Tag: AP Arjun

  • ಗಂಡು ಮಗುವಿನ ತಂದೆಯಾದ ನಿರ್ದೇಶಕ ಎ.ಪಿ. ಅರ್ಜುನ್

    ಗಂಡು ಮಗುವಿನ ತಂದೆಯಾದ ನಿರ್ದೇಶಕ ಎ.ಪಿ. ಅರ್ಜುನ್

    ಬೆಂಗಳೂರು: ವಿಭಿನ್ನವಾದ ಸಿನಿಮಾ ನಿರ್ದೇಶನದ ಮೂಲಕವಾಗಿ ಗುರುತಿಸಿಕೊಂಡ ಎ,ಪಿ ಅರ್ಜುನ್ ತಂದೆಯಾಗಿರುವ ಖುಷಿಯಲ್ಲಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಸ್ಯಾಂಡಲ್‍ವುಡ್ ನಿರ್ದೇಶಕ ಎ.ಪಿ. ಅರ್ಜುನ್ ಹಾಗೂ ಅನ್ನಪೂರ್ಣ ದಂಪತಿಗೆ ಗಂಡು ಮಗುವಾಗಿದೆ. ಈ ಸಂತಸದ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ನಗುತ್ತಿರುವ ಕಣ್ಣುಗಳಿಂದ ನಗುತ್ತಿರುವ ಮುಖ ನಿಮ್ಮೆಲ್ಲರೊಡನೆ ನನ್ನ ಜೀವನದ ಸಂತೋಷದಾಯಕ ಸುದ್ದಿಗಳನ್ನು ಹಂಚಿಕೊಳ್ಳಲು ನನಗೆ ಸಂತೋಷವಾಗಿದೆ. ನಿನ್ನೆ ಮದ್ಯಾಹ್ನ ಗಂಡು ಮಗುವಾಗಿದ್ದು, ದೇವರ ಕೃಪೆಯಿಂದ ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ಅರ್ಜುನ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ.

     

    View this post on Instagram

     

    A post shared by ap arjun (@aparjun_official)

    ಕಳೆದ ವರ್ಷ ಲಾಕ್‍ಡೌನ್ ಆದಾಗ ಈ ಜೋಡಿ ವಿವಾಹವಾಗಿತ್ತು. ಕಳೆದ ವರ್ಷದ ಮೇ 10ರಂದು ಕುಟುಂಬದ ಆಪ್ತರು ಹಾಗೂ ಕೆಲವೇ ಸ್ನೇಹಿತರ ಸಮ್ಮುಖದಲ್ಲಿ ತಮ್ಮ ದೀರ್ಘಕಾಲದ ಪ್ರೇಮಿ ಅನ್ನಪೂರ್ಣಾ ಅವರನ್ನು ವಿವಾಹವಾಗಿದ್ದರು. ಇತ್ತೀಚೆಗಷ್ಟೆ ಮಡದಿಯ ಸೀಮಂತ ಸಮಾರಂಭವನ್ನು ಸರಳವಾಗಿ ಮನೆಯಲ್ಲಿ ಸೆಲೆಬ್ರೆಟ್ ಮಾಡಿದ್ದರು. ಇದೀಗ ಈ ಮುದ್ದಾದ ಜೋಡಿಗೆ ಗಂಡು ಮಗುವಾಗಿದೆ.

  • ಬ್ಯಾನ್ ಟಿಕ್‍ಟಾಕ್ ಅಭಿಯಾನಕ್ಕೆ ನಿಂತ ಚಂದನವನದ ಸ್ಟಾರ್ ನಿರ್ದೇಶಕರು

    ಬ್ಯಾನ್ ಟಿಕ್‍ಟಾಕ್ ಅಭಿಯಾನಕ್ಕೆ ನಿಂತ ಚಂದನವನದ ಸ್ಟಾರ್ ನಿರ್ದೇಶಕರು

    ಬೆಂಗಳೂರು: ಇತ್ತೀಚೆಗೆ ಸಖತ್ ಸದ್ದು ಮಾಡುತ್ತಿರುವ ಟಿಕ್‍ಟಾಕ್ ಆ್ಯಪ್ ಅನ್ನು ಇಂಡಿಯಾದಲ್ಲಿ ಬ್ಯಾನ್ ಮಾಡುವಂತೆ ಟ್ವಿಟ್ಟರ್‍ನಲ್ಲಿ ಅಭಿಯಾನವನ್ನು ಆರಂಭಿಸಿದ್ದಾರೆ.

    ನಮ್ಮ ಯುವ ಪೀಳಿಗೆ ಇತ್ತೀಚೆಗೆ ಜಾಸ್ತಿ ಬಳಕೆ ಮಾಡುತ್ತಿರುವ ಸಾಮಾಜಿಕ ಜಾಲತಾಣದಲ್ಲಿ ಟಿಕ್‍ಟಾಕ್ ಕೂಡ ಒಂದು. ಇದು ಯಾವ ಮಟ್ಟಕ್ಕೆ ಪ್ರಚಲಿತದಲ್ಲಿ ಇದೆ ಎಂದರೆ ಇಲ್ಲಿ ವಿಡಿಯೋವನ್ನು ಮಾಡಲು ಹೋಗಿ ಜನರು ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಈಗ ಈ ಆ್ಯಪ್ ಅನ್ನು ಬ್ಯಾನ್ ಮಾಡುವಂತೆ ಕೆಲವರು ಒತ್ತಾಯ ಮಾಡುತ್ತಿದ್ದಾರೆ. ಇದರಿಂದ ಮೊದಲಿಗೆ 4.6ರ ರೇಟಿಂಗ್‍ನಲ್ಲಿ ಇದ್ದ ಟಿಕ್‍ಟಾಕ್ ಆ್ಯಪ್ ಈಗ 1.3ಕ್ಕೆ ಇಳಿದಿದೆ.

    ಟಿಕಾಟಾಕ್ ಚೀನಾದ ಆ್ಯಪ್ ಆಗಿದ್ದು, ಸ್ವದೇಶಿ ವಸ್ತುಗಳನ್ನು ಬಳಸಿ ಹಾಗೂ ಚೀನಾದ ವಸ್ತುಗಳನ್ನು ತಿರಸ್ಕರಿಸಬೇಕು ಎಂಬ ನಿಟ್ಟಿನಲ್ಲಿ ಕೆಲವರು ಟಿಕ್‍ಟಾಕ್ ಅನ್ನು ವಿರೋಧ ಮಾಡುತ್ತಿದ್ದರೆ, ಇನ್ನೂ ಕೆಲವರು ಇದರಲ್ಲಿ ವಿಡಿಯೋ ಮಾಡಿ ಜನಪ್ರಿಯತೆ ಪಡೆಯುವ ಗೀಳಿಗೆ ಬಿದ್ದ ಯುವಕ-ಯುವತಿಯರು ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ ಎಂದು ವಾದಿಸುತ್ತಿದ್ದಾರೆ. ಈ ಎಲ್ಲ ಕಾರಣದಿಂದ ಟಿಕ್‍ಟಾಕ್ ಬ್ಯಾನ್ ಆಗಬೇಕು ಎಂದು ಅಭಿಯಾನವನ್ನು ಆರಂಭಿಸಿದ್ದಾರೆ.

    ಟಿಕ್‍ಟಾಕ್ ಆ್ಯಪ್ ನಲ್ಲಿ ಕೆಲ ಸೆಲೆಬ್ರಿಟಿಗಳು ವಿಡಿಯೋ ಮಾಡುತ್ತಿದ್ದರೆ, ಈ ಕಡೆ ಕೆಲ ಸೆಲೆಬ್ರಿಟಿಗಳು ಅದನ್ನು ಬ್ಯಾನ್ ಮಾಡುವಂತೆ ಟ್ವೀಟ್ ಮಾಡುತ್ತಿದ್ದಾರೆ. ಈಗ ಸ್ಯಾಂಡಲ್‍ವುಡ್‍ನ ಸ್ಟಾರ್ ನಿರ್ದೇಶಕರಾದ ಸಂತೋಷ್ ಅನಂದ್‍ರಾಮ್, ಪವನ್ ಒಡೆಯರ್ ಮತ್ತು ಎಪಿ ಅರ್ಜೂನ್ ಟಿಕ್‍ಟಾಕ್ ಅನ್ನು ಬ್ಯಾನ್ ಮಾಡಿ ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಕೆಲ ಬಾಲಿವುಡ್ ನಟರು ಕೂಡ ಕೈಜೋಡಿಸಿದ್ದು, ಟಿಕ್‍ಟಾಕ್ ಬ್ಯಾನ್ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ.

    ಯುವ ಜನತೆಯನ್ನು ಟಿಕ್‍ಟಾಕ್ ತಪ್ಪು ದಾರಿಗೆ ಎಳೆಯುತ್ತಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅಭಿಪ್ರಾಯಪಟ್ಟಿದ್ದು, ಟಿಕ್‍ಟಾಕ್ ಅನ್ನು ಸಂಪೂರ್ಣವಾಗಿ ನಿಷೇಧ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಬರೆದಿದ್ದರು. ಮನರಂಜನೆಗಾಗಿ ಆರಂಭವಾದ ಟಿಕ್‍ಟಾಕ್ ಇಂದು ಹಿಂಸೆಯನ್ನು ಪ್ರೇರೇಪಿಸುತ್ತಿದೆ. ಮಹಿಳೆಯ ಮೇಲಿನ ಅತ್ಯಾಚಾರ, ಆ್ಯಸಿಡ್ ದಾಳಿಗೆ ಪ್ರೇರಣೆ ನೀಡುವ ವಿಡಿಯೋಗಳು ಟಿಕ್‍ಟಾಕ್‍ನಲ್ಲಿ ಹೆಚ್ಚಾಗುತ್ತಿದೆ ಎಂದು ಬಿಜೆಪಿ ನಾಯಕ ತಾಜೀಂದರ್ ಸಿಂಗ್ ಮಾಡಿರುವ ಟ್ವೀಟ್‍ಗೆ ರೇಖಾ ಶರ್ಮಾ ಪ್ರತಿಕ್ರಿಯೆ ನೀಡಿದ್ದರು.

    ಆ್ಯಸಿಡ್ ದಾಳಿಗೆ ಪ್ರೇರಣೆ ನೀಡುವ ರೀತಿ ಟಿಕ್‍ಟಾಕ್ ವಿಡಿಯೋ ಮಾಡಿ ಹರಿಬಿಡಲಾಗಿದೆ. ಇತ್ತೀಚೆಗೆ ಟಿಕ್‍ಟಾಕ್‍ನಲ್ಲಿ 1.34 ಕೋಟಿ ಹಿಂಬಾಲಕರನ್ನು ಹೊಂದಿದ್ದ ಫೈಜಲ್ ಸಿದ್ದಿಕಿ ಇಂತಹ ವಿಡಿಯೋ ಮಾಡಿದ್ದ. ಇಂತಹ ವಿಡಿಯೋಗಳು ಸಮಾಜದ ಮೇಲೆ ಋಣಾತ್ಮಕ ಪರಿಣಾಮಗಳನ್ನು ಬೀರುತ್ತವೆ. ವಿಡಿಯೋ ಮಾಡಿ ಹರಿಬಿಟ್ಟ ವ್ಯಕ್ತಿಯ ವಿರುದ್ಧ ಕ್ರಮಕೈಗೊಳ್ಳಲು ಮಹಾರಾಷ್ಟ್ರ ಡಿಜಿಪಿ ಅವರಿಗೆ ಪತ್ರ ಬರೆದಿದ್ದೇನೆ ಎಂದು ರೇಖಾ ಶರ್ಮಾ ಮಾಹಿತಿ ನೀಡಿದ್ದರು.

    ಹಿಂಸೆಗೆ ಪ್ರಚೋದಿಸುವ ವಿಡಿಯೋಗಳನ್ನು ಕೂಡಲೇ ಆ್ಯಪ್‍ನಿಂದ ತೆಗೆದು ಹಾಕುವಂತೆ ಆಗ್ರಹಿಸಿರುವ ಅವರು, ಇಂತಹ ಆಕ್ಷೇಪರ್ಹ ವಿಡಿಯೋಗಳು ಮಾತ್ರವಲ್ಲದೇ ಮಾತ್ರವಲ್ಲದೇ ಟಿಕ್‍ಟಾಕ್ ಯುವ ಜನತೆಯನ್ನು ಅನುತ್ಪಾದಕ ಜೀವನ ಹಾಗೂ ಕೆಲ ಹಿಂಬಾಲಕರನ್ನು ಪಡೆಯವತ್ತ ತಳ್ಳುತ್ತಿದೆ. ಅನುಯಾಯಿಗಳು ಸಿಕ್ಕದಿದ್ದಾಗ ಕೆಲವರು ಸಾವಿಗೂ ಶರಣಾಗುತ್ತಿದ್ದಾರೆ ಎಂದು ರೇಖಾ ಶರ್ಮಾ ಕಳವಳ ವ್ಯಕ್ತಪಡಿಸಿದ್ದರು.

  • ಲಾಕ್‍ಡೌನ್ ನಡುವೆ ಸ್ಯಾಂಡಲ್‍ವುಡ್‍ನಲ್ಲಿ ಮತ್ತೊಂದು ಮದ್ವೆ ಸಂಭ್ರಮ

    ಲಾಕ್‍ಡೌನ್ ನಡುವೆ ಸ್ಯಾಂಡಲ್‍ವುಡ್‍ನಲ್ಲಿ ಮತ್ತೊಂದು ಮದ್ವೆ ಸಂಭ್ರಮ

    ಬೆಂಗಳೂರು: ಲಾಕ್‍ಡೌನ್ ನಡುವೆಯೂ ಅನೇಕ ನಟ-ನಟಿಯರು ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ಲಾಕ್‍ಡೌನ್ ನಡುವೆ ಸ್ಯಾಂಡಲ್‍ವುಡ್‍ನಲ್ಲಿ ಮತ್ತೊಂದು ಮದುವೆ ಸಂಭ್ರಮ ನಡೆದಿದೆ.

    ಸ್ಯಾಂಡಲ್‍ವುಡ್ ಖ್ಯಾತ ನಿರ್ದೇಶಕ ಎ.ಪಿ.ಅರ್ಜುನ್ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅರ್ಜುನ್ ಹಾಸನ ಮೂಲದ ಬಿ.ಆರ್.ಅನ್ನಪೂರ್ಣ ಜೊತೆ ಸರಳವಾಗಿ ಮದುವೆಯಾಗಿದ್ದಾರೆ. ರಾಮಸಂದ್ರದ ಮಹಾಲಕ್ಷ್ಮಿ ಎನ್‍ಕ್ಲೇವ್ ನಲ್ಲಿ ಅರ್ಜುನ್ ಮತ್ತು ಅನ್ನಪೂರ್ಣ ಸಪ್ತಪದಿ ತುಳಿದ್ದಾರೆ.

    ಲಾಕ್‍ಡೌನ್ ಹಿನ್ನೆಲೆಯಲ್ಲಿ ಅರ್ಜುನ್ ಮದುವೆಗೆ ಸ್ಯಾಂಡಲ್‍ವುಡ್ ಕಲಾವಿದರು ಬರಲು ಸಾಧ್ಯವಾಗಿಲ್ಲ. ಆದರೆ ಕೆಲವೇ ಆಪ್ತರ ಸಮ್ಮುಖದಲ್ಲಿ ಅರ್ಜುನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ಮದುವೆಗೆ ನಟ ಧ್ರುವ ಸರ್ಜಾ ಮತ್ತು ಕಿಸ್ ಸಿನಿಮಾ ಖ್ಯಾತಿಯ ವಿರಾಟ್ ಸೇರಿದಂತೆ ಕೆಲ ಕಲಾವಿದರು ಮಾತ್ರ ಭಾಗಿಯಾಗಿದ್ದು, ನವ ಜೋಡಿಗೆ ಶುಭಾ ಹಾರೈಸಿದ್ದಾರೆ.

    ನಿರ್ದೇಶಕ ಎ.ಪಿ.ಅರ್ಜುನ್ ‘ತಂಗಿಗಾಗಿ’ ಸಿನಿಮಾದಲ್ಲಿ ಗೀತರಚನೆಕಾರನಾಗಿ ಚಿತ್ರರಂಗಕ್ಕೆ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅರ್ಜುನ್ ಅವರು ‘ಅಂಬಾರಿ’, ‘ಅದ್ಧೂರಿ’, ‘ಐರಾವತ’, ಮತ್ತು ‘ರಾಟೆ’ ಸಿನಿಮಾಗಳಲ್ಲಿ ನಿರ್ದೇಶಿಸುವ ಮೂಲಕ ಹೆಸರುವಾಸಿಯಾಗಿದ್ದಾರೆ. ಗೀತರಚನೆಕಾರರಾಗಿ ಹಲವು ಸಿನಿಮಾಗಳಿಗೆ ಕೆಲಸ ಮಾಡಿದ್ದು, ಸಹಾಯಕ ನಿರ್ದೇಶಕನಾಗಿಯೂ ಕೂಡ ಕೆಲ ಚಿತ್ರಗಳಲ್ಲಿ ಕೆಲಸ ಮಾಡಿದ್ದರು.

    ಕಳೆದ ವರ್ಷ ಅರ್ಜುನ್ ನಿರ್ದೇಶನದ ‘ಕಿಸ್’ ಸಿನಿಮಾ ರಿಲೀಸ್ ಆಗಿ ಯಶಸ್ವಿ ಕಂಡಿತ್ತು. ಈ ಚಿತ್ರದಲ್ಲಿ ನಾಯಕನಾಗಿ ವಿರಾಟ್ ಮತ್ತು ನಾಯಕಿಯಾಗಿ ಶ್ರೀಲೀಲಾ ನಟಿಸಿದ್ದರು. ನಟ ನಿಖಿಲ್ ಕುಮಾರಸ್ವಾಮಿ ಮುಂದಿನ ಸಿನಿಮಾಕ್ಕೂ ಇವರೇ ನಿರ್ದೇಶನದ ಜವಾಬ್ದಾರಿ ಹೊರಲಿದ್ದಾರೆ ಎಂದು ತಿಳಿದು ಬಂದಿದೆ.

  • ಕಿಸ್ ಅಂದ್ರೆ ನವಿರು ಪ್ರೇಮದ ಮೊದಲ ಆಮಂತ್ರಣ!

    ಕಿಸ್ ಅಂದ್ರೆ ನವಿರು ಪ್ರೇಮದ ಮೊದಲ ಆಮಂತ್ರಣ!

    ಬೆಂಗಳೂರು: ವಿರಾಟ್ ಮತ್ತು ಶ್ರೀಲೀಲಾ ಜೋಡಿ ನಾಯಕ ನಾಯಕಿಯರಾಗಿ ನಟಿಸಿರೋ ಚಿತ್ರ ಕಿಸ್. ಇದುವರೆಗೂ ಹಾಡುಗಳ ಮೂಲಕವೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಾ ಸಾಗಿ ಬಂದಿರೋ ಈ ಚಿತ್ರ ಇದೇ ತಿಂಗಳ 27ರಂದು ತೆರೆಗಾಣಲಿದೆ. ಅಷ್ಟಕ್ಕೂ ಕಿಸ್ ಅಂದರೇನೇ ಥರ ಥರದ ಭಾವಗಳು ಪ್ರತಿಯೊಬ್ಬರನ್ನೂ ಆವರಿಸಿಕೊಳ್ಳುತ್ತವೆ. ಅದು ಅವರವರ ಭಾವಕ್ಕೆ ಭಕುತಿಗೆ ದಕ್ಕುವಂಥಾದ್ದೂ ಹೌದು. ಈ ಸಿನಿಮಾದ ಕಥೆ ಸಾಗೋದು ಕಿಸ್ ಎಂಬುದರ ಒರಿಜಿನಲ್ ಪರಿಭಾಷೆಗನುಗುಣವಾಗಿಯೇ.

    ಇಡೀ ಸಿನಿಮಾದಲ್ಲಿ ಎತ್ತಲಿಂದ ಹುಡುಕಿದರೂ ಒಂದೇ ಒಂದು ವಲ್ಗರ್ ಅನ್ನಿಸೋ ಸೀನು, ಡೈಲಾಗುಗಳು ಸಿಗಲೂ ಸಾಧ್ಯವಿಲ್ಲ ಎಂಬುದನ್ನು ನಿರ್ದೇಶಕರು ಆರಂಭದಿಂದಲೂ ಸ್ಪಷ್ಟೀಕರಿಸಿಕೊಂಡು ಬರುತ್ತಿದ್ದಾರೆ. ಇದುವೇ ಈ ಸಿನಿಮಾದ ಬಗೆಗೆ ಸ್ಪಷ್ಟ ಚಿತ್ರಣವನ್ನೂ ಕಟ್ಟಿಕೊಡುವಂತಿದೆ. ಕಿಸ್ ಎಂಬುದು ಪ್ರೀತಿಯ ಪಾಲಿಗೆ ಮೊದಲ ಆಮಂತ್ರಣವಿದ್ದಂತೆ. ಆ ನಂತರವೇ ಅದರ ಎಲ್ಲ ಭಾವಗಳೂ ಬಿಚ್ಚಿಕೊಳ್ಳಲಾರಂಭಿಸುತ್ತವೆ. ನಿದೇಶಕ ಎ.ಪಿ. ಅರ್ಜುನ್ ಆ ಮೊದಲ ಆಮಂತ್ರಣದ ಕಥೆಯನ್ನು ಮಜವಾಗಿಯೇ ಕಟ್ಟಿ ಕೊಟ್ಟಿದ್ದಾರಂತೆ.

    ಇದೀಗ ಬಿಡುಗಡೆಯಾಗಿರೋ ಹಾಡುಗಳ ಮೂಲಕವೇ ಕಿಸ್ ಪ್ರೇಕ್ಷಕರಿಗೂ ಕೂಡಾ ಪರಿಣಾಮಕಾರಿಯಾಗಿಯೇ ಆಮಂತ್ರಣ ಕೊಟ್ಟಿದೆ. ಅಷ್ಟಕ್ಕೂ ಈ ಹಾಡುಗಳು ಪ್ರೇಕ್ಷಕರ ಪಾಲಿಗೆ ಚಿತ್ರಮಂದಿರಕ್ಕೆ ಬರಲು ಕೊಡೋ ಆಮಂತ್ರಣವಿದ್ದಂತೆ. ಅದೆಷ್ಟೋ ಚಿತ್ರಗಳನ್ನು ಈ ಹಾಡುಗಳ ಆಮಂತ್ರಣವೇ ದೊಡ್ಡ ಮಟ್ಟದಲ್ಲಿ ಗೆಲ್ಲಿಸಿಕೊಂಡಿವೆ. ಕಿಸ್ ಚಿತ್ರದ ಹಾಡುಗಳೂ ಕೂಡಾ ಅದರಲ್ಲಿ ಯಶ ಕಾಣೋ ಲಕ್ಷಣಗಳೇ ದಟ್ಟವಾಗಿವೆ. ಈ ಹಾಡಿನ ನವಿರುತನವನ್ನೇ ಹೊದ್ದುಕೊಂಡಂಥಾ ಕಥೆ ಹೊಂದಿರೋ ಕಿಸ್ ನಿಮ್ಮೆಲ್ಲರೆದುರು ಅನಾವರಣಗೊಳ್ಳುವುದಕ್ಕೆ ಕ್ಷಣಗಣನೆ ಶುರುವಾಗಿದೆ.

  • ಎ.ಪಿ ಅರ್ಜುನ್ ಬತ್ತಳಿಕೆಯಲ್ಲಿರೋದು ಫ್ರೆಶ್ ‘ಕಿಸ್’!

    ಎ.ಪಿ ಅರ್ಜುನ್ ಬತ್ತಳಿಕೆಯಲ್ಲಿರೋದು ಫ್ರೆಶ್ ‘ಕಿಸ್’!

    ಬೆಂಗಳೂರು: ಕಿಸ್ ಅಂದರೆ ಮಡಿವಂತಿಕೆಯ ಮಂದಿ ಮುಜುಗರ ಪಟ್ಟುಕೊಳ್ಳಬಹುದೇನೋ. ಆದರೆ ಅದು ಕಾಲಮಾನವನ್ನು ಮೀರಿಕೊಂಡು ಸದಾ ತಾಜಾತನ ಉಳಿಸಿಕೊಳ್ಳೋ ಮಧುರಾನುಭೂತಿ. ಹದಿಹರೆಯದ ಮನಸುಗಳಲ್ಲಿ ಸ್ಫುರಿಸೋ ಮೆಲುವಾದ ಕಂಪನ ಮತ್ತು ಪ್ರೇಮವನ್ನು ಮಾತಿಲ್ಲದೆಯೇ ದಾಟಿಸೋ ವಾಹಕ. ಇಂಥಾ ರೊಮ್ಯಾಂಟಿಕ್ ಕಲ್ಪನೆಗಳಿಗೆ ತಕ್ಕುದಾಗಿಯೇ ಒಂದಿನಿತೂ ವಲ್ಗಾರಿಟಿಯ ಸೋಂಕಿಲ್ಲದೆ ನಿರ್ದೇಶಕ ಎ.ಪಿ ಅರ್ಜುನ್ ಬತ್ತಳಿಕೆಯಿಂದ ಹೊರಬಂದು ಪ್ರೇಕ್ಷಕರ ಮುಂದೆ ನಿಲ್ಲೋ ಸನ್ನಾಹದಲ್ಲಿರೋ ಚಿತ್ರ ಕಿಸ್.

    ಎ.ಪಿ ಅರ್ಜುನ್ ಯುವ ತುಮುಲಗಳ ಎರಕ ಹೊಯ್ದಂಥಾ ಪ್ರೀತಿ ತುಂಬಿದ ದೃಶ್ಯ ಕಟ್ಟುವಲ್ಲಿ ಸಿದ್ಧಹಸ್ತರೆನ್ನಿಸಿಕೊಂಡಿರೋ ನಿರ್ದೇಶಕ. ಅಂಬಾರಿಯಿಂದ ಆರಂಭವಾಗಿ ಕಿಸ್ ವರೆಗೂ ಅದು ಅನೂಚಾನವಾಗಿಯೇ ಮುಂದುವರೆದುಕೊಂಡು ಬಂದಿದೆ.

    ಕಿಸ್ ಎಂಬ ಹೆಸರೇ ಇದೊಂದು ಯುವ ಆವೇಗದ ಪ್ರೇಮಕಥೆ ಹೊಂದಿರೋ ಸಿನಿಮಾ ಅನ್ನೋದನ್ನು ಜಾಹೀರು ಮಾಡುವಂತಿದೆ. ಹಾಗೆಂದ ಮಾತ್ರಕ್ಕೆ ಇದು ಬರೀ ಯುವ ಜನಾಂಗಕ್ಕೆ ಮಾತ್ರವೇ ಸೀಮಿತವಾದ ಸಿನಿಮಾ ಅಲ್ಲ. ಎಲ್ಲ ವರ್ಗದ, ವಯೋಮಾನದವರೂ ನೋಡಿ ಎಂಜಾಯ್ ಮಾಡುವ ರೀತಿಯಲ್ಲಿ ಅರ್ಜುನ್ ಈ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರಂತೆ.

    ಕಿಸ್ ಅಂದರೆ ಸದಾ ಫ್ರೆಶ್ ಆಗಿರೋ ಭಾವವೇ ಆದರೂ ಅದಕ್ಕೂ ಒಂದಷ್ಟು ಮುಜುಗರದಂಥಾ ಲೇಪ ಬಳಿಯಲಾಗಿದೆ. ಆದರೆ ಇಲ್ಲಿರೋದು ಸಾವಿರಕ್ಕೊಂದು ಎಂಬಂಥಾ ತಾಜಾ ತಾಜಾ ಲವ್ ಸ್ಟೋರಿ. ಅದು ಎಲ್ಲ ವಯೋಮಾನದವರಲ್ಲಿಯೂ ಆಹ್ಲಾದ ಮೂಡಿಸುವ ರೀತಿಯಲ್ಲಿ ಮೂಡಿ ಬಂದಿದೆಯಂತೆ.

    ಈಗಾಗಲೇ ಬಂದಿರೋ ಹಾಡುಗಳು ಮತ್ತು ಟ್ರೇಲರ್ ಮೂಲಕವೇ ಇದರ ತಾಜಾತನದ ಅನುಭೂತಿ ಪ್ರೇಕ್ಷಕರಿಗೆಲ್ಲ ಮುಟ್ಟಿದೆ. ಅದುವೇ ಕಾತರವಾಗಿಯೂ ಪಡಿಮೂಡಿಕೊಂಡಿದೆ. ಕಿಸ್ ಇದೇ ತಿಂಗಳ 27ರಂದು ಬಿಡುಗಡೆಯಾಗಲಿದೆ.

  • ರೊಮ್ಯಾಂಟಿಕ್ ಮೂಡಿಗೆ ಜಾರಿಸೋ ಕಿಸ್ ಸಾಂಗ್!

    ರೊಮ್ಯಾಂಟಿಕ್ ಮೂಡಿಗೆ ಜಾರಿಸೋ ಕಿಸ್ ಸಾಂಗ್!

    ಬೆಂಗಳೂರು: ಎ.ಪಿ. ಅರ್ಜುನ್ ನಿರ್ದೇಶನದ ಕಿಸ್ ಚಿತ್ರದ ಮತ್ತೊಂದು ಹಾಡು ಬಿಡುಗಡೆಯಾಗಿದೆ. ಶೀಲಾ ಸುಶೀಲ ಎಂಬ ಹಾಡು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು. ಈಗ ಬಿಡುಗಡೆಯಾಗಿರೋ ಎರಡನೇ ಹಾಡು ಎಲ್ಲರನ್ನೂ ಹಾಯಾಗಿ ಮೆಲೋಡಿ ಮೂಡಿಗೆ ಜಾರುವಂತೆ ಮಾಡುವಷ್ಟು ಇಂಪಾಗಿದೆ!

    ಎ ಪಿ ಅರ್ಜುನ್ ನೀನೇ ಮೊದಲು ನೀನೇ ಕೊನೆ ಎಂಬ ಹಾಡಿಗೆ ವಿ ಹರಿಕೃಷ್ಣ ಪುತ್ರ ಆದಿತ್ಯ ಸಂಗೀತ ಸಂಯೋಜನೆ ಮಾಡಿದ್ದಾನೆ. ಆದಿತ್ಯ ಮೊದಲ ಹಾಡಿನಲ್ಲಿಯೇ ಭರವಸೆಯನ್ನೂ ಹುಟ್ಟಿಸಿದ್ದಾನೆ. ನಾಯಕ ವಿರಾಟ್ ಮತ್ತು ನಾಯಕಿ ಶ್ರೀಲೀಲಾ ಅವರಂತೂ ರೊಮ್ಯಾಂಟಿಕ್ ಮೂಡಿನಲ್ಲಿ ಮುದ್ದು ಮುದ್ದಾಗಿ ನಟಿಸಿದ್ದಾರೆ. ಶ್ರೇಯಾ ಘೋಶಾಲ್ ಹಾಡಿರೋ ಈ ಹಾಡೂ ಕೂಡಾ ಮೊದಲ ಹಾಡಿನಂತೆಯೇ ಹಿಟ್ ಆಗೋ ಎಲ್ಲ ಲಕ್ಷಣಗಳೂ ದಟ್ಟವಾಗಿವೆ.

    ಕಿಸ್ ಹಾಡುಗಳ ಖದರ್ ಎಂಥಾದ್ದೆಂಬುದು ಶೀಲ ಸುಶೀಲಾ ಹಾಡಿನ ಮೂಲಕವೇ ಸಾಬೀತಾಗಿದೆ. ಈ ಸಿನಿಮಾದಲ್ಲಿ ಒಟ್ಟು ಆರು ಹಾಡುಗಳಿವೆ. ಶ್ರೇಯಾ ಘೋಶಾಲ್ ಸೇರಿದಂತೆ ಅನೇಕರ ಮಾಧುರ್ಯ ತುಂಬಿದ ಕಂಠದಲ್ಲಿ ಈ ಹಾಡುಗಳು ಮೂಡಿ ಬಂದಿವೆ. ಇದರಲ್ಲಿ ಒಂದೊಂದೇ ಹಾಡುಗಳನ್ನು ವಾರಕ್ಕೊಂದು ಸಲ ಬಿಡುಗಡೆ ಮಾಡಲು ಅರ್ಜುನ್ ಮುಂದಾಗಿದ್ದಾರೆ. ನೀನೇ ಮೊದಲು ನೀನೇ ಕೊನೆ ಮೂಲಕ ಎರಡನೇ ಹಾಡು ಹೊರ ಬಂದಿದೆ. ಮುಂದಿನ ವಾರ ಮತ್ತೊಂದು ಹಾಡು ಬಿಡುಗಡೆಯಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಕಿಸ್: ಇದು ಬಾಳಿಕೆ ಬರೋ ಲವ್ ಸ್ಟೋರಿ!

    ಕಿಸ್: ಇದು ಬಾಳಿಕೆ ಬರೋ ಲವ್ ಸ್ಟೋರಿ!

    ಬೆಂಗಳೂರು: ರಾಷ್ಟ್ರಕೂಟ ಫಿಲಂಸ್ ಬ್ಯಾನರ್ ಅಡಿ ವಿ. ರವಿಕುಮಾರ್ ನಿರ್ಮಾಣ ಮಾಡಿರುವ ಸಿನಿಮಾ ‘ಕಿಸ್’. ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಕೊಂಡಿರೋ ಕಿಸ್ ತಂಡವೀಗ ಪತ್ರಿಕಾಗೋಷ್ಠಿಯ ಮೂಲಕ ಮಾಧ್ಯಮದವರನ್ನು ಮುಖಾಮುಖಿಯಾಗಿದೆ. ಒಟ್ಟಾರೆ ಚಿತ್ರದ ಬಗ್ಗೆ ನಿರ್ದೆಶಕ ಎ.ಪಿ ಅರ್ಜುನ್ ರೋಚಕವಾದ ಒಂದಷ್ಟು ವಿಚಾರಗಳನ್ನೂ ಹಂಚಿಕೊಂಡಿದ್ದಾರೆ. ಕಿಸ್ ಎಂಥಾ ಕಥೆ ಹೊಂದಿದೆ ಎಂಬುದೂ ಸೇರಿದಂತೆ ಪ್ರೇಕ್ಷಕರಲ್ಲಿದ್ದ ಒಂದಷ್ಟು ಪ್ರಶ್ನೆಗಳಿಗೂ ಈ ಮೂಲಕ ಉತ್ತರ ಸಿಕ್ಕಿದೆ.

    ದಶಕಗಳಷ್ಟು ಹಿಂದೆ ಘಟಿಸುತ್ತಿದ್ದ ಲವ್ವು ನಾನಾ ಘಟ್ಟ ದಾಟಿಕೊಂಡು ಎರಡು ಜೀವಗಳನ್ನು ಉಸಿರಿಗೆ ಉಸಿರು ತಾಕುವಷ್ಟು ಹತ್ತಿರಾಗಿಸುತ್ತಿತ್ತು. ಈ ಹಂತ ತಲುಪಿಕೊಳ್ಳುವುದು ಎಷ್ಟೋ ಸಂದರ್ಭಗಳಲ್ಲಿ ಪಂಚವಾರ್ಷಿಕ ಯೋಜನೆಯಾದದ್ದೂ ಇದೆ. ಆದರೆ ಹಾಗೆ ಕುದುರಿಕೊಂಡ ಪ್ರೀತಿ ಜೀವಮಾನವಿಡೀ ಜೊತೆಯಾಗೇ ಬಾಳಿಸುತ್ತಿತ್ತು. ಆದರೆ ಈಗ ಎಲ್ಲವೂ ಸ್ಪೀಡು.

    ಬೆಳಗ್ಗೆ ಫೇಸ್‍ಬುಕ್ಕಲ್ಲಿ ಫ್ರೆಂಡ್ಸಾದ ಹುಡುಗ ಹುಡುಗಿ ಸಾಯಂಕಾಲದ ಹೊತ್ತಿಗೆಲ್ಲ ಯಾವುದೋ ಕಾಫಿ ಟೇಬಲ್ಲಿನಲ್ಲಿ ಎದುರು ಬದುರಾಗಿರುತ್ತಾರೆ. ಆವತ್ತಿನ ಅಹೋರಾತ್ರಿ ಮೆಸೇಜಿನಿಂದ ಬೆಚ್ಚಗಾಗಿ ಮಾರನೇ ದಿನದ ಹೊತ್ತಿಗೆಲ್ಲ ಲವ್ವು. ಒಂದೇ ವಾರದಲ್ಲಿ ಬ್ರೇಕಪ್ಪು ಮತ್ತು ಏನೂ ಘಟಿಸಿಲ್ಲವೆಂಬಂತೆ ಹೊಸಾ ಲವ್ವಿನ ಬೇಟೆ. ಇದು ಈ ಕಾಲಮಾನದ ಲವ್ವಿನ ಪರಿ. ಆದರೆ ಇಂಥಾ ನೂರು ಲವ್ ಸ್ಟೋರಿಗಳಲ್ಲಿ ಒಂದಾದರೂ ಪ್ಯೂರ್ ಲವ್ ಸ್ಟೋರಿ ಇದ್ದೇ ಇರುತ್ತೆ. ಅಂಥಾದ್ದೊಂದು ಪ್ರೇಮ ಕಥಾನಕವನ್ನ ‘ಕಿಸ್’ ಚಿತ್ರ ಒಳಗೊಂಡಿದೆ.

    ಟೈಂ ಪಾಸ್ ಲವ್ವಿನ ವಿಚಾರ ಬೇರೆ. ಆದರೆ ಪ್ರೇಮಿಗಳ ಪಾಲಿಗೆ ಕಿಸ್ ಅನ್ನೋದೊಂದು ಗಿಫ್ಟು. ಅದು ಮೊದಲು ವಿನಿಮಯವಾಗೋದೊಂದು ಮಧುರಾನುಭೂತಿ. ಅಂಥಾ ನವಿರು ಭಾವಗಳನ್ನು ಹೊತ್ತ ಈ ಚಿತ್ರ ತಮ್ಮ ಇದುವರೆಗಿನ ಚಿತ್ರಗಳಿಗಿಂತಲೂ ಭಿನ್ನ ಎಂದು ಎ.ಪಿ.ಅರ್ಜುನ್ ಭರವಸೆಯಿಂದಲೇ ಹೇಳುತ್ತಾರೆ. ಇದೇ ಹೊತ್ತಲ್ಲಿ ತಾನು ಯಾಕೆ ಪದೇ ಪದೆ ಲವ್ ಸ್ಟೋರಿಗಳನ್ನೇ ಕಟ್ಟಿಕೊಡುತ್ತೇನೆ ಎಂಬುದಕ್ಕೂ ಸ್ಪಷ್ಟೀಕರಣ ನೀಡಿದ್ದಾರೆ. ಪ್ರೇಮಿಸೋ ಮನಸ್ಥಿತಿಗಳು ಬದಲಾದರೂ ಅದರ ಭಾವಗಳೆಂದೂ ಬದಲಾಗೋದಿಲ್ಲ. ಇಂಥಾ ಕಥಾನಕಗಳನ್ನು ಕನ್ನಡ ಪ್ರೇಕ್ಷಕರು ಕೈ ಬಿಟ್ಟ ಉದಾಹರಣೆಗಳೂ ಇಲ್ಲ. ಆದ್ದರಿಂದಲೇ ಕಿಸ್ ಮೂಲಕ ಅರ್ಜುನ್ ಮತ್ತೊಮ್ಮೆ ಪ್ರೀತಿಯ ಪಿಸುಮಾತಿಗೆ ದನಿಯಾಗಿದ್ದಾರೆ.

    ಇನ್ನುಳಿದಂತೆ ಈ ಕಥೆ ಹೇಗೆ ಫ್ರೆಶ್ ಆಗಿದೆಯೋ ನಾಯಕ ನಾಯಕಿಯರೂ ಕೂಡಾ ಅಷ್ಟೇ ಫ್ರೆಶ್ ಫೀಲ್ ಕೊಡಬೇಕೆಂಬುದು ಅರ್ಜುನ್ ಇಂಗಿತವಾಗಿತ್ತು. ಆದ್ದರಿಂದಲೇ ನಾಯಕ ನಾಯಕಿಯರಾಗಿ ಹೊಸಬರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಎಳೆ ವಯಸ್ಸಿನ, ಹೊಸ ಹುಮ್ಮಸ್ಸಿನ ತಂಡದೊಂದಿಗೆ ಅಂಥಾದ್ದೇ ಆವೇಗದಿಂದ ಅರ್ಜುನ್ ಕಿಸ್ ಚಿತ್ರವನ್ನು ಕಟ್ಟಿ ಕೊಟ್ಟಿದ್ದಾರೆ. ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರೋ ಈ ಪ್ರೇಮಕಾವ್ಯ ಪ್ರೇಮಿಗಳ ದಿನದ ಹೊತ್ತಿಗೆ ಬಿಡುಗಡೆಯಾಗಬಹುದಾ ಎಂಬ ಕಾತರ ಪ್ರೇಕ್ಷಕರಲ್ಲಿದೆ. ಇಷ್ಟರಲ್ಲಿಯೇ ಬಿಡುಗಡೆಯ ನಿಖರ ದಿನಾಂಕ ಹೊರ ಬೀಳಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಿಕ್ಕೇರಿಸಿದಳು ಕಿಸ್ ಸುಶೀಲ!

    ಕಿಕ್ಕೇರಿಸಿದಳು ಕಿಸ್ ಸುಶೀಲ!

    ಬೆಂಗಳೂರು: ಎ.ಪಿ. ಅರ್ಜುನ್ ನಿರ್ದೇಶನದ ಕಿಸ್ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ರ‍್ಯಾಪರ್ ಚಂದನ್ ಶೆಟ್ಟಿ ಹಾಡಿರೋ ಶೀಲ ಸುಶೀಲ ಡೋಂಟುವರಿ ಎಂಬ ಈ ಸಾಂಗ್ ಬಿಡುಗಡೆಯಾದ ದಿನದೊಪ್ಪತ್ತಿನಲ್ಲಿಯೇ ಸಂಚಲನವನ್ನೇ ಸೃಷ್ಟಿಸಿ ಬಿಟ್ಟಿದೆ. ಇದು ಕಿಸ್ ನ ಮೊದಲ ಹಾಡು. ಈ ಮೂಲಕ ಮೊದಲ ಚುಂಬನದಲ್ಲಿಯೇ ಮಧುರಾನುಭೂತಿ ಪಡೆದ ಖುಷಿಯೊಂದು ಚಿತ್ರತಂಡದ ಕೈ ಹಿಡಿದಿದೆ!

    ರಾಷ್ಟ್ರಕೂಟ ಲಾಂಛನದಡಿಯಲ್ಲಿ ವಿ.ರವಿಕುಮಾರ್ ಕಿಸ್ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಯಾವುದಕ್ಕೂ ಕಡಿಮೆಯಾಗದಂತೆ ಎಲ್ಲವೂ ರಿಚ್ ಆಗಿಯೇ ಮೂಡಿ ಬರಬೇಕೆಂಬುದು ರವಿಕುಮಾರ್ ಅವರ ಆಸೆ. ಅದಕ್ಕೆ ನಿರ್ದೇಶಕ ಎ.ಪಿ. ಅರ್ಜುನ್ ಸರಿಯಾಗಿಯೇ ಸಾಥ್ ನೀಡಿದ್ದಾರೆ. ಈಗ ಬಿಡುಗಡೆಯಾಗಿರೋ ಶೀಲ ಸುಶೀಲ ಹಾಡಿನ ಮಾಧುರ್ಯ, ಮೇಕಿಂಗ್ ಎಲ್ಲವೂ ಕಿಸ್ ನ ಗಮ್ಮತ್ತು ಎಂಥಾದ್ದೆಂಬುದರ ಸುಳಿವನ್ನೂ ರವಾನಿಸಿದೆ.

    ಯುವ ಉನ್ಮಾದವನ್ನೇ ಅರೆದು ತಯಾರಿಸಿದಂತಿರೋ ಈ ಹಾಡು ಯೂಟ್ಯೂಬಿನಲ್ಲಿ ಈಗಾಗಲೇ ನಾಲ್ಕೂ ಮುಕ್ಕಾಲು ಲಕ್ಷ ವೀವ್ಸ್ ಪಡೆದುಕೊಂಡಿದೆ. ಆ ಸಂಖ್ಯೆ ಗಂಟೆಯಿಂದ ಗಂಟೆಗೆ ಏರಿಕೊಳ್ಳುತ್ತಲೇ ಇದೆ. ಇಂಥಾ ಕಮಾಲ್ ಮಾಡಿರೋ ಈ ಹಾಡನ್ನು ನಿರ್ದೇಶಕ ಎ ಪಿ ಅರ್ಜುನ್ ಬರೆದಿದ್ದಾರೆ. ವಿ ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ. ರ್ಯಾಪರ್ ಚಂದನ್ ಶೆಟ್ಟಿ ಎಲ್ಲರೂ ಹುಚ್ಚೇಳುವಂತೆ ಹಾಡಿದ್ದಾರೆ. ಕರ್ನಾಟಕದೊಳಗಿನ ಸುಂದರ ಪ್ರದೇಶಗಳಲ್ಲಿಯೇ ಚಿತ್ರೀಕರಣಗೊಂಡಿರೋ ಈ ಹಾಡಿನ ದೃಶ್ಯ ವೈಭವಕ್ಕೆ ಸಾಟಿಯಿಲ್ಲ.

    ಎಲ್ಲಾ ಥರದಿಂದಲೂ ಕ್ರೇಜ್ ಸೃಷ್ಟಿಸಿರೋ ಈ ಹಾಡಿನ ಮೂಲಕವೇ ಕಿಸ್ ಸಿನಿಮಾ ನಿರೀಕ್ಷೆಯ ಮುಂಚೂಣಿಗೆ ಬಂದು ನಿಂತಿದೆ. ಇನ್ನು ಮುಂದೆ ಪ್ರತೀ ವಾರವೂ ಒಂದೊಂದು ಹಾಡುಗಳನ್ನು ಬಿಡುಗಡೆಗೊಳಿಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಿಸ್ ಜೋಡಿಯ ಜೊತೆ ಹೆಜ್ಜೆ ಹಾಕಿದರು ಹ್ಯಾಟ್ರಿಕ್ ಹೀರೋ!

    ಕಿಸ್ ಜೋಡಿಯ ಜೊತೆ ಹೆಜ್ಜೆ ಹಾಕಿದರು ಹ್ಯಾಟ್ರಿಕ್ ಹೀರೋ!

    ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ದಿ ವಿಲನ್ ಚಿತ್ರದ ತಮ್ಮ ಬಾಗದ ಕೆಲ ಭಾಗಗಳ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಮಿನರ್ವ ಮಿಲ್ಸ್ ಆಸುಪಾಸಲ್ಲಿಯೇ ಈ ಚಿತ್ರೀಕರಣ ನಡೆದಿದೆ. ಇದೇ ಸಂದರ್ಭದಲ್ಲಿ ಅಲ್ಲೇ ಬಾಜಿನಲ್ಲಿ ಹಾಡೊಂದರ ಚಿತ್ರೀಕರಣ ನಡೆಸುತ್ತಿದ್ದ ಎಪಿ ಅರ್ಜುನ್ ನಿದೇಶನದ ಕಿಸ್ ಸೆಟ್ಟಿಗೆ ಭೇಟಿ ನೀಡಿರೋ ಶಿವಣ್ಣ ನಾಯಕ ನಾಯಕಿಯ ಜೊತೆ ಹೆಜ್ಜೆ ಹಾಕಿ ಉತ್ಸಾಹ ತುಂಬಿದ್ದಾರೆ!

    ಎ.ಪಿ. ಅರ್ಜುನ್ ನಾಯಕ ನಾಯಕಿಯ ಹಾಡೊಂದನ್ನು ಮಿನರ್ವ ಮಿಲ್ಸ್ ಪರಿಸರದಲ್ಲಿ ಚಿತ್ರೀಕರಿಸಿಕೊಳ್ಳುತ್ತಿದ್ದರು. ಅದೇ ಹೊತ್ತಿಗೆ ವಿಲನ್ ನಿರ್ದೇಶಕ ಪ್ರೇಮ್ ಅದರ ಇನ್ನೊಂದು ಮಗ್ಗುಲಲ್ಲಿ ಶಿವಣ್ಣನ ದೃಶ್ಯಾವಳಿಗಳನ್ನು ಸೆರೆ ಹಿಡಿಯುತ್ತಿದ್ದರು. ಈ ನಡುವೆ ವಿರಾಮದ ಸಂದರ್ಭದಲ್ಲಿ ಶಿವರಾಜ್ ಕುಮಾರ್ ಅವರಿಗೆ ಪಕ್ಕದಲ್ಲಿಯೇ ಕಿಸ್ ಚಿತ್ರದ ಚಿತ್ರೀಕರಣ ನಡೆಯುತ್ತಿರೋ ಸಂಗತಿ ತಿಳಿದಿದೆ.

    ತಕ್ಷಣವೇ ಶಿವಣ್ಣ ರೆಸ್ಟ್ ಮೂಡನ್ನು ಕ್ಯಾನ್ಸಲ್ ಮಾಡಿಕೊಂಡು ಸೀದಾ ಕಿಸ್ ಸೆಟ್ಟಿಗೆ ತೆರಳಿದ್ದಾರೆ. ಅದು ನಿಜಕ್ಕೂ ಎಪಿ ಅರ್ಜುನ್ ಮತ್ತವರ ತಂಡಕ್ಕೆ ನಂಬಲಸಾಧ್ಯವಾದ ಸರ್‍ಪ್ರೈಸ್. ಹಾಗೆ ಬಂದ ಶಿವಣ್ಣ ಕಿಸ್ ಚಿತ್ರದ ಹೀರೋ ಮತ್ತು ತಂಡದೊಂದಿಗೆ ಹೆಜ್ಜೆ ಹಾಕಿದ್ದಾರೆ. ಎಲ್ಲರನ್ನೂ ಆತ್ಮೀಯವಾಗಿ ಮಾತಾಡಿಸಿದ್ದಾರೆ.

    ಇದರಿಂದ ನಿರ್ದೇಶಕ ಎ ಪಿ ಅರ್ಜುನ್ ಖುಷಿಯಾಗಿದ್ದಾರೆ. ಅರ್ಜುನ್ ಕೂಡಾ ಶಿವರಾಜ್ ಕುಮಾರ್ ಅವರ ಅಭಿಮಾನಿಯಂತೆ. ಯಾವ ಸೂಚನೆಯೂ ಇಲ್ಲದೆ ಏಕಾಏಕಿ ತಮ್ಮ ಚಿತ್ರೀಕರಣದ ಸೆಟ್ ನಲ್ಲಿ ಶಿವಣ್ಣನನ್ನು ನೋಡಿ ಅವರು ಥ್ರಿಲ್ ಆಗಿದ್ದಾರೆ. ಯುವ ತಂಡಕ್ಕೆ ತಾವಾಗಿಯೇ ಬಂದು ಸಾಥ್ ನೀಡಿ ಹುರುಪು ನೀಡಿದ ಶಿವರಾಜ್ ಕುಮಾರ್ ಅವರ ಸರಳ ನಡವಳಿಕೆ ನಿಜಕ್ಕೂ ಮಾದರಿ.