Tag: Annapoorneshwari Nagar

  • Bengaluru | ಮನೆಯ ಎರಡನೇ ಮಹಡಿಯಿಂದ ಬಿದ್ದು ಪಿಯುಸಿ ವಿದ್ಯಾರ್ಥಿನಿ ಸಾವು

    Bengaluru | ಮನೆಯ ಎರಡನೇ ಮಹಡಿಯಿಂದ ಬಿದ್ದು ಪಿಯುಸಿ ವಿದ್ಯಾರ್ಥಿನಿ ಸಾವು

    ಬೆಂಗಳೂರು: ಮನೆಯ ಮಹಡಿಯಿಂದ ಬಿದ್ದು ಪಿಯುಸಿ ವಿದ್ಯಾರ್ಥಿನಿ (PUC Student) ಸಾವನ್ನಪ್ಪಿದ ಘಟನೆ ಬೆಂಗಳೂರಿನ (Bengaluru) ಅನ್ನಪೂರ್ಣೇಶ್ವರಿ ನಗರದಲ್ಲಿ (Annapoorneshwari Nagar) ನಡೆದಿದೆ.

    ಪ್ರಿಯಾಂಕಾ (19) ಮೃತ ಯುವತಿ. ಖಾಸಗಿ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಪ್ರಿಯಾಂಕಾ ಮನೆಯ ಎರಡನೇ ಮಹಡಿಯಿಂದ ಆಯತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ: ಹಾಸನ | ಕಂಠಪೂರ್ತಿ ಕುಡಿದು ಪತ್ನಿಗೆ ಚಾಕು ಇರಿದು ಕೊಂದ ಪತಿ

    ಬುಧವಾರ ಸಂಜೆ ಕಾಲೇಜು ಮುಗಿಸಿ ಮನೆಗೆ ಬಂದ ನಂತರ ಪ್ರಿಯಾಂಕಾ ತನ್ನ ಅಮ್ಮ ಟೇರೆಸ್ ಮೇಲೆ ಬಟ್ಟೆ ಒಣಹಾಕುತ್ತಿದ್ದ ವಿಚಾರ ತಿಳಿದು ಟೇರೆಸ್‌ಗೆ ಹೊಗಿದ್ದಾಳೆ. ಎರಡನೇ ಮಹಡಿಗೆ ಹೋಗುತ್ತಿದ್ದಂತೆ ಮೆಟ್ಟಿಲ ಬಳಿ ಕಾಲು ಜಾರಿ ಕೆಳಗೆ ಬಿದ್ದಿದ್ದಾಳೆ. ಮೇಲಿಂದ ಬಿದ್ದ ಪರಿಣಾಮ ತೀವ್ರ ರಕ್ತಸ್ರಾವವಾಗಿ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಪ್ರಿಯಾಂಕಾ ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ: ಐವರು ಐಸಿಸ್ ಉಗ್ರರು ಅರೆಸ್ಟ್‌ – ಭಾರೀ ಪ್ರಮಾಣದ ಕೆಮಿಕಲ್‌ ವೆಪೆನ್‌ ಪತ್ತೆ

    ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಇದನ್ನೂ ಓದಿ: Hyderabad | ಕಟ್ಟಿಹಾಕಿ, ಪ್ರೆಷರ್ ಕುಕ್ಕರ್‌ನಿಂದ ಹೊಡೆದು ಮಹಿಳೆಯ ಭೀಕರ ಕೊಲೆ

  • ಬೆಂಗಳೂರು| ಲೋನ್ ರಿಕವರಿಗೆ ಹೋದ ಬ್ಯಾಂಕ್ ಸಿಬ್ಬಂದಿಗೆ ಕಲ್ಲೇಟು

    ಬೆಂಗಳೂರು| ಲೋನ್ ರಿಕವರಿಗೆ ಹೋದ ಬ್ಯಾಂಕ್ ಸಿಬ್ಬಂದಿಗೆ ಕಲ್ಲೇಟು

    ಬೆಂಗಳೂರು: ಲೋನ್ ರಿಕವರಿಗೆ (Loan Recovery) ಹೋದ ಬ್ಯಾಂಕ್ ಸಿಬ್ಬಂದಿಗೆ (Bank Staff) ಕಲ್ಲಿನಿಂದ ತಲೆಗೆ ಹೊಡೆದಿರುವ ಘಟನೆ ಬೆಂಗಳೂರಿನ (Bengaluru) ಅನ್ನಪೂರ್ಣೇಶ್ವರಿ ನಗರದಲ್ಲಿ ನಡೆದಿದೆ.

    ಚಂದನ್ ಕಲ್ಲೇಟು ತಿಂದ ಬ್ಯಾಂಕ್ ಸಿಬ್ಬಂದಿ. ರಮೇಶ್ ಎಂಬಾತ ಕಳೆದ ಎರಡು ತಿಂಗಳಿನಿಂದ ಇಎಂಐ ಕಟ್ಟಿರಲಿಲ್ಲ. ಫೋನ್ ಮಾಡಿದರೆ ರಿಸೀವ್ ಮಾಡುತ್ತಿರಲಿಲ್ಲ. ಕೊನೆಗೆ ಫೋನ್ ರಿಸಿವ್ ಮಾಡಿದ ರಮೇಶ್ ನಾಗರಭಾವಿಯ ಬಿಡಿಎ ಕಾಂಪ್ಲೆಕ್ಸ್ ಬಳಿ ಬರುವಂತೆ ಸಿಬ್ಬಂದಿಗೆ ಹೇಳಿದ್ದ. ಬ್ಯಾಂಕ್ ಸಿಬ್ಬಂದಿ ಸ್ಥಳಕ್ಕೆ ಹೋದ ವೇಳೆ ಲೋನ್ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ರಮೇಶ್ ಏಕಾಏಕಿ ಅಲ್ಲೇ ಇದ್ದ ಕಲ್ಲಿನಿಂದ ಬ್ಯಾಂಕ್ ಸಿಬ್ಬಂದಿ ಚಂದನ್ ಮೇಲೆ ಕಲ್ಲೂ ತೂರಿ ಎಸ್ಕೇಪ್ ಆಗಿದ್ದಾನೆ. ಇದನ್ನೂ ಓದಿ: ಹಸೆಮಣೆ ಏರಬೇಕಿದ್ದ ಮಹಿಳೆ ರೋಲರ್‌ ಕೋಸ್ಟರ್‌ ಆಡುವಾಗ ಕೆಳಗೆ ಬಿದ್ದು ಸಾವು

    ಘಟನೆಯಿಂದ ಬ್ಯಾಂಕ್ ಸಿಬ್ಬಂದಿ ಚಂದನ್ ತಲೆಗೆ ಗಂಭೀರವಾದ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆ ಸಂಬಂಧ ಅನ್ನಪೂರ್ಣೇಶ್ವರಿ ನಗರ (Annapoorneshwari Nagar) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕಟೀಲ್‌ಗೆ ಮತ್ತೆ ರಾಜಕೀಯ ಸ್ಥಾನಮಾನ ಸಿಗಲಿ: ಮಧೂರು ದೇವಸ್ಥಾನದಲ್ಲಿ ಡಿಕೆಶಿ ಪ್ರಾರ್ಥನೆ

  • ಐಷಾರಾಮಿ ಮದ್ವೆ, 3 ತಿಂಗಳಲ್ಲಿ ಸಂಸಾರ ಬೀದಿಗೆ – ಪತ್ನಿಯನ್ನು ಮನೆಯಿಂದ ಹೊರಹಾಕಿದ ಕುಡುಕ ಪತಿ!

    ಐಷಾರಾಮಿ ಮದ್ವೆ, 3 ತಿಂಗಳಲ್ಲಿ ಸಂಸಾರ ಬೀದಿಗೆ – ಪತ್ನಿಯನ್ನು ಮನೆಯಿಂದ ಹೊರಹಾಕಿದ ಕುಡುಕ ಪತಿ!

    ಬೆಂಗಳೂರು: ಅವಳು ಎಂಜಿನಿಯರ್ ಓದಿಕೊಂಡ ವಿದ್ಯಾವಂತ ಯುವತಿ. ಆದರೆ ಒಬ್ಬನೇ ಮಗ, ಸ್ವಂತ ಮನೆ ಬೇರೆ ಇದೆ ಅಂತಾ ಬಿಬಿಎಂಪಿ ಕಾಂಟ್ರಾಕ್ಟರ್ ಜೊತೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಗ್ರ್ಯಾಂಡ್‌ ಆಗಿ ಮದುವೆ ಮಾಡಿಕೊಟ್ಟಿದ್ರು. ಆದ್ರೆ ಮದುವೆಯಾದ ಮೂರೇ ತಿಂಗಳಿಗೆ, ಪತ್ನಿಯನ್ನು ಬಟ್ಟೆ ಬರೇ ಸಮೇತ ಗಂಡನ ಮನೆಯವರು ಬೀದಿಗೆ ತಳ್ಳಿದ್ದಾರೆ.

    ಸದ್ಯ ಅನ್ಯಾಯಕ್ಕೊಳಗಾಗಿ ಅಸಹಾಯಕಳಾಗಿ ನಿಂತಿರುವುದು ಬೆಂಗಳೂರಿನ ನಗರವಾಸಿ ಭವ್ಯ. ಈಕೆ ಎಂಜಿನಿಯರಿಂಗ್ ಓದಿದ ವಿದ್ಯಾವಂತೆ. ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆ ಒಳ್ಳೆ ಕಡೆಗೆ ಮದುವೆ ಮಾಡಿಕೊಡಬೇಕು ಎಂದು ಪೋಷಕರು, ಮ್ಯಾಟ್ರಿಮೋನಿಯಲ್ಲಿ ಭವ್ಯಳ ಡಿಟೈಲ್ಸ್ ಹಾಕಿದ್ರು. ಅಷ್ಟರಲ್ಲೇ ಓರ್ವ ತಾನು ಬಿಬಿಎಂಪಿ ಕ್ಲಾಸ್-1 ಕಂಟ್ರಾಕ್ಟರ್ ನಾನು ಕೂಡ ಎಂಜಿನಿಯರಿಂಗ್ ಮಾಡಿಕೊಂಡಿದ್ದೀನಿ.

    ನಾಗರಭಾವಿಯಲ್ಲಿ ಸ್ವಂತ ಮನೆಯಿದೆ. ಜೊತೆಗೆ ಒಬ್ಬನೇ ಮಗ ಅಂತಾ ಭವ್ಯ ಕುಟುಂಬದ ಬಳಿ ಮದುವೆ ಪ್ರಸ್ತಾಪ ಮಾಡಿದ್ದಾನೆ. ಯುವತಿ ಮನೆಯವರು ಕೂಡ ಹೇಗೋ ನಮ್ ಹುಡುಗಿ ಚೆನ್ನಾಗಿದ್ರೆ ಸಾಕು ಅಂತಾ 50 ಲಕ್ಷ ಖರ್ಚು ಮಾಡಿ ಕಳೆದ ಮೂರು ತಿಂಗಳ ಹಿಂದೆಯೇ ಕೇಳಿದ್ದ ರೆಸಾರ್ಟ್‌ನಲ್ಲೇ ಮದುವೆ ಮಾಡಿಕೊಟ್ಟಿದ್ರು. ಇದನ್ನೂ ಓದಿ: ತೈವಾನ್ ಸುತ್ತ ಚೀನಾ ಮಿಲಿಟರಿಗೆ ತರಬೇತಿ- ಯುದ್ಧಕ್ಕೆ ಸಿದ್ಧತೆ!

    ಅತ್ತೆ, ನಾದಿನಿ ಜೊತೆಗೆ ಪ್ರತಿದಿನ ಎಣ್ಣೆಪಾರ್ಟಿ: ಮದುವೆಯಾದ ಒಂದೇ ವಾರಕ್ಕೆ ಈ ಪುರುಷ ಮಹಾಷಯನ ಬಂಡವಾಳ ಬಯಲಾಗೋಕೆ ಶುರುವಾಗಿದೆ. ಎಂಜಿನಿಯರ್ ಅಂತಾ ಮದುವೆಯಾಗಿದ್ದನು ಓದಿರೋದು ಪಿಯುಸಿ ಎಂದು ಗೊತ್ತಾಗಿದೆ. ಕಾಂಟ್ರಕ್ಟರ್ ಅಂದವನು ನಾಯಿಗಳಿಗೆ ಫುಡ್ ಮಾರೋ ಕೆಲಸ ಮಾಡ್ತಿದ್ದನಂತೆ. ಇಷ್ಟೇ ಅಲ್ಲದೇ ಪ್ರತಿದಿನ ಗಂಡ-ಅತ್ತೆ-ಮಾವ-ನಾದಿನಿ ಸೇರಿಕೊಂಡು ಮನೆಯಲ್ಲೇ ಪ್ರತಿದಿನ ಒಟ್ಟಿಗೇ ಕೂತು ಎಣ್ಣೆ ಪಾರ್ಟಿ ಮಾಡುತ್ತಿದ್ದರಂತೆ. ಅದಕ್ಕೆ ಬೇಕಾದ ಎಲ್ಲಾ ಸ್ನಾಕ್ಸ್ ಭವ್ಯಳೇ ಮಾಡಿ ತಗೋಬರಬೇಕಿತ್ತು. `ಏನ್ರಿ ರೀ ಇದು ಅಂತಾ ಪ್ರಶ್ನೇ ಮಾಡಿದ್ರೆ’, ಹೇಳಿದಷ್ಟು ಮಾಡಬೇಕು ಅಂತಾ ಪತ್ನಿ ಮೇಲೆ ಹಿಗ್ಗಾಮುಗ್ಗ ಥಳಿಸುತ್ತಿದ್ದನಂತೆ. ಕಳೆದ ಕೆಲ ದಿನಗಳಿಂದ ಇದೇ ರೀತಿ ಕಿರುಕುಳ ಕೊಡ್ತಿದ್ದ ಗಂಡನ ಮನೆಯವರು. ನಿನ್ನೆ ಏಕಾಏಕಿ ಭವ್ಯಳ ಎಲ್ಲಾ ಬಟ್ಟೆಗಳನ್ನು ಹೊರಗೆ ಎಸೆದು ಆಕೆಯನ್ನು ಸುರಿಯುವ ಮಳೆಯಲ್ಲೇ ಹೊರಗೆ ತಬ್ಬಿದ್ದಾರೆ. ಇದನ್ನೂ ಓದಿ: ಶಿಕ್ಷಕಿ ಕೊಲೆ ಪ್ರಕರಣ- ನಗರಸಭೆ ಕೌನ್ಸಿಲರ್ ಸೇರಿ ನಾಲ್ವರ ಬಂಧನ

    ವಿಚಾರ ತಿಳಿದು ಸ್ಥಳಕ್ಕೆ ಬಂದ ಪೋಷಕರು ಮದುವೆಯಾದ ಮೂರೇ ತಿಂಗಳಿಗೆ ಮಗಳ ಈ ಸ್ಥಿತಿ ಕಂಡು ಕಣ್ಣೀರಿಟ್ಟಿದ್ದಾರೆ. ಸದ್ಯ ಅನ್ನಪೂರ್ಣೆಶ್ವರಿನಗರ ಪೊಲೀಸರಿಗೆ ಈ ಸಂಬಂಧ ದೂರು ನೀಡಿದ್ದಾರೆ. ಇತ್ತ ಬೆಂಗಳೂರಿನಲ್ಲಿ ಆಸ್ತಿ ಅಂತಸ್ತು ಇದೆ ಅಂತಾ ಹಿಂದೆ ಮುಂದೆ ನೋಡದೇ ಮಕ್ಕಳನ್ನು ಮದುವೆ ಮಾಡಿಕೋಡುವ ಮುಂಚೆ ಪೋಷಕರು ಎಚ್ಚರವಹಿಸಬೇಕಿದೆ ಎಂದು ಭವ್ಯಾಳ ಅಣ್ಣ ಪುನೀತ್ ಮನವಿ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]