Tag: arebian sea

  • ಉಳ್ಳಾಲದ ಸೋಮೇಶ್ವರ, ಉಚ್ಚಿಲ ಭಾಗದಲ್ಲಿ ಕಡಲಬ್ಬರ- ಸ್ಥಳೀಯರಲ್ಲಿ ಆತಂಕ

    ಉಳ್ಳಾಲದ ಸೋಮೇಶ್ವರ, ಉಚ್ಚಿಲ ಭಾಗದಲ್ಲಿ ಕಡಲಬ್ಬರ- ಸ್ಥಳೀಯರಲ್ಲಿ ಆತಂಕ

    ಮಂಗಳೂರು: ಅರಬ್ಬೀ ಸಮುದ್ರದಲ್ಲಿ ಚಂಡಮಾರುತ ಕಾಣಿಸಿಕೊಂಡ ಪರಿಣಾಮ ಕರಾವಳಿಯಲ್ಲಿ ಒಮ್ಮಿಂದೊಮ್ಮೆಲೇ ಕಡಲಿನ ಅಬ್ಬರ ಉಂಟಾಗಿದೆ.

    ಮಂಗಳೂರಿನ ಉಳ್ಳಾಲದ ಸೋಮೇಶ್ವರ ಮತ್ತು ಉಚ್ಚಿಲ ಭಾಗದಲ್ಲಿ ಕಡಲು ಅಬ್ಬರಿಸುತ್ತಿದ್ದು, ತೀರ ಪ್ರದೇಶದ ಮನೆಗಳಿಗೆ ನೀರು ನುಗ್ಗುತ್ತಿದೆ. ಹೀಗಾಗಿ ಹಲವು ಮನೆಗಳ ನಿವಾಸಿಗಳು ಆತಂಕದಲ್ಲಿದ್ದಾರೆ.

    ಮಳೆ ಕಡಿಮೆಯಾಗಿ ತೀರದ ನಿವಾಸಿಗಳು ನಿಟ್ಟುಸಿರು ಬಿಟ್ಟಿರುವಾಗಲೇ ಕಡಲಬ್ಬರ ಆತಂಕಕ್ಕೆ ಕಾರಣವಾಗಿದೆ. ಲಕ್ಷದ್ವೀಪ ಸೇರಿದಂತೆ ಸಮುದ್ರ ಮಧ್ಯೆ ಭಾರೀ ಮಳೆಯಾಗಿರುವುದು ಮತ್ತು ಚಂಡಮಾರುತ ಕಾಣಿಸಿಕೊಂಡ ಕಾರಣ ಕಡಲಿನಬ್ಬರ ದಿಢೀರಾಗಿ ಕಾಣಿಸಿಕೊಂಡಿದೆ. ಚಂಡಮಾರುತ ಪರಿಣಾಮ ಮಳೆಯ ಮುನ್ಸೂಚನೆ ಇತ್ತಾದರೂ, ಕರಾವಳಿಯಲ್ಲಿ ಅಷ್ಟೇನು ಮಳೆ ಬಿದ್ದಿಲ್ಲ. ಬಿಸಿಲಿನ ವಾತಾವರಣ ಇದ್ದರೂ, ತೀರದಲ್ಲಿ ಕಡಲಬ್ಬರ ಕಾಣಿಸಿಕೊಂಡಿದ್ದು ಜನರಲ್ಲಿ ಅಚ್ಚರಿಗೆ ಕಾರಣವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv