Tag: Aravind

  • ಭಾವುಕನಾಗಿದ್ದ ಮಂಜನಿಗೆ ತಬ್ಬಿಕೊಂಡು ಸಮಾಧಾನ ಹೇಳಿದ ಅರವಿಂದ್

    ಭಾವುಕನಾಗಿದ್ದ ಮಂಜನಿಗೆ ತಬ್ಬಿಕೊಂಡು ಸಮಾಧಾನ ಹೇಳಿದ ಅರವಿಂದ್

    ಬೆಂಗಳೂರು: ಬಿಗ್‍ಬಾಸ್ ಮನೆಯಲ್ಲಿ ನಿನ್ನೆ ನಡೆದ ಗಡಿಗೋಪುರ ಟಾಸ್ಕ್ ವೇಳೆ ಶುಭಾ ಅವರ ಸಾರಥ್ಯದ ಜಾತ್ರೆ ಟೀಂ ಮತ್ತು ದಿವ್ಯ ಉರುಡುಗ ಮುಂದಾಳತ್ವದ ಅನುಬಂಧ ತಂಡಗಳ ನಡುವೆ ಜಿದ್ದಾಜಿದ್ದಿನ ಕಾದಾಟ ನಡೆದಿದೆ. ಈ ವೇಳೆ ಹಲ್ಲು ಮುರಿದುಕೊಂಡ ಜಾತ್ರೆ ಟೀಂನ ಮಂಜು ಅವರನ್ನು ಅನುಬಂಧ ತಂಡದ ಸದಸ್ಯ ಅರವಿಂದ್ ಅವರು ತಬ್ಬಿಕೊಂಡು ಸಮಾಧಾನ ಹೇಳಿದ್ದಾರೆ.

    ಬಿಗ್‍ಬಾಸ್ ಕೊಟ್ಟ ಗಡಿಗೋಪುರ ಟಾಸ್ಕ್ ವೇಳೆ ಜಾತ್ರೆ ಟೀಂನ ಮಂಜು ಮತ್ತು ಅನುಬಂಧ ಟೀಂನ ರಾಜೀವ್ ನಡುವೆ ನಡೆದ ಆಟದಲ್ಲಿ ರಾಜೀವ್‍ನ ಮುಂಗೈ ಮಂಜು ಹಲ್ಲಿಗೆ ತಾಕಿ ಅರ್ಧ ಹಲ್ಲು ತುಂಡಾಗಿ ನೆಲಕ್ಕೆ ಬಿತ್ತು. ನಂತರ ಮಂಜು ಹಲ್ಲುಮುರಿದನ್ನು ಕಂಡು ತಂಡದ ಸದಸ್ಯರು ಗಾಬರಿಗೊಂಡರೆ, ಇತ್ತ ರಾಜೀವ್ ಮುಂಗೈಗಾದ ಗಾಯದಿಂದ ನರಳಾಡಿದರು. ನಂತರ ಕೆಲ ಹೊತ್ತಿನ ನಂತರ ಟಾಸ್ಕ್ ಮುಂದುವರಿಯಿತು.

    ಬಣ್ಣದ ಇಟ್ಟಿಗೆ ಜೋಡಿಸುವ ಟಾಸ್ಕ್ ನಂತರ ಕೋಳಿ ಜಗಳ ಟಾಸ್ಕ್ ನಡೆಯುತ್ತದೆ. ಇದರಲ್ಲಿ ಮಂಜುವನ್ನು ಅರವಿಂದ್ ಸೋಲಿಸುತ್ತಾರೆ. ನಂತರ ಶಮಂತ್ ಅವರು ಪ್ರಶಾಂತ್ ಸಂಬರಗಿ ಅವರನ್ನು ಸೋಲಿಸಿ ಅನುಬಂಧ ತಂಡ ಗೆಲ್ಲುವಂತೆ ಮಾಡುತ್ತಾರೆ.

    ಈ ಟಾಸ್ಕ್ ಮುಗಿದ ಬಳಿಕ ಅರವಿಂದ್ ಮಂಜುವನ್ನು ತಬ್ಬಿಕೊಂಡರು. ನಂತರ ಎರಡು ನಿಮಿಷ ಹೀಗೆ ಇರು ಅಂದಾಗ ಮಂಜು ಅವರ ಕಣ್ಣಲ್ಲಿ ಕಣ್ಣೀರು ಹರಿಯತೊಡಗಿತು. ಈ ವೇಳೆ ಅರವಿಂದ್ ಏನಾಯಿತು ನೀನು ಅಳಬಾರದು ಎಂದು ಸಮಾಧಾನ ಮಾಡಿದರೆ, ನಂತರ ಅವರ ಬಳಿ ಬಂದ ಶುಭಾ ನೀನು ಈ ರೀತಿ ಆಡ್‍ಬೇಡ ಎಂದು ಹೇಳಿದರೆ, ದಿವ್ಯ ಉರುಡುಗ ನಿನಗೆ ಇದು ಸೂಟ್ ಆಗಲ್ಲ ಮಂಜ “ಡೋಂಟ್ ಡೂ ದಿಸ್” ಎಂದರು.

    ನಂತರ ಬ್ರೋ ಗೌಡ ಮಂಜುವನ್ನು ನಗಾಡಿಸಲು ಪ್ರಯತ್ನಿಸಿದರು. ಈ ವೇಳೆ ಮಂಜು ಬಳಿ ಬಂದ ರಾಜೀವ್ ನೀನು ಹಲ್ಲು ಹೋಗಿರುವ ಕುರಿತು ತಲೆಕೆಡಿಸಿಕೊಳ್ಳಬೇಡ. ನೀನು ಮುಂದಿನ ಟಾಸ್ಕ್ ಬಗ್ಗೆ ಯೋಚನೆ ಮಾಡು ಎಂದು ಸಮಾಧಾನ ಮಾಡಿದರು.

  • ಅರವಿಂದ್ ದಿವ್ಯಾ ಮದುವೆಗೆ ಸೇತುವೆ ಆಗ್ತಾರಾ ಶುಭಾ!

    ಅರವಿಂದ್ ದಿವ್ಯಾ ಮದುವೆಗೆ ಸೇತುವೆ ಆಗ್ತಾರಾ ಶುಭಾ!

    ಬಿಗ್‍ಬಾಸ್ ಮನೆಯಲ್ಲಿ ಜೋಡಿ ಟಾಸ್ಕ್ ಆರಂಭವಾದಾಗ ಹೆಚ್ಚು ಸುದ್ದಿ ಮಾಡಿದ ಜೋಡಿ ಅಂದ್ರೆ ಅರವಿಂದ್ ಹಾಗೂ ದಿವ್ಯಾ ಉರುಡುಗ. ಇವರಿಬ್ಬರ ನಡುವಿನ ಆಲೋಚನೆ, ಹೊಂದಾಣಿಕೆ, ಪ್ರೀತಿ ಎಲ್ಲವನ್ನು ನೋಡಿ ದೊಡ್ಮನೆ ಮಂದಿ ಇವರಿಬ್ಬರ ನಡುವೆ ಏನೋ ಇದೆ ಎಂದು ಮಾತನಾಡಿಕೊಳ್ಳುತ್ತಿದ್ದರು.

    ಆದರೆ ನಿನ್ನೆ ಶುಭ ಪೂಂಜಾ ದಿವ್ಯಾ ಬಗ್ಗೆ ಅರವಿಂದ್ ಜೊತೆ ಕುಳಿತು ಮಾತನಾಡಿದ್ದಾರೆ. ಈ ವೇಳೆ ಅರವಿಂದ್ ದಿವ್ಯಾ ಬಗ್ಗೆ ತಮ್ಮ ಅಭಿಪ್ರಾಯವನ್ನ ನೇರವಾಗಿ ಶುಭ ಜೊತೆ ಹಂಚಿಕೊಂಡಿದ್ದಾರೆ. ನಿನ್ನೆ ದಿವ್ಯಾ ಉರುಡಗಗೆ ಅರವಿಂದ್‍ನನ್ನು ಮದುವೆ ಆಗ್ತೀನಿ ಅಂದರೆ ನಿಮ್ಮ ಮನೆಯಲ್ಲಿ ಒಪ್ಪಿಕೊಳ್ಳುತ್ತಾರಾ ಎಂದು ಕೇಳಿದ್ದೆ. ಇದಕ್ಕೆ ದಿವ್ಯಾ ಹಾಗೇನಾದರೂ ನಾನು ನಿಜವಾಗಿಯೂ ಇಷ್ಟಪಡುತ್ತಿದ್ದೇನೆ ಅಂದ್ರೆ ನಮ್ಮ ಮನೆಯಲ್ಲಿ ಯಾವುದೇ ಅಭ್ಯಂತರವಿರುವುದಿಲ್ಲ. ಈ ಬಗ್ಗೆ ಮೊದಲಿಗೆ ಅರವಿಂದ್ ಅಭಿಪ್ರಾಯ ಕೇಳಿ ಎಂದು ಹೇಳಿದ್ದಾಳೆ ಎಂದು ಶುಭ ಅರವಿಂದ್‍ಗೆ ಹೇಳುತ್ತಾರೆ.

    ಬಳಿಕ ಶುಭ, ನಾನು ನಿನ್ನನ್ನು ಇದೇ ಪ್ರಶ್ನೆಯನ್ನು ಕೇಳುತ್ತಿದ್ದೇನೆ. ನಿಮ್ಮ ಮನೆಯಲ್ಲಿ ದಿವ್ಯಾ ಉರುಡಗರನ್ನು ಮದುವೆಯಾಗ್ತೀನಿ ಎಂದರೆ ಒಪ್ಪಿಕೊಳ್ಳುತ್ತಾರಾ ಎಂದು ಅರವಿಂದ್‍ಗೆ ಕೇಳುತ್ತಾರೆ. ಆಗ ಅರವಿಂದ್ ನಮ್ಮ ಮನೆಯಲ್ಲಿ ನಾನು ಇಷ್ಟಪಡುವುದನ್ನೇ ಅವರು ಬಯಸುತ್ತಾರೆ ಒಪ್ಪಿಕೊಳ್ಳುತ್ತಾರೆ. ನಿನ್ನೆ ಪ್ರಶಾಂತ್ ಅವರು ಕೂಡ ಕೇಳಿದಾಗ, ಹೌದು ಇಲ್ಲಿ ಇರುವವರಲ್ಲಿ ನನಗೆ ಹೊಂದಿಕೊಳ್ಳುವವರು ಎಂದರೆ ದಿವ್ಯಾ, ಇಲ್ಲಿರುವವರಲ್ಲಿ ನಾನು ಬಹಳ ಇಷ್ಟ ಪಡುವ ವ್ಯಕ್ತಿಯೂ ದಿವ್ಯಾ. ಅವಳು ಮಾಡುವ ಕೆಲಸ, ಅವಳು ಇರುವ ರೀತಿ ಎಲ್ಲವೂ ಸರಿಯಾಗಿದೆ. ಅವಳು ನೋಡಲು ಕ್ಯೂಟ್ ಆಗಿ ಕೂಡ ಇದ್ದಾಳೆ. ಮುಂದಿನ ಬಗ್ಗೆ ನಾನು ಇಲ್ಲಿ ಮಾತನಾಡಲು ಆಗುವುದಿಲ್ಲ. ಒಬ್ಬರು ಹೇಗೆ ಏನು ಎಂದು 25 ದಿನಗಳಲ್ಲಿ ನಿರ್ಧರಿಸಲು ಆಗುವುದಿಲ್ಲ. ಹಾಗಾಗಿ ಈಗಲೇ ಅದರ ಬಗ್ಗೆ ಮಾಡನಾಡುವುದು ತಪ್ಪು ಎಂದು ಹೇಳುತ್ತಾರೆ.

    ನಂತರ ಶುಭ ಬಿಗ್‍ಬಾಸ್ ಮನೆಯೊಳಗೆ ಇದ್ದು ನಿಜವಾಗಿಯೂ ನೀವಿಬ್ಬರು ಒಬ್ಬರಿಗೊಬ್ಬರು ಇಷ್ಟಪಟ್ಟರೆ ಹೊರಗಡೆ ಹೋಗಿ ಕೂಡ ನಾಲ್ಕು ತಿಂಗಳು ಸಮಯ ಕಳೆಯಿರಿ. ನಂತರ ನಿಮ್ಮಿಬ್ಬರಿಗೂ ಒಪ್ಪಿಗೆ ಇದ್ದರೆ ಮುಂದುವರೆಸಿಕೊಂಡು ಹೋಗಿ ಎಂದು ಟಿಪ್ಸ್ ನೀಡುತ್ತಾರೆ. ಒಟ್ಟಾರೆ ಬಿಗ್‍ಬಾಸ್ ಮನೆಯಲ್ಲಿ ಸೈಲೆಂಟ್ ಆಗಿ ಅರವಿಂದ್ ದಿವ್ಯಾ ಲವ್‍ಸ್ಟೋರಿ ನಡಿತಿದೆ ಎಂದರೆ ತಪ್ಪಾಗಲಾರದು.

  • ವಿಶ್ವನಾಥ್ ಬೀನ್ ಬ್ಯಾಗ್ ಎಳೆದು ಅರವಿಂದ್‍ಗೆ ಜಾಗ ಕೊಟ್ಟ ದಿವ್ಯಾ!

    ವಿಶ್ವನಾಥ್ ಬೀನ್ ಬ್ಯಾಗ್ ಎಳೆದು ಅರವಿಂದ್‍ಗೆ ಜಾಗ ಕೊಟ್ಟ ದಿವ್ಯಾ!

    – ದಿವ್ಯ ಉರುಡುಗ ಕಾಲೆಳೆದ ಕಿಚ್ಚ

    ಬಿಗ್‍ಬಾಸ್ ಮನೆಯಲ್ಲಿ ಜೋಡಿ ಟಾಸ್ಕ್ ನಂತರ ಎಲ್ಲರ ಗಮನ ಸೆಳೆಯುತ್ತಿರುವ ಜೋಡಿ ಎಂದರೆ ಅರವಿಂದ್ ಹಾಗೂ ದಿವ್ಯಾ ಉರುಡುಗ. ಕಳೆದ ಒಂದು ವಾರದಿಂದ ಬಿಗ್ ಮನೆಯಲ್ಲಿ ಎಲ್ಲೆ ನೋಡಿದ್ರೂ ಈ ಜೋಡಿ ಒಟ್ಟಾಗಿಯೇ ಕಾಣಿಸಿಕೊಳ್ಳುತ್ತಿದೆ. ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ್ ಸಂಚಿಕೆಯಲ್ಲಿ ಬೀನ್ ಬ್ಯಾಗ್ ಬಗ್ಗೆಯೇ ಒಂದು ದೊಡ್ಡ ಚರ್ಚೆ ನಡೆದಿದೆ.

    ಹೌದು. ನಾನು ದಿವ್ಯಾ ಉರುಡುಗ ಜೊತೆ ಗಾರ್ಡನ್ ಏರಿಯಾದಲ್ಲಿ ಬೀನ್ ಬ್ಯಾಗ್ ಮೇಲೆ ಕುಳಿತುಕೊಂಡು ಮಾತನಾಡುತ್ತಿದ್ದೆ. ಈ ವೇಳೆ ನಾನು ಕೊಂಚ ರಿಲಾಕ್ಸ್ ಮಾಡಲೆಂದು ಮುಂದಕ್ಕೆ ಬಂದೆ. ಆದರೆ ಮತ್ತೆ ಹಿಂದೆ ತಿರುಗಿ ನೋಡಿದಾಗ ಬೀನ್ ಬ್ಯಾಗ್‍ಗೆ ಇರುವುದಿಲ್ಲ. ಬೀನ್ ಬ್ಯಾಗ್ ಎಲ್ಲಿ ಅಂತ ಹುಡುಕುತ್ತಿದ್ದಾಗ ಅರವಿಂದ್ ಅವರು ಬರುತ್ತಿರುವುದನ್ನು ಕಂಡು ದಿವ್ಯಾ ಉರುಡುಗ ಬೀನ್ ಬ್ಯಾಗ್ ಎಳೆದುಕೊಂಡು ಜಾಗ ಮಾಡಿ ಕೊಟ್ಟಿದ್ದಾರೆ ಎಂದು ತಿಳಿಯಿತು ಅಂತ ವಿಶ್ವನಾಥ್ ಹೇಳಿದ್ದಾರೆ.

    ಈ ವೇಳೆ ದಿವ್ಯಾ ಉರುಡುಗ ಆ ರೀತಿ ಏನೂ ಇಲ್ಲ ಸರ್ ಎಂದು ಸುದೀಪ್‍ಗೆ ಹೇಳುತ್ತಾರೆ. ನಂತರ ಸುದೀಪ್ ಹೌದು ಆ ತರ ಏನೂ ಇಲ್ಲ. ನಮ್ಮ ಕ್ಯಾಮೆರಾ ಮ್ಯಾನ್‍ಗಳಿಗೆ ತಲೆನೇ ಇಲ್ಲ. ಸುಮ್ಮನೆ ಇಲ್ಲದೇ ಇರುವುದನ್ನೆಲ್ಲಾ ತೋರಿಸುತ್ತಿದ್ದಾರೆ. ಮೊದಲ ಬಾರಿ ಬಿಗ್‍ಬಾಸ್‍ನಲ್ಲಿ ಸಿಜಿ(ಗ್ರಾಫಿಕ್ಸ್) ಎಲ್ಲ ನಡೆಯುತ್ತಿದೆ. ಪಾಪ ಅಲ್ಲಿ ಅರವಿಂದ್‍ರವರೇ ಇಲ್ಲ ಕರೆಕ್ಟ್ ಅಲ್ವಾ? ಎಂದು ದಿವ್ಯಾ ಉರುಡುಗ ಕಾಲೆಳೆದರು.

    ಬಳಿಕ ದಿವ್ಯಾ, ಜೋಡಿ ಟಾಸ್ಕ್ ಬಳಿಕ ಅರವಿಂದ್ ಜೊತೆ ವಿಷಯಗಳನ್ನು ಹಂಚಿಕೊಳ್ಳಲು ಹಾಗೂ ಅವರೊಂದಿಗೆ ಕಂಫರ್ಟ್ ಫೀಲ್ ಹೊಂದಿದ್ದೇನೆ. ಅಷ್ಟೇ ಸರ್ ಅದಕ್ಕಿಂತ ಹೆಚ್ಚು ಬೇರೇನೂ ಇಲ್ಲ ಎಂದು ಹೇಳುತ್ತಾರೆ. ಇದಕ್ಕೆ ಸುದೀಪ್ ಕರೆಕ್ಟ್ ಆದರೆ ಬೀನ್ ಬ್ಯಾಗ್ ಏಕೆ ಎಳೆದ್ರಿ ಅಂತ ಪ್ರಶ್ನಿಸಿದ್ದಾರೆ. ಈ ವೇಳೆ ದಿವ್ಯಾ ನನಗೆ ಆ ಘಟನೆ ಬಗ್ಗೆ ನೆನಪೇ ಆಗುತ್ತಿಲ್ಲ ಎಂದು ಹೇಳುತ್ತಾರೆ. ಕೆಲವೊಂದು ವಿಷಯಗಳು ಗೊತ್ತಾಗುವುದೇ ಇಲ್ಲ ಬಿಡಿ. ಇದನ್ನು ಪ್ರತಿ ಮನೆಯಲ್ಲೂ ಮಹಿಳೆಯರು ಕಲಿಯಬೇಕು. ನಾವು ಬರುವುದಕ್ಕಿಂತ ಮುಂಚೆ ಚೇರ್ ರೆಡಿ ಮಾಡಿ ಇಡಿ. ದಿವ್ಯಾ ನೋಡಿ ಕಲಿಯಿರಿ ಎಂದು ವ್ಯಂಗ್ಯ ಮಾಡುತ್ತಾರೆ.

    ಜೊತೆಗೆ ಮಂಜು ತುಲಾಭಾರ ಸಂದರ್ಭದಲ್ಲಿ ಶಮಂತ್ ಬೀನ್ ಬ್ಯಾಗ್ ಯಾಕೆ ಇಟ್ಟರು ಎಂಬ ವಿಚಾರ ನನಗೆ ಈಗ ತಿಳಿಯುತ್ತಿದೆ ಎಂದು ಕಿಚ್ಚ ಹಾಸ್ಯ ಮಾಡಿದರು. ಈ ವೇಳೆ ಮನೆ ಮಂದಿಯೆಲ್ಲಾ ಚಪ್ಪಾಳೆ ತಟ್ಟುತ್ತಾ, ಶಿಳ್ಳೆ ಹೊಡೆದು ಹಾಸ್ಯದ ಹೊನಲಿನಲ್ಲಿ ತೇಲಿದ್ರು.

  • ಶುಭಾ ಜೊತೆ ನಮಗೆ ಇನ್ನೊಂದು ಮದ್ವೆ ಊಟ ಪಕ್ಕಾ ಅಂದ್ರು ಗೀತಾ..!

    ಶುಭಾ ಜೊತೆ ನಮಗೆ ಇನ್ನೊಂದು ಮದ್ವೆ ಊಟ ಪಕ್ಕಾ ಅಂದ್ರು ಗೀತಾ..!

    ಬಿಗ್ ಬಾಸ್ ಮನೆಯಲ್ಲಿ ಅರವಿಂದ್ ಹಾಗೂ ದಿವ್ಯ ಉರುಡುಗ ಜೋಡಿ ಟಾಸ್ಕ್ ಆಡಿ ಗೆದ್ದಿದ್ದರು. ಅದಾದ ಬಳಿಕದಿಂದ ಈ ಜೋಡಿ ಬಗ್ಗೆ ಮನೆಮಂದಿಯೆಲ್ಲಾ ಮಾತನಾಡಿಕೊಳ್ಳಲು ಶುರುಮಾಡಿದ್ದಾರೆ. ಈ ಕುರಿತು ಗೀತಾ ಹಾಗೂ ಪ್ರಶಾಂತ್ ಸಂಬರ್ಗಿ ಕೂಡ ಭಾರೀ ಚರ್ಚೆಯನ್ನೇ ನಡೆಸಿದ್ದಾರೆ.

    ಹೌದು. ಜೋಡಿ ಟಾಸ್ಕ್‍ನಲ್ಲಿ ಆಡಲು ದಿವ್ಯ ಉರುಡುಗ ಅವರು ಅರವಿಂದ್ ಅವರನ್ನು ಆಯ್ಕೆ ಮಾಡಿಕೊಂಡಿದ್ದರು. ಆ ಬಳಿಕದಿಂದ ಇಬ್ಬರೂ ಹೆಚ್ಚು ಜೊತೆಯಾಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ದಿವ್ಯ ಹಾಗೂ ಅರವಿಂದ್ ಮಧ್ಯೆ ಏನೋ ನಡೆಯುತ್ತಿದೆ ಅಂತ ಮನೆ ಮಂದಿ ಪಿಸು ಪಿಸು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನು ಈ ಹಿಂದೆ ದಿವ್ಯ ಉರುಡುಗ ಅವರು ಪ್ರಶಾಂತ್ ಸಂಬರ್ಗಿ ಜೊತೆ ಚೆನ್ನಾಗಿಯೇ ಇದ್ದರು. ಆದರೆ ಜೋಡಿ ಟಾಸ್ಕ್ ಬಂದ ಬಳಿಕ ದಿವ್ಯ ಉರುಡುಗ ವರ್ತನೆ ಬದಲಾಗಿದೆ ಎಂದು ನಿಧಿ ಸುಬ್ಬಯ್ಯ ಹಾಗೂ ಶುಭಾ ಪೂಂಜಾ ಮಾತನಾಡಿಕೊಂಡಿದ್ದಾರೆ.

    ಇತ್ತ ಗೀತಾ ಹಾಗೂ ಸಂಬರ್ಗಿ ಕೂಡ ದಿವ್ಯ, ಅರವಿಂದ್ ಜೋಡಿ ಬಗ್ಗೆ ರಾತ್ರಿ ಚರ್ಚೆ ನಡೆಸಿದ್ದಾರೆ. ಇವರು ಲವ್ ಮಾಡ್ತಿದ್ದಾರೋ ಹೇಗೆ ಎಂದು ಗೀತಾ ಅವರು ದಿವ್ಯ ಬಳಿಯೇ ಹಲವು ಬಾರಿ ಪ್ರಶ್ನೆ ಮಾಡಿದ್ದರಂತೆ. ಆಗ ದಿವ್ಯ, ಜೋಡಿ ಟಾಸ್ಕ್ ಅಂತ ಒಟ್ಟಾಗಿ ಇದ್ದೇವೆ ಎಂದು ಉತ್ತರಿಸಿರುವುದಾಗಿ ಸಂಬರ್ಗಿ ಬಳಿ ಗೀತಾ ಹೇಳಿದ್ದಾರೆ.

    ಅರವಿಂದ್ ಅವರು ದಿವ್ಯಾರನ್ನು ಲವ್ ಮಾಡುವ ವಿಚಾರದ ಬಗ್ಗೆ ಯೋಚನೆ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ಅವರು ಓಪನ್ ಆಗಿದ್ದಾರೆ ಎಂದು ಸಂಬರ್ಗಿ ಹೇಳಿದ್ದಾರೆ. ಸಂಬರ್ಗಿ ಮಾತಿಗೆ ದನಿಗೂಡಿಸಿದ ಗೀತಾ, ಶುಭಾ ಪೂಂಜಾ ಮದುವೆ ನಂತರದಲ್ಲಿ ಇನ್ನೊಂದು ಮದುವೆ ಊಟ ಸಿಗಬಹುದು ಅಂತ ಹೇಳಿದ್ದಾರೆ. ಅಷ್ಟೇ ಅಲ್ಲದೆ ಜೋಡಿ ಟಾಸ್ಕ್ ಮುಗಿದು 2 ದಿನವಾದರೂ ಇವರಿಬ್ಬರು ಒಟ್ಟಾಗಿದ್ದಾರೆ ಅಂತ ಹೇಳಿಕೊಂಡು ಗೀತಾ, ಪ್ರಶಾಂತ್ ನಕ್ಕಿದ್ದಾರೆ. ಜೊತೆಗೆ ಒಳ್ಳೆಯದಾದರೆ ಆಗಲಿ, ನಾವು ಓವರ್ ಆಗಿ ಯೋಚನೆ ಮಾಡುತ್ತಿದ್ದೆವೆ ಅಂತ ಗೀತಾ ಅವರನ್ನೇ ಅವರು ಪ್ರಶ್ನೆ ಮಾಡಿಕೊಂಡಿದ್ದಾರೆ.

  • ಬಿಗ್‍ಬಾಸ್ ಮನೆಯಲ್ಲಿ ಮೂಡಿತು ಶಿವನ ಚಿತ್ರ!

    ಬಿಗ್‍ಬಾಸ್ ಮನೆಯಲ್ಲಿ ಮೂಡಿತು ಶಿವನ ಚಿತ್ರ!

    ಬಿಗ್‍ಬಾಸ್ ಮನೆಗೆ ಎಂಟ್ರಿ ಕೊಟ್ಟ ಎಲ್ಲರೂ ಒಂದೊಂದು ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಒಬ್ಬೊಬ್ಬರು ಒಂದೊಂದು ಟ್ಯಾಲೆಂಟ್ ಹೊಂದಿದ್ದಾರೆ. ಇಷ್ಟು ದಿನ ಲಕ್ಷುರಿ ಟಾಸ್ಕ್, ಕ್ಯಾಪ್ಟನ್ಸಿ ಟಾಸ್ಕ್, ಪಿಸಿಕಲ್ ಟಾಸ್ಕ್ ಹೀಗೆ ಹಲವು ಟಾಸ್ಕ್‍ಗಳನ್ನು ಪ್ರದರ್ಶಿಸಿದ್ದ ದೊಡ್ಮನೆ ಮಂದಿ, ನಿನ್ನೆ ನಲಿ-ಕಲಿ ಎಂಬ ಟಾಸ್ಕ್ ನೀಡಿದ್ದಾರೆ.

    ಈ ಟಾಸ್ಕ್‍ನ ಅನುಸಾರ ಮನೆಯ ಸದಸ್ಯರು ತಮ್ಮ ಜೋಡಿಗಳಿಗೆ ತಿಳಿದಿರುವ ಯಾವುದಾದರೂ ಒಂದು ಕಲೆಯನ್ನು ಹೇಳಿಕೊಡಬೇಕಿತ್ತು. ಅದರಂತೆ ಮನೆಯ ಎಲ್ಲಾ ಸದಸ್ಯರು ಒಂದೊಂದು ಕಲೆಗಳನ್ನು ತಮ್ಮ ಜೋಡಿಗಳಿಗೆ ಕಲಿಸಿ ವೇದಿಕೆ ಮೇಲೆ ಪರ್ಫಾಮ್ ಮಾಡಿದರು.

    ಈ ಮಧ್ಯೆ ಮನೆಯ ಎಲ್ಲಾ ಸದಸ್ಯರ ಪೈಕಿ ಗಮನ ಸೆಳೆದಿದ್ದು ಅಂದರೆ ಶಿವನ ಚಿತ್ರ. ಹೌದು ನಿನ್ನೆ ಮನೆಯ ಸದಸ್ಯರು, ಡ್ಯಾನ್ಸ್, ಸಾಂಗ್, ಡ್ರಾಮಾ ಹೀಗೆ ಹಲವು ರೀತಿಯ ಕಲೆಗಳನ್ನು ಪ್ರದರ್ಶಿಸಲು ನಿರ್ಧರಿಸಿದರೆ, ಅರವಿಂದ್, ದಿವ್ಯಾ ಉರುಡುಗ ಜೋಡಿ ಆಯ್ಕೆ ಮಾಡಿಕೊಂಡಿದ್ದು ಶಿವ.

    ಶ್ರೀ ಮಂಜುನಾಥ ಸಿನಿಮಾದ ಓಂ ಮಹಾಕಾರ ದೀಪಂ ಶಿವ ಓಂ… ಎಂಬ ಹಾಡು ಆರಂಭವಾಗುತ್ತಿದ್ದಂತೆ ಪೆನ್ಸಿಲ್ ಹಿಡಿದು ಅರವಿಂದ್ ಚಿತ್ರ ಬಿಡಿಸಲು ಆರಂಭಿಸುತ್ತಾರೆ. ಈ ವೇಳೆ ದಿವ್ಯಾ ಉರುಡುಗ ಕ್ರಯೋನ್ಸ್ ಮೂಲಕ ಚಿತ್ರಕ್ಕೆ ಶೇಡ್ ಮಾಡುತ್ತಾ, ಬಣ್ಣ ಹಚ್ಚುತ್ತಾ ಬರುತ್ತಾರೆ. ಹಾಡು ಪೂರ್ಣಗೊಳ್ಳುವಷ್ಟರಲ್ಲಿ ಶಿವನ ಚಿತ್ರವನ್ನು ಬರೆದು ಮುಗಿಸುತ್ತಾರೆ. ಈ ವೇಳೆ ಮನೆಯ ಎಲ್ಲಾ ಸದಸ್ಯರು ಎದ್ದು ನಿಂತು ಭಕ್ತಿಯಿಂದ ಶಿವನಿಗೆ ನಮಸ್ಕರಿಸಿ ಹರಹರ ಮಹಾದೇವ್ ಎಂದು ಘೋಷಣೆ ಕೂಗುತ್ತಾರೆ.

    ನಂತರ ಚಿತ್ರ ಕುರಿತಂತೆ ಮಾತನಾಡಿದ ಅರವಿಂದ್ ಮೊದಲಿಗೆ ನಾವು ಈ ಚಿತ್ರವನ್ನು ಒಂದು ಟಿಶ್ಯು ಪೇಪರ್ ಮೇಲೆ ಹೈಲೈನರ್ ಬಳಸಿ ಬರೆಯಲು ಆರಂಭಿಸಿದೆವು. ದಿವ್ಯಾ ಈ ಚಿತ್ರವನ್ನು ಪ್ರೊಫೆಷನಲಿ ನನಗೆ ಬಹಳ ಸುಲಭವಾಗಿ ಹೇಳಿಕೊಟ್ಟರು. ಇದರಿಂದಾಗಿ ನನಗೆ ಶಿವನ ಚಿತ್ರ ಬಿಡಿಸಲು ಸಾಧ್ಯವಾಯಿತು. ಒಳ್ಳೆ ಟೀಚರ್ ಸಿಕ್ಕಿದ್ದರಿಂದ ಒಳ್ಳೆ ರಿಸಲ್ಟ್ ಬಂದಿದೆ ಎಂದು ಹೇಳುತ್ತಾರೆ.

    ಇದಕ್ಕೆ ದಿವ್ಯಾ ಬೈಕ್ ಹ್ಯಾಂಡಲ್ ಹಿಡಿದುಕೊಂಡವರಿಗೆ ಸಡನ್ ಆಗಿ ಕ್ರಯೋನ್ಸ್, ಪೆನ್ಸಿಲ್ ಕೊಟ್ಟರೆ ಬಹಳ ಕಷ್ಟ. ಆದರೂ ಏನೇ ಹೇಳಿಕೊಟ್ಟರು ಅರವಿಂದ್ ಬಹಳ ಸುಲಭವಾಗಿ ಗ್ರಹಿಸಿಕೊಳ್ಳುವ ಶಕ್ತಿ ಹೊಂದಿದ್ದಾರೆ ಎಂದು ಹೇಳುತ್ತಾ, ಕೊನೆಯಲ್ಲಿ ಬಿಡಿಸಿದ ಚಿತ್ರವನ್ನು ದಿವ್ಯಾ ಅರವಿಂದ್‍ಗೆ ಉಡುಗೊರೆಯಾಗಿ ನೀಡಿದರು.

    ಒಟ್ಟಾರೆ ಬಿಗ್‍ಬಾಸ್ ವೇದಿಕೆ ಮನೆಯ ಸದಸ್ಯರಿಗೆ ತಮ್ಮ ಟ್ಯಾಲೆಂಟ್ ಪ್ರದರ್ಶಿಸಲು ಅವಕಾಶ ಮಾಡಿಕೊಟ್ಟಿದೆ ಎಂದರೆ ತಪ್ಪಾಗಲಾರದು.