Tag: appaji gowda

  • ಮತದಾರರಿಗೆ ಹಣ ಹಂಚುತ್ತಿದ್ದಾಗಲೇ ಸಿಕ್ಕಿ ಬಿದ್ದ ಜೆಡಿಎಸ್ ಮುಖಂಡನ ಪುತ್ರ

    ಮತದಾರರಿಗೆ ಹಣ ಹಂಚುತ್ತಿದ್ದಾಗಲೇ ಸಿಕ್ಕಿ ಬಿದ್ದ ಜೆಡಿಎಸ್ ಮುಖಂಡನ ಪುತ್ರ

    – 1.39 ಲಕ್ಷ ರೂ. ನಗದು ಜಪ್ತಿ ಮಾಡಿದ ಐಟಿ ಅಧಿಕಾರಿಗಳು

    ಶಿವಮೊಗ್ಗ: ಮಾಜಿ ಶಾಸಕ, ಜೆಡಿಎಸ್ ಮುಖಂಡ ಅಪ್ಪಾಜಿ ಗೌಡ ಅವರ ಪುತ್ರ ಅಜಿತ್ ಕುಮಾರ್ ಮತದಾರರಿಗೆ ಹಣ ಹಂಚುತ್ತಿದ್ದಾಗಲೇ ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.

    ಭದ್ರಾವತಿಯ ಎಂಪಿಎಂ – ಸುರಗಿ ತೋಪಿನಲ್ಲಿ ಅಜಿತ್ ಕುಮಾರ್ ಹಣ ಹಂಚುತ್ತಿದ್ದರು. ಈ ಕುರಿತು ಐಟಿ ಅಧಿಕಾರಿಗಳಿಗೆ ಖಚಿತ ಮಾಹಿತಿ ಸಿಕ್ಕಿತ್ತು. ಹೀಗಾಗಿ ಎಂಪಿಎಂ ಠಾಣೆಯ ಪೊಲೀಸರ ಸಹಕಾರದಿಂದ ದಾಳಿ ಮಾಡಿದ ಅಧಿಕಾರಿಗಳು 1.39 ಲಕ್ಷ ರೂ. ನಗದು ಹಣವನ್ನು ಜಪ್ತಿ ಮಾಡಿದ್ದಾರೆ. ಇದನ್ನು ಓದಿ: ಶಿವಮೊಗ್ಗಕ್ಕೆ ಹೊರಟಿದ್ದ ಕಾರಿನ ಸ್ಟೆಪ್ನಿಯಲ್ಲಿತ್ತು 2.30 ಕೋಟಿ ರೂ.!

    ಅಜಿತ್ ಕುಮಾರ್ ಬೆಳಗ್ಗೆಯಿಂದಲೇ ಭದ್ರಾವತಿಯ ವಿವಿಧ ಗ್ರಾಮಗಳಿಗೆ ತೆರಳಿ ಮತದಾರರಿಗೆ ಹಣ ಹಂಚುತ್ತಿದ್ದರು. ಮಧ್ಯಾಹ್ನ ಎಂಪಿಎಂ- ಸುರಗಿ ತೋಪಿಗೆ ಬಂದಾಗ ಐಟಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ.

    ರಾಜ್ಯದ 14 ಲೋಕಸಭಾ ಕ್ಷೇತ್ರಗಳ ಮತದಾನ ಮಂಗಳವಾರ ನಡೆಯಲಿದ್ದು, ಕುರುಡು ಕಾಂಚಣ ಭಾರೀ ಸದ್ದು ಮಾಡುತ್ತಿದೆ. ಬೆಂಗಳೂರಿನಿಂದ ಶಿವಮೊಗ್ಗ ಹಾಗೂ ಭದ್ರಾವತಿಗೆ ಕಾರಿನ ಸ್ಟೆಪ್ನಿ ಟೈರ್ ಒಳಗಡೆ ಸಾಗಿಸುತ್ತಿದ್ದ 2.30 ಕೋಟಿ ರೂ.ವನ್ನು ಶನಿವಾರ ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಈ ಪ್ರಕರಣಕ್ಕೆ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಭದ್ರಾವತಿ ಮಾಜಿ ಶಾಸಕ ಅಪ್ಪಾಜಿ ಗೌಡ ಅವರಿಗೆ ಐಟಿಯಿಂದ ನೋಟಿಸ್ ಜಾರಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಮಾಜಿ ಶಾಸಕರ ಓರ್ವ ಆಪ್ತನನ್ನು ವಶಕ್ಕೆ ಪಡೆಯಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ.

  • ಬಿಎಸ್‍ವೈ ಅಡ್ಡಾದಲ್ಲಿ ಅಖಾಡಕ್ಕೆ ಇಳಿದ ದಿನವೇ ಡಿಕೆಶಿಯಿಂದ ಟ್ರಬಲ್ ಶೂಟ್!

    ಬಿಎಸ್‍ವೈ ಅಡ್ಡಾದಲ್ಲಿ ಅಖಾಡಕ್ಕೆ ಇಳಿದ ದಿನವೇ ಡಿಕೆಶಿಯಿಂದ ಟ್ರಬಲ್ ಶೂಟ್!

    ಶಿವಮೊಗ್ಗ: ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಗೆಲುವಿನ ನಾಗಲೋಟಕ್ಕೆ ಬ್ರೇಕ್ ಹಾಕಲು ಸಿಎಂ ಕುಮಾರಸ್ವಾಮಿ ಮತ್ತು ಡಿಕೆ ಬ್ರದರ್ಸ್ ತಂತ್ರಗಾರಿಕೆ ರೂಪಿಸಿದ್ದು, ಭದ್ರಾವತಿಯಲ್ಲಿ ಮೊದಲ ಯತ್ನದಲ್ಲೇ ಯಶಸ್ವಿಯಾಗಿದ್ದಾರೆ.

    ಶಿವಮೊಗ್ಗದ ಭದ್ರಾವತಿಯಲ್ಲಿ ಬಂಡಾಯ ಶಮನವಾಗಿದೆ. ಹಾವು ಮುಂಗುಸಿಯಂತಿದ್ದ ಭದ್ರಾವತಿಯ ಕಾಂಗ್ರೆಸ್ ಶಾಸಕ ಸಂಗಮೇಶ್, ಜೆಡಿಎಸ್‍ನ ಅಪ್ಪಾಜಿ ಗೌಡ ದಶಕಗಳ ಬಳಿಕ ಒಂದಾಗಿದ್ದಾರೆ. ಇಬ್ಬರ ಮಧ್ಯೆ ಇದ್ದ ಮುನಿಸಿಗೆ ಟ್ರಬಲ್ ಶೂಟರ್, ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಇತಿಶ್ರೀ ಹಾಡಿದ್ದಾರೆ.

    ಇವರಿಬ್ಬರನ್ನೂ ಡಿ.ಕೆ ಶಿವಕುಮಾರ್ ಒಂದು ಮಾಡಿದ್ದು, ಇನ್ಮುಂದೆ ಇವರಿಬ್ಬರೂ ಒಟ್ಟಿಗೆ ಜಂಟಿ ಪ್ರಚಾರ ಮಾಡಲಿದ್ದಾರೆ. ಇಬ್ಬರೂ ಜೊತೆಗೆ ಚುನಾವಣೆ ನಡೆಸಲಿದ್ದಾರೆ. ಕಾರ್ಯಕರ್ತರು, ನಾಯಕರ ನಡುವೆ ಒಟ್ಟಿಗೆ ಸಾಗಲು ತೀರ್ಮಾನಿಸಿದ್ದಾರೆ ಎಂದು ಡಿಕೆಶಿ ಘೋಷಿಸಿದ್ದಾರೆ.

    ಶುಕ್ರವಾರ ರಾತ್ರಿ ತುರ್ತು ಪತ್ರಿಕಾಗೋಷ್ಠಿ ಕರೆದ ಡಿಕೆಶಿ ಇಬ್ಬರನ್ನು ಅಕ್ಕ ಪಕ್ಕ ಕೂರಿಸಿಕೊಂಡು, ಇಬ್ಬರು ನಾಯಕರು ಒಂದಾಗಿದ್ದಾರೆ. ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವ ಕಾರಣಕ್ಕೆ ಮಾಜಿ ಹಾಲಿ ಶಾಸಕರು ಒಟ್ಟಿಗೆ ಪ್ರಚಾರ ನಡೆಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಇನ್ನು ಮುಂದೆ ಜಂಟಿ ಪ್ರಚಾರ ಮಾಡಲಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು.

    ಶಿವಮೊಗ್ಗವನ್ನು ಗೆಲ್ಲಬೇಕೆಂದು ಪಣ ತೊಟ್ಟಿರುವ ಮೈತ್ರಿ ಸರ್ಕಾರದ ಪ್ಲಾನ್‍ಗೆ ಯಡಿಯೂರಪ್ಪ ಹೆದರಿ ಬಿಟ್ಟರಾ ಎಂಬ ಪ್ರಶ್ನೆ ಎದುರಾಗಿದೆ. ಶುಕ್ರವಾರದಿಂದ ಶಿಕಾರಿಪುರದಲ್ಲಿ ವಾಸ್ತವ್ಯ ಹೂಡಿರುವ ಯಡಿಯೂರಪ್ಪ ಇನ್ನೂ ಮೂರು ದಿನ ಶಿವಮೊಗ್ಗದಲ್ಲಿ ಉಳಿದು ಜೋಡೆತ್ತುಗಳಿಗೆ ತಂತ್ರಗಳಿಗೆ ಪ್ರತಿತಂತ್ರ ರೂಪಿಸಲಿದ್ದಾರೆ. ಶಿವಮೊಗ್ಗ, ಭದ್ರಾವತಿಯಲ್ಲಿ ಇಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರಾಘವೇಂದ್ರ ಪರವಾಗಿ ಪ್ರಚಾರ ನಡೆಸಲಿದ್ದಾರೆ.

  • ರಾಜ್ಯ ಒಕ್ಕಲಿಗರ ಸಂಘದಲ್ಲಿ ಮಹಾಬಿರುಕು!

    ರಾಜ್ಯ ಒಕ್ಕಲಿಗರ ಸಂಘದಲ್ಲಿ ಮಹಾಬಿರುಕು!

    ಬೆಂಗಳೂರು: ಸದಾ ಒಂದಲ್ಲೊಂದು ವಿಚಾರದಲ್ಲಿ ಸುದ್ದಿಯಾಗಿರೊ ರಾಜ್ಯ ಒಕ್ಕಲಿಗರ ಸಂಘದಲ್ಲಿ ಇದೀಗ ಮಹಾಬಿರುಕು ಬಿಟ್ಟಿದೆ.

    ಅಂದು ಸಂಘದ ಅಧ್ಯಕ್ಷರಾಗಿದ್ದ ಡಾ.ಅಪ್ಪಾಜಿಗೌಡರನ್ನ ಕೆಳಗಿಸಲು ಬಳಸಿದ ರಣತಂತ್ರ, ಈಗಿನ ಅಧ್ಯಕ್ಷರಿಗೆ ಮುಳುವಾಗಿ ಪರಿಣಮಿಸಿದೆ ಎನ್ನಲಾಗಿದೆ. ಒಕ್ಕಲಿಗರ ಸಂಘದ ಅಧ್ಯಕ್ಷ ಬೆಟ್ಟೇಗೌಡರ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಸಜ್ಜಾಗಿದ್ದು, ಸಂಘದ ಪದಾಧಿಕಾರಿಗಳು, ನಿರ್ದೇಶಕರು ಬೆಟ್ಟೇಗೌಡ ಮತ್ತು ಅವರ ತಂಡದ ವಿರುದ್ಧ ತಿರುಗಿಬಿದ್ದಿದ್ದಾರೆ.

    ಸಂಘದ ಅಧ್ಯಕ್ಷ ಡಿಎನ್ ಬೆಟ್ಟೇಗೌಡ, ಕಾರ್ಯದರ್ಶಿ ಪ್ರೋ ಎಂ ನಾಗರಾಜ್, ಖಜಾಂಚಿ ಡಿಸಿಕೆ ಕಾಳೇಗೌಡರಿಂದಲೇ ಒಕ್ಕಲಿಗ ಸಂಘದಲ್ಲಿ ಭಾರಿ ಸಮಸ್ಯೆ ಎದುರಾಗಲು ಕಾರಣವಾಗುತ್ತಿದೆಯಂತೆ. 270 ಜನರನ್ನು ಸಂಘಕ್ಕೆ ನೇಮಕ ಮಾಡಿಕೊಳ್ಳಲು ಸಂಘದ ಸಭೆಯಲ್ಲಿ ತೀರ್ಮಾನವಾಗಿತ್ತು. ಆದ್ರೆ 700ಕ್ಕೂ ಹೆಚ್ಚು ಜನರನ್ನು ಬೆಟ್ಟೇಗೌಡ ಮತ್ತು ಅವರ ತಂಡ ನೇಮಕ ಮಾಡಿಕೊಂಡಿದ್ದಾರೆ. ಈಗಲೇ ಇರೋ ಸಿಬ್ಬಂದಿ, ನೌಕರರುಗಳಿಗೆ ಸಂಬಳವನ್ನು ತಿಂಗಳ ಮಧ್ಯದಲ್ಲಿ ನೀಡುತ್ತಿದ್ದಾರೆ. ಇದರಿಂದಾಗಿ ಸಂಘದ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ಸಂಘದ ಪದಾಧಿಕಾರಿಗಳು, ನಿರ್ದೇಶಕರು ಒಕ್ಕಲಿಗರ ಸಂಘಕ್ಕೆ ಇಂದು ಅವಿಶ್ವಾಸ ಪತ್ರ ನೀಡಿ ಆರೋಪಿಸಿದ್ದಾರೆ.

    ಒಕ್ಕಲಿಗ ಸಂಘದ ನಾಲ್ಕು ಜನ ಪದಾಧಿಕಾರಿಗಳು ಸೇರಿದಂತೆ 19 ಜನ ನಿರ್ದೇಶಕರು ಅವಿಶ್ವಾಸ ನಿರ್ಣಯಕ್ಕೆ ಸಹಮತವಿದೆ ಎಂದು ಸಂಘಕ್ಕೆ ಪತ್ರವನ್ನು ಬರೆದಿದ್ದರು. ಇನ್ನೂ ಈ ಬಗ್ಗೆ ಒಕ್ಕಲಿಗರ ಸಂಘ ಕಾರ್ಯದರ್ಶಿ ಪ್ರೊ. ನಾಗರಾಜ್ ಮಾತನಾಡಿದ್ದು, ಅವಿಶ್ವಾಸ ನಿರ್ಣಯ ಮಂಡನೆ ಮಾಡಲಿ, ಇದು ಪ್ರಜಾಪ್ರಭುತ್ವ ಸಂಘದ ಬೈಲಾ ಪ್ರಕಾರ ಅವಿಶ್ವಾಸ ನಿರ್ಣಯ ಮಂಡನೆಗೆ ಏಳು ದಿನ ಕಾಲಾವಕಾಶವಿದೆ. ಅಷ್ಟರೊಳಗೆ ಅವಿಶ್ವಾಸ ಸಾಬೀತು ಪಡಿಸಬೇಕು. ಇಲ್ಲವಾದಲ್ಲಿ ಕೂಡಲೆ ಸ್ಥಾನ ಬಿಟ್ಟು ಕೊಡುತ್ತೇನೆ. ಅಲ್ಲಿಯವರೆಗೂ ಏನ್ ಬೇಕಾದ್ರೂ ಆಗಬಹುದು, ಕಾದುನೋಡಿ ಎಂದಿದ್ದಾರೆ.

    ಒಕ್ಕಲಿಗರ ಸಂಘದ ಈ ಹಿಂದಿನ ಅಧ್ಯಕ್ಷ ಡಾ ಅಪ್ಪಾಜಿಗೌಡರ ವಿರುದ್ಧ ಬೆಟ್ಟೇಗೌಡ ಅವಿಶ್ವಾಸ ನಿರ್ಣಯ ಮಂಡಿಸಿ ನೂತನವಾಗಿ ಅಧ್ಯಕ್ಷರಾಗಿದ್ದರು. ಈಗ ಅದೇ ಮಾದರಿಯಲ್ಲಿ ಮತ್ತೆ ಬೆಟ್ಟೇಗೌಡರನ್ನು ಇಳಿಸಲು ಸಜ್ಜಾಗುತ್ತಿದೆ. ಡಿಸೆಂಬರ್‍ನಲ್ಲಿ ಸಂಘದ ಚುನಾವಣಾ ನಡೆಯಲಿದ್ದು, ಈ ಹೊತ್ತಿನಲ್ಲಿ ಅವಿಶ್ವಾಸ ನಿರ್ಣಯ ಪತ್ರ ಕುತೂಹಲ ಮೂಡಿಸಿದೆ ಎಂದು ಸಂಘದ ಕಾರ್ಯದರ್ಶಿ ಪ್ರೋ. ನಾಗರಾಜು ಹೇಳಿದ್ದಾರೆ.

  • ವೋಟ್ ಹಾಕದಿದ್ರೆ ಭದ್ರಾವತಿ ಸ್ಟೈಲ್ ತೋರಿಸ್ಬೇಕಾಗುತ್ತೆ: ಶಾಸಕ ಅಪ್ಪಾಜಿ ಗೌಡ ಧಮ್ಕಿ

    ವೋಟ್ ಹಾಕದಿದ್ರೆ ಭದ್ರಾವತಿ ಸ್ಟೈಲ್ ತೋರಿಸ್ಬೇಕಾಗುತ್ತೆ: ಶಾಸಕ ಅಪ್ಪಾಜಿ ಗೌಡ ಧಮ್ಕಿ

    ಶಿವಮೊಗ್ಗ: ಭದ್ರಾವತಿ ಶಾಸಕ ಅಪ್ಪಾಜಿಗೌಡ ಫೋನಿನಲ್ಲಿ ಧಮ್ಕಿ ಹಾಕಿರೋ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ಸಂಘಟನೆಯೊಂದರ ಮುಖಂಡನಿಗೆ ಕರೆ ಮಾಡಿ ಮಾತನಾಡಿರೋ ಅಪ್ಪಾಜಿಗೌಡ, ನನಗೆ ಓಟ್ ಹಾಕದೇ ಹೋದ್ರೆ ಎಲ್ಲಿ ನೋಡ್ಕೋಬೇಕೋ ಅಲ್ಲಿ ನೋಡ್ಕೋತಿನಿ. ಎಲ್ಲರನ್ನು ಇರಲಿ ಅಂತ ಫ್ರೀ ಬಿಟ್ಟಿದ್ದೀನಿ. ಎಲೆಕ್ಷನ್ ಆಗಲಿ ಗೊತ್ತಲ ಭದ್ರವಾತಿ ಸ್ಟೈಲ್ ತೋರಿಸದಿದ್ರೆ ಅಂತ ಹಳೇ ಸ್ಟೈಲ್‍ನಲ್ಲಿ ಧಮ್ಕಿ ಹಾಕಿರೋ ಆಡಿಯೋ ಈಗ ವೈರಲ್ ಆಗಿದೆ. ಈ ಆಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭಿಸಿದೆ.

    ಆಡಿಯೋದಲ್ಲೇನಿದೆ?:
    * ಮೋಹನ್- ಹಲೋ ಮಂಜು ಅವರೇ.. ಅಣ್ಣನ ಕೈನಲ್ಲಿ ಕೊಡ್ತೀನಿ ಮಾತಾಡು
    * ಅಪ್ಪಾಜಿಗೌಡ- ಹಲೋ
    * ಮೋಹನ- ಹಲೋ ನಮಸ್ಕಾರ ಅಣ್ಣ
    * ಅಪ್ಪಾಜಿಗೌಡ- ಏನಪ್ಪ
    * ಮೋಹನ- ನಾನು ಮೋಹನ ಅಣ್ಣ
    * ಅಪ್ಪಾಜಿ ಗೌಡ- ಹಾ ಹೇಳೋ ಮೋಹನ
    * ಮೋಹನ- ಅದೇ ಈ ಸಲ ನಾವೆಲ್ಲ ನಿಮಗೆ ಓಟ್ ಮಾಡ್ತೀವಿ ಅಣ್ಣ
    * ಅಪ್ಪಾಜಿಗೌಡ- ಏಲ್ಲೋ ತಾಸಿಗೆ ಒಂದೊದು ಮಾತಾಡ್ತಿಯಲ್ಲೋ ಮೋಹನ
    * ಮೋಹನ- ಅಣ್ಣ ಅಮ್ಮ ಬೈದ್ರು ಅಣ್ಣ ಬಾಯಿಗೆ ಬಂದಂಗೆ
    * ಅಪ್ಪಾಜಿಗೌಡ- ಅಮ್ಮ ಬೈದ್ರು ನಿನಗೆ ಬುದ್ಧಿ ಬಂದಿಲ್ಲ. ನನ್ಮಗಂದು ಅವನನ್ನ.. ಪೋಲೀಸ್ ನವನಿಗೆ ನೀನು ಹೋಗಿ ಕೇಳು ನಮ್ಮ ಬಾಸ್ ಅವನು ನನಗೆ ಅವನು ಕೇಳಲಿ ನಾನು ಹೇಳ್ತೀನಿ ಅಂತೀಯ
    * ಮೋಹನ- ತಪ್ಪಾಯ್ತು ಬಿಡಣ್ಣ ನಮ್ಮ ಕಡೆಯಿಂದ ತಪ್ಪಾಯ್ತು
    * ಅಪ್ಪಾಜಿಗೌಡ- ಮಾತಾಡಸಬೇಡ ಅಂತ ಹೇಳು ಸುಮ್ಮನೆ ಇದ್ದುಬಿಡ್ತೀವಿ
    * ಮೋಹನ- ಅಲ್ಲ ಅಣ್ಣ ನಂದು ತಪ್ಪಾಯ್ತು ಅಣ್ಣ
    * ಅಪ್ಪಾಜಿಗೌಡ- ತಪ್ಪಾಯ್ತು ಅನ್ನೋ ಪ್ರಶ್ನೆಯಲ್ಲ. ನಾವೇ ನೇರವಾಗಿ ಮಾತಾಡಿದ್ರು ನೀನು ಹಾಗೆ ಅವತ್ತು ಹಂಗೆ ಮಾತಾಡ್ತೀಯ ಅನ್ನೋದಾದ್ರೆ ನಾನು ರಾಜಕಾರಣ ಇಲ್ದೆ ಹೋದ್ರು ಅವನು ಪೋಲೀಸ್ನೋರನ್ನ ನಾನ್ ಕೇಳ್ತೀನಾ. ಓಟ್ ಮಾಡು ಕೆಲಸ ಮಾಡು ಅಂತ ಹೇಳಿ ಅವರಿಗೆಲ್ಲ ಇನ್ನ ಸ್ವಲ್ಪ ದಿನ ಕಳೀಲಿ. ಅವರಿಗೆ ಎಲ್ಲೆಲ್ಲಿ ಹೇಳಬೇಕೋ ಅಲ್ಲಲ್ಲಿ ಹೇಳ್ತೀನಿ. ನಾವು ಪ್ರೀ ಬಿಟ್ಟುಬಿಟ್ಟಿದ್ದೀವಿ ಅಷ್ಟೆ. ನಾವು ಹಳೆ ಸ್ಟೈಲ್ ಎತ್ತಿದ್ರೆ ಉಮೇಶ ಭದ್ರಾವತಿನಲ್ಲಿ ಇರ್ತಾ ಇರಲಿಲ್ಲ ಗೊತ್ತಾ?
    * ಮೋಹನ-ಆಯ್ತ ಅಣ್ಣ ಅಣ್ಣ