Tag: ardhana ram

  • ದರ್ಶನ್‌ ಜೊತೆ ಆಕ್ಟ್‌ ಮಾಡಿದ್ದಕ್ಕೆ ತುಂಬಾ ಖುಷಿಯಿದೆ- ‘ಕಾಟೇರ’ ನಟಿ

    ದರ್ಶನ್‌ ಜೊತೆ ಆಕ್ಟ್‌ ಮಾಡಿದ್ದಕ್ಕೆ ತುಂಬಾ ಖುಷಿಯಿದೆ- ‘ಕಾಟೇರ’ ನಟಿ

    ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಕಾಟೇರ’ (Katera Film) ಸಿನಿಮಾ ಇಂದು ಕೊನೆಯ ಹಂತದ ಶೂಟಿಂಗ್ ಮುಕ್ತಾಯವಾಗಿದೆ. ಚಿತ್ರತಂಡದ ಕಡೆಯಿಂದ ಇಂದು (ಸೆ.11) ಸುದ್ದಿಗೋಷ್ಠಿ ಆಯೋಜಿಸಿದೆ. ಈ ಚಿತ್ರದ ಮೂಲಕ ನಾಯಕಿಯಾಗಿ ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ವೇಳೆ ನಟ ದರ್ಶನ್ ಜೊತೆ ತೆರೆಹಂಚಿಕೊಂಡಿದ್ದರ ಬಗ್ಗೆ ಯುವನಟಿ ಆರಾಧನಾ ರಾಮ್ ಸಂತಸ ವ್ಯಕ್ತಪಡಿಸಿದ್ದರು. ತೆರೆಹಿಂದಿನ ಅನುಭವ ಬಿಚ್ಚಿಟ್ಟರು.

    ದರ್ಶನ್ ಸರ್ ಅವರ ಸಿನಿಮಾದಲ್ಲಿ ನಟಿಸಲು ಚಾನ್ಸ್ ಸಿಕ್ಕಿದ್ದಕ್ಕೆ ತುಂಬಾ ಖುಷಿಯಿದೆ. ಪೋಸ್ಟರ್‌ನಲ್ಲಿ ನನ್ನ ನೋಡಿದ್ರೆ, ಅದು ನಾನೇ ನಾ ಅಂತಾ ಅನಿಸುತ್ತಾಯಿದೆ. ದರ್ಶನ್ ಅವರ ಜೊತೆ ಫಸ್ಟ್ ಟೈಮ್ ವರ್ಕ್ ಮಾಡುತ್ತಾ ಇದ್ದೀನಿ ಎಂದು ಒಂದು ದಿನನೂ ಅನಿಸಲಿಲ್ಲ. ನಟಿಸೋದಕ್ಕೆ  ಸರ್ಪೋಟ್ ಮಾಡಿದ್ದರು. ನನಗೆ ಸೆಟ್‌ನಲ್ಲಿ ದರ್ಶನ್‌ ಸರ್ ಚಾಕಲೇಟ್‌ ತಂದು ಕೊಡುತ್ತಾ ಇದ್ದರು. ನಮ್ಮ ಡಿ ಬಾಸ್ ಹೀರೋ ಬಗ್ಗೆ ಎಷ್ಟು ಮಾತನಾಡಿದ್ದರು ಅದು ಸಾಕಾಗೋಲ್ಲ. ಇದನ್ನೂ ಓದಿ:‘ಮ್ಯಾಟ್ನಿ’ ಚಿತ್ರದ ಎಣ್ಣೆ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ನೀನಾಸಂ ಸತೀಶ್

    ತರುಣ್ (Tarun) ಅವರಂತಹ ನಿರ್ದೇಶಕರ ನಿರ್ದೇಶನದಲ್ಲಿ ಮೊದಲ ಬಾರಿ ನಟಿಸುತ್ತಿದ್ದೇನೆ ಅಂದರೆ ಅದು ನನ್ನ ಅದೃಷ್ಟ. ದಿನ ಹೊಸ ತರಹದ ಚಾಲೆಂಜ್ ಕೊಡುತ್ತಿದ್ದರು. ಈ ತರಹ ನೀನು ಮಾಡಬಹುದು ಅಂತಿದ್ರು. ಈ ಅವಕಾಶಕ್ಕೆ ನಾನು ಅಭಾರಿಯಾಗಿದ್ದೇನೆ. ನಿಮ್ಮ ಸಿನಿಮಾ ಕಲ್ಪನೆಯನ್ನ ನಾನು ಸ್ವಲ್ಪ ಆದರೂ ಟಚ್ ಮಾಡಿದ್ದೇನೆ ಎಂದು ಭಾವಿಸುತ್ತೇನೆ ಎಂದು ಡೈರೆಕ್ಟರ್ ಬಗ್ಗೆ ನಟಿ ಮಾತನಾಡಿದ್ದಾರೆ.

    ‘ಕಾಟೇರ’ (Katera) ಸಿನಿಮಾದಿಂದ ಕಲಿತ್ತಿದ್ದೇನೆ. ಪ್ರತಿದಿನವೂ ಕಲಿಯೋದು ಇತ್ತು. ನನಗೆ ನಿಮ್ಮ ಸಿನಿಮಾದಲ್ಲಿ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು ಎಂದು ರಾಕ್‌ಲೈನ್ ವೆಂಕಟೇಶ್‌ಗೆ ಮೆಚ್ಚುಗೆ ಸೂಚಿಸಿದ್ದರು ಆರಾಧನಾ ರಾಮ್.

    ಚಾಲೆಂಜಿಂಗ್ ಸ್ಟಾರ್ ದರ್ಶನ್-ಆರಾಧನಾ ರಾಮ್ (Aradhana Ram) ನಟನೆಯ ಸಿನಿಮಾಗೆ ತರುಣ್ ಸುಧೀರ್ ಆ್ಯಕ್ಷನ್ ಕಟ್ ಹೇಳಿದ್ದು, ರಾಕ್‌ಲೈನ್ ವೆಂಕಟೇಶ್ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದರ್ಶನ್- ನಿರ್ದೇಶಕ ತರುಣ್ ನನ್ನ ಮಗಳಿಗೆ ನಟನೆ ಹೇಳಿ ಕೊಟ್ಟರು- ಮಾಲಾಶ್ರೀ

    ದರ್ಶನ್- ನಿರ್ದೇಶಕ ತರುಣ್ ನನ್ನ ಮಗಳಿಗೆ ನಟನೆ ಹೇಳಿ ಕೊಟ್ಟರು- ಮಾಲಾಶ್ರೀ

    ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ನಟನೆಯ ‘ಕಾಟೇರ’ (Katera) ಸಿನಿಮಾ ಇಂದು ಕೊನೆಯ ಹಂತದ ಶೂಟಿಂಗ್ ಮುಕ್ತಾಯವಾಗಿದೆ. ಚಿತ್ರತಂಡದ ಕಡೆಯಿಂದ ಇಂದು (ಸೆ.11) ಸುದ್ದಿಗೋಷ್ಠಿ ಆಯೋಜಿಸಿದೆ. ಈ ಚಿತ್ರದ ಮೂಲಕ ನಾಯಕಿಯಾಗಿ ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ವೇಳೆ ದರ್ಶನ್ ಜೊತೆ ಪುತ್ರಿ ಆರಾಧನಾ (Aradhana Ram) ನಟಿಸಿದ್ದರ ಬಗ್ಗೆ ಕನಸಿನ ರಾಣಿ ಮಾಲಾಶ್ರೀ ಸಂತಸ ವ್ಯಕ್ತಪಡಿಸಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾಲಾಶ್ರೀ ಮಾತನಾಡಿ, ನನ್ನ ಮಗಳು ಫಸ್ಟ್ ಟೈಮ್ ಕಾಟೇರ ಸಿನಿಮಾದಲ್ಲಿ ಆಕ್ಟ್ ಮಾಡಿ ಪ್ರೆಸ್‌ಮೀಟ್‌ನಲ್ಲಿ ಕುಳಿತಿದ್ದಾರೆ. ಈ ಸಂದರ್ಭದಲ್ಲಿ ನಾನು ಇದ್ದೀನಿ ಅನ್ನೋದಕ್ಕೆ ಖುಷಿಯಾಗುತ್ತಿದೆ. ಈ ಚಿತ್ರದ ಓಪನಿಂಗ್ ಸಮಯದಲ್ಲಿ ರಾಧನಾ ರಾಮ್ ಆಗಿ ಪರಿಚಯ ಆಗಿದ್ದರು. ಆದರೆ ಈಗ ಆರಾಧನಾ ರಾಮ್ ಪರಿಚಯ ಆಗುತ್ತಿದ್ದಾರೆ, ಇನ್ಮುಂದೆ ಕೂಡ. ಅವಳ ಮೇಲೆ ನಿಮ್ಮೆಲ್ಲರ ಹಾರೈಕೆ ಹೀಗೆ ಇರಲಿ ಅಂತಾ ಕೇಳಿಕೊಳ್ಳುತ್ತಿದ್ದೀನಿ.

    ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಸಿನಿಮಾದಲ್ಲಿ ನನ್ನ ಮಗಳು ಲಾಂಚ್ ಆಗುತ್ತಿರೋದು ಖುಷಿ ಕೊಟ್ಟಿದೆ. ಮೊದಲ ಸಿನಿಮಾನೇ ನನ್ನ ಮಗಳು ಈಸಿ ಆಗಿ ಆಕ್ಟ್ ಮಾಡಿದ್ದಳು. ಅದಕ್ಕೆ ಕಾರಣ ದರ್ಶನ್ ಅವರು, ನಟಿಸಲು ಆರಾಧನಾಗೆ ಕಂಫರ್ಟ್ ಜೋನ್ ಕೊಟ್ಟರು. ದರ್ಶನ್- ಡೃರೆಕ್ಟರ್ ತರುಣ್ ಸುಧೀರ್ ನನ್ನ ಮಗಳಿಗೆ ನಟನೆ ಹೇಳಿ ಕೊಟ್ಟರು. ಇಂತಹ ಒಳ್ಳೆಯ ಕಲಾವಿದರು ಇರುವ ಸಿನಿಮಾದಲ್ಲಿ ನನ್ನ ಮಗಳಿಗೆ ನಟಿಸಲು ಚಾನ್ಸ್ ಕೊಟ್ಟಿದ್ದಕ್ಕೆ ಧನ್ಯವಾದಗಳು ಎಂದು ನಟಿ ಮಾತನಾಡಿದ್ದಾರೆ. ಸ್ಕ್ರೀನ್‌ ಮೇಲೆ ನನ್ನ ಮಗಳನ್ನು ಇನ್ನೂ ಮುದ್ದಾಗಿ ತೋರಿಸಿದ್ದಾರೆ ಎಂದು ಮಾಲಾಶ್ರೀ (Malashree) ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇದನ್ನೂ ಓದಿ:ರಕ್ಷಿತಾರಂತೆಯೇ ಆರಾಧನಾ ಒನ್ ಟೇಕ್ ಆರ್ಟಿಸ್ಟ್ ಎಂದು ಹೊಗಳಿದ ದರ್ಶನ್

    ಚಾಲೆಂಜಿಂಗ್ ಸ್ಟಾರ್ ದರ್ಶನ್-ಆರಾಧನಾ ರಾಮ್ ನಟನೆಯ ‘ಕಾಟೇರ’ ಸಿನಿಮಾಗೆ ತರುಣ್ ಸುಧೀರ್ ಆ್ಯಕ್ಷನ್ ಕಟ್ ಹೇಳಿದ್ದು, ರಾಕ್‌ಲೈನ್ ವೆಂಕಟೇಶ್ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]