Tag: aravibelagere

  • ಪತ್ರಕರ್ತ ರವಿಬೆಳಗೆರೆ ಬಂಧನ- ಸಂಸದ ಪ್ರಹ್ಲಾದ್ ಜೋಷಿ ಹೀಗಂದ್ರು

    ಪತ್ರಕರ್ತ ರವಿಬೆಳಗೆರೆ ಬಂಧನ- ಸಂಸದ ಪ್ರಹ್ಲಾದ್ ಜೋಷಿ ಹೀಗಂದ್ರು

    ಹುಬ್ಬಳ್ಳಿ: ಕಾಲವೇ ಎಲ್ಲದಕ್ಕೂ ಉತ್ತರ ನೀಡುತ್ತೆ. ಯಾರು ಎಂಥವರು ಎಂಬುದನ್ನು ಕಾಲ ನಿರ್ಧಾರ ಮಾಡುತ್ತೆ ಅಂತ ಸಂಸದ ಪ್ರಹ್ಲಾದ್ ಜೋಷಿ ಹೇಳಿಕೆ ನೀಡಿದ್ದಾರೆ.

    ಪತ್ರಕರ್ತ ರವಿ ಬೆಳಗೆರೆ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜದಲ್ಲಿ ತಾನೊಬ್ಬನೇ ಸತ್ಯವಂತ ಎನ್ನುವ ಹಾಗೆ ರವಿ ಬೆಳಗೆರೆ ಇದ್ದರು. ತಾನೊಬ್ಬನೇ ಸಾಚಾ.. ಉಳಿದವರೆಲ್ಲಾ ಚಾರಿತ್ರ್ಯಹೀನರು ಅನ್ನೋ ರೀತಿಯಲ್ಲಿ ಜೀವನ ಮಾಡುತ್ತಿದ್ದರು ಅಂದರು.  ಇದನ್ನೂ ಓದಿ: ಸಿಸಿಬಿ ಕಸ್ಟಡಿಯಲ್ಲಿ ಮೊದಲ ರಾತ್ರಿ ಕಳೆದ ರವಿ ಬೆಳಗೆರೆ- ನಿದ್ದೆ ಬಾರದೇ ಪೇಪರ್ ನಲ್ಲಿ ಗೀಚಿದ್ರು

    ಪ್ರಕರಣದಲ್ಲಿ ಬೆಳಗೆರೆ ಸಿಲುಕಿದ್ದಾರೆ ಎಂದು ಈ ಮಾತು ಹೇಳುತ್ತಿಲ್ಲ. ಯಾರನ್ನಾದರೂ ದೈಹಿಕವಾಗಿ ಮುಗಿಸುತ್ತೇನೆ ಎಂಬುದು ಸರಿಯಲ್ಲ ಅಂತ ಜೋಷಿ ಹೇಳಿದ್ರು.

    ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯ ವೇಳೆ ವಿಶೇಷ ತನಿಖಾ ತಂಡ ಬೆಂಗಳೂರಿನಲ್ಲಿ ಸುಪಾರಿ ಕಿಲ್ಲರ್ ವಿಜಯಪುರದ ಚಡಚಣದ ಶಾರ್ಪ್ ಶೂಟರ್ ಶಶಿ ಮುಂಡೇವಾಡಗಿಯನ್ನು ಶುಕ್ರವಾರ ಬಂಧಿಸಿತ್ತು. ಆತನ ವಿಚಾರಣೆ ವೇಳೆ ರವಿ ಬೆಳೆಗೆರೆಯವರು ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿರುವ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಪತ್ರಕರ್ತ ರವಿ ಬೆಳಗೆರೆಯನ್ನು ಬಂಧಿಸಲಾಗಿತ್ತು. ಇದನ್ನೂ ಓದಿ: ಕಮಿಷನರ್ ಹೇಳಿಕೆಗೂ, ಎಫ್‍ಐಆರ್ ಅಂಶಗಳಿಗೂ ವ್ಯತ್ಯಾಸವಿದೆ- ರವಿ ಪರ ವಕೀಲ ದಿವಾಕರ್ ಹೇಳಿಕೆ

    ರವಿ ಬೆಳಗೆರೆ ಎರಡನೇ ಪತ್ನಿ ಜತೆ ಹಾಯ್ ಬೆಂಗಳೂರು ಪತ್ರಿಕೆ ವರದಿಗಾರ ಸನೀಲ್ ಹೆಗ್ಗರವಳ್ಳಿ ಅಕ್ರಮ ಸಂಬಂಧದ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಸುನೀಲ್ ಹತ್ಯೆ ಮಾಡಲು ನಿರ್ಧರಿಸಿದ್ದ ಬೆಳಗೆರೆ ಶಾರ್ಪ್ ಶೂಟರ್ ಶಶಿ ಮುಂಡೇವಾಡಗಿಗೆ 30 ಲಕ್ಷ ರುಪಾಯಿ ಸುಪಾರಿ ಕೊಟ್ಟಿದ್ದರು ಎಂಬುದಾಗಿ ತಿಳಿದುಬಂದಿತ್ತು.  ಇದನ್ನೂ ಓದಿ: ರವಿ ಬೆಳಗೆರೆ ಸುಪಾರಿ ಪ್ರಕರಣ: ಮಗಳು ಭಾವನಾ, ಮಗ ಕರ್ಣ ಹೀಗಂದ್ರು

    https://www.youtube.com/watch?v=86k-IW3-boE

    https://www.youtube.com/watch?v=kJ5uYUEgVeM

    https://www.youtube.com/watch?v=tvAkOpM6ZZo

    https://www.youtube.com/watch?v=lgEoaxQ1l44

    https://www.youtube.com/watch?v=bwXnj2XMWag