Tag: Anti CAA Protest

  • ದೆಹಲಿ ಹಿಂಸಾಚಾರ ಪ್ರಚೋದನೆ- ಉಗ್ರ ಸಂಘಟನೆ ನಂಟು ಹೊಂದಿದ್ದ ಕಾಶ್ಮೀರಿ ದಂಪತಿ ಅರೆಸ್ಟ್

    ದೆಹಲಿ ಹಿಂಸಾಚಾರ ಪ್ರಚೋದನೆ- ಉಗ್ರ ಸಂಘಟನೆ ನಂಟು ಹೊಂದಿದ್ದ ಕಾಶ್ಮೀರಿ ದಂಪತಿ ಅರೆಸ್ಟ್

    ನವದೆಹಲಿ: ದೆಹಲಿ ಹಿಂಸಾಚಾರ ಪ್ರಚೋದನೆ ನೀಡಿದ್ದ ಹಾಗೂ ಉಗ್ರ ಸಂಘಟನೆ ನಂಟು ಹೊಂದಿದ್ದ ಕಾಶ್ಮೀರಿ ದಂಪತಿಯನ್ನು ದೆಹಲಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

    ಶ್ರೀನಗರದ ನಿವಾಸಿಗಳಾದ ಜಹಾಂಜೇಬ್ ಮತ್ತು ಹೀನಾ ಬಶೀರ್ ಬೇಗ್ ಬಂಧಿತರು. ಆರೋಪಿಗಳನ್ನು ಜಾಮಿಯಾ ನಗರದಿಂದ ಬಂಧಿಸಲಾಗಿದೆ ಎಂದು ದೆಹಲಿಯ ಒಪೊಲೀಸ್ ಹಿರಿಯ ಅಧಿಕಾರಿ ಪ್ರಮೋದ್ ಸಿಂಗ್  ಕುಶ್ವಾಹ್ ತಿಳಿಸಿದ್ದಾರೆ.

    ಆರೋಪಿಗಳು ಮುಸ್ಲಿಂ ಯುವಕರನ್ನು ಪ್ರಚೋದಿಸುವ ಮೂಲಕ ಸಿಎಎ ವಿರುದ್ಧದ ಪ್ರತಿಭಟನೆ ವೇಳೆ ಆತ್ಮಾಹುತಿ ದಾಳಿಗೆ ಹಂಚು ರೂಪಿಸಿದ್ದರು ಎಂಬ ಸತ್ಯ ಬೆಳಕಿಗೆ ಬಂದಿದೆ. ಬಂಧಿತ ಬಳಿ ಇದ್ದ ಎಲೆಕ್ಟ್ರಾನಿಕ್ ಗ್ಯಾಜೆಟ್‍ಗಳು ಮತ್ತು ಜಿಹಾದಿ ದಾಖಲೆಗಳು ಪೊಲೀಸರಿಗೆ ಸಿಕ್ಕಿವೆ. ಅಷ್ಟೇ ಅಲ್ಲದೆ ಆರೋಪಿಗಳು ಅಫ್ಘಾನಿಸ್ತಾನದ ಉಗ್ರ ಸಂಘಟನೆ ಐಎಸ್‍ಕೆಪಿಯ ಉನ್ನತ ನಾಯಕರೊಂದಿಗೆ ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ತನಿಖೆಯ ವೇಳೆ ತಿಳಿದುಬಂದಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

    ಐಎಸ್‍ಕೆಪಿ (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಲೆವಂಟ್-ಖೊರಾಸಮ್) ಎಂಬ ಭಯೋತ್ಪಾದಕ ಸಂಘಟನೆಯೊಂದಿಗೆ ಜಹಾಂಜೇಬ್ ಭಾಗಿಯಾಗಿರುವ ಬಗ್ಗೆ ಭಾರತೀಯ ಗುಪ್ತಚರ ಸಂಸ್ಥೆಗೆ ಮಾಹಿತಿ ನೀಡಲಾಗಿತ್ತು. ಐಎಸ್‍ಕೆಪಿ ಅಫ್ಘಾನಿಸ್ತಾನದಲ್ಲಿ ಐಸಿಸ್ ಅಂಗಸಂಸ್ಥೆಯಾಗಿದೆ. ಜಹಾಂಜೇಬ್ ಆತ್ಮಾಹುತಿ ಬಾಂಬ್ ದಾಳಿ ನಡೆಸಲು ಯತ್ನಿಸುತ್ತಿದ್ದ. ಅದಕ್ಕಾಗಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲು ಪ್ರಾರಂಭಿಸಿದ್ದ. ಅಷ್ಟೇ ಅಲ್ಲದೆ ಇಂಟರ್ನೆಟ್ ಮೂಲಕ ಭಯೋತ್ಪಾದಕ ಸಂಘಟನೆಗಳನ್ನು ಉತ್ತೇಜಿಸಿ, ಜಮ್ಮು ಮತ್ತು ಕಾಶ್ಮೀರದ ಹೊರಗೆ ಇಡೀ ದೇಶಕ್ಕೆ ಐಎಸ್‍ಕೆಪಿಯನ್ನು ಹರಡಲು ಅವರು ಬಯಸಿದ್ದ.

    ಜಹಾಂಜೇಬ್ ಪತ್ನಿ ಹೀನಾ ಬಶೀರ್ ಬೇಗ್ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಐಸಿಸ್ ಅನ್ನು ಬೆಂಬಲಿಸುವಲ್ಲಿ ಸಕ್ರಿಯವಾಗಿದ್ದಳು. ಭಯೋತ್ಪಾದಕ ಚಟುವಟಿಕೆಗಳಿಗೆ ಸೂಕ್ತ ಜನರನ್ನು ಗುರುತಿಸುವಲ್ಲಿ ಅವಳು ಭಾಗಿಯಾಗಿದ್ದಳು. ಪ್ರಾಥಮಿಕ ವಿಚಾರಣೆಯಲ್ಲಿ ಜಹಾಂಜೇಬ್, ಐಸಿಸ್ ನಿಯತಕಾಲಿಕೆಯ ಸ್ವಾತ್ ಅಲ್-ಹಿಂದ್‍ನ ಫೆಬ್ರವರಿ ಆವೃತ್ತಿಯನ್ನು ಪ್ರಕಟಿಸುವಲ್ಲಿ ತೊಡಗಿಸಿಕೊಂಡಿದ್ದ ಎಂದು ಹೇಳಿದ್ದಾನೆ. ಸಿಎಎಯನ್ನು ವಿರೋಧಿಸುವ ಜನರಿಗೆ ಜಿಹಾದಿ ಮಾರ್ಗವನ್ನು ತೆಗೆದುಕೊಳ್ಳುವಂತೆ ಆ ನಿಯತಕಾಲಿಕೆ ಮನವಿ ಮಾಡಿತ್ತು. ಫೆಬ್ರವರಿ 24ರಂದು ಪತ್ರಿಕೆ ಆನ್‍ಲೈನ್‍ನಲ್ಲಿ ಬಿಡುಗಡೆಯಾಗಿತ್ತು. ಪ್ರಜಾಪ್ರಭುತ್ವವು ನಿಮ್ಮನ್ನು ಜನರನ್ನು ಉಳಿಸುವುದಿಲ್ಲ ಎಂದು ಅದು ಬರೆದಿದೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ.

  • CAA ವಿರೋಧಿಸಿ ಪ್ರತಿಭಟನೆ – ಆರು ವರ್ಷ ಹಿಂದೆ ಮೃತಪಟ್ಟವರಿಗೆ ನೋಟಿಸ್ ನೀಡಿದ ಜಿಲ್ಲಾಡಳಿತ

    CAA ವಿರೋಧಿಸಿ ಪ್ರತಿಭಟನೆ – ಆರು ವರ್ಷ ಹಿಂದೆ ಮೃತಪಟ್ಟವರಿಗೆ ನೋಟಿಸ್ ನೀಡಿದ ಜಿಲ್ಲಾಡಳಿತ

    ಲಕ್ನೋ: ಆರು ವರ್ಷಗಳ ಹಿಂದೆ ಪಿರೋಜಾಬಾದ್ ನಲ್ಲಿ ಮೃತರಾಗಿದ್ದ 87 ವರ್ಷದ ಬನ್ನೆಖಾನ್, ನ್ಯೂಮೋನಿಯಾದಿಂದ ಬಳಲಿ ದೆಹಲಿಯ ಗಂಗಾರಾಮ್ ಆಸ್ಪತ್ರೆಯಿಂದ ವಾಪಸ್ ಆದ 90 ವರ್ಷದ ಸೂಫಿ ಅನ್ಸಾರ್ ಹುಸೇನ್, ತಿಂಗಳುಗಳಿಂದ ಆರೋಗ್ಯ ಹದಗೆಟ್ಟು ಮಲಗಿರುವ ಕೊಟ್ಲಾ ಮೊಹಲ್ಲಾದ 93 ವರ್ಷದ ಫಸಹತ್ ಮೀರ್ ಖಾನ್ ಇವರೆಲ್ಲ ಸದ್ಯ ಜಾಮೀನು ಪಡೆಯಬೇಕಿದೆ.

    ಸಿಎಎ ವಿರೋಧಿಸಿ ಉತ್ತರ ಪ್ರದೇಶದಲ್ಲಿ ಪ್ರತಿಭಟನೆಗಳಾಗುತ್ತಿದ್ದು, ಸಾಕಷ್ಟು ಮಂದಿಗೆ ನೋಟಿಸ್ ನೀಡಲಾಗಿದೆ. ನೋಟಿಸ್ ನೀಡುವ ಆತುರದಲ್ಲಿ ಮೃತ ವ್ಯಕ್ತಿಗಳು ಹಾಗೂ ವಯೋವೃದ್ಧರಿಗೂ ನೋಟಿಸ್ ನೀಡಿ ಈಗ ಉತ್ತರ ಪ್ರದೇಶ ಸರ್ಕಾರ ಟೀಕೆಗೆ ಗುರಿಯಾಗಿದೆ. ಈ ರೀತಿಯ ಸುಮಾರು 200 ಹೆಚ್ಚು ಮಂದಿ ಮ್ಯಾಜಿಸ್ಟ್ರೇಟ್ ಮುಂದೆ ಹೋಗಿ ಸಮಾಜದ ಶಾಂತಿ ಕದಡುವುದಿಲ್ಲ ಎಂದು ಜಾಮೀನು ಪಡೆಯಬೇಕಿದೆ.

    ಫಿರೋಜಾಬಾದ್ ಜಿಲ್ಲಾ ಮ್ಯಾಜಿಸ್ಟ್ರೇಟ್ ವ್ಯಾಪ್ತಿಯಲ್ಲಿ ಫಸಹತ್ ಮೀರ್ ಖಾನ್ ಮತ್ತು ಸೂಫಿ ಅನ್ಸಾರ್ ಹುಸೇನ್ ಇಬ್ಬರೂ ಸ್ಥಳೀಯ ಶಾಂತಿ ಸಮಿತಿಗಳ ಸದಸ್ಯರಾಗಿದ್ದರು. ಕಳೆದ ಎರಡು ವಾರಗಳ ಹಿಂದೆ ಇವರನ್ನು ಭೇಟಿ ಮಾಡಿದ್ದ, ಜಿಲ್ಲಾಧಿಕಾರಿ ಚಂದ್ರ ವಿಜಯ್ ಸಿಂಗ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಚೀಂದ್ರ ಪಟೇಲ್ ಈ ಪ್ರದೇಶದಲ್ಲಿ ಶಾಂತಿ ಸಂದೇಶವನ್ನು ಹರಡುವಂತೆ ಮನವಿ ಮಾಡಿದ್ದರು.

    ಫಸಹತ್ ಮೀರ್ ಖಾನ್ ಮತ್ತು ಸೂಫಿ ಅನ್ಸಾರ್ ಹುಸೇನ್ ಅವರ ಮನೆಯಿಂದ ಕೂಗಳತೆ ದೂರದಲ್ಲಿರುವ ಮೃತ ಬನ್ನೆಖಾನ್ ಅವರ ಹಿರಿಯ ಪುತ್ರ ಪರ್ವೇಜ್ ಖಾನ್ ಗೆ ತಂದೆಗೆ ಜಾಮೀನು ಪಡೆಯುವಂತೆ ಸೂಚಿಸಿದೆ. ಮೃತರನ್ನು ಗಮನಿಸದೇ ಜಿಲ್ಲಾಡಳಿತ ನೋಟೀಸ್ ನೀಡಿದ್ದನ್ನು ವಿರೋಧಿಸಿರುವ ಫರ್ವೆಜ್ ಖಾನ್ ಕನಿಷ್ಠ ಪರಿಶೀಲನೆ ನಡೆಸದೆ ನೋಟಿಸ್ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಪತ್ರಿಕೆಯಲ್ಲಿ ನೋಟಿಸ್ ಬಂದಿರುವುದನ್ನು ಗಮನಿಸಿದ್ದೇನೆ 2014 ರಲ್ಲಿ ತಂದೆ ಊಟ ಮಾಡುವಾಗ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಫರ್ವೇಜ್ ಖಾನ್ ಹೇಳಿದ್ದಾರೆ.

    ಡಿಸೆಂಬರ್ 20 ರಂದು ಸಿಎಎ ವಿರೋಧಿಸಿ ನಡೆದ ಪ್ರತಿಭಟನೆಯ ವೇಳೆ ಹಿಂಸಾಚಾರ ನಡೆದಿತ್ತು ಈ ಹಿನ್ನೆಲೆ ಜಿಲ್ಲಾಡಳಿತವು ಸಿಆರ್ ಪಿಸಿ 107/116 (3) ಸೆಕ್ಷನ್‍ಗಳ ಅಡಿ “ತೊಂದರೆ ಕೊಡುವವರು” ಎಂದು ಪರಿಗಣಿಸಿ ಹಲವರಿಗೆ ನೋಟಿಸ್ ನೀಡಿ ಜಾಮೀನು ಪಡೆಯಲು ಜಿಲ್ಲಾಡಳಿತ ಸೂಚಿಸಿತ್ತು. ಬೀಟ್ ಕಾನ್‍ಸ್ಟೇಬಲ್, ಸಬ್ ಇನ್ ಸ್ಪೆಕ್ಟರ್ ಏರಿಯಾ ಇನ್ ಚಾರ್ಜ್ ಗಳು ಸೇರಿ ಗುಪ್ತಚರ ಇಲಾಖೆ ನೀಡಿದ ಆಧಾರದ ಮೇಲೆ ನೋಟಿಸ್ ನೀಡಲಾಗಿತ್ತು