ಬೆಂಗಳೂರು: ಈ ಹಿಂದೆ ಶೋಭಾ ಕರಂದ್ಲಾಜೆ ಅವರು ಆಹಾರ ಇಲಾಖೆ ಸಚಿವರಾಗಿದ್ದ ವೇಳೆಯೇ ಸಾಕಷ್ಟು ಹಗರಣ ನಡೆದಿದೆ. ಈಗ ಅವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಆಹಾರ ಇಲಾಖೆಯಲ್ಲಿನ ಹಗರಣಕ್ಕೆ ಅನುರಾಗ್ ತಿವಾರಿಯವರ ಕೊಲೆ ನಡೆದಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆಯವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಚಾರಕ್ಕಾಗಿ ಆರೋಪ ಮಾಡುವುದನ್ನು ಶೋಭಾ ಕರಂದ್ಲಾಜೆ ಅಭ್ಯಾಸ ಮಾಡಿಕೊಂಡಿದ್ದಾರೆ. ಅವರ ಆರೋಪವನ್ನ ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಪ್ರಕರಣವನ್ನ ಸಿಬಿಐಗೆ ವಹಿಸಲಾಗಿದೆ. ತನಿಖೆಯಾದಾಗ ಎಲ್ಲವೂ ಗೊತ್ತಾಗಲಿದೆ ಎಂದು ತಿಳಿಸಿದರು.
ಶೋಭೆ ತರಲ್ಲ: ಸುಮ್ಮನೆ ಆರೋಪ ಮಾಡೋದು ಶೋಭಾ ಕರಂದ್ಲಾಜೆ ಅವರಿಗೆ ಶೋಭೆ ತರುವುದಿಲ್ಲ. ಈ ರೀತಿ ಆರೋಪ ಮಾಡಿ ಪತ್ರಿಕೆ ಹಾಗು ಟಿವಿಯಲ್ಲಿ ಸುದ್ದಿಯಲ್ಲಿರಬೇಕೆಂದು ಅವರು ಅಭ್ಯಾಸ ಮಾಡಿಕೊಂಡಿದ್ದಾರೆ. ಈ ಹಿಂದೆ ಸಚಿವ ರೋಷನ್ ಬೇಗ್ ಮೇಲೆ ಇದೇ ರೀತಿ ಕೊಲೆ ಪ್ರಕರಣದಲ್ಲಿ ಆರೋಪ ಮಾಡಿ ಈಗ ಏನಾಗಿದೆ ಎಂದು ಎಲ್ಲರಿಗೂ ಗೊತ್ತಾಗಿದೆ ಎಂದು ಹೇಳುವ ಮೂಲಕ ಶೋಭಾ ವಿರುದ್ಧ ವಾಗ್ದಾಳಿ ನಡೆಸಿದರು.
ಯಾರು ಅನ್ನೋದು ಗೊತ್ತಿಲ್ಲ: ಹೆಚ್ಡಿ ದೇವೇಗೌಡ ಮತ್ತು ಹೆಚ್ಡಿ ಕುಮಾರಸ್ವಾಮಿ ವಿರುದ್ಧ ಆದಾಯ ತೆರಿಗೆ ಇಲಾಖೆಗೆ ದೂರು ನೀಡಿರುವ ಕಾಂಗ್ರೆಸ್ ಕಾರ್ಯಕರ್ತ ವೆಂಕಟೇಶ್ ಗೌಡ ಯಾರೆಂದು ಗೊತ್ತಿಲ್ಲ. ಅವರ ಬಗ್ಗೆ ಯಾವ ಮಾಹಿತಿಯೂ ಇಲ್ಲ. ವೆಂಕಟೇಶ್ ಗೌಡ ಯಾರೆಂದು ನಾವು ಕೂಡ ಪರಿಶೀಲನೆ ಮಾಡುತ್ತೇವೆ ಎಂದು ಅವರು ತಿಳಿಸಿದರು.
ನವದೆಹಲಿ: ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ನಿಗೂಢ ಸಾವಿನ ಪ್ರಕರಣಕ್ಕೆ ಈಗ ಮೆಗಾ ಟ್ವಿಸ್ಟ್ ಸಿಕ್ಕಿದ್ದು, ಇದು ಸಹಜ ಸಾವಲ್ಲ. ಸಾವಿಗೂ ಮುನ್ನ ಅವರ ಮೇಲೆ ಹಲ್ಲೆ ನಡೆದಿರುವ ವಿಚಾರ ಈಗ ಪ್ರಕಟವಾಗಿದೆ.
ಅನುರಾಗ್ ತಿವಾರಿ ಹೃದಯಾಘಾತದಿಂದ ಮೃತಪಟ್ಟಿಲ್ಲ. ತಿವಾರಿ ಅವರ ದೇಹದ ಮೇಲೆ ಗಾಯದ ಗುರುತುಗಳು ಹಲ್ಲೆ ನಡೆದಿದೆ. ಭೀಕರವಾಗಿ ಅನುರಾಗ್ ತಿವಾರಿಯವರ ಮೇಲೆ ಹಲ್ಲೆ ನಡೆಸಲಾಗಿದೆ ಎನ್ನುವ ಅಂಶ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಉಲ್ಲೇಖವಾಗಿದೆ ಎಂದು ಮಾಧ್ಯಮವೊಂದು ವರದಿ ಪ್ರಕಟಿಸಿದೆ.
ಅನುರಾಗ್ ತಿವಾರಿ ಅವರು ಸಹಜ ಸಾವಲ್ಲ. ಅವರನ್ನು ಹತ್ಯೆ ಮಾಡಲಾಗಿದೆ ಎಂದು ಕರ್ನಾಟಕ ಬಿಜೆಪಿ ಆರೋಪಿಸಿತ್ತು. ಈಗ ಮರಣೋತ್ತರ ಪರೀಕ್ಷೆಯ ವರದಿ ಬಳಿಕ ಕರ್ನಾಟಕದಲ್ಲಿ ನಡೆದಿದೆ ಎನ್ನಲಾದ ಹಗರಣದಿಂದಲೇ ತಿವಾರಿ ಸಾವನ್ನಪ್ಪಿದ್ರಾ ಎನ್ನುವ ಪ್ರಶ್ನೆ ಎದ್ದಿದೆ. ಉತ್ತರ ಪ್ರದೇಶ ಸರ್ಕಾರ ಈಗ ತಿವಾರಿ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸಿದೆ.
ಏನಿದು ಪ್ರಕರಣ?
ಕರ್ನಾಟಕದ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ(36) ಅವರ ಶವ ಉತ್ತರಪ್ರದೇಶದ ಹಜರತ್ಗಂಜ್ನಲ್ಲಿ ಮೇ 17ರಂದು ಪತ್ತೆಯಾಗಿತ್ತು. ಅನುರಾಗ್ ತಿವಾರಿ ಅವರ ಜನ್ಮದಿನದಂದೇ ಮೀರಾ ಬಾಯಿ ಗೆಸ್ಟ್ ಹೌಸ್ ಹೌಸ್ ಬಳಿ ಶವವಾಗಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು.
Injuries on the body of Anurag Tiwari indicate that the death was not accidental,clearly result of an assault:Dr Dinesh Rao, Forensic Expert pic.twitter.com/UTeI8ylizN
ಬೆಂಗಳೂರು: ಐಎಎಸ್ ಅಧಿಕಾರಿ ಅನುರಾಗ್ ತಿವಾರಿಯಂತೆ ನನ್ನ ಅಧಿಕಾರಿವಾಧಿಯಲ್ಲಿ ಕೂಡ ನನ್ನನ್ನು ಮೂರು ಬಾರಿ ಕೊಲೆ ಮಾಡಲು ಪ್ರಯತ್ನ ಮಾಡಿದ್ರು ಅಂತಾ ನಿವೃತ್ತ ಐಎಎಸ್ ಅಧಿಕಾರಿ ಎಮ್ಎನ್ ವಿಜಯಕುಮಾರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಿವಾರಿ ಅನುಮಾನಾಸ್ಪದ ಸಾವಿನ ಪ್ರಕರಣದ ಸಿಬಿಐನಿಂದ ತನಿಖೆಯಾದ್ರೂ ಸತ್ಯ ಹೊರಬರುವ ಲಕ್ಷಣಗಳು ಇಲ್ಲ. ಯಾಕಂದ್ರೆ ಪ್ರಕರಣ ಕುರಿತು ಸೂಕ್ತ ರೀತಿಯಲ್ಲಿ ತನಿಖೆ ನಡೆಯುತ್ತಿಲ್ಲ. ಅಲ್ಲದೇ ಅತ್ಯಂತ ಕಳಪೆ ಮಟ್ಟದ ಅಧಿಕಾರಿಗಳು ಅನುರಾಗ್ ತಿವಾರಿಯ ಸಾವಿನ ಸಂಬಂಧ ತನಿಖೆ ನಡೆಸುತ್ತಿದ್ದಾರೆ ಅಂತಾ ಆರೋಪಿಸಿದರು.
ಅನುರಾಗ್ ತಿವಾರಿಯವರ ಸಾವಿನ ಹಿಂದೆ ಐಎಎಸ್ ಮಾಫಿಯಾದ ಕೈವಾಡವಿದೆ. ರಾಜ್ಯದಲ್ಲಿ ಐಎಎಸ್ ಮಾಫಿಯಾ ಹೆಮ್ಮರವಾಗಿ ಬೆಳೆದಿದೆ ಎಂದ ವಿಜಯ್ ಕುಮಾರ್, ಅನುರಾಗ್ ತಿವಾರಿಯವರ ಕೇಸನ್ನ ಸಿಬಿಐಗೆ ಒಪ್ಪಿಸ್ಸಿದ್ರೂ ನ್ಯಾಯ ಸಿಗುವುದು ಅನುಮಾನ ಅಂತಾ ಅನುಮಾನ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅನುರಾಗ್ ತಿವಾರಿಯ ಕಾಲೇಜು ಸ್ನೇಹಿತರು, ಈ ಸಿಸ್ಟಮ್ ನಲ್ಲಿ ನಮಗೆ ನಂಬಿಕೆಯಿಲ್ಲ, ಸಾವಿನ ತನಿಖೆ ನಿಷ್ಪಕ್ಷಪಾತವಾಗಿ ನಡೆಸಿದ್ರೆ ಮಾತ್ರ ಅನುರಾಗ್ ತಿವಾರಿಯವರ ಸಾವಿನ ಸತ್ಯ ಹೊರಬರುತ್ತೆ ಅಂತಾ ಹೇಳಿದ್ರು.
ಅನುರಾಗ್ ತಿವಾರಿಯ ಸ್ನೇಹಿತರಾದ ಮದನ್ ಮೋಹನ್ ಮಾಳವೀರಾ ಕಾಲೇಜಿನ ರಶ್ಮಿ, ಆಶಿಶ್, ಪವನ್ ಸುದ್ದಿಗೋಷ್ಠಿ ಯಲ್ಲಿ ಭಾಗಿಯಾಗಿದ್ದು, ತಮ್ಮ ಗೆಳೆಯನ ಸಾವಿನ ತನಿಖೆಯನ್ನು ಸರಿಯಾಗಿ ಮಾಡಿ ಅಂತಾ ಸರ್ಕಾರಕ್ಕೆ ಒತ್ತಾಯಿಸಿದರು.
ಬೆಂಗಳೂರು: ಅನ್ನಭಾಗ್ಯ ಯೋಜನೆಯ ಅಕ್ರಮ ಪ್ರಾಮಾಣಿಕ ಐಎಎಸ್ ಅಧಿಕಾರಿಯ ಸಾವಿಗೆ ಕಾರಣವಾಯ್ತ? ಅನ್ನಭಾಗ್ಯದಲ್ಲಿ ನಿಜಕ್ಕೂ ಅಂತಹ ದೊಡ್ಡ ಹಗರಣ ನಡೆದಿರೋ ಸಾಧ್ಯತೆ ಇದೆಯಾ? ಹೌದು ಅಂತಿದೆ ಆಹಾರ ಇಲಾಖೆಗೆ ರಿಪೋರ್ಟ್. ಅನ್ಯಭಾಗ್ಯದ ಅಕ್ಕಿ ಅಕ್ರಮವೆಸಗುವವರ ಸ್ವತ್ತಾಗಿರೊ ಅಂಶವನ್ನ ಸ್ವತಃ ಇಲಾಖೆಯೇ ಹೊರಹಾಕಿದ್ದು, ಕೊಟ್ಯಾಂತರ ರೂಪಾಯಿ ಬೆಲೆ ಬಾಳುವ ಅಕ್ಕಿ ನುಂಗಣ್ಣರ ಪಾಲಾಗಿದೆ.
2013ರಲ್ಲಿ ಅಧಿಕಾರ ಸ್ವೀಕಾರ ಮಾಡಿದ ನಂತರ ಸಿಎಂ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆ ಘೋಷಣೆ ಮಾಡಿದ್ರು. ಯೋಜನೆ ಪ್ರಾರಂಭ ಮಾಡಿ ನಾಲ್ಕು ವರ್ಷ ಆದ್ರೂ ಅಕ್ರಮ ತಡೆಯಲು ಮಾತ್ರ ಸಾಧ್ಯವಾಗಿಲ್ಲ. ಸರ್ಕಾರದ ಅಂಕಿ ಅಂಶದ ಪ್ರಕಾರವೇ ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗ್ತಿದೆ. ಕಳೆದ ಮೂರುವರೆ ವರ್ಷದಲ್ಲಿ ಆಹಾರ ಇಲಾಖೆ 414 ಪ್ರಕರಣ ದಾಖಲಿಸಿಕೊಂಡು ಬರೋಬ್ಬರಿ 34 ಸಾವಿರ ಕ್ವಿಂಟಾಲ್ ಅಕ್ರಮ ಅಕ್ಕಿ ವಶಪಡಿಸಿಕೊಂಡಿದೆ. ಅಂದ್ರೆ ಬರೋಬ್ಬರಿ 34 ಲಕ್ಷ ಕೆಜಿ ಅಕ್ಕಿ ವಶವಾಗಿದೆ. ಇದರ ಮೊತ್ತ ಸುಮಾರು 11 ಕೋಟಿ ರೂ. ಕಳೆದ ವಿಧಾನಸಭೆ ಅಧಿವೇಶನದಲ್ಲಿ ಶಾಸಕ ಗುರುಪಾಟೀಲ ಶಿರವಾಳ ಕೇಳಿದ ಪ್ರಶ್ನೆಗೆ ಸ್ವತಃ ಆಹಾರ ಸಚಿವ ಖಾದರ್ ಈ ಉತ್ತರ ನೀಡಿದ್ದಾರೆ.
2013-14 ರಲ್ಲಿ ದಾಖಲಾದ ಒಟ್ಟು ಪ್ರಕರಣಗಳು 70, ವಶಪಡಿಸಿಕೊಂಡ ಅಕ್ಕಿ 8832 ಕ್ವಿಂಟಾಲ್, ಅಕ್ಕಿಯ ಮೌಲ್ಯ 2.88 ಕೋಟಿ ರೂ. 2014-15ರಲ್ಲಿ ದಾಖಲಾದ ಒಟ್ಟು ಪ್ರಕರಣಗಳು 193, ವಶಪಡಿಸಿಕೊಂಡ ಅಕ್ಕಿ 16211 ಕ್ವಿಂಟಾಲ್ ಹಾಗೂ ಅಕ್ಕಿಯ ಮೌಲ್ಯ 4.91 ಕೋಟಿ ರೂ. 2015-16ರಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ 118, ವಶಪಡಿಸಿಕೊಂಡ ಅಕ್ಕಿ 4384 ಕ್ವಿಂಟಾಲ್, ಇದರ ಮೌಲ್ಯ 1.62 ಕೋಟಿ ರೂ. 2016-17 ಅಂದ್ರೆ ಅಕ್ಟೋಬರ್ 2016 ವರೆಗೆ ದಾಖಲಾದ ಪ್ರಕರಣಗಳು 33, ವಶಪಡಿಸಿಕೊಂಡ ಅಕ್ಕಿ 4566 ಕ್ವಿಂಟಾಲ್ ಹಾಗೂ ಅಕ್ಕಿಯ ಮೌಲ್ಯ 1.69 ಕೋಟಿ ರೂಪಾಯಿಯದ್ದಾಗಿದೆ.
ಅನ್ನಭಾಗ್ಯ ಹಗರಣದ ರಿಪೋರ್ಟ್ ತಯಾರಿಸಿದ್ರಾ ತಿವಾರಿ?: ಕೇವಲ ಕಣ್ಣಿಗೆ ಬಿದ್ದ ಅಕ್ರಮ 11 ಕೋಟಿ ರೂ. ಆದ್ರೆ ಕಣ್ಣಿಗೆ ಕಾಣದ ಅದೆಷ್ಟೋ ಕೋಟಿ ಮೌಲ್ಯದ ಅಕ್ಕಿ ದಂಧೆಕೋರರ ಪಾಲಾಗಿದೆ. ಇದನ್ನ ಪತ್ತೆ ಹಚ್ಚಿದ್ದೇ ಆಹಾರ ಇಲಾಖೆ ಆಯುಕ್ತ ಅನುರಾಗ್ ತಿವಾರಿ ಅವರ ಸಾವಿಗೆ ಕಾರಣ ಅನ್ನೋ ಆರೋಪ ಬಲವಾಗ್ತಿದೆ.
– ಪ್ರವೀಣ್ ರೆಡ್ಡಿ ಕಲಬುರಗಿ: ಐಎಎಸ್ ಅನುರಾಗ ತಿವಾರಿ ಸಾವಿನ ಪ್ರಕರಣಕ್ಕೆ ಮತ್ತೆ ಟ್ವಿಸ್ಟ್ ಸಿಕ್ಕಿದೆ. ಅನುರಾಗ್ ಮತ್ತವರ ಸ್ನೇಹಿತ ಪಿಎನ್ ಸಿಂಗ್ ಅವರು ಸಾವಿನ ಹಿಂದಿನ ದಿನ ಹೊರಗೆ ಹೋದವರು ಮರಳಿ ಗೆಸ್ಟ್ ಹೌಸ್ಗೆ ಹಿಂತಿರುಗಿದ್ದನ್ನ ನೋಡೇ ಇಲ್ಲ ಅಂತ ಭದ್ರತಾ ಸಿಬ್ಬಂದಿ ಹೇಳಿದ್ದಾರೆ.
ಅಲ್ಲದೆ, ಪಿಎನ್ ಸಿಂಗ್ ಮತ್ತು ಅನುರಾಗ್ ರೆಸ್ಟೋರೆಂಟ್ನಲ್ಲಿ ತಡರಾತ್ರಿವರೆಗೂ ಇದ್ದರು ಅನ್ನೋ ಮಾತೂ ಕೇಳಿ ಬಂದಿದೆ. ಆದರೆ, ಇದನ್ನ ಸಹೋದರರು ತಿರಸ್ಕರಿಸಿದ್ದಾರೆ.
ಪ್ರಕರಣದ ಕುರಿತು ಅನುರಾಗ್ ಸಹೋದರ ಅಲೋಕ್ ಅವ್ರನ್ನ ಪಬ್ಲಿಕ್ ಟಿವಿ ಮಾತನಾಡಿಸಿದಾಗ, `ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅನುರಾಗ್ ಉಸಿರುಗಟ್ಟಿ ಸಾವನಪ್ಪಿರುವ ಉಲ್ಲೇಖವಿದೆ. ಆದ್ರೆ ಈ ವರದಿ ಬಗ್ಗೆ ನಮಗೆ ತೃಪ್ತಿಯಿಲ್ಲ. ಹೀಗಾಗಿ ತಜ್ಞ ವೈದ್ಯರ ಜೊತೆ ಚರ್ಚಿಸುತ್ತೇವೆ. ವರದಿಯ ಪ್ರತಿ ಇನ್ನೂ ನಮ್ಮ ಕೈ ಸೇರಿಲ್ಲ. ಆದ್ರೆ, ವರದಿಯಲ್ಲಿನ ಅಂಶಗಳ ಬಗ್ಗೆ ಗೊತ್ತಾಗಿದೆ. ಕರ್ನಾಟಕದಲ್ಲಿ ಐಎಎಸ್ ಆದವರಿಗೆ ಬೆಲೆಯಿಲ್ಲ. ಅಲ್ಲಿ ಗುಮಾಸ್ತರಿಗೆ ಮಾತ್ರ ಬೆಲೆಯಿದೆ’ ಅಂತಾ ವಾಗ್ದಾಳಿ ನಡೆಸಿದ್ದಾರೆ.
ಪ್ರಕರಣದ ಬಗ್ಗೆ ಮತ್ತೋರ್ವ ಸಹೋದರ ಮಯಾಂಕ್ ಪ್ರತಿಕ್ರಿಯಿಸಿ `ಮರಣೋತ್ತರ ವರದಿಯಲ್ಲಿ ಉಲ್ಲೇಖಿಸಿದ ಕೆಲ ಅಂಶಗಳನ್ನು ವೈದ್ಯರು ತೋರಿಸಿದ್ದಾರೆ. ಅದನ್ನು ಗಮನಿಸಿದಾಗ ಅನುರಾಗ್ ಕೊಲೆಯಾಗಿರುವ ಲಕ್ಷಣಗಳು ಕಂಡುಬರುತ್ತಿವೆ. ಪ್ರಕರಣದ ಬಗ್ಗೆ ಮುಖ್ಯಮಂತ್ರಿಯನ್ನು ಶೀಘ್ರದಲ್ಲಿಯೇ ಭೇಟಿಯಾಗುತ್ತೇವೆ. ಸಿಬಿಐ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಬಯಲಿಗೆಳೆಯುವಂತೆ ಆಗ್ರಹಿಸುತ್ತೇವೆ ಅಂದ್ರು.
ಇನ್ನು ಮೇ 16ರಂದು ರಾತ್ರಿ ಫೋನ್ ನಲ್ಲಿ ಮಾತನಾಡಿದ್ದಾರೆ ನೀವೇನಾದ್ರೂ ಕರೆ ಮಾಡಿದ್ರಾ ಅಂತಾ ಕೇಳಿದಾಗ `ನನಗನ್ನಿಸುತ್ತದೆ ಅವರ ಮೊಬೈಲ್ ಬೇರೆಯವರ ಬಳಿಯಿತ್ತು. ಯಾಕಂದ್ರೆ ಅವರ ಮೊಬೈಲ್ ಲಾಕ್ ಮತ್ತು ಪಾಸ್ ವರ್ಡ್ ತೆಗೆಯಲಾಗಿದೆ. ಅವರ ಮೊಬೈಲನ್ನು ಬೇರೆಯವರ ಫಿಂಗರ್ ಸ್ಕ್ಯಾನ್ ಮಾಡಿ ಲಾಕ್ ತೆಗೆದಿದ್ದಾರೆ. ಕೊಲೆಯ ನಂತ್ರ ಮತ್ತು ಅದರ ನಂಬರ್ ಸಹ ಬದಲಾವಣೆ ಮಾಡಲಾಗಿದೆ. ಯಾವುದೇ ಮೆಸೇಜ್ ಬರದಂತೆ ಮಾಡಲಾಗಿದೆ. ಇದೆಲ್ಲವೂ ಕೂಡ ಒಂದು ವ್ಯವಸ್ಥಿತವಾಗಿ ಮಾಡಲಾಗಿದೆ ಅಂತಾ ಹೇಳಿದ್ರು.
ಮರಣೋತ್ತರ ಪರೀಕ್ಷೆಯಲ್ಲಿ ಕೊಲೆಯ ಅಂಶ ಇದೆ ಅಂತಾ ಹೇಗೆ ಹೇಳಿದ್ರಿ ಅಂತಾ ಕೇಳಿದಾಗ ಉತ್ತರಿಸಿದ ಮಯಾಂಕ್, `ವರದಿಯಲ್ಲಿರುವಂತೆ ಅನುರಾಗ್ ದೇಹದಲ್ಲಿ ಗಾಯಗಳಾಗಿವೆ. ಕೆಲ ಗಾಯಗಳು ಅವರ ದೇಹದ ಹೊರಭಾಗದಲ್ಲಿ ಕಂಡು ಬಂದಿವೆ. ಅದರಿಂದ ಇದೊಂದು ಸಹಜ ಸಾವು ಆಗಲು ಸಾಧ್ಯವಿಲ್ಲ. ಯಾರೋ ಅವರ ಕುತ್ತಿಗೆಯನ್ನು ಒತ್ತಿದ್ದಾರೆ. ಹೀಗಾಗಿ ಅವರ ತುಟಿಗಳು ಸಹ ಸೀಳಿವೆ. ದೇಹದಲ್ಲಿ ಯಾವುದೇ ವಿಷಕಾರಿ ಅಂಶಗಳು ಇರುವುದು ಪತ್ತೆಯಾಗಿಲ್ಲ ಅಂತಾ ಹೇಳಿದ್ದಾರೆ.
ಬೆಂಗಳೂರು: ಉತ್ತರಪ್ರದೇಶದಲ್ಲಿ ನಿಗೂಢವಾಗಿ ಮೃತಪಟ್ಟ ಕರ್ನಾಟಕದ ಐಎಎಸ್ ಅಧಿಕಾರು ಅನುರಾಗ್ ತಿವಾರಿ ಅವರ ಕೊನೆಯ ಕ್ಷಣದ ವಿಡಿಯೋವೊಂದು ಲಭ್ಯವಾಗಿದೆ.
ಉತ್ತರಪ್ರದೇಶ ರಾಜಧಾನಿ ಲಕ್ನೋದ ಹಜರತ್ಗಂಜ್ನಲ್ಲಿರುವ ಆರ್ಯನ್ ಹೋಟೆಲ್ಗೆ ಎಂಟ್ರಿ ಕೊಡ್ತಿರುವ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ದೃಶ್ಯದಲ್ಲಿ ಗ್ಲಾಸ್ ಡೋರ್ನ್ನು ತಳ್ಳಿಕೊಂಡು ತಿವಾರಿ ಎಂಟ್ರಿ ಕೊಡ್ತಿದ್ದಾರೆ. ಒಳಗೆ ಬಂದ ಬಳಿಕ ತಿವಾರಿ ಅಲ್ಲೇ ಇದ್ದ ಸ್ಟ್ಯಾಂಡ್ವೊಂದರಲ್ಲೇ ಏನನ್ನೋ ತೆಗೆದು ಓದುತ್ತಿದ್ದಾರೆ. ಹೋಟೆಲ್ಗೆ ತಿವಾರಿ ಎಂಟ್ರಿ ಕೊಡೋ ವೇಳೆ ಅವರ ಬ್ಯಾಚ್ಮೇಟ್ ಆಗಿದ್ದ ಪಿಎನ್ ಸಿಂಗ್ ಕೂಡಾ ಇದ್ದರು ಎನ್ನುವುದು ವಿಶೇಷ.
ಮೇ 17ರಂದು ತಿವಾರಿ ಮೃತದೇಹ ಹೋಟೆಲ್ನ ಬಳಿಯೇ ಸಿಕ್ಕಿತ್ತು. ಮೂರು ದಿನಗಳಿಂದ ಇದೇ ಹೋಟೆಲ್ನಲ್ಲಿ ತಿವಾರಿ ತಂಗಿದ್ದರೂ ರೂಂ ಬುಕ್ ಆಗಿದ್ದು ಮಾತ್ರ ಅವರ ಸ್ನೇಹಿತ ಪಿಎನ್ ಸಿಂಗ್ ಹೆಸರಲ್ಲಿ ಅನ್ನೋದು ವಿಚಿತ್ರ. ತಿವಾರಿ ಮರಣೋತ್ತರ ಪರೀಕ್ಷೆ ಕೂಡಾ ಅಪೂರ್ಣವಾಗಿದ್ದು ಸಾವಿಗೆ ಖಚಿತ ಕಾರಣ ಸಿಕ್ಕಿಲ್ಲ.
ಬೆಂಗಳೂರು: ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಆಹಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ಅವರಿಗೆ ನೋಟಿಸ್ ಜಾರಿಯಾಗಿದೆ ಎಂದು ಉನ್ನತ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.
ಈಗಾಗಲೇ ಬೆಂಗಳೂರಿನಲ್ಲಿ ಬೀಡುಬಿಟ್ಟಿರುವ ವಿಶೇಷ ತನಿಖಾ ತಂಡ ಇಂದು ಖುದ್ದು ಹಾಜರಾಗುವಂತೆ ಹರ್ಷ ಗುಪ್ತಾಗೆ ಸೂಚನೆ ನೀಡಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಶನಿವಾರ ತಿವಾರಿ ಸತ್ಯ ಹೆಸರಿನಲ್ಲಿ ಪಬ್ಲಿಕ್ ಟಿವಿ ಎಕ್ಸ್ ಕ್ಲೂಸಿವ್ ಸುದ್ದಿಯನ್ನು ಪ್ರಸಾರ ಮಾಡಿತ್ತು. ಈ ವೇಳೆ ಯಶ್ ಗುಪ್ತಾ ಹೆಸರಿನ ಅಧಿಕಾರಿ ಹೆಸರನ್ನು ಅನುರಾಗ್ ಸಹೋದರ ಮಯಾಂಕ್ ತಿಳಿಸಿದ್ದರು. ಈ ಸುದ್ದಿಯ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಹರ್ಷ ಗುಪ್ತಾ ಇದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಪ್ರತಿಕ್ರಿಯಿಸಿದ್ದರು.
ಈ ನಡುವೆ ನಿಗೂಢ ಸಾವಿನ ಪ್ರಕರಣದ ತನಿಖೆಯನ್ನು ಸಿಬಿ ನಡೆಸಬೇಕೆಂದು ಆಗ್ರಹಿಸಿ ಪ್ರಧಾನಿ ಕಚೇರಿಗೆ ಅನುರಾಗ್ ಕುಟುಂಬ ಪತ್ರ ಬರೆದಿದೆ.
ಪ್ರವೀಣ್ ರೆಡ್ಡಿ ಕಲಬುರಗಿ: ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅವರಿಗೆ ಸಾವಿನ ಭಯವಿತ್ತಂತೆ. ಹೀಗಂತ ಅನುರಾಗ್ ಸಹೋದರ ಮಯಾಂಕ್ ತಿವಾರಿ ಅವರ ಸ್ನೇಹಿತ ರಾಕೇಶ್ ಎಂಬುವರಿಗೆ ಮಾರ್ಚ್ 27ರಂದು ಮೇಸೆಜ್ ಕಳುಹಿಸಿದ್ದಾರೆ. ಸದ್ಯ ಹೀಗೆ ಸ್ನೇಹಿತನಿಗೆ ಮಯಾಂಕ್ ತಿವಾರಿ ಕಳುಹಿಸಿರುವ ವಾಟ್ಸಪ್ ಸಂದೇಶ ಇದೀಗ ಪಬ್ಲಿಕ್ ಟಿವಿಗೆ ಸಿಕ್ಕಿದೆ.
ಮಯಾಂಕ್ ಅವರನ್ನು ಅವರ ಸ್ನೇಹಿತ ಪದೇ ಪದೇ ಕರೆ ಮಾಡಿದ್ರೂ ಅವರು ಕರೆಯನ್ನು ಸ್ವಿಕರಿಸಿರಲಿಲ್ಲ. ಯಾಕೆ ಕಾಲ್ ರಿಸಿವ್ ಮಾಡಿಲ್ಲ ಅಂತಾ ವಾಟ್ಸಪ್ ಮೂಲಕ ರಾಕೇಶ್ ಪ್ರಶ್ನಿಸಿದ್ದಾಗ. “ನನ್ನ ಸಹೋದರ ಅನುರಾಗ್ ಮೇಲೆ ಜೀವ ಭಯವಿದೆ ಅಂತಾ ನನ್ನ ಸಹೋದರ(ಅಲೋಕ್) ಹೇಳಿದ್ದ” ಅಂತಾ ಮಯಾಂಕ್ ತನ್ನ ಸ್ನೇಹಿತನಿಗೆ ಸಂದೇಶ ಕಳುಹಿಸಿದ್ದಾರೆ. ಈ ಮೂಲಕ ಅನುರಾಗ್ ಜೀವಕ್ಕೆ ಕುತ್ತು ಇತ್ತು ಎಂಬುದನ್ನು ಅನುರಾಗ್ ತನ್ನ ಸಹೋದರನ ಬಳಿ ಹೇಳಿರುವುದು ದೃಢಪಟ್ಟಿದೆ.
ಸಹೋದರ ಮಯಾಂಕ್ ತಿವಾರಿ
ಇನ್ನು ಈ ಬಗ್ಗೆ ಮಯಾಂಕ್ ತಿವಾರಿ ಅವರನ್ನು ಪಬ್ಲಿಕ್ ಟಿವಿ ಸಂಪರ್ಕಿಸಿದಾಗ, ನನ್ನ ಸಹೋದರ ಅನುರಾಗ್ ತಿವಾರಿ ಸಾವು ಸಹಜ ಸಾವಲ್ಲ ಅದು ಕೊಲೆ. ಈ ಕುರಿತು ಅನುರಾಗ್ ಹಲವು ಬಾರಿ ನನ್ನ ಜೊತೆ ಮಾತನಾಡಿ ಮೇಸೆಜ್ ಸಹ ಕಳುಹಿಸಿದ್ದಾನೆ. ಆ ಎಲ್ಲಾ ಮೆಸೇಜ್ ಗಳು ನನ್ನ ಬಳಿ ಇವೆ. ಯಾಕಂದ್ರೆ ಆಹಾರ ಇಲಾಖೆಯಲ್ಲಿನ ದೊಡ್ಡ ಹಗರಣದ ಕಡತವನ್ನು ಸಿಬಿಐ ಮತ್ತು ಪಿಎಮ್ಓ(ಪ್ರಧಾನ ಮಂತ್ರಿಕಚೇರಿ)ಗೇ ಕಳುಹಿಸಲು ಸಿದ್ಧತೆ ನಡೆಸಿದ್ದ. ಆದರೆ
ಹಿರಿಯ ಅಧಿಕಾರಿಗಳು ಈ ಕುರಿತು ಹಲವು ಬಾರಿ ಅವನ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಇದೇ ಪ್ರಕರಣ ಸಂಬಂಧ ಅನುರಾಗ್ ಗೆ ಕಳೆದ 4-5 ತಿಂಗಳಿನಿಂದ ಸಂಬಳ ಸಹ ನೀಡಿರಲಿಲ್ಲ. ಇನ್ನು ಅವನು ರಜೆ ಕೇಳಿದ್ರೆ ಬೇಕು ಅಂತಾನೆ ಅವನ ರಜೆಯನ್ನು ಪದೇ ಪದೇ ಕೇಳಿದ್ರು ಅಧಿಕಾರಿಗಳು ಅದನ್ನು ರಿಜಕ್ಟ್ ಮಾಡಿ ಅವನಿಗೆ ಮಾನಸಿಕ ಕಿರುಕುಳ ಕೊಡುತ್ತಿದ್ದರು. ಅಂತಾ ತನ್ನ ಸಹೋದರನಿಗೆ ಆದ ಅನ್ಯಾಯದ ಬಗ್ಗೆ ಮಯಾಂಕ್ ತಿವಾರಿ ಅಲವತ್ತುಕೊಂಡಿದ್ದಾರೆ.
ಪರಿಸ್ಥಿತಿ ಸರಿ ಇಲ್ಲ: ಸದ್ಯ ಬೆಂಗಳೂರಿನಲ್ಲಿ ಪರಿಸ್ಥಿತಿ ಸರಿಯಿಲ್ಲ . ಹೀಗಾಗಿ ತಂದೆ-ತಾಯಿಯನ್ನು ಇಲ್ಲಿಗೆ ಕಳುಹಿಸಬೇಡಿ ಇನ್ನು ಕೆಲ ದಿನಗಳಲ್ಲಿ ನಾನೇ ಉತ್ತರದತ್ತ ಬರುತ್ತೇನೆ ಅಂತಾ ಮಾರ್ಚ್ 25ರಂದು ಮೃತ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ತನ್ನ ಸಹೋದರ ಮಯಾಂಕ್ಗೇ ವಾಟ್ಸಪ್ ಮೆಸೇಜ್ ಕಳುಹಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಜಕೀಯ ಮತ್ತು ಮೇಲಾಧಿಕಾರಿಗಳ ವರ್ತನೆ ಸರಿಯಿಲ್ಲ. ಹೀಗಾಗಿ ಪೋಷಕರನ್ನು ಬೆಂಗಳೂರಿಗೆ ಕಳುಹಿಸುವುದು ಎಷ್ಟರ ಮಟ್ಟಿಗೆ ಸರಿ ಅಂತಾ ಅನುರಾಗ್ ಸಹೋದರನಿಗೆ ಪ್ರಶ್ನೆ ಮಾಡಿದ್ದಾರೆ. ಅಷ್ಟೆ ಅಲ್ಲ ಇನ್ನು ಕೆಲ ದಿನಗಳಲ್ಲಿ ಉತ್ತರ ಭಾರತದ ಪರಿಸ್ಥಿತಿ ಸರಿಯಾಗಬಹುದು. ಸದ್ಯ ಬೆಂಗಳೂರಿನಲ್ಲಿ ಕಲುಷಿತ ರಾಜಕೀಯ ಮತ್ತು ಹಿರಿಯ ಅಧಿಕಾರಿಗಳ ವರ್ತನೆಯಿಂದ ವಾತಾವರಣ ಸರಿಯಿಲ್ಲ ಅಂತಾ ಸಹ ಅನುರಾಗ್ ತಿವಾರಿ ತನ್ನ ಸಹೋದರನಿಗೆ ಮೇಸೆಜ್ ಕಳುಹಿಸಿದ್ದು ಅದರ ಎಕ್ಸ್ ಕ್ಲೂಸಿವ್ ಮಾಹಿತಿ ಸಹ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಅನುರಾಗ್ ತಿವಾರಿ ತಂದೆ-ತಾಯಿ
ತನಿಖೆಗೆ ಪತ್ರ: ಐಎಎಸ್ ಅಧಿಕಾರಿಯ ನಿಗೂಢ ಸಾವಿನ ಕುರಿತು ತನಿಖೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದಾರೆ.
ಕರ್ನಾಟಕ ಕೇಡರ್ ನ 2007ನೇ ಬ್ಯಾಚ್ ಐಎಎಸ್ ಅಧಿಕಾರಿ ಶ್ರೀ ಅನುರಾಗ್ ತಿವಾರಿಯವರು ಲಖನೌನ ಹಜರತ್ ಗಂಜ್ ಬಳಿಯ ಮೀರಾ ಬಾಯಿ ಅತಿಥಿ ಗೃಹದ ಬಳಿ ನತದೃಷ್ಟವಾಗಿ ಸಾವಿಗೀಡಾದ ಕುರಿತು ನಾನು ನಿಮಗೆ ಈ ಪತ್ರವನ್ನು ಬರೆಯುತ್ತಿದ್ದೇನೆ.
ಶ್ರೀ ತಿವಾರಿಯವರು ಕರ್ನಾಟಕ ಕೇಡರ್ ನ ಒಬ್ಬ ದಕ್ಷ ಅಧಿಕಾರಿಯಾಗಿದ್ದು, ಅವರ ಅಕಾಲಿಕ ಹಾಗೂ ದುರದೃಷ್ಟಕರ ಸಾವು ನಮಗೆ ತೀವ್ರ ದುಃಖ ತಂದಿದೆ. ಅವರ ಸಾವಿಗೆ ಸಂಬಂಧಿಸಿದಂತೆ ಇಡೀ ಪ್ರಕರಣವನ್ನು, ಅದರ ಸನ್ನಿವೇಶಗಳು ಹಾಗೂ ಕಾರಣಗಳ ಸಹಿತ ತಿಳಿಯುವುದು ಅತ್ಯಂತ ಅಗತ್ಯವಾಗಿದ್ದು ಈ ಸಂಬಂಧ ತನಿಖಾಧಿಕಾರಿಗಳು ಹಾಗೂ ತಜ್ಞರನ್ನೊಳಗೊಂಡ ಸಮರ್ಥ ತಂಡದಿಂದ ತನಿಖೆ ನಡೆಸುವ ಅಗತ್ಯವಿದೆ. ಈ ಕುರಿತಾಗಿ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಸೂಚಿಸುವಂತೆ ತಮ್ಮಲ್ಲಿ ವಿನಂತಿಸುತ್ತೇನೆ.
ಸಿಎಂ ಪತ್ರ: ನಮ್ಮ ರಾಜ್ಯದ ಓರ್ವ ದಕ್ಷ ಐಎಎಸ್ ಅಧಿಕಾರಿಯಾಗಿದ್ದ ಅನುರಾಗ್ ತಿವಾರಿಯವರು ಉತ್ತರಪ್ರದೇಶದ ಲಖನೌನ ತೀವ್ರ ಭದ್ರತಾ ವಲಯದ ಸಮೀಪವೇ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಸೂಕ್ತ ತನಿಖೆ ನಡೆಸುವಂತೆ ಕೋರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯವರಾದ ಯೋಗಿ ಆದಿತ್ಯನಾಥ್ ಅವರಿಗೆ ಪತ್ರವನ್ನು ಬರೆದಿದ್ದೇನೆ. ಪತ್ರದ ಕನ್ನಡಾನುವಾದ:
ಪ್ರೀತಿಯ ಶ್ರೀ ಯೋಗಿ ಆದಿತ್ಯನಾಥ್ ರವರೇ
ಕರ್ನಾಟಕ ಕೇಡರ್ ನ 2007ನೇ ಬ್ಯಾಚ್ ಐಎಎಸ್ ಅಧಿಕಾರಿ ಶ್ರೀ ಅನುರಾಗ್ ತಿವಾರಿಯವರು ಲಖನೌನ ಹಜರತ್ ಗಂಜ್ ಬಳಿಯ ಮೀರಾ ಬಾಯಿ ಅತಿಥಿ ಗೃಹದ ಬಳಿ ನತದೃಷ್ಟವಾಗಿ ಸಾವಿಗೀಡಾದ ಕುರಿತು ನಾನು ನಿಮಗೆ ಈ ಪತ್ರವನ್ನು ಬರೆಯುತ್ತಿದ್ದೇನೆ.
ಶ್ರೀ ತಿವಾರಿಯವರು ಕರ್ನಾಟಕ ಕೇಡರ್ ನ ಒಬ್ಬ ದಕ್ಷ ಅಧಿಕಾರಿಯಾಗಿದ್ದು, ಅವರ ಅಕಾಲಿಕ ಹಾಗೂ ದುರದೃಷ್ಟಕರ ಸಾವು ನಮಗೆ ತೀವ್ರ ದುಃಖ ತಂದಿದೆ. ಅವರ ಸಾವಿಗೆ ಸಂಬಂಧಿಸಿದಂತೆ ಇಡೀ ಪ್ರಕರಣವನ್ನು, ಅದರ ಸನ್ನಿವೇಶಗಳು ಹಾಗೂ ಕಾರಣಗಳ ಸಹಿತ ತಿಳಿಯುವುದು ಅತ್ಯಂತ ಅಗತ್ಯವಾಗಿದ್ದು ಈ ಸಂಬಂಧ ತನಿಖಾಧಿಕಾರಿಗಳು ಹಾಗೂ ತಜ್ಞರನ್ನೊಳಗೊಂಡ ಸಮರ್ಥ ತಂಡದಿಂದ ತನಿಖೆ ನಡೆಸುವ ಅಗತ್ಯವಿದೆ. ಈ ಕುರಿತಾಗಿ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಸೂಚಿಸುವಂತೆ ತಮ್ಮಲ್ಲಿ ವಿನಂತಿಸುತ್ತೇನೆ.
ಬೆಂಗಳೂರು: ಕರ್ನಾಟಕದ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ನಿಗೂಢ ಸಾವಿನ ಕುರಿತು ಹಲವು ಅನುಮಾನಗಳು ಎದ್ದಿದ್ದು, ಕಾಂಗ್ರೆಸ್ ಸರ್ಕಾರದ ಹಗರಣಗಳನ್ನು ಬಯಲಿಗೆಳೆಯುವ ಉದ್ದೇಶದಿಂದ ಅವರನ್ನು ಕೊಲೆ ಮಾಡಲಾಗಿದೆ ಎಂಬ ಆರೋಪವೊಂದು ಕೇಳಿಬಂದಿದೆ.
ಕಾಂಗ್ರೆಸ್ ಹಗರಣದ ಆರೋಪ ವ್ಯಕ್ತವಾಗುತ್ತಿದ್ದಂತೆಯೇ ಇತ್ತ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ್ದಾರೆ. ಸುಮಾರು 40 ನಿಮಿಷ ಇಬ್ಬರು ಪ್ರತ್ಯೇಕ ಚರ್ಚೆ ನಡೆಸಿ, ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಿಎಂಗೆ ಪರಮೇಶ್ವರ್ ನೀಡಿದ್ದಾರೆ. ಸಿಬಿಐ ತನಿಖೆಗೆ ಒತ್ತಾಯಗಳು ಕೇಳಿ ಬರುತ್ತಿರುವುದರ ಬಗ್ಗೆಯೂ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಪ್ರಕರಣ ರಾಜಕೀಯ ತಿರುವು ಪಡೆದುಕೊಳ್ಳುತ್ತಿರುವುದರಿಂದ ಯಾವ ರೀತಿಯ ತನಿಖೆ ನಡೆಸಿದ್ರೆ ಒಳಿತು ಅನ್ನುವ ಬಗ್ಗೆ ಚರ್ಚೆ ನಡೆದಿದೆ. ಅಲ್ಲದೇ ವಿಪಕ್ಷಗಳ ಆರೋಪಕ್ಕೆ ತಿರುಗುಬಾಣ ರೂಪಿಸುವ ಬಗ್ಗೆಯೂ ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಬೆಳಗ್ಗೆ ಮಾತುಕತೆ ನಡೆಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಕರಣ ಏನು ಅಂತಾ ಗೊತ್ತಿಲ್ಲ. ಆದ್ರೆ ಮರಣೋತ್ತರ ಪರೀಕ್ಷೆಯಲ್ಲಿ ತಿವಾರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಅಂತಾ ವರದಿ ಬಂದಿದೆ. ನಾವು ಯಾವುದೇ ತನಿಖೆಗೆ ಸಹಕಾರ ಕೊಡಲು ಸಿದ್ಧ. ಹೀಗಾಗಿ ಕೇಂದ್ರ ಸರ್ಕಾರ ಯಾವ ತನಿಖೆ ಬೇಕಾದ್ರು ನಡೆಸಲಿ. ಹಗರಣ ಆಗಿದೆ ಅಂತಾ ಯಾರೋ ಹೇಳಿದ್ದನ್ನ ನಂಬೋದಕ್ಕೆ ಆಗಲ್ಲ ಅಂತಾ ಹೇಳಿದರು.
ಪರಮೇಶ್ವರ್ ಮಾತನಾಡಿ, ಉತ್ತರ ಪ್ರದೇಶ ವಿಧಾನಸಭೆಯಲ್ಲಿ ನಮ್ಮ ಸರ್ಕಾರದ ಮೇಲೆ ಆರೋಪ ಮಾಡಬಾರದಿತ್ತು, ಇದು ಸರಿಯಲ್ಲ. ರಾಜಕೀಯ ಕಾರಣಗಳಿದ್ರೆ ಹೊರಗೆ ಪ್ರಸ್ತಾಪ ಮಾಡಲಿ. ಒಬ್ಬ ಜವಾಬ್ದಾರಿಯುತ ಸಚಿವರಾಗಿ ನಮ್ಮ ಸರ್ಕಾರದ ಮೇಲೆ ಆರೋಪ ಮಾಡಬಾರದಿತ್ತು ಎಂದು ಹೇಳಿದರು.
ದಲಿತರ ಮನೆಯಲ್ಲಿ ಬಿಜೆಪಿ ಊಟ ಮಾಡ್ತೀವಿ ಅಂತ ಹೇಳಿ ತುಮಕೂರು ಹೋಟೆಲ್ ನಿಂದ ಆಹಾರ ತಂದು ತಿಂದ ಬಿಜೆಪಿ ನಾಯಕರ ಬಣ್ಣ ಬಯಲಾಗಿದೆ. ನೀವೇ ಬಯಲು ಮಾಡಿದ್ದೀರಾ, ಅದ್ಕೆ ಏನು ಕಾಮೆಂಟ್ ಮಾಡೋದು..? ಅಂತಾ ಸುದ್ದಿಗಾರರ ಜೊತೆ ಮಾತನಾಡುತ್ತಾ ಬಿಜೆಪಿ ವಿರುದ್ಧ ಅವರು ವ್ಯಂಗ್ಯವಾಡಿದ್ದಾರೆ.
ತನಿಖೆಗೆ ಸಹಕಾರ: ತಿವಾರಿ ನಿಗೂಢ ಸಾವಿನ ವಿಚಾರವಾಗಿ ಮಂಗಳೂರಿನಲ್ಲಿ ಆಹಾರ ಇಲಾಖೆ ಸಚಿವ ಯು.ಟಿ.ಖಾದರ್ ಮಾಧ್ಯಮದವರ ಜೊತೆ ಮಾತನಾಡಿ, ತಿವಾರಿ ಕಳೆದ ಜನವರಿ ನಾಲ್ಕರಂದು ಇಲಾಖೆಗೆ ಸೇರಿದ್ದರು. ಒಟ್ಟು 132 ದಿನ ಇಲಾಖೆಯಲ್ಲಿದ್ದರೂ 37 ದಿನಗಳಷ್ಟೆ ಕೆಲಸ ಮಾಡಿದ್ದರು. ಜನವರಿ 18ರಂದು ಪಂಜಾಬ್ ಚುನಾವಣೆಗೆ ಹೋಗಿದ್ದರು. ಮೇ 5ರಂದು ಐಎಎಸ್ ತರಬೇತಿಗೆಂದು ರಜೆಯಲ್ಲಿ ತೆರಳಿದ್ದರು. ಇದೀಗ ಅಧಿಕಾರಿ ಯುಪಿಯಲ್ಲಿ ಸಾವನ್ನಪ್ಪಿದ್ದಾರೆ, ಅಲ್ಲಿ ಏನಾಗಿದೆಯೋ ಗೊತ್ತಿಲ್ಲ. ಇಲಾಖೆಯಲ್ಲಿ ಹಗರಣ ನಡೆದಿರುವ ಬಗ್ಗೆ ಒಮ್ಮೆಯೂ ಹೇಳಿರಲಿಲ್ಲ. ಲಿಖಿತವಾಗಿ ಅಥವಾ ಮೌಖಿಕವಾಗಿಯೂ ಪ್ರಸ್ತಾವ ಮಾಡಿರಲಿಲ್ಲ. ಯುಪಿ ಸರಕಾರದ ತನಿಖೆಗೆ ಸಂಪೂರ್ಣ ಸಹಕಾರ ನೀಡಲಾಗುವುದು. ಪ್ರತಿಪಕ್ಷಗಳು ಈ ವಿಚಾರದಲ್ಲಿ ರಾಜಕೀಯ ನಡೆಸುವುದು ದುರದೃಷ್ಟಕರ. ಸಿಬಿಐ ತನಿಖೆ ನಡೆಸುವುದಿದ್ದರೆ ಯುಪಿ ಸರಕಾರ ಕೊಡಲಿ. ನಮ್ಮ ಸರಕಾರ ಯಾವುದೇ ತನಿಖೆಗೂ ಸಿದ್ಧವಿದೆ ಅಂತಾ ಸ್ಪಷ್ಟಪಡಿಸಿದ್ದಾರೆ.
ಲಕ್ನೋ: ಕರ್ನಾಟಕ ಕೇಡರ್ನ ಐಎಎಸ್ ಅಧಿಕಾರಿಯೊಬ್ಬರು ಉತ್ತರಪ್ರದೇಶದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ
36 ವರ್ಷದ ಅನುರಾಗ್ ತಿವಾರಿ ಅವರ ಶವ ಉತ್ತರಪ್ರದೇಶದ ಹಜರತ್ಗಂಜ್ನಲ್ಲಿ ಪತ್ತೆಯಾಗಿದೆ. ಅನುರಾಗ್ ತಿವಾರಿ ಅವರ ಜನ್ಮದಿನವಾದ ಇಂದೇ ಇಲ್ಲಿನ ಮೀರಾ ಬಾಯಿ ಗೆಸ್ಟ್ಹೌಸ್ ಬಳಿ ಶವವಾಗಿ ಪತ್ತೆಯಾಗಿದ್ದಾರೆ. 2007ನೇ ಬ್ಯಾಚ್ನ ಐಎಎಸ್ ಅಧಿಕಾರಿಯಾಗಿರುವ ಇವರು ಸದ್ಯ ಆಹಾರ ಸರಬರಾಜು ಇಲಾಖೆಯ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ರು. ಉತ್ತರಪ್ರದೇಶದ ಬಾಹ್ರಿಯಾಚ್ನಲ್ಲಿ ನೆಲೆಸಿದ್ದು, ಎರಡು ದಿನಗಳಿಂದ ಮೀರಾಬಾಯಿ ಗೆಸ್ಟ್ಹೌಸ್ನಲ್ಲಿ ತಂಗಿದ್ರು ಎಂದು ವರದಿಯಾಗಿದೆ.
ತಿವಾರಿ ಅವರ ಗಲ್ಲದ ಮೇಲೆ ಗಾಯದ ಗುರುತು ಪತ್ತೆಯಾಗಿದೆ. ಸದ್ಯ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅನುರಾಗ್ ತಿವಾರಿ ಈ ಹಿಂದೆ ಬೀದರ್, ಕೊಡಗು ಜಿಲ್ಲಾಧಿಕಾರಿಯಾಗಿ, ತುಮಕೂರು ಪಾಲಿಕೆ ಆಯುಕ್ತರಾಗಿ, ಮಧುಗಿರಿ ಎಸಿಯಾಗಿ, ರಾಜ್ಯ ಹಣಕಾಸು ಇಲಾಖೆಯ ಉಪಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ರು.
ಪಬ್ಲಿಕ್ ಟಿವಿಗೆ ಸಿಕ್ಕ ಮೂಲಗಳ ಮಾಹಿತಿ ಪ್ರಕಾರ ಅನುರಾಗ್ ತಿವಾರಿ ತಮ್ಮ ಪತ್ನಿಯಿಂದ ವಿಚ್ಛೇದನ ಪಡೆದಿದ್ದು, ಮಾನಸಿಕವಾಗಿ ವಿಚಲಿತವಾಗಿದ್ದರು. ಇದೀಗ ಮನೆಯವರ ಒತ್ತಾಯದ ಮೇರೆಗೆ 2ನೇ ಮದುವೆಯಾಗಲು ಒಪ್ಪಿ, ಅದೇ ಕಾರಣಕ್ಕಾಗಿ 4 ವಾರ ರಜೆ ಪಡೆದು ಉತ್ತರಪ್ರದೇಶಕ್ಕೆ ಹುಡುಗಿ ಹುಡುಕಲು ತೆರಳಿದ್ದರು ಎನ್ನಲಾಗಿದೆ. ಮಂಗಳವಾರದಂದು ಮೀರಾಬಾಯಿ ಗೆಸ್ಟ್ ಹೌಸ್ನ ಎಲ್ಡಿಎವಿಸಿ ಪ್ರಭುನಾರಾಯಣ್ ಅವರ ಕೊಠಡಿಯಲ್ಲಿ ಉಳಿದಿದ್ರು. ಆದ್ರೆ ಇಂದು ಬೆಳಗ್ಗೆ 8 ಗಂಟೆಗೆ ವಾಕಿಂಗ್ ಹೋಗಿದ್ದ ಅನುರಾಗ್ ತಿವಾರಿ ಶವವಾಗಿ ಪತ್ತೆಯಾಗಿದ್ದಾರೆ.
Lucknow (UP): Senior officials reach Hazratganj, after IAS officer Anurag Tiwari found dead near Meerabhai Guest House. pic.twitter.com/rzR4lLXKyA