Tag: Aravind

  • ನಾ ನಿನ್ನ ಮರೆಯಲಾರೆ ರೀತಿ ತೆರೆಮೇಲೆ ಬರಲಿದ್ಯಾಂತೆ ಅರ್ವಿಯಾ ಸಿನಿಮಾ

    ನಾ ನಿನ್ನ ಮರೆಯಲಾರೆ ರೀತಿ ತೆರೆಮೇಲೆ ಬರಲಿದ್ಯಾಂತೆ ಅರ್ವಿಯಾ ಸಿನಿಮಾ

    ಬಿಗ್‍ಬಾಸ್ ಮನೆಯ ಕ್ಯೂಟ್ ಪೇರ್ ಅಂದರೆ ಅರವಿಂದ್, ದಿವ್ಯಾ ಉರುಡುಗ. ಕಳೆದ ಇನ್ನಿಂಗ್ಸ್ ವೇಳೆ ಈ ಮುದ್ದಾದ ಜೋಡಿ ನಡುವೆ ಇರುವ ಪ್ರೀತಿ, ಹೊಂದಾಣಿಕೆ ಹಾಗೂ ಕಾಳಜಿ ನೋಡಿ ಮನೆಮಂದಿಯೆಲ್ಲಾ ಇವರಿಬ್ಬರು ಒಂದಾದರೆ ಎಷ್ಟು ಚೆಂದ ಎಂದು ಮಾತನಾಡಿಕೊಂಡಿದ್ದರು.

    ಇದೀಗ ಚಕ್ರವರ್ತಿ ಚಂದ್ರಚೂಡ್‍ರವರು ಅರವಿಂದ್, ದಿವ್ಯಾ ಬಗ್ಗೆ ತಮಗಿರುವ ಆಸೆಯನ್ನು ಹೊರಹಾಕಿದ್ದಾರೆ. ಎರಡನೇ ಇನ್ನಿಂಗ್ಸ್ ನ 9ನೇ ದಿನ ಬೆಡ್ ರೂಮ್ ಏರಿಯಾದಲ್ಲಿ ಅರವಿಂದ್, ದಿವ್ಯಾ ಉರುಡುಗ, ಚಕ್ರವರ್ತಿ, ಪ್ರಶಾಂತ್ ಸಂಬರಗಿ ಹಾಗೂ ಶಮಂತ್ ಕುಳಿತುಕೊಂಡಿರುತ್ತಾರೆ. ಈ ವೇಳೆ ಚಕ್ರವರ್ತಿ ಚಂದ್ರಚೂಡ್‍ರವರು ಸಿನಿಮಾ ಕಥೆಯನ್ನು ಹೇಳಿದ್ದಾರೆ.

    ಅರವಿಂದ್, ದಿವ್ಯಾ ಉರುಡುಗ ಸಿನಿಮಾ ಮಾಡಬೇಕು. ಇವರಿಬ್ಬರಿಗೂ 10 ನಿಮಿಷದಲ್ಲಿ ಕಥೆ ಕೊಡುತ್ತೇನೆ. ಬೈಕ್ ಮೇಲೆಯೇ ಕಥೆ ಕೊಡುತ್ತೇನೆ. ನಾ ನಿನ್ನ ಮರೆಯಲಾರೆ ರೀತಿ ಇರಬೇಕು. ಎರಡು ತಿಂಗಳು ಇವರಿಬ್ಬರಿಗೂ ಟ್ರೈನಿಂಗ್ ನೀಡಿ ಮಾಡಿದರೆ ಸರಿಯಾಗಿ ಮಾಡಬಹುದು. ನಾನು ಸಿನಿಮಾವನ್ನು ನಿರ್ದೇಶಿಸುತ್ತೇನೆ. ಶಮಂತ್ ಸಂಗೀತಾ ನೀಡುತ್ತಾನೆ. ಪ್ರಶಾಂತ್ ನಿರ್ಮಾಣ ಮಾಡುತ್ತಾನೆ. ಇನ್ನೂ ಸಿನಿಮಾದ ಟೈಟಲ್ ‘ಅರ್ವಿಯಾ’ ಎಂದು ಹೇಳುತ್ತಾರೆ.

    ಈ ವೇಳೆ ಶಮಂತ್ ನಾನು ಹೀರೋಯಿನ್ ತಮ್ಮ ಎಂದು ಹೇಳುತ್ತಾರೆ. ಆಗ ಚಕ್ರವರ್ತಿ ಚಂದ್ರಚೂಡ್ ನಾನು ನಿನಗೆ ಕ್ಯಾರೆಕ್ಟರ್ ನೀಡುತ್ತೇನೆ ಸುಮ್ಮನೆ ಇರು ಬಾಯಿ ಮುಚ್ಚಿಸುತ್ತಾರೆ. ಆಗ ಪ್ರಶಾಂತ್ ನಾನು ಹೀರೋ ಅಣ್ಣಾನಾ ಎಂದು ಕೇಳುತ್ತಾರೆ. ಕ್ಯಾರೆಕ್ಟರ್ ಬೇಕೆಂದರೆ ಕಥೆ ಆದ ನಂತರ ನನ್ನ ಬಳಿ ರಿಕ್ವೆಸ್ಟ್ ಮಾಡಿಕೊಂಡರೆ ಕೊಡುತ್ತೇನೆ ಎಂದು ಹೇಳುತ್ತಾ ನಗುತ್ತಾರೆ.

    ಸಿನಿಮಾದಲ್ಲಿ ಬಿಗ್‍ಬಾಸ್ ಮನೆಯಲ್ಲಿ ರಿಂಗ್ ನೀಡಿ ಇಬ್ಬರು ಹೇಗೆ ಒಂದಾದರೋ ಅದೊಂದು ಎಪಿಸೋಡ್ ತೆಗೆದುಕೊಳ್ಳಬಹುದು. ನಾನು ಮಾಡೇ ಮಾಡುತ್ತೇನೆ. ಹೊರಗಡೆ ಹೋಗಿದ ತಕ್ಷಣ ನೀವು ಎರಡು ತಿಂಗಳಿನಲ್ಲಿ ರೆಡಿಯಾಗಬೇಕು. ಅರವಿಂದ್‍ಗೆ ಆ್ಯಕ್ಟಿಂಗ್ ಕ್ಲಾಸ್ ನಾನೇ ತೆಗೆದುಕೊಳ್ಳುತ್ತೇನೆ ಅಂತ ಚಕ್ರವರ್ತಿ ಚಂದ್ರಚೂಡ್ ಹೇಳಿದ್ದಾರೆ. ಇದನ್ನೂ ಓದಿ:  ನೀನು ನನಗೆ ಅಡ್ವೈಸ್ ಮಾಡಬೇಡ: ನಿಧಿಗೆ ಶುಭಾ ಟಾಂಗ್

  • ನಿಧಿ ದೊಡ್ಡ ಫಿಗರ್ ಎಂದರೆ ನಾನು ದೊಡ್ಡ ಫಿಗರೇ

    ನಿಧಿ ದೊಡ್ಡ ಫಿಗರ್ ಎಂದರೆ ನಾನು ದೊಡ್ಡ ಫಿಗರೇ

    ದೊಡ್ಮನೆಯಲ್ಲಿ ಮತ್ತೆ ಮಾತಿನ ಕಲಹ ಪ್ರಾರಂಭವಾಗಿದೆ. ಪರಸ್ಪರ ಎದುರಾಳಿಗಳಾಗಿ ಟಾಸ್ಕ್ ಗಳಲ್ಲಿ ಆಡುತ್ತಿರುವ ಅರವಿಂದ್ ಮತ್ತು ನಿಧಿ ಸುಬ್ಬಯ್ಯ ಒಬ್ಬರಿಗೊಬ್ಬರು ಮಾತನಾಡದೆ ಇರುವಷ್ಟರ ಮಟ್ಟಿಗೆ ಜಗಳವಾಡಿಕೊಂಡು ಮನೆಯಲ್ಲಿ ಕುತೂಹಲ ಮೂಡಿಸಿದ್ದಾರೆ.

    ಅರವಿಂದ್ ಮತ್ತು ನಿಧಿ ಜಗಳದ ಬಳಿಕ ಅರವಿಂದ್ ಬಳಿ ಬಂದ ಶುಭಾ ಪೂಂಜಾ ಸಮಾಧಾನ ಪಡಿಸಲು ಮುಂದಾಗಿದ್ದಾರೆ. ಈ ವೇಳೆ ಅರವಿಂದ್, ನನಗೆ ನಿಧಿ ಯಾರು ಅಂತಾನೆ ಗೊತ್ತಿರಲಿಲ್ಲಾ ಬಿಗ್‍ಬಾಸ್ ಮನೆಗೆ ಬಂದ ನಂತರ ಗೊತ್ತಾಗಿದ್ದು, ನಾನು ಅವಳ ಬಗ್ಗೆ ಕೆಟ್ಟದಾಗಿ ಏನು ಮಾತನಾಡಿಲ್ಲ ಎಂದಿದ್ದಾರೆ. ಇದಕ್ಕೆ ಶುಭಾ ನನಗೆ ನೀವಿಬ್ಬರು ಚೆನ್ನಾಗಿ ಗೊತ್ತು ನೀವಿಬ್ಬರು ಕೂಡ ನನ್ನ ಉತ್ತಮವಾದ ಸ್ನೇಹಿತರು. ಇದೀಗ ನೀವು ಹೀಗೆ ಜಗಳ ಮಾಡಿಕೊಂಡರೆ ನಾನು ಏನು ಮಾಡೋದು. ನನಗೆ ಇಲ್ಲಿ ಇರುವವರೆಲ್ಲಾ ಸ್ನೇಹಿತರೆ. ನಾನೀಗ ಯಾರ ಪರ ನಿಲ್ಲುವುದು ಎಂದು ಅರವಿಂದ್‍ಗೆ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ದಿವ್ಯಾ ಸುರೇಶ್‍ಗೆ ಬುದ್ಧಿವಾದ ಹೇಳಿದ ಮಂಜು

    ನಾನು ಮತ್ತು ಮಂಜು ಮಾತನಾಡುತ್ತಿರುವಾಗ ಮಧ್ಯೆ ಮಾತನಾಡಿದ್ದಕ್ಕೆ ನಾನು ಮುಚ್ಚು ಎಂದಿದ್ದೆ ಅದರಲ್ಲಿ ಏನು ತಪ್ಪು ಎಂದು ಅರವಿಂದ್ ಶುಭಾಗೆ ಮರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಶುಭಾ ನೀನು ಎಲ್ಲರ ಮುಂದೆ ಆ ರೀತಿ ಹೆಳಿದರೆ ಅವಳಿಗೂ ನೋವಾಗಲ್ವ ಎಂದಿದ್ದಾರೆ. ಬಳಿಕ ಅರವಿಂದ್ ಅವಳು ನನಗೆ ಏನೇನೊ ಹೇಳಿದ್ದಾಳೆ ನನಗೆ ಹೇಗೆ ಅನಿಸಬೇಕು. ನಾನು ಉದ್ದೇಶಪೂರ್ವಕವಾಗಿ ಕಟ್ಟ ಪದ ಬಳಸಿಲ್ಲ. ಅವಳು ದೊಡ್ಡ ಫಿಗರ್ ಆದರೆ ನಾನು ಕೂಡ ಫಿಗರ್. ನನಗೆ ಇಲ್ಲಿ ತುಂಬಾ ಜನ ಫ್ರೆಂಡ್ಸ್ ಇದ್ದಾರೆ. ಈ ಬಗ್ಗೆ ನಾನು ಇನ್ನೂ ಅವಳೊಂದಿಗೆ ಏನು ಮಾತನಾಡೊದಕ್ಕೆ ಹೋಗುವುದಿಲ್ಲ ಎಂದಿದ್ದಾರೆ.

    ಅರವಿಂದ್ ಮತ್ತು ನಿಧಿ ಜಗಳದ ಮಧ್ಯೆ ಇದೀಗ ಶುಭಾ ಇಕ್ಕಟ್ಟಿಗೆ ಸಿಲುಕಿದ್ದಾರೆ. ಮುಂದೆ ಅರವಿಂದ್ ಮತ್ತು ನಿಧಿ ನಡುವೆ ಮಾತುಕತೆ ನಡೆಸಿ ಭಿನ್ನಾಭಿಪ್ರಾಯ ಸರಿ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ.

  • ‘ಡಿಯು ಮನೆಯವರಿಗೂ ಗೊತ್ತಾಯ್ತು ಅರವಿಂದ್ ಆಟ’

    ‘ಡಿಯು ಮನೆಯವರಿಗೂ ಗೊತ್ತಾಯ್ತು ಅರವಿಂದ್ ಆಟ’

    – ಅರವಿಂದ್, ದಿವ್ಯಾ ಕಾಲೆಳೆದ ಸುದೀಪ್

    ಬಿಗ್‍ಬಾಸ್ ಸೀಸನ್-8ರಲ್ಲಿ ಜೋಡಿಗಳಾಗಿ ಸುದ್ದಿ ಮಾಡುತ್ತಿರುವ ಅರವಿಂದ್ ಮತ್ತು ದಿವ್ಯಾ ಉರುಡುಗ ನೋಡುಗರಿಗೆ ಮನರಂಜನೆಯನ್ನು ನೀಡುತ್ತಿದ್ದಾರೆ. ಅದೇ ರೀತಿ ಅರವಿಂದ್ ಅವರು ಯಾವ ಕಾರಣಕ್ಕೆ ನಮ್ಮ ಮನೆಯವರಿಗೆ ಇಷ್ಟವಾಗಿದ್ದಾರೆ ಎಂಬ ಕಾರಣವನ್ನು ಇದೀಗ ದಿವ್ಯಾ ಹೇಳಿಕೊಂಡಿದ್ದಾರೆ.

    72 ದಿನಗಳ ಪಯಣದ ಬಳಿಕ ಕೊರೊನಾದಿಂದಾಗಿ ಎಲ್ಲರೂ ಕೂಡ ಬಿಗ್‍ಬಾಸ್ ಮನೆಯನ್ನು ಬಿಟ್ಟು ತೆರಳಿದ್ದರು. ಬಳಿಕ ಇದೀಗ ಸೆಕೆಂಡ್ ಇನ್ನಿಂಗ್ಸ್ ಗಾಗಿ ಮತ್ತೆ ಬಂದಿದ್ದಾರೆ. ಸೆಕೆಂಡ್ ಇನ್ನಿಂಗ್ಸ್‍ನ ಮೊದಲ ವಾರದ ಕಥೆ ಕಿಚ್ಚನ ಜೊತೆಗೆ ಕಾರ್ಯಕ್ರಮದಲ್ಲಿ ಸುದೀಪ್ ಅವರು, ಸ್ಪರ್ಧಿಗಳಲ್ಲಿ ನೀವು 72 ದಿನಗಳ ಬಳಿಕ ಮನೆಗೆ ಹೋದಾಗ ನಿಮ್ಮ ಮನೆಗಳಲ್ಲಿ ಇತರ ಸ್ಪರ್ಧಿಗಳ ಬಗ್ಗೆ ಏನು ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ಪ್ರಶ್ನೆ ಹಾಕಿದ್ದಾರೆ. ಈ ವೇಳೆ ದಿವ್ಯಾ ಅವರ ಸರದಿ ಬಂದಾಗ ನಮ್ಮ ಮನೆಯಲ್ಲಿ ಅರವಿಂದ್, ವೈಷ್ಣವಿ, ಶಮಂತ್ ಶುಭಾ ಅವರು ಇಷ್ಟವಾದರು ಎಂದು ದಿವ್ಯಾ ಹೇಳಿಕೊಂಡರು.

    ಇದನ್ನು ಕೇಳಿದ ಸುದೀಪ್ ಅವರು ಮುಖವನ್ನು ಕೈಗಳಿಂದ ಮುಚ್ಚಿಕೊಂಡರು ಇದಕ್ಕೆ ನಾಚಿಕೊಂಡ ದಿವ್ಯಾ ಸರ್ ನಾನು ಇರೋದನ್ನು ಹೇಳಿದೆ ಎಂದರು. ಇದಕ್ಕೆ ಸುದೀಪ್, ನಾನು ಏನೇ ಪ್ರಶ್ನೆ ಕೇಳಿದರೂ ಕೂಡ ನೀವು ಆ ಒಂದು ಹೆಸರನ್ನು ಮಾತ್ರ ತೆಗೆದುಕೊಳ್ಳಬಾರದೆಂದು ಅದಕ್ಕೆ ಇತರ ಹೆಸರನ್ನು ಸೇರಿಸಿಕೊಳ್ಳುತ್ತೀರಿ ಎಂದು ಹೇಳಿ ದಿವ್ಯಾ ಅವರ ಕಾಲೆಳೆದರು. ಇದನ್ನೂ ಓದಿ: ಸಿಟ್ಟಿಗೆದ್ದ ಸುದೀಪ್ ಸ್ಪರ್ಧಿಗಳಿಗೆ ಖಡಕ್ ವಾರ್ನಿಂಗ್

    ದಿವ್ಯಾ ಇಲ್ಲ ಸರ್ ನಾನು ನಿಜ ಹೇಳುತ್ತಿದ್ದೇನೆ ನಮ್ಮ ಮನೆಯಲ್ಲಿ ನನ್ನ ತಮ್ಮನಿಗೆ ಶಮಂತ್ ತುಂಬಾ ಇಷ್ಟ ಆದ ಯಾಕೆಂದರೆ ಅವನು ತಮ್ಮನ ಹುಟ್ಟುಹಬ್ಬಕ್ಕೆ ಸಾಂಗ್ ಹಾಡಿದ್ದ. ವೈಷ್ಣವಿ ಮನೆಯವರಿಗೆಲ್ಲ ಇಷ್ಟ. ಶುಭಾ ಅಕ್ಕ ಕ್ಯೂಟ್, ಕ್ಯೂಟ್ ಆಗಿ ಆಡುದಕ್ಕೆ ಇಷ್ಟ. ಮತ್ತೆ ಅರವಿಂದ ಚೆನ್ನಾಗಿ ಆಟ ಆಡುತ್ತಾರೆ ಎಂದು ಇಷ್ಟ ಎಂದರು. ಸುದೀಪ್ ಅವರು ಇದನ್ನು ಕೇಳಿಸಿಕೊಂಡು ಅರವಿಂದ್ ಚೆನ್ನಾಗಿ ಆಡುತ್ತಾರೆ ಎಂದು ನಿಮ್ಮ ಮನೆಯವರಿಗೆ ಗೊತ್ತಾಯ್ತ ಎಂದು ಈ ಜೋಡಿಯನ್ನು ಕಿಚಾಯಿಸಿದ್ದಾರೆ.

  • ಕುರ್ಚಿ ಪಾಲಿಟಿಕ್ಸ್ ಗೇಮ್ ನಂಗೆ ಕಷ್ಟ – ರಿವೀಲ್ ಆಯ್ತು ಅರವಿಂದ್ ಕಥೆ

    ಕುರ್ಚಿ ಪಾಲಿಟಿಕ್ಸ್ ಗೇಮ್ ನಂಗೆ ಕಷ್ಟ – ರಿವೀಲ್ ಆಯ್ತು ಅರವಿಂದ್ ಕಥೆ

    ಬಿಗ್‍ಬಾಸ್ ಕೊಟ್ಟ ಕುರ್ಚಿ ಪಾಲಿಟಿಕ್ಸ್ ಗೇಮ್‍ನಿಂದ ಬೈಕ್ ರೈಡರ್ ಅರವಿಂದ್ ಹಿಂದೆ ಸರಿದಿದ್ದರು. ಇದೀಗ ಈ ಗೇಮ್‍ನಿಂದ ಅರವಿಂದ್ ಹಿಂದೆ ಸರಿಯಲು ಏನು ಕಾರಣ ಎಂಬುದನ್ನು ‘ವಾರದ ಕಥೆ ಕಿಚ್ಚನ ಜೊತೆ’ಕಾರ್ಯಕ್ರಮದಲ್ಲಿ ರೀವಿಲ್ ಮಾಡಿದ್ದಾರೆ.

    ಸುದೀಪ್ ಅವರು ಒಂದೊಂದು ಟಾಸ್ಕ್ ಗೆ ಒಂದೊಂದು ಸ್ಕಿಲ್ ಬೇಕು. ಹಾಗೆ ಇಂತಹ ಒಂದು ಟಾಸ್ಕ್ ಕಷ್ಟ ಎಂದು ನೀವು ಹೇಳಲು ಕಾರಣ ಏನು ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಅರವಿಂದ್ ನನಗೆ ಅಷ್ಟೊತ್ತು ಕೂತುಕೊಳ್ಳಲು ಆಗುವುದಿಲ್ಲ. ನನಗೆ ಮೊದಲೇ ಕಾಲಿನಲ್ಲಿ ಗಾಯ ಇರುವ ಕಾರಣ ಈ ಗೇಮ್‍ನಿಂದ ಹಿಂದಕ್ಕೆ ಸರಿಯುವ ನಿರ್ಧಾರ ಮಾಡಿದೆ ಎಂದು ಉತ್ತರಿಸಿದ್ದಾರೆ.

    ನೀವು ರೇಸಿಂಗ್ ಹೋದಾಗ ಎಷ್ಟೊತ್ತು ಕೂರುತ್ತೀರಿ ಎಂದು ಕಿಚ್ಚ ಮರು ಪ್ರಶ್ನೆ ಹಾಕಿದ್ದಾರೆ. ಇದಕ್ಕೆ ಉತ್ತರಿಸಿದ ಅರವಿಂದ್, ಬೆಳಿಗ್ಗೆ 4 ಗಂಟೆಗೆ ಪ್ರಾರಂಭ ಮಾಡಿದರೆ ಸ್ವಲ್ಪ ಕಿಲೋಮೀಟರ್ ಲಿಯೊಸಾನ್ ಇರುತ್ತದೆ. ಆದಾದ ಬಳಿಕ 400 ರಿಂದ 500 ಕಿಲೋಮೀಟರ್ ಸ್ಟೇಜಸ್ ಇರುತ್ತದೆ, ಮತ್ತೆ ವಾಪಸ್ 100ರಿಂದ 200 ಕಿಲೋಮೀಟರ್ ಲಿಯೊಸಾನ್ ಇರುತ್ತದೆ. ಮತ್ತೆ ಬಿ ವಾಕ್ ಇರುತ್ತದೆ. ಈ ಸಂದರ್ಭ ನಮಗೆ ಲಿಯೊಸಾನ್ ಸುತ್ತಿನಲ್ಲಿ ಮಾತ್ರ ಕೂತುಕೊಂಡು ಬೈಕ್ ರೈಡ್ ಮಾಡಲು ಅವಕಾಶ ಅದು ಕೂಡ ಒಂದೇ ರೀತಿ ಕೂತು ಇರಲ್ಲ ಬೇರೆ ಬೇರೆ ಸ್ಟೆಪ್‍ಗಳನ್ನು ತೆಗೆದುಕೊಂಡಿರುತ್ತೇವೆ. ಇದನ್ನೂ ಓದಿ: ಬಿಗ್‍ಬಾಸ್ ಮನೆಗೆ ಬಟ್ಟೆ ಒಗೆಯೊಕೆ ಬಟ್ಟೆ ತಂದವರ್ಯಾರು ಗೊತ್ತಾ?

    ಬೈಕ್ ರೈಡಿಂಗ್ ವೇಳೆ ಕೂತಂತೆ ಕಾಣಿಸುತ್ತದೆ. ಆದರೆ ಕೂತಿರಲ್ಲ ನಾವು ಜಾಕಿ ತರ ಸ್ಕಾಟ್ ಮಾಡುತ್ತಾ ಇರುತ್ತೇವೆ. ಹಾಗಾಗಿ ಏನು ತೊಂದರೆ ಆಗುವುದಿಲ್ಲ. ಆದರೆ ತುಂಬಾ ಹೊತ್ತು ಒಂದೇ ರೀತಿ ಕೂತಿದ್ದರೆ ಮಾಂಸಖಂಡಗಳು ಸೆಳೆತಕ್ಕೆ ಒಳಗಾಗುವ ಸಾಧ್ಯತೆ ಇರುವ ಕಾರಣ ಈ ಟಾಸ್ಕ್ ನಿಂದ ಹಿಂದೆ ಸರಿದೆ ಎಂದಿದ್ದಾರೆ.

  • ನಾನು ವಿನ್ನರ್ ಆಗುವ ಚಾನ್ಸ್ ತುಂಬಾ ಇತ್ತು – ಮಂಜು

    ನಾನು ವಿನ್ನರ್ ಆಗುವ ಚಾನ್ಸ್ ತುಂಬಾ ಇತ್ತು – ಮಂಜು

    ಬಿಗ್‍ಬಾಸ್ ರಿಯಾಲಿಟಿ ಶೋಗೆ ಪ್ರತಿ ಸ್ಪರ್ಧಿಯು ಗೆಲ್ಲಬೇಕೆಂಬ ಕನಸುಹೊತ್ತು ಬಂದಿರುತ್ತಾರೆ. ಹಾಗೆಯೇ ಮಂಜು ಪಾವಗಡ ಕೂಡ ನಾನು ಈ ಬಾರಿ ಬಿಗ್‍ಬಾಸ್ ರಿಯಾಲಿಟಿ ಶೋ ಗೆಲ್ಲುವ ಚಾನ್ಸ್ ತುಂಬಾನೇ ಇತ್ತು ಎಂದು ಬಹಿರಂಗವಾಗಿ ಹೇಳಿದ್ದಾರೆ.

    ಬಿಗ್‍ಬಾಸ್ ಕಾರ್ಯಕ್ರಮ ಮುಕ್ತಾಯಗೊಂಡ ನಂತರ ಪ್ರಥಮ ಬಾರಿಗೆ ಮಂಜು ಪಾವಗಡ ಫೇಸ್ ಬುಕ್ ಲೈವ್ ಬಂದಿದ್ದು, ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈ ವೇಳೆ ಮಂಜುಗೆ ಅಭಿಮಾನಿಯೊಬ್ಬರು ಮಂಜಣ್ಣ ನೀವು ಮೊದಲನೇ ದಿನದಿಂದಲೂ ತುಂಬಾ ಚೆನ್ನಾಗಿ ಟಾಸ್ಕ್ ಆಡುವ ಮೂಲಕ ನಮ್ಮ ಮನವನ್ನು ಗೆದ್ದಿದ್ದೀರಾ. ನೀವು ನನ್ನ ಫೇವರೆಂಟ್ ಕಂಟೆಸ್ಟೆಂಟ್. ನಿಮ್ಮನ್ನ ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ನೀವು ವಿನ್ ಆಗುವ ಚಾನ್ಸ್ ತುಂಬಾ ಇತ್ತು ಎಂದಿದ್ದಾರೆ.

    ಇದಕ್ಕೆ ಮಂಜು ಕೂಡ ಹೌದು, ಖಂಡಿತವಾಗಿಯೂ ತುಂಬಾ ಚಾನ್ಸ್ ಇತ್ತು. ಹೊರಗಡೆ ಬಂದಿದ ತಕ್ಷಣ ಎಲ್ಲರೂ ಶೇ.100 ನೀವು ಗೆಲ್ಲುತ್ತಿದ್ರಿ. ನಿಮಗೂ ಹಾಗೂ ಅರವಿಂದ್‍ರವರಿಗೂ ತುಂಬಾ ಸ್ಪರ್ಧೆ ಇತ್ತು. ನೀವತ್ತು 100% ಗೆಲ್ಲುತ್ತಿದ್ರಿ ಎಂದಾಗ ನನಗೂ ಹೌದಪ್ಪ ಹಾಗಾದರೆ ನಾನು ಅಂದುಕೊಂಡಿದ್ದು ನಿಜ. ಜನ ನನ್ನನ್ನು ಇಷ್ಟು ಇಷ್ಟ ಪಡುತ್ತಾರೆ ಎಂದು ನನಗೆ ಗೊತ್ತಿರಲಿಲ್ಲ. ಆದ್ರೆ ನಿಜವಾಗಿಯೂ ನಾನು ವಿನ್ ಆಗುತ್ತಿದ್ದೆ ಎಂಬ ಕಾನ್ಫಿಡೆಂಟ್ ಇತ್ತು. ಆದ್ರೆ ಏನು ಮಾಡುವುದಕ್ಕೆ ಆಗುತ್ತದೆ ಎಲ್ಲವನ್ನು ಅನುಸರಿಸಿಕೊಂಡು ಹೋಗಬೇಕಾಗುತ್ತದೆ ಎಂದರು.

    ನಾನು ಅಲ್ಲಿ ಗೆದ್ದಿದ್ದೇನೋ ಬಿಟ್ಟಿದ್ದೇನೋ ಗೊತ್ತಿಲ್ಲ. ಆದ್ರೆ ಇಷ್ಟು ಜನ ನನ್ನನ್ನು ಇಷ್ಟಪಟ್ಟರಲ್ಲ ಅಷ್ಟೇ. ನಾನು ಆಲ್ ಮೋಸ್ಟ್ ಗೆದ್ದಿದ್ದೇನೆ. ಎಲ್ಲರಿಗೂ ಧನ್ಯವಾದ ಎಂದು ತಿಳಿಸಿದರು.

  • ಕಪ್ ಗೆಲ್ಲದೆ ಮನೆಗೆ ಬರಬೇಡ- ಅರವಿಂದ್‍ಗೆ ಮನೆಯವರಿಂದ ಭಾವನಾತ್ಮಕ ಪತ್ರ

    ಕಪ್ ಗೆಲ್ಲದೆ ಮನೆಗೆ ಬರಬೇಡ- ಅರವಿಂದ್‍ಗೆ ಮನೆಯವರಿಂದ ಭಾವನಾತ್ಮಕ ಪತ್ರ

    ನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕೊನೇಯ ಹಂತ ತಲುಪಿದ್ದು, ಇನ್ನೇನು ಲಾಸ್ಟ್ ಎಪಿಸೋಡ್, ಮನೆಗೆ ಹೊರಡಬೇಕು ಎನ್ನುವಾಗಲೇ ಸ್ಪರ್ಧಿಗಳಿಗೆ ಅವರ ಮನೆಯಿಂದ ಪತ್ರಗಳು ಬಂದಿವೆ. ಅದೇ ರೀತಿ ಅರವಿಂದ್ ತಂದೆ ಸಹ ಪ್ರೀತಿಯ ಮಗನಿಗೆ ಪತ್ರ ಬರೆದಿದ್ದು, ಕ್ಯಾಪ್ಟೆನ್ಸಿ ಚೆನ್ನಾಗಿ ನಿಭಾಯಿಸಿದ್ದೀಯಾ ಎಂದು ಹಾಡಿ ಹೊಗಳಿದ್ದಾರೆ.

    ಪ್ರೀತಿಯ ಅರವಿಂದ್ ನಿನ್ನ ತಂದೆ, ತಾಯಿ ಹಾಗೂ ಪ್ರಶಾಂತುನು ಮಾಡುವ ಆಶೀರ್ವಾದಗಳು. ನಾವೆಲ್ಲರೂ ಕ್ಷೇಮವಾಗಿದ್ದೇವೆ, ನಿನ್ನ ಆರೋಗ್ಯವನ್ನೂ ಚೆನ್ನಾಗಿ ನೋಡಿಕೊ. ಬಿಗ್ ಬಾಸ್ ವೇದಿಕೆಯಲ್ಲಿ ನಿನ್ನ ಆಟಗಳನ್ನು ನೋಡಿ ನಮಗೆಲ್ಲ ಬಹಳ ಸಂತೋಷವಾಗುತ್ತಿದೆ. ನಿನಗೆ ನೀಡಿದ ಕ್ಯಾಪ್ಟನ್ಸಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದೀಯಾ ಎಂದು ಹಾಡಿ ಹೊಗಳಿದ್ದಾರೆ.

    ಮನೆಯ ಹತ್ತಿರದವರು, ಕುಟುಂಬಸ್ಥರು, ಗೆಳೆಯರು, ಊರಿನವರು ಹಾಗೂ ಪರ ಊರಿನವರು ಬಿಗ್ ಬಾಸ್ ಮನೆಯಲ್ಲಿ ನಿನ್ನ ಚಟುವಟಿಕೆಗಳನ್ನು ನೋಡಿ ಫೋನ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಬಿಗ್ ಬಾಸ್ ಮನೆಯಿಂದ ನಿನಗೆ ಶುಭವಾಗಲಿ, ದೇವರು ನಿನಗೆ ಒಳ್ಳೆಯದು ಮಾಡಲಿ ನಿನ್ನ ಪ್ರೀತಿಯ ತಂದೆ ಪ್ರಭಾಕರ್ ಪಾಥ್ಯ ಎಂದು ಹೇಳಿ ಕೊನೇಯದಾಗಿ ಕಪ್ ತೆಗೆದುಕೊಳ್ಳದೆ ಮನೆಗೆ ಬರಬೇಡ ಎಂದು ಬ್ರಾಕೆಟ್‍ನಲ್ಲಿ ಬರೆದಿದ್ದಾರೆ.

    ಅರವಿಂದ್ ಬಗ್ಗೆ ತಂದೆ ಹಾಗೂ ಮನೆಯವರು ಪತ್ರದ ಮೂಲಕ ತುಂಬಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೆ ಕಪ್ ಗೆಲ್ಲದೆ ಮನೆಗೆ ಬರಬೇಡ ಎಂದು ಹೇಳುವ ಮೂಲಕ ಆತ್ಮಸ್ಥೈರ್ಯ ತುಂಬಿದ್ದಾರೆ. ಕಪ್ ಗೆಲ್ಲುವ ಕುರಿತು ಹೇಳಿದ್ದಕ್ಕೆ ಅರವಿಂದ್ ನಕ್ಕು, ಹೇ ಇಲ್ಲ…ಇಲ್ಲ… ಅಂದಿದ್ದಾರೆ. ಅಲ್ಲದೆ ಮನೆಯವರೆಲ್ಲ ಪತ್ರ ಚೆನ್ನಾಗಿದೆ ಎಂದು ಹೇಳಿದ್ದಕ್ಕೆ, ನನಗೆ ಮನೆಯಲ್ಲಿ ಬೈಯುವುದು ಒಂದೇ ವಿಚಾರಕ್ಕೆ ಗಲಾಟೆ ಮಾಡಿರುವುದಕ್ಕೆ ಮಾತ್ರ ಬೈಯ್ಯುತ್ತಾರೆ. ಬೇರೆ ಯಾವುದಕ್ಕೂ ತೊಂದರೆ ಇಲ್ಲ. ಗಲಾಟೆ ಮಾತ್ರ ಆಗುವುದೇ ಇಲ್ಲ ಮನೆಯಲ್ಲಿ ಎಂದಿದ್ದಾರೆ.

  • ದೊಡ್ಮನೆಯ ಉಪಮುಖ್ಯಮಂತ್ರಿಯಾದ ಅರವಿಂದ್

    ದೊಡ್ಮನೆಯ ಉಪಮುಖ್ಯಮಂತ್ರಿಯಾದ ಅರವಿಂದ್

    ರಾಜಕೀಯದಲ್ಲಿ ಖಾತೆ ಹಂಚಿಕೆ ಸರ್ವೇಸಾಮಾನ್ಯವಾಗಿ ನಡೆಯುತ್ತದೆ. ಆದ್ರೆ ಬಿಗ್‍ಬಾಸ್ ಮನೆಯಲ್ಲಿ ಚಕ್ರವರ್ತಿ ಚಂದ್ರಚೂಡ್‍ರವರು ಮನೆಯ ಸ್ಪರ್ಧಿಗಳಿಗೆ ಯಾವ ಖಾತೆ ಸೂಟ್ ಆಗುತ್ತದೆ ಎಂದು ತಿಳಿಸಿದ್ದಾರೆ.

    ಕಣ್ಮಣಿ ಬಿಗ್‍ಬಾಸ್ ಸಂಪುಟದಲ್ಲಿ ಯಾವ ಖಾತೆ ಯಾರಿಗೆ ಕೊಡಬಹುದು ಎಂದು ಚಕ್ರವರ್ತಿಯವರಿಗೆ ಪ್ರಶ್ನೆ ಮಾಡಿದ್ದಾಳೆ. ಈ ವೇಳೆ ಪ್ರಿಯಾಂಕರಿಂದ ಶುರು ಮಾಡಿದ ಚಕ್ರವರ್ತಿಯವರು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರಿಗೆ ನೀಡುತ್ತೇನೆ ಏಕೆಂದರೆ ಅವರು ತುಂಬಾ ಸಂಸ್ಕøತಿ ಬಗ್ಗೆ ತಲೆಕೆಡಿಸಿಕೊಳ್ಳುತ್ತಾರೆ. ವಸತಿ ಮತ್ತು ಆಹಾರ ಇಲಾಖೆಯನ್ನು ಶುಭಾಗೆ ನೀಡುತ್ತೇನೆ ಕಾರಣ ಇವರು ವಸತಿ ಕಡೆಗೂ ಜಾಸ್ತಿ ಹೋಗುವುದಿಲ್ಲ ಹಾಗೂ ಆಹಾರದ ಕಡೆಗೂ ಜಾಸ್ತಿ ಹೋಗುವುದಿಲ್ಲ. ರಾಜ್ಯ ಸರ್ಕಾರದಲ್ಲಿ ಅದು ಅತೀ ದೊಡ್ಡ ಖಾತೆಯಾಗಿರುವುದರಿಂದ ಅದು ಅವರಿಗಿರಲಿ ಎಂದು ಬಯಸುತ್ತೇನೆ.

    ಧರ್ಮದತ್ತಿ ಅಂದರೆ ಧಾರ್ಮಿಕ ಇಲಾಖೆಯನ್ನೇ ವೈಷ್ಣವಿಗೆ ನೀಡುತ್ತೇನೆ. ಜೀವನ ಶೂನ್ಯ, ದೇವಸ್ಥಾನ ಮುಜರಾಯಿ ಇಲಾಖೆಯನ್ನು ನೀಡಬೇಕಾಗುತ್ತದೆ. ಕಂದಾಯ ಇಲಾಖೆಯನ್ನು ನಿಧಿಗೆ ನೀಡುತ್ತೇನೆ. ಅವರ ಮೈಂಡ್ ಯಾವಾಗಲೂ ರೆವೆನ್ಯೂ, ಲೆಕ್ಕಾಚಾರನ್ನೇಲ್ಲಾ ಬಹಳ ಚೆನ್ನಾಗಿ ಮಾಡುತ್ತಾರೆ. ಇನ್ನೂ ಶಮಂತ್‍ಗೆ ಖಾತೆ ಕೊಡದೇ ಸದ್ಯಕ್ಕೆ ಬೀಜ ನಿಗಮ ನಿಯಮಿತ ನೀಡುತ್ತೇನೆ. ಇವನು ಕೃಷಿ, ಬೀಜ ಹೇಗೆ ಹಾಕಬೇಕು, ಹೇಗೆ ಬೆಳೆಸಬೇಕು ಏನು ಎಂಬುದರ ಬಗ್ಗೆ ತಿಳಿದುಕೊಳ್ಳಬೇಕು ಎನ್ನುತ್ತಾರೆ.

    ರಘುಗೆ ಶೇ. 100 ಅಬಕಾರಿಯನ್ನು ನೀಡುತ್ತೇನೆ. ಬೇರೆ ಚೇಂಜ್ ಮಾಡುವುದಕ್ಕೆ ಹೋಗುವುದಿಲ್ಲ. ಅವರ ಮಾತು, ನಡೆ, ನುಡಿ ಕಣ್ಣೋಟ ಇಲ್ಲದರಲ್ಲಿಯೂ ನಶೆ ತುಂಬಿರುತ್ತದೆ. ಮಂಜುಗೆ ಮನೆಯನ್ನೆಲ್ಲಾ ಸಂಬಾಳಿಸಿ ಯಾವುದಾದರೂ ತಪ್ಪು ನಡೆದರೂ ಸರಿ ಮಾಡಿಕೊಂಡು, ವಾಕಿಂಗ್ ಸ್ಟಿಕ್‍ನಲ್ಲಿ ಏನು ಮಾಡಬೇಕು, ಹಾಲ್‍ನಲ್ಲಿ ಏನು ಮಾಡಬೇಕು, ಎಲ್ಲಿ ಏನು ಮಾಡಬೇಕು ಎಂಬುವುದನ್ನೆಲ್ಲಾ ಬಹಳ ಚೆನ್ನಾಗಿ ನಿಭಾಯಿಸುತ್ತಾರೆ ಹೀಗಾಗಿ ಅವರಿಗೆ ಗೃಹ ಇಲಾಖೆ ಖಾತೆ ನೀಡುತ್ತೇನೆ.

    ದಿವ್ಯಾ ಸುರೇಶ್‍ರವರಿಗೆ ಪ್ರವಾಸೋದ್ಯಮ ನೀಡುತ್ತೇನೆ. ಅವರದ್ದು ಪೂರ್ತಿ ಪ್ರವಾಸವಿರುತ್ತದೆ. ಹುಡುಕಿದರೂ ಕಾಣುವುದಿಲ್ಲ. ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಚಿಗರಿ ಮರಿ ತರ ನಡೆಯುತ್ತಿರುತ್ತದೆ. ನಮ್ಮ ಪ್ರಶಾಂತ್‍ಗೆ ಕಾನೂನು ಮತ್ತು ಸಂಸದೀಯ ಮಂಡಳಿ. ಬೇರೆ ಖಾತೆಗಳನ್ನು ನೀಡುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಅವರಿಗೆ ಕಾನೂನು ಹಾಗೂ ಸಂಸದೀಯ ಮಂಡಳಿ. ಅರವಿಂದ್ ಕೆಪಿಗೆ ಐದರೂ ಖಾತೆ ನೀಡಿ ಉಪಮುಖ್ಯಮಂತ್ರಿ ಮಾಡುತ್ತೇನೆ. ಯಾವಾಗ ಯಾವ ಖಾತೆಗೆ ಬೇಕಾದರೂ ಜಂಪ್ ಆಗಬಹುದು.

    ಕೊನೆಯದಾಗಿ ನನಗೆ ಮಹಿಳಾ ಮತ್ತು ಮಕ್ಕಳಾ ಇಲಾಖೆಯನ್ನು ಕೊಟ್ಟುಕೊಳ್ಳುತ್ತೇನೆ. ನಾನು ಅದರಲ್ಲಿ ಬಹಳ ಎಕ್ಸ್‍ಪರ್ಟ್ ಆಗಿದ್ದೇನೆ. ಮುಖ್ಯಮಂತ್ರಿ ಸ್ಥಾನವನ್ನು ಬಿಗ್‍ಬಾಸ್‍ಗೆ ಬಿಟ್ಟಿದ್ದೇನೆ. ಅವರೊಟ್ಟಿಗೆ ನನಗೆ ಫೈಟ್ ಮಾಡಲು ಆಗುವುದಿಲ್ಲ ಎಂದಿದ್ದಾರೆ.

  • ಶುಭಾಗೆ ಸೋಮಾರಿ ಸುಬ್ಬಿ ಅಂದ ದೊಡ್ಮನೆ ಸ್ಪರ್ಧಿಗಳು

    ಶುಭಾಗೆ ಸೋಮಾರಿ ಸುಬ್ಬಿ ಅಂದ ದೊಡ್ಮನೆ ಸ್ಪರ್ಧಿಗಳು

    ವಾರ ದೊಡ್ಮನೆ ಮಂದಿಗೆ ಕಣ್ಮಣಿ ಅವಾರ್ಡ್ ನೀಡುವ ಕಾರ್ಯಕ್ರಮವನ್ನು ಆಯೋಜಿಸಿದ್ದು, ಮನೆಯ ಎಲ್ಲಾ ಸ್ಪರ್ಧಿಗಳಿಗೂ ಕಾಮಿಡಿ ಪ್ರಶ್ನೆಗಳನ್ನು ಕೇಳುವ ಮೂಲಕ ಎಲ್ಲರಿಗೂ ಅವಾರ್ಡ್ ನೀಡುತ್ತಾ ಬಂದಿದೆ.

    ಸದ್ಯ ಕಣ್ಮಣಿ ಈ ಮನೆಯಲ್ಲಿ ಸೋಮಾರಿ ಸುಬ್ಬಿ ಯಾರು ಎಂಬ ಪ್ರಶ್ನೆ ಕೇಳಿದೆ. ಈ ವೇಳೆ ಶುಭಾ ಪೂಂಜಾ ಸ್ವತಃ ತಾವೇ ಎಂದು ಹೇಳುತ್ತಾ ಎರಡು ಕೈಗಳನ್ನು ಮೇಲಕ್ಕೆ ಎತ್ತುತ್ತಾರೆ. ಆಗ ಮನೆಯ ಸ್ಪರ್ಧಿಗಳು ಕೂಡ ಶುಭಾ ಕಡೆ ಬೆರಳು ಮಾಡಿದ್ದಾರೆ. ಇದರಲ್ಲಿ ಶುಭಾಗೆ ಕಾಂಪಿಟೇಷನ್ ನೀಡಲು ಯಾರಿಂದಲೂ ಸಾಧ್ಯವಿಲ್ಲ. ಸೋಮಾರಿ ಸುಬ್ಬಿ ಶುಭಾ. ಇದಕ್ಕೆ ವೋಟು ಇಲ್ಲ. ಅಭಿಪ್ರಾಯವಿಲ್ಲ, ಏನು ಇಲ್ಲ. ಒಂದೇ ಬಾರಿಗೆ ಸುಗ್ರಿವಾಜ್ಞೆ, ಶುಭಾಗೆ ಪ್ರತಿ ಸ್ಪರ್ಧಿಯೇ ಇಲ್ಲ ಎನ್ನುತ್ತಾರೆ.

    ನಂತರ ರಘು ಕೂಡ, ಇವರೆಷ್ಟು ಸೋಮಾರಿ ಎಂದರೆ ಟ್ರೋಫಿನೂ ಯಾರಾದರೂ ಎತ್ತಿಕೊಂಡು ಬಂದು ಕೊಡಿ ಅಂದಾಗ ಯಾವುದೇ ಟಾಸ್ಕ್ ಕೊಟ್ಟರೂ ಇದು ಯಾಕೆ ಕೊಡಬೇಕಾಗಿತ್ತು. ಮೈಕ್ ಸರಿ ಮಾಡಿಕೊಳ್ಳಿ ಎಂದರೆ ಯಾಕೆ ಹಾಗೆ ಕೂಗಾಡುತ್ತೀರಾ ಬಿಗ್‍ಬಾಸ್, ಏನು ಗಂಟು ಹೋಗುತ್ತಾ ಎಂದು ಕೇಳುತ್ತಾರೆ. ಕೆಲಸದ ತಂಟೆಗೆ ಬರುವುದಿಲ್ಲ. ಅಡುಗೆ ಹೀಗೆ ಎಲ್ಲದರನ್ನು ನೆಗೆಲೆಟ್ ತೋರಿಸುತ್ತಾರೆ ಎಂದು ಮಂಜು ಹೇಳುತ್ತಾರೆ.

    ಪ್ರಶಾಂತ್ ಕೂಡ ಬೆಳಗ್ಗೆ ಎದ್ದು ಕುಳಿತುಕೊಂಡ ನಂತರ ಟೀ ಮಾಡಿಕೊಳ್ಳುವುದರಿಂದ ಹಿಡಿದು, ಟೀ ಕಪ್ ಕೊಡುವವರೆಗೂ ಹುಡುಕಿಕೊಂಡು ಹೋಗಿ ಕೊಡಬೇಕು. ಒಳ್ಳೆ ರಾಣಿ ತರಹ ಇರುತ್ತಾರೆ, ಅವರದು ಹೊರಗಡೆಯೂ ರಾಣಿ ಜೀವನ, ಬಿಗ್‍ಬಾಸ್ ಮನೆಯಲ್ಲಿಯೂ ರಾಣಿ ಜೀವನ ಎಂದು ಹಾಸ್ಯ ಮಾಡುತ್ತಾರೆ.

    ಈ ವೇಳೆ ನಿಧಿ ಸುಬ್ಬಯ್ಯ ಕೂಡ ಶುಭಾ ಹಾಗೂ ನಾನು ಇಬ್ಬರು ಒಂದು ವೇಳೆ ಬಾತ್ ರೂಮ್ ಡಿಪಾರ್ಟ್‍ಮೆಂಟ್‍ನಲ್ಲಿ ಒಟ್ಟಿಗೆ ಇದ್ದರೆ, ನಾನು ಇವತ್ತು ಬಾತ್ ರೂಮ್ ಕ್ಲೀನ್ ಮಾಡುತ್ತೇನೆ ಎಂದು ನಾಲ್ಕು ಜನರನ್ನು ಕರೆದುಕೊಂಡು ಬಂದು ತೋರಿಸುತ್ತಾರೆ. ಕ್ಲೀನ್ ಮಾಡಿದ ನಂತರ ಹೇಗಿದೆ ಕ್ಲೀನಿಂಗ್ ಎಂದು ಕೇಳಿ ಹೋದ ಬಳಿಕ, ನಾನು ಮತ್ತೊಮ್ಮೆ ಬಾತ್ ರೂಮ್ ಕ್ಲೀನ್ ಮಾಡುತ್ತೇನೆ. ಅಡುಗೆ ಮನೆಯಲ್ಲಿಯೂ ಹಾಗೆ ಗಲೀಜು ಮಾಡುತ್ತಾಳೆ. ಅವಳ ಬೆಡ್ ಹಾಗೂ ಬಟ್ಟೆ ಕ್ಲೀನ್ ಮಾಡಿಕೊಳ್ಳಲು ಹೇಳಿದರೂ ನಿನಗೇನು ಪ್ರಾಬ್ಲಂ ನಿನ್ನ ಬೆಡ್ ಸೈಡ್ ಕ್ಲೀನ್ ಇದ್ಯಾಲ್ಲಾ ಹೋಗಿ ಮಲಗಿಕೋ ಅಂತಾಳೆ ಎಂದು ರೇಗಿಸುತ್ತಾರೆ.

    ಇಂದು ಬೆಳಗ್ಗೆ ಎದ್ದು ಬ್ರಶ್ ಮಾಡುವಾಗ ಕೂಡ ಶುಭಾ ಸೋಫಾ ಮೇಲೆ ಕುಳಿತುಕೊಂಡು ಮಾಡುತ್ತಿದ್ದರು ಎಂದು ಅರವಿಂದ್ ಹೇಳುತ್ತಾ, ಮಿಮಕ್ರಿ ಮಾಡುತ್ತಾ ತೋರಿಸುತ್ತಾರೆ. ಅದನ್ನು ನೋಡಿ ಮನೆ ಮಂದಿಯೆಲ್ಲಾ ಜೋರಾಗಿ ನಗುತ್ತಾರೆ.

  • ಇಬ್ಬರು ಜುಟ್ಟು ಎಳೆದುಕೊಂಡು ಹೊಡಿದಾಡಿ ಅಂದಿದ್ಯಾಕೆ ಅರವಿಂದ್?

    ಇಬ್ಬರು ಜುಟ್ಟು ಎಳೆದುಕೊಂಡು ಹೊಡಿದಾಡಿ ಅಂದಿದ್ಯಾಕೆ ಅರವಿಂದ್?

    ವಾರ ಕಿಚನ್ ಡಿಪಾರ್ಟ್ ನಲ್ಲಿರುವ ಶುಭಾ ಹಾಗೂ ನಿಧಿ ಸುಬ್ಬಯ್ಯ ಅಡುಗೆ ಮಾಡುವ ವೇಳೆ ಸಣ್ಣ ಮಕ್ಕಳಂತೆ ಕಿತ್ತಾಡಿದ್ದಾರೆ.

    ಬೆಳಗ್ಗೆ ಇಬ್ಬರು ಸ್ಟವ್ ಮುಂದೆ ನಿಂತು ಅಡುಗೆ ಮಾಡುವಾಗ ನಿಧಿ ಸುಬ್ಬಯ್ಯ ಶುಭಾ ನನಗೆ ಮಾತ್ರ ಯಾಕೆ ನಾಲ್ಕು ಪೀಸ್ ಆಲೂಗಡ್ಡೆ ಕೊಟ್ಟಿದ್ಯಾ ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ಶುಭಾ ವಾಟ್ ನಾನ್ ಸೆನ್ಸ್ ಸಮವಾಗಿ ಕೊಟ್ಟಿದ್ದೇನೆ ಎಂದಿದ್ದಾರೆ. ಇದಕ್ಕೆ ನಿಧಿ ಇದು ಸರಿಯಾಗಿರುವುದಿಲ್ಲ. ಪಕ್ಕದ ಸ್ಟವ್‍ನಲ್ಲಿ ಬೇಯಿಸುತ್ತಿರುವ ಆಲೂಗಡ್ಡೆಯಲ್ಲಿ ಸ್ವಲ್ಪ ತೆಗೆದು ಕೊಡು ಎಂದು ಕೇಳುತ್ತಾರೆ.

    ಆಗ ಶುಭಾ, ಗೂಬೆ ತರ ಆಡಬೇಡ ನೋಡಲ್ಲಿ ಅಷ್ಟು ತರಕಾರಿ ನೀಡಿದ್ದೇನೆ ಎನ್ನುತ್ತಾ ನಿಧಿ ಕೈನಲ್ಲಿದ್ದ ಪ್ಲೇಟ್‍ನಿಂದ ತಮ್ಮ ಕುಕ್ಕರ್‍ಗೆ ತರಕಾರಿಯನ್ನು ಸುರಿದುಕೊಳ್ಳುತ್ತಾರೆ. ನಂತರ ಈ ಕುಕ್ಕರ್ ಪಲಾವ್ ಆ ಕುಕ್ಕರ್ ಪಲಾವ್ ಅಂತ ಸಪರೇಟ್ ಆಗಿ ನಾವೇನು ಮಾಡುತ್ತಿಲ್ಲ ಮಾಡುತ್ತಿರುವುದು ಒಂದೇ ಪಲಾವ್ ಸಮನಾಗಿರಬೇಕು ಎಂದು ಬುದ್ದಿ ಹೇಳಿ, ಗುದ್ದು ಬಿಡುತ್ತೇನೆ ನಿನಗೆ ಎಂದು ಶುಭಾ ನಿಧಿಗೆ ಬಯ್ಯುತ್ತಾರೆ. ಇದಕ್ಕೆ ನಿಧಿ ನಿನಗೆ ಗುದ್ದಿ ಬಿಡುತ್ತೇನೆ ಅಂದಾಗ ಶುಭಾ ಇರಿಟೆಶನ್ ಫೆಲೋ ಅಂದಾಗ ಅದಕ್ಕೆ ನಿಧಿ ಸ್ಟುಪಿಡ್ ಎನ್ನುತ್ತಾರೆ.

    ಬಳಿಕ ಶುಭಾ ನಿಧಿ ಬೇಯಿಸುತ್ತಿದ್ದ ಕುಕ್ಕರ್‍ನಲ್ಲಿ ಅಷ್ಟು ಕ್ಯಾರೆಟ್ ಇದೆ ಕೊಡು ಎಂದು ಎತ್ತಿಕೊಳ್ಳಲು ಪ್ರಯತ್ನಿಸುತ್ತಾರೆ. ಆಗ ನಿಧಿ ಅಲ್ಲೆ ಇದ್ದ ಅರವಿಂದ್ ಬಳಿ ಅವಳು ಬೇಯಿಸುತ್ತಿರುವ ಕುಕ್ಕರ್‍ನಲ್ಲಿ ಜಾಸ್ತಿ ಆಲೂಗಡ್ಡೆ ಇಲ್ಲಾವಾ ನೋಡು ಎಂದು ವಾದ ಒಪ್ಪಿಸುತ್ತಾರೆ. ಇದಕ್ಕೆ ಶುಭಾ ನಿಧಿಗೆ ಇರಿಟೇಟಿಂಗ್ ಫೀಮೇಲ್ ಎಂದರೆ ನಿಧಿ ಇರಿಟೇಟಿಂಗ್ ಮೇಲ್ ಎನ್ನುತ್ತಾರೆ.

    ಆಗ ಅರವಿಂದ್ ಇಬ್ಬರು ಜುಟ್ಟು ಎಳೆದುಕೊಂಡು ಹೊಡೆದುಕೊಳ್ಳಿ ಎಂದು ಅಣುಕಿಸುತ್ತಾರೆ. ಹೀಗೆ ಇಬ್ಬರು ಜಗಳ ಮುಂದುವರೆಸಿ ನಂತರ ನಿಧಿ ಹಾಗೂ ಶುಬಾ ಪೂಂಜಾ ಕ್ಯಾರೆಟ್ ಹಾಗೂ ಆಲೂಗಡ್ಡೆಯನ್ನು ಹಂಚಿಕೊಳ್ಳುವುದರ ಮೂಲಕ ಕೊನೆಗೆ ರಾಜಿಯಾಗುತ್ತಾರೆ.

  • ಇಲ್ಲಿ ಬಂದ ಅರವಿಂದ, ನಿನಗಾಗಿ ಕಾಯ್ಕೊಂಡ್ ಕುಂತ

    ಇಲ್ಲಿ ಬಂದ ಅರವಿಂದ, ನಿನಗಾಗಿ ಕಾಯ್ಕೊಂಡ್ ಕುಂತ

    ನಾರೋಗ್ಯದ ಕಾರಣ ದಿವ್ಯಾ ಉರುಡುಗ ಬಿಗ್‍ಬಾಸ್ ಮನೆಯಿಂದ ನಿನ್ನೆ ಹೊರ ಹೋಗಿದ್ದಾರೆ. ದಿವ್ಯಾ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಬಿಗ್‍ಬಾಸ್ ಮನೆಯ ಸ್ಪರ್ಧಿಗಳು, ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

    ದಿವ್ಯಾ ಇಲ್ಲದೇ ಒಂದೆಡೇ ಬಿಗ್‍ಬಾಸ್ ಮನೆಯೆಲ್ಲಾ ಒಂದು ರೀತಿ ಖಾಲಿ ಖಾಲಿಯಾಗಿದೆ. ಎಲ್ಲರೊಟ್ಟಿಗೆ ತುಂಬಾ ಲವಲವಿಕೆಯಿಂದ ಮನೆಯ ತುಂಬಾ ಓಡಾಡುತ್ತಾ, ಎಲ್ಲರೊಂದಿಗೆ ಬೆರೆತು ಕಾಮಿಡಿ ಮಾಡಿಕೊಂಡು ಎಲ್ಲರನ್ನು ನಗಿಸಿ ಅವರೊಟ್ಟಿಗೆ ತಾನು ಸಂತೋಷದಿಂದ ಇದ್ದ ದಿವ್ಯಾ ಉರುಡುಗರನ್ನು ದೊಡ್ಮನೆ ಮಂದಿ ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಾರೆ.

    ಶಮಂತ್ ನಿನ್ನೆ ದಿವ್ಯಾ ಉರುಡುಗ ಬಗ್ಗೆ ಹಾಡೊಂದನ್ನು ಬರೆದಿದ್ದು, ಕ್ಯಾಮೆರಾ ಮುಂದೆ ನಿಂತು ಹಾಡಿದ್ದಾರೆ. ಜೊತೆಗೆ ಶಮಂತ್ ಹಾಡು ಹೇಳುವಾಗ ಬೆನ್ನ ಹಿಂದೆ ನಿಂತು ಮನೆ ಮಂದಿಯೆಲ್ಲಾ ಸಾಥ್ ನೀಡಿದ್ದಾರೆ.

    ದಿವ್ಯಾ ಉರುಡುಗಗೆ ಹುಷಾರಿಲ್ಲ ಅವರು ಟ್ರೀಟ್‍ಮೆಂಟ್ ತೆಗೆದುಕೊಳ್ಳುತ್ತಿದ್ದಾರೆ. ಹಾಗಾಗಿ ಅವರಿಗೆ ಒಂದು ಸಾಂಗ್ ಬರೆದಿದ್ದೇನೆ ಎನ್ನುತ್ತಾ ಶಮಂತ್, ಹೇ, ಹೇ ದಿವ್ಯಾ ಹೇಗಿದ್ಯಾ..? ನನ್ ಕಡೆ ಒಸಿ ನೋಡಕ್ಕಿಲ್ವಾ.. ಇಲ್ಲಿ ಬಂದ ಅರವಿಂದ, ನಿನಗಾಗಿ ಕಾಯ್ಕೊಂಡ್ ಕುಂತ.. ಬಜಾರ್ ಆದಾಗ ಓಡುತ್ತಿದ್ದೆ, ಟಾಸ್ಕೂ ಗಿಸ್ಕು ವಿನ್ ಆಗ್ತಿದ್ದೆ. ಹಾಡು ಚೆನ್ನಾಗೆ ಆಡ್ತಿದ್ದೆ, ಏನಕ್ಕೆ ಬ್ಯಾಕ್ ಟೂ ಬ್ಯಾಕ್ ತಿನ್ನುತ್ತಿದ್ದೆ. ತೀರ್ಥಹಳ್ಳಿ ಊರಿಂದ ಹೊಸಕೆರೆ ಹಳ್ಳಿಗೆ ಬಂದು ಮನ್ಸನ್ನೇ ಕದ್ದು ಬಿಟ್ಟಾವ್ಳೆ.. ಕೇಳೆ ದಿವ್ಯಾ ಉರುಡುಗ.. ಬಿಗ್‍ಬಾಸ್ ಮನೆಗೆ ಬಾ ಬೇಗ, ಕೇಳೆ ದಿವ್ಯಾ ಉರುಡುಗ.. ನಾವೆಲ್ಲಾ ವೈಟಿಂಗ್ ಬಾ ಬೇಗ.. ಎಂದು ಹಾಡಿದ್ದಾರೆ.

    ಒಟ್ಟಾರೆ ಶಮಂತ್ ಸಾಂಗ್ ಕೇಳಿ ಮನೆ ಮಂದಿಯಷ್ಟೇ ಅಲ್ಲದೆ ವೀಕ್ಷಕರು ಕೂಡ ಫುಲ್ ಫಿದಾ ಆಗಿದ್ದಾರೆ.