಆರೋಪ ಕೇಳಿ ಬಂದಿದೆ.

    ಮಂಡ್ಯ ಲೋಕಸಭೆ ಉಪಚುನಾವಣೆ ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿಗೆ ಮತ ನೀಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಿಷೇಧದ ನಡುವೆಯೂ ಮೊಬೈಲ್ ತೆಗೆದುಕೊಂಡು ಹೋಗಿರುವ ಮತದಾರರೊಬ್ಬ ಬಹಿರಂಗಗೊಳಿಸಿದ್ದಾರೆ. ಆದರೆ ಆ ವ್ಯಕ್ತಿಯ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=Bx3DXkFitoI

  • ಮಲಗಿದ್ದ ಮಕ್ಕಳನ್ನ ಎತ್ಕೊಂಡು ಹೋಗಿ ಕೊಂದು ಸಮಾಧಿ ಮಾಡ್ದ!

    ಮಲಗಿದ್ದ ಮಕ್ಕಳನ್ನ ಎತ್ಕೊಂಡು ಹೋಗಿ ಕೊಂದು ಸಮಾಧಿ ಮಾಡ್ದ!

    ಹೈದರಾಬಾದ್: ಬೆಂಗಳೂರಿನ ವ್ಯಕ್ತಿಯೊಬ್ಬ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯ ಇಬ್ಬರು ಮಕ್ಕಳನ್ನು ಕೊಲೆ ಮಾಡಿರುವ ಘಟೆನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ನಡೆದಿದೆ.

    ಅನಂತಪುರದ ಪುಟ್ಟಪರ್ತಿ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಆರೋಪಿಯನ್ನು ಒಬ್ಲುಸು ಎಂದು ಗುರುತಿಸಲಾಗಿದೆ. ಈತ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದು, ನಾಗಮ್ಮ ಎಂಬವರ ಇಬ್ಬರು ಮಕ್ಕಳನ್ನು ಕೊಂದಿದ್ದಾನೆ ತಿಳಿದು ಬಂದಿದೆ.

    ಆರೋಪಿ ಒಬ್ಲುಸು, ನಾಗಮ್ಮ ಮತ್ತು ಪತಿ ಗಣೇಶ್ ಅವರು ಬೆಂಗಳೂರಿನ ಮುನಿಸಿಪಲ್ ಕಾರ್ಪೋರೇಷನ್ ನಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ನಾಗಮ್ಮ ಮತ್ತು ಒಬ್ಲುಸು ಇಬ್ಬರಿಗೂ ಪರಿಚಯವಾಗಿ ಸ್ನೇಹವಾಗಿತ್ತು. ಸ್ನೇಹ ಪ್ರೀತಿಯಾಗಿ ಆರೋಪಿ ಒಬ್ಲುಸು ನಾಗಮ್ಮಳನ್ನು ಮದುವೆಯಾಗುತ್ತೇನೆ ಎಂದು ಮಾತುಕೊಟ್ಟಿದ್ದನು. ಅದರಂತೆಯೇ ಆಕೆಯನ್ನು ತನ್ನ ಗ್ರಾಮಕ್ಕೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ತಮ್ಮ ಮೊದಲ ಪತ್ನಿಗೆ ನಾನು ಈಕೆಯನ್ನು ಮದುವೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾನೆ. ಆದರೆ ಇದಕ್ಕೆ ಆತನ ಪತ್ನಿ ವಿರೋಧಿಸಿದ್ದಾರೆ. ಬಳಿಕ ಅಲ್ಲಿಂದ ಅವರಿಬ್ಬರು ಪುಟ್ಟಪರ್ತಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸಮೀಪದ ಲಾಡ್ಜ್ ನಲ್ಲಿ ಉಳಿದುಕೊಂಡಿದ್ದಾರೆ.

    ಅಕ್ಟೋಬರ್ 25 ರಂದು ನಾಗಮ್ಮ ಮಲಗಿದ್ದಾಗ ಆಕೆಯ ಮಕ್ಕಳಾದ ದರ್ಶಿನಿ(3) ಮತ್ತು 6 ತಿಂಗಳ ಮಗುವನ್ನು ಎತ್ತಿಕೊಂಡು ಹೋಗಿ ಕೊಲೆ ಮಾಡಿ ದೇಹಗಳನ್ನು ಕಾಲುವೆಯ ಬಳಿ ಸಮಾಧಿ ಮಾಡಿ ವಾಪಸ್ ಬಂದಿದ್ದಾನೆ. ಇತ್ತ ನಾಗಮ್ಮ ಎಚ್ಚರಗೊಂಡು ಮಕ್ಕಳ ಬಗ್ಗೆ ವಿಚಾರಿಸಿದಾಗ ಸಂಬಂಧಿ ಮನೆಯಲ್ಲಿ ಬಿಟ್ಟು ಬಂದಿದ್ದೇನೆ ಎಂದು ಆರೋಪಿ ಸುಳ್ಳು ಹೇಳಿದ್ದಾನೆ.

    ಇಬ್ಬರು ಒಟ್ಟಿಗೆ ವಾಪಸ್ ಬೆಂಗಳೂರಿಗೆ ಬಂದಾಗ ನಾಗಮ್ಮ ಪತಿ ಗಣೇಶ್ ಅವರನ್ನು ನೋಡಿ ಅನುಮಾನಗೊಂಡಿದ್ದಾನೆ. ಬಳಿಕ ಸಂಬಂಧಿಗಳು ಮತ್ತು ಗಣೇಶ್ ವಿಚಾರಿಸಿದಾಗ ಮಕ್ಕಳನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ನಂತರ ಪುಟ್ಟಪರ್ತಿ ಸ್ಥಳೀಯ ಪೊಲೀಸರಿಗೆ ಈ ಬಗ್ಗೆ ಮಾಹಿತಿ ತಿಳಿಸಲಾಗಿದೆ.

    ಮಾಹಿತಿ ತಿಳಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಸಮಾಧಿ ಮಾಡಿದ್ದ ಸ್ಥಳದಲ್ಲಿ ಮಕ್ಕಳ ದೇಹಗಳನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ರೇಯಸಿಗಾಗಿ ಶಿಕ್ಷಕಿ ಪತ್ನಿಯ ಹತ್ಯೆ!

    ಪ್ರೇಯಸಿಗಾಗಿ ಶಿಕ್ಷಕಿ ಪತ್ನಿಯ ಹತ್ಯೆ!

    ನವದೆಹಲಿ: ದೆಹಲಿಯ ವಬಾನಾ ಪ್ರದೇಶದಲ್ಲಿ ನಡೆದಿದ್ದ ಶಿಕ್ಷಕಿಯೊಬ್ಬರ ಕೊಲೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

    ಸುನಿತಾ(38) ಕೊಲೆಯಾಗಿದ್ದ ಶಿಕ್ಷಕಿ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಕಿ ಪತಿ ಮಂಜೀತ್ (38), ಆತನ ಪಾಟ್ನರ್ ಏಂಜೆಲ್ ಗುಪ್ತಾ ಮತ್ತು ಏಂಜೆಲ್ ಗುಪ್ತಾಳ ತಂದೆ ರಾಜೀವ್ ಬಂಧಿತ ಆರೋಪಿಗಳು. ಬಂಧಿತ ಏಂಜೆಲ್ ಗುಪ್ತಾ ವೃತ್ತಿಯಲ್ಲಿ ಮಾಡೆಲ್ ಆಗಿದ್ದಾಳೆ ಎಂದು ತಿಳಿದು ಬಂದಿದೆ.

    ಆರೋಪಿ ಮಂಜೀತ್ ಹಾಗೂ ಏಂಜೆಲ್ ಗುಪ್ತಾ ಗುರ್ಗಾಂವ್ ನಲ್ಲಿ ಭೇಟಿಯಾಗಿದ್ದು, ಪರಿಚಯದಿಂದ ಇಬ್ಬರು ಪ್ರೀತಿಸುತ್ತಿದ್ದರು. ಮದುವೆಯಾಗಲು ನಿರ್ಧಾರ ಮಾಡಿದ್ದರು. ಆದರೆ ಸುನಿತಾಗೆ ಪತಿ ಮತ್ತು ಗುಪ್ತಾಳ ನಡುವಿನ ಸಂಬಂಧ ತಿಳಿದಿದೆ. ಹೀಗಾಗಿ ಗುಪ್ತಾಳ ಜೊತೆಗಿನ ಪತಿಯ ಸಂಬಂಧವನ್ನು ವಿರೋಧಿಸಿದ್ದಕ್ಕೆ ಸುನಿತಾಳನ್ನು ಕೊಲೆ ಮಾಡಿದ್ದಾರೆ ಎಂದು ಡಿಪಿಸಿ ರಜನೀಶ್ ಗುಪ್ತಾ ಹೇಳಿದ್ದಾರೆ.

    ಸುನಿತಾರನ್ನು ಕೊಲೆ ಮಾಡಲು ಕಾಂಟ್ರ್ಯಾಕ್ಟ್ ಕೊಲೆಗಾರರನ್ನು ನೇಮಕ ಮಾಡಲಾಗಿತ್ತು. ಆದ್ದರಿಂದ ತನಿಖೆ ಮಾಡಲಾಗುತ್ತಿದೆ. ಈ ವೇಳೆ ಅವರ ಹೆಸರನ್ನು ಬಹಿರಂಗ ಪಡಿಸಬಾರದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಹರಿಯಾಣದ ಸೋನೆಪಟ್ ನ ಸರ್ಕಾರಿ ಶಾಲೆಯಲ್ಲಿ ಸುನಿತಾ ಶಿಕ್ಷಕಿಯಾಗಿದ್ದರು. ಸೋಮವಾರ ಬೆಳಗ್ಗೆ ಸುನೀತಾ ಅವರು ಬವಾನಾದಲ್ಲಿ ತನ್ನ ಸ್ಕೂಟರ್ ಪಕ್ಕದಲ್ಲಿ ಗುಂಡಿನ ಪೆಟ್ಟು ತಿಂದು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಬಳಿಕ ಅವರನ್ನು ನೋಡಿ ಮಹಿಳೆಯೊಬ್ಬರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದ್ದಾರೆ.

    ಏಂಜೆಲ್ ಗುಪ್ತಾ

    ಮೊದಲಿಗೆ ಸುನಿತಾ ಕೊಲೆಗೆ ಕಾರಣವೆಂದು ತನಿಖೆ ಮಾಡುತ್ತಿದ್ದಾಗ ಇದು ದರೋಡೆಗಾಗಿ ನಡೆದಿಲ್ಲ ಎಂದು ತಿಳಿದು ಬಂದಿತ್ತು. ಏಕೆಂದರೆ ಆಕೆ ಬಿದ್ದಿದ್ದ ಜಾಗದಲ್ಲಿ ಅವರಿಗೆ ಸೇರಿದ ವಸ್ತುಗಳಾದ ನಗದು ಮತ್ತು ಫೋನ್, ಬ್ಯಾಗ್ ಸ್ಥಳದಲ್ಲಿಯೇ ಸಿಕ್ಕಿತ್ತು.

    ಪತಿ ಸುನಿತಾ ಕೊಲೆಯಲ್ಲಿ ಭಾಗಿಯಾಗಿದ್ದು, ಆತನಿಗೆ ಇದ್ದ ಸಂಬಂಧದ ಬಗ್ಗೆ ಸುನಿತಾ ಕುಟುಂಬದ ಸದಸ್ಯರು ಪೊಲೀಸರಿಗೆ ತಿಳಿಸಿದ್ದಾರೆ. ಬಳಿಕ ಶಿಕ್ಷಕಿ ಸುನಿತಾ ಡೈರಿಯಲ್ಲಿ ಏಂಜಲ್ ಗುಪ್ತಾ ಬಗ್ಗೆ ಮಾಹಿತಿಯಿತ್ತು. ಕೊನೆಗೆ ಪೊಲೀಸರು ಅನುಮಾನಗೊಂಡು ಮಂಜೀತ್ ನನ್ನು ವಿಚಾರಣೆ ನಡೆಸಲು ಕರೆಸಿದ್ದಾರೆ. ಇತ್ತ ಮುಂಬೈನಲ್ಲಿದ್ದ ಏಂಜೆಲ್ ಕೂಡ ತನಿಖೆಗೆ ಒಳಪಡಿಸಿದ್ದಾರೆ.

    ಸುನಿತಾ ಕೊಲೆಗೆ ಗುಪ್ತಾಳ ತಂದೆಯೂ ಕೂಡ ಸಾಥ್ ನೀಡಿದ್ದು, ಸದ್ಯಕ್ಕೆ ಪೊಲೀಸರು ಮೂವರನ್ನು ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹೆಂಡ್ತಿ ಜೊತೆಗಿನ ಅಶ್ಲೀಲ ಫೋಟೋವನ್ನ ಲವರ್ ಗೆ ಕಳುಹಿಸ್ದ- ಪತಿ, ಲವ್ವರ್ ಬಂಧನ

    ಹೆಂಡ್ತಿ ಜೊತೆಗಿನ ಅಶ್ಲೀಲ ಫೋಟೋವನ್ನ ಲವರ್ ಗೆ ಕಳುಹಿಸ್ದ- ಪತಿ, ಲವ್ವರ್ ಬಂಧನ

    ಹೈದರಾಬಾದ್: ಪತಿ ತನ್ನ ಅಕ್ರಮ ಸಂಬಂಧದಿಂದ ದೂರವಾಗಲು ಪತ್ನಿಯ ಜೊತೆಗಿನ ಅಶ್ಲೀಲ ಫೋಟೋವನ್ನು ಲವ್ವರ್ ಗೆ ಕಳುಹಿಸಿದ. ಆ ಫೋಟೋಗೆ ಅಸಭ್ಯವಾಗಿ ಮೆಸೇಜ್ ಮಾಡುತ್ತಿದ್ದ ಪತಿಯ ಪ್ರಿಯತಮೆಯನ್ನು ರಾಚಕೊಂಡ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಆರೋಪಿ ಪತಿಯನ್ನು ತುಳಸಿನಾಥ್ ಮತ್ತು ಪ್ರಿಯತಮೆ ಮೋನಿಕಾ ಎಂದು ಗುರುತಿಸಲಾಗಿದೆ. ಈತ ವನಸ್ಥಳಿಪುರಂ ನಿವಾಸಿಯಾಗಿದ್ದು, ಆಸ್ಟ್ರೇಲಿಯಾದ ವಿಶ್ವವಿದ್ಯಾನಿಲಯದಲ್ಲಿ ಬಿಬಿಎ ಪದವಿ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

    ಕಳೆದ ವರ್ಷ ಬಂಜಾರ ಹಿಲ್ಸ್ ನನ ಭದ್ರತಾ ಸೇವೆಗಳ ಸಭೆಯಲ್ಲಿ ತುಳಸಿನಾಥ್ ಹೈಟೆಕ್ ಸಿಟಿಯಲ್ಲಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ಮೋನಿಕಾಳನ್ನು ಭೇಟಿ ಮಾಡಿದ್ದನು. ಮೋನಿಕಾ ತನ್ನ ಪತಿ ಈಶ್ವರನಿಂದ ದೂರವಾಗಿ ವಿಚ್ಛೇದನ ಪಡೆದುಕೊಂಡಿದ್ದಳು. ತುಳಸಿನಾಥ್ ಮತ್ತು ಮೋನಿಕಾ ಪರಸ್ಪರ ಪರಿಚಯವಾಗಿ ಇಬ್ಬರು ಅನೈತಿಕ ಸಂಬಂಧವನ್ನು ಹೊಂದಿದ್ದಾರೆ ಎಂದು ರಾಚಕೊಂಡ ಪೋಲಿಸ್ ಕಮಿಷನರ್ ಮಹೇಶ್ ಭಾಗವತ್ ಹೇಳಿದ್ದಾರೆ.

    ಆದರೆ ಪತ್ನಿ ಈ ಬಗ್ಗೆ ತಿಳಿದು ವನಸ್ಥಳಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಬಳಿಕ ಪತಿ ತುಳಸಿನಾಥ್ ಅಕ್ರಮ ಸಂಬಂಧ ಹೊಂದಿದ್ದ ಮೋನಿಕಾಳಿಂದ ದೂರವಾಗಲು ಇಚ್ಚಿಸಿದ್ದು, ತನ್ನ ಪತ್ನಿಯ ಜೊತೆಗಿದ್ದ ಆಶ್ಲೀಲ ಫೋಟೋಗಳನ್ನು ಮೋನಿಕಾಗೆ ಕಳುಹಿಸಿದ್ದಾನೆ.

    ಮೋನಿಕಾ ಆ ಫೋಟೋವನ್ನು ತನ್ನ ವಾಟ್ಸಪ್ ನಲ್ಲಿ ಅಪ್ಲೋಡ್ ಮಾಡಿ, ಜೊತೆಗೆ “ಈಕೆ ಹಣಕ್ಕಾಗಿ ಪತಿಯನ್ನು ಜೈಲಿಗೆ ಕಳುಹಿಸುವುದರ ಜೊತೆಗೆ ಏನು ಬೇಕಾದರೂ ಮಾಡುತ್ತಾಳೆ” ಎಂದು ಸ್ಟೇಟಸ್ ಹಾಕಿಕೊಂಡಿದ್ದಾಳೆ.

    ಅಷ್ಟೇ ಅಲ್ಲದೇ ತುಳಸಿನಾಥ್ ಮತ್ತು ಆಕೆ ಪತ್ನಿಗೆ ಅಸಭ್ಯವಾಗಿ ಮೆಸೇಜ್ ಕೂಡ ಮಾಡಿದ್ದಾಳೆ. ಬಳಿಕ ತುಳಸಿನಾಥ್ ಪತ್ನಿ ಈ ಬಗ್ಗೆ ಸೈಬರ್ ಕ್ರೈಂ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ರಾಚಕೊಂಡ ಸೈಬರ್ ಕ್ರೈಂ ಅಧಿಕಾರಿಗಳು ಈ ಬಗ್ಗೆ ತನಿಖೆ ಕೈಗೊಂಡು ಇಬ್ಬರನ್ನು ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಕಲಿ ಚಿನ್ನವಿಟ್ಟು ಒರಿಜಿನಲ್ ಚಿನ್ನ ಕದೀತಿದ್ದ ಮಹಿಳೆ ಬಂಧನ

    ನಕಲಿ ಚಿನ್ನವಿಟ್ಟು ಒರಿಜಿನಲ್ ಚಿನ್ನ ಕದೀತಿದ್ದ ಮಹಿಳೆ ಬಂಧನ

    ಬೆಂಗಳೂರು: ನಕಲಿ ಚಿನ್ನ ಇಟ್ಟು ಒರಿಜಿನಲ್ ಚಿನ್ನ ಕದಿಯುತ್ತಿದ್ದ ಮಹಿಳೆಯನ್ನು ನಗರದ ಪೊಲೀಸರು ಬಂಧಿಸಿದ್ದಾರೆ.

    ಶಿವಾಜಿನಗರ ನಿವಾಸಿ ಶಾಂತಿ ಬಂಧನಕೊಳಗಾದ ಮಹಿಳೆ. ಮನೆ ಕೆಲಸದ ನೆಪದಲ್ಲಿ ಹೈಫೈ ಮನೆಗಳಿಗೆ ಎಂಟ್ರಿ ಕೊಡುತ್ತಿದ್ದ ಶಾಂತಿ, ಆ ಮನೆಯಲ್ಲಿ ಕೆಲ ದಿನ ಕೆಲಸ ಮಾಡಿ ಅಸಲಿ ಚಿನ್ನವನ್ನು ಕದ್ದು ನಕಲಿ ಚಿನ್ನವಿಟ್ಟು ಎಸ್ಕೇಪ್ ಆಗುತ್ತಿದ್ದಳು. ಇದೇ ರೀತಿ ಕೋರಮಂಗಲದ ಮೂರನೇ ಬ್ಲಾಕ್‍ನಲ್ಲಿರೊ ರಹೇಜಾ ರೆಸಿಡೆನ್ಸಿ ಅಪಾರ್ಟ್ ಮೆಂಟ್ ನಲ್ಲಿ ತನ್ನ ಕೈ ಚಳಕವನ್ನು ತೋರಿಸಿ ಶಾಂತಿ ಸಿಕ್ಕಿಬಿದ್ದಿದ್ದಾಳೆ.

    ಅಷ್ಟೇ ಅಲ್ಲದೇ ಕೋರಮಂಗಲದ ದೇವಕಿ ಎಂಬವರ ಮನೆಯಲ್ಲಿಯೂ ಮಾಂಗಲ್ಯ ಸರ ಸೇರಿ ಒಟ್ಟು 170 ಗ್ರಾಂ ಚಿನ್ನ ಕದ್ದಿದ್ದಳು. ಈ ಘಟನೆಗೆ ಸಂಬಂಧಪಟ್ಟಂತೆ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಶಾಂತಿಯನ್ನು ಬಂಧಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಕೆ – ಓರ್ವ ಮಹಿಳೆ ಸೇರಿ ನಾಲ್ವರ ಬಂಧನ

    ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಕೆ – ಓರ್ವ ಮಹಿಳೆ ಸೇರಿ ನಾಲ್ವರ ಬಂಧನ

    ಹುಬ್ಬಳ್ಳಿ: ಕಾಲೇಜು ವಿದ್ಯಾರ್ಥಿಗಳಿಗೆ ಪೂರೈಕೆ ಮಾಡುತ್ತಿದ್ದ ಓರ್ವ ಮಹಿಳೆ ಸೇರಿದಂತೆ ನಾಲ್ವರನ್ನು ನಗರ ಪೊಲೀಸರು ಬಂಧಿಸಿದ್ದಾರೆ

    ಹಳೇ ಹುಬ್ಬಳ್ಳಿ ನಿವಾಸಿಗಳಾದ ಮಹಮ್ಮದ್ ರಫೀಕ್, ಗುಲ್ಜಾರ್ ಬೇಗಂ, ಕಮರಿಪೇಟೆಯ ರಾಜು ಹರಿಣಶಿಖಾರಿ ಹಾಗೂ ಲಕ್ಷ್ಮಣ ಹನುಮಸಾಗರ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಂದ ಸುಮಾರು ಒಂದು ಕೆಜಿ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಬಂಧಿಸಿದ್ದು ಹೇಗೆ?
    ಹುಬ್ಬಳ್ಳಿ ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ್, ಡಿಸಿಪಿ ಬಿ.ಎಸ್.ನೇಮಗೌಡ ಅವರ ನೇತೃತ್ವದಲ್ಲಿ ಪ್ರತಿ ತಿಂಗಳು ಒಂದು ವಾರ ‘ಗಾಂಜಾ ರೌಂಡ್ಸ್’ ಕಾರ್ಯಾಚರಣೆ ನಡೆಯುತ್ತಿದೆ. ಹೀಗಾಗಿ ಈ ವಾರ ಗಾಂಜಾ ಪೂರೈಕೆ ಮಾಡುವವರಿಗೆ ಪೊಲೀಸರು ಬಲೆ ಬೀಸಿದ್ದರು. ವಿವಿಧ ಮೂಲಗಳಿಂದ ಮಾಹಿತಿ ಪಡೆದಿದ್ದ ಪೊಲೀಸರು, ನಾಲ್ವರ ಮೇಲೆ ದಾಳಿ ಮಾಡಿ ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಹಳೇ ಹುಬ್ಬಳ್ಳಿ ಹಾಗೂ ಕಮರಿಪೇಟೆ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಪ್ರಾಪ್ತ ಬಾಲಕಿಗೆ ಶೌಚಾಲಯದಲ್ಲಿ ಲೈಂಗಿಕ ಕಿರುಕುಳ – ಕಾಮುಕ ವಿದ್ಯಾರ್ಥಿ ಬಂಧನ

    ಅಪ್ರಾಪ್ತ ಬಾಲಕಿಗೆ ಶೌಚಾಲಯದಲ್ಲಿ ಲೈಂಗಿಕ ಕಿರುಕುಳ – ಕಾಮುಕ ವಿದ್ಯಾರ್ಥಿ ಬಂಧನ

    ಬೆಂಗಳೂರು: ಅಪ್ರಾಪ್ತ ಬಾಲಕಿ ಶೌಚಾಲಯಕ್ಕೆ ಹೋದ ಸಂದರ್ಭದಲ್ಲಿ ಲೈಂಗಿಕ ಕಿರುಕುಳ ನೀಡಿದ್ದ ವಿದ್ಯಾರ್ಥಿಯೊಬ್ಬನನ್ನು ಆವಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.

    ಬೆಂಗಳೂರು ಪೂರ್ವ ತಾಲೂಕಿನ ಬೊಮ್ಮನಹಳ್ಳಿಯ ಖಾಸಗಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ ಶೌಚಾಲಯಕ್ಕೆ ಹೋದ ಸಂದರ್ಭದಲ್ಲಿ ಐಟಿಐ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಲೈಂಗಿಕ ಕಿರುಕುಳ ನೀಡಿದ್ದಾನೆ.

    ವಿದ್ಯಾರ್ಥಿನಿ ಶೌಚಾಲಯದಲ್ಲಿ ಕಿರುಚಾಡಿದ್ದನ್ನು ಗಮನಿಸಿದವರು ವಿದ್ಯಾರ್ಥಿಯನ್ನು ಹಿಡಿದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯ ಆವಲಹಳ್ಳಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂಧಿತ ಆರೋಪಿ ಹೊಸಕೋಟೆ ತಾಲೂಕಿನ ಕುರುಬರಹಳ್ಳಿ ನಿವಾಸಿ ಎಂದು ತಿಳಿದು ಬಂದಿದೆ. ಸದ್ಯ ಆವಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ‘Good Touch, Bad Touch’ ಹೇಳಿಕೊಡುವ ನೆಪದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕನಿಂದ ಕಿರುಕುಳ

    ‘Good Touch, Bad Touch’ ಹೇಳಿಕೊಡುವ ನೆಪದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕನಿಂದ ಕಿರುಕುಳ

    ಮುಂಬೈ: ಇಂಗ್ಲಿಷ್ ಮೀಡಿಯಂ ಶಾಲೆಯ ದೈಹಿಕ ಶಿಕ್ಷಕನೊಬ್ಬ ವಿದ್ಯಾರ್ಥಿಗಳಿಗೆ ಗುಡ್ ಟಚ್, ಬ್ಯಾಡ್ ಟಚ್ ಬಗ್ಗೆ ಹೇಳಿಕೊಡುವುದಾಗಿ ನಾಲ್ವರು ವಿದ್ಯಾರ್ಥಿಗಳಿಗೆ ಕಿರುಕುಳ ನೀಡಿರುವ ಘಟನೆ ಪುಣೆಯಲ್ಲಿ ನಡೆದಿದೆ.

    ಹದಾಪ್ಸರ್ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ 40 ವರ್ಷದ ಶಿಕ್ಷಕನನ್ನು ಬಂಧಿಸಿದ್ದಾರೆ. ಬಂಧಿತನ ವಿರುದ್ಧ ಕಳೆದ 5 ತಿಂಗಳಿನಿಂದ 9ನೇ ತರಗತಿಯ ನಾಲ್ವರು ಬಾಲಕರನ್ನು ವಿವಿಧ ಸಂದರ್ಭದಲ್ಲಿ ಲೈಂಗಿಕವಾಗಿ ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

    ಶಾಲೆಯಲ್ಲಿ ‘ಉತ್ತಮ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶ’ ಎಂಬ ಜಾಗೃತಿ ಅಭಿಯಾನವನ್ನು ನಡೆಸಲಾಗುತ್ತಿತ್ತು, ಈ ಕಾರ್ಯಕ್ರಮದಲ್ಲಿ ಆರೋಪಿಯೂ ಕೂಡ ಭಾಗಿಯಾಗಿದ್ದನು. ಶಿಕ್ಷಕನೇ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ದೂರು ನೀಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

    ಬಂಧಿತ ಶಿಕ್ಷಕ ಕಳೆದ ಏಳು ವರ್ಷಗಳಿಂದ ಈ ಶಾಲೆಯಲ್ಲಿ ದೈಹಿಕ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದನು ಎಂದು ತಿಳಿದು ಬಂದಿದೆ. ಸದ್ಯಕ್ಕೆ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದ ವಿದ್ಯಾರ್ಥಿಗಳಿಂದ ಹೇಳಿಕೆಯನ್ನು ಪಡೆಯಲಾಗಿದೆ. ಈಗಾಗಲೇ ವಿದ್ಯಾರ್ಥಿಗಳು ನೀಡಿದ ದೂರನ್ನು ಆಧಾರಿಸಿ ಆರೋಪಿ ಶಿಕ್ಷಕನನ್ನು ಬಂಧಿಸಲಾಗಿದೆ. ಶೀಘ್ರವೇ ಆತನನ್ನು ಕೋರ್ಟ್ ಗೆ ಹಾಜರು ಪಡಿಸಲಾಗುತ್ತದೆ ಎಂದು ಪೊಲೀಸ್ ಇನ್ಸ್ ಪೆಕ್ಟರ್ ಸುನಿಲ್ ತಂಬೆ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಕಲಿ ನಾಗಮಣಿ ಮಾರಾಟ ಯತ್ನ- ಮೂವರು ಆರೋಪಿಗಳ ಬಂಧನ!

    ನಕಲಿ ನಾಗಮಣಿ ಮಾರಾಟ ಯತ್ನ- ಮೂವರು ಆರೋಪಿಗಳ ಬಂಧನ!

    ದಾವಣಗೆರೆ: ಜಿಲ್ಲೆಯ ಆನಗೋಡು ಗ್ರಾಮದ ಬಳಿ ನಕಲಿ ನಾಗಮಣಿಯನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿ ಬೇಧಿಸಿದ್ದಾರೆ.

    ಕರಿಬಸಪ್ಪ, ಕುಮಾರ್ ಹಾಗೂ ಸುರೇಶ್ ಬಂಧಿತ ಆರೋಪಿಗಳು. ಕುಮಾರ್ ಹಾಗೂ ಸುರೇಶ್ ಎಂಬವರು ಆನಗೋಡು ಗ್ರಾಮದ ಕರಿಬಸಪ್ಪ ಎನ್ನುವರಿಗೆ ನಕಲಿ ನಾಗಮಣಿಯನ್ನು ತೋರಿಸಿ, ಇದು ನೂರಾರು ಕೋಟಿ ರೂ. ಬೆಲೆಬಾಳುತ್ತದೆ ಎಂದು ನಂಬಿಸಿ ವ್ಯಾಪಾರವನ್ನು ಕುದುರಿಸಿದ್ದರು. ಅಲ್ಲದೇ 10 ಲಕ್ಷಕ್ಕೆ ನಕಲಿ ನಾಗಮಣಿಯ ಡೀಲ್ ಮುಗಿಸಿಕೊಂಡಿದ್ದ ಇಬ್ಬರೂ, ಮುಂಗಡವಾಗಿ 50 ಸಾವಿರ ರೂಪಾಯಿಯನ್ನು ಪಡೆದುಕೊಂಡಿದ್ದರು.

    ಇದರ ಖಚಿತ ಮಾಹಿತಿ ಪಡೆದ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್‍ಐ ಕಿರಣ್ ಕುಮಾರ್ ಹಾಗೂ ಡಿಸಿಬಿ ಇನ್ಸ್ ಪೆಕ್ಟರ್ ದೇವರಾಜ್ ನೇತೃತ್ವದ ತಂಡ ದಾಳಿ ನಡೆಸಿತ್ತು. ದಾಳಿ ವೇಳೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳ ಬಳಿಯಿದ್ದ ನಕಲಿ ನಾಗಮಣಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಜಿಲ್ಲೆಯಾದ್ಯಂತ ಇಲ್ಲಿಯವರೆಗೆ ನಕಲಿ ಬಂಗಾರದ ಹಾವಳಿ ಹೆಚ್ಚಾಗಿದ್ದು, ಇದೀಗ ನಕಲಿ ನಾಗಮಣಿ ಮಾರಾಟದ ಜಾಲ ತಲೆ ಎತ್ತಿದೆ. ಹೀಗಾಗಿ ಬಂಧಿತ ಆರೋಪಿಗಳನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಘಟನೆ ಸಂಬಂಧ ಗ್ರಾಮಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶ್ರೀಲಂಕಾದ ಮಾಜಿ ಕ್ರಿಕೆಟಿಗ ಅರ್ಜುನ್ ರಣತುಂಗಾ ಬಂಧನ!

    ಶ್ರೀಲಂಕಾದ ಮಾಜಿ ಕ್ರಿಕೆಟಿಗ ಅರ್ಜುನ್ ರಣತುಂಗಾ ಬಂಧನ!

    ಕೊಲೊಂಬೊ: ಶೂಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗ ಹಾಗೂ ಮಾಜಿ ಪೆಟ್ರೋಲಿಯಂ ಸಚಿವ ಅರ್ಜುನ್ ರಣತುಂಗಾರನ್ನು ಶ್ರೀಲಂಕಾ ಪೊಲೀಸರು ಬಂಧಿಸಿದ್ದಾರೆ.

    ಗುಂಡು ಹಾರಿಸಿ ವ್ಯಕ್ತಿಯನ್ನು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜುನ್ ರಣತುಂಗಾರನ್ನು ಕೊಲೊಂಬೊ ಅಪರಾಧ ವಿಭಾಗದ ಮುಖ್ಯಸ್ಥರು ಬಂಧಿಸಿದ್ದು, ಶೀಘ್ರವೇ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

    ಏನಿದು ಪ್ರಕರಣ?
    ಮಂತ್ರಿ ಸ್ಥಾನ ಕಳೆದುಕೊಂಡ ನಂತರವೂ ಅರ್ಜುನ್ ರಣತುಂಗಾ ಭಾನುವಾರ ತಮ್ಮ ಕಚೇರಿಗೆ ಪ್ರವೇಶಿಸಲು ಯತ್ನಿಸಿದ್ದರು. ಇದನ್ನು ತಡೆಯಲು ಮುಂದಾದ ರಾಜಪಕ್ಸೆ ಬೆಂಬಲಿಗರ ನಡುವೆ ತೀವ್ರ ವಾಗ್ವಾದ ಏರ್ಪಟ್ಟಿತ್ತು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ, ರಣತುಂಗಾ ಅವರ ಗನ್ ಮ್ಯಾನ್ ಗಳು ಏಕಾಏಕಿ ಫೈರಿಂಗ್ ನಡೆಸಿದ್ದರು. ಪರಿಣಾಮ ಓರ್ವ ವ್ಯಕ್ತಿ ಮೃತಪಟ್ಟಿದ್ದ.

    ಕಳೆದ ಶನಿವಾರ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ, ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರ ಸರ್ಕಾರ ಹಾಗೂ ಸಚಿವ ಸಂಪುಟವನ್ನು ವಿಸರ್ಜನೆ ಮಾಡಿ, ಮಹಿಂದಾ ರಾಜಪಕ್ಸೆಯವರನ್ನು ದೇಶದ ಪ್ರಧಾನಿಯನ್ನಾಗಿ ಆಯ್ಕೆ ಮಾಡಿದ್ದರು. ನೂತನ ಪ್ರಧಾನಿ ಆಯ್ಕೆಯಾದ ಬೆನ್ನಲ್ಲೇ ಶ್ರೀಲಂಕಾದಲ್ಲಿ ರಾಜಕೀಯ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಅಲ್ಲದೇ ಹಳೆಯ ಸಚಿವರ ಪ್ರವೇಶಕ್ಕೆ ರಾಜಪಕ್ಸೆ ಬೆಂಬಲಿಗರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv