Tag: arabic college

  • ಜಾರ್ಜ್ ಕ್ಷೇತ್ರದ ಅಲ್ಪಸಂಖ್ಯಾತ ಶಾಲೆಗೆ ಕೋಟಿ ಕೋಟಿ ಅನುದಾನ: ಪಬ್ಲಿಕ್ ಟಿವಿ ವರದಿಗೆ ಉತ್ತರಿಸಲು ತಡಬಡಿಸಿದ ಸಿಎಂ

    ಜಾರ್ಜ್ ಕ್ಷೇತ್ರದ ಅಲ್ಪಸಂಖ್ಯಾತ ಶಾಲೆಗೆ ಕೋಟಿ ಕೋಟಿ ಅನುದಾನ: ಪಬ್ಲಿಕ್ ಟಿವಿ ವರದಿಗೆ ಉತ್ತರಿಸಲು ತಡಬಡಿಸಿದ ಸಿಎಂ

    ಬೆಂಗಳೂರು: ಬೆಂಗಳೂರು ಉಸ್ತುವಾರಿ ಸಚಿವ ಜಾರ್ಜ್ ಕ್ಷೇತ್ರದ ಅಲ್ಪಸಂಖ್ಯಾತ ಶಾಲೆಗಳಿಗೆ ಅನುದಾನ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಲು ಸಿಎಂ ಸಿದ್ದರಾಮಯ್ಯ ನಿರಾಕರಿಸಿದ್ದಾರೆ.

    ದಕ್ಷಿಣ ಕನ್ನಡದ ಜಿಲ್ಲೆಯಲ್ಲಿರುವ ಕಲ್ಲಡ್ಕದ ಶಾಲೆಗೆ ನಿಯಮಾವಳಿಗಳ ಹೆಸರಿನಲ್ಲಿ ಕೊಲ್ಲೂರು ದೇವಾಲಯದ ಅನುದಾನವನ್ನು ನಿಲ್ಲಿಸಿದ್ದೀರಿ. ಆದರೆ ಜಾರ್ಜ್ ಕ್ಷೇತ್ರದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಭಾರೀ ಅನುದಾನ ನೀಡಿದ್ದು ಯಾಕೆ ಎನ್ನುವ ಪಬ್ಲಿಕ್ ಟಿವಿಯ ವರದಿಗೆ ಸಿಎಂ ಸರಿಯಾಗಿ ಪ್ರತಿಕ್ರಿಯೆ ನೀಡದೇ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಗೃಹ ಕಚೇರಿ ಕೃಷ್ಣದಲ್ಲಿ ಮಾತನಾಡಿದ ಅವರು, ಕಲ್ಲಡ್ಕ ಶಾಲೆಗೆ ಅನುದಾನ ವಾಪಸ್ ಪಡೆದಿದ್ದೇವೆ. ಖಾಸಗಿ ಶಿಕ್ಷಣ ಸಂಸ್ಥೆಗೆ ಹಣ ನೀಡಬಾರದು ಎಂದು ವಾಪಸ್ ಪಡೆದಿದ್ದೇವೆ. ಬಿಜೆಪಿ ಅವರಿಗೆ ಬೇರೆ ಆರೋಪ ಮಾಡಲು ವಿಷಯ ಇಲ್ಲದ ಕಾರಣ ಈ ಆರೋಪ ಮಾಡುತ್ತಿದ್ದಾರೆ ಎಂದರು.

    ಬಿಜೆಪಿ ನಾಯಕರಿಗೆ ಸಂಸ್ಕಾರ ಇಲ್ಲ. ಮನುಷ್ಯತ್ವ ಇಲ್ಲದವರು ಬಿಜೆಪಿಯವರು. ಅವರ ಲೆವೆಲ್ ಗೆ ಇಳಿದು ನಾನು ಮಾತನಾಡಲು ಸಾಧ್ಯವಿಲ್ಲ. ನನಗೂ ಅ ರೀತಿ ಮಾತನಾಡಲು ಬರುತ್ತದೆ. ಆದರೆ ಸಂಸ್ಕಾರ ಇಲ್ಲದವರ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ. 40 ವರ್ಷ ಸಾರ್ವಜನಿಕ ರಾಜಕಾರಣ ಮಾಡಿದ್ದೇನೆ. ರಾಜ್ಯದ ಮುಖ್ಯಮಂತ್ರಿಯಾಗಿ ನಾನು ಹಾಗೆಲ್ಲ ಮಾತನಾಡುವುದಿಲ್ಲ. ಕೆಟ್ಟ ಭಾಷೆಯನ್ನು ನಾನು ಬಳಸುವುದಿಲ್ಲ. ಇದು ಕರ್ನಾಟಕ ಜನರ ಸ್ವಾಭಿಮಾನದ ಪ್ರಶ್ನೆ. ನಾಡಿನ ಜನ ಅವರಿಗೆ ಪಾಠ ಕಲಿಸುತ್ತಾರೆ ಎಂದು ತಿರುಗೇಟು ನೀಡಿದರು.

    ಮೇಯರ್ ಸಮರ್ಥನೆ: ಅರೇಬಿಕ್ ಶಾಲೆಗೆ ಅನುದಾನ ಕೊಟ್ಟ ವಿಚಾರವನ್ನು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಸಮರ್ಥಿಸಿಕೊಂಡಿದ್ದಾರೆ. ಬಿಎಂಪಿಯಿಂದ ಹಲವಾರು ಸಂಘ ಸಂಸ್ಥೆಗಳಿಗೆ ಈ ಹಿಂದೆ ಸಹ ಅನುದಾನ ನೀಡಲಾಗಿದೆ. ಕಟ್ಟಡಗಳ ನಿರ್ಮಾಣಕ್ಕೆ ಸ್ಮಾರಕಗಳ ನಿರ್ಮಾಣಕ್ಕೆ ಅನುದಾನ ನೀಡಲಾಗುತ್ತದೆ. ಕರಗ ಉತ್ಸವ, ದಸರ ಉತ್ಸವಗಳಿಗೂ ಅನುದಾನ ನೀಡಲಾಗುತ್ತದೆ. ಅದೇ ರೀತಿ ಅನುದಾನ ನೀಡಿದ್ದೇವೆ ಎಂದು ಬಿಬಿಎಂಪಿಯ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ : ಕಲ್ಲಡ್ಕ ಶಾಲೆ ಮಕ್ಕಳ ಊಟಕ್ಕೆ ಕಲ್ಲು- ಅಲ್ಪಸಂಖ್ಯಾತರ ಅರೇಬಿಕ್ ಕಾಲೇಜಿಗೆ ಸರ್ಕಾರದಿಂದ ಹಣದ ಹೊಳೆ

  • ಕಲ್ಲಡ್ಕ ಶಾಲೆ ಮಕ್ಕಳ ಊಟಕ್ಕೆ ಕಲ್ಲು- ಅಲ್ಪಸಂಖ್ಯಾತರ ಅರೇಬಿಕ್ ಕಾಲೇಜಿಗೆ ಸರ್ಕಾರದಿಂದ ಹಣದ ಹೊಳೆ

    ಕಲ್ಲಡ್ಕ ಶಾಲೆ ಮಕ್ಕಳ ಊಟಕ್ಕೆ ಕಲ್ಲು- ಅಲ್ಪಸಂಖ್ಯಾತರ ಅರೇಬಿಕ್ ಕಾಲೇಜಿಗೆ ಸರ್ಕಾರದಿಂದ ಹಣದ ಹೊಳೆ

    ಬೆಂಗಳೂರು: ಒಂದು ಕಡೆ ಬಂಟ್ವಾಳದಲ್ಲಿರೋ ಕಲ್ಲಡ್ಕ ಪ್ರಭಾಕರ್ ಭಟ್ ಶಾಲೆಗೆ ನಿಯಮಾವಳಿಗಳ ಹೆಸರಿನಲ್ಲಿ ಅನುದಾನ ನಿಲ್ಲಿಸಿ ಮಕ್ಕಳ ಊಟ ಕಿತ್ತುಕೊಂಡ ಸಿದ್ದರಾಮಯ್ಯ ಸರ್ಕಾರ ಈಗ ಸಚಿವ ಜಾರ್ಜ್ ಕ್ಷೇತ್ರದಲ್ಲಿರೋ ದಾರುಲ್ ಉಲೂಮ್ ಅರೇಬಿಕ್ ಕಾಲೇಜಿಗೆ ಹಣದ ಹೊಳೆಯನ್ನೇ ಹರಿಸಿದೆ.

    ಸಚಿವ ಜಾರ್ಜ್ ಒತ್ತಡದಿಂದಲೋ ಅಥವಾ ಅಲ್ಪಸಂಖ್ಯಾತರ ಮೇಲಿನ ಪ್ರೀತಿಯಿಂದಲೂ ಕೋಟಿ ಕೋಟಿ ಹಣ ಅರೇಬಿಕ್ ಕಾಲೇಜಿಗೆ ನೀಡಲಾಗಿದೆ. ಅರೇಬಿಕ್ ಕಾಲೇಜಿನ ಆವರಣದಲ್ಲಿ ಧಾರ್ಮಿಕ ಗುರು ದಿವಂಗತ ಆಶ್ರಫ್ ಸ್ಮಾರಕ ಭವನ ನಿರ್ಮಾಣಕ್ಕೆ ಬಜೆಟ್‍ನಲ್ಲಿ ಸರ್ಕಾರ 10 ಕೋಟಿ ರೂ. ಅನುದಾನ ನೀಡಿದರೆ, ಪೈಪೋಟಿಗೆ ಬಿದ್ದಂತೆ ಬಿಬಿಎಂಪಿಯೂ ಅರೇಬಿಕ್ ಕಾಲೇಜಿಗೆ 10 ಕೋಟಿ ರೂ. ಹಾಗೂ ಜಾಮಿಯ ಉಲ್ ಉಲಾಮು ಗ್ರೂಪ್ ಶಾಲಾ ಕಟ್ಟಡ ನಿರ್ಮಾಣಕ್ಕೆ 10 ಕೋಟಿ ರೂಪಾಯಿಯನ್ನು ಬಿಬಿಎಂಪಿ ಬಜೆಟ್ ನಲ್ಲಿ ಘೋಷಿಸಿದೆ.

    ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಕ್ಕೆ ಹಾಗೂ ಬಿಬಿಎಂಪಿಗೆ ಅರೇಬಿಕ್ ಕಾಲೇಜಿನ ಮೇಲೆ ಇಷ್ಟೊಂದು ಪ್ರೀತಿ ಯಾಕೆ ಅಂತ ಹುಡುಕುತ್ತಾ ಹೋದರೆ ಅಸಲಿ ಉತ್ತರವೇ ಬೇರೆ ಇದೆ. ಉತ್ತರ ಭಾರತದ ಮುಸ್ಲಿಮರಿಗೆ ದೆಹಲಿಯ ಜಾಮೀಯಾ ಮಸೀದಿ ಶಾಹಿ ಇಮಾಮ್ ಆದೇಶ ಹೇಗೆ ಪವಿತ್ರವೋ ಹಾಗೆ ಕರ್ನಾಟಕದ ಬಹುತೇಕ ಮುಸ್ಲಿಮರಿಗೆ ಈ ಅರೇಬಿಕ್ ಕಾಲೇಜು ನೀಡುವ ಆದೇಶವೇ ವೇದವಾಕ್ಯ. ಇಲ್ಲಿನ ಧರ್ಮಗುರು ನೀಡುವ ಒಂದೇ ಒಂದು ವಾಕ್ಯಕ್ಕೆ ರಾಜಕೀಯ ಮುಖಂಡರು ಎಡತಾಕುತ್ತಲೇ ಇರುತ್ತಾರೆ. ಪ್ರಮುಖರ ಓಲೈಕೆಗೆ ನಿತ್ಯವೂ ಮುಂದಾಗುತ್ತಾರೆ.

    ಕೇವಲ ಚುನಾವಣೆಗೋಸ್ಕರ, ಮತಗಳಿಗೋಸ್ಕರ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಈ ರೀತಿಯೂ ಅಲ್ಪಸಂಖ್ಯಾತರ ಮನವೊಲಿಕೆಯಲ್ಲಿ ತೊಡಗುತ್ತಾ? ಕಲ್ಲಡ್ಕ ಪ್ರಭಾಕರ್ ಭಟ್ ಶಾಲೆಯ ಮಕ್ಕಳು ಊಟವಿಲ್ಲದೆ ಪರಿತಪಿಸಿದ ದೃಶ್ಯ ಸರ್ಕಾರದ ಕಣ್ಣಿಗೆ ಕಾಣಲಿಲ್ವಾ ಎಂಬ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಎದ್ದಿದೆ.