Tag: Aravind

  • ಅರವಿಂದ್ ವಸ್ತು ಕದಿಯಲು ಕಷ್ಟಪಟ್ಟೆ – ಟಾಸ್ಕ್ ಗೆದ್ದ ವೈಷ್ಣವಿಗೆ ಸಿಕ್ತು ಐಸ್‍ಕ್ರೀಂ

    ಅರವಿಂದ್ ವಸ್ತು ಕದಿಯಲು ಕಷ್ಟಪಟ್ಟೆ – ಟಾಸ್ಕ್ ಗೆದ್ದ ವೈಷ್ಣವಿಗೆ ಸಿಕ್ತು ಐಸ್‍ಕ್ರೀಂ

    ಬಿಗ್‍ಬಾಸ್ ಮನೆಯಲ್ಲಿ ಕೆಲವು ಸ್ಪರ್ಧಿಗಳು ಫಿಸಿಕಲಿ ಸ್ಟ್ರಾಂಗ್ ಆಗಿದ್ದರೆ, ಇನ್ನೂ ಕೆಲವರು ಮೆಂಟಲಿ ಸ್ಟ್ರಾಂಗ್ ಆಗಿದ್ದಾರೆ. ಅದರಲ್ಲಿ ವೈಷ್ಣವಿ ಗೌಡ ಕೂಡ ಒಬ್ಬರು. ಯಾವುದೇ ಟಾಸ್ಕ್ ನೀಡಿದರೂ ನಾನು ಯಾರಿಗೂ ಕಡಿಮೆ ಇಲ್ಲ ಎಂಬಂತೆ ಎಲ್ಲ ಸ್ಪರ್ಧಿಗಳಿಗೂ ಪ್ರತಿಸ್ಪರ್ಧಿಯಾಗಿ ಟಫ್ ಕಾಂಪಿಟೇಷನ್ ಕೊಡುವ ವೈಷ್ಣವಿ ಗೌಡ ಬಿಗ್‍ಬಾಸ್ ನೀಡಿದ್ದ ಸೀಕ್ರೆಟ್ ಟಾಸ್ಕ್‌ನನ್ನು ಸುಲಭವಾಗಿ ನಿಭಾಯಿಸಿ ಗೆದ್ದಿದ್ದಾರೆ.

    ಬಿಗ್‍ಬಾಸ್ ಕರೆ ಮಾಡಿ ವೈಷ್ಣವಿಗೆ ನೀವು ಮನೆಯಲ್ಲಿರುವ 7 ಸದಸ್ಯರ ಒಂದೊಂದು ವಸ್ತುವನ್ನು ಯಾರಿಗೂ ಗೊತ್ತಾಗದಂತೆ ಸ್ಟೋರ್ ರೂಮ್‍ಗೆ ತಂದು ಇಡಬೇಕು. ಇವತ್ತು ರಾತ್ರಿ ಲೈಟ್ಸ್ ಆಫ್ ಆಗುವ ಮುನ್ನ ಈ ಕೆಲಸವನ್ನು ಪೂರ್ಣಗೊಳಿಸಿದರೆ, ನಿಮಗೆ ಐಸ್ ಕ್ರೀಮ್ ಕಳುಹಿಸಿಕೊಡುತ್ತೇನೆ ಎನ್ನುತ್ತಾರೆ. ಒಂದು ವೇಳೆ ಈ ಟಾಸ್ಕ್ ಪೂರ್ಣಗೊಳಿಸದೇ ಇದ್ದರೆ ನಿಮ್ಮ ವಸ್ತುವನ್ನು ಬಿಗ್ ಬಾಸ್‍ಗೆ ನೀಡಬೇಕು ಎಂದು ಹೇಳುತ್ತಾರೆ.

    ಟಾಸ್ಕ್ ಸಿಕ್ಕಿದ ಹಿನ್ನೆಲೆಯಲ್ಲಿ ವೈಷ್ಣವಿ, ಮೇಕಪ್ ರೂಮ್‍ನಲ್ಲಿದ್ದ ಮನೆಯ ಸ್ಪರ್ಧಿಗಳ ಒಂದೊಂದು ವಸ್ತುವನ್ನು ಹುಡುಕಾಡಿ-ತಡಕಾಡಿ ಬಹಳ ಚಲಾಕಿತನದಿಂದ ಪ್ಲಾಸ್ಟಿಕ್ ಕವರ್‌ನಲ್ಲಿ ಬಟ್ಟೆಗಳನ್ನು ತುಂಬಿಕೊಂಡು, ಯಾರಿಗೂ ತಿಳಿಯದಂತೆ ಸ್ಟೋರ್ ರೂಮ್‍ಗೆ ತೆಗೆದುಕೊಂಡು ಹೋಗಿ ಇಡುತ್ತಾರೆ.

    ಅದರಂತೆ ಟಾಸ್ಕ್‌ನನ್ನು ವಿನ್ ಆದ ವೈಷ್ಣವಿಗೆ ಬಿಗ್‍ಬಾಸ್ ಅಭಿನಂದನೆ ಕೋರುತ್ತಾ ಐಸ್ ಕ್ರೀಮ್ ಕಳುಹಿಸಿಕೊಡುತ್ತಾರೆ. ಆಗ ವೈಷ್ಣವಿ ನನ್ನನ್ನು ಎಲ್ಲರೂ ಕ್ಷಮಿಸಿ, ಬಿಗ್‍ಬಾಸ್ ಸೀಕ್ರೆಟ್ ಟಾಸ್ಕ್‌ವೊಂದನ್ನು ನೀಡಿದ್ದರು. ಹಾಗಾಗಿ ನಿಮ್ಮೆಲ್ಲರಿಂದಲೂ ಒಂದೊಂದು ವಸ್ತುಗಳನ್ನು ಕದ್ದಿದ್ದೀನಿ ಎಂದಾಗ ಎಲ್ಲರೂ ಶಾಕ್ ಆಗುತ್ತಾ, ಏನು ಕದ್ದಿದ್ದೀರಾ ಎಂದು ಕೇಳುತ್ತಾರೆ.

    ಆಗ ವೈಷ್ಣವಿ, ಬ್ರೋ ಗೌಡರವರ ಗ್ರೀನ್ ಕಲರ್ ಟಿ ಶರ್ಟ್, ಅರವಿಂದ್‍ರವರ ಬ್ರಶ್, ಪ್ರಶಾಂತ್‍ರವರದ್ದು ಗ್ರೇ ಮತ್ತು ಯೆಲ್ಲೋ ಟಿ ಶರ್ಟ್, ದಿವ್ಯಾ ಉರುಡುಗ ಅವರ ಒಂದು ಟ್ರ್ಯಾಕ್ ಪ್ಯಾಂಟ್, ಮಂಜುರವರ ಬಿಳಿ ಬಣ್ಣದ ಟಿ ಶರ್ಟ್, ಶುಭಾರವರ ಕ್ಯಾಪ್, ಡಿಎಸ್‍ದು ಏರ್ ಬ್ಯಾಂಡ್ ಕದ್ದಿದ್ದೇನೆ. ಆದರೆ ಅರವಿಂದ್ ಡ್ರಸ್‍ಗಳನ್ನು ಬಹಳ ನೀಟಾಗಿ ಇಟ್ಟಿದ್ದಾರೆ. ಒಂದು ಬಟ್ಟೆ ಎತ್ತಿಕೊಂಡರೂ ಅದು ಬಹಳ ಬೇಗ ಗೊತ್ತಾಗಿ ಬಿಡುತ್ತದೆ. ಬಾತ್‍ರೂನಲ್ಲಿ ಒಂದು ಟಿ ಶರ್ಟ್ ಮತ್ತು ಶಾಟ್ಸ್ ಇತ್ತು. ಅದನ್ನೂ ಎತ್ತಿದರೆ ಬೇಗ ಗೊತ್ತಾಗಿ ಬಿಡುತ್ತದೆ. ಹಾಗಾಗಿ ಅರವಿಂದ್ ಬಟ್ಟೆಯನ್ನು ಮಾತ್ರ ಕದಿಯಲು ಆಗಲಿಲ್ಲ ಬದಲಿಗೆ ಅವರ ಬ್ರಶ್ ಮಾತ್ರ ಕದ್ದೆ ಎನ್ನುತ್ತಾರೆ. ಇದನ್ನೂ ಓದಿ:ದಿವ್ಯಾ ಉರುಡುಗ ಅರವಿಂದ್ ಫುಲ್ ಕಿಲ ಕಿಲ

  • ದಿವ್ಯಾ ಉರುಡುಗರನ್ನು ಬಿಗಿದಪ್ಪಿದ ಅರವಿಂದ್- ಒಂದಾದ ಪ್ರಣಯ ಪಕ್ಷಿಗಳು

    ದಿವ್ಯಾ ಉರುಡುಗರನ್ನು ಬಿಗಿದಪ್ಪಿದ ಅರವಿಂದ್- ಒಂದಾದ ಪ್ರಣಯ ಪಕ್ಷಿಗಳು

    ಬಿಗ್ ಬಾಸ್ ಮನೆಯಲ್ಲಿ ಪ್ರಣಯ ಪಕ್ಷಿಗಳಂತೆ ಇದ್ದು, ಜನರನ್ನು ರಂಜಿಸುತ್ತಿದ್ದ ದಿವ್ಯಾ ಉರುಡುಗ ಹಾಗೂ ಅರವಿಂದ್ ಜೋಡಿ ಸಣ್ಣ ಜಗಳವಾಗಿದ್ದರಿಂದ ಮುನಿಸಿಕೊಂಡು ಮಾತನಾಡುವುದನ್ನು ಬಿಟ್ಟಿದ್ದರು. ಆದರೆ ಇದೀಗ ಬಿಗಿದಪ್ಪಿಕೊಳ್ಳುವ ಮೂಲಕ ಒಂದಾಗಿದ್ದಾರೆ.

    ಹೌದು ಬಿಗ್ ಬಾಸ್ ನೀಡಿದ್ದ ಮುತ್ತು ಹುಡುಕುವ ಟಾಸ್ಕ್ ವೇಳೆ ಇಬ್ಬರ ನಡುವೆ ಸಣ್ಣ ಜಗಳವಾಗಿರುತ್ತದೆ. ಆ ಬಳಿಕ ಇಬ್ಬರೂ ಮಾತನಾಡುವುದನ್ನು ಬಿಡುತ್ತಾರೆ. ದಿವ್ಯಾ ಉರುಡುಗ ಮಾತನಾಡಿಸಿದರೂ ಅರವಿಂದ್ ಮಾತನಾಡದೆ ಸದ್ಯಕ್ಕೆ ಮಾತನಾಡಲು ಇಷ್ಟ ಇಲ್ಲ ಎಂದು ಹೇಳುತ್ತಾರೆ, ಆಗ ದಿವ್ಯಾ ಉರುಡುಗ ಬೇಸರದಿಂದ ಬೆಡ್ ರೂಂ ಕಡೆಗೆ ಹೋಗುತ್ತಾರೆ. ಇದಾದ ಬಳಿಕ ಇಂದು ಬೆಳಗ್ಗೆ ದಿವ್ಯಾ ಉರುಡುಗ ಅವರನ್ನು ಸ್ವತಃ ಅರವಿಂದ್ ಬಿಗಿದಪ್ಪುತ್ತಾರೆ. ಆಗ ದಿವ್ಯಾ ಉರುಡುಗ ಸಹ ಗಟ್ಟಿಯಾಗಿ ಹಿಡಿದು ಹಗ್ ಮಾಡುತ್ತಾರೆ. ಈ ವೇಳೆ ಇಬ್ಬರೂ ಭಾವುಕರಾಗುತ್ತಾರೆ, ಇಬ್ಬರ ಕಣ್ಣಂಚಲ್ಲಿ ನೀರು ಬರುತ್ತವೆ.

    ಬಳಿಕ ಅರವಿಂದ್ ದಿವ್ಯಾ ಜೊತೆಗೆ ಗಾರ್ಡನ್ ಏರಿಯಾಗೆ ಬಂದು ಹಗ್ ಮಾಡಿಕೊಂಡೇ ನಿಲ್ಲುತ್ತಾರೆ. ಅರವಿಂದ್ ಮಾತನಾಡಿಸದ್ದಕ್ಕೆ ದಿವ್ಯಾ ಉರುಡುಗ ಫುಲ್ ಅಪ್ಸೆಟ್ ಆಗಿರುತ್ತಾರೆ. ಯಾರೊಂದಿಗೂ ಸರಿಯಾಗಿ ಮಾತನಾಡಿರಲಿಲ್ಲ. ಇದೀಗ ಅರವಿಂದ್ ಹಗ್ ಮಾಡಿದ್ದಕ್ಕೆ ದಿವ್ಯಾ ಉರುಡುಗ ಫುಲ್ ಆಕ್ಟಿವ್ ಆಗಿದ್ದು, ಕಿಚನ್‍ನಲ್ಲಿ ಕೆಲಸ ಮಾಡುವಾಗ ಶುಭಾ ಪೂಂಜಾ ಸಹ ದಿವ್ಯಾಗೆ ಕಿಂಡಲ್ ಮಾಡುತ್ತಾರೆ. ನೀನು ನಿನ್ನೆ ದೇವದಾಸ್ ಮೂಡಲ್ಲಿದ್ದೆ ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ದಿವ್ಯಾ ಉರುಡುಗ ನಗುತ್ತ ಈಗಲೂ ಹಾಗೇ ಇದ್ದೇನೆ ಎನ್ನುತ್ತಾರೆ.

    ಇದಾದ ಬಳಿಕ ಗಾರ್ಡನ್ ಏರಿಯಾದಲ್ಲಿ ಕುಳಿತಿದ್ದ ಅರವಿಂದ್ ಬಳಿ ದಿವ್ಯಾ ಉರುಡುಗ ಆಗಮಿಸುತ್ತಾರೆ. ಆಗ ಅರವಿಂದ್ ಬಟ್ಟೆಯನ್ನು ನೆನೆಸಿಡು ಎನ್ನುತ್ತಾರೆ. ಹೀಗೆ ಮಾತನಾಡುತ್ತಲೇ ದಿವ್ಯಾ ಭಾವುಕರಾಗಿ ಅರವಿಂದ್ ಅವರನ್ನು ಮತ್ತೊಮ್ಮೆ ತಬ್ಬಿಕೊಳ್ಳುತ್ತಾರೆ. ಹೀಗೆ ಪ್ರಣಯ ಪಕ್ಷಿಗಳು ಇಂದು ಒಂದಾಗುವ ಮೂಲಕ ಅಭಿಮಾನಿಗಳಿಗೆ ಸಂತಸವನ್ನುಂಟು ಮಾಡಿದ್ದಾರೆ.

  • ದೊಡ್ಮನೆ ಪ್ರಣಯ ಪಕ್ಷಿಗಳ ನಡುವೆ ಮುನಿಸು – ಡಿಯು ಜೊತೆ ಮಾತು ಬಿಟ್ಟ ಅರವಿಂದ್

    ದೊಡ್ಮನೆ ಪ್ರಣಯ ಪಕ್ಷಿಗಳ ನಡುವೆ ಮುನಿಸು – ಡಿಯು ಜೊತೆ ಮಾತು ಬಿಟ್ಟ ಅರವಿಂದ್

    ಬಿಗ್‍ಬಾಸ್ ಮನೆಯ ಪ್ರಣಯ ಪಕ್ಷಿಗಳಂತೆ ಇರುವ ಅರವಿಂದ್ ಹಾಗೂ ದಿವ್ಯಾ ಉರುಡುಗ ನಡುವೆ ಸಣ್ಣ ಜಗಳ ನಡೆದಿದೆ. ಹೀಗಾಗಿ ಅರವಿಂದ್ ದಿವ್ಯಾ ಉರುಡುಗ ಜೊತೆ ಮಾತನಾಡುವುದನ್ನು ಬಿಟ್ಟಿದ್ದಾರೆ.

    ದೊಡ್ಮನೆಯ ಎಲ್ಲಾ ಕಡೆ ಕ್ಯಾಮೆರಾ ಮುಂದೆ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುವ ದಿವ್ಯಾ ಹಾಗೂ ಅರವಿಂದ್ ಎಷ್ಟೇ ಕ್ಲೋಸ್ ಆಗಿದ್ದರೂ, ಟಾಸ್ಕ್ ವಿಚಾರಕ್ಕೆ ಬಂದರೆ ಇಬ್ಬರು ತಮ್ಮದೇ ಆದ ಭಿನ್ನ ಭಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ ಹಾಗೂ ಎಲ್ಲಾ ಟಾಸ್ಕ್‌ಗಳಲ್ಲಿ ಕೂಡ ಏಕಾಂಗಿಯಾಗಿ ಆಟ ಆಡಿ ಗೆಲ್ಲಲು ಪ್ರಯತ್ನಿಸುತ್ತಾರೆ.

    ಸದ್ಯ ಬಿಗ್‍ಬಾಸ್ ನೀಡಿದ್ದ ಮುತ್ತು ಹುಡುಕುವ ಟಾಸ್ಕ್ ವೇಳೆ ವಿಸಿಲ್ ಹಾಕುವುದಕ್ಕೂ ಮುನ್ನವೇ ಶುಭಾ ಪೂಂಜಾ, ದಿವ್ಯಾ ಉರುಡುಗ ಹಾಗೂ ವೈಷ್ಣವಿ ಗೌಡ ಗ್ಲೌಸ್‍ಗಾಗಿ ಕಾದು ನಿಂತಿರುತ್ತಾರೆ. ಈ ವೇಳೆ ಗಾರ್ಡನ್ ಏರಿಯಾದಲ್ಲಿಯೇ ಕುಳಿತಿದ್ದ ಅರವಿಂದ್, ಬೇರೆ ಕಡೆ ಯಾವುದು ಸರಿ, ಯಾವುದು ತಪ್ಪು ಎಂದು ಮಾತನಾಡುತ್ತೀರಾ, ಆದರೆ ಇಲ್ಲಿ ಮಾತ್ರ ಟಾಸ್ಕ್ ಮುನ್ನವೇ ಹೋಗಿ ನಿಂತುಕೊಂಡು ಗ್ಲೌಸ್‍ಗೆ ಕಾಯುತ್ತಿದ್ದೀರಾ. ಬೇರೆ ಕಡೆ ಇದು ಒಳ್ಳೆಯದು, ಇದು ತಪ್ಪು ಅಂತ ಹೇಳುವುದಕ್ಕೆ ಆಗುತ್ತದೆ. ಈಗ ಅಲ್ಲಿ ನಿಂತಿರುವುದು ಮಾತ್ರ ಸರಿನಾ ಎಂದು ಪ್ರಶ್ನಿಸುತ್ತಾರೆ.

    ಈ ವೇಳೆ ಶುಭಾ ಬಿಟ್ಟು ಕೊಡೋಣಾ ಎಂದು ದಿವ್ಯಾ ಉರುಡುಗರನ್ನು ಕೇಳುತ್ತಾರೆ. ಆಗ ದಿವ್ಯಾ ಉರುಡುಗ ನಾನು ಬಿಟ್ಟು ಕೊಡುವುದಿಲ್ಲ. ನಾನು ಯಾಕೆ ಬಿಟ್ಟು ಕೊಡಬೇಕು, ಬೇಕಾದರೆ ಅವರು ಬಂದು ಆಡಲಿ ಎಂದು ಹೇಳುತ್ತಾರೆ. ಆಗ ಅರವಿಂದ್ ಏನು ಸ್ವಲ್ಪ ಜೋರಾಗಿ ಹೇಳು ಎಂದು ಕೇಳುತ್ತಾರೆ. ಅದಕ್ಕೆ ದಿವ್ಯಾ ಉರುಡುಗ ಬಿಟ್ಟು ಕೊಡು ಎಂದು ಹೇಳಿದರು. ಆದರೆ ನಾನು ಬಿಟ್ಟು ಕೊಡುವುದಿಲ್ಲ ಎಂದು ಹೇಳಿದೆ ಎನ್ನುತ್ತಾರೆ.

    ಇದರಿಂದ ಬೇಸರಗೊಂಡ ಅರವಿಂದ್, ದಿವ್ಯಾ ಉರುಡುಗ ಜೊತೆ ಎಷ್ಟೋ ಹೊತ್ತಿನವರೆಗೂ ಮಾತನಾಡಿರಲಿಲ್ಲ. ಕೊನೆಗೆ ದಿವ್ಯಾ ಉರುಡುಗ ಅರವಿಂದ್ ಬಳಿ ಹೋಗಿ ಏನಾಯಿತು ಎಂದಾಗ ಏನೂ ಇಲ್ಲ ಎಂದು ಅರವಿಂದ್ ಹೇಳುತ್ತಾರೆ. ಮತ್ತೆ ಯಾಕೆ ಮಾತನಾಡುತ್ತಿಲ್ಲ ಎಂದು ಕೇಳಿದಾಗ, ನಾನು ನನಗೆ ಟೈಮ್ ಕೊಟ್ಟುಕೊಂಡಿದ್ದೇನೆ. ಆರಾಮಾಗಿ ಯೋಚಿಸುತ್ತಾ ಕುಳಿತುಕೊಂಡಿದ್ದೇನೆ ಎನ್ನುತ್ತಾರೆ. ಹಾಗಾದರೆ ಇಷ್ಟ ಇಲ್ವಾ ಮಾತನಾಡಲು ಅಂತ ದಿವ್ಯಾ ಎಂದಾಗ ಅರವಿಂದ್ ಸದ್ಯಕ್ಕೆ ಇಷ್ಟ ಇಲ್ಲ ಎಂದಿದ್ದಾರೆ. ಇದರಿಂದ ಬೇಸರಗೊಂಡು ದಿವ್ಯಾ ಉರುಡುಗ ಏನು ಮಾತನಾಡದೇ ಎದ್ದು ಬೆಡ್ ರೂಮ್ ಕಡೆಗೆ ಹೋಗುತ್ತಾರೆ. ಇದನ್ನೂ ಓದಿ:ಹುಡುಗ್ರು ಸರಿಯಿಲ್ಲ, ಅವರ ಬುದ್ಧಿ ಸರಿಯಿಲ್ಲ – ಮಂಜು ಹೀಗಂದಿದ್ಯಾಕೆ..?

  • ಬಿಗ್‍ಬಾಸ್ ಮನೆಯಲ್ಲಿ ಹುಟ್ಟಿಕೊಂಡ್ರು ಹೊಸ ಸಿಂಗರ್

    ಬಿಗ್‍ಬಾಸ್ ಮನೆಯಲ್ಲಿ ಹುಟ್ಟಿಕೊಂಡ್ರು ಹೊಸ ಸಿಂಗರ್

    ಬಿಗ್‍ಬಾಸ್ ಕಾರ್ಯಕ್ರಮದ ಪ್ರತಿ ಸೀಸನ್‍ನಲ್ಲಿಯೂ ಒಬ್ಬ ಗಾಯಕ ಅಥವಾ ಗಾಯಕಿ ಬಿಗ್‍ಬಾಸ್ ಮನೆಗೆ ಎಂಟ್ರಿ ಕೊಡುತ್ತಾರೆ. ಸದ್ಯ ಬಿಗ್‍ಬಾಸ್ ಸೀಸನ್ -8 ರಲ್ಲಿ ದೊಡ್ಮನೆಗೆ ಗಾಯಕಿ ಗೀತಾ ಭಟ್ ಹಾಗೂ ಗಾಯಕ ವಿಶ್ವನಾಥ್ ಶಮಂತ್ ಆಗಿಮಿಸಿದ್ದರು. ಸದ್ಯ ಗೀತಾ ಭಟ್ ಮತ್ತು ಗಾಯಕ ವಿಶ್ವನಾಥ್ ಎಲಿಮೀನೆಟ್ ನಂತರ ಉಳಿದಿರುವುದು ಶಮಂತ್ ಮಾತ್ರ. ಆದ್ರೆ ಇವರೆಲ್ಲರ ಮಧ್ಯೆ ರೊಚ್ಚಿಗೆದ್ದು ವೈಷ್ಣವಿ ದೊಡ್ಮನೆಯಲ್ಲಿ ಹಾಡು ಹೇಳಲು ಆರಂಭಿಸಿದ್ದಾರೆ. ಅದರಲ್ಲೂ ಇವರ ಹಾಡು ಹೇಗಿದೆ ಅಂದ್ರೆ ಮನೆಮಂದಿಯೆಲ್ಲಾ ದಿಕ್ಕಾಪಾಲಾಗಿ ಓಡಿ ಹೋಗುತ್ತಾರೆ.

    ಹೌದು, ಇಷ್ಟು ದಿನ ಸೈಲೆಂಟ್ ಆಗಿದ್ದ ವೈಷ್ಣವಿ ಈಗ ಫುಲ್ ವೈಲೆಂಟ್ ಆಗಿದ್ದಾರೆ. ಬಿಗ್‍ಬಾಸ್ ಮನೆಯ ಹಲವು ಮಂದಿಗೆ ಹಾಡು ಹೇಳಲು ಬರುವುದಿಲ್ಲ ಅದರಲ್ಲಿ ವೈಷ್ಣವಿ ಕೂಡ ಒಬ್ಬರು. ಸದ್ಯ ವೈಷ್ಣವಿಗೆ ಹಾಡು ಹೇಳುವಂತೆ ಚಕ್ರವರ್ತಿಯವರು ಕೇಳುತ್ತಾರೆ. ಆಗ ವೈಷ್ಣವಿ ನನಗೆ ಬರುವುದಿಲ್ಲ ನೀವು ನಿದ್ದೆ ಮಾಡುತ್ತೀರಾ ಎನ್ನುತ್ತಾರೆ. ಪರವಾಗಿಲ್ಲ ನಾನು ನಿದ್ದೆ ಹೋಗುವುದಿಲ್ಲ ಹಾಡು ಹೇಳು ಎಂದಾಗ ‘ಒಂದೇ ಒಂದು ಸಾರಿ ಕಣ್ಣು ಮುಂದೆ ಬಾರೆ..’ ಎಂದು ಹೇಳುತ್ತಾರೆ. ಅದಕ್ಕೆ ಇಷ್ಟೇ ನಾ ಹಾಡು ಎಂದು ಚಕ್ರವರ್ತಿ ಕೇಳಿ ಮತ್ತೊಂದು ಹಾಡು ಹೇಳು ಎಂದು ಕೇಳಿದ್ದಾರೆ. ಆಗ ವೈಷ್ಣವಿ ಸುಮ್ಮನೆ ಹೀಗೆ ನಿನ್ನನೇ ಎಂದು ಮೂಗಿನಲ್ಲಿಯೇ ಹಾಡು ಹೇಳುತ್ತಾರೆ. ಈ ವೇಳೆ ಅರವಿಂದ್ ಹಾಡಿರಲಿ ಆ ಎಕ್ಸ್‍ಪ್ರೆಷನ್ ಕೊಡುತ್ತಿರಲ್ಲ ಯಪ್ಪಾ.. ಎಂದು ಅಣುಕಿಸುತ್ತಾರೆ.

    ಇತ್ತೀಚೆಗೆ ಶಮಂತ್ ಬರೆದಿದ್ದ ಮಳೆಯೇ ಸುರಿ.. ಮಳೆಯೇ ಸುರಿ ಹಾಡನ್ನು ವೈಷ್ಣವಿಯವರು ಹಾಡಿದ್ದರು. ಈ ಹಾಡನ್ನು ಕೇಳಿ ಶಾಕ್ ಆದ ಮನೆಮಂದಿಯೆಲ್ಲಾ ವೈಷ್ಣವಿ ಇಷ್ಟು ಕೆಟ್ಟ ಸಿಂಗರ್ ಎಂದು ಗೊತ್ತಿರಲಿಲ್ಲ, ನಾವೇ ಕೆಟ್ಟದಾಗಿ ಹಾಡುತ್ತೇವೆ ಎಂದರೆ ಇವಳು ನಮಗಿಂತ ಕೆಟ್ಟದಾಗಿ ಹಾಡುತ್ತಾಳೆ ಎಂದು ಹಾಸ್ಯ ಮಾಡಿದರೆ. ದಿವ್ಯಾ ಉರುಡುಗ ಅರವಿಂದ್ ಚೇರ್ ನಿಂದ ಎದ್ದು ಬಿದ್ದು ನಕ್ಕಿದ್ದರು. ಇದನ್ನೂ ಓದಿ: ನಾನು ಟೈಗರ್ ಸಾಕಿದ್ದೆ, ಅದರ ಜೊತೆ ಆಟ ಆಡ್ತಿದ್ದೆ: ಶುಭಾ ಪೂಂಜಾ

  • ನಂಗೆ ಗೊತ್ತು ನೀವು ಅತ್ತಿದ್ದೀರಿ – ಪೆಟ್ಟಾದರೂ ಕೆಪಿಗೆ ಸಮಾಧಾನ ಹೇಳಿದ ಕೆ

    ನಂಗೆ ಗೊತ್ತು ನೀವು ಅತ್ತಿದ್ದೀರಿ – ಪೆಟ್ಟಾದರೂ ಕೆಪಿಗೆ ಸಮಾಧಾನ ಹೇಳಿದ ಕೆ

    ಬಿಗ್‍ಬಾಸ್ ನೀಡಿದ್ದ ಹೀಗೂ ಅಂಟೆ ಟಾಸ್ಕ್ ವೇಳೆ ದಿವ್ಯಾ ಉರುಡುಗ(ಕವನ) ಕೈಗೆ ಪೆಟ್ಟಾಗಿದ್ದಕ್ಕೆ ಅರವಿಂದ್ ಕೆ.ಪಿ ಬೇಸರಗೊಂಡಿದ್ದಾರೆ.

    ಬಿಗ್ ಬಾಸ್ ‘ಹೀಗೂ ಅಂಟೆ’ ಎಂಬ ಟಾಸ್ಕ್‌ನನ್ನು ನೀಡಿದ್ದರು. ಈ ಟಾಸ್ಕ್‌ನಲ್ಲಿ ಎರಡು ತಂಡದ ಒಬ್ಬೊಬ್ಬ ಸದಸ್ಯರು ಬಿಗ್‍ಬಾಸ್ ನೀಡುವ ಜಾಕೆಟ್ ತೊಡಬೇಕು ಹಾಗೂ ಎದುರಾಳಿ ತಂಡದವರು ಆ ಜಾಕೆಟ್‍ಗೆ ಸ್ಟಾರ್ ಒಂದನ್ನು ಅಂಟಿಸಬೇಕು ಎಂದು ಸೂಚಿಸಿದ್ದರು.

    ಅದರಂತೆ ವಿಜಯಯಾತ್ರೆ ತಂಡದ ಅರವಿಂದ್ ಜಾಕೆಟ್ ತೊಟ್ಟು ಆಟ ಆಡುವಾಗ, ದಿವ್ಯಾ ಉರುಡುಗ ಮಂಜು ಹಾಗೂ ದಿವ್ಯಾ ಸುರೇಶ್ ಸ್ಟಾರ್ ಅಂಟಿಸಲು ಪ್ರಯತ್ನಿಸುತ್ತಾರೆ. ಈ ವೇಳೆ ಅರವಿಂದ್ ದಿವ್ಯಾ ಉರುಡುಗ ಮೇಲೆ ಜೋರಾಗಿ ಬೀಳುತ್ತಾರೆ. ಟಾಸ್ಕ್ ನಂತರ ನಾನು ಬಹಳ ಜೋರಾಗಿ ಓಡಿ ಬರಬೇಕಾದರೆ ನನ್ನನ್ನು ತಡೆಯಲು ಬರಬೇಡ ಏಟಾಗುತ್ತದೆ ಎಂದು ಒಂದು ಬಾರಿ ದಿವ್ಯಾ ಉರುಡುಗಗೆ ಎಚ್ಚರಿಸುತ್ತಾರೆ.

    ನಂತರ ನಿಂಗೈತೆ ಇರು ತಂಡದಿಂದ ಜಾಕೆಟ್ ತೊಟ್ಟ ಆಟ ಆಡಲು ದಿವ್ಯಾ ಉರುಡುಗ ಆರಂಭಿಸುತ್ತಾರೆ. ಈ ವೇಳೆ ಅರವಿಂದ್ ದಿವ್ಯಾ ಉರುಡುಗಗೆ ಸ್ಟಾರ್ ಅಂಟಿಸಲು ಪ್ರಯತ್ನಿಸುತ್ತಿರುತ್ತಾರೆ. ಆಗ ಚಕ್ರವರ್ತಿ ದಿವ್ಯಾ ಉರುಡುಗರನ್ನು ಸೇವ್ ಮಾಡಲು ಹೋಗಿ ಗಾರ್ಡನ್ ಏರಿಯಾದಲ್ಲಿದ್ದ ಗಾಜಿಗೆ ದಿವ್ಯಾ ಉರುಡುಗ ಕೈ ತಗುಲಿ ಪೆಟ್ಟಾಗುತ್ತದೆ. ನಂತರ ಮನೆಯ ಎಲ್ಲ ಸದಸ್ಯರು ದಿವ್ಯಾ ಉರುಡುಗರಿಗೆ ಸಮಾಧಾನ ಪಡಿಸುತ್ತಾರೆ ಮತ್ತು ಕನ್ಫೆಷನ್ ರೂಮ್‍ಗೆ ಅರವಿಂದ್ ದಿವ್ಯಾ ಉರುಡುಗರನ್ನು ಚಿಕಿತ್ಸೆಗೆ ಕರೆದುಕೊಂಡು ಹೋಗುತ್ತಾರೆ. ಬಳಿಕ ನಾನು ಅವಳನ್ನು ಸೇವ್ ಮಾಡಿ ಡೈರೆಕ್ಷನ್ ಚೇಂಜ್ ಮಾಡಲು ಪ್ರಯತ್ನಿಸಿದೆ ಆದರೆ ಈ ರೀತಿ ಆಯ್ತು ಎಂದು ಚಕ್ರವರ್ತಿ ಮನೆಯ ಸದಸ್ಯರಿಗೆ ತಿಳಿಸುತ್ತಾರೆ.

    ಬಳಿಕ ಚಿಕಿತ್ಸೆ ಪಡೆದು ವಾಪಸ್ ಬಂದ ದಿವ್ಯಾ ಉರುಡುಗರನ್ನು ಕಂಡು ಅರವಿಂದ್ ತಬ್ಬಿಕೊಂಡು ಅರವಿಂದ್ ನಿಟ್ಟುಸಿರು ಬಿಟ್ಟು, ದಿವ್ಯಾ ಉರುಡುಗರನ್ನು ಸಮಾಧಾನ ಪಡಿಸುತ್ತಾರೆ. ನಂತರ ದಿವ್ಯಾ ಉರುಡುಗ ಅರವಿಂದ್ ಕೆನ್ನೆಯನ್ನು ಕ್ಯೂಟ್ ಆಗಿ ಹಿಡಿದುಕೊಂಡು, ನನಗೆ ಹೀಗೆ ಪೆಟ್ಟಾಗಿದಕ್ಕೆ ಅತ್ರಾ ಎಂದು ಕೇಳುತ್ತಾರೆ. ಇದಕ್ಕೆ ಅರವಿಂದ್ ಇಲ್ಲ ಎನ್ನುತ್ತಾರೆ. ಆಗ ದಿವ್ಯಾ ಉರುಡುಗ ನನಗೆ ನಿಮ್ಮ ಧ್ವನಿ ಅತ್ತಿರುವಂತೆ ಕೇಳಿಸುತ್ತಿದೆ. ನನಗೆ ಗೊತ್ತು, ನೀವು ಅತ್ತಿದ್ದೀರಾ ಎಂದು ಹೇಳುತ್ತಾರೆ.

    ಆಗ ಅರವಿಂದ್ ನಿನಗೆ ಏಟಾಗಿದ್ಯಾಲ್ಲ ಅದಕ್ಕೆ ನನ್ನ ಧ್ವನಿ ಸರಿಯಾಗಿ ಕೇಳಿಸುತ್ತಿಲ್ಲ ಎಂದು ಅಣಿಕಿಸಿ, ಜೀವ ಬಾಯಿಗೆ ಬಂದು ಬಿಟ್ಟಿತ್ತು. ಹೊಟ್ಟೆ ಬಳಿ ನೋಡಿದರೆ ರಕ್ತ ಇತ್ತು. ಅದು ಎಲ್ಲಿಂದ ಎಂದು ಗೊತ್ತಾಗುತ್ತಿರಲಿಲ್ಲ ಎಂದು ಗಾಬರಿಗೊಂಡಿದ್ದಾಗಿ ಅರವಿಂದ್ ದಿವ್ಯಾ ಉರುಡುಗಗೆ ಹೇಳಿದ್ದಾರೆ. ನಂತರ ಶಮಂತ್, ದಿವ್ಯಾ ಉರುಡುಗ ಮತ್ತು ಅರವಿಂದ್ ಇದೇ ವಿಚಾರವಾಗಿ ಕುಳಿತು ಚರ್ಚೆ ನಡೆಸುತ್ತಿರುವ ವೇಳೆ ನಾನು ಮೊದಲ ಬಾರಿಗೆ ಅರವಿಂದ್‍ರವರ ವಾಯ್ಸ್ ವೊಂದನ್ನು ಕೇಳಿದೆ, ಅದು ಹತ್ತು ಸೆಕೆಂಡ್, ಶೇಕಿಂಗ್ ವಾಯ್ಸ್ ಆಗಿತ್ತು ಎನುತ್ತಾರೆ. ಆಗ ಅರವಿಂದ್ ಹೌದು ಎಂದು ಹೇಳುತ್ತಾ ಕಣ್ಣಿನ ಅಂಚಲಿನಲ್ಲಿ ನೀರು ತುಂಬಿಕೊಳ್ಳುತ್ತಾರೆ. ಆಗ ದಿವ್ಯಾ ಉರುಡುಗ ಅರವಿಂದ್‍ರನ್ನು ತಬ್ಬಿಕೊಂಡು ಸಮಾದಾನ ಪಡಿಸುತ್ತಾರೆ.

    ದಿವ್ಯಾ ಅವರನ್ನು ಮನೆಯಲ್ಲಿ ಕವನ ಎಂದು ಕರೆಯುತ್ತಾರೆ. ಹೀಗಾಗಿ ಅರವಿಂದ್ ಶಾರ್ಟ್ ಆಗಿ ಬಿಗ್ ಬಾಸ್ ಮನೆಯಲ್ಲಿ ‘ಕೆ’ ಎಂದು ಕರೆಯುತ್ತಾರೆ. ಇದನ್ನೂ ಓದಿ:ನನ್ನ ಎದುರಾಕ್ಕೊಂಡವರು ಮಂಡಿ ಬಗ್ಗಿಸಿ ನಡೀಬೇಕು- ಶುಭಾ ವಿರುದ್ಧ ಮಂಜು ರಿವೇಂಜ್

  • ಡಿಯುಗೆ ಕಿಚ್ಚನ ಅಡ್ವೈಸ್ – ಗಳಗಳನೆ ಅತ್ತು ಕ್ಷಮೆ ಕೇಳಿದ ದಿವ್ಯಾ ಉರುಡುಗ

    ಡಿಯುಗೆ ಕಿಚ್ಚನ ಅಡ್ವೈಸ್ – ಗಳಗಳನೆ ಅತ್ತು ಕ್ಷಮೆ ಕೇಳಿದ ದಿವ್ಯಾ ಉರುಡುಗ

    ವಾರ ಮನೆಯ ಕ್ಯಾಪ್ಟನ್ ಆಗಿದ್ದ ದಿವ್ಯಾ ಉರುಡುಗ ಟಾಸ್ಕ್ ವೇಳೆ ತೆಗೆದುಕೊಂಡಿದ್ದ ಕೆಲವು ತಪ್ಪು ನಿರ್ಧಾರಗಳ ಕುರಿತಂತೆ ಕಿಚ್ಚ ಸುದೀಪ್, ದಿವ್ಯಾ ಉರುಡುಗಗೆ ತಿಳಿ ಹೇಳಿದ್ದಾರೆ.

    ಬಿಗ್‍ಬಾಸ್ ಪ್ರಕಾರ ಮನೆಯ ಕ್ಯಾಪ್ಟನ್ ಆಗಿ ದಿವ್ಯಾ ಉರುಡುಗರವರು ತೆಗೆದುಕೊಂಡ ನಿರ್ಧಾರಗಳು ಬಹಳ ಚೆನ್ನಾಗಿತ್ತು, ನೀವು ಯಾರಿಗೂ ಭೇದ-ಭಾವ ಮಾಡಲಿಲ್ಲ, ಯಾರ ಪರವಾಗಿಯೂ ಇರಲಿಲ್ಲ ಎಂಬುದು ಬಿಗ್‍ಬಾಸ್ ಅನಿಸಿಕೆ ಗುಡ್ ಜಾಬ್ ಎಂದು ಮೊದಲು ಶ್ಲಾಘಿಸುತ್ತಾರೆ. ನಂತರ ಕ್ಯಾಪ್ಟನ್ಸಿ ಟಾಸ್ಕ್ ವೇಳೆ ಅರವಿಂದ್ ಲಾಕರ್ ಬೀಗ ತೆಗೆದು ಅದನ್ನು ಲಾಕರ್ ಮೇಲೆಯೇ ಇಟ್ಟಿದ್ದರು. ಇದನ್ನು ಪ್ರಶಾಂತ್‍ರವರು ನಿಮಗೆ ತಿಳಿಸಿದಾಗ ನೀವು ಅದನ್ನು ಸರಿಪಡಿಸಿದ್ರಿ, ಆದರೆ ಇದೇ ತಪ್ಪನ್ನು ಮನೆಯ ಬೇರೆ ಸ್ಪರ್ಧಿಗಳು ಮಾಡಿದ್ದರೆ, ನಿಮ್ಮ ಪ್ರತಿಕ್ರಿಯೆ ಇಷ್ಟೇ ಸಿಂಪಲ್ ಇರುತ್ತಿತ್ತಾ? ನೀವು ವಾರ್ನಿಂಗ್ ಮಾಡುವ ಶೈಲಿ ಆಗ ಮಾತ್ರ ನಮಗೆ ಕಾಣಿಸಲಿಲ್ಲ. ಅದರಿಂದ ಇನ್ನೊಬ್ಬರು ಕ್ಯಾಪ್ಟನ್ ಆಗುವ ಅವಕಾಶ ತಪ್ಪಿತು ಎಂಬುದು ನಿಮಗೆ ಅರ್ಥವಾಗಲಿಲ್ವಾ ಎಂದು ಪ್ರಶ್ನಿಸಿದ್ದಾರೆ.

    ಮೊಟ್ಟೆ ಒಡೆಯುವ ಟಾಸ್ಕ್ ವೇಳೆ ಕ್ಯಾಪ್ಟನ್ ಆದವರು ರೂಲ್ಸ್ ಬುಕ್ ಓದಿದ ನಂತರ ಟಾಸ್ಕ್ ಆರಂಭಿಸಬೇಕು. ಆದರೆ ನೀವು ಅದನ್ನು ಮಾಡಲಿಲ್ಲ. ರಾತ್ರಿ ಒಂದು ರೂಲ್ಸ್ ಬೆಳಗ್ಗೆ ಒಂದು ರೂಲ್ಸ್ ಬದಲಾಯಿಸುವುದು ಎಷ್ಟು ಸರಿ. ರೂಲ್ಸ್ ಚೇಂಜ್ ಮಾಡುವುದು ತಪ್ಪಲ್ಲ. ಚೇಂಜ್ ಮಾಡಿದ ನಂತರ ಮನೆಯ ಎಲ್ಲ ಸ್ಪರ್ಧಿಗಳಿಗೂ ತಿಳಿಸುವುದು ಒಂದು ನಾಯಕಿಯ ಕರ್ತವ್ಯ ಎಂದು ತಿಳಿ ಹೇಳಿದ್ದಾರೆ.

    ಮಂಜು ಹಾಗೂ ಪ್ರಶಾಂತ್ ನಡುವೆ ನಡೆದ ಏಪ್ರನ್ ಕಿತ್ತಾಟ ವಿಚಾರವಾಗಿ ಮಾತನಾಡಿ, ಮಂಜು, ಪ್ರಶಾಂತ್, ದಿವ್ಯಾ ಉರುಡುಗ ನಿಮ್ಮ ಮೂವರ ವಾದ ಸರಿ ಕೂಡ ಇತ್ತು, ಜೊತೆಗೆ ಅಷ್ಟೇ ತಪ್ಪು ಕೂಡ ಇತ್ತು. ಆದರೆ ಸ್ಪಷ್ಟತೆ ಇರಲಿಲ್ಲ. ಆ ವೇಳೆ ದಿವ್ಯಾ ಉರುಡುಗರವರ ಪರಿಸ್ಥಿತಿ ನಮಗೆ ಅರ್ಥವಾಗುತ್ತದೆ. ಆದರೆ ಒಂದು ಬಾರಿ ಏಪ್ರನ್‍ನನ್ನು ನೀವು ಹಿಂಪಡೆದು ಇಬ್ಬರನ್ನು ಮೈನ್ ಡೋರ್‍ನಿಂದ ಮತ್ತೆ ಓಡಿಸಬಹುದಿತ್ತು ಎಂದಿದ್ದಾರೆ.

    ದಿವ್ಯಾ ಉರುಡುಗ ನಿಮ್ಮ ಕ್ಯಾಪ್ಟನ್ ಶಿಪ್ ಜರ್ನಿ ಬಹಳ ಚೆನ್ನಾಗಿ ಪ್ರಾರಂಭವಾಯಿತು. ನನ್ನ ಹಾಗೂ ಜನಗಳ ಅನಿಸಿಕೆ ಪ್ರಕಾರ ನಿಮ್ಮ ತೀರ್ಮಾನಗಳು ಬಹಳ ಚೆನ್ನಾಗಿತ್ತು. ಆದರೆ ಇಷ್ಟು ತಪ್ಪುಗಳು ನಡೆದಿದೆ. ಇದೆಲ್ಲವೂ ನಿಮ್ಮ ಗಮನದಲ್ಲಿರಲಿ. ನೀವು ಚೆನ್ನಾಗಿ ಆಡಿಲ್ಲ ಎಂದು ನಾನು ಎಲ್ಲಿಯೂ ಹೇಳಿಲ್ಲ. ನಿಮ್ಮ ನಿರ್ಧಾರಗಳು ತಪ್ಪಾಗಿದೆ ಎಂದು ಕೂಡ ಹೇಳುತ್ತಿಲ್ಲ. ಚೆನ್ನಾಗಿ ಕ್ಯಾಪ್ಟನ್ಸಿ ನಿಭಾಯಿಸುವ ಪ್ರಯತ್ನದಲ್ಲಿ ಕೆಲವು ಸ್ಪರ್ಧಿಗಳು ಹೇಳುವ ಮಾತನ ಕಡೆ ಗಮನ ನೀಡಬೇಕಾಗಿತ್ತು. ಇದರಿಂದ ನಿಮಗೆ ಸ್ಪಷ್ಟತೆ ಸಿಗುತ್ತಿತ್ತು. ಅಷ್ಟೇ. ತಪ್ಪಾಗಿದೆ ಎಂಬುದು ನಿಮಗೆ ಕೂಡ ಗೊತ್ತಾಗಲಿಲ್ಲ ಎನ್ನುವ ಕಾರಣಕ್ಕೆ ಇಲ್ಲಿ ಮಾತನಾಡುತ್ತಿದ್ದೇನೆ ಹೊರತು ನಿಮ್ಮ ತಪ್ಪನ್ನು ಎತ್ತಿ ತೋರಿಸುವ ಉದ್ದೇಶ ನಮಗೆ ಇಲ್ಲ ಎಂದು ತಿಳಿಸಿದ್ದಾರೆ.

    ಈ ವೇಳೆ ದಿವ್ಯಾ ಉರುಡುಗರವರು ನಾನು ನನಗೆ ಬೇಕಾದಂತೆ ರೂಲ್ಸ್ ಮಾಡಿಕೊಂಡೆ ಎಂದು ಪ್ರಶಾಂತ್‍ರವರು ಆರೋಪಿಸಿದ್ದಾರೆ. ಆದರೆ ನಾನು ಎಲ್ಲರಿಗೂ ಒಳ್ಳೆಯದಾಗಬೇಕೆಂದು ನಿರ್ಧಾರಗಳನ್ನು ತೆಗೆದುಕೊಂಡೆ. ಒಂದು ವೇಳೆ ನನ್ನಿಂದ ಏನಾದರೂ ತಪ್ಪಾಗಿದ್ದರೆ ಎಲ್ಲರಲ್ಲಿಯೂ ಕ್ಷಮೆ ಕೇಳುತ್ತಾನೆ ಎಂದು ಗಳಗಳನೇ ಅತ್ತಿದ್ದಾರೆ. ಇದನ್ನೂ ಓದಿ:ಮಾತುಗಳಿಗೂ ಸ್ಯಾನಿಟೈಸರ್ ಬಳಸಿ – ಪ್ರಶಾಂತ್, ಚಕ್ರವರ್ತಿಗೆ ಕಿಚ್ಚ ವಾರ್ನ್

  • ನೀನ್ ಯಾರು ಕೇಳೋಕೆ – ಸಂಬರಗಿ ವಿರುದ್ಧ ಅರವಿಂದ್ ಗರಂ

    ನೀನ್ ಯಾರು ಕೇಳೋಕೆ – ಸಂಬರಗಿ ವಿರುದ್ಧ ಅರವಿಂದ್ ಗರಂ

    ಬಿಗ್ ಬಾಸ್ ಮನೆಯಲ್ಲಿ ಒಂದಿಲ್ಲೊಂದು ವಿಚಾರಕ್ಕೆ ಪ್ರತಿ ದಿನ ಜಗಳ ಆಗುತ್ತಲೇ ಇದೆ. ಅದೇ ರೀತಿ ಇದೀಗ ಅರವಿಂದ್ ಹಾಗೂ ಪ್ರಶಾಂತ್ ಸಂಬರಗಿ ಮಧ್ಯೆ ನಡೆದಿದ್ದು, ಅರವಿಂದ್ ಸಂಬರಗಿಗೆ ಚಳಿ ಬಿಡಿಸಿದ್ದಾರೆ.

    ಹೌದು ಬಿಗ್ ಬಾಸ್ ದಿವ್ಯಾ ಉರುಡುಗ ಅವರ ಕ್ಯಾಪ್ಟೆನ್ಸಿ ಅವಧಿ ಮುಗಿದಿದೆ ಎನ್ನುತ್ತಲೇ ಎಲ್ಲರೂ ಚಪ್ಪಾಳೆ ತಟ್ಟಿದ್ದು, ಬಳಿಕ ಪ್ರಶಾಂತ್ ಸಂಬರಗಿ ದಿವ್ಯಾ ಉರುಡುಗ ಅವರ ಕೈ ಕುಲುಕಿದ್ದಾರೆ. ಈ ವೇಳೆ ಅರವಿಂದ್ ಅದು ಸುಳ್ಳು, ಇದನ್ನು ನಂಬಬೇಡ. ಹುಚ್ಚ ಬಂದರು, ಅವರು ಸ್ನೇಹಿತರಂತೆ ಚೆನ್ನಾಗಿದ್ದು, ಹಿಂದೆ ಮಾತನಾಡುತ್ತಾರೆ ಎಂದಿದ್ದಾರೆ. ಇದಕ್ಕೆ ಪ್ರಶಾಂತ್ ಸಂಬರಗಿ ಉತ್ತರಿಸಿ ನಾನು ನೇರವಾಗಿಯೇ ಮಾತನಾಡುತ್ತೇನೆ. ನಿನಗೆ ಸ್ಪೋರ್ಟಿವ್ ಸ್ಪಿರಿಟ್ ಇಲ್ಲ ಗುರು ಎಂದಿದ್ದಾರೆ.

    ನನ್ನ ಕ್ಯಾರೆಕ್ಟರ್ ಬಗ್ಗೆ ನೀವು ಮಾತನಾಡಬೇಕಿಲ್ಲ, ನಿಮ್ದು ನೀವು ನೋಡ್ಕೊಳಿ. ನಿಮ್ಮ ಮಾರ್ಗದರ್ಶನ ನಮಗೆ ಬೇಕಾಗಿಲ್ಲ. ನಿನ್ನ ಬಗ್ಗೆ ಎಲ್ಲರಿಗೂ ಗೊತ್ತು ಎಂದು ಹೇಳಿದ್ದಾರೆ. ನಿನಗೆ ಒಂದು ವಿಮರ್ಶೆಯನ್ನು ಸಹಿಸಿಕೊಳ್ಳಲು ಆಗುವುದಿಲ್ಲವೆಂದರೆ ಹೇಗೆ ಎಂದು ಸಂಬರಗಿ ಪ್ರಶ್ನಿಸಿದ್ದಾರೆ. ತಕ್ಷಣವೇ ಉತ್ತರಿಸಿದ ಅರವಿಂದ್ ಕ್ರಿಟಿಸಿಸಂ ತೆಗೆದುಕೊಳ್ಳುವುದು ನನಗೆ ಗೊತ್ತಿದೆ ಎಂದು ಹೇಳಿದ್ದಾರೆ.

    ಹುಚ್ಚ ಆಚೆ ಹೋಗಿ ವಿದ್ಯಾ ಉರುಡುಗ ಹೀಗೆ, ಹಾಗೆ ಎಂದು ಹೇಳುತ್ತಿದ್ದಾರೆ. ಇದಕ್ಕೆ ಸಂಬರಗಿ ಪ್ರತಿಕ್ರಿಯಿಸಿ, ಹೌದು ಫೇವರಿಟಿಸಂ ಮಾಡುತ್ತಿದ್ದೀಯಾ ಎಂದು ನಾನು ಹೇಳಿದೆ. ಎರಡು ವಿಚಾರದಲ್ಲಿ ಫೇವರಿಟಿಸಂ ಆಗಿತ್ತು ಎಂದು ಏರು ಧ್ವನಿಯಲ್ಲಿ ಹೇಳಿದ್ದಾರೆ. ತಕ್ಷಣ ಅರವಿಂದ್ ನೀನ್ಯಾರು ಕೇಳಲು, ನೀನೇನು ಬಿಗ್ ಬಾಸಾ? ಎಂದು ಜೋರಾಗಿ ಕೇಳಿದ್ದಾರೆ. ಅಲ್ಲದೆ ನೀನು ಬಿಗ್ ಬಾಸಾ ಎಂದು ಪ್ರಶಾಂತ್ ಮರು ಪ್ರಶ್ನಿಸಿದ್ದಾರೆ.

    ನೀನು ಆಟದಲ್ಲೇ ಇಲ್ಲ ನಿನ್ಯಾಗ್ಯಾಕೆ, ನೀನು ಅಡ್ವಕೇಟಾ ಅವರ ಪರ ಎಂದು ಪ್ರಶ್ನಿಸಿದ್ದಾರೆ. ಹೌದು ನಾನು ನ್ಯಾಯದ ಪರ ಮಾತನಾಡುವ ಅಡ್ವೋಕೇಟ್, ನೀನು ಮೋಸ ಮಾಡಿದ್ದೀಯಾ, ಎಷ್ಟು ಗೇಮ್‍ನಲ್ಲಿ ಚೀಟಿಂಗ್ ಮಾಡಿದ್ದೀಯಾ ಎಂದು ಹೇಳುತ್ತೇನೆ ಎಂದಿದ್ದಾರೆ. ಆಯ್ತು ಹೇಳು ಎಲ್ಲರೂ ನೋಡುತ್ತಿದ್ದಾರೆ, ಅಲ್ಲದೆ ಮುಂದೆ ನೀನು ನನ್ನ ಫ್ರೆಂಡ್ ಎಂದು ನೈಸ್ ಆಗಿ ಮಾತನಾಡುವುದು, ಬೇರೆಯವರ ಬಳಿ ಹೋಗಿ ನಮ್ಮ ವಿರುದ್ಧವೇ ಮಾತನಾಡುವುದು ಇದು ಯಾವ ರೀತಿಯ ಕನ್ನಿಂಗ್, ಮುಚ್ಚೋ ಎಂದು ಅರವಿಂದ್ ವಾರ್ನ್ ಮಾಡಿದ್ದಾರೆ.

    ಮುಚ್ಗೊಂಡು ಕೂರು ಎಂದು ಅರವಿಂದ್ ಹೇಳಿದ ತಕ್ಷಣ ನೀನ್ ಕೂರು ಎಂದು ಪ್ರಶಾಂತ್ ಹೇಳಿದ್ದಾರೆ. ಆಗ ಅರವಿಂದ್ ಕೂರಲ್ಲ ಏನ್ ಮಾಡ್ತಿಯಾ ಎಂದು ರಾಂಗ್ ಆಗಿದ್ದಾರೆ. ಆಗ ಸಂಬರಗಿ ಸಹ ನೀನ್ ಏನ್ ಮಾಡ್ತಿಯಾ ಎಂದು ಎದ್ದಿದ್ದಾರೆ. ಅರವಿಂದ್ ಸಹ ತರಕಾರಿ ಕಟ್ ಮಾಡುತ್ತಿದ್ದ ಚಾಕು ಕೆಳಗಿಟ್ಟು ಏನೂ ಎಂದು ಸಿಟ್ಟಿಂದ ಬಂದಿದ್ದಾರೆ. ಆಗ ರಘು ತಡೆದಿದ್ದಾರೆ. ಬಳಿಕ ಸಂಬರಗಿ ಏನು ಮಾಡ್ತಿಯಾ ಎಂದಿದ್ದಾರೆ, ನಾನು ಏನೂ ಮಾಡಲ್ಲ, ನೀನ್ ಹೇಳ್ತಿಯಲ್ಲ ಏನ್ ಮಾಡ್ತಿದಿಯಾ ಹೇಳು ಎಂದು ಜೋರಾಗಿಯೇ ಮಾತನಾಡಿದ್ದಾರೆ. ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪಿದ್ದರು. ಆದರೆ ಅಷ್ಟರಲ್ಲಿ ರಘು, ಹಾಗೂ ಶಮಂತ್ ತಡೆದಿದ್ದಾರೆ.

  • ಅರವಿಂದ್‍ಗೆ ಕಥೆ ಹೇಳಿದ ಸುದೀಪ್

    ಅರವಿಂದ್‍ಗೆ ಕಥೆ ಹೇಳಿದ ಸುದೀಪ್

    ಬಿಗ್‍ಬಾಸ್ ಮನೆಯಲ್ಲಿ ಒಬ್ಬೊರಿಗೊಬ್ಬರು ಜಗಳ ಮಾಡಿಕೊಂಡು ಮಾತುಬಿಟ್ಟಿದ್ದ ಅರವಿಂದ್ ಮತ್ತು ನಿಧಿ ಸುಬ್ಬಯ್ಯ ಅವರಿಗೆ ವಾರದ ಕಥೆ ಕಿಚ್ಚನ ಜೊತೆ ವಿಕೇಂಡ್ ಎಪಿಸೋಡ್‍ನಲ್ಲಿ ಸುದೀಪ್ ಅರವಿಂದ್‍ಗೆ ಕಥೆ ಮೂಲಕ ತಮ್ಮ ತಪ್ಪನು ತಿಳಿಸಿಕೊಟ್ಟಿದ್ದಾರೆ.

    ಅರವಿಂದ್ ಅವರಿಗೆ ಒಂದು ಕಥೆ ಹೇಳುತ್ತೇನೆ ಎಂದು ಮಾತು ಪ್ರಾರಂಭಿಸಿದ ಕಿಚ್ಚ, ಕಥೆ ಹೇಳುವ ಮೊದಲು ಒಂದು ಸನ್ನಿವೇಶ ಅರವಿಂದ್ ನಿಮಗೆ ತಿಳಿಸಿಕೊಡುತ್ತೇನೆ, ಮಂಜು ಅವರು ಅಡುಗೆ ಮನೆಯಲ್ಲಿದ್ದರು ಈ ವೇಳೆ ನಿಮ್ಮಲ್ಲಿ ಮಾತುಕತೆ ಆಗುತ್ತಿತ್ತು ಈ ಸಂದರ್ಭ ನೀವು ಮಂಜು ಅವರಿಗೆ ಒಂದು ಸಲಹೆ ನೀಡುತ್ತೀರಿ ಮಂಜು ನೀನು ಕ್ಯಾರೆಕ್ಟರ್ ಬಗ್ಗೆ ಮಾತನಾಡಬಾರದಿತ್ತು ಅಲ್ಲಿ ತಪ್ಪು ಮಾಡಿದ್ದೆ ಎಂದು ತಿಳಿಸಿದಾಗ ನಿಧಿ ಕೂಡ ಹೌದು ನಾವು ಮಾತನಾಡಿದ್ವಿ ಎಂದು ಅರವಿಂದ್ ಮತ್ತು ನಿಧಿ ಒಪ್ಪಿಕೊಂಡರು.

    ನಾನು ಒಂದು ಶೂಟಿಂಗ್‍ಗೆ ಹೋಗಿದ್ದೆ ಆ ಸಂದರ್ಭ ಪರಿಚಯದವರೊಬ್ಬರು ಮಾತುಕತೆ ನಡೆಸುತ್ತಿರುವಾಗ ನನಗೆ ನೀನು ಮುಚ್ಚುಕೊಂಡು ಇರಿ ಎಂದು ಹೇಳಿದರು. ಆಗ ನನ್ನ ಪಕ್ಕ ಇದ್ದ ಸೆಕ್ಯೂರಿಟಿ ಅವರು ಏನು ಹೇಳುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದರು. ಆಗ ನಾನು ಗೌರವ ಪೂರಕವಾಗಿ ಹೀಗೆ ಹೇಳಿದ್ದು ಎಂದರು. ನಂತರ ಸೆಕ್ಯೂರಿಟಿ ಅವರು ಒಂದು ಬಾರಿಸಿದರು. ಆಗ ನಾನು ಏನ್ ಮಾಡಿದ್ದೆ ಎಂದು ಕೇಳಿದೆ. ಆಗ ಸೆಕ್ಯೂರಿಟಿ ಅವರು ನಾನು ಗೌರವ ಪೂರಕವಾಗಿ ವಾಪಸ್ ಕೊಟ್ಟೆ ಎಂದು ಸುದೀಪ್ ಅವರು ಕಥೆ ಮುಗಿಸಿದರು.

    ಅರವಿಂದ್ ಮತ್ತು ನಿಧಿ ನೀವು ಹೇಳಿಕೊಟ್ಟ ಪಾಠವನ್ನು ನೀವೇ ಮರೆತಿದ್ದೀರಿ. ಅರವಿಂದ್ ಬೈಕ್ ರೇಸ್‍ನಲ್ಲಿ ಭಾರತವನ್ನು ಪ್ರತಿನಿಧಿಸುವವರು ಅವರಿಗೆ ನೀನು ಪ್ರಶಸ್ತಿ ಪಡೆದು ತೋರಿಸು ಎಂದು ಹೇಳಿದ್ದು ಸರಿಯಲ್ಲ. ನಿಧಿ ಅವರು ನಿಮ್ಮ ಕ್ಷೇತ್ರದಲ್ಲಿ ನೀವು ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿಲ್ಲ ಹೀಗಿದ್ದಾಗ. ಆ ರೀತಿ ಹೇಳಬಾರದಿತ್ತು. ಅರವಿಂದ್ ನೀವು ಕೂಡ ಆ ರೀತಿ ಹೇಳಬಾರದು ನೀವಿಬ್ಬರು ಕೂಡ ನಿಮ್ಮ, ನಿಮ್ಮ ಕ್ಷೇತ್ರದಲ್ಲಿ ಮುಖ್ಯಸ್ಥರೆ. ನೀವಿಬ್ಬರು ಕೂಡ ನಿಮ್ಮ ನಿಮ್ಮ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದೀರಿ ಇದು ನಮಗೆ ಹೆಮ್ಮೆ ಇದೆ ನೀವಿಬ್ಬರು ಕೂಡ ನೇರವಾಗಿ ಮಾತನಾಡುವುದರಿಂದಾಗಿ ಈ ರೀತಿಯ ತಪ್ಪಾಗಿದೆ. ಹಾಗಾಗಿ ಇಬ್ಬರೂ ಕೂಡ ನಿಮ್ಮ ತಪ್ಪುಗಳನ್ನು ತಿಳಿದುಕೊಂಡು ಮಾತನಾಡಿ ಎಂದು ಸಲಹೆ ನೀಡಿದರು. ಇದನ್ನೂ ಓದಿ: ಮೊದಲ ಮಹಿಳಾ ಕ್ಯಾಪ್ಟನ್ ಡಿಯುಗೆ ಫುಲ್ ಸರ್ಪ್ರೈಸ್

    ಸುದೀಪ್ ಅವರು ನೀಡಿದ ಸಲಹೆಯನ್ನು ಪಡೆದುಕೊಂಡ ಅರವಿಂದ್ ಮತ್ತು ನಿಧಿ ಅವರು ಒಬ್ಬರಿಗೊಬ್ಬರು ಕ್ಷಮೆ ಕೇಳುತ್ತಾ ಮತ್ತೆ ಮಾತನಾಡಲು ಪ್ರಾರಂಭಿಸಿದ್ದಾರೆ.

  • ನಾಳೆ ಬೆಳಗ್ಗೆ ಆ್ಯಪಲ್ ಪಲ್ಯ ಮಾಡೋಣ: ಮಂಜು

    ನಾಳೆ ಬೆಳಗ್ಗೆ ಆ್ಯಪಲ್ ಪಲ್ಯ ಮಾಡೋಣ: ಮಂಜು

    ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ವಿಜೇತರಾಗಿ ಬಿಗ್‍ಬಾಸ್ ಸೀಸನ್-8 ರಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಸದಸ್ಯರಲ್ಲಿ ದಿವ್ಯಾ ಉರುಡುಗ ಕ್ಯಾಪ್ಟನ್ ಆಗಿದ್ದು, ಮನೆಯ ಪುರುಷರಿಗೆ ಕಿಚನ್ ಏರಿಯಾದ ಜವಾಬ್ದಾರಿ ನಿಭಾಯಿಸುವಂತೆ ತಿಳಿಸಿದ್ದಾರೆ.

    ಇಷ್ಟು ದಿನ ದೊಡ್ಮನೆಯಲ್ಲಿ ಅಡುಗೆ ಮಾಡುವ ಕೆಲಸ ಹೆಣ್ಣು ಮಕ್ಕಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಈ ವಾರ ಕ್ಯಾಪ್ಟನ್ ಆಗಿರುವ ದಿವ್ಯಾ ಉರುಡುಗ ವಿಶೇಷವಾಗಿ ಮನೆಯ ಎಲ್ಲಾ ಸದಸ್ಯರಿಗೆ ಅಡುಗೆ ಮಾಡಲು ಪುರುಷ ಸದಸ್ಯರಿಗೆ ಸೂಚಿಸಿದ್ದಾರೆ.

    ಅದರಂತೆ ಈ ವಿಚಾರವಾಗಿ ಮಂಜು ಹಾಗೂ ಅರವಿಂದ್ ಕಿಚನ್‍ನಲ್ಲಿ ಚರ್ಚೆ ನಡೆಸಿದ್ದಾರೆ. ಈ ವಾರದಲ್ಲಿ ನೀನೆಷ್ಟು ಅಡುಗೆ ಕಲಿಯುತ್ತಿಯಾ ಹಾಗೂ ನಾನು ಎಷ್ಟು ಕಲಿಯುತ್ತೀನಿ ನೋಡೋಣ. ಅಲ್ಲದೇ ಮುಂದಿನ ವಾರ ಕೂಡ ನಾವೇ ಮಾಡಬೆಕಾಗುತ್ತೇನೋ ನನಗೆ ಅದು ಬೇರೆ ಟೆನ್ಷನ್ ಆಗುತ್ತಿದೆ ಎಂದು ಮಂಜು ಅರವಿಂದ್‍ಗೆ ಹೇಳುತ್ತಾರೆ.

    ನಂತರ ನಾವು ಅಡುಗೆಯ ರುಚಿಯನ್ನು ಸ್ವಲ್ಪ ಕಡಿಮೆ ಮಾಡೋಣ ಇಲ್ಲ ಅಂದರೆ ಲಾಕ್ ಆಗಿ ಬಿಡುತ್ತೇವೆ ಎಂದು ಮಂಜು ಅಂದಾಗ, ರುಚಿ ಏನಾದರೂ ಜಾಸ್ತಿಯಾಯಿತು ಎಂದರೆ ಹುಳಿ ಹಿಂಡಿ ಬೀಡೋಣ ಎಂದು ಅರವಿಂದ್ ಹೇಳುತ್ತಾರೆ.

    ಎಲ್ಲರೂ ಟೆಸ್ಟಿಂಗ್ ಪೌಡರ್ ಕೇಳುತ್ತಾರೆ ಆದರೆ ನಾವು ಟೆಸ್ಟ್ ಲೇಸ್ ಪೌಡರ್ ಕೇಳೋಣ. ನಾವು ಮಾಡುವುದು ಚೆನ್ನಾಗಿಯೇ ಇರುತ್ತದೆ. ಹಾಗಾಗಿ ಟೆಸ್ಟ್ ಲೇಸ್ ಪೌಡರ್ ಹಾಕುವುದು ಉತ್ತಮ. ನಾಳೆ ಬೆಳಗ್ಗೆ ಆ್ಯಪಲ್ ಪಲ್ಯ ಮಾಡೋಣ ಎಂದು ಮಂಜು ಹೇಳುತ್ತಾರೆ. ಆಗ ದಿವ್ಯಾ ಉರುಡಗ, ಅರವಿಂದ್ ಜೋರಾಗಿ ನಗುತ್ತಾರೆ.

  • ತಂಡದ ಸದಸ್ಯರ ಮುಂದೆ ಗಳಗಳನೆ ಅತ್ತ ಅರವಿಂದ್

    ತಂಡದ ಸದಸ್ಯರ ಮುಂದೆ ಗಳಗಳನೆ ಅತ್ತ ಅರವಿಂದ್

    ಬಿಗ್‍ಬಾಸ್ ಮನೆಯಲ್ಲಿ ಗ್ರೂಪ್ ಟಾಸ್ಕ್ ಜಿದ್ದಾಜಿದ್ದಿನಲ್ಲಿ ನಡೆಯುತ್ತಿದೆ. ಮಂಜು ಮತ್ತು ಅರವಿಂದ್ ಅವರು ಎರಡು ತಂಡದ ಕ್ಯಾಪ್ಟನ್‍ಗಳಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಈ ನಡುವೆ ಅರವಿಂದ್ ತಮ್ಮ ತಂಡದ ಸದಸ್ಯರೊಂದಿಗೆ ಮಾತನಾಡುತ್ತಿರುವಾಗ ಗಳಗಳನೆ ಅತ್ತಿದ್ದಾರೆ.

    ಅರವಿಂದ್ ತಂಡದ ಸದಸ್ಯೆ ದಿವ್ಯಾ ಉರುಡುಗ, ಗ್ರೂಪ್ ಟಾಸ್ಕ್‍ನಲ್ಲಿ ನಾವು ಜಯಗಳಿಸುವ ಸಾಕಷ್ಟು ಅವಕಾಶಗಳಿದ್ದರೂ ಕೂಡ ನಾವು ಸೋತಿದ್ದು ನನಗೆ ಬೇಸರವಾಯಿತು. ಅದೇ ರೀತಿ ಅರವಿಂದ್ ಮತ್ತು ನಿಧಿ ಜಗಳದಲ್ಲಿ ಅರವಿಂದ್ ನಿಧಿಗೆ ನೀನು ಮುಚ್ಚುಕೊಂಡು ಹೋಗು ಅಂದಿದ್ದು ನನಗೆ ತಪ್ಪು ಎಂದು ಅನಿಸಿತು. ನಾವು ಗೆಲ್ಲುವಂತಹ ಟಾಸ್ಕ್ ಗಳನ್ನು ಸೋತಿದ್ದೇವೆ. ನಮ್ಮಲ್ಲಿ ಹೊಂದಾಣಿಕೆಯ ಕೊರತೆ ಕಾಡುತ್ತಿದೆ ಎಂದು ನನಗೆ ಅನಿಸುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ವೈಷ್ಣವಿ, ನಾವು ಗೆಲ್ಲುತ್ತೇವೆ ಎಂದು ಗೊತ್ತಿದ್ದರೂ ಕೂಡ ನಾವು ಸೋತಿದ್ದು ಬೇಸರವಾಗಿದೆ. ಮುಂದಿನ ಟಾಸ್ಕ್ ಗಳಲ್ಲಿ ಇದನ್ನು ಮರುಕಳಿಸುವುದು ಬೇಡ ಎಂದರು. ಇದಕ್ಕೆ ಶಮಂತ್ ಮತ್ತು ಇತರ ಸದಸ್ಯರು ಕೂಡ ಒಪ್ಪಿಗೆ ಸೂಚಿಸಿದ್ದಾರೆ. ಇದನ್ನೂ ಓದಿ: ನಾ ನಿನ್ನ ಮರೆಯಲಾರೆ ರೀತಿ ತೆರೆಮೇಲೆ ಬರಲಿದ್ಯಾಂತೆ ಅರ್ವಿಯಾ ಸಿನಿಮಾ

    ವೈಷ್ಣವಿ ಮಾತಿನ ಬಳಿಕ ಮತ್ತೆ ಮಾತಿಗಿಳಿದ ದಿವ್ಯಾ, ನಿಧಿ ಬಗ್ಗೆ ಆ ಸಮಯದಲ್ಲಿ ಕೆಪಿ ಹೇಳಿದ ಪದ ನನಗೆ ಸರಿ ಅನಿಸಲಿಲ್ಲ ಎಂದರು. ಇದಕ್ಕೆ ಸಂಬರಗಿ, ಕೆಪಿ ಜೋಕ್ ಮಾಡಿದಾಗ ಹಲವು ಬಾರಿ ಮುಚ್ಚುಕೊಂಡು ಇರು ಅಂತ ಹೇಳಿದ್ದಾನೆ. ನಾನು ಹೇಳಿದ್ದೇನೆ ಇದು ಸಾಮಾನ್ಯವಾಗಿ ಮಾತಿನಲ್ಲಿ ಬರುವ ಪದ ಎಂದಿದ್ದಾರೆ. ಇದನ್ನು ಕೇಳಿದ ದಿವ್ಯಾ ಅದು ಬಿಡಿ ಗ್ರೂಪ್ ಟಾಸ್ಕ್ ಸಮಯದಲ್ಲಿ ಆ ಟೈಮ್‍ಗೆ ಅರವಿಂದ್ ಹೇಳಿದ ಮಾತು ಸರಿಯಲ್ಲ ಎಂದರು. ಈ ಮಾತನ್ನು ಕೇಳಿಸಿಕೊಂಡ ಅರವಿಂದ್ ಗಳಗಳನೆ ಅತ್ತರು ಮತ್ತೆ ದಿವ್ಯಾ ಅವರನ್ನು ಸಮಾಧಾನ ಪಡಿಸಿದರು.

    ಇದಾದ ಬಳಿಕ ರಿಂಗರಣ ಆಟದಲ್ಲಿ ತಂಡ ಮಾಡಿದ ತಪ್ಪನ್ನು ಹೇಳಿಕೊಂಡು ಪರಸ್ಪರ ಚರ್ಚೆ ನಡೆಸಿದರು. ಮತ್ತೆ ತಂಡದ ಸದಸ್ಯರು ಇದನೆಲ್ಲ ಬಿಟ್ಟುಬಿಡಿ ಮುಂದಿನ ಟಾಸ್ಕ್‍ನಲ್ಲಿ ಉತ್ತಮವಾಗಿ ಆಡಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.