Tag: Anuradha Paudwal

  • ಬಿಜೆಪಿಗೆ ಸೇರ್ಪಡೆಯಾದ ಗಾಯಕಿ ಅನುರಾಧಾ ಪೌಡ್ವಾಲ್

    ಬಿಜೆಪಿಗೆ ಸೇರ್ಪಡೆಯಾದ ಗಾಯಕಿ ಅನುರಾಧಾ ಪೌಡ್ವಾಲ್

    ನ್ನಡದ ಸಾಕಷ್ಟು ಸಿನಿಮಾಗಳಿಗೆ ಹಾಡಿದ್ದ ಬಾಲಿವುಡ್ ಸಿಂಗರ್ ಅನುರಾಧಾ ಪೌಡ್ವಾಲ್ (Anuradha Paudwal) ಅವರು ಇದೀಗ ಬಿಜೆಪಿಗೆ (BJP) ಸೇರ್ಪಡೆಯಾಗಿದ್ದಾರೆ. ಈ ಮೂಲಕ ರಾಜಕೀಯ ಅಖಾಡಕ್ಕೆ ಕಾರವಾರದ (Karwar) ಗಾಯಕಿ ಎಂಟ್ರಿ ಕೊಟ್ಟಿದ್ದಾರೆ.

    ಸನಾತನ ಧರ್ಮದೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿರುವ ಬಿಜೆಪಿ ಪಕ್ಷಕ್ಕೆ ನಾನು ಸೇರುತ್ತಿದ್ದೇನೆ. ಇದರಿಂದ ನನಗೆ ತುಂಬಾ ಸಂತೋಷವಾಗಿದೆ. ನಾನು ಇಂದು ಬಿಜೆಪಿ ಸೇರುತ್ತಿರುವುದು ನನ್ನ ಅದೃಷ್ಟ ಎಂದು ಗಾಯಕಿ ಅನುರಾಧಾ ಮಾತನಾಡಿದ್ದಾರೆ. ಮೋದಿ ನೇತೃತ್ವದ ಪಕ್ಷಕ್ಕೆ ಸೇರಿರುವ ಬಗ್ಗೆ ಗಾಯಕಿ ಸಂತಸ ವ್ಯಕ್ತಪಡಿಸಿದ್ದರು.

    ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೀರಾ ಎಂದು ಪ್ರಶ್ನೆ ಎದುರಾದಾಗ, ನನಗೆ ಈ ಬಗ್ಗೆ ಗೊತ್ತಿಲ್ಲ. ಮುಂದೆ ನೋಡೋಣ ಎಂದು ಅನುರಾಧಾ ಪ್ರತಿಕ್ರಿಯೆ ನೀಡಿದ್ದಾರೆ.

    ಕರ್ನಾಟಕದ ಕಾರವಾರದಲ್ಲಿ ಜನಿಸಿದ ಅನುರಾಧಾ ಪೌಡ್ವಾಲ್ ಅವರು ಕನ್ನಡದ ನನ್ನ ಪ್ರೀತಿಯ ಹುಡುಗಿ, ಪ್ರೀತ್ಸೆ ಚಿತ್ರದ ಹಾಡುಗಳು ಸೇರಿದಂತೆ ಹಲವು ಚಿತ್ರಗಳಿಗೆ ಹಾಡಿದ್ದಾರೆ. ಬಹುಭಾಷೆಗಳಲ್ಲಿ 9000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿ ಸೈ ಎನಿಸಿಕೊಂಡಿದ್ದಾರೆ.

  • ಹಿರಿಯ ಗಾಯಕಿ ಅನುರಾಧಾ ಪುತ್ರ ಆದಿತ್ಯ ಪೌಡ್ವಾಲ್ ಇನ್ನಿಲ್ಲ- ಶಂಕರ್ ಮಹದೇವನ್ ಮಾಹಿತಿ

    ಹಿರಿಯ ಗಾಯಕಿ ಅನುರಾಧಾ ಪುತ್ರ ಆದಿತ್ಯ ಪೌಡ್ವಾಲ್ ಇನ್ನಿಲ್ಲ- ಶಂಕರ್ ಮಹದೇವನ್ ಮಾಹಿತಿ

    ನವದೆಹಲಿ: ಹಿರಿಯ ಗಾಯಕಿ ಅನುರಾಧಾ ಪೌಡ್ವಾಲ್ ಪುತ್ರ ಆದಿತ್ಯ ಪೌಡ್ವಾಲ್(35) ಅವರು ಸಾವನ್ನಪ್ಪಿದ್ದಾರೆ.

    ಈ ಸುದ್ದಿಯನ್ನು ಗಾಯಕ, ಸಂಗೀತ ಸಂಯೋಜಕ ಶಂಕರ್ ಮಹದೇವನ್ ಘೋಷಿಸಿದ್ದು, ತಮ್ಮ ಇನ್‍ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಆದಿತ್ಯ ಫೋಟೋ ಹಾಕಿ ಭಾವನಾತ್ಮಕ ಸಾಲುಗಳನ್ನು ಬರೆದಿದ್ದಾರೆ. ಆದಿತ್ಯ ಪೌಡ್ವಾಲ್ ಕಳೆದ ಕೆಲವು ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಿಡ್ನಿ ವೈಫಲ್ಯದಿಂದಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಸಂಸ್ಥೆಗೆ ಶಂಕರ್ ಮಹದೇವನ್ ತಿಳಿಸಿದ್ದಾರೆ.

    ನಮ್ಮ ಪ್ರೀತಿಯ ಆದಿತ್ಯ ಪೌಡ್ವಲ್ ಇನ್ನಿಲ್ಲ ಎಂಬ ಈ ಸುದ್ದಿ ಕೇಳಿ ತುಂಬಾ ಘಾಸಿಯಾಯಿತು. ಅತ್ಯದ್ಭುತ ಸಂಗೀತಗಾರನಾಗಿದ್ದ. ಹಾಸ್ಯ ಪ್ರಜ್ಞೆ ಹೊಂದಿದ ಅತ್ಯದ್ಭುತ ಮನುಷ್ಯ. ಹಲವು ಪ್ರಾಜೆಕ್ಟ್ ಗಳಲ್ಲಿ ನನ್ನೊಂದಿಗೆ ಜೊತೆಯಾಗಿದ್ದ. ಇದೀಗ ಇಲ್ಲವಾಗಿದ್ದಾನೆ. ಅವರ ಕುಟುಂಬಕ್ಕಾಗಿ ಪ್ರಾರ್ಥಿಸುತ್ತೇನೆ. ಲವ್ ಯು ಆದಿತ್ಯ, ವಿಲ್ ಮಿಸ್ ಯು ಎಂದು ಬರೆದುಕೊಂಡಿದ್ದಾರೆ.

    https://www.instagram.com/p/CFBkgO_ntON/?utm_source=ig_embed&utm_campaign=loading

    ಅಲ್ಲದೆ ಈ ಕುರಿತು ಮಾತನಾಡಿರುವ ಶಂಕರ್ ಮಹದೇವನ್, ಆದಿತ್ಯಾ ಅವರಿಗೆ ಕೇವಲ 35 ವರ್ಷ ವಯಸ್ಸಾಗಿತ್ತು. ಅಲ್ಲದೆ ಉತ್ಸಾಹಬರಿತ ವ್ಯಕ್ತಿಯಾಗಿದ್ದ. ತುಂಬಾ ವರ್ಷಗಳಿಂದ ಅವರಿಗೆ ಆರೋಗ್ಯ ಸಮಸ್ಯೆ ಇತ್ತು. ಅಧಿಕ ರಕ್ತದೊತ್ತಡ ಸೇರಿದಂತೆ ಹಲವು ದೈಹಿಕ ಕಾಯಿಲೆಗಳಿದ್ದವು. ಹಲವು ವರ್ಷಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದರು. ನಂತರ ಆರಾಮಾಗಿದ್ದರು. ನಂತರ ಲಗ್ಸ್ ಸಮಸ್ಯೆ ಕಾಣಿಸಿಕೊಂಡಿತು. ಅಲ್ಲದೆ ಅಂತಿಮವಾಗಿ ಕಿಡ್ನಿ ವೈಫಲ್ಯ ಕಾಣಿಸಿಕೊಂಡಿತು. ಕಳೆದ ನಾಲ್ಕು ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಗ್ಗೆ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

    ಅಲ್ಲದೆ ಆದಿತ್ಯ ಪೌಡ್ವಾಲ್ ಅವರ ಸಾವಿಗೆ ಸಂಗೀತ ಲೋಕ ಕಂಬನಿ ಮಿಡಿದಿದ್ದು, ಅರ್ಮಾನ್ ಮಲಿಕ್ ಸೇರಿದಂತೆ ಸಂಗೀತ ದಿಗ್ಗಜರು ಸಂತಾಪ ವ್ಯಕ್ತಪಡಿಸಿದ್ದಾರೆ.

  • ‘ಅಮ್ಮ ನಾನು ನಿನ್ನ ಮಗಳು’ – ಅನುರಾಧ ಪೋಡ್ವಾಲ್‍ರಿಂದ 50 ಕೋಟಿ ರೂ. ಬೇಡಿಕೆ ಇಟ್ಟ ಪುತ್ರಿ

    ‘ಅಮ್ಮ ನಾನು ನಿನ್ನ ಮಗಳು’ – ಅನುರಾಧ ಪೋಡ್ವಾಲ್‍ರಿಂದ 50 ಕೋಟಿ ರೂ. ಬೇಡಿಕೆ ಇಟ್ಟ ಪುತ್ರಿ

    ತಿರುವನಂತಪುರಂ: ತಮ್ಮ ಅದ್ಭುತ ಕಂಠಸಿರಿಯಿಂದ ಸಂಗೀತ ಕ್ಷೇತ್ರದಲ್ಲಿ ಖ್ಯಾತಿ ಗಳಿಸಿರುವ ಗಾಯಕಿ ಅನುರಾಧ ಪೋಡ್ವಾಲ್‍ ಅವರಿಗೆ ಸಂಕಷ್ಟವೊಂದು ಎದುರಾಗಿದೆ. ಮಹಿಳೆಯೊಬ್ಬರು ತಾನು ಅನುರಾಧ ಪೋಡ್ವಾಲ್‍ ಮಗಳು, ನನ್ನನ್ನು ದೂರ ಇಟ್ಟಿದ್ದಕ್ಕೆ ಅನುರಾಧ ಅವರಿಂದ ನನಗೆ 50 ಕೋಟಿ ರೂ. ಪರಿಹಾರ ಕೊಡಿಸಿ ಎಂದು ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ.

    ಕರ್ಮಲಾ ಮೊಡೆಕ್ಸ್(45) ಅನುರಾಧ ಅವರಿಂದ 50 ಕೋಟಿ ರೂ. ಪರಿಹಾರ ಕೊಡಿಸುವಂತೆ ತಿರುವನಂತಪುರ ಕೋರ್ಟ್ ಮೆಟ್ಟಿಲೇರಿದ್ದಾರೆ. ಅನುರಾಧ ಹಾಗೂ ಅರುಣ್ ಪೋಡ್ವಾಲ್‍ ನನ್ನ ತಂದೆ ತಾಯಿ. ನಾನು ಹುಟ್ಟಿದ ನಾಲ್ಕೇ ದಿನಕ್ಕೆ ತಂದೆ ತಾಯಿ ನನ್ನನ್ನು ದೂರ ಮಾಡಿದ್ದರು. ಪೊನ್ನಚ್ಚನ್ ಹಾಗೂ ಅಗ್ನಿಸ್ ದಂಪತಿ ಮಡಲಿಗೆ ನನ್ನನ್ನು ಹಾಕಿ ತಂದೆ, ತಾಯಿ ಹೋಗಿದ್ದರು. ತಮ್ಮ ಬ್ಯುಸಿ ಕೆಲಸದ ಕಾರಣದಿಂದ ನನ್ನನ್ನು ಸಾಕಲು ಆಗದೇ ಅವರು ನನ್ನಿಂದ ದೂರವಾಗಿದ್ದರು ಎಂದು ಕರ್ಮಾಲಾ ತಿಳಿಸಿದ್ದಾರೆ.

    ಇಷ್ಟು ವರ್ಷದ ಮೇಲೆ ತಾಯಿಯ ನೆನಪು ಯಾಕೆ ಆಯ್ತು ಎಂದು ಪ್ರಶ್ನಿಸಿದಾಗ, ದತ್ತು ತಂದೆ ಪೊನ್ನಚ್ಚನ್ ಅವರು ಸಾಯುವ ಕೊನೆ ಕ್ಷಣದಲ್ಲಿ ನನಗೆ ಸತ್ಯ ತಿಳಿಸಿದರು. ನೀನು ನಮ್ಮ ಮಗಳಲ್ಲ ಅನುರಾಧ ಹಾಗೂ ಅರುಣ್ ಪೋಡ್ವಾಲ್‍ ಮಗಳು ಎಂದು ನನ್ನ ಜನ್ಮರಹಸ್ಯ ತೆರೆದಿಟ್ಟರು ಎಂದು ಕರ್ಮಾಲಾ ಹೇಳಿದ್ದಾರೆ.

    ದತ್ತು ತಂದೆ ಸಾವನ್ನಪ್ಪಿದ ಬಳಿಕ ನಾನು ನನ್ನ ಸ್ವಂತ ತಾಯಿಗೆ(ಅನುರಾಧ) ಕರೆ ಮಾಡಿದೆ. ನನ್ನನ್ನು ಮಗಳೆಂದು ಒಪ್ಪಿಕೊಳ್ಳುವಂತೆ ಹೇಳಿದೆ. ಆದರೆ ಅವರು ನನಗೆ ಸರಿಯಾಗಿ ಪ್ರತಿಕ್ರಿಯಿಸಲಿಲ್ಲ. ನನ್ನ ದತ್ತು ತಂದೆ-ತಾಯಿಗೆ ಮೊದಲೇ ಮೂವರು ಮಕ್ಕಳಿದ್ದರು. ಆದರೂ ಅವರು ನನ್ನನ್ನು ದತ್ತು ಪಡೆದು ಸ್ವಂತ ಮಗಳಂತೆ ಸಾಕಿ ಸಲುಹಿದ್ದಾರೆ. ಜೀವನ ನಡೆಸಲು ಕಷ್ಟವಿದ್ದರೂ ನನ್ನು ಸಾಕಿದ್ದಾರೆ ಎಂದಿದ್ದಾರೆ.

    ಅಗ್ನಿಸ್ ಅವರಿಗೆ ಮರುವಿನ ಕಾಯಿಲೆ ಇದೆ. ಆದರೆ ಚಿಕಿತ್ಸೆಗಾಗಿ ಹಣವಿಲ್ಲ. ತುಂಬಾ ಕಷ್ಟಪಟ್ಟು ಜೀವನ ನಡೆಸುತ್ತಿದ್ದೇವೆ. ತಮ್ಮ ಕಷ್ಟದಲ್ಲೂ ನನ್ನನ್ನು ಸಾಕಿ ಸಲುಹಿದ ತಾಯಿಗೆ ನಾನು ನೆರವಾಗಬೇಕಿದೆ. ಆದ್ದರಿಂದ ತನ್ನ ಸ್ವಂತ ತಾಯಿ ಅನುರಾಧ ಅವರ ನಮ್ಮ ಆಸ್ತಿಯಲ್ಲಿ ನನಗೆ ಪಾಲು ಕೊಡಬೇಕು. ನನ್ನನ್ನು ದೂರವಿಟ್ಟಿದ್ದಕ್ಕೆ ಪರಿಹಾರ ಕೊಡಬೇಕೆಂದು ಕರ್ಮಾಲಾ ಆಗ್ರಹಿಸಿದ್ದಾರೆ.

    ನಾನು ಸಾಕಷ್ಟು ಬಾರಿ ಅಮ್ಮನ್ನು ಸಂಪರ್ಕಿಸಲು ಪ್ರಯತ್ನಿಸಿದೆ. ಆದರೆ ಅಮ್ಮ ನನ್ನ ಕರೆಗಳಿಗೆ ಸ್ಪಂದಿಸಿಲ್ಲ. ನನ್ನ ನಂಬರ್ ಕೂಡ ಬ್ಲಾಕ್ ಮಾಡಿದ್ದಾರೆ. ಆದ್ದರಿಂದ ಕೋರ್ಟ್ ಮೆಟ್ಟಿಲೇರಿದ್ದೇನೆ ಎಂದು ಕರ್ಮಾಲಾ ಮಾಧ್ಯಮವೊಂದರಲ್ಲಿ ಹೇಳಿಕೊಂಡಿದ್ದಾರೆ.