Tag: Aravind Kuplikar

  • ಶಿಲ್ಪಾ ಮುಡ್ಬಿ ದನಿಯಲ್ಲಿ ಮ್ಯಾಜಿಕ್ ಕ್ರಿಯೇಟ್ ಮಾಡಿದ ಪುಗ್ಸಟ್ಟೆ ಲೈಫು ಸಾಂಗ್ -‘ಖಾಲಿ ಖಾಲಿ’ ಹಾಡು ವೈರಲ್

    ಶಿಲ್ಪಾ ಮುಡ್ಬಿ ದನಿಯಲ್ಲಿ ಮ್ಯಾಜಿಕ್ ಕ್ರಿಯೇಟ್ ಮಾಡಿದ ಪುಗ್ಸಟ್ಟೆ ಲೈಫು ಸಾಂಗ್ -‘ಖಾಲಿ ಖಾಲಿ’ ಹಾಡು ವೈರಲ್

    ಬೆಂಗಳೂರು: ಬಿಡುಗಡೆಯ ಸನಿಹದಲ್ಲಿರುವ ಸಂಚಾರಿ ವಿಜಯ್ ಅಭಿನಯದ ಚಿತ್ರ ‘ಪುಗ್ಸಟ್ಟೆ ಲೈಫು’ ಒಂದೊಂದೇ ಸ್ಯಾಂಪಲ್ ಗಳ ಮೂಲಕ ದಿನದಿಂದ ದಿನಕ್ಕೆ ಪ್ರೇಕ್ಷಕರನ್ನು ಸೆಳೆಯುತ್ತಿದೆ ಚಿತ್ರತಂಡ. ಇಂಟ್ರಸ್ಟಿಂಗ್ ಟ್ರೇಲರ್ ಪ್ರೇಕ್ಷಕರ ಭರಪೂರ ಮೆಚ್ಚುಗೆಗೆ ಪಾತ್ರವಾದ ಬೆನ್ನಲ್ಲೆ ಚಿತ್ರದ ಒಂದೊಂದೇ ಹಾಡುಗಳು ಕೂಡ ಕೇಳುಗರ ಮನಸ್ಸಿಗೆ ಹತ್ತಿರವಾಗುತ್ತಿವೆ. ಇದರ ಬೆನ್ನಲ್ಲೇ ಚಿತ್ರದ ಮತ್ತೊಂದು ಮೀನಿಂಗ್ ಫುಲ್ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

    ಚಿತ್ರದ ‘ಖಾಲಿ ಖಾಲಿಯಾಗಿದೆ’ ಹಾಡಿನ ಲಿರಿಕಲ್ ವೀಡಿಯೋ ಸಾಂಗ್ ಇಂದು ಬಿಡುಗಡೆಯಾಗಿದೆ. ಕೆ.ಕಲ್ಯಾಣ್ ಅರ್ಥಗರ್ಭಿತ ಮನಮುಟ್ಟುವ ಸಾಹಿತ್ಯ ಈ ಹಾಡಿಗಿದೆ. ವಾಸು ದೀಕ್ಷಿತ್ ಸಂಗೀತ ಸಂಯೋಜನೆ ಕೂಡ ಅಷ್ಟೇ ಸೊಗಸಾಗಿದ್ದು, ಖ್ಯಾತ ಜನಪದ ಗಾಯಕಿ ಶಿಲ್ಪಾ ಮುಡ್ಬಿ ದನಿ ಮ್ಯಾಜಿಕ್ ಕ್ರಿಯೇಟ್ ಮಾಡಿದೆ. ಸದ್ಯಕ್ಕಂತು ಈ ಹಾಡನ್ನು ಎಲ್ಲರೂ ರಿಪೀಟ್ ಮೂಡ್ ನಲ್ಲಿ ಕೇಳೋಕೆ ಶುರುವಿಟ್ಟಿದ್ದಾರೆ. ಇದನ್ನೂ ಓದಿ: ಫೋರ್ ವಾಲ್ಸ್’ ಚಿತ್ರದ ಮೊದಲ ಹಾಡು ರಿಲೀಸ್ – ಪ್ರೀತಿ ನಿವೇದನೆಯಲ್ಲಿ ಬ್ಯುಸಿಯಾದ ಅಚ್ಯುತ್ ಕುಮಾರ್

    ಅರವಿಂದ್ ಕುಪ್ಳೀಕರ್ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಡಾರ್ಕ್ ಹ್ಯೂಮರ್ ಕಥಾಹಂದರದ ಚಿತ್ರ ‘ಪುಗ್ಸಟ್ಟೆ ಲೈಫು’. ಚಿತ್ರದಲ್ಲಿ ಸಂಚಾರಿ ವಿಜಯ್ ಮತ್ತೊಮ್ಮೆ ಹೊಸ ಅವತಾರವೆತ್ತಿದ್ದು, ಮುಸ್ಲಿಂ ಯುವಕನಾಗಿ ಬೀಗ ರಿಪೇರಿ ಮಾಡುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೆಳ ಮಧ್ಯಮ ವರ್ಗದ ಯುವಕನೊಬ್ಬ ಹಣದ ಹಿಂದೆ ಬಿದ್ದರೆ ಎದುರಾಗಬಹುದುದಾದ ಸಮಸ್ಯೆಗಳು, ಅಧಿಕಾರದಲ್ಲಿರುವವರು ಅಮಾಯಕರನ್ನು ತಮ್ಮ ಕೆಲಸಕ್ಕಾಗಿ ಬಳಸಿಕೊಳ್ಳುವ ರೀತಿ ಇವೆಲ್ಲವನ್ನು ಸಿನಿಮ್ಯಾಟಿಕ್ ಆಗಿ ಒಂದೊಳ್ಳೆ ಸಂದೇಶವನ್ನಿಟ್ಟಿಕೊಂಡು ಸಿನಿಮಾ ಹೆಣೆದಿದ್ದಾರೆ ನಿರ್ದೇಶಕರು. ಇದನ್ನೂ ಓದಿ: ಕೊನೆಗೂ ತನ್ನ ಆಸೆ ನೆರವೇರಿಸಿಕೊಂಡ ವಿಜಯ್ ದೇವರಕೊಂಡ

    ಚಿತ್ರದಲ್ಲಿ ಭರತ ನಾಟ್ಯ ಕಲಾವಿದೆ ಮಾತಂಗಿ ಪ್ರಸನಾ ನಾಯಕನಟಿಯಾಗಿ ಲಾಯರ್ ಪಾತ್ರದಲ್ಲಿ ನಟಿಸಿದ್ದು, ಅಚ್ಯುತ್ ಕುಮಾರ್, ರಂಗಾಯಣ ರಘು ತಾರಾಬಳಗದಲ್ಲಿದ್ದಾರೆ. ಬಹುತೇಕ ಎಲ್ಲಾ ಕಲಾವಿದರು ರಂಗಭೂಮಿ ಹಿನ್ನೆಲೆಯುಳ್ಳವರೇ ನಟಿಸಿರೋದು ಈ ಚಿತ್ರದ ವಿಶೇಷ ಸಂಗತಿ. ಸರ್ವಸ್ವ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣವಾಗಿದ್ದು, ಅಧ್ವೈತ್ ಗುರುಮೂರ್ತಿ ಕ್ಯಾಮೆರಾ ನಿರ್ದೇಶನ, ಪೂರ್ಣಚಂದ್ರ ತೇಜಸ್ವಿ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ.

    ಚಿತ್ರದ ಟ್ರೇಲರ್, ಹಾಡುಗಳಿಗೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ದೊರಕ್ಕಿದ್ದು, ಚಿತ್ರರಂಗದ ಗಣ್ಯರು ಕೂಡ ಸಿನಿಮಾ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿರುವ ಈ ಚಿತ್ರ ಸೆಪ್ಟೆಂಬರ್ 24ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಇದನ್ನೂ ಓದಿ: ಪ್ರಭಾಸ್, ದೀಪಿಕಾ ಪಡುಕೋಣೆಯ ಪ್ರಾಜೆಕ್ಟ್ ಕೆ ಚಿತ್ರೀಕರಣ ಆರಂಭ ಯಾವಾಗ?

  • ‘ಪುಕ್ಸಟ್ಟೆ ಲೈಫು’ ಚಿತ್ರದ ಟ್ರೇಲರ್ ಔಟ್ – ಸಂಚಾರಿ ವಿಜಯ್ ಹೊಸ ಅವತಾರ ಕಂಡು ಬೆರಗಾದ ಚಿತ್ರರಸಿಕರು

    ‘ಪುಕ್ಸಟ್ಟೆ ಲೈಫು’ ಚಿತ್ರದ ಟ್ರೇಲರ್ ಔಟ್ – ಸಂಚಾರಿ ವಿಜಯ್ ಹೊಸ ಅವತಾರ ಕಂಡು ಬೆರಗಾದ ಚಿತ್ರರಸಿಕರು

    ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಂಚಾರಿ ವಿಜಯ್ ನಟನೆಯ ಬಹು ನಿರೀಕ್ಷಿತ ಚಿತ್ರ ‘ಪುಕ್ಸಟ್ಟೆ ಲೈಫು ಪುರುಸೊತ್ತೇ ಇಲ್ಲ’. ಅರವಿಂದ್ ಕುಪ್ಳಿಕರ್ ನಿರ್ದೇಶನವಿರುವ ಚಿತ್ರದ ಇಂಟ್ರಸ್ಟಿಂಗ್ ಟ್ರೇಲರ್ ಇಂದು ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ. ಎಂದಿನಂತೆ ಈ ಚಿತ್ರದಲ್ಲೂ ಹೊಸ ಪಾತ್ರಕ್ಕೆ ಸಂಚಾರಿ ವಿಜಯ್ ಜೀವ ತುಂಬಿದ್ದು, ಬೀಗ ರಿಪೇರಿ ಮಾಡುವ ಮುಸ್ಲಿಂ ಯುವಕನ ಪಾತ್ರದಲ್ಲಿ ಅಭಿನಯಿಸಿದ್ದಾರೆ.

    ಟ್ರೇಲರ್ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟುಹಾಕಿದೆ. ಸಂಚಾರಿ ವಿಜಯ್ ಪೊಲೀಸ್ ಜೊತೆ ಸೇರಿ ಕಳ್ಳತನಕ್ಕೆ ಇಳಿಯುವ ದೃಶ್ಯ ಟ್ರೇಲರ್ ನಲ್ಲಿದೆ. ಪೊಲೀಸ್ ಇನ್‍ಸ್ಪೆಕ್ಟರ್ ಪಾತ್ರದಲ್ಲಿ ಅಭಿನಯಿಸಿರುವ ಅಚ್ಯುತ್ ಕುಮಾರ್ ಕೂಡ ಕಳ್ಳತನದ ದಾರಿ ಹಿಡಿಯುವ ದೃಶ್ಯಗಳು ಕ್ಯೂರಿಯಾಸಿಟಿಯನ್ನು ಹೆಚ್ಚಿಸಿದ್ದು, ಚಿತ್ರದಲ್ಲೇನೋ ಹೊಸತನವಿದೆ ಎನ್ನುವುದು ಖಾತ್ರಿಯಾಗಿದೆ. ಸಿಸಿಬಿ ಅಧಿಕಾರಿಯಾಗಿ ರಂಗಾಯಣ ರಘು ಪಾತ್ರವನ್ನು ರಿವೀಲ್ ಮಾಡಲಾಗಿದೆ. ಒಟ್ನಲ್ಲಿ, ಒಂದಿಷ್ಟು ಸಂಗತಿಗಳು ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿಸಿದ್ದು ‘ಪುಕ್ಸಟ್ಟೆ ಲೈಫು’ ಪ್ರಪಂಚದಲ್ಲಿ ನಿರ್ದೇಶಕರು ಏನೇನು ಸೃಷ್ಟಿಸಿದ್ದಾರೆ ಅನ್ನೋದಕ್ಕೆ ಸಿನಿಮಾ ಬಿಡುಗಡೆಯವರೆಗೆ ಕಾಯಲೇಬೇಕು.

    ಮಧ್ಯಮ ವರ್ಗದ ವ್ಯಕ್ತಿ ಹಣದ ಹಿಂದೆ ಬಿದ್ದರೆ ಯಾವೆಲ್ಲ ರೀತಿಯ ಸಮಸ್ಯೆಗಳು ಶುರುವಾಗಬಹುದು ಎನ್ನುವುದು ಚಿತ್ರದ ಒನ್ ಲೈನ್ ಕಹಾನಿ. ವಿಜಯ್ ಕೆಳ ಮಧ್ಯಮ ವರ್ಗದ ಮುಸ್ಲಿಂ ಹುಡುಗನಾಗಿ ಬೀಗ ರಿಪೇರಿ ಮಾಡುವ ಪಾತ್ರದಲ್ಲಿ ಬಣ್ಣಹಚ್ಚಿದ್ದಾರೆ. ವಿಜಯ್ ಹೊಸ ಅವತಾರವನ್ನು ತೆರೆ ಮೇಲೆ ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಕಾಯುತ್ತಿದ್ದಾರೆ. ರಂಗಭೂಮಿ ಕಲಾವಿದರಾದ ಅರವಿಂದ ಕುಪ್ಳಿಕರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಮೊದಲ ಸಿನಿಮಾ ಇದು. ಡಾರ್ಕ್ ಹ್ಯೂಮರ್ ಕಥಾಹಂದರ ಒಳಗೊಂಡಿರುವ ಈ ಚಿತ್ರ ಸೆಪ್ಟೆಂಬರ್ ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

    ಮಾತಂಗಿ ಪ್ರಸನಾ ಚಿತ್ರದಲ್ಲಿ ನಾಯಕಿ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಉಳಿದಂತೆ ಅಚ್ಯುತ್ ಕುಮಾರ್, ರಂಗಾಯಣ ರಘು ಸೇರಿದಂತೆ ಹಲವು ರಂಗಭೂಮಿ ಕಲಾವಿದರು ತಾರಾಬಳಗದಲ್ಲಿದ್ದಾರೆ. ಅಧ್ವೈತ್ ಗುರುಮೂರ್ತಿ ಕ್ಯಾಮೆರಾ ವರ್ಕ್, ವಾಸು ದೀಕ್ಷಿತ್ ಸಂಗೀತ ಸಂಯೋಜನೆ, ಪೂರ್ಣಚಂದ್ರ ತೇಜಸ್ವಿ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ಸರ್ವಸ್ವ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ನಾಗರಾಜ್ ಸೋಮಯಾಜಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದನ್ನೂ ಓದಿ: ಸಂಚಾರಿ ವಿಜಯ್‍ಗೆ ಅಮೆರಿಕದ ಥಿಯೇಟರ್ ನಿಂದ ಗೌರವ

  • ಅಯ್ಯಪ್ಪನ ಭಜನೆ ಮೂಲಕ ‘ಪುಕ್ಸಟ್ಟೆ ಲೈಫ್’ ಚಿತ್ರದ ಪ್ರಚಾರ ಕಾರ್ಯ ಶುರು

    ಅಯ್ಯಪ್ಪನ ಭಜನೆ ಮೂಲಕ ‘ಪುಕ್ಸಟ್ಟೆ ಲೈಫ್’ ಚಿತ್ರದ ಪ್ರಚಾರ ಕಾರ್ಯ ಶುರು

    ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅಭಿನಯದ ‘ಪುಕ್ಸಟ್ಟೆ ಲೈಫ್’ ಚಿತ್ರದ ಸ್ವಾಮಿಯೇ ಶರಣಂ ಅಯ್ಯಪ್ಪ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ. ವಸು ದೀಕ್ಷಿತ್, ಅಧಿತಿ ಸಾಗರ್ ಹಾಡಿರುವ ಈ ಹಾಡು ಟ್ರೆಂಡಿಯಾಗಿದ್ದು ಅಯ್ಯಪ್ಪನ ಭಜನೆ ಮಾಡುತ್ತ ಚಿತ್ರದ ಪ್ರಚಾರ ಕಾರ್ಯವನ್ನು ಚಿತ್ರತಂಡ ಶುರುಮಾಡಿದೆ.

    ರಂಗಭೂಮಿ ಕಲಾವಿದರಾದ ಅರವಿಂದ ಕುಪ್ಳೀಕರ್ ‘ಪುಕ್ಸಟ್ಟೆ ಲೈಫ್’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾ ನಿರ್ದೇಶನ ಇವ್ರ ಮೊದಲ ಪ್ರಯತ್ನ. ಸಂಚಾರಿ ವಿಜಯ್ ಚಿತ್ರದಲ್ಲಿ ಮುಸ್ಲಿಂ ಹುಡುಗನ ಪಾತ್ರದಲ್ಲಿ ಬಣ್ಣಹಚ್ಚಿದ್ದಾರೆ. ಪಾತ್ರಕ್ಕಾಗಿ ತೂಕ ಕೂಡ ಇಳಿಸಿಕೊಂಡಿರುವ ವಿಜಯ್ ಈ ಮೂಲಕ ತಾವು ಯಾವ ಪಾತ್ರ ಕೊಟ್ಟರು ನಟಿಸೋಕೆ ಸೈ ಅನ್ನೋದನ್ನ ಮತ್ತೆ ಪ್ರೂ ಮಾಡಿದ್ದಾರೆ.

    ಅಚ್ಯುತ್ ಕುಮಾರ್, ರಂಗಾಯಣ ರಘು, ಮಾತಂಗಿ ಪ್ರಸನ್ನ ಚಿತ್ರದಲ್ಲಿ ನಟಿಸಿದ್ದಾರೆ. ವಸು ದೀಕ್ಷಿತ್ ಸಂಗೀತ ನಿರ್ದೇಶನ ಪುಕ್ಸಟ್ಟೆ ಲೈಫ್ ಚಿತ್ರಕ್ಕಿದೆ. ಸದ್ಯ ಫಸ್ಟ್ ಲಿರಿಕಲ್ ಹಾಡಿನ ಮೂಲಕ ಪ್ರಚಾರ ಕಾರ್ಯ ಆರಂಭಿಸಿರುವ ಪುಕ್ಸಟ್ಟೆ ಲೈಫ್ ಸದ್ಯದಲ್ಲೇ ಚಿತ್ರದ ಬಗ್ಗೆ ಇನ್ನಷ್ಟು ಅಪ್‍ಡೇಟ್ಸ್ ನೀಡಲಿದೆ.