Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k

Join our Whatsapp group by clicking the below link
https://chat.whatsapp.com/E6YVEDajTzH06LOh77r25k

ಓಟಿಟಿಯಲ್ಲಿ ಬಿಗ್ ಬಾಸ್(Bigg boss) ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಓಟಿಟಿಯ ಮೊದಲ ಸೀಸನ್ನ ಟಾಪರ್ ಆಗಿ ರೂಪೇಶ್ ಶೆಟ್ಟಿ ಹೊರಹೊಮ್ಮಿದ್ದರು. ಈಗ ಟಿವಿ ಬಿಗ್ ಬಾಸ್ಗೆ ಕೌಂಟ್ ಡೌನ್ ಶುರುವಾಗಿದೆ. ಹೊಸ ಸ್ಪರ್ಧಿಗಳ ಜತೆ ಹಳೆಯ ಸೀಸನ್ ಸ್ಪರ್ಧಿಗಳು ಕೂಡ ಭಾಗವಹಿಸುತ್ತಿರುವುದು ಸೀಸನ್ 9ರ ಮತ್ತೊಂದು ಹೈಲೈಟ್ ಆಗಿದೆ. ಈ ಹೊಸ ಸೀಸನ್ನಲ್ಲಿ ಬಿಗ್ ಬಾಸ್ ಜೋಡಿ ದಿವ್ಯಾ ಉರುಡುಗ (Divya Uruduga)n ಮತ್ತು ಅರವಿಂದ್ (Aravind) ಭಾಗವಹಿಸಲಿದ್ದಾರೆ ಎಂಬು ಸುದ್ದಿ ಹರಿದಾಡುತ್ತಿದೆ.

ಕಿಚ್ಚ ಸುದೀಪ್ (Kiccha Sudeep) ನಿರೂಪಣೆಯಲ್ಲಿ ಇದೇ ಸೆ.24ಕ್ಕೆ ಬಿಗ್ ಬಾಸ್ ಟಿವಿ ಪರದೆಗೆ ಬರಲು ಕೌಂಟ್ ಡೌನ್ ಶುರುವಾಗಿದೆ. ಸೀಸನ್ 9 ಬಿಗ್ ಬಾಸ್(Bigg Boss) ಈ ಬಾರಿ ಸಾಕಷ್ಟು ವಿಶೇಷತೆಗಳಿಂದ ಕೂಡಿದೆ. ಇದೇ ಮೊದಲ ಬಾರಿಗೆ ಹೊಸ ಸ್ಪರ್ಧಿಗಳ ಜತೆ ಈಗಾಗಲೇ ಬಿಗ್ ಬಾಸ್ನಲ್ಲಿ ಕಾಣಿಸಿಕೊಂಡ ಹಳೆಯ ಸ್ಪರ್ಧಿಗಳು ಕೂಡ ಇರಲಿದ್ದಾರೆ. ಈ ಪೈಕಿ ಓಟಿಟಿಯ ರೂಪೇಶ್, ಸಾನ್ಯ, ರಾಕೇಶ್ ಅಡಿಗ, ಗುರೂಜಿ ಟಿವಿ ಬಿಗ್ ಬಾಸ್ನಲ್ಲಿ ಇರುವುದು ಈಗಾಗಲೇ ಅಧಿಕೃತ ಮಾಹಿತಿ ಸಿಕ್ಕಿದೆ. ಇನ್ನು 5 ಜನ ಸೀನಿಯರ್ ಸ್ಪರ್ಧಿಗಳು ಇರಲಿದ್ದಾರೆ. ಇದನ್ನೂ ಓದಿ:ಟಿವಿ ಬಿಗ್ ಬಾಸ್ ಸೀಸನ್ 9ಕ್ಕೆ ಭರ್ಜರಿ ತಯಾರಿ: ಹೇಗಿದೆ ಗೊತ್ತಾ ದೊಡ್ಮನೆ?

ಟಿವಿ ಬಿಗ್ ಬಾಸ್ನಲ್ಲಿ 18 ಸ್ಪರ್ಧಿಗಳು ಇರಲಿದ್ದಾರೆ. ಈ ಪೈಕಿ 8 ಹೊಸ ಸ್ಪರ್ಧಿಗಳಿದ್ದರೆ, 8 ಹಳೆಯ ಸ್ಪರ್ಧಿಗಳು ಇರಲಿದ್ದಾರೆ. ಈ ಪೈಕಿ ಓಟಿಟಿಯ 4 ಜನರ ಹೆಸರು ಈಗಾಗಲೇ ರಿವೀಲ್ ಆಗಿದ್ದು, ಇನ್ನು 5 ಜನರ ಸೂಪರ್ ಸೀನರ್ ಸ್ಪರ್ಧಿಗಳಿರಲಿದ್ದಾರೆ. ಹಾಗಾಗಿ ಹಳೆಯ ಸೀಸನ್ ದಿವ್ಯಾ ಉರುಡುಗ ಮತ್ತು ಅರವಿಂದ್ ಹೊಸ ಸೀಸನ್ಗೆ ಬರುವ ಕುರಿತು ಬಾರಿ ಚರ್ಚೆ ಆಗುತ್ತಿದೆ.

ಹಳೆಯ ಸೀಸನ್ನಲ್ಲಿ ಜೋಡಿಯಾಗಿ ದಿವ್ಯಾ(Divya) ಮತ್ತು ಅರವಿಂದ್ (Aravind) ಕಾಣಿಸಿಕೊಂಡಿದ್ದರು. ಸ್ಪರ್ಧಿಗಳಾಗಿ ಈ ಜೋಡಿ ಪ್ರೇಕ್ಷಕರನ್ನ ರಂಜಿಸಿದ್ದರು. ಹಾಗಾಗಿ ಈ ಹೊಸ ಸೀಸನ್ನಲ್ಲೂ ಕೂಡ ದಿವ್ಯಾ ಮತ್ತು ಅರವಿಂದ್ ಇರಬೇಕು ಎಂಬುದು ಪ್ರೇಕ್ಷಕರ ಒತ್ತಾಯ ಮತ್ತು ಅಭಿಪ್ರಾಯವಾಗಿದೆ. ಅಷ್ಟಕ್ಕೂ ಹೊಸ ಸೀಸನ್ನಲ್ಲಿ ಈ ಜೋಡಿ ಕಾಣಿಸಿಕೊಳ್ಳುತ್ತಾರಾ ಎಂಬುದು ಇನ್ನು ಎರಡೇ ದಿನಗಳಲ್ಲಿ ತಿಳಿಯಲಿದೆ.

ಕನ್ನಡ ಸಿನಿಮಾ ರಂಗದ ಖ್ಯಾತ ಹಾಸ್ಯನಟ ನರಸಿಂಹರಾಜು ಅವರ ಹಿರಿಯ ಪುತ್ರಿ ಧರ್ಮವತಿ ಅವರು ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು. ಈ ಕುರಿತು ಧರ್ಮವತಿ ಅವರ ಪುತ್ರ, ಸಿನಿಮಾ ನಿರ್ದೇಶಕ ಅರವಿಂದ್ ಮಾಹಿತಿಯನ್ನು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದು, ಇಂದು ಮುಂಜಾನೆ 5.30ಕ್ಕೆ ಧರ್ಮಾವತಿ ಅವರು ಕೊನೆಯುಸಿರು ಎಳೆದಿದ್ದಾರಂತೆ.

ಧರ್ಮವತಿಗೆ ಮೂವರು ಮಕ್ಕಳದ್ದು, ಪುತ್ರ ಅರವಿಂದ್ ಅವರು ಕನ್ನಡ ಸಿನಿಮಾ ರಂಗದಲ್ಲಿ ಹಲವು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ ಮತ್ತು ಸಂಗೀತ ಸಂಯೋಜನೆ ಕೂಡ ಮಾಡುತ್ತಿದ್ದಾರೆ. ಕಿರಿಯ ಪುತ್ರ ಅವಿನಾಶ್ ನರಸಿಂಹರಾಜು ನಟನಾಗಿ ಗುರುತಿಸಿಕೊಂಡಿದ್ದಾರೆ. ಲಾಸ್ಟ್ ಬಸ್ ಸೇರಿದಂತೆ ಹಲವು ಚಿತ್ರಗಳನ್ನು ಇವರು ಮಾಡಿದ್ದಾರೆ. ಇದನ್ನೂ ಓದಿ : Exclusive : ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಮೊದಲ ವರ್ಷದ ಪುಣ್ಯಸ್ಮರಣೆ : ಪುತ್ಥಳಿ ಅನಾವರಣ

ಧರ್ಮವತಿ ಅವರ ಅಂತ್ಯಸಂಸ್ಕಾರವು ಇಂದು ಸಂಜೆ ಹೆಬ್ಬಳದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ನರಸಿಂಹರಾಜು ಕುಟುಂಬ ಕನ್ನಡ ಸಿನಿಮಾ ರಂಗಕ್ಕೆ ಅಪಾರ ಕೊಡುಗೆ ನೀಡಿದೆ. ನರಸಿಂಹರಾಜು ಕುಟುಂಬದ ಅನೇಕ ಕಲಾವಿದರು ಈ ಹೊತ್ತಿಗೂ ಸಿನಿಮಾ ರಂಗದಲ್ಲಿ ನಟರಾಗಿ, ಸಂಗೀತ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.

ಬೆಂಗಳೂರು: ಬಿಗ್ ಸೀಸನ್ -8 ಸ್ಪರ್ಧಿ ದಿವ್ಯಾ ಉರುಡುಗ ಫೇಸ್ ಟೂ ಫೇಸ್ ಚಿತ್ರಕ್ಕಾಗಿ ವಿಮಶರ್ಕರ ಬೆಸ್ಟ್ ಆ್ಯಕ್ಟರ್ ಪ್ರಶಸ್ತಿಯನ್ನು ಕೆ.ಪಿ ಅರವಿಂದ್ ಕೈಯಿಂದ ಪಡೆದಿದ್ದಾರೆ.

ಬಿಗ್ಬಾಸ್ ಸೀಸನ್-8 ಕ್ಯೂಟ್ ಕಪಲ್ ಎಂದೇ ಫೇಮಸ್ ಆಗಿದ್ದ ಅರವಿಂದ್ ಹಾಗೂ ದಿವ್ಯಾ ಉರುಡುಗ ಮಂಗಳವಾರ ಹೈದರಾಬಾದ್ಗೆ ಒಟ್ಟಿಗೆ ಫ್ಲೈಟ್ನಲ್ಲಿ ಹಾರಿದ್ದರು. ಇದೀಗ ಇಬ್ಬರು ಸಂತೋಷಮ್ ಸೌತ್ ಇಂಡಿಯನ್ ಫಿಲ್ಮ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಹೈದರಾಬಾದ್ಗೆ ಹಾರಿದ ಅರ್ವಿಯಾ ಜೋಡಿ

ಹೌದು ಫೇಸ್ ಟೂ ಫೇಸ್ ಚಿತ್ರಕ್ಕಾಗಿ ನಟಿ ದಿವ್ಯಾ ಉರುಡುಗಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ. ವಿಶೇಷವೆಂದರೆ ಈ ಅವಾರ್ಡ್ ಅನ್ನು ದಿವ್ಯಾ ಉರುಡುಗ ಕೆ. ಪಿ ಅರವಿಂದ್ ಅವರ ಕೈಯಿಂದ ಸ್ವೀಕರಿಸಿದ್ದಾರೆ. ಸದ್ಯ ಈ ಫೋಟೋವನ್ನು ದಿವ್ಯಾ ಉರುಡುಗ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದು ಸಂತಸ ವ್ಯಕ್ತಪಡಿಸಿದ್ದಾರೆ.

ಫೋಟೋ ಜೊತೆಗೆ, ಸಂತೋಷಮ್ ಸೌತ್ ಇಂಡಿಯನ್ ಫಿಲ್ಮ್ ಅವಾರ್ಡ್ಸ್ ನಲ್ಲಿ ಫೇಸ್ 2 ಫೇಸ್ ಚಲನಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಸ್ವೀಕರಿಸಲು ತುಂಬಾ ಸಂತೋಷವಾಗುತ್ತಿದೆ ಮತ್ತು ರಾಷ್ಟ್ರದ ಹೆಮ್ಮೆಯ ವ್ಯಕ್ತಿಯಿಂದ ಪ್ರಶಸ್ತಿಯನ್ನು ಸ್ವೀಕರಿಸುತ್ತಿದ್ದೇನೆ, ಅವರನ್ನು ನಾನು ಹೆಚ್ಚು ಗೌರವಿಸುತ್ತೇನೆ ಮತ್ತು ಆರಾಧಿಸುತ್ತೇನೆ. ಕೆಪಿ ಅರವಿಂದ್ ಅನೇಕರಿಗೆ ಸ್ಫೂರ್ತಿ ಎಂದು ಕ್ಯಾಪ್ಷನ್ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಬಿಗ್ಬಾಸ್ ಲವ್ ಬರ್ಡ್ಸ್ ಭೇಟಿಯಾದ ಶುಭಾ ಪೂಂಜಾ
View this post on Instagram
ಜೊತೆಗೆ ನನ್ನ ನಿರ್ದೇಶಕ ಜನಾರ್ಧನ್ ಮತ್ತು ನನ್ನ ಸಹನಟರಾದ ರೋಹಿತ್, ಪೂರ್ವಿಜೋಶಿ ಮತ್ತು ಇಡೀ ತಂಡಕ್ಕೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನನಗೆ ಬೆಂಬಲವಾಗಿ ನಿಂತ ನನ್ನ ಕುಟುಂಬ, ಸ್ನೇಹಿತರು, ಅವಿ ಅವರಿಗೆ ಧನ್ಯವಾದಗಳು ಮತ್ತು ನನಗೆ ಬೆಂಬಲ ನೀಡಿದ ಎಲ್ಲಾ ಅಭಿಮಾನಿಗಳಿಗೆ ಮತ್ತು ಹಿತೈಷಿಗಳಿಗೆ ವಿಶೇಷವಾಗಿ ಧನ್ಯವಾದಗಳು. ನೀವೆಲ್ಲರು ಇಲ್ಲದೇ ಇದು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಬೆಂಗಳೂರು: ಬಿಗ್ಬಾಸ್ ಸೀಸನ್-8ರ ಕಾರ್ಯಕ್ರಮದ ಸ್ಪರ್ಧಿಗಳಾಗಿದ್ದ ಅರವಿಂದ್ ಹಾಗೂ ದಿವ್ಯಾ ಉರುಡುಗ ಹೈದರಾಬಾದ್ಗೆ ಹಾರಿದ್ದಾರೆ.

ಅರವಿಂದ್ ಹಾಗೂ ದಿವ್ಯಾ ಉರುಡುಗ ಬಿಗ್ಬಾಸ್ ಸೀಸನ್-8ರ ಪ್ರಣಯ ಪಕ್ಷಿಗಳು ಎಂದೇ ಫೇಮಸ್ ಆಗಿದ್ದರು. ಬಿಗ್ಬಾಸ್ ಮನೆಯಲ್ಲಿ ಸದಾ ಜೊತೆ, ಜೊತೆಯಾಗಿದ್ದ ಈ ಜೋಡಿ ರಿಯಾಲಿಟಿ ಶೋ ನಂತರ ಕೂಡ ಎಲ್ಲೆಲ್ಲೂ ಜೊತೆ, ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಬಿಗ್ಬಾಸ್ ಲವ್ ಬರ್ಡ್ಸ್ ಭೇಟಿಯಾದ ಶುಭಾ ಪೂಂಜಾ

ಇತ್ತೀಚೆಗಷ್ಟೇ ಶುಭಾ ಪೂಂಜಾ ಜೊತೆಗೆ ಕಾಣಿಸಿಕೊಂಡಿದ್ದ ಈ ಜೋಡಿ ಇದೀಗ ಫ್ಲೈಟ್ವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಅರವಿಂದ್ ಹಾಗೂ ದಿವ್ಯಾ ಉರುಡುಗ ಒಟ್ಟಿಗೆ ಹೈದರಾಬಾದ್ಗೆ ಹಾರಿದ್ದಾರೆ. ಸದ್ಯ ಇವರಿಬ್ಬರು ಫ್ಲೈಟ್ನಲ್ಲಿ ಪ್ರಯಾಣಿಸುತ್ತಿರುವ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವಿಶೇಷವೆಂದರೆ ಇವರಿಬ್ಬರೊಂದಿಗೆ ದಿಯಾ ಸಿನಿಮಾ ಖ್ಯಾತಿಯ ನಟಿ ಖುಷಿ ಅವರು ಕೂಡ ಕಾಣಿಸಿಕೊಂಡಿದ್ದಾರೆ.

ನಟಿ ಖುಷಿ ಅವರು ಕೂಡ ಅರವಿಂದ್ ಹಾಗೂ ದಿವ್ಯಾ ಉರುಡುಗ ಜೊತೆಗಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ಫೋಟೋ ಜೊತೆಗೆ ಹೈದರಾಬಾದ್ ಕಾಲಿಂಗ್ ದಿವ್ಯಾ ಉರುಡುಗ, ಕೆ.ಪಿ ಅರವಿಂದ್ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಬ್ಯಾಕ್ ಬ್ಯೂಟಿಗೆ 13 ಕೋಟಿ ಇನ್ಶೂರೆನ್ಸ್ ಮಾಡಿಸಿದ Miss Bumbum 2021

ಇತ್ತೀಚೆಗಷ್ಟೇ ಬಿಗ್ಬಾಸ್ ಸೀಸನ್ 8ರ ಸ್ಪರ್ಧಿ ಶುಭಾ ಪೂಂಜಾ ಅವರು ಅರವಿಂದ್.ಕೆ.ಪಿ ಮತ್ತು ದಿವ್ಯಾ ಉರುಡುಗ ಅವರನ್ನು ಭೇಟಿ ಮಾಡಿ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಇನ್ನೂ ಆ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು.

ಬೆಂಗಳೂರು: ಬಿಗ್ಬಾಸ್ ಸೀಸನ್-8ರ ಖ್ಯಾತಿಯ ಕೆ.ಪಿ ಅರವಿಂದ್ ಬೈಕ್ ಮುಂದೆ ನಿಂತುಕೊಂಡು ದಿವ್ಯಾ ಉರುಡುಗ ಸ್ಟೈಲಿಶ್ ಆಗಿ ಫೋಟೋಗೆ ಪೋಸ್ ನೀಡಿದ್ದಾರೆ. ಇದನ್ನೂ ಓದಿ: ‘ಹಾಲಕ್ಕಿಯನ್ನು ಪರಿಶಿಷ್ಟ ಜನಾಂಗಕ್ಕೆ ಸೇರ್ಪಡೆ ಮಾಡದಿದ್ರೆ ಪದ್ಮಶ್ರೀ ಪ್ರಶಸ್ತಿ ಮರಳಿಸುವೆ’

ಬಿಗ್ಬಾಸ್ ಸೀಸನ್-8ರ ಕ್ಯೂಟ್ ಕಪಲ್ ಎಂದೇ ಫೇಮಸ್ ಆಗಿದ್ದ ಜೋಡಿ ಅಂದರೆ ಅದು ಅರವಿಂದ್ ಹಾಗೂ ದಿವ್ಯಾ ಉರುಡುಗ. ದೊಡ್ಮನೆಯಲ್ಲಿ ಎಲ್ಲೆ ನೋಡಿದರೂ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುತ್ತಿದ್ದ ದಿವ್ಯಾ ಉರುಡುಗ ಹಾಗೂ ಅರವಿಂದ್ ರಿಯಾಲಿಟಿ ಶೋ ಮುಗಿದ ನಂತರ ಒಟ್ಟಿಗೆ ಅಷ್ಟಾಗಿ ಕಾಣಿಸಿಕೊಂಡಿರಲಿಲ್ಲ. ಆದರೆ ಇದೀಗ ದಿವ್ಯಾ ಉರುಡುಗ ಹಾಗೂ ಅರವಿಂದ್ ಜೊತೆಯಾಗಿ ಕಾಣಿಸಿಕೊಳ್ಳಲು ಶುರು ಮಾಡಿದ್ದಾರೆ.

ಸದ್ಯ ಇತ್ತೀಚೆಗಷ್ಟೇ ಅರವಿಂದ್ ಹಾಗೂ ದಿವ್ಯಾ ಉರುಡುಗ ಕಾರ್ಯಕ್ರಮವೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ವೇಳೆ ದಿವ್ಯಾ ಉರುಡುಗ ಅರವಿಂದ್ ಬೈಕ್ ಮುಂದೆ ನೊಂತು ಫೋಟೋಗೆ ಸಖತ್ ಸ್ಟೈಲಿಶ್ ಆಗಿ ಪೋಸ್ ನೀಡಿದ್ದಾರೆ. ಇನ್ನೂ ಈ ಫೋಟೋವನ್ನು ದಿವ್ಯಾ ಉರುಡುಗ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದು, ನಿಮಗೆ ಸರಿಯಾಗಿ ಕಂಪನಿ ಕೊಡುವವರಿದ್ದರೆ, ಪ್ರಯಾಣದ ರಸ್ತೆ ದೂರ ಎನಿಸುವುದಿಲ್ಲ ಎಂದು ಕ್ಯಾಪ್ಷನ್ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಅಸ್ಸಾಂನಿಂದ ಬರುತ್ತಿದ್ದಾರೆ ನೂರಾರು ಕೂಲಿ ಕಾರ್ಮಿಕರು – ಸ್ಥಳೀಯರ ಆತಂಕ
View this post on Instagram
ಬಿಗ್ಬಾಸ್ ಕಾರ್ಯಕ್ರಮದ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ವಿವ್ ಆಗಿರುವ ಈ ಜೋಡಿ ಆಗಾಗ ಅಭಿಮಾನಿಗಳೊಂದಿಗೆ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಬಿಗ್ಬಾಸ್ ಗ್ರ್ಯಾಂಡ್ ಫಿನಾಲೆಯ ಕೊನೆಯ ಟಾಪ್ 2 ಕಂಟೆಸ್ಟೆಂಟ್ನನ್ನು ವೇದಿಕೆ ಮೇಲೆ ಸುದಿಪ್ ಕರೆದುಕೊಂಡು ಬರುತ್ತಾರೆ. ನಂತರ ಇಬ್ಬರಲ್ಲಿ ಯಾರು ಗೆಲ್ಲಬಹುದು ಎಂದು ಇತರ ಸ್ಪರ್ಧಿಗಳಿಗೆ ಪ್ರಶ್ನಿಸಿದಾಗ ಬಹುತೇಕ ಮಂದಿ ಮಂಜು ಹೆಸರನ್ನು ಸೂಚಿಸಿದ್ದರು. ಆದರೆ ಈ ವೇಳೆ ಚಕ್ರವರ್ತಿ ಚಂದ್ರಚೂಡ್ರವರು ಬಹಳ ಭಾವುಕರಾಗಿ ಉತ್ತರಿಸಿದ್ದಾರೆ.

7 ದೇಶಗಳಲ್ಲಿ 8 ಕೋಟಿ 76 ಲಕ್ಷ ಜನ ಕಳೆದ 15 ದಿನಗಳಲ್ಲಿ ಕನ್ನಡ ಬಿಗ್ಬಾಸ್ ಕುರಿತಂತೆ ಚರ್ಚೆ ನಡೆಸುತ್ತಿದ್ದಾರೆ. ಎರಡು ವಲಯದಲ್ಲಿ ಎರಡು ದಿಕ್ಕಿನಲ್ಲಿ ಚರ್ಚೆ ನಡೆಯುತ್ತಿದೆ. ಇಬ್ಬರು ನನಗೆ ಒಂದು ರೀತಿ ತಮ್ಮಂದಿರು, ಅದರಲ್ಲಿ ಒಬ್ಬ ಅಂತರಾಷ್ಟ್ರೀಯ ಪ್ರತಿಭೆ, ಮತ್ತೊಬ್ಬ ಕುಡಿಯಲು ನೀರು ಕೂಡ ಇರದ ಊರಿನಿಂದ ಬಂದವನು. ಒಬ್ಬ ಯಶಸ್ಸು ಹಾಗೂ ಸೋಲು ಎರಡನ್ನು ಕಂಡು ಸೋತು ಗೆದ್ದವನು. ಆದರೆ ಒಬ್ಬ ಒಂದೇ ಒಂದು ಯಶಸ್ಸು ಸಿಕ್ಕಿದರೆ ನನ್ನ ಜೀವನ ಉದ್ದಾರ ಮಾಡಿಕೊಳ್ಳುತ್ತೇನೆ. ನೂರಾರು ಜನರಿಗೆ ನಾನು ಮಾದರಿಯಾಗುತ್ತೇನೆ ಎಂದು ನಿಂತಿದ್ದಾನೆ. ಒಬ್ಬನಿಗೆ ಛಲ ಇದ್ದರೆ, ಮತ್ತೊಬ್ಬನಿಗೆ ಅಮಾಯಕತ್ವವಿದೆ. ಒಬ್ಬರಿಗೆ ಗೆಲುವು ಅಗತ್ಯ, ಮತ್ತೊಬ್ಬರಿಗೆ ಗೆಲುವು ಅನಿವಾರ್ಯ. ಇಷ್ಟನ್ನೆಲ್ಲಾ ನೋಡಿದಾಗ ನನ್ನ 66 ದಿನಗಳ ಜರ್ನಿ ನೋಡಿದಾಗ, ಕರ್ನಾಟಕದ ಜನತೆಯ ಆಶೀರ್ವಾದ ನೋಡಿದಾಗ ನನ್ನ ಮತ ಅಂತಃಕರ್ಣಕ್ಕೆ, ಹಳ್ಳಿ ಹಕ್ಕಿ ಪ್ರತಿಭೆಗೆ, ಇಂದು ನಾನು ಮಂಜು ಬಗ್ಗೆ ಬರೆದ ಒಂದು ಪದ್ಯವನ್ನು 16 ಲಕ್ಷ ಜನ ಶೇರ್ ಮಾಡಿದ್ದಾರೆ. ಅಷ್ಟು ಜನ ಮಂಜುರನ್ನು ಬಹಳ ಇಷ್ಟಪಡುತ್ತಿದ್ದಾರೆ ಎಂದು ಚಕ್ರವರ್ತಿ ಹೇಳಿದ್ದಾರೆ.

ಮನೆಯಲ್ಲಿ ಕರೆಂಟ್ ಇಲ್ಲ, ಬಸ್ ಇಲ್ಲ, ಏನೂ ಇಲ್ಲದ ಒಬ್ಬ ಬಡ ಹುಡುಗ ಇಂತಹ ಒಂದು ದೊಡ್ಡ ಆಟಕ್ಕೆ ಬಂದು ಎಲ್ಲರೊಂದಿಗೆ ಸ್ಪರ್ಧಿಸುತ್ತಾನಲ್ಲ, ಅವನದ್ದು ನಿಜವಾದ ಶಕ್ತಿ, ಅದು ನಿಜವಾದ ತಾಕತ್ತು. ಅಂತಹ ಕೆಲಸ ಮಂಜು ಮಾಡಿದ್ದಾನೆ. ಅರವಿಂದ್ ಕೆಪಿಗೆ ಎಲ್ಲವನ್ನು ಭರಿಸಿಕೊಳ್ಳುವ ಶಕ್ತಿ ಎಲ್ಲ ಮಾರ್ಗಗಳಿದೆ. ಆದರೆ ಮಂಜು ಏನೂ ಇಲ್ಲದೇ ಬಂದಿದ್ದಾನೆ, ನಾನು ಅವನನ್ನು ಎಷ್ಟೋ ಬಾರಿ ಕೆಣಕಿದೆ. ಆದರೆ ಅವನು ಒಂದು ಕ್ಷಣ ಕೂಡ ಕುಗ್ಗಿದ್ದನ್ನು ನಾನು ನೋಡಲೇ ಇಲ್ಲ. ನಾನೇ ಎಷ್ಟೋ ಅಡ್ಡಗಳನ್ನು ಹಾಕಿದೆ. ಆದರೆ ಆ ಅಡ್ಡಗಳನ್ನೆಲ್ಲಾ ದಾಟಿ ನನ್ನ ಮನಸ್ಸನ್ನು ಹಾಗೂ ನನ್ನ ತಾಯಿ ಮನಸ್ಸನ್ನು ಗೆದ್ದಿದ್ದು, ನೂರಾರು ಕೋಟಿ ಜನರ ಆಶೀರ್ವಾದಕ್ಕೆ ಕಾರಣನಾಗಿದ್ದು ಮಂಜು. ಈ ಎಲ್ಲಾ ಕಾರಣಕ್ಕೆ ಬಿಗ್ಬಾಸ್ ಗ್ರ್ಯಾಂಡ್ ಫಿನಾಲೆಯ ಸೀಸನ್-8ರ ಗೆಲುವು ಮಂಜು ಪಾವಗಡ ಆಗಬೇಕೆಂದು ಅಭಿಪ್ರಾಯ ವ್ಯಕ್ತಪಡಿಸುವ ಜೊತೆಗೆ ಮಂಜುರನ್ನು ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ:ಬಿಗ್ಬಾಸ್ ಮನೆಯಲ್ಲಿ ಮಂಜು ಕಲಿತಿದ್ದೇನು..?- ಮುಂದಿನ ಯೋಚನೆ, ಯೋಜನೆಗಳ ಬಗ್ಗೆ ವಿನ್ನರ್ ಮಾತು

ಬಿಗ್ಬಾಸ್ ಫಿನಾಲೆಗೆ ಇನ್ನೇನು 2-3 ದಿನವಷ್ಟೇ ಬಾಕಿ ಇದೆ. ಈ ವಾರ ಫಿನಾಲೆ ವೀಕ್ ಆಗಿರುವುದರಿಂದ ಬಿಗ್ಬಾಸ್ ಸೀಸನ್-8ರ ಟಾಪ್ 5 ಸ್ಪರ್ಧಿಗಳ ಜರ್ನಿಯನ್ನು ಫೋಟೋ ಫ್ರೇಮ್ ನಿರ್ಮಿಸುವ ಮೂಲಕ ಸವಿ ನೆನಪುಗಳನ್ನು ಮೆಲುಕು ಹಾಕಲಾಗುತ್ತಿದೆ. ಅರವಿಂದ್, ವೈಷ್ಣವಿ, ಮಂಜು ನಂತರ ಇದೀಗ ಪ್ರಶಾಂತ್ ಸಂಬರ್ಗಿ ಫೋಟೋವನ್ನು ಗಾರ್ಡನ್ ಏರಿಯಾದಲ್ಲಿ ವಾಲ್ ಆಫ್ ದಿ ಫ್ರೇಮ್ ಕ್ರಿಯೆಟ್ ಮಾಡಲಾಗಿತ್ತು. ಇದನ್ನು ಕಂಡು ಪ್ರಶಾಂತ್ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.

ಈ ಬಗ್ಗೆ ಮಾತನಾಡಿದ ಪ್ರಶಾಂತ್, 115 ದಿನದ ಜರ್ನಿ ಇನ್ನೂ 4 ದಿನದಲ್ಲಿ ಮುಗಿಯುತ್ತದೆ. ಈ ಮನೆಯಲ್ಲಿ ಫ್ರೆಂಡ್ಸ್, ಶತ್ರು ಆದ್ರು ಮತ್ತೆ ಫ್ರೆಂಡ್ಸ್ ಆದ್ರು, ಪ್ರೀತಿ, ಅಣ್ಣ, ತಂಗಿ, ಫ್ರೆಂಡ್ ಎಲ್ಲರೂ ಮನೆಯವರ ರೂಪದಲ್ಲಿ ಸಿಕ್ಕಿದ್ರು. ಮಂಜು ಕಾಮಿಡಿ ಸೆನ್ಸ್ ನನಗೆ ಅರ್ಥ ಆಗಲು ಸಮಯ ಬೇಕಾಯಿತು. ಅವನು ವೈಯಕ್ತಿವಾಗಿ ಯಾವುದೇ ಕೆಟ್ಟವನಲ್ಲ. ಆಟದಲ್ಲಿ ಜಗಳವಾಗುತ್ತಿತ್ತು. ಅದು ಬಿಟ್ಟರೆ ಬೇರೆ ಏನೂ ನಮ್ಮ ಮಧ್ಯೆ ಇಲ್ಲ. ಸದ್ಯ ಈಗ ಮಂಜು ನನಗೆ ಸಹೋದರನಾಗಿದ್ದಾರೆ. ಬಿಗ್ಬಾಸ್ ನನ್ನ ಲೈಫ್ನಲ್ಲಿ ಒಂದು ಮೈಲಿಗಲ್ಲು. ಬಿಗ್ಬಾಸ್ ಜರ್ನಿ ಬಹಳ ಸೂಪರ್, ಧನ್ಯವಾದಗಳು ಬಿಗ್ಬಾಸ್ ಎಂದಿದ್ದಾರೆ.

ಬಳಿಕ ದಿವ್ಯಾ ಉರುಡುಗ, ನನಗೆ ಈ ಮನೆಗೆ ಬಂದ ತಕ್ಷಣ ಪ್ರಶಾಂತ್ ಜೊತೆ ಅಣ್ಣ – ತಂಗಿ ಬಾಂಧವ್ಯ ಬೆಳೆಯಿತು. ಪ್ರಶಾಂತ್ ಅವರಲ್ಲಿ ಒಂದು ರೀತಿಯ ಮಗುವನ್ನು ಕಾಣುತ್ತೇನೆ. ಅವರಲ್ಲಿ ಎರಡು ರೀತಿಯ ವ್ಯಕ್ತಿತ್ವ ಇದೆ. ಒಂದು ತುಂಬಾ ಮಗ್ಧತನ ಮತ್ತೊಂದು ಕ್ರೂರ ಹುಲಿ. ಅವರು ಖುಷಿಯಾಗಿದ್ದಾಗ ಅವರಂತ ಮನುಷ್ಯ ಇನ್ನೊಬ್ಬರಿಲ್ಲ. ಪ್ರಶಾಂತ್ ನನ್ನ ಜೀವನದ ಅಣ್ಣ. ನಿಮ್ಮ ಲೈಫ್ನಲ್ಲಿ ಎಲ್ಲಾ ಒಳ್ಳೆಯದಾಗಲಿ, ಯಾವತ್ತಿಗೂ ನಗುತ್ತೀರಿ ಎಂದಿದ್ದಾರೆ.

ಪ್ರಶಾಂತ್ ರವರ ಬಗ್ಗೆ ತಿಳಿದುಕೊಳ್ಳಲು ನನಗೆ ಖುಷಿಯಾಗಿದೆ. ಟಿವಿಯಲ್ಲಿ ನೋಡುವುದಕ್ಕೂ, ನಿಜವಾಗಿಯೂ ನೋಡಲು ಪ್ರಶಾಂತ್ರವರು ತುಂಬಾ ಡಿಫರೆಂಟ್ ಆಗಿದ್ದಾರೆ. ನೀವು ಫಿನಾಲೆ ತನಕ ಬರಲು ನಿಮ್ಮಲ್ಲಿರುವ ಸಾಮಥ್ರ್ಯ ಕಾರಣ. ಒಂದು ಟಾಸ್ಕ್ ವೇಳೆ ನಾನು ಕೈ ಎತ್ತಿದ್ದು, ನನಗೆ ಈಗಲೂ ಬೇಸರವಾಗುತ್ತದೆ. ಇಂದಿಗೂ ನಾನು ಆ ಬಗ್ಗೆ ಪಶ್ಚಾತಾಪ ಪಡುತ್ತೇನೆ, ಕ್ಷಮಿಸಿ. ನೀವು ಅಂದರೆ ನನಗೆ ತುಂಬಾ ಇಷ್ಟ. ನಿಮಗೆ ಒಳ್ಳೆಯದಾಗಲಿ ಎಂದು ವೈಷ್ಣವಿ ಹೇಳಿದ್ದಾರೆ.

ಬಳಿಕ ಮಂಜು, ಬಿಗ್ಬಾಸ್ ಮನೆಯಲ್ಲಿ ನನ್ನ ಹಾಗೂ ಪ್ರಶಾಂತ್ರವರದ್ದು ಹಾವು, ಮುಂಗುಸಿ ಸಂಬಂಧ. ಆದರೆ ಬಿಗ್ಬಾಸ್ ಮನೆಯಲ್ಲಿ ಪ್ರಶಾಂತ್ ಇಲ್ಲದಿದ್ದರೆ ಈ ಜರ್ನಿ ಬಹಳ ಬೋರಿಂಗ್ ಆಗಿರುತ್ತಿತ್ತು. ಸರಸ, ವಿರಸ ಎಲ್ಲಾ ಇದ್ದರೆನೇ ಮನೆ ಅನಿಸಿಕೊಳ್ಳುವುದು. ಜಗಳ ಆಡಿದರೂ ಅದನ್ನು ತಿದ್ದುಕೊಂಡು ಹೋಗುತ್ತಿದ್ದೇವೆ. ಒಳ್ಳೆಯದಾಗಲಿ ಎಂದಿದ್ದಾರೆ.

ಇನ್ನೂ ಅರವಿಂದ್, ಪ್ರಶಾಂತ್ ಈ ಜರ್ನಿಯಲ್ಲಿ ಇರಲಿಲ್ಲ ಅಂದರೆ ಒಗ್ಗರಣೆಯಲ್ಲಿ ಮೆಣಸಿನ ಕಾಯಿ ಕಡಿಮೆಯಾದಂತೆ, ಯಾವಗಲೂ ಚಟ-ಪಟ ಅಂತ ಅಂದರೆನೇ ಅದು ಒಗ್ಗರಣೆಯಾಗುತ್ತದೆ. ನಿಮ್ಮಿಂದ ಏನು ಮಾಡಬೇಕು ಏನು ಮಾಡಬಾರದು ಎರಡನ್ನು ಕೂಡ ತಿಳಿದುಕೊಂಡಿದ್ದೇನೆ. ನನಗೆ ಒಳ್ಳೆಯ ಸ್ನೇಹಿತರಾಗಿದ್ದಕ್ಕೆ ಧನ್ಯವಾದ. ಮುಂದೆ ಕೂಡ ನಾವು ಹೀಗೆ ಫ್ರೆಂಡ್ಸ್ ಆಗಿ ಮುಂದುವರಿಯುತ್ತೇವೆ ಅಂದುಕೊಂಡಿದ್ದೇನೆ. ದೇವರು ನಿಮಗೆ ಒಳ್ಳೆಯದನ್ನು ಮಾಡಲಿ ಎಂದು ಹಾರೈಸಿದ್ದಾರೆ. ಇದನ್ನೂ ಓದಿ:ಕಿಚ್ಚನಿಂದಾಗಿ ವೈಷ್ಣವಿ ಹೆಸರು ಬದಲಾಯಿಸಲು ಪೋಷಕರು ತೀರ್ಮಾನ

ಬಿಗ್ ಮನೆಗೆ ಅರವಿಂದ್ ಎಂಟ್ರಿಕೊಟ್ಟ ಬೈಕ್ ಬಂದಿದೆ. ಅರವಿಂದ್ಗೆ ಎಷ್ಟು ಖುಷಿ ಆಯ್ತೋ ಅಷ್ಟೇ ಖುಷಿ ಮನೆಮನೆಯ ಉಳಿದ ಸದಸ್ಯರಿಗೂ ಆಗಿದೆ. ಅರವಿಂದ್ ತಮ್ಮ ಜರ್ನಿ ಬಗ್ಗೆ ಹೇಳಿದ ಬಳಿಕ ತನ್ನ ಪ್ರತಿ ಸ್ಪರ್ಧಿಗಳು ಕೂಡ ಅರವಿಂದ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಅರವಿಂದ್ ನನಗೆ ಉತ್ತಮ ಸ್ನೇಹಿತ, ನನಗೆ ಟಾಸ್ಕ್ ವಿಷಯದಲ್ಲಿ ನನಗೆ ತುಂಬಾ ಸ್ಪೂರ್ತಿ ಆಗ್ತಿರಿ. ಯಾವತ್ತು ಖುಷಿಯಾಗಿ ಇರೋಕೆ ಇಷ್ಟ ಪಡುತ್ತೀರಿ ಇದು ನನಗೆ ತುಂಬಾ ಇಷ್ಟ ಆಗುತ್ತೆ ಎಂದು ದಿವ್ಯ ಸುರೇಶ್ ತಮ್ಮ ಮನದ ಮಾತು ಹೇಳಿಕೊಂಡಿದ್ದಾರೆ.

ನನಗೆ ಅರವಿಂದ್ ಬೈಕ್ ರೇಸರ್ ಎಂದು ಕೇಳಿದ ಬಳಿಕ ನನಗೆ ಅವರನ್ನು ಈ ಮನೆಯಲ್ಲಿ ಕಾಣಲು ತುಂಬಾ ಸಂತೋಷ ಪಟ್ಟಿದ್ದೀನಿ. ನನಗೆ ಪ್ರಬಲವಾದ ಪ್ರತಿ ಸ್ಪರ್ಧಿಯಾಗಿ ಅರವಿಂದ್ನ್ನು ಕಂಡಿದ್ದೇನೆ. ಒಬ್ಬ ವ್ಯಕ್ತಿ ಅವನ ಕೆಲಸವನ್ನು ಎಷ್ಟು ಚೆನ್ನಾಗಿ ಮಾಡಬೇಕು ಎನ್ನುವುದಕ್ಕೆ ಅರವಿಂದ್ ಉತ್ತಮ ಉದಾಹರಣೆ. ಒಬ್ಬ ವ್ಯಕ್ತಿನ ನಂಬಿದರೆ ತುಂಬಾ ಚೆನ್ನಾಗಿ ನೋಡುಕೊಳ್ಳುತ್ತೀಯ ಎಂಬುದನ್ನು ನೀನು ನನಗೆ ತೋರಿಸಿಕೊಟ್ಟಿದ್ದೀಯ ಎಂದು ನಗುತ್ತಲೆ ಮಂಜು ತನ್ನ ಎದುರಾಳಿ ಅರವಿಂದ್ ಬಗ್ಗೆ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಬಿಗ್ಬಾಸ್ ಮನೆಗೆ ಬಂತು ಅರವಿಂದ್ ಬೈಕ್

ಬೈಕ್ ರೇಸಿಂಗ್ ಬಗ್ಗೆ ನಾನು ಟಿವಿಯಲ್ಲಿ ನೋಡಿದ್ದೆ ಅಷ್ಟೆ. ಆದರೆ ನಿಮ್ಮನ್ನು ಈ ಮನೆಯಲ್ಲಿ ನೋಡಿದ ಬಳಿಕ ತುಂಬಾ ಹೆಮ್ಮೆ ಅನಿಸಿತು. ನೀವು ಈ ಮನೆಯಲ್ಲಿ ಎಲ್ಲರೊಂದಿಗು ಹೊಂದಿಕೊಂಡು ಇಷ್ಟು ವಾರ ಬಂದಿರುವುದು ತುಂಬಾ ಖುಷಿ ಆಯ್ತು. ನಿಮ್ಮ ಕೆಲಸವನ್ನು ನೀವು ಅಚ್ಚುಕಟ್ಟಾಗಿ ಮಾಡುತ್ತೀರಿ ಇದೆಲ್ಲ ನನಗೆ ಹಿಡಿಸಿದೆ ಎಂದು ವೈಷ್ಣವಿ ತಿಳಿಸಿದರು.

ಬಳಿಕ ಬಂದ ಪ್ರಶಾಂತ್ ಸಂಬರಗಿ, ನಾನು ಅರವಿಂದ್ನ ಮೊದಲ ಬಾರಿಗೆ ನೋಡಿದ್ದ ವ್ಯಕ್ತಿತ್ವದಲ್ಲಿ ಯಾವುದೇ ಬದಲಾವಣೆ ಕಾಣದೆ ಇಂದಿಗೂ ಕೂಡ ಹಾಗೆ ಇದೆ. ಅರವಿಂದ್ ಅವರ ಫಿಟ್ನೆಸ್ ಒಬ್ಬ ಕ್ರಿಕೆಟ್ ಆಟಗಾರನ ಫಿಟ್ನೆಸ್ಗಿಂತಲು ಮಿಗಿಲಾಗಿದೆ. ಅವರೊಂದಿಗಿದ್ದಿದ್ದು ನನಗೆ ತುಂಬಾ ಅಭಿಮಾನ ಮೂಡಿಸಿದೆ ಎಂದರು.

ಅರವಿಂದ್ ಬಗ್ಗೆ ನೀವೆಲ್ಲರೂ ಹೇಳಿದ್ದೀರಿ. ಅರವಿಂದ್ ಎಂದರೆ ನನಗೆ ತುಂಬಾ ಗೌರವ. ನಾನು ಈ ಮನೆಯಲ್ಲಿ ಅರವಿಂದ್ ಜೊತೆ ತುಂಬಾ ಸಂತೋಷದಿಂದ ಕಳೆದಿದ್ದೇನೆ ನಾನು ಅರವಿಂದ್ ಅವರನನ್ನು ಸಂಭ್ರಮಿಸುತ್ತೇನೆ. ಅರವಿಂದ್ ಎಂದರೆ ತುಂಬಾ ಇಷ್ಟ ಎಂದು ದಿವ್ಯಾ ಉರುಡಗ ಮನದ ಮಾತು ಬಿಚ್ಚಿಟ್ಟರು.

ಮನೆಯವರೆಲ್ಲರ ಅಭಿಪ್ರಾಯದ ಬಳಿಕ ಅರವಿಂದ್, ನಾನು ಈ ಮನೆಯಲ್ಲಿ ಎಲ್ಲರೊಂದಿಗೆ ಬೆರೆತು ಇಷ್ಟು ದಿನ ಕಳೆದಿರುವುದಕ್ಕೆ ತುಂಬಾ ಖುಷಿ ಆಗುತ್ತೆ. ಮುಂದಿನ ದಿನಗಳಲ್ಲಿ ನನ್ನೊಂದಿಗೆ ಇದೇ ಸ್ನೇಹ ಮುಂದುವರಿಸಿ ಎಂದು ಎಲ್ಲರೊಂದಿಗು ಕೇಳಿಕೊಂಡರು.