Tag: Appu Family

  • ಅಪ್ಪು ಇಷ್ಟೆಲ್ಲ ಸಮಾಜಕ್ಕೆ ದಾನ ಮಾಡಿದ್ದಾನೆ ಎಂದುಕೊಂಡಿರಲಿಲ್ಲ: ಗೋವಿಂದರಾಜು

    ಅಪ್ಪು ಇಷ್ಟೆಲ್ಲ ಸಮಾಜಕ್ಕೆ ದಾನ ಮಾಡಿದ್ದಾನೆ ಎಂದುಕೊಂಡಿರಲಿಲ್ಲ: ಗೋವಿಂದರಾಜು

    ಬೆಂಗಳೂರು: ಅಪ್ಪು ಇಷ್ಟೆಲ್ಲ ಸಮಾಜಕ್ಕೆ ದಾನ ಮಾಡಿದ್ದಾನೆ ಎಂದು ನಾನು ತಿಳಿದುಕೊಂಡಿರಲಿಲ್ಲ ಎಂದು ಪುನೀತ್ ಮಾವ ನಿರ್ಮಾಪಕ ಗೋವಿಂದರಾಜು ಪಬ್ಲಿಕ್ ಟಿವಿ ಜೊತೆ ಮಾತನಾಡಿ ಕಣ್ಣೀರು ಹಾಕಿದರು.

    ಅಪ್ಪು ಅಗಲಿಕೆಯಿಂದ ಇಡೀ ಕುಟುಂಬವೇ ಕಣ್ಣೀರು ಹಾಕುತ್ತಿದ್ದು, ಗೋವಿಂದರಾಜು ಅವರು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ್ದು, ಗೋವಿಂದ್ ಮಾಮ.. ಗೋವಿಂದ್ ಮಾಮ… ಎಂದು ಮುದ್ದು ಮುದ್ದಾಗಿ ಕರೆಯುತ್ತಿದ್ದ ನಮ್ಮ ಅಪ್ಪುಗೆ ಈ ರೀತಿಯಾಗಿದೆ ಎಂದು ನಂಬುಲು ಆಗುತ್ತಿಲ್ಲ. ಅಪ್ಪು ಫ್ಯಾಮಿಲಿ ಜೊತೆ ನಾನು ಸದಾ ಇರುತ್ತೇನೆ ಎಂದು ಭಾವುಕರಾದರು. ಇದನ್ನೂ ಓದಿ: ಅಪ್ಪು ಮರಕೋತಿ ಆಟವಾಡುತ್ತಿದ್ದನ್ನು ಸದಾ ನೆನಪಿಸಿಕೊಳ್ಳುವ ಬಾಲ್ಯದ ಗೆಳೆಯ

    ನಮ್ಮ ಮದುವೆಯಲ್ಲಿ ಪುನೀತ್ ಇನ್ನು ಪುಟಾಣಿ ಕಂದ. ಲಾಸ್ಟ್ ಟೈಮ್ ಅಪ್ಪು ನೋಡಿದಾಗ ಅಪ್ಪಾಜಿ ನೋಡಿದಂತೆ ಆಯ್ತು. ಮದುವೆಗೆ ಬಂದ ಅಪ್ಪು ವೈಟ್ ಪಂಚೆ, ವೈಟ್ ಶರ್ಟ್ ಹಾಕಿದ್ದ. ಆಗ ಏನ್ ಅಪ್ಪು ಅಪ್ಪಾಜಿ ಥರ ಕಾಣ್ತಾ ಇದ್ದಿಯಾ ಮನೆಗೆ ಹೋಗಿ ದೃಷ್ಟಿ ತೆಗೆಸಿಕೊ ಎಂದಿದ್ದೆ. ಅದಕ್ಕೆ ಅಪ್ಪು, ಮಾಮ ಇದು ಜಾಹೀರಾತು ಮಾಡಿದೆ ಆಗ ತಗೆದುಕೊಂಡೆ ಎಂದು ಹೇಳಿದ್ದು, ಈಗಲೂ ಕಿವಿಯಲ್ಲಿ ಕೇಳ್ತಾ ಇದೆ ಎಂದು ನೆನೆದರು.

    ಅಪ್ಪು ಸಮಾಜಕ್ಕೆ ಇಷ್ಟೆಲ್ಲ ಮಾಡಿದ ಅಂತ ಎನಿಸಿರಲಿಲ್ಲ. ಯಾರಿಗೂ ಹೇಳಿಬೇಡಿ ಎಂದು ಹೇಳಿ ಸಹಾಯ ಮಾಡ್ತಾ ಇದ್ದ ನಮ್ಮ ಅಪ್ಪು ಎಂದು ಹೆಮ್ಮೆಯಿಂದ ಹೇಳಿದರು. ಏನನ್ನು ಮಾಡಬೇಕಾದರೂ ನಮ್ಮನ್ನು ಕೇಳಿಯೇ ಮಾಡುತ್ತಾ ಇದ್ದ. ನಮಗೆ ಹೇಳಿದೆ ಜನರಿಗೆ ಸಹಾಯ ಮಾತ್ರ ಮಾಡಿರುವುದು. ಕಡೆಯ ಬಾರಿ ಅಪ್ಪು ಕಂಡಾಗ ದೃಷ್ಟಿ ಆಗುವಷ್ಟು ಚೆಂದವಾಗಿ ಕಂಡ ಪುಟಾಣಿ. ಈಗ ನಮ್ಮ ಪವರ್ ಇಲ್ಲ ಎಂದು ನಂಬಲು ಆಗಲ್ಲ. ಪುನೀತ್ ಕುಟುಂಬದ ಜತೆ ನಾವಿದ್ದೀವಿ. ಅವರಿಗೆ ಏನ್ ಬೇಕಾದ್ರೂ ನಾವು ಮಾಡ್ತಿವಿ. ಹೆಂಡ್ತಿ ಅಶ್ವಿನಿ, ಇಬ್ಬರು ಮಕ್ಕಳು ಜವಾಬ್ದಾರಿ ನೋಡ್ತಿವಿ. ಪದೇ ಪದೇ ಮನೆಗೆ ಹೋಗಿ ಬರ್ತಿವಿ ಎಂದರು. ಇದನ್ನೂ ಓದಿ: ಸಣ್ಣ ವಯಸ್ಸಿನ ದೊಡ್ಡ ಕಲಾವಿದನನ್ನು ಕಳೆದುಕೊಂಡಿದ್ದೇವೆ: ರಮೇಶ್ ಜಾರಕಿಹೊಳಿ

  • ನಾಳೆ ಪುನೀತ್ 11ನೇ ದಿನದ ಪುಣ್ಯಾರಾಧನೆ – ಅಪ್ಪು ಕುಟುಂಬಸ್ಥರಿಂದ ಸಿದ್ಧತೆ

    ನಾಳೆ ಪುನೀತ್ 11ನೇ ದಿನದ ಪುಣ್ಯಾರಾಧನೆ – ಅಪ್ಪು ಕುಟುಂಬಸ್ಥರಿಂದ ಸಿದ್ಧತೆ

    ಬೆಂಗಳೂರು: ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ 11ನೇ ದಿನದ ಪುಣ್ಯತಿಥಿ ಕಾರ್ಯಕ್ರಮ ಸೋಮವಾರ ನಡೆಯಲಿದ್ದು, ಕುಟುಂಬಸ್ಥರು ತಯಾರಿ ನಡೆಸುತ್ತಿದ್ದಾರೆ.

    ಪುನೀತ್ ಅಗಲಿ ಇಂದಿಗೆ ಹತ್ತು ದಿನ ಕಳೆದಿದ್ದು, ನಾಳೆ 11ನೇ ದಿನದ ಪುಣ್ಯತಿಥಿ ಕಾರ್ಯಕ್ರಮವಾಗಿರುವುದರಿಂದ ಪುನೀತ್ ನಿವಾಸದಲ್ಲಿ ಅಪ್ಪುಗೆ ಬಹಳ ಇಷ್ಟವಾದಂತಹ ತಿಂಡಿ, ಅಡುಗೆ ಎಲ್ಲವನ್ನು ಕುಟುಂಬಸ್ಥರು ಬಹಳ ಮಡಿಯಿಂದ ಮಾಡುತ್ತಿದ್ದಾರೆ.  ಇದನ್ನೂ ಓದಿ: ‘ಅಪ್ಪು ಜೊತೆ ರಾಜ್ ಸಮಾಧಿ ನೋಡಲು ಬರ್ತಿದ್ದ ನಾವು ಈಗ ಅವರದ್ದೇ ಸಮಾಧಿ ನೋಡೋಕೆ ಬರುವಂಗಾಯ್ತು’

    ಈಗಾಗಲೇ ಸದಾಶಿವ ನಗರದಲ್ಲಿರುವ ಪುನೀತ್ ನಿವಾಸ ಬಳಿ ಶಾಮಿಯಾನ ಹಾಕಿ ಸಿದ್ಧತೆ ನಡೆಸಲಾಗುತ್ತಿದೆ. ನಾಳೆ ಬೆಳಗ್ಗೆ 9 ಅಥವಾ 10 ಗಂಟೆಯೊಳಗೆ ನಿವಾಸದಲ್ಲಿ ಅಪ್ಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಬಳಿಕ ಬೆಳಗ್ಗೆ 11 ಅಥವಾ 12 ಗಂಟೆಯೊಳಗೆ ಕುಟುಂಬಸ್ಥರು ಕಂಠೀರವ ಸ್ಟುಡಿಯೋಗೆ ತಲುಪಿ ಪುನೀತ್ ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ. ಇದನ್ನೂ ಓದಿ: ಸಮಾಧಿ ಬಳಿಯ ದೇವಸ್ಥಾನದಲ್ಲಿ ಅಪ್ಪು ಅಭಿಮಾನಿ ಮದುವೆ

    ಆಪ್ತ ವಲಯ, ಸಿನಿಮಾ ಮಂದಿಗೆ ಮತ್ತೊಂದು ದಿನ ಪೂಜೆಗೆ ಅವಕಾಶ ಕಲ್ಪಿಸಲಾಗಿದೆ ಮತ್ತು ನವೆಂಬರ್ 14ರಂದು ಫಿಲಂ ಚೇಂಬರ್ ಅರಮನೆ ಆವರಣದಲ್ಲಿ ಅಪ್ಪು ನುಡಿನಮನ ಕಾರ್ಯಕ್ರಮವನ್ನು ಆಯೋಜಿಸಿದ್ದು, ರಾಜಕೀಯ ನಾಯಕರು, ದಕ್ಷಿಣ ಭಾರತದ ನಟರಿಗೆ ಆಹ್ವಾನ ನೀಡಿದೆ. ಜೊತೆಗೆ ಪುನೀತ್ ಸವಿನೆನಪಿನಲ್ಲಿ ನವೆಂಬರ್ 9 ರಂದು ಅರಮನೆ ಮೈದಾನದಲ್ಲಿ ಅಭಿಮಾನಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.