Tag: anushree

  • ಅನುಶ್ರೀಗೆ ಕೊಟ್ಟ ಮಾತಿನಂತೆ ನಡೆದ್ಕೊಂಡ ಹನುಮಂತನ ತಾಯಿ

    ಅನುಶ್ರೀಗೆ ಕೊಟ್ಟ ಮಾತಿನಂತೆ ನಡೆದ್ಕೊಂಡ ಹನುಮಂತನ ತಾಯಿ

    ಬೆಂಗಳೂರು: ಸರಿಗಮಪ ಕಾರ್ಯಕ್ರಮದಲ್ಲಿ ಕುರಿಗಾಯಿ ಎಂದೇ ಖ್ಯಾತಿಯಾಗಿರುವ ಹನುಮಂತ ಅವರ ತಾಯಿ ಶೀಲವ್ವ ಅವರು ಕೊನೆಗೂ ನಿರೂಪಕಿ ಅನುಶ್ರೀ ಆಸೆಯನ್ನು ನೆರವೇರಸಿದ್ದು, ಈ ಮೂಲಕ ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ.

    ಈ ಬಗ್ಗೆ ಅನುಶ್ರೀ ತಮ್ಮ ಫೇಸ್‍ಬುಕ್, ಇನ್ಸ್ ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ. “ತಮ್ಮ ಹನುಮಂತ ಕೊಟ್ಟ ಕೊಡಿಗೆ, ಅವರ ತಾಯಿಯ ಉಡುಗೆ” ಎಂದು ಬರೆದು ಕೊಂಡಿದ್ದು, ಅವರ ತಾಯಿ ಕೊಟ್ಟ ಉಡುಪನ್ನು ತೊಟ್ಟು ಹನುಮಂತ ಮತ್ತು ತಾಯಿ ಶೀಲವ್ವ ಜೊತೆ ಸೆಲ್ಫಿ ತೆಗೆದುಕೊಂಡಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ರಿಯಾಲಿಟಿ ಶೋ ನಲ್ಲಿ ಶಾಲೆಯ ದಿನಗಳನ್ನು ನೆನಪಿಸಿಕೊಂಡ ಆ್ಯಂಕರ್ ಅನುಶ್ರೀ

    ಇಂದು ಪ್ರಸಾರವಾಗುವ ಸರಿಗಮಪ ಕಾರ್ಯಕ್ರಮ ಪ್ರೋಮೋವನ್ನು ವಾಹಿನಿ ತನ್ನ ಫೇಸ್‍ಬುಕ್ ನಲ್ಲಿ ಅಪ್ಲೋಡ್ ಮಾಡಿದೆ. ಅದರಲ್ಲಿ ಮೊದಲಿಗೆ ಹನುಮಂತ್ ದಿವಂಗತ ಡಾ. ರಾಜ್‍ಕುಮಾರ್ ಅಭಿನಯದ ‘ಸಂಪತ್ತಿಗೆ ಸವಾಲ್, ಸಿನಿಮಾದ ಯಾರೇ ಕೂಗಾಡಲಿ, ಊರೇ ಹೋರಾಡಲಿ’ ಹಾಡನ್ನು ಹಾಡಿದ್ದಾರೆ. ಆಗ ಅನುಶ್ರೀ ಹನುಮಂತನ ತಾಯಿ ಕೊಟ್ಟಿರುವ ಉಡುಗೆ ತೊಟ್ಟು ವೇದಿಕೆಯ ಮೇಲೆ ಎಂಟ್ರಿಕೊಟ್ಟಿದ್ದಾರೆ. ಅನುಶ್ರೀ ಅವರನ್ನು ಆ ಉಡುಪಿನಲ್ಲಿ ನೋಡಿ ಸಂಗೀತ ನಿರ್ದೇಶಕ ಹಂಸಲೇಖ ಅವರು, ಈ ಭೂಷಣ ಧರಿಸಿರುವುದರಿಂದ ನಮಗೆ ಹೆಮ್ಮೆ, ಗೌರವವಾಗಿದೆ ಎಂದು ಖುಷಿಯಿಂದ ಹೇಳಿದ್ದಾರೆ. ಇದನ್ನೂ ಓದಿ: ಸರ್ಪ್ರೈಸ್ ನೋಡಿ ದೊಡ್ಡ ವೇದಿಕೆಯಲ್ಲೇ ಕಣ್ಣೀರಿಟ್ಟ ಹನುಮಂತ

    https://www.instagram.com/p/BsQCrpuhQN4/

    ಅನುಶ್ರೀಗೆ ನೀಡಿರುವ ಉಡುಗೊರೆಯಲ್ಲಿ ಒಂದು ವಿಶೇಷತೆ ಇದೆ. ಅದೇನೆಂದರೆ ಅವರು ಧರಿಸಿದ್ದ ಉಡುಪಿನಲ್ಲಿದ್ದ ಮುತ್ತು-ಹವಳ, ಮಣಿ, ಕನ್ನಡಿ ಎಲ್ಲವನ್ನು ಹನುಮಂತನ ತಾಯಿ ಶೀಲವ್ವ ಅವರು ಸ್ವತಃ ತಮ್ಮ ಕೈಯಾರೆ ಪೋಣಿಸಿದ್ದಾರೆ. ಶೀಲವ್ವ ಪ್ರೀತಿಯಿಂದ ಕೊಟ್ಟಂತಹ ಉಡುಗೆಯಿಂದ ಅನುಶ್ರೀ ಸಂತಸ ಪಟ್ಟಿದ್ದು, ಪ್ರತಿಯಾಗಿ ವೇದಿಕೆಯ ಮೇಲೆಯೇ ಶೀಲವ್ವ ಅವರ ಕೆನ್ನೆಗೆ ಒಂದು ಮುತ್ತು ಕೊಟ್ಟಿದ್ದಾರೆ.

    ಈ ಹಿಂದೆ ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಹನುಮಂತನ ತಾಯಿ ಶೀಲವ್ವ ಅವರನ್ನು ವೇದಿಕೆಯ ಮೇಲೆ ಕರೆಸಿದ್ದರು. ಈ ವೇಳೆ ನಿರೂಪಕಿ ಅನುಶ್ರೀ, ಶೀಲವ್ವ ಧರಿಸಿದ್ದ ಉಡುಗೆಯನ್ನು ತನಗೂ ಕೊಡಿಸುವಂತೆ ಕೇಳಿಕೊಂಡಿದ್ದರು. ಅಂದರಂತೆಯೇ ಅವರ ತಾಯಿ ಅನುಶ್ರೀಗಾಗಿ ಲಂಬಾಣಿ ಶೈಲಿಯ ಉಡುಗೆಯನ್ನು ತಂದು ಕೊಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅನುಶ್ರೀ ಕೇಳಿದ ಪ್ರಶ್ನೆಗೆ ವೇದಿಕೆಯಲ್ಲೇ ಭಾವುಕರಾದ ಹನುಮಂತ

    ಅನುಶ್ರೀ ಕೇಳಿದ ಪ್ರಶ್ನೆಗೆ ವೇದಿಕೆಯಲ್ಲೇ ಭಾವುಕರಾದ ಹನುಮಂತ

    ಬೆಂಗಳೂರು: ತರಬೇತಿ ಪಡೆಯದೆ, ಓದದೆ ಇಂದು ಸರಿಗಮಪ ಶೋ ಮೂಲಕ ಖ್ಯಾತಿ ಪಡೆದಿರುವ ಹಾವೇರಿ ಜಿಲ್ಲೆಯ ಹನುಮಂತ ಕಾರ್ಯಕ್ರಮದಲ್ಲಿ ನಿರೂಪಕಿ ಅನುಶ್ರೀ ಕೇಳಿದ ಪ್ರಶ್ನೆಗೆ ಭಾವುಕರಾಗಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಸರಿಗಮಪ ಸೀಸನ್ 15’ ಆವೃತ್ತಿಯಲ್ಲಿ ಹಾವೇರಿ ಜಿಲ್ಲೆಯ ಕುರಿಗಾಯಿ ಹನುಮಂತ ಆಯ್ಕೆಯಾಗಿದ್ದರು. ಹನುಮಂತ ಸುಮಧುರವಾಗಿ ಹಾಡು ಹಾಡುವ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಆದರೆ ಶನಿವಾರ ಪ್ರಸಾರವಾದ ಕಾರ್ಯಕ್ರಮದಲ್ಲಿ ನಿರೂಪಕಿ ಅನುಶ್ರೀ ಅವರು ಕೇಳಿದ ಪ್ರಶ್ನೆಗೆ ಹನುಮಂತ ಕೆಲ ಹೊತ್ತು ಮಾತನಾಡದೆ ಭಾವುಕರಾಗಿದ್ದರು.

    ಶನಿವಾರ ಪ್ರಸಾರವಾದ ಮಹಾಸಂಚಿಕೆ ಕಾರ್ಯಕ್ರಮದಲ್ಲಿ ಹನುಮಂತ ‘ದುಡ್ಡು ಕೊಟ್ಟರೆ ಬೇಕಾದು ಸಿಗುತೈತೇ ಈ ಜಗದಲಿ ತಮ್ಮ’ ಎಂಬ ಹಾಡನ್ನು ಹಾಡಿದ್ದರು. ಈ ಹಾಡನ್ನು ಹಾಡಿದ ನಂತರ ಅನುಶ್ರೀ ಅವರು ವೇದಿಕೆಯ ಮೇಲೆ ಬಂದು ಈ ಹಾಡನ್ನು ಹಾಡುವ ಮೂಲಕ ನಮ್ಮ ತಾಯಿಯನ್ನು ನೆನಪಿಸಿದ್ದೀರಿ ಎಂದು ಹೇಳಿದರು. ಈ ವೇಳೆ ನಿಮಗೆ ನಿಮ್ಮ ತಾಯಿ ನೆನಪಾಗುತ್ತಿದ್ದಾರಾ ಎಂದು ಪ್ರಶ್ನೆ ಕೇಳಿದ್ದಾರೆ.

    ಅನುಶ್ರೀ ಕೇಳಿದ ಪ್ರಶ್ನೆಗೆ ಹನುಮಂತ ಕೆಲ ಸೆಕೆಂಡ್ ಮಾತನಾಡದೆ ಭಾವುಕರಾಗಿ ಅಮ್ಮನನ್ನು ನೆನಪಿಸಿಕೊಂಡಿದ್ದಾರೆ. ನಾನು ನಮ್ಮ ಅಮ್ಮ, ಅಪ್ಪ ಮತ್ತು ಕುರಿಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಇದೇ ಮೊದಲ ಬಾರಿಗೆ ನಾನು ಅಮ್ಮನಿಂದ ದೂರ ಇದ್ದೀನಿ. ತುಂಬಾ ನೆನಪಾಗುತ್ತಿದ್ದಾರೆ ಎಂದು ಅಮ್ಮನ ನೆನಪಿಸಿಕೊಂಡು ಭಾವುಕರಾಗಿದ್ದಾರೆ.

    ಈ ನಡುವೆ ಅನುಶ್ರೀ ಅವರು ಕ್ಯಾಮೆರಾ ಮುಂದೆ ನಿಮ್ಮ ತಾಯಿಗೆ ಒಂದು ಮಾತು ಹೇಳಿ ಅಂತ ಹೇಳಿದ್ದಾರೆ. ಆಗ ಹನುಮಂತ ತಮ್ಮ ಭಾಷೆಯಲ್ಲಿ ‘ಯವ್ವ ನಾನ್ ಆರಾಮಿದ್ದೀನಿ, ನೀನು ಆರಾಮಾಗಿ ಇರು’ ಎಂದು ಹೇಳಿದ್ದಾರೆ. ಹನುಮಂತ ಹಾಡನ್ನು ಕೇಳಿ ವೇದಿಕೆಯ ಮೇಲಿದ್ದ ಎಲ್ಲರು ತಮ್ಮ ತಾಯಿಯನ್ನು ನೆನಪಿಸಿಕೊಂಡಿದ್ದಾರೆ.

    ತೀರ್ಪುಗಾರರಾಗಿದ್ದ ಸಂಗೀತ ನಿರ್ದೇಶಕ ಹಂಸಲೇಖ, ವಿಜಯ್ ಪ್ರಕಾಶ್ ಮತ್ತು ರಾಜೇಶ್ ಕೃಷ್ಣ ಅವರು ಅವರವರ ತಾಯಿಯನ್ನು ನೆನಪಿಸಿಕೊಂಡು ಹನುಮಂತಗೆ ಚೆನ್ನಾಗಿ ಹಾಡಿದ್ದೀಯಾ ಎಂದು ಗೋಲ್ಡನ್ ಬಜಾರ್ ಒತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಎಲ್ರೂ ನೋಡ್ತಾ ಇರ್ಬೇಕಿದ್ರೆ, ಆಕೆಯನ್ನ ಇಗ್ನೋರ್ ಮಾಡುವಂತಿರಬೇಕಂತೆ ಅನು `ಚಿನ್ನು’

    ಎಲ್ರೂ ನೋಡ್ತಾ ಇರ್ಬೇಕಿದ್ರೆ, ಆಕೆಯನ್ನ ಇಗ್ನೋರ್ ಮಾಡುವಂತಿರಬೇಕಂತೆ ಅನು `ಚಿನ್ನು’

    ಈ ಹಿಂದೆ ಹೇಳಿದ್ದಂತೆ ನನಗೆ ತುಂಬಾ ಬೆಳ್ಳಗಿರುವ ಹುಡುಗರು ಇಷ್ಟ ಆಗಲ್ಲ. ಯಾಕೆಂದ್ರ ನಾನು ಅಷ್ಟಾಗಿ ಬೆಳ್ಳಗಿಲ್ಲ. ಹುಡುಗ ನೋಡೊದಕ್ಕೆ ಎಲ್ಲರಿಕ್ಕಿಂತಲೂ ಭಿನ್ನವಾಗಿಯೇ ಇರಬೇಕು. ಎಲ್ಲರೂ ನನ್ನನ್ನೇ ನೋಡ್ತಿದ್ದರೆ, ಆತ ನನ್ನನ್ನು ಇಗ್ನೋರ್ ಮಾಡುವಂತಿರಬೇಕು. ಉದಾಹರಣೆಗೆ ಹಿಂದಿಯ ‘ಕಭಿ ಖುಷಿ ಕಭಿ ಗಮ್’ ಸಿನಿಮಾದಲ್ಲಿಯಂತೆ ಕರೀನಾ ಕಪೂರ್ ಹೇಳುವ ಹಾಗೆ ಯಾರವನು ನನ್ನನ್ನೇ ನೋಡ್ತಿಲ್ಲ ಅನ್ನುವಂತಿರಬೇಕು ಅಂತ ನಿರೂಪಕಿ ಅನುಶ್ರೀ ಹೇಳಿದ್ದಾರೆ.

    ಹಿಂದೆಲ್ಲಾ ಗಾಳಿ ಬೀಸುತ್ತೆ.. ಒಂದು ರೀತಿ ಎಲ್ಲ ನಿಧಾನಕ್ಕೆ ಚಲಿಸುವಂತೆ ಫೀಲ್ ಆಗುತ್ತೆ.. ನಾನು ಅವನನ್ನ ನೋಡಿದಾಗ ದಿಢೀರ್ ಅಂತಾ ನಾಚಿಕೆ ಬರಬೇಕು.. ಈ ರೀತಿಯಲ್ಲಿ ಯಾರನ್ನು ನೋಡಿದಾಗ ಆಗುತ್ತೆ ಅವನೇ ನನ್ನ `ಚಿನ್ನು’ ಎಂದು ಮನದಾಳದ ಮಾತನ್ನು ಪಬ್ಲಿಕ್ ಟಿವಿ ನಡೆಸಿದ ಸಂದರ್ಶನದ ವೇಳೆ ರಿವೀಲ್ ಮಾಡಿದ್ರು.

    ಇದೂವರೆಗೂ ಯಾರನ್ನು ನೋಡಿದರೂ ಆ ರೀತಿಯ ನಾಚಿಕೆ ಬಂದಿಲ್ಲ. ಏನ್ಮಾಡೋದು ಸಿಂಗಲ್ ಆಗಿದ್ದೇನೆ. ಗೊತ್ತಿಲ್ಲದೇ ಮುಖದಲ್ಲಿ ಒಂದು ರೀತಿಯ ನಾಚಿಕೆ ಬರಬೇಕು. ಹಿಂದೆ ಹೇಳುವ ಹಾಗೆ ಕಾಲಿನ ಹೆಬ್ಬೆರಳು ನೆಲ ಉಜ್ಜುವಂತೆ ಆಗಬೇಕು ಅನ್ನುವ ಫೀಲ್ ಆಗ್ಬೇಕು ಅಂತ ಹೇಳಿ ನಕ್ಕು ಬಿಟ್ಟರು.

    ಅಮ್ಮ ಮನೆಯಲ್ಲಿ ಗಂಡು ನೋಡಲಾ ಅಂತಾ ಹೇಳಿದ್ರು. ನನಗೂ ಜ್ಯೂಸ್, ಕಾಫಿ ಕಪ್ ಹಿಡಿದುಕೊಂಡು ಬರುವ ಅನುಭವ ಆಗಲಿ ಅಂತಾ ಹೇಳಿದ್ದೆ. ಒಂದು ಸಾರಿ ಇದನ್ನ ನನ್ನ ಫ್ರೆಂಡ್ ಗೆ ಹೇಳಿದಾಗ, ನಿನ್ನನ್ನು ನೋಡೋದಕ್ಕೆ 20 ಜನರು ಬಂದ್ರೆ ನೀನು ಸರ್ವರ್ ರೀತಿ ಆಗ್ತೀಯಾ ಅಂತಾ ಹೇಳಿದರು. ಹಾಗಾಗಿ ಆ ಪ್ಲಾನ್ ಕ್ಯಾನ್ಸಲ್ ಮಾಡಿದ್ದೀನಿ ಅಂದ್ರು.

    ಎಲ್ಲರಿಗೂ ಜ್ಯೂಸ್, ಉಪ್ಪಿಟ್ಟು ಕೊಡುತ್ತಿರೋದು ಆಗುತ್ತದೆ. ಅಂತಾ ಅಮ್ಮನಿಗೆ ಹೇಳಿ ಆ ಪ್ರೋಗ್ರಾಮ್ ಕ್ಯಾನ್ಸಲ್ ಮಾಡಿದ್ದೀನಿ. ಮಗಳಿಗೆ ಒಂದು ಕೆರಿಯರ್ ಇದೆ ಅಂತಾ ಅಮ್ಮನೂ ಒಪ್ಪಿಕೊಂಡಿದ್ದಾರೆ. ಹುಡುಗಿಯರಿಗೆ ಮದುವೆ ಜೀವನದ ಪ್ರಮುಖ ಘಟ್ಟ ಅನ್ನೋದು ಸ್ವಲ್ಪ ಬದಲಾಗಿದೆ. ಇಂದು ಹಲವರು ತಡವಾಗಿ ಮದುವೆ ಆಗುತ್ತಾರೆ. ಅದನ್ನು ಇಂದು ತುಂಬಾ ಜನ ಒಪ್ಪಿಕೊಂಡಿದ್ದಾರೆ ಅಂತ ಹೇಳಿದ್ರು. ಇದನ್ನೂ ಓದಿ: ನಟ ಶಂಕರ್ ನಾಗ್ ಅವರೇ ನನಗೆ ಸ್ಫೂರ್ತಿ ಅಂದ್ರು ಆ್ಯಂಕರ್ ಅನುಶ್ರೀ!

    ಇದೂವರೆಗೂ ನನಗೆ ಒಬ್ಬರೂ ಪ್ರಪೋಸ್ ಮಾಡಿಲ್ಲ. ಒಂದು ಸಲ ನನ್ನ ಫ್ರೆಂಡ್ಸ್ ಜೊತೆ `ಯಾಕೆ ಯಾರು ನನಗೆ ಪ್ರಪೋಸ್ ಮಾಡಲ್ಲ? ನಾನು ನೋಡೊದಕ್ಕೆ ಚೆನ್ನಾಗಿ ಇಲ್ವಾ?’ ಅಂತಾ ಕೇಳಿದ್ದಕ್ಕೆ ಸೋಶಿಯಲ್ ಆಗಿ ಎಲ್ಲರ ಜೊತೆ ಬೆರೆಯಬೇಕು ಅಂತಾ ಹೇಳಿದ್ರು. ಒಂದು ಸಾರಿ ಎಲ್ಲರ ಜೊತೆ ಪಬ್ ಗೆ ಹೋಗಿದ್ದಾಗ ಅಲ್ಲಿ ಫುಲ್ ಕತ್ತಲು. ಇದರಿಂದ ಗಾಬರಿಗೊಂಡ ನಾನು ಬಳಿಕ ಅಲ್ಲಿಗೆ ಹೋಗಲೇ ಇಲ್ಲ. ಹೀಗಾಗಿ ಶೂಟಿಂಗ್ ಮುಗಿದ ಕೂಡಲೇ ಮನೆಗೆ ಬಂದು ಬಿಡುತ್ತೇನೆ ಅಷ್ಟೇ ನನ್ನ ಜೀವನ ಅಂದ್ರು.

    ಒಮ್ಮೆ ಒಬ್ಬ ಮಹಿಳೆ ತನ್ನ ಮಗನ ಫೋಟೋ, ಜಾತಕ, ಉದ್ಯೋಗ ಮಾಹಿತಿ ಬರೆದು ಸಂಗೀತ ನಿರ್ದೇಶಕ ಅರ್ಜುನ್ ಜನ್ಯರಿಗೆ ಪತ್ರ ಬರೆದಿದ್ದರು. ಇದನ್ನು ಅನುಶ್ರೀ ಅವರಿಗೆ ತಲುಪಿಸಬೇಕೆಂದು ಪತ್ರದಲ್ಲಿ ಬರೆದಿದ್ದರು. ಅರ್ಜುನ್ ಸರ್ ಬಂದು, ಮೇಡಂ ಪತ್ರ ನೋಡಿ ಅಂತಾ ಕೊಟ್ಟರು. ಒಂದು ಕ್ಷಣ ತುಂಬಾ ನಗು ಬಂತು. ಎಲ್ಲೋ ದೂರದಲ್ಲಿರುವ ತಾಯಿ ನನ್ನಲ್ಲಿ ಅವರ ಸೊಸೆ ಆಗುವ ಗುಣಲಕ್ಷಣ ನೋಡಿದ್ದಾರೆ ಅಂದ್ರೆ ನನಗೆ ತುಂಬಾ ಹೆಮ್ಮೆ ಆಗುತ್ತದೆ. ಕಾರ್ಯಕ್ರಮಗಳ ಮೂಲಕ ನಾನು ಜನರಿಗೆ ಎಷ್ಟು ಹತ್ತಿರ ಅಗಿದ್ದೀನಿ ಎಂಬುದು ಪತ್ರದ ಮೂಲಕ ತಿಳಿಯಿತು ಅಂತ ಹೇಳಿದ್ರು.  ಇದನ್ನೂ ಓದಿ: ಈ ಬಂಧ ‘ಅನು’ಬಂಧ- ಮಾತಿನ ಮಲ್ಲಿಯ ಮನದಾಳದ ಮಾತು

    ಸ್ಕೂಲ್ ಟೈಮಲ್ಲಿ ತುಂಬಾನೇ ಪ್ರಪೋಸ್ ಬರುತ್ತಿತ್ತು. ಆದ್ರೆ ನಿರೂಪಕಿ ಆದ್ಮೇಲೆ ಒಂದು ಲೆಟರ್ ಸಹ ಬಂದಿಲ್ಲ. ಪರಿಚಯದಲ್ಲಿ ಗಂಡು ನೋಡಲಾ ಅಂತಾ ಅಮ್ಮ ಹೇಳ್ತಾ ಇರ್ತಾರೆ. ಆದ್ರೆ ಆಗಬೇಕಾದ ಸಮಯದಲ್ಲಿ ಎಲ್ಲವೂ ನಡೆಯುತ್ತದೆ ಅಂತಾ ಹೇಳಿದ್ದೀನಿ ಅಂತ ತನ್ನ ಮನದಾಳದ ಮಾತುಗಳನ್ನು ಬಿಚ್ಚಿಟ್ಟರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=tjMufAL6i9U

  • ಈ ಬಂಧ ‘ಅನು’ಬಂಧ- ಮಾತಿನ ಮಲ್ಲಿಯ ಮನದಾಳದ ಮಾತು

    ಈ ಬಂಧ ‘ಅನು’ಬಂಧ- ಮಾತಿನ ಮಲ್ಲಿಯ ಮನದಾಳದ ಮಾತು

    -ಸಂದರ್ಶನದಲ್ಲಿ ಅನುಶ್ರೀ ಮದುವೆ ಗುಟ್ಟು ರಟ್ಟು
    -ಹೇಗಿರಬೇಕು ಅನುಶ್ರೀ ಮದುವೆ ಆಗೋ ಹುಡುಗ..?

    ಬೆಂಗಳೂರು: ಮಾತಿನ ಮಲ್ಲಿ ಎಂದೇ ಪ್ರಖ್ಯಾತರಾಗಿರೋ ಖ್ಯಾತ ನಿರೂಪಕಿ ಅನುಶ್ರೀ ಅವರು ಗಣೇಶ ಹಬ್ಬ ಆಚರಣೆ, ಕುಟುಂಬ ಹಾಗೂ ಮದುವೆ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

    ಗೌರಿ-ಗಣೇಶ ಹಬ್ಬದ ವಿಶೇಷ ಕಾರ್ಯಕ್ರಮದಲ್ಲಿ ಪಬ್ಲಿಕ್ ಟಿವಿಗೆ ಸಂದರ್ಶನ ನೀಡಿದ್ದ ಅವರು, ಈ ವರ್ಷ ಹಬ್ಬ ತುಂಬಾ ಸರಳವಾಗಿ ಆಚರಿಸುತ್ತಿದ್ದೇವೆ. ಪ್ರತಿ ವರ್ಷ ಹಬ್ಬವನ್ನು ಮಂಗಳೂರಿನಲ್ಲಿ ಆಚರಿಸುತ್ತಿದ್ದೇವೆ. ಆರು ತಿಂಗಳಿನಿಂದ ಅಮ್ಮ ನಮ್ಮ ಜೊತೆ ಬೆಂಗಳೂರಿನಲ್ಲಿಯೇ ಇದ್ದಾರೆ. ಈ ಬಾರಿ ಬೆಂಗಳೂರಿನಲ್ಲಿ ಅಮ್ಮ, ತಮ್ಮ ಮತ್ತು ನನ್ನ ಎರಡು ಮುದ್ದು ಮಕ್ಕಳು( ಸಾಕು ನಾಯಿ ಮತ್ತು ಮೊಲ) ಜೊತೆ ಹಬ್ಬ ಮಾಡ್ತೀವಿ ಅಂದ್ರು.

    ಮದುವೆ ಗುಟ್ಟು..?
    ಇದೂವರೆಗೂ ನನ್ನ ಒಬ್ಬರೂ ಪ್ರಪೋಸ್ ಮಾಡಿಲ್ಲ. ಒಂದು ಸಲ ನನ್ನ ಫ್ರೆಂಡ್ಸ್ ಹತ್ತರ ಯಾಕೆ ಯಾರು ನನಗೆ ಪ್ರಪೋಸ್ ಮಾಡಲ್ಲ? ನಾನು ನೋಡೊದಕ್ಕೆ ಚೆನ್ನಾಗಿ ಇಲ್ವಾ? ಅಂತಾ ಕೇಳಿದ್ದಕ್ಕೆ ಸೋಶಿಯಲ್ ಆಗಿ ಎಲ್ಲರ ಜೊತೆ ಬೆರೆಯಬೇಕು ಅಂತಾ ಹೇಳಿದ್ರು. ಒಂದು ಸಾರಿ ಎಲ್ಲರ ಜೊತೆ ಪಬ್ ಗೆ ಹೋಗಿದ್ದಾಗ ಅಲ್ಲಿ ಫುಲ್ ಕತ್ತಲು. ಇದರಿಂದ ಗಾಬರಿಗೊಂಡ ನಾನು ಬಳಿಕ ಅಲ್ಲಿಗೆ ಹೋಗಲೇ ಇಲ್ಲ. ಹೀಗಾಗಿ ಶೂಟಿಂಗ್ ಮುಗಿದ ಕೂಡಲೇ ಮನೆಗೆ ಬಂದು ಬಿಡುತ್ತೇನೆ ಅಷ್ಟೇ ನನ್ನ ಜೀವನ ಅಂದ್ರು.

    ಒಮ್ಮೆ ಒಬ್ಬ ಮಹಿಳೆ ತನ್ನ ಮಗನ ಫೋಟೋ, ಜಾತಕ, ಉದ್ಯೋಗ ಮಾಹಿತಿ ಬರೆದು ಸಂಗೀತ ನಿರ್ದೇಶಕ ಅರ್ಜುನ್ ಜನ್ಯರಿಗೆ ಪತ್ರ ಬರೆದಿದ್ದರು. ಇದನ್ನು ಅನುಶ್ರೀ ಅವರಿಗೆ ತಲುಪಿಸಬೇಕೆಂದು ಪತ್ರದಲ್ಲಿ ಬರೆದಿದ್ದರು. ಅರ್ಜುನ್ ಸರ್ ಬಂದು, ಮೇಡಂ ಪತ್ರ ನೋಡಿ ಅಂತಾ ಕೊಟ್ಟರು. ಒಂದು ಕ್ಷಣ ತುಂಬಾ ನಗು ಬಂತು. ಎಲ್ಲೋ ದೂರದಲ್ಲಿರುವ ತಾಯಿ ನನ್ನಲ್ಲಿ ಅವರ ಸೊಸೆ ಆಗುವ ಗುಣಲಕ್ಷಣ ನೋಡಿದ್ದಾರೆ ಅಂದ್ರೆ ನನಗೆ ತುಂಬಾ ಹೆಮ್ಮೆ ಆಗುತ್ತದೆ. ಕಾರ್ಯಕ್ರಮಗಳ ಮೂಲಕ ನಾನು ಜನರಿಗೆ ಎಷ್ಟು ಹತ್ತಿರ ಅಗಿದ್ದೀನಿ ಎಂಬುದು ಪತ್ರದ ಮೂಲಕ ತಿಳಿಯಿತು ಅಂತ ಹೇಳಿದ್ರು.

    ಸ್ಕೂಲ್ ಟೈಮಲ್ಲಿ ತುಂಬಾನೇ ಪ್ರಪೋಸ್ ಬರುತ್ತಿತ್ತು. ಆದ್ರೆ ನಿರೂಪಕಿ ಆದ್ಮೇಲೆ ಒಂದು ಲೆಟರ್ ಸಹ ಬಂದಿಲ್ಲ. ಪರಿಚಯದಲ್ಲಿ ಗಂಡು ನೋಡಲಾ ಅಂತಾ ಅಮ್ಮ ಹೇಳ್ತಾ ಇರ್ತಾರೆ. ಆದ್ರೆ ಆಗಬೇಕಾದ ಸಮಯದಲ್ಲಿ ಎಲ್ಲವೂ ನಡೆಯುತ್ತದೆ ಅಂತಾ ಹೇಳಿದ್ದೀನಿ ಅಂದ್ರು.

    ಕೈ ಹಿಡಿಯೋ ಹುಡ್ಗ ಹೇಗಿರಬೇಕು..?
    ನನಗೆ ತುಂಬಾ ಬೆಳ್ಳಗಿರುವ ಹುಡಗರು ಇಷ್ಟ ಆಗಲ್ಲ. ಯಾಕೆಂದ್ರೆ ನಾನು ತುಂಬಾ ಬೆಳ್ಳಗಿಲ್ಲ. ತುಂಬಾನೇ ಚಲ್ ಚಲ್ ಆಗಿ ಹುಡಗರು ಇಷ್ಟ ಆಗಲ್ಲ. ನನ್ನ ಮದುವೆ ಆಗೋ ಹುಡಗ ನನ್ನನ್ನು ಇಗ್ನೋರ್ ಮಾಡಬೇಕು. ಅಂತಹ ಹುಡಗ ನನಗಿಷ್ಟ. ಪಬ್ಲಿಕ್ ಟಿವಿ ಕಾರ್ಯಕ್ರಮ ನೋಡಿದ ಮೇಲೆ ಪ್ರಪೋಸ್ ಬಂದರೂ ಬರಬಹುದು ಅಂತ ಹೇಳುವ ಮೂಲಕ ನಕ್ಕುಬಿಟ್ಟರು.

    ಹವ್ಯಾಸ ಏನು..?
    ಶೂಟಿಂಗ್ ಬಳಿಕ ಹೆಚ್ಚಿನ ಸಮಯವನ್ನು ಮನೆಯಲ್ಲಿ ಕಳೆಯುತ್ತೇನೆ. ನಾನು ಮನೆಯಲ್ಲಿ ಹೆಚ್ಚು ಸಿನಿಮಾಗಳನ್ನು ನೋಡುತ್ತೇನೆ. ಮನೆಯಲ್ಲಿ 800 ಸಿಡಿಗಳನ್ನು ಸಂಗ್ರಹ ಮಾಡಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳನ್ನು ನೋಡುತ್ತೇನೆ. ಬೆಳಗ್ಗೆ 4 ಗಂಟೆಗೆ ಎದ್ದು ರನ್ನಿಂಗ್ ಮಾಡ್ತೀನಿ. ನಂತ್ರ ಮನೆಗೆ ಬಂದು ಟೀ ಕುಡಿದು ಫ್ರೆಶ್ ಆಗ್ತೀನಿ. ಮನೆಯ ಪಕ್ಕದಲ್ಲಿಯ ಮಕ್ಕಳೊಂದಿಗೆ ಆಟ ಆಡ್ತೀನಿ. ಅಮ್ಮನೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತೇನೆ.

    ಹಬ್ಬದ ಸ್ಪೆಷಲ್ ಏನು..?
    ಹಬ್ಬಕ್ಕೆ ಸಿಹಿ ಮಾಡುತ್ತೇವೆ. ಮನೆಗೆ ಕಬ್ಬುಗಳನ್ನು ಕಟ್ಟಿ, ಬಳಿಕ ಎಲ್ಲರೂ ತಿನ್ನುತ್ತೇವೆ. ವಿಶೇಷವಾಗಿ ಮನೆಯಲ್ಲಿ ಪೂಜೆ ಮಾಡುತ್ತೇವೆ. ಅಣ್ಣಂದಿರು ಗೌರಿ ಹಬ್ಬಕ್ಕೆ ಕಪ್ಪು ಬಳೆಗಳನ್ನು ಕೊಟ್ಟು, ಒಂದಿಷ್ಟು ಹಣ ಸಹ ಕೊಡುತ್ತಾರೆ. ಗೌರಿ ಹಬ್ಬಕ್ಕೆ ಅಣ್ಣಂದಿರು ಕೊಟ್ಟಿದ್ದ ಕಪ್ಪು ಬಳೆಗಳನ್ನು ತೊಟ್ಟು ಸಂಭ್ರಮಿಸುತ್ತೇವೆ.

    ಕಳೆದ ವರ್ಷ ನಾನು ಏನೂ ಬಯಸಿರಲಿಲ್ಲ. ಈ ಬಾರಿ ಸರ್ಕಾರ ನನಗೆ `ನಾಡಪ್ರಭು ಕೆಂಪೇಗೌಡ’ ಪ್ರಶಸ್ತಿ ನೀಡಿ ಗೌರವಿಸಿದೆ. ಕೆಂಪೇಗೌಡರ ಕಟ್ಟಿದ ಊರಲ್ಲಿ ಇಂದು ನಾವು ನೆಮ್ಮದಿಯಿಂದ ಇದ್ದೇವೆ. ನಮಗೆ ಊಟ, ಮನೆ ಎಲ್ಲವೂ ಬೆಂಗಳೂರು ನೀಡಿದೆ. ಅದಕ್ಕಿಂತ ಖುಷಿ ನನಗೆ ಮತ್ತೊಂದಿಲ್ಲ. ಕೊಡಗು ಪುನರ್ ನಿರ್ಮಾಣಕ್ಕೆ ಎಲ್ಲರೂ ಒಂದಾಗೋಣ ಅಂತಾ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=tjMufAL6i9U

  • ರಿಯಾಲಿಟಿ ಶೋನಲ್ಲಿ ಕಣ್ಣೀರು ಹಾಕಿದ ನಿರೂಪಕಿ ಅನುಶ್ರೀ

    ರಿಯಾಲಿಟಿ ಶೋನಲ್ಲಿ ಕಣ್ಣೀರು ಹಾಕಿದ ನಿರೂಪಕಿ ಅನುಶ್ರೀ

    ಬೆಂಗಳೂರು: ಕನ್ನಡದ ಖ್ಯಾತ ನಿರೂಪಕಿ ಅಂತಾನೇ ಗುರುತಿಸಿಕೊಳ್ಳುವ ಅನುಶ್ರೀ ನಿರೂಪಣೆ ವೇಳೆ ಒಂದು ಕ್ಷಣ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.

    ಖಾಸಗಿ ವಾಹಿನಿಯ ಡಾನ್ಸಿಂಗ್ ರಿಯಾಲಿಟಿ ಶೋ ಕಾರ್ಯಕ್ರಮದ ನಿರೂಪಣೆ ಮಾಡುವುದು ಎಲ್ಲರಿಗೂ ಗೊತ್ತಿದೆ. ಶನಿವಾರ ಪ್ರಸಾರವಾದ ಸಂಚಿಕೆಯಲ್ಲಿ ತಮ್ಮ ಮುದ್ದು ಸಹೋದರನನ್ನು ನೆನಪಿಸಿಕೊಂಡು ಕಣ್ಣೀರು ಸುರಿಸಿದ್ದಾರೆ.

    ಸ್ವರ್ಧಿಗಳಾದ ಸೂರಜ್, ಶ್ರಾವ್ಯಾ ಮತ್ತು ಡ್ಯಾನ್ಸ್ ಮಾಸ್ಟರ್ ರುದ್ರ ಮೂವರು ಜಾಲಿಡೇಸ್ ಸಿನಿಮಾದ ಸ್ನೇಹತ್ವ ಸಾರುವ ಹಾಡಿಗೆ ಮನಮೋಹಕವಾಗಿ ಹೆಜ್ಜೆ ಹಾಕಿದ್ದರು. ಡ್ಯಾನ್ಸ್ ಮಧ್ಯೆ ತೀರ್ಪುಗಾರರ ನೆಚ್ಚಿನ ಸ್ನೇಹಿತರ ಫೋಟೋ ಸಹ ತೋರಿಸಿದರು. ರಕ್ಷಿತಾರ ಸ್ನೇಹಿತೆ ಪ್ರಶಾಂತಿ, ವಿಜಯ್ ರಾಘವೇಂದ್ರ ಗೆಳೆಯ ಕುಮಾರ್, ಅರ್ಜುನ್ ಜನ್ಯಾರ ಗೆಳೆಯ ಪ್ರಕಾಶ್ ಎಲ್ಲರ ಫೋಟೋಗಳನ್ನು ಡಿಸ್ ಪ್ಲೇ ಮಾಡಲಾಯಿತು. ಕೊನೆಗೆ ಅನುಶ್ರೀಯವರ ಫ್ರೆಂಡ್ ಬದಲಾಗಿ ತಮ್ಮ ಅಭಿಜಿತ್ ಫೋಟೋ ತೋರಿಸಲಾಯಿತು.

    ತೀರ್ಪುಗಾರರು ಎಲ್ಲರೂ ತಮ್ಮ ಸ್ನೇಹದ ಬಗ್ಗೆ ಹೇಳಿಕೊಂಡರು. ಕೊನೆಗೆ ಅನುಶ್ರೀ ತಮ್ಮನ ಬಗ್ಗೆ ಕೇಳಲಾಯಿತು. ಆ ವೇಳೆ ಭಾವುಕಾರದ ಅನುಶ್ರೀ, ಇವನು ನನ್ನ ಕನಸು, ತುಂಬಾ ವರ್ಷಗಳ ಹಿಂದೆ ಸೂಟ್‍ಕೇಸ್ ಹಿಡಿದುಕೊಂಡು ಬೆಂಗಳೂರಿಗೆ ಬಂದೆ. ನಾನು ಇಲ್ಲಿ ದುಡಿಯುತ್ತಿದ್ದರೆ, ಅಲ್ಲಿ ಅವನು ನನ್ನ ತಾಯಿಯನ್ನು 13 ವರ್ಷಗಳಿಂದ ಚೆನ್ನಾಗಿ ನೋಡಿಕೊಂಡಿದ್ದಾನೆ. ನಾನು ಏನು ಮಾಡಲು ಸಾಧ್ಯವಾಗಿಲ್ಲವೋ, ಅವೆಲ್ಲವನ್ನು ಅವನು ಇಂದು ಸಾಧಿಸಿದ್ದಾನೆ. ಒಳ್ಳೆಯ ಅಂಕಗಳೊಂದಿಗೆ ತೇರ್ಗಡೆಯಾಗಿ ತನ್ನ ಕಾಲ ಮೇಲೆ ನಿಂತುಕೊಂಡಿದ್ದಾನೆ. ದೇವರು ನನಗೆ ನೀಡಿರುವ ಎಲ್ಲ ಆಯಸ್ಸನ್ನು ಆತನಿಗೆ ನೀಡಲಿ ಎಂದು ಕೇಳಿಕೊಂಡು ಒಂದು ಕ್ಷಣ ಭಾವುಕರಾದ್ರು.

    ಕಾರ್ಯಕ್ರಮಗಳಲ್ಲಿ ತಮ್ಮ ಪಟಾಕಿ ಮಾತುಗಳಿಂದ ಎಲ್ಲರನ್ನು ನಗಿಸುವ ಅನುಶ್ರೀ ಕಣ್ಣೀರು ಹಾಕಿದ್ದರಿಂದ ಒಂದು ಕ್ಷಣ ತೀರ್ಪುಗಾರರು ಸೇರಿದಂತೆ ವೀಕ್ಷಕರು ಸಹ ಭಾವುಕರಾದರು. ಅದರಂತೆ ನಟಿ ರಕ್ಷಿತಾ ತಮ್ಮ ಸ್ನೇಹದ ಗೆಳೆತಿ ಪ್ರಶಾಂತಿಯವರ ಬಗ್ಗೆ ಹೇಳುವಾಗ ಕಣ್ಣಂಚಲಿ ಕಣ್ಣೀರು ಬಂತು.

  • ಮತ್ತೆ ನಾ ಹೇಳಲು ಅವರು ಕೇಳಲು ಇಲ್ಲ: ಚಂದನ್‍ಗೆ ಅನುಶ್ರೀ ಸಂತಾಪ

    ಮತ್ತೆ ನಾ ಹೇಳಲು ಅವರು ಕೇಳಲು ಇಲ್ಲ: ಚಂದನ್‍ಗೆ ಅನುಶ್ರೀ ಸಂತಾಪ

    ಬೆಂಗಳೂರು: ರಸ್ತೆ ಅಪಘಾತದಲ್ಲಿ ಮೃತಪಟ್ಟ ಖ್ಯಾತ ನಿರೂಪಕ ಚಂದನ್ ಅವರಿಗೆ ನಟಿ, ನಿರೂಪಕಿ ಅನುಶ್ರೀ ತಮ್ಮ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ಚಂದನ್ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.

    “ಕನ್ನಡದ ಕಂಪು ಇವರ ಕಂಠದಿಂದ ಬರುವ ಪದಗಳಲ್ಲಿ ಇತ್ತು. ಕನ್ನಡ ಕಿರುತೆರೆ ಕಂಡಂತೆ ಅಚ್ಚ ಕನ್ನಡ ನಿರೂಪಕರಲ್ಲಿ ಇವರು ಉನ್ನತ ಸ್ಥಾನದಲ್ಲಿದ್ದರು. ನಾನು ಕೂಡ ಇವರ ಅಭಿಮಾನಿ. ಅದನೊಮ್ಮೆ ಅವರಿಗೆ ಹೇಳಿದ್ದೆ ಕೂಡ. ಮತ್ತೆ ನಾ ಹೇಳಲು ಅವರು ಕೇಳಲು ಇಲ್ಲ. ಅವರ ಕುಟುಂಬಕ್ಕೆ ಆ ದೇವರು ಶಕ್ತಿ ನೀಡಲಿ. ಚಂದನ್ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಅನುಶ್ರೀ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿದ್ದಾರೆ.

    ಚಂದನ್ ನಿರೂಪಕ ಮಾತ್ರವಲ್ಲದೆ ಸಿನಿಮಾಗಳಲ್ಲಿ ಚಿಕ್ಕ ಪುಟ್ಟ ಪಾತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಡಾ, ರಾಜ್‍ಕುಮಾರ್ ಅವರ ಅಭಿಮಾನಿಯಾಗಿದ್ದ ಚಂದನ್ ರಾಜ್‍ಕುಮಾರ್ ಅವರ ಕಾರ್ಯಕ್ರಮಗಳಲ್ಲೂ ನಡೆಸಿಕೊಡುತ್ತಿದ್ದರು. ಆ ಕಾರ್ಯಕ್ರಮ ಸಾಕಷ್ಟು ಜನಪ್ರಿಯತೆ ಪಡೆದಿತ್ತು.

    ನಿಂತ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಖಾಸಗಿ ವಾಹಿನಿಯಲ್ಲಿ ನಿರೂಪಕರಾಗಿದ್ದ ಚಂದನ್ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಗ್ರಾಮದಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದರು. ಚಂದನ್ ಅವರ ಕನ್ನಡ ಉಚ್ಛಾರವನ್ನು ಕಂಡು ಸಾಕಷ್ಟು ಜನ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದರು.

  • ರಿಯಾಲಿಟಿ ಶೋ ನಲ್ಲಿ ಶಾಲೆಯ ದಿನಗಳನ್ನು ನೆನಪಿಸಿಕೊಂಡ ಆ್ಯಂಕರ್ ಅನುಶ್ರೀ

    ರಿಯಾಲಿಟಿ ಶೋ ನಲ್ಲಿ ಶಾಲೆಯ ದಿನಗಳನ್ನು ನೆನಪಿಸಿಕೊಂಡ ಆ್ಯಂಕರ್ ಅನುಶ್ರೀ

    ಬೆಂಗಳೂರು: ಖಾಸಗಿ ಚಾನೆಲೊಂದರಲ್ಲಿ ಪ್ರಸಾರವಾಗುವ ಸರಿಗಮಪ ರಿಯಾಲಿಟಿ ಶೋ ನಲ್ಲಿ ಆ್ಯಂಕರ್ ಅನುಶ್ರೀ ಅವರು ಸ್ಪರ್ಧಿಯೊಬ್ಬರ ಹುಟ್ಟುವನ್ನು ಆಚರಿಸಿಕೊಳ್ಳುವ ಮೂಲಕ ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿಕೊಂಡಿದ್ದಾರೆ.

    ಬೆಳಗಾವಿ ಮೂಲದ ಲಕ್ಷ್ಮೀ ಎಂಬವರ ಹುಟ್ಟುಹಬ್ಬವನ್ನು ಶೋನಲ್ಲಿ ಆಚರಿಸಿಕೊಳ್ಳಲಾಯಿತು. ಈ ವೇಳೆ ಅನುಶ್ರೀ ಅವರು ಲಕ್ಷ್ಮೀ ಅವರಿಗೆ ಶಾಲೆಗೆ ಹೋಗಲು ಬ್ಯಾಗ್ ನೀಡಿ ಬಳಿಕ ತನ್ನ ಶಾಲೆಯ ದಿನಗಳ ಬಗ್ಗೆ ನೆನಪಿಸಿಕೊಂಡರು.

    ನಾನು ಶಾಲೆಗೆ ಹೋಗುವ ಸಮಯದಲ್ಲಿ ನನ್ನಲ್ಲಿ ಬ್ಯಾಗ್ ಇರಲಿಲ್ಲ. ಅವಾಗ ನಮಗೆ ಬ್ಯಾಗ್ ಕೊಡಿಸುವವರೂ ಯಾರೂ ಇರಲಿಲ್ಲ. ಹೀಗಾಗಿ ನಾನು ಪ್ಲಾಸ್ಟಿಕ್ ಚೀಲಗಳಲ್ಲಿ ಪುಸ್ತಕಗಳನ್ನು ಶಾಲೆಗೆ ಕೊಂಡೊಯ್ಯುತ್ತಿದ್ದೆ. ಆದ್ರೆ ಈಗ ಹಾಗೆ ಅಲ್ಲ. ಮಕ್ಕಳಿಗೆ ಬೇಕಾದಂತಹ ವೈರಟಿಯ ಬ್ಯಾಗ್ ಗಳು ಬಂದಿವೆ ಅಂತ ಹೇಳಿದ್ರು.

    ತನ್ನದೇ ಶೈಲಿಯಲ್ಲಿ ಹಾಡುತ್ತಾ ಜನರ ಮನಗೆದ್ದಿರುವ ಲಕ್ಷ್ಮೀ ಅವರ ಹುಟ್ಟುಹಬ್ಬವನ್ನು ಆಚರಿಸಿರುವುದು ನೆರೆದವರ ಕಣ್ಣಂಚಲ್ಲಿ ನೀರು ತರಿಸಿತ್ತು. ಅಲ್ಲದೇ ಇದೇ ಮೊದಲ ಬಾರಿಗೆ ನಾನು ಕೇಕ್ ಕಟ್ ಮಾಡುತ್ತಿರುವುದಾಗಿ ಹೇಳಿ ಲಕ್ಷ್ಮೀ ಕೂಡ ಭಾವುಕರಾದ್ರು. ಕೇಕ್ ಕಟ್ ಮಾಡಿದ ಬಳಿಕ ಸರಿಗಮಪದ ಜಡ್ಜ್ ಗಳು ಲಕ್ಷ್ಮೀ ಅವರಿಗೆ ಗಿಫ್ಟ್ ನೀಡಿದ್ದಾರೆ. ಹಾಗೆಯೇ ಲಕ್ಷ್ಮೀ ಅವರು ಪುಸ್ತಕಗಳನ್ನು ಪ್ಲಾಸ್ಟಿಕ್ ಕವರ್ ನಲ್ಲಿ ತೆಗೆದುಕೊಂಡು ಹೋಗುತ್ತಾರೆ ಅನ್ನೋ ಮಾಹಿತಿ ಪಡೆದಿದ್ದ ಅನುಶ್ರೀ ಬ್ಯಾಗ್ ಉಡುಗೊರೆಯಾಗಿ ನೀಡುವ ಮೂಲಕ ಮಾನವೀಯತೆ ಮೆರೆದರು.

  • ಸರಿಗಮಪ ರಿಯಾಲಿಟಿ ಶೋಗೆ ಮಹಾಗುರು ಎಂಟ್ರಿನಲ್ಲಿಯೇ ಸಂಚಲನ ಮೂಡಿಸುತ್ತಿದೆ ನ್ಯೂ ವರ್ಷನ್ ಸಾಂಗ್

    ಸರಿಗಮಪ ರಿಯಾಲಿಟಿ ಶೋಗೆ ಮಹಾಗುರು ಎಂಟ್ರಿನಲ್ಲಿಯೇ ಸಂಚಲನ ಮೂಡಿಸುತ್ತಿದೆ ನ್ಯೂ ವರ್ಷನ್ ಸಾಂಗ್

    ಬೆಂಗಳೂರು: ಸಂಗೀತ ಪ್ರತಿಭೆಯನ್ನು ಗುರುತಿಸುವ ಜೀ ಕನ್ನಡ ವಾಹಿನಿಯ ಜೂನಿಯರ್. ಸರಿಗಮಪ ರಿಯಾಲಿಟಿ ಶೋ ಇಂದಿನಿಂದ ಪ್ರಾರಂಭವಾಗಲಿದೆ. ಈ ಬಾರಿ  ನಾದ ಬ್ರಹ್ಮ ಹಂಸಲೇಖ ಮಹಾಗುರುಗಳಾಗಿ ನವ ಪ್ರತಿಭೆಗಳಿಗೆ ಸಂಗೀತ ಪಾಠವನ್ನು ಹೇಳಲಿದ್ದಾರೆ.

    ಇಂದು ಜೀ ವಾಹಿನಿ ತನ್ನ ಫೇಸ್ ಬುಕ್ ನಲ್ಲಿ ಹಳೆಯ ಎವರ್ ಗ್ರೀನ್ ಹಾಡುಗಳಿಗೆ ನ್ಯೂ ವರ್ಷನ್ ಹಾಡಿರುವ ವಿಡಿಯೋವನ್ನು ಅಪ್ಲೋಡ್ ಮಡಿಕೊಂಡಿದೆ. ವಿಶೇಷವೆಂದರೆ ಸರಿಗಮಪ ರಿಯಾಲಿಟಿ ಶೋನ ಹಳೆಯ ಆವೃತ್ತಿಯ ಜೂನಿಯರ್ ಮತ್ತು ಸೀನಿಯರ್ ಸ್ಪರ್ಧಿಗಳ ಸುಮಧುರ ಕಂಠದಲ್ಲಿ ಹಾಡು ಮೂಡಿದೆ. ವಿಡಿಯೋದಲ್ಲಿ ಇಂಪನಾ, ಅರವಿಂದ್, ಸಾನ್ವಿ ಶೆಟ್ಟಿ ಸೇರಿದಂತೆ ಹಲವರ ಕಂಠದಲ್ಲಿ ಹಾಡನ್ನು ಕೇಳಬಹುದು.

    ಈಗಾಗಲೇ ಜೀ ವಾಹಿನಿಗೆ ಹಂಸಲೇಖ ಎಂಟ್ರಿ ಆಗುತ್ತಿರುವ ವಿಷಯವನ್ನು ಅಭಿಮಾನಿಗಳಿಗೆ ವಿಶೇಷ ಪ್ರೋಮೋಗಳ ಮೂಲಕ ತಿಳಿಸಿದೆ. ಈ ಆವೃತ್ತಿಯಲ್ಲಿ ರಾಜೇಶ್ ಕೃಷ್ಣಣ್ ವೈಯಕ್ತಿಕ ಕಾರಣಗಳಿಂದ ತೀರ್ಪುಗಾರರ ಸ್ಥಾನದಿಂದ ಹೊರ ಬಂದಿದ್ದು, ಅವರ ಗುರು ಹಂಸಲೇಖ ಮಹಾಗುರುಗಳಾಗಿ ಬಂದಿದ್ದಾರೆ. ಎಂದಿನಂತೆ ವಿಜಯ್ ಪ್ರಕಾಶ್ ಮತ್ತು ಅರ್ಜುನ್ಯ ಜನ್ಯ ತೀರ್ಪುಗಾರರಾಗಿ ಹಂಸಲೇಖ ಅವರಿಗೆ ಸಾಥ್ ನೀಡಲಿದ್ದಾರೆ. ಮಾತಿನ ಚಿನುಕುರುಳಿ ಅನುಶ್ರೀ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ.

  • ಇಂದು `ಉಪ್ಪು ಹುಳಿ ಖಾರ’ದ ಜೊತೆ ತೆರೆಗೆ ಬರ್ತಿದ್ದಾನೆ `ಅತಿರಥ’

    ಇಂದು `ಉಪ್ಪು ಹುಳಿ ಖಾರ’ದ ಜೊತೆ ತೆರೆಗೆ ಬರ್ತಿದ್ದಾನೆ `ಅತಿರಥ’

    ಬೆಂಗಳೂರು: ಸ್ಯಾಂಡಲ್‍ ವುಡ್‍ನಲ್ಲಿ ಇಂದು ಎರಡು ಚಿತ್ರಗಳು ಸ್ಪರ್ಧೆಗಿಳಿಯಲಿವೆ. ಮಾಲಾಶ್ರೀ-ಅನುಶ್ರೀ ಅಭಿನಯದ `ಉಪ್ಪು ಹುಳಿ ಖಾರ’ ಒಂದಾಂದ್ರೆ, ಇನ್ನೊಂದು ಚೇತನ್, ಲತಾ ಹೆಗಡೆ ನಟನೆಯ `ಅತಿರಥ’

    ಆರಂಭದಿಂದಲೂ ಭಾರಿ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ ಉಪ್ಪು ಹುಳಿ ಖಾರ. ಆಕರ್ಷಕ ಟೈಟಲ್‍ನ ಚಿತ್ರಕ್ಕೆ ಇಮ್ರಾನ್ ಸರ್ದಾರಿಯಾ ನಿರ್ದೇಶಕರು. ಬಹುತಾರಾಗಣದ ಈ ಚಿತ್ರದಲ್ಲಿ ಅನುಶ್ರೀ, ಜಯಶ್ರೀ, ಶಶಿ, ಶರತ್ ಮುಂತಾದವರು ಅಭಿನಯಿಸಿದ್ದಾರೆ. ನಟಿ ಮಾಲಾಶ್ರೀ ಇವ್ರನ್ನೆಲ್ಲಾ ದಾರಿಗೆ ತರುವ ದೇವಿ ಹೆಸರಿನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉತ್ತರ ಕರ್ನಾಟಕ ಶೈಲಿಯ ಖಡಕ್ ಡೈಲಾಗ್ ಹೊಡೆದು ಮಾಲಾಶ್ರೀ ಅಭಿಮಾನಿಗಳನ್ನ ರಂಜಿಸಲಿದ್ದಾರೆ.

    ರಾಜ್ಯದ 200 ಚಿತ್ರಮಂದಿರಗಳಲ್ಲಿ `ಉಪ್ಪು ಹುಳಿ ಖಾರ’ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರದಲ್ಲಿನ ರೋ ರೋ ರೋಮಿಯೋ ಹಾಡು ಈಗಾಗ್ಲೇ ಫೇಮಸ್ ಆಗಿದೆ. ಎಂ ರಮೇಶ್ ನಿರ್ದೇಶನ ಈ ಚಿತ್ರಕ್ಕಿದೆ. `ಉಪ್ಪು ಹುಳಿ ಖಾರ’ದ ರುಚಿಗಳಂತೆ ಮನುಷ್ಯನ ಜೀವನದಲ್ಲಿ ಬರುವ ಅನುಭವವನ್ನ ಅಚ್ಚುಕಟ್ಟಾಗಿ ಹೇಳಲಾಗಿದೆ. ಒಂದು ವಿಭಿನ್ನ ಶೈಲಿಯ ನಿರೂಪಣೆಯ ಈ ಚಿತ್ರ ಭರಪೂರ ಎಂಟರ್ ಟೈನ್ಮೆಂಟ್ ಕೊಡೋಕೆ ಇಂದು ಥಿಯೇಟರ್‍ಗೆ ಬರಲಿದೆ.

    `ಉಪ್ಪು ಹುಳಿ ಖಾರ’ ಚಿತ್ರದ ಜೊತೆ ತೆರೆಕಾಣೋಕೆ ಸಿದ್ಧವಾಗಿರೋ ಇನ್ನೊಂದು ಚಿತ್ರವೇ `ಅತಿರಥ’. ಮಹೇಶ್ ಬಾಬು ನಿರ್ದೇಶನದ ಅತಿರಥ ರಾಜ್ಯದಲ್ಲಿ 150ಕ್ಕೂ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ. ಚಿತ್ರದಲ್ಲಿ ಆ ದಿನಗಳು ಚೇತನ್, ಲತಾ ಹೆಗಡೆ ಜೋಡಿಯಾಗಿ ಅಭಿನಯಿಸಿದ್ದಾರೆ.

    ಸಾಧು ಕೋಕಿಲಾ ಮಗ ಸುರಾಗ್ ಸಂಗೀತ ನಿರ್ದೇಶನ ಈ ಅತಿರಥ ಚಿತ್ರಕ್ಕಿದೆ. ಚಿತ್ರದಲ್ಲಿ ಚೇತನ್ ಟಿವಿ ಜರ್ನಲಿಸ್ಟ್ ಪಾತ್ರದಲ್ಲಿ ಕಾಣಿಸ್ಕೊಂಡಿದ್ದಾರೆ. ತನಿಖೆ-ಅಪರಾಧ ಅಲ್ಲೊಂದು ಲವ್ ಸ್ಟೋರಿಯನ್ನೊಳಗೊಂಡ ಒಂದು ಅಪರೂಪದ ಕಥೆ ಚಿತ್ರದಲ್ಲಿದೆ. ಒಟ್ಟಿನಲ್ಲಿ `ಅತಿರಥ’ ಕೂಡ ಸಿನಿಪ್ರಿಯರಿಗೆ ಭಾರೀ ಭೋಜನ ಕೊಡೋಕೆ ರೆಡಿಯಾಗಿದೆ.

    https://www.youtube.com/watch?v=gMX4XWTCvxY