Tag: anushka sharma

  • ಕೊರೊನಾ ಎಫೆಕ್ಟ್ – ವಿರಾಟ್‍ಗೆ ಅನುಷ್ಕಾ ಹೇರ್ ಕಟಿಂಗ್

    ಕೊರೊನಾ ಎಫೆಕ್ಟ್ – ವಿರಾಟ್‍ಗೆ ಅನುಷ್ಕಾ ಹೇರ್ ಕಟಿಂಗ್

    ನವದೆಹಲಿ: ಕೊರೊನಾ ಎಫೆಕ್ಟ್‌ನಿಂದಾಗಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಪತ್ನಿ, ನಟಿ ಅನುಷ್ಕಾ ಶರ್ಮಾ ಹೇರ್ ಕಟಿಂಗ್ ಮಾಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರು ಕೊರೊನಾ ವೈರಸ್‍ನಿಂದಾಗಿ ದೇಶಾದ್ಯಂತ ಏಪ್ರಿಲ್ 14ರವರೆಗೆ ಲಾಕ್‍ಡೌನ್ ಘೋಷಿಸಿದ್ದಾರೆ. ಹೀಗಾಗಿ ಸಿನಿಮಾ ಸೆಲೆಬ್ರಿಟಿಗಳು, ಸ್ಟಾರ್ ಆಟಗಾರರು, ಕ್ರೀಡಾಪಟುಗಳು ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಈ ಪೈಕಿ ಕೆಲವರು ಕುಟುಂಬದಸ್ಥರ ಜೊತೆಗಿರುವ ಕೆಲವು ಸುಂದರ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

    ಕ್ಯೂಟ್ ಕಪಲ್ ವಿರುಷ್ಕಾ ಈ ಹಿಂದೆ ವಿಡಿಯೋ ಮೂಲಕ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಿದ್ದರು. ಇಂದು ಅನುಷ್ಕಾ ಶರ್ಮಾ ಪತಿ ವಿರಾಟ್ ಅವರಿಗೆ ಹೇರ್ ಕಟಿಂಗ್ ಮಾಡುತ್ತಿರುವ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

    https://www.instagram.com/p/B-Q8gWZpYPw/

    ಈ ವಿಡಿಯೋದಲ್ಲಿ ಅನುಷ್ಕಾ ಕತ್ತರಿ ಹಿಡಿದು ವಿರಾಟ್ ಅವರ ಹೇರ್ ಕಟಿಂಗ್ ಮಾಡುತ್ತಾರೆ. ಬಳಿಕ ವಿರಾಟ್, ಪತ್ನಿ ಅನುಷ್ಕಾ ಅದ್ಭುತವಾಗಿ ಹೇರ್ ಕಟಿಂಗ್ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಅನುಷ್ಕಾ ಅವರು ಪೋಸ್ಟ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಪೋಸ್ಟ್ ಮಾಡಿದ ಒಂದು ಗಂಟೆಯಲ್ಲಿ 10 ಲಕ್ಷಕ್ಕೂ ಅಧಿನ ಜನರು ವೀಕ್ಷಿಸಿದ್ದು, ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಈ ವಿಡಿಯೋವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಟ್ವಿಟ್ ಮಾಡಿ, ಕ್ವಾರೆಂಟೈನ್ ಸಂದರ್ಭದಲ್ಲಿಯೂ ಚೆನ್ನಾಗಿ ಕಾಣುವುದಕ್ಕೆ ಒಂದು ಸಲಹೆ ಎಂದು ಬರೆದು ಟ್ವೀಟ್ ಮಾಡಿದೆ

  • ಕೊರೊನಾ ವೈರಸ್ ತಡೆಗೆ ವಿಶೇಷ ಮನವಿ ಮಾಡಿದ ವಿರುಷ್ಕಾ ಜೋಡಿ

    ಕೊರೊನಾ ವೈರಸ್ ತಡೆಗೆ ವಿಶೇಷ ಮನವಿ ಮಾಡಿದ ವಿರುಷ್ಕಾ ಜೋಡಿ

    ನವದೆಹಲಿ: ದೇಶದಲ್ಲೆಡೆ ಹಬ್ಬುತ್ತಿರುವ ಡೆಡ್ಲಿ ಕೊರೊನಾ ವೈರಸ್ ತಡೆಗೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ ಅವರು ವಿಡಿಯೋ ಮೂಲಕ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ.

    ಕೊರೊನಾ ವೈರಸ್ ವಿಚಾರವಾಗಿ ವಿಶ್ವದ ಬಹುತೇಕ ಕ್ಷೇತ್ರಗಳು ಸ್ತಬ್ಧವಾಗಿವೆ. ಇಲ್ಲರೂ ಮನೆಯಿಂದ ಹೊರಗೆ ಬರುಲು ಭಯಪಡುತ್ತಿದ್ದಾರೆ. ಕೆಲ ಸೆಲೆಬ್ರಿಟಿಗಳು ಕೂಡ ಕೊರೊನಾ ವೈರಸ್ ತಡೆಯಲು ಹಲವಾರು ಟಿಪ್ಸ್ ಗಳು ಮತ್ತು ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಈಗ ಈ ವಿಚಾರವಾಗಿ ಸ್ಟಾರ್ ಜೋಡಿ ವಿರಾಟ್ ಮತ್ತು ಅನುಷ್ಕಾ ವಿಡಿಯೋ ಮಾಡುವ ಮೂಲಕ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

    https://www.instagram.com/p/B98Skz4pt-s/?utm_source=ig_embed

    ಪತಿ ಪತ್ನಿ ಜೊತೆಲ್ಲೇ ಕುಳಿತು ವಿಡಿಯೋ ಮಾಡಿದ್ದು, ಈ ವಿಡಿಯೋವನ್ನು ಅನುಷ್ಕಾ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಾಕಿಕೊಂಡಿದ್ದಾರೆ. ಈಗ ನಾವೆಲ್ಲ ಬಹಳ ಕಠಿಣ ಪರಿಸ್ಥಿತಿಯಲ್ಲಿ ಇದ್ದೇವೆ. ನಾವೆಲ್ಲ ಸೇರಿ ಕೊರೊನಾ ವೈರಸ್ ಅನ್ನು ತಡೆಹಿಡಿಯಬೇಕಿದೆ. ನಾವು ನಮ್ಮ ಸುರಕ್ಷತೆಗಾಗಿ ಮನೆಯಲ್ಲೇ ಇದ್ದೇವೆ. ಹಾಗೇ ನೀವು ಕೂಡ ನಿಮ್ಮ ಸುರಕ್ಷತೆಗೆ ಮನೆಯಲ್ಲೇ ಇರಿ. ನಾವೆಲ್ಲರೂ ಸೇರಿ ಕೊರೊನಾ ಹರಡುವಿಕೆಯನ್ನು ತಡೆಗಟ್ಟಬೇಕು. ನಾವಾಗಿಯೇ ಐಸೋಲೇಷನ್‍ನಲ್ಲಿ ಇರೋಣ ಎಂದು ವಿರುಷ್ಕಾ ಜೋಡಿ ಮನವಿ ಮಾಡಿಕೊಂಡಿದೆ.

    ಕೊರೊನಾ ವೈರಸ್ ಕುರಿತಾಗಿ ಸಾಲು ಸಾಲು ಟ್ವೀಟ್ ಮಾಡಿರುವ ಕೊಹ್ಲಿ ಅವರು, ಗಮನವಿರಲಿ ಕೊರೊನಾ ವೈರಸ್ ಅನ್ನು ಎದುರಿಸಲು ಜಾಗರೂಕರಾಗಿರಿ. ಜವಾಬ್ದಾರಿಯುತ ನಾಗರಿಕರಾದ ನಾವು ನಮ್ಮ ಸುರಕ್ಷತೆಗಾಗಿ ಗೌರವಾನ್ವಿತ ಪ್ರಧಾನಿ ಮೋದಿ ಅವರು ಘೋಷಿಸಿದಂತೆ ಜಾರಿಗೆ ತಂದಿರುವ ನಿಯಮಗಳಿಗೆ ಬದ್ಧರಾಗಿರಬೇಕು. ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಕೊರೊನಾ ವಿರುದ್ಧ ಹೊರಾಡೋಣ ಎಂದಿದ್ದಾರೆ.

    ಅಲ್ಲದೆ ಕೊರೋನಾ ವೈರಸ್ ವಿರುದ್ಧ ಹೋರಾಡಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿರುವ ದೇಶದ ಮತ್ತು ಜಗತ್ತಿನ ಎಲ್ಲ ವೈದ್ಯಕೀಯ ವೃತ್ತಿಪರರಿಗೆ ವಿಶೇಷ ನಮನಗಳು. ಉತ್ತಮ ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳುವ ಮೂಲಕ ನಾವು ಮತ್ತು ನಮ್ಮ ಸುತ್ತಲಿರುವ ಪ್ರತಿಯೊಬ್ಬರನ್ನು ವೈದ್ಯರಿಗೆ ಬೆಂಬಲ ನೀಡೋಣ ಎಂದು ವೈದ್ಯರ ಬಗ್ಗೆಯೂ ಕೂಡ ವಿರಾಟ್ ಅವರು ಟ್ವೀಟ್ ಮಾಡಿದ್ದಾರೆ.

    ಕೊರೊನಾ ವೈರಸ್ ಮಹಾಮಾರಿಯಿಂದ ಕ್ರೀಡಾ ಜಗತ್ತು ಕೂಡ ತತ್ತರಿಸಿ ಹೋಗಿದೆ. ಕೊರೊನಾ ವೈರಸ್ ಭೀತಿಯಿಂದ ಭಾರತ ಮತ್ತು ದಕ್ಷಿಣ ಅಫ್ರಿಕಾ ವಿರುದ್ಧದ ಏಕದಿನ ಸರಣಿ ರದ್ದಾಗಿದೆ. ಪ್ರವಾಸಕ್ಕಾಗಿ ಭಾರತಕ್ಕ ಬಂದ ಸೌತ್ ಅಫ್ರಿಕಾ ಆಟಗಾರರು ಒಂದು ಪಂದ್ಯವನ್ನು ಆಡದೇ ತಮ್ಮ ದೇಶಕ್ಕೆ ವಪಾಸ್ ಮರಳಿದ್ದಾರೆ. ಇದೇ ತಿಂಗಳ ಕೊನೆಯಲ್ಲಿ ನಡೆಯಬೇಕಿದ್ದ ಐಪಿಎಲ್ ಕೂಡ ಮುಂದಕ್ಕೆ ಹೋಗಿದೆ.

  • 2ನೇ ವರ್ಷದ ಮದ್ವೆ ವಾರ್ಷಿಕೋತ್ಸವ – ಅನುಷ್ಕಾಗೆ ಸಿಕ್ತು ಕೊಹ್ಲಿಯಿಂದ ಸ್ಪೆಷಲ್ ಗಿಫ್ಟ್

    2ನೇ ವರ್ಷದ ಮದ್ವೆ ವಾರ್ಷಿಕೋತ್ಸವ – ಅನುಷ್ಕಾಗೆ ಸಿಕ್ತು ಕೊಹ್ಲಿಯಿಂದ ಸ್ಪೆಷಲ್ ಗಿಫ್ಟ್

    ಮುಂಬೈ: ವಿಂಡೀಸ್ ವಿರುದ್ಧ ಸರಣಿ ಗೆದ್ದ ಬಳಿಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾಗೆ ನೀಡಿದ ಸ್ಪೆಷಲ್ ಗಿಫ್ಟ್ ಬಗ್ಗೆ ಮಾತನಾಡಿದ್ದಾರೆ.

    ಬುಧವಾರ ರಾತ್ರಿ ಮೂರನೇ ಟಿ 20 ಪಂದ್ಯವನ್ನು ಗೆದ್ದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು,”ನನ್ನ ಕ್ರಿಕೆಟ್ ಬಾಳ್ವೆಯ ಸ್ಪೆಷಲ್ ಇನ್ನಿಂಗ್ಸ್ ಇದು. ಅಷ್ಟೇ ಅಲ್ಲದೇ ಇಂದು ನಾವು ಎರಡನೇ ಮದುವೆ ವಾರ್ಷಿಕೋತ್ಸವ ಆಚರಿಸುತ್ತಿದ್ದು ಇದು ಸ್ಪೆಷಲ್ ಗಿಫ್ಟ್” ಎಂದು ಆಟವನ್ನು ಬಣ್ಣಿಸಿದರು.

    2017ರ ಡಿಸೆಂಬರ್ 11 ರಂದು ಇಟಲಿಯ ಟಸ್ಕನಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

    ಪಂದ್ಯದಲ್ಲಿ ಕೊಹ್ಲಿ ಔಟಾಗದೇ 70 ರನ್(29 ಎಸೆತ, 4 ಬೌಂಡರಿ, 7 ಸಿಕ್ಸರ್) ಸಿಡಿಸಿದ್ದರು. 12.2 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 138 ರನ್ ಗಳಿಸಿದ್ದಾಗ ಕ್ರೀಸ್‍ಗೆ ಆಗಮಿಸಿದ ಕೊಹ್ಲಿ ಆರಂಭದಿಂದಲೇ ಬಿರುಸಿನ ಆಟಕ್ಕೆ ಇಳಿದ ಪರಿಣಾಮ ಭಾರತ 200 ರನ್ ಗಳ ಗಡಿಯನ್ನು ದಾಟಿತ್ತು.

    ರಾಹುಲ್ ಮತ್ತು ಕೊಹ್ಲಿ ಮೂರನೇ ವಿಕೆಟಿಗೆ 45 ಎಸೆತಗಳಲ್ಲಿ 95 ರನ್ ಚಚ್ಚಿದ್ದರು. ಇದರಲ್ಲಿ ಕೊಹ್ಲಿ 27 ಎಸೆತಗಳಲ್ಲಿ 64 ರನ್ ಹೊಡೆದರೆ ರಾಹುಲ್ 18 ಎಸೆತಗಳಲ್ಲಿ 27 ರನ್ ಹೊಡೆದಿದ್ದರು.

    ಕೊಹ್ಲಿ 21 ಎಸೆತಗಳಲ್ಲಿ ಅರ್ಧಶತಕ ಹೊಡೆದ ಕೊಹ್ಲಿ ನಂತರದ 9 ಎಸೆತಗಳಲ್ಲಿ 20 ರನ್ ಬಾರಿಸಿದ್ದರು. ನಾಯಕ ಪೊಲಾರ್ಡ್ ಎಸೆದ ಇನ್ನಿಂಗ್ಸ್ ನಲ್ಲಿ 19ನೇ ಓವರ್ ನಲ್ಲಿ 27 ರನ್ ಬಂದಿತ್ತು. ಕೊಹ್ಲಿ ಮೂರು ಸಿಕ್ಸ್, ಒಂದು ಬೌಂಡರಿ, ಒಂದು ಒಂಟಿ ರನ್ ಓಡಿದ್ದರು.

    ಮೊದಲ ಪಂದ್ಯದಲ್ಲಿ 94 ರನ್( 50 ಎಸೆತ, 6 ಬೌಂಡರಿ, 6 ಸಿಕ್ಸರ್) ಎರಡನೇ ಪಂದ್ಯದಲ್ಲಿ 19 ರನ್(17 ಎಸೆತ, 2 ಬೌಂಡರಿ) ಹೊಡೆದ ಕೊಹ್ಲಿ ಅರ್ಹವಾಗಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

  • ಮೇಕಪ್ ಆರ್ಟಿಸ್ಟ್ ನಿಧನ – ಕಣ್ಣೀರಿಟ್ಟ ಅನುಷ್ಕಾ ಶರ್ಮಾ

    ಮೇಕಪ್ ಆರ್ಟಿಸ್ಟ್ ನಿಧನ – ಕಣ್ಣೀರಿಟ್ಟ ಅನುಷ್ಕಾ ಶರ್ಮಾ

    ಮುಂಬೈ: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ ಮೇಕಪ್ ಆರ್ಟಿಸ್ಟ್ ನಿಧನರಾದ ಹಿನ್ನೆಲೆಯಲ್ಲಿ ತನ್ನ ಇನ್‍ಸ್ಟಾದಲ್ಲಿ ಭಾವನಾತ್ಮಕ ಪೋಸ್ಟ್ ಬರೆದುಕೊಂಡಿದ್ದಾರೆ.

    ಅನುಷ್ಕಾ ಅವರ ಮೇಕಪ್ ಆರ್ಟಿಸ್ಟ್ ಸುಭಾಷ್ ವಂಗಲ್ ಅಲಿಯಾಸ್ ಸುಬ್ಬು ನಿಧನರಾಗಿದ್ದಾರೆ. ತನ್ನ ಮೇಕಪ್ ಆರ್ಟಿಸ್ಟ್ ನಿಧನದಿಂದ ಅನುಷ್ಕಾ ತುಂಬಾ ದುಃಖಗೊಂಡಿದ್ದಾರೆ. ಅಲ್ಲದೆ ತನ್ನ ಇನ್‍ಸ್ಟಾದಲ್ಲಿ ಸುಭಾಶ್ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

    ಪೋಸ್ಟ್ ನಲ್ಲಿ ಏನಿದೆ?
    ಅವರು ತುಂಬಾ ಕರುಣಾಮಯಿ, ಸರಳ ಹಾಗೂ ಅದ್ಭುತ ವ್ಯಕ್ತಿ. ನಾನು ಅವರಿಗೆ ಯಾವಾಗಲೂ ಪ್ರೀತಿಯಿಂದ ಮಾಸ್ಟರ್ ಎಂದು ಕರೆಯುತ್ತಿದೆ. ಅವರು ದೇಶದ ಅತ್ಯಂತ ಪ್ರೀತಿಯ ಹಾಗೂ ಗೌರವಾನ್ವಿತ ಕಲಾವಿದ. ಸುಭಾಶ್ ತಮ್ಮ ಟ್ಯಾಲೆಂಟ್‍ನಿಂದ ನನಗೆ ಯಾವಾಗಲೂ ಸುಂದರವಾಗಿ ಕಾಣಿಸಲು ಸಹಾಯ ಮಾಡುತ್ತಿದ್ದರು. ಅವರ ಈ ಅದ್ಭುತವಾದ ಕೆಲಸ ಹಾಗೂ ಟ್ಯಾಲೆಂಟ್ ಅನ್ನು ನಾನು ಯಾವಾಗಲೂ ನೆನಪು ಮಾಡಕೊಳ್ಳುತ್ತೇನೆ. ಇಂದು ಒಂದು ಒಳ್ಳೆಯ ಮಗ, ಸಹೋದರ ಹಾಗೂ ಪವಿತ್ರ ಆತ್ಮ ನಮ್ಮನ್ನು ಬಿಟ್ಟು ಹೋಗಿದೆ. ನಿನ್ನ ಆತ್ಮಕ್ಕೆ ದೇವರು ಶಾಂತಿ ನೀಡಲಿ ಸುಬ್ಬು ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

    ಕೊನೆಯದಾಗಿ ಅನುಷ್ಕಾ, ಬಾಲಿವುಡ್ ಬಾದ್‍ಶಾ ಶಾರೂಕ್ ಖಾನ್ ಅವರ ಜೊತೆ ‘ಝೀರೋ’ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ನಟಿ ಕತ್ರಿನಾ ಕೈಫ್ ಕೂಡ ಅಭಿನಯಿಸಿದ್ದು, ನಿರ್ದೇಶಕ ಆನಂದ್ ಎಲ್ ರಾಯ್ ನಿರ್ದೇಶನ ಮಾಡಿದ್ದರು. ಇದಾದ ಬಳಿಕ ಅನುಷ್ಕಾ ಯಾವುದೇ ಚಿತ್ರದಲ್ಲಿ ಕಾಣಿಸಿಕೊಂಡಿಲ್ಲ.

  • ಹಾಟಿ ಜೊತೆಗೆ ಮೂವೀ ನೋಡ್ದೆ: ವಿರಾಟ್

    ಹಾಟಿ ಜೊತೆಗೆ ಮೂವೀ ನೋಡ್ದೆ: ವಿರಾಟ್

    ನವದೆಹಲಿ: ಬಾಂಗ್ಲಾದೇಶದ ಟೆಸ್ಟ್ ಸರಣಿಯಲ್ಲಿ ಭರ್ಜರಿ ಗೆಲವು ಸಾಧಿಸಿದ ಬಳಿಕ ಟೀಂ ಇಂಡಿಯಾ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿ ರಿಲ್ಯಾಕ್ಸ್ ಮೂಡ್‍ಗೆ ಜಾರಿದ್ದಾರೆ.

    ವಿರಾಟ್ ಕೊಹ್ಲಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪತ್ನಿ ಅನುಷ್ಕಾ ಶರ್ಮಾ ಜೊತೆಗೆ ಇರುವ ಫೋಟೋ ಹಂಚಿಕೊಂಡು, ನಿನ್ನೆ ರಾತ್ರಿ ಈ ಹಾಟಿ ಜೊತೆಗೆ ಮೂವೀಗೆ ಹೋಗಿದ್ದೆ ಎಂದು ಬರೆದುಕೊಂಡಿದ್ದಾರೆ.

    ಬಾಂಗ್ಲಾದೇಶದ ವಿರುದ್ಧದ ಮೂರು ಪಂದ್ಯಗಳ ಟಿ-20 ಸರಣಿ ವೇಳೆ ವಿಶ್ರಾಂತಿ ಪಡೆದಿದ್ದ ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾ ಜೊತೆಗೆ ಜಾಲಿ ಟ್ರಿಪ್ ಹಾಗೂ ಟ್ರೆಕ್ಕಿಂಗ್ ಕೈಗೊಂಡಿದ್ದರು. ಬಳಿಕ ಇಂದೋರ್‍ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ್ದರು. ಈ ವೇಳೆ ವಿರಾಟ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿಸಿದ್ದರು. ಆದರೆ ಪಿಂಕ್ ಬಾಲ್ ಟೆಸ್ಟ್‍ನಲ್ಲಿ ಬಾಂಗ್ಲಾ ಬೌಲರ್ ಗಳನ್ನು ಭರ್ಜರಿ ಕಾಡಿ, ತಂಡದ ಮೊತ್ತವನ್ನು ಏರಿಸಿದರು. ಈ ವೇಳೆ ಕೊಹ್ಲಿ 136 ರನ್ ಗಳಿಸಿ ಔಟಾಗಿದ್ದರು.

    ವಿರಾಟ್ ಹೆಚ್ಚು ಟೆಸ್ಟ್ ಗೆದ್ದ ಐದನೇ ನಾಯಕ:
    ಆಸ್ಟ್ರೇಲಿಯಾದ ಆಲನ್ ಬಾರ್ಡರ್ ಅವರನ್ನು ಹಿಂದಿಕ್ಕಿ ಕೊಹ್ಲಿ ವಿಶ್ವದ ಐದನೇ ಅತ್ಯಂತ ಯಶಸ್ವಿ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೊಹ್ಲಿ ನಾಯಕತ್ವದಲ್ಲಿ ಭಾರತವು 53 ಟೆಸ್ಟ್ ಪಂದ್ಯಗಳಲ್ಲಿ 33 ಪಂದ್ಯಗಳನ್ನು ಗೆದ್ದಿದೆ. ಬಾರ್ಡರ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ 93 ಟೆಸ್ಟ್ ಪಂದ್ಯಗಳಲ್ಲಿ 32 ಗೆದ್ದಿತ್ತು. ಈ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ 53 ಟೆಸ್ಟ್ ಗೆದ್ದು, ಅಗ್ರಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಮಾಜಿ ನಾಯಕ ರಿಕ್ಕಿ ಪಾಂಟಿಂಗ್ 48 ಪಂದ್ಯ ಜಯಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿ ಸ್ಟೀವ್ ವಾ ಇದ್ದಾರೆ. ಅವರ ನಾಯಕತ್ವದಲ್ಲಿ 41 ಪಂದ್ಯಗಳನ್ನು ಗೆದ್ದಿದ್ದರೆ, ವೆಸ್ಟ್ ಇಂಡೀಸ್‍ನ ಕ್ಲೈವ್ ಲಾಯ್ಡ್ ನಾಯಕನಾಗಿ 36 ಪಂದ್ಯಗಳನ್ನು ಗೆದ್ದಿದ್ದಾರೆ.

    ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನ ಈವರೆಗಿನ ಎಲ್ಲಾ 7 ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತ 360 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. 116 ಅಂಕಗಳೊಂದಿಗೆ ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದ್ದರೆ ನ್ಯೂಜಿಲೆಂಡ್ 60 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

  • ಪತ್ನಿ ಜೊತೆ ವಿರಾಟ್ ಜಾಲಿ ಟ್ರಿಪ್- ಹಳ್ಳಿಯ ಪುಟ್ಟ ಮನೆಯನ್ನ ಪರಿಚಯಿಸಿದ ವಿರುಷ್ಕಾ

    ಪತ್ನಿ ಜೊತೆ ವಿರಾಟ್ ಜಾಲಿ ಟ್ರಿಪ್- ಹಳ್ಳಿಯ ಪುಟ್ಟ ಮನೆಯನ್ನ ಪರಿಚಯಿಸಿದ ವಿರುಷ್ಕಾ

    -ಅದ್ಭುತ ಕ್ಷಣ ಹಂಚಿಕೊಂಡ ಅನುಷ್ಕಾ

    ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಜೊತೆಗೆ ಭೂತಾನ್‌ನಲ್ಲಿ ರಜಾದಿನ ಕಳೆಯುತ್ತಿದ್ದಾರೆ.

    ವಿರಾಟ್ ಕೊಹ್ಲಿ ತಮ್ಮ 31ನೇ ಹುಟ್ಟುಹಬ್ಬವನ್ನು ಮಂಗಳವಾರ ಆಚರಿಸಿಕೊಳ್ಳಲಿದ್ದಾರೆ. ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ವಿರಾಟ್ ಹಾಗೂ ಅನುಷ್ಕಾ ದಂಪತಿ ಜಾಲಿ ಟ್ರಿಪ್ ಮೂಡ್‌ನಲ್ಲಿದ್ದಾರೆ. ಅವರ ಪ್ರವಾಸದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಇದನ್ನೂ ಓದಿ: ದುರ್ಬಲರಂತೆ ಬಂದರೂ ಕೋಚ್ ಉತ್ತಮ ತರಬೇತಿ ನೀಡಿದ್ರು- ಮುಷ್ಫಿಕರ್ ರಹೀಮ್

    ಅನುಷ್ಕಾ ಶರ್ಮಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲ ಅಭಿಮಾನಿಗಳ ಜೊತೆಗೆ ಬಾಲ್ಯದ ನೆನಪುಗಳನ್ನು ಹಾಗೂ ಪರ್ವತಗಳಲ್ಲಿ ಪಾದಯಾತ್ರೆ ಮಾಡುವ ದೃಶ್ಯವನ್ನು ಅನುಷ್ಕಾ ಹಂಚಿಕೊಂಡಿದ್ದಾರೆ. ಆದರೆ ವಿರಾಟ್ ಕೊಹ್ಲಿ ಮಾತ್ರ ಯಾವುದೇ ಫೋಟೋ ಹಾಗೂ ವಿಡಿಯೋವನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಂಡಿಲ್ಲ. ಇದನ್ನೂ ಓದಿ: ಕ್ಯಾಚ್ ಡ್ರಾಪ್, ಕೊನೆಯಲ್ಲಿ ಸತತ 4‌ ಬೌಂಡರಿ – ಗೆದ್ದು ಇತಿಹಾಸ ನಿರ್ಮಿಸಿದ ಬಾಂಗ್ಲಾ

    ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪ್ರವಾಸದ ಅನುಭವನ್ನು ಹಂಚಿಕೊಂಡಿರುವ ಅನುಷ್ಕಾ ಶರ್ಮಾ, ಸೋಮಾವರ 8.5 ಕಿ.ಮೀ ಚಾರಣq ಕೈಗೊಂಡಿದ್ದೆವು. ಈ ಸಮಯದಲ್ಲಿ ಪರ್ವತದ ಮೇಲೆ ಒಂದು ಸಣ್ಣ ಹಳ್ಳಿಗೆ ಬಂದು ತಲುಪಿದಾಗ 4 ತಿಂಗಳ ಕರುವನ್ನು ಕಂಡು ಅದಕ್ಕೆ ಆಹಾರ ಹಾಕಲು ನಿಂತಿದ್ವಿ. ಕರುವಿಗೆ ಆಹಾರ ಹಾಕುತ್ತಿದ್ದ ನಮ್ಮನ್ನು ಗಮನಿಸಿದ ಮನೆಯ ಮಾಲೀಕರು ನಾವು ದಣಿದಿದ್ದೇವೆ ಎಂದು ತಿಳಿದು, ಒಂದು ಕಪ್ ಚಹಾವನ್ನು ಬಯಸುತ್ತೀರಾ ಎಂದು ಕೇಳಿದರು. ಆದ್ದರಿಂದ ನಾವು ಈ ಸುಂದರ ಮತ್ತು ಬೆಚ್ಚಗಿನ ಕುಟುಂಬದ ಮನೆಗೆ ಹೋದೆವು. ನಾವು ಯಾರೆಂದು ಮನೆಯಲ್ಲಿದ್ದವರು ಸಂಪೂರ್ಣವಾಗಿ ತಿಳಿದಿರಲಿಲ್ಲ. ಆದರೂ ನಮ್ಮನ್ನು ಪ್ರೀತಿಯಿಂದ ಕಂಡರು ಎಂದು ಬರೆದುಕೊಂಡಿದ್ದಾರೆ.

    https://www.instagram.com/p/B4c2AK4J0lV/

    2018ರ ಅಕ್ಟೋಬರ್ ನಿಂದ ವಿರಾಟ್ ಕೊಹ್ಲಿ ವಿಶ್ರಾಂತಿ ಇಲ್ಲದೇ ಆಡಿದ್ದರು. ಟೀಂ ಇಂಡಿಯಾ ಆಡಿರುವ 56 ಪಂದ್ಯಗಳಲ್ಲಿ 48 ಪಂದ್ಯಗಳನ್ನು ಆಡಿದ್ದಾರೆ. ಆದ್ದರಿಂದ ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಕೊಹ್ಲಿಗೆ ವಿಶ್ರಾಂತಿ ನೀಡಿ, ಯುವ ಆಟಗಾರರಿಗೆ ಅವಕಾಶ ನೀಡಲಾಗಿದೆ.

    ಇಂದೋರ್ ನಲ್ಲಿ ನವೆಂಬರ್ 14ರಿಂದ ಆರಂಭವಾಗಲಿರುವ ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಕೊಹ್ಲಿ ಕ್ರಿಕೆಟ್ ಮೈದಾನಕ್ಕೆ ಮರಳಲಿದ್ದಾರೆ.

    https://www.instagram.com/p/B4UguwypnOX/

  • ‘ನಾನು ಬಿಸಿಸಿಐ ಅಧ್ಯಕ್ಷ, ರೆಗ್ಯುಲರ್ ಕ್ಯಾಪ್ಟನ್ ಅಲ್ಲ’- ರೋಹಿತ್ ಗರಂ

    ‘ನಾನು ಬಿಸಿಸಿಐ ಅಧ್ಯಕ್ಷ, ರೆಗ್ಯುಲರ್ ಕ್ಯಾಪ್ಟನ್ ಅಲ್ಲ’- ರೋಹಿತ್ ಗರಂ

    ನವದೆಹಲಿ: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯ ನಾಯಕತ್ವ ವಹಿಸಿಕೊಂಡಿರುವ ರೋಹಿತ್ ಶರ್ಮಾ ಮಾಧ್ಯಮಗಳ ವಿರುದ್ಧ ಗರಂ ಆಗಿದ್ದು, ತಾನು ಬಿಸಿಸಿಐ ಅಧ್ಯಕ್ಷ ಅಥವಾ ತಂಡದ ರೆಗ್ಯುಲರ್ ನಾಯಕನಲ್ಲ ಎಂದು ಖಾರವಾಗಿ ಉತ್ತರಿಸಿದ್ದಾರೆ.

    ಪಂದ್ಯದ ಕುರಿತು ಮಾಧ್ಯಮಗಳ ಎದುರು ಮಾಹಿತಿ ನೀಡಲು ಆಗಮಿಸಿದ್ದ ರೋಹಿತ್ ಅವರಿಗೆ ಸುದ್ದಿಗೋಷ್ಠಿಯ ವೇಳೆ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ವಿರುದ್ಧ ಕೇಳಿ ಬಂದ ವಿಮರ್ಶೆಗಳ ಕುರಿತ ಪ್ರಶ್ನೆ ಎದುರಾಗಿದ್ದು, ಈ ಪ್ರಶ್ನೆ ಎದುರಾಗುತ್ತಿದಂತೆ ರೋಹಿತ್ ಗರಂ ಆಗಿ ಮಾತನಾಡಿದರು.

    ಮೊದಲು ಅನುಷ್ಕಾ ಶರ್ಮಾರ ಅವರ ವಿಮರ್ಶೆ ಮಾಡಿ ಹೇಳಿಕೆ ನೀಡಿದ್ದ ಟೀಂ ಇಂಡಿಯಾ ಮಾಜಿ ವಿಕೆಟ್ ಕೀಪರ್ ಫಾರೂಖ್ ಇಂಜಿನಿಯರ್, ಅನುಷ್ಕಾ ಶರ್ಮಾ ಖಡಕ್ ಉತ್ತರ ನೀಡುತ್ತಿದಂತೆ ಕ್ಷಮೆ ಕೋರಿದ್ದರು. ಈ ಬೆಳವಣಿಗೆಗಳ ಬಗ್ಗೆ ರೋಹಿತ್ ರನ್ನು ಪ್ರಶ್ನಿಸಲಾಗಿತ್ತು. ಇದರಿಂದ ಅಸಮಾಧಾನಗೊಂಡ ರೋಹಿತ್, ನಾನು ಬಿಸಿಸಿಐ ಅಧ್ಯಕ್ಷ, ತಂಡದ ರೆಗ್ಯುಲರ್ ಕ್ಯಾಪ್ಟನ್ ಕೂಡ ಅಲ್ಲ. ಈ ವಿಷಯದ ಬಗ್ಗೆ ನಾನು ಮಾತನಾಡುವುದು ಏನಿದೆ? ಈ ಬಗ್ಗೆ ನೀವು ನೇರವಾಗಿ ಫಾರೂಖ್ ಅವರನ್ನೇ ಪ್ರಶ್ನೆ ಮಾಡಿ. ಅವರು ಏನು ಹೇಳಿದ್ದಾರೆ ಎಂಬುವುದು ತಿಳಿಯುತ್ತದೆ. ನಾನು ಈ ವಿಚಾರದಲ್ಲಿ ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದರು. ಇದನ್ನು ಓದಿ: ಅನುಷ್ಕಾ ಶರ್ಮಾ ಖಡಕ್ ಪ್ರತಿಕ್ರಿಯೆ ಬೆನ್ನಲ್ಲೇ ಕ್ಷಮೆ ಕೇಳಿದ ಫಾರೂಖ್

    ವಿಶ್ವ ದಾಖಲೆ ಸನಿಹ: ಇತ್ತ ಟೂರ್ನಿಯಲ್ಲಿ ನಾಯಕತ್ವ ವಹಿಸಿಕೊಂಡಿರುವ ರೋಹಿತ್ ಶರ್ಮಾ ವಿಶ್ವದಾಖಲೆ ನಿರ್ಮಿಸುವ ಸನಿಹದಲ್ಲಿದ್ದು, ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಸಿಡಿಸಿದ ಆಟಗಾರ ಎನಿಸಿಕೊಳ್ಳಲು ರೋಹಿತ್‌ಗೆ 8 ರನ್ ಗಳ ಅಗತ್ಯವಿದೆ. ಸದ್ಯ 2,450 ರನ್ ಗಳಿರುವ ಕೊಹ್ಲಿ ನಂ.1 ಪಟ್ಟದಲ್ಲಿದ್ದು, ರೋಹಿತ್ 2,443 ರನ್ ಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ಬಾಂಗ್ಲಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲೇ ರೋಹಿತ್, ಕೊಹ್ಲಿ ದಾಖಲೆಯನ್ನು ಮುರಿಯುವ ಅವಕಾಶವನ್ನು ಪಡೆದಿದ್ದಾರೆ.

  • ಅನುಷ್ಕಾ ಶರ್ಮಾ ಖಡಕ್ ಪ್ರತಿಕ್ರಿಯೆ ಬೆನ್ನಲ್ಲೇ ಕ್ಷಮೆ ಕೇಳಿದ ಫಾರೂಖ್

    ಅನುಷ್ಕಾ ಶರ್ಮಾ ಖಡಕ್ ಪ್ರತಿಕ್ರಿಯೆ ಬೆನ್ನಲ್ಲೇ ಕ್ಷಮೆ ಕೇಳಿದ ಫಾರೂಖ್

    ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ, ನಟಿ ಅನುಷ್ಕಾ ಶರ್ಮಾ ಖಡಕ್ ಪ್ರತಿಕ್ರಿಯೆ ಬೆನ್ನಲ್ಲೇ ಭಾರತ ತಂಡದ ಮಾಜಿ ಕ್ರಿಕೆಟರ್ ಫಾರೂಖ್ ಇಂಜಿನಿಯರ್ ತಮ್ಮ ವಿವಾದಾತ್ಮಕ ಹೇಳಿಕೆಗೆ ಕ್ಷಮೆ ಕೋರಿದ್ದಾರೆ.

    ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಆಯ್ಕೆ ಸಮಿತಿ ಸದಸ್ಯ ಅನುಷ್ಕಾ ಶರ್ಮಾ ಅವರಿಗೆ ಟೀ ತಂದುಕೊಟ್ಟಿದ್ದು ನಿಜ. ಆದರೆ ಅನುಷ್ಕಾರನ್ನು ನೋಯಿಸಲು ಉದ್ದೇಶ ಪೂರ್ವಕವಾಗಿ ಹಾಗೆ ಮಾತನಾಡಿಲ್ಲ ಎಂದು ಫಾರೂಖ್ ಇಂಜಿನಿಯರ್ ಯೂಟರ್ನ್ ಹೊಡೆದಿದ್ದಾರೆ.

    ಅನುಷ್ಕಾ ಒಬ್ಬ ಪ್ರೀತಿಯ ಹುಡುಗಿ. ಸ್ಫೋಟಕ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಉತ್ತಮ ನಾಯಕ ಹಾಗೂ ರವಿಶಾಸ್ತ್ರಿ ಕೂಡ ಅತ್ಯುತ್ತಮ ಕೋಚ್ ಆಗಿದ್ದಾರೆ. ಈ ಪ್ರಕರಣವನ್ನು ಇಲ್ಲೆ ಬಿಟ್ಟು ಬಿಡೋಣ ಎಂದು ಫಾರೂಖ್ ಮನವಿ ಮಾಡಿಕೊಂಡಿದ್ದಾರೆ.

    ಆಗಿದ್ದೇನು?:
    ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಫಾರೂಖ್ ಅವರು, ಭಾರತ ಕ್ರಿಕೆಟ್ ಮಂಡಳಿಯ ಆಯ್ಕೆ ಸಮಿತಿ ವಿರುದ್ಧ ಹರಿಹಾಯ್ದಿದ್ದರು. ತಂಡದ ಆಯ್ಕೆ ಸಮಿತಿಯ ಅಧ್ಯಕ್ಷ ಎಂಎಸ್‍ಕೆ ಪ್ರಸಾದ್ ನೇತೃತ್ವದ ಸಮಿತಿಯನ್ನು `ಮಿಕ್ಕಿ ಮೌಸ್ ಸೆಲೆಕ್ಷನ್ ಕಮಿಟಿ` ಎಂದು ಹೀಯಾಳಿಸಿದ್ದರು. ಇದೇ ವೇಳೆ ವಿವಾತಾತ್ಮಕ ಹೇಳಿಕೆಯೊಂದನ್ನು ನೀಡಿ ಭಾರೀ ಟೀಕೆಗೆ ಗುರಿಯಾಗಿದ್ದರು.

    ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರಿಗೆ 2019ರ ವಿಶ್ವಕಪ್ ವೇಳೆ ಆಯ್ಕೆ ಸಮಿತಿಯ ಸದಸ್ಯರೊಬ್ಬರು ಟೀ ಸರ್ವ್ ಮಾಡಿದ್ದನ್ನು ನಾನು ನೋಡಿದ್ದೆ. ಸೂಟ್ ಧರಿಸಿದ್ದ ಟೀ ತಂದುಕೊಟ್ಟ ವ್ಯಕ್ತಿ ಯಾರೆಂದು ಕೇಳಿದ್ದೆ. ಆಗ ಆ ವ್ಯಕ್ತಿ ಆಯ್ಕೆ ಸಮಿತಿಯಲ್ಲಿ ಇರುವ ಓರ್ವ ವ್ಯಕ್ತಿ ಎನ್ನುವ ವಿಚಾರ ತಿಳಿಯಿತು ಎಂದು ಹೇಳಿದ್ದರು.

    ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯಲ್ಲಿ ಟೀಂ ಇಂಡಿಯಾ ಮಾಜಿ ಬ್ಯಾಟ್ಸ್‌ಮನ್ ದಿಲೀಪ್ ವೆಂಗ್‍ಸರ್ಕಾರ್ ಅಂತವರು ಇರಬೇಕು. ಆಗ ಕ್ರೀಡಾ ಸುಧಾರಣೆಯನ್ನು ತರಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದರು.

    ಫಾರೂಖ್ ಇಂಜಿನಿಯರ್ ಹೇಳಿಕೆಯಿಂದ ಅನುಷ್ಕಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಗುಡುಗಿದ್ದರು. ಈ ಕುರಿತು ಟ್ವೀಟ್ ಮಾಡಿದ್ದ ಅನುಷ್ಕಾ, ಸುಳ್ಳು ಸುದ್ದಿಗಳಿಗೆ ಪ್ರತಿಕ್ರಿಯೆ ನೀಡದೆ ಯಾವಾಗಲೂ ಮೌನವಾಗಿರುವುದನ್ನು ಕಳೆದ 11 ವರ್ಷಗಳಿಂದ ನಾನು ರೂಢಿಸಿಕೊಂಡು ಬಂದಿದ್ದೇನೆ. ನಾನು ಮೌನ ನನ್ನ ದೌರ್ಬಲ್ಯವಲ್ಲ. ಆದರೆ ಈ ಬಾರಿ ನನ್ನ ಮೇಲೆ ಗಂಭೀರ ಆರೋಪ ಬಂದಿದೆ. ಇದರಿಂದಾಗಿ ಇಂತಹ ಸುದ್ದಿಗಳು ನನಗೆ ಮುಜುಗುರ ತರುವಂತೆ ಮಾಡುತ್ತಿವೆ. ಇದನ್ನು ಇವತ್ತಿಗೆ ಕೊನೆಗೊಳಿಸಬೇಕಿದೆ ಎಂದು ಪತ್ರದ ಮೂಲಕ ತಿಳಿಸಿದ್ದರು.

    ನೀವು ಸಾಮಾನ್ಯವಾಗಿ ಹರುಡುವ ಸುದ್ದಿಗಳು ಅಪಾಯಕಾರಿ ಮತ್ತು ದುರುದ್ದೇಶಪೂರಿತವಾಗಿರುತ್ತದೆ ಎಂಬುದು ಗೊತ್ತಿರಲಿ. ಏಕೆಂದರೆ ಇನ್ನೊಬ್ಬರ ಪತ್ನಿಯಾಗಿರುವವಳು ಕೂಡ ಸ್ವತಂತ್ರ ಮಹಿಳೆಯಾಗಿರುತ್ತಾಳೆ ಎನ್ನುವುದು ತಿಳಿದಿರಲಿ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದರು.

    ವಿಶ್ವಕಪ್ ಟೂರ್ನಿಯ ಪಂದ್ಯವೊಂದರಲ್ಲಿ ಆಯ್ಕೆದಾರರು ತನಗೆ ಚಹಾ ವಿತರಿಸಿದ್ದರು ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಅನುಷ್ಕಾ, ಸ್ವಂತ ಖರ್ಚಿನಲ್ಲಿ ಪಂದ್ಯ ವೀಕ್ಷಿಸಲು ಹೋಗಿದ್ದೆ. ಫ್ಯಾಮಿಲಿ ಬಾಕ್ಸ್ ನಲ್ಲಿ ಕುಳಿತು ಪಂದ್ಯವನ್ನು ವೀಕ್ಷಿಸಿದ್ದೇನೆ. ನಿಮಗೆ ದಾಖಲೆ ಬೇಕಿದ್ದರೆ ಕೊಡುತ್ತೇನೆ ಎಂದು ಗುಡುಗಿದ್ದರು. ಅಷ್ಟೇ ಅಲ್ಲದೇ ಕೊನೆಯಲ್ಲಿ ನಾನು ಚಹಾ ಕುಡಿಯುವುದಿಲ್ಲ, ಕಾಫಿ ಕುಡಿಯುತ್ತೇನೆ ಎನ್ನುವ ವಿಚಾರ ನಿಮಗೆ ತಿಳಿದಿರಲಿ ಎಂದು ಫಾರೂಖ್ ಇಂಜಿನಿಯರ್ ಅವರಿಗೆ ಟಾಂಗ್ ನೀಡಿದ್ದರು.

  • ಓದಿದ್ದು ಎಂಜಿನಿಯರಿಂಗ್ ಆಗಿದ್ದು ಖ್ಯಾತ ಮದ್ವೆ ಫೋಟೋಗ್ರಾಫರ್

    ಓದಿದ್ದು ಎಂಜಿನಿಯರಿಂಗ್ ಆಗಿದ್ದು ಖ್ಯಾತ ಮದ್ವೆ ಫೋಟೋಗ್ರಾಫರ್

    – ವಿರುಷ್ಕಾ ಜೋಡಿಯ ಮದ್ವೆ ಫೋಟೋಗ್ರಾಫರ್ ಕಥೆ
    – ಹವ್ಯಾಸವನ್ನೇ ವೃತ್ತಿಯನ್ನಾಗಿಸಿದ ‘ಕ್ಲಿಕ್ಕ’ರ್
    – ವೃತ್ತಿಯಿಂದಾಗಿ ವಿಶ್ವವನ್ನೇ ಸುತ್ತುವ ಭಾಗ್ಯ

    ಮುಂಬೈ: ವೃತ್ತಿ ಜೊತೆ ಬೆಳೆಸಿಕೊಂಡ ಹವ್ಯಾಸವೇ ಕೆಲವೊಮ್ಮೆ ವೃತ್ತಿಯಾಗಿಬಿಡುತ್ತದೆ. ಇದಕ್ಕೆ ಉತ್ತಮ ಉದಾಹರಣೆ ವಿರುಷ್ಕಾ ಮದುವೆಯ ಪೋಟೋಗ್ರಾಫರ್. ಅವರು ಓದಿದ್ದು ಎಂಜಿನಿಯರ್ ಪದವಿ. ಆದರೆ ಆಗಿದ್ದು ಮದುವೆ ಫೋಟೋಗ್ರಾಫರ್.

    2017 ಡಿ.11 ರಂದು ಟೀಂ ಇಂಡಿಯಾ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾರ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಖ್ಯಾತ ಜೋಡಿಯ ಈ ಫೋಟೋಗಳಿಗೆ ಅಭಿಮಾನಿಗಳಿಂದ ಭಾರೀ ಪ್ರಶಂಸೆ ವ್ಯಕ್ತವಾಗಿತ್ತು. ಈ ಫೋಟೋಗಳನ್ನು ಸೆರೆಹಿಡಿದ ಫೋಟೋಗ್ರಾಫರ್ ಜೋಸೆಫ್ ರಾಧಿಕ್ ತಮ್ಮ ಕೆಲಸದ ಕುರಿತು ಮಾತನಾಡಿದ್ದಾರೆ.

    https://www.instagram.com/p/BckS2WtA3jF/?utm_source=ig_embed&utm_campaign=dlfix

    ಜೋಸೆಫ್ ರಾಧಿಕ್ ಅವರು ವಿರುಷ್ಕಾ ಜೋಡಿಯ ಮದುವೆಯ ಸವಿ ನೆನಪುಗಳನ್ನು ಸೆರೆ ಹಿಡಿದಿದ್ದು, ತಮ್ಮ ಫೋಟೋಗಳು ವಿಶೇಷವಾಗಿರಲು ಹಾಗೂ ಅಷ್ಟು ಮೆಚ್ಚುಗೆ ಪಡೆಯಲು ಕಾರಣವೇನು ಎಂಬುವುದನ್ನು ರಿವೀಲ್ ಮಾಡಿದ್ದಾರೆ. ಎಂಜಿನಿಯರಿಂಗ್ ಪದವಿ ಪಡೆದಿರುವ ರಾಧಿಕ್ ನೆಚ್ಚಿನ ಫೋಟೋಗ್ರಾಫಿಯನ್ನು ವೃತ್ತಿಯಾಗಿಸಿಕೊಂಡಿದ್ದ ಕುರಿತು ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಪೋಸ್ಟ್ ನಲ್ಲಿ ಏನಿದೆ?
    ಕಾಲೇಜು ಸಮಯದಲ್ಲಿ ನಾನು ನನ್ನ 1 ಮೆಗಾಪಿಕ್ಸೆಲ್ ಕ್ಯಾಮೆರಾದಿಂದ ಕೇವಲ 3 ವಿಷಯಗಳ ಫೋಟೋಗಳನ್ನು ಮಾತ್ರ ತೆಗೆಯುತ್ತಿದ್ದೆ. ಸೂರ್ಯಾಸ್ತ, ಜೀವಿಗಳು ಹಾಗೂ ಹೂಗಳ ಫೋಟೋಗಳನ್ನು ಮಾತ್ರ ತೆಗೆಯುತ್ತಿದ್ದೆ. ಆದರೆ ಎಂದು ಇದನ್ನು ವೃತ್ತಿಯಾಗಿ ತೆಗೆದುಕೊಳ್ಳುತ್ತೇನೆ ಎಂದು ತಿಳಿದಿರಲಿಲ್ಲ. ಆದರೆ ನನ್ನ ಜೀವನದ ಟರ್ನಿಂಗ್ ಪಾಯಿಂಟ್ ಆಗಿದ್ದು, ಸಹೋದರಿಯ ಮದುವೆ ಕಾರ್ಯಕ್ರಮ. ಈ ವೇಳೆ ಭಾರತದಲ್ಲಿ ಮದುವೆ ಫೋಟೋಗ್ರಾಫಿ ತುಂಬಾ ದೂರ ಸಾಗಬೇಕಿದೆ ಎನ್ನಿಸಿತ್ತು. ನನ್ನ ಸಹೋದರಿ ಮದುವೆ ಫೋಟೋ ಮಾತ್ರವಲ್ಲದೇ ಗೆಳೆಯರ ಮದುವೆಯ ಫೋಟೋಗಳನ್ನು ನಾನು ತೆಗೆದಿದ್ದೆ. ಆ ಫೋಟೋಗಳಿಗೆ ಭಾರೀ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು.

    ನಾನು ಪ್ರತಿ ಜೋಡಿಯ ಫೋಟೋಗಳನ್ನು ತೆಗೆಯುವ ಸಂದರ್ಭದಲ್ಲಿ ಅದನ್ನು ಅವರ ಸ್ನೇಹಿತನೇ ತೆಗೆದಿದ್ದು ಎಂಬ ಭಾವನೆ ಅವರಿಗೆ ಮೂಡಲು ಬಯಸುತ್ತೇನೆ. ಫೋಟೋಗಳಲ್ಲಿ ನೈಜತೆ ಹಾಗೂ ಅನ್ಯೋನ್ಯತೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತೇನೆ.  ಇದುವೇ ನನ್ನ ಫೋಟೋಗಳು ಹೆಚ್ಚು ಇಷ್ಟವಾಗಲು ಸಹಾಯಕವಾಗಿದೆ. ವಿರುಷ್ಕಾರ ಮದುವೆಯಲ್ಲೂ ಪ್ರೀತಿಯ ನೈಜ ಅಂಶ ಕಾಣಸಿಗುತ್ತದೆ.

    https://www.instagram.com/p/BckS2N4gsql/?utm_source=ig_embed&utm_campaign=dlfix

    ನಾನು ಉತ್ತಮ ಶಿಕ್ಷಣವನ್ನು ಪಡೆದಿದ್ದ ಕುಟುಂಬದಿಂದ ಬಂದಿದ್ದು, ನನ್ನ ತಂದೆ-ತಾಯಿ ಇಬ್ಬರು ಉನ್ನತ ಶಿಕ್ಷಣವನ್ನು ಪಡೆದಿದ್ದಾರೆ. ಅವರು ತಮ್ಮ ಮಕ್ಕಳು ಉತ್ತಮ ಸಾಧನೆ ಮಾಡಲು ಬಯಸಿದ್ದರು. ಆದರೆ ಎಂದೂ ಮಕ್ಕಳ ಕ್ರಿಯೆಟಿವಿಟಿಯನ್ನು ತಡೆಯುವ ಯತ್ನ ಮಾಡಲಿಲ್ಲ. ನನ್ನ ಬಾಲ್ಯದಲ್ಲಿ ಚಿತ್ರಕಲೆಯಿಂದ ಪೈಲಟ್ ಆಗುವವರೆಗಿನ ಎಲ್ಲಾ ಯೋಚನೆಗಳನ್ನು ನಾನು ಮಾಡಿದ್ದೆ. ಆದರೆ ಯಾವುದೂ ನನಗೆ ಸರಿ ಎನಿಸಲಿಲ್ಲ. ಆ ವೇಳೆ ಫೋಟೋ ಜರ್ನಲಿಸ್ಟ್ ಆಗಿದ್ದ ಚಿಕ್ಕಪ್ಪ ಅವರು ಕಳುಹಿಸುತ್ತಿದ್ದ ಫೋಟೋಗಳು, ನ್ಯಾಷನಲ್ ಜಿಯೋಗ್ರಾಫಿಕ್ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದದ್ದು ನನ್ನನ್ನು ಆಕರ್ಷಿಸಿತ್ತು. ಇದುವೇ ನನಗೆ ಫೋಟೋಗ್ರಾಫರ್ ಆಗಲು ಪ್ರೇರಣೆ ಎನ್ನಬಹುದು. ಆ ಬಳಿಕ ಶಿಕ್ಷಣದಲ್ಲಿ ನಾನು ಇಷ್ಟಪಟ್ಟು ಎಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿದ್ದೆ.

    ಫೋಟೋಗ್ರಾಫಿ ನನ್ನ ಬಿಡುವಿನ ವೇಳೆಯಲ್ಲಿ ಹವ್ಯಾಸವಾಗಿ ಬೆಳೆದು ಬಂದಿತ್ತು. ಆದರೆ ನನ್ನ ಬಾಸ್ ಒಮ್ಮೆ ಮುಂದಿನ 5 ವರ್ಷದ ಯೋಜನೆ ಬಗ್ಗೆ ಪ್ರಶ್ನೆ ಮಾಡಿದ್ದರು. ಏಕೆಂದರೆ ಅದು ನನ್ನ ಮುಂದಿನ 40 ವರ್ಷ ನಾನು ಮಾಡಬೇಕಾಗಿದ್ದ ಕಾರ್ಯವಾಗಿತ್ತು. ಆದರೆ ನನ್ನ ಜೀವನಕ್ಕೆ ಟರ್ನಿಂಗ್ ಪಾಯಿಂಟ್ ಆಗಿದ್ದು, ನನ್ನ ಸಹೋದರಿಯ ಮದುವೆ. ಈ ವೇಳೆ ಫೋಟೋಗ್ರಾಫಿ ಮಾಡಲು ಸಾಮಾಜಿಕ ಜಾಲತಾಣದಲ್ಲಿ ನಾನು ಸರ್ಚ್ ಮಾಡಿದ್ದೆ. ಇದು ನನಗೆ ಹೊಸ ಪ್ರಪಂಚವನ್ನು ತೆರೆದಿಟ್ಟಿತ್ತು. ಅಲ್ಲದೇ ಭಾರತದಲ್ಲಿ ವೆಡ್ಡಿಂಗ್ ಫೋಟೋಗ್ರಾಫಿ ಬಗ್ಗೆಯೂ ತಿಳಿಸಿತ್ತು. ಮದುವೆಗೆ ಫೋಟೋಗ್ರಾಫರ್ ಬುಕ್ ಮಾಡಿದ್ದರು. ನನ್ನದೇ ಆದ ಕೆಲ ಫೋಟೋಗಳನ್ನು ತೆಗೆದುಕೊಂಡಿದ್ದೆ. ಈ ಫೋಟೋಗಳಿಗೆ ಹೆಚ್ಚು ಮೆಚ್ಚುಗೆ ಬಂದಿತ್ತು. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಬಳಿಕ ಹಲವರು ನನ್ನನ್ನು ಸಂಪರ್ಕಿಸಿದ್ದರು.

    https://www.facebook.com/humansofbombay/photos/a.253147214894263/1214501375425504/?type=3&theater

    ಆ ಬಳಿಕ ಕೆಲಸವನ್ನು ಬಿಟ್ಟು ಹಲವು ಪ್ರಾಜೆಕ್ಟ್ ಗಳಲ್ಲಿ ಕೆಲಸ ಮಾಡಿದ್ದೆ. ಕೆಲವೇ ಸಮಯದಲ್ಲಿ ಫೋಟೋಗ್ರಾಫಿ ನನ್ನ ವೃತ್ತಿಯಾಯಿತು. ಈ ವೇಳೆಯೇ ನನಗೆ ವಿರುಷ್ಕಾ ಅವರ ಮದುವೆ ಕಾರ್ಯಕ್ರಮ ಫೋಟೋ ತೆಗೆಯುವ ಅವಕಾಶ ಲಭಿಸಿತ್ತು. ವಿರುಷ್ಕಾರ ಮದುವೆ ಫೋಟೋಗಳಲ್ಲಿ ಅವರ ಪ್ರೀತಿಯ ನೈಜ ಅಂಶ ಕಂಡು ಬಂದಿದ್ದೇ ಎಲ್ಲರಿಗೂ ಇಷ್ಟವಾಗಲು ಕಾರಣವಾಯಿತು. ಇಂದು ನಾನು ವಿಶ್ವದ ಬೇರೆ ಬೇರೆ ಪ್ರದೇಶಗಳಿಗೆ ಪ್ರಯಾಣ ಬೆಳೆಸಿ ಅನುಭವಗಳನ್ನು ಪಡೆಯುವ ಮೂಲಕ ನನ್ನನ್ನು ನಾನು ಕಂಡುಕೊಳ್ಳುತ್ತಿದ್ದೇನೆ. ಈ ಸಮಯದಲ್ಲಿ ನನಗೆ ಅನ್ನಿಸಿದ್ದು ಇಷ್ಟೇ. ಜೀವನ ನಮಗೆ ಹೆಚ್ಚು ಅವಕಾಶಗಳನ್ನು ನೀಡುವುದಿಲ್ಲ. ಆದರೆ ಒಮ್ಮೆ ಆ ಅವಕಾಶ ಲಭಿಸಿದಾಗ ಅದನ್ನು ಪ್ರೀತಿಯಿಂದ ಬಾಚಿಕೊಳ್ಳಬೇಕು. ಈ ಪ್ರಯಾಣವನ್ನು ಯಾಕೆ ಪ್ರಾರಂಭಿಸಿದ್ದೀರಿ ಎಂಬುವುದನ್ನು ನೀವು ಎಂದಿಗೂ ಮರೆಯದಿದ್ದರೆ ಎಲ್ಲವನ್ನೂ ಮಾಡಬಹುದು.

  • ಬಹುದಿನಗಳ ಬಳಿಕ ಸಿನ್ಮಾ ಒಪ್ಪಿಕೊಂಡ ಕೊಹ್ಲಿ ಮಡದಿ

    ಬಹುದಿನಗಳ ಬಳಿಕ ಸಿನ್ಮಾ ಒಪ್ಪಿಕೊಂಡ ಕೊಹ್ಲಿ ಮಡದಿ

    ಮುಂಬೈ: ಝೀರೋ ಸಿನಿಮಾ ಬಳಿಕ ಕ್ರಿಕೆಟ್ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಡದಿ ಅನುಷ್ಕಾ ಶರ್ಮಾ ಚಿತ್ರವೊಂದಕ್ಕೆ ಸಹಿ ಹಾಕಿದ್ದಾರೆ. ರೋಹಿತ್ ಶರ್ಮಾ ಮತ್ತು ಫರ್ಹಾ ಖಾನ್ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬರಲಿದ್ದು, ಹೃತಿಕ್ ರೋಷನ್ ನಾಯಕ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ.

    ಮದುವೆ ಬಳಿಕ ಅನುಷ್ಕಾ ಶರ್ಮಾ ನಟನೆಯ ಸಿನಿಮಾಗಳು ಒಂದರ ನಂತರ ಒಂದರಂತೆ ಬಿಡುಗಡೆಗೊಂಡವು. 2018 ಡಿಸೆಂಬರ್ ನಲ್ಲಿ ತೆರೆಕಂಡ ಝೀರೋ ಚಿತ್ರದ ಬಳಿಕ ಅನುಷ್ಕಾ ಶರ್ಮಾ ಚಿತ್ರರಂಗದಿಂದ ದೂರ ಉಳಿದುಕೊಂಡು ಖಾಸಗಿ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ. ಸಾಂಸರಿಕ ಜೀವನದಲ್ಲಿ ಬ್ಯುಸಿಯಾಗಿರುವ ಅನುಷ್ಕಾ ಶರ್ಮಾ ಬಣ್ಣದ ಲೋಕದಿಂದ ಹಿಂದೆ ಸರಿಯಲಿದ್ದಾರೆ ಎಂಬ ಮಾತುಗಳು ಈ ಹಿಂದೆ ಬಲವಾಗಿ ಕೇಳಿ ಬಂದಿದ್ದವು.

    ಸಿನ್ಮಾದಿಂದ ದೂರ ಉಳಿಯುವ ಸುದ್ದಿಗೆ ಸಾಕ್ಷಿ ಎಂಬಂತೆ ಅನುಷ್ಕಾ ಹೇಳಿಕೆಯೊಂದು ಅಭಿಮಾನಿಗಳಿಗೆ ಅಚ್ಚರಿಯನ್ನು ನೀಡಿತ್ತು. ಖಾಸಗಿ ಸಂದರ್ಶನದಲ್ಲಿ ಹಲವು ಯಶಸ್ವಿ ಚಿತ್ರಗಳಲ್ಲಿ ನಟಿಸಿ, ನನ್ನದೇ ಆದ ಹೆಜ್ಜೆ ಗುರುತು ಮೂಡಿಸಿದ್ದೇನೆ. ಡಿಜಿಟಲ್ ವೇದಿಕೆಯಲ್ಲಿ ಏನಾದ್ರೂ ಮಾಡಬೇಕೆಂದು ಪ್ಲಾನ್ ಮಾಡಿಕೊಂಡಿದ್ದೇನೆ ಎಂದು ಅನುಷ್ಕಾ ಶರ್ಮಾ ಹೇಳಿದ್ದರು. ಅನುಷ್ಕಾ ಹೇಳಿಕೆ ಬೆನ್ನಲ್ಲೇ ಸಿನಿಮಾದಿಂದ ದೂರವಾಗುತ್ತಿದ್ದಾರೆ ಎಂಬ ಅಭಿಮಾನಿಗಳ ಊಹೆ ಬಲವಾಗಿತ್ತು. ಇದೀಗ ರೋಹಿತ್ ಶರ್ಮಾ ಮತ್ತು ಫರ್ಹಾ ಖಾನ್ ಜಂಟಿ ನಿರ್ಮಾಣದ ಚಿತ್ರಕ್ಕೆ ಸಹಿ ಹಾಕಿದ್ದಾರೆ ಎಂದು ವರದಿಯಾಗಿದೆ.

    ಹೃತಿಕ್ ರೋಷನ್ ನಟನೆ ಸಿನಿಮಾ ‘ವಾರ್’ ಸತತವಾಗಿ ಬಾಕ್ಸ್ ಆಫೀಸ್ ದೋಚುತ್ತಿದೆ. ಸಿನಿಮಾದಲ್ಲಿ ಹೃತಿಕ್ ಗೆ ಶಿಷ್ಯನಾಗಿ ಟೈಗರ್ ಶ್ರಾಫ್ ನಟಿಸಿದ್ದಾರೆ. ಸಿನಿಮಾದಲ್ಲಿ ಗುರು-ಶಿಷ್ಯನ ನಡುವೆ ಸಾಹಸಮಯ ದೃಶ್ಯಗಳು ನೋಡುಗರನ್ನು ಕುರ್ಚಿಯ ತುತ್ತ ತುದಿಗೆ ತಂದು ಕೂರಿಸುತ್ತದೆ. ಇಷ್ಟು ಮಾತ್ರವಲ್ಲದೇ ಹೃತಿಕ್ ಮತ್ತು ಟೈಗರ್ ಸಿಕ್ಸ್ ಪ್ಯಾಕ್ ಹುಡುಗಿಯರು ಫಿದಾ ಆಗಿ ತಮ್ಮ ನೆಚ್ಚಿನ ನಟನಿಗೆ ಸಾಲು ಸಾಲು ಬೇಡಿಕೆಗಳನ್ನು ಇಡುತ್ತಿದ್ದಾರೆ.

    ಅನುಷ್ಕಾ ಮತ್ತು ಹೃತಿಕ್ ಜೊತೆಯಾಗಿ ನಟಿಸುತ್ತಿರುವ ಸಿನಿಮಾ ಚಿತ್ರೀಕರಣ 2020ರಿಂದ ಆರಂಭಗೊಳ್ಳಲಿದ್ದು, 2021ಕ್ಕೆ ತೆರೆಕಾಣಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಈ ಮೊದಲು ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸಲಿದ್ದಾರೆ ಎನ್ನಲಾಗಿತ್ತು.