Tag: anklet

  • ಅಂದಕಷ್ಟೇ ಅಲ್ಲ ಉತ್ತಮ ಆರೋಗ್ಯಕ್ಕೂ ಧರಿಸಿ ಕಾಲ್ಗೆಜ್ಜೆ

    ಅಂದಕಷ್ಟೇ ಅಲ್ಲ ಉತ್ತಮ ಆರೋಗ್ಯಕ್ಕೂ ಧರಿಸಿ ಕಾಲ್ಗೆಜ್ಜೆ

    ಇಂದು ಮಹಿಳೆಯರು ತಮ್ಮ ಅಂದವನ್ನು ಹೆಚ್ಚಿಸಿಕೊಳ್ಳಲು ವಿಭಿನ್ನ ರೀತಿಯ ಕಾಲ್ಗೆಜ್ಜೆಯನ್ನು ಧರಿಸುತ್ತಾರೆ. ಆದರೆ ಬೆಳ್ಳಿಯ ಕಾಲ್ಗೆಜ್ಜೆಯನ್ನು ಧರಿಸುವುದರಿಂದ ಅಂದ ಹೆಚ್ಚಾಗುವುದರ ಜೊತೆಗೆ ಆರೋಗ್ಯದ ಮೇಲೂ ಪರಿಣಾಮ ಬೀಳುತ್ತದೆ. ಬೆಳ್ಳಿಯು ನಿಮ್ಮ ದೇಹವನ್ನು ರೋಗಗಳಿಂದ ದೂರ ಇರುವಂತೆ ನೋಡಿಕೊಳ್ಳುತ್ತದೆ. ಜೊತೆಗೆ ಕಾಲ್ಗೆಜ್ಜೆಯನ್ನು ಧರಿಸುವುದರಿಂದ ಅನೇಕ ವೈಜ್ಞಾನಿಕ ಉಪಯೋಗವಿದೆ.

    ಬ್ಯಾಕ್ಟೀರಿಯಾ ನಾಶ: ಬೆಳ್ಳಿಯಲ್ಲಿ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುವ ಗುಣವಿದೆ. ಸಾವಿರ ವರ್ಷಗಳ ಹಿಂದೆ ನಾವಿಕರು ದೂರದ ಪ್ರಯಾಣ ಬೆಳೆಸುವಾಗ ಬೆಳ್ಳಿಯ ನಾಣ್ಯಗಳನ್ನು ನೀರಿನ ಬಾಟಲಿಯಲ್ಲಿ ಹಾಕಿರುತ್ತಿದ್ದರಂತೆ. ಇದರಿಂದಾಗಿ, ಬ್ಯಾಕ್ಟೀರಿಯಾಗಳು ನಾಶ ಹೊಂದುತ್ತವೆ ಎಂಬ ಉದ್ದೇಶ ಹೊಂದಿದ್ದರು. ಇದೇ ಕಾರಣದಿಂದಾಗಿ ಮಹಿಳೆಯರಿಗೆ ಬೆಳ್ಳಿಯ ಕಾಲ್ಗೆಜ್ಜೆಗಳನ್ನು ಧರಿಸುವುದು ಉತ್ತಮವಾಗಿದೆ. ಇದನ್ನೂ ಓದಿ: ಮಜ್ಜಿಗೆಯಲ್ಲಿದೆ ಮದ್ದಿನ ಗುಣ- ಪ್ರತಿನಿತ್ಯ ಒಂದು ಲೋಟ ಮಜ್ಜಿಗೆ ಕುಡಿದು ನೋಡಿ

    ಕಾಲು ನೋವು ಶಮನ: ಮಹಿಳೆಯರು ಹೆಚ್ಚಿನ ಸಮಯ ಅಡುಗೆ ಮನೆ, ಮನೆ ಸ್ವಚ್ಛಗೊಳಿಸುವುದು ಸೇರಿದಂತೆ ಅನೇಕ ಕೆಲಸಗಳನ್ನು ಮಾಡುವುದರಲ್ಲೇ ಕಳೆಯುತ್ತಾರೆ. ಬೆಳಗ್ಗಿನಿಂದ ಸಂಜೆಯ ತನಕ ನಿಂತುಕೊಂಡು ಹೆಚ್ಚಿನ ಕೆಲಸ ಮಾಡುವುದರಿಂದ ಪಾದಗಳಲ್ಲಿ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಪಾದಗಳಲ್ಲಿ ಪ್ರಾರಂಭವಾಗುವ ಈ ನೋವುಗಳು ಕ್ರಮೇಣ ಬೆನ್ನು ಹಾಗೂ ಸೊಂಟಗಳಿಗೂ ಹಬ್ಬಿಕೊಳ್ಳುವ ಸಂಭವ ಇರುತ್ತದೆ. ಆದರೆ, ಬೆಳ್ಳಿಯ ಕಾಲ್ಗೆಜ್ಜೆಯನ್ನು ಧರಿಸುವುದರಿಂದ ಪಾದಗಳಲ್ಲಿ ಉಂಟಾಗುವ ನೋವನ್ನು ಅಲ್ಲಿಯೇ ತಡೆಗಟ್ಟಬಹುದು. ಜೊತೆಗೆ ರಕ್ತ ಸಂಚಾರವನ್ನು ಸುಗಮಗೊಳಿಸುತ್ತದೆ. ಇದನ್ನೂ ಓದಿ: ಬಾಯಿ ದುರ್ವಾಸನೆ ಬರುತ್ತಿದ್ಯಾ? ಹಾಗಿದ್ರೆ ಈ ಮನೆ ಮದ್ದು ಬಳಕೆ ಮಾಡಿ

    ರೋಗ ನಿರೋಧಕ ಶಕ್ತಿ ಹೆಚ್ಚಳ: ಬೆಳ್ಳಿಯ ಆಭರಣಗಳನ್ನು ಧರಿಸುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದರಿಂದಾಗಿ ಪದೇ ಪದೇ ಆರೋಗ್ಯ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆಗಳು ಕಡಿಮೆ ಇರುತ್ತದೆ. ಮಹಿಳೆಯರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಕೂಡ ಬೆಳ್ಳಿಯ ಕಾಲ್ಗೆಜ್ಜೆಗಳನ್ನು ಧರಿಸಬೇಕು. ಇದನ್ನೂ ಓದಿ: ದೇಹದ ತೂಕ ಮುಜುಗರ ಉಂಟುಮಾಡುತ್ತಿದೆಯಾ? ರಾಮಬಾಣದಂತಿವೆ ಈ ಮನೆಮದ್ದುಗಳು

    ಮುಟ್ಟಿನ ಸಮಸ್ಯೆ ನಿವಾರಣೆ: ದೇಹದ ಹಾರ್ಮೋನ್‍ಗಳನ್ನು ಸಮತೋಲನದಲ್ಲಿ ಇಡಲು ಸಹಾಯ ಮಾಡುತ್ತದೆ. ಇದರಿಂದಾಗಿ ಮಹಿಳೆಯರು ಮುಟ್ಟಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ಜೊತೆಗೆ ಆರೋಗ್ಯಕರ ಗರ್ಭಾಶಯವನ್ನು ಕಾಪಾಡಿಕೊಳ್ಳುತ್ತದೆ. ಇದನ್ನೂ ಓದಿ: ಹೊಟ್ಟೆ ಸಮಸ್ಯೆ ನಿವಾರಣೆಗೆ ಇಲ್ಲಿದೆ ಮನೆಮದ್ದು

  • ಕಾಲು ಗೆಜ್ಜೆಗಾಗಿ ಕಾಲನ್ನೇ ಕತ್ತರಿಸಿದ ಹಂತಕರು

    ಕಾಲು ಗೆಜ್ಜೆಗಾಗಿ ಕಾಲನ್ನೇ ಕತ್ತರಿಸಿದ ಹಂತಕರು

    ಜೈಪುರ್: ಬೆಳ್ಳಿ ಕಾಲು ಗೆಜ್ಜೆಗಾಗಿ ಮಹಿಳೆಯ ಕಾಲನ್ನು ಹಂತಕರು ಕತ್ತರಿಸಿ ಕಳ್ಳತನ ಮಾಡಿರುವ ಘಟನೆ ರಾಜಸ್ಥಾನದ ಜೈಪುರ ಜಿಲ್ಲೆಯ ಜಮ್ವಾ ರಾಮಗಢದಲ್ಲಿ ನಡೆದಿದೆ.

    ಗೀತಾ ದೇವಿ ಶರ್ಮಾ(55) ಮೃತ ಮಹಿಳೆಯಾಗಿದ್ದಾಳೆ. ದರೋಡೆಕೋರರು ಆಕೆಯ ಕಾಲಿನಲ್ಲಿದ್ದ ಬೆಳ್ಳಿಯ ಗೆಜ್ಜೆಗಳನ್ನು ತೆಗೆಯಲಾಗದೆ ಪಾದಗಳನ್ನೇ ಕತ್ತರಿಸಿದ್ದಾರೆ. ಕಳ್ಳರು ಮನೆಯಲ್ಲಿದ್ದ ಹಣ, ಚಿನ್ನಾಭರಣಗಳನ್ನು ದೋಚಿಕೊಂಡು ಓಡಿಹೋಗುವ ಮುನ್ನ ಮನೆಯ ಪಕ್ಕದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಕೊಂದು ಆಕೆಯ ಸರ, ಕಿವಿಯೋಲೆಗಳನ್ನು ಕಿತ್ತುಕೊಂಡು ಹೋಗಿದ್ದಾರೆ.

    ಮನೆಗೆ ನುಗ್ಗಿದ ದುಷ್ಕರ್ಮಿಗಳು ಮನೆಯಲ್ಲಿದ್ದ ಬೆಲೆ ಬಾಳುವ ವಸ್ತುಗಳು, ಹಣವನ್ನು ಬಾಚಿಕೊಂಡಿದ್ದಾರೆ. ನಂತರ ಶಬ್ದ ಕೇಳಿ ಮನೆಯತ್ತ ಬರುತ್ತಿದ್ದ ಆಕೆ ಮೇಲೆ ಹೊಲದಲ್ಲೇ ದಾಳಿ ಮಾಡಿದ ದರೋಡೆಕೋರರು ಆಕೆಯ ಮೈಮೇಲಿದ್ದ ಚಿನ್ನಾಭರಣಗಳನ್ನು ಕಿತ್ತುಕೊಂಡಿದ್ದಾರೆ. ನಂತರ ಆಕೆಯನ್ನು ಕೊಲೆ ಮಾಡಿ ಓಡಿಹೋಗುವಾಗ ಕೆಳಗೆ ಬಿದ್ದಿದ್ದ ಆಕೆಯ ಕಾಲಿನಲ್ಲಿದ್ದ ಬೆಳ್ಳಿ ಗೆಜ್ಜೆ ಅವರ ಕಣ್ಣಿಗೆ ಬಿದ್ದಿದೆ. ಹೀಗಾಗಿ ಮಹಿಳೆಯ ಕಾಲು ಕತ್ತರಿಸಿ ಗೆಜ್ಜೆಯನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ. ಇದನ್ನೂ ಓದಿ: ಬಿಜೆಪಿ ಸಾಧನೆ ಶೂನ್ಯ, ಅವಹೇಳನಕಾರಿ ಮಾತಾಡ್ತಿದ್ದಾರೆ: ಡಿಕೆಶಿ ಕಿಡಿ

    ಸಂತ್ರಸ್ತೆಯ ಕುಟುಂಬವು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮವನ್ನು ಕೋರಿದೆ. ಹಾಗೇ ರಾಜಸ್ಥಾನ ಸರ್ಕಾರದಿಂದ 25 ಲಕ್ಷ ರೂ. ಪರಿಹಾರ ಮತ್ತು ಸರ್ಕಾರಿ ಉದ್ಯೋಗವನ್ನು ಕೋರಿದೆ. ನನ್ನ ತಾಯಿ ಇಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಯಾರು ದಾಳಿ ಮಾಡಿದರು ಎಂದು ನಮಗೆ ತಿಳಿದಿಲ್ಲ. ತನಿಖೆಗಳ ಬಗ್ಗೆ ಪೊಲೀಸರು ನಮಗೆ ಇದುವರೆಗೂ ಯಾವುದೇ ಮಾಹಿತಿ ನೀಡಿಲ್ಲ.

  • ವಿದ್ಯಾರ್ಥಿನಿಯರು ಕಾಲ್ಗೆಜ್ಜೆ ಧರಿಸಿದ್ರೆ ಹುಡುಗರ ಮನಸ್ಸು ಕದಡುತ್ತೆ: ಶಿಕ್ಷಣ ಮಂತ್ರಿ

    ವಿದ್ಯಾರ್ಥಿನಿಯರು ಕಾಲ್ಗೆಜ್ಜೆ ಧರಿಸಿದ್ರೆ ಹುಡುಗರ ಮನಸ್ಸು ಕದಡುತ್ತೆ: ಶಿಕ್ಷಣ ಮಂತ್ರಿ

    ಚೆನ್ನೈ: ಶಾಲೆಯಲ್ಲಿ ವಿದ್ಯಾರ್ಥಿನಿಯರು ಕಾಲಿನ ಗೆಜ್ಜೆ ಧರಿಸಿದ್ರೆ, ಹುಡುಗರ ಮನಸ್ಸು ಕದಡುತ್ತೆ ಎಂದು ತಮಿಳುನಾಡು ಶಿಕ್ಷಣ ಮಂತ್ರಿ ಕೆ.ಎ.ಸೆಂಗೌಟಯ್ಯನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಶಿಕ್ಷಣ ಮಂತ್ರಿಗಳು ತಮ್ಮ ವಿಧಾನಸಭಾ ಕ್ಷೇತ್ರದ ಗೋಬಿಚೆಟ್ಟಿಪಾಲಯಂ ನಲ್ಲಿ ನಡೆದ ಸೈಕಲ್ ವಿತರಣಾ ಸಮಾರಂಭದಲ್ಲಿ ಭಾಗಿಯಾಗಿದ್ದರು. ಮಕ್ಕಳಿಗೆ ಸೈಕಲ್ ವಿತರಿಸಿ ಮಾತನಾಡಿದ ಸಚಿವರು, ವಿದ್ಯಾರ್ಥಿನಿಯರು ಕಾಲಿನಲ್ಲಿ ಗೆಜ್ಜೆ ಹಾಕುವುದರಿಂದ ಅದರ ಸದ್ದಿನಿಂದ ವಿದ್ಯಾರ್ಥಿಗಳ ಪಠ್ಯದಲ್ಲಿನ ಏಕಾಗ್ರತೆ ಹಾಳಾಗುತ್ತದೆ. ಇನ್ನು ಉಂಗರು ಧರಿಸಿದ್ರೆ ಕಳೆದು ಹೋಗುವ ಸಾಧ್ಯತೆಗಳಿವೆ. ಹಾಗಾಗಿ ಕಾಲ್ಗೆಜ್ಜೆ ಮತ್ತು ಉಂಗುರ ಎರಡನ್ನು ಶಾಲೆಯಲ್ಲಿ ನಿಷೇಧಿಸಿಬೇಕಿದೆ. ವಿದ್ಯಾರ್ಥಿನಿಯರು ಹೂ ಧರಿಸುವುದಕ್ಕೆ ಯಾವುದೇ ಅಭ್ಯಂತರವಿಲ್ಲ ಅಂತಾನೂ ಹೇಳಿದರು.

     

    ಸಚಿವರ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಹುಡುಗಿಯರಿಗೆ ಮಾತ್ರ ಯಾಕೆ ನಿಯಮಗಳು. ಹುಡುಗರು ಶಾಲೆಗಳಿಗೆ ಉದ್ದ ಕೂದಲು ಬಿಟ್ಟುಕೊಂಡು ಬರುತ್ತಾರೆ. ಸ್ಟೈಲಿಶ್ ಬಟ್ಟೆ ಧರಿಸುತ್ತಾರೆ. ಅವರಿಗಿಲ್ಲದ ನಿಯಮ ನಮಗ್ಯಾಕೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

    ಸಚಿವರು ಕೇವಲ ಮಾಧ್ಯಮಗಳ ಜೊತೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಕಾಲಗೆಜ್ಜೆ ಧರಿಸದಂತೆ ಯಾವುದೇ ಸುತ್ತೋಲೆಯನ್ನು ಹೊರಡಿಸಿಲ್ಲ ಎಂದು ತಮಿಳುನಾಡು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 11 ತಿಂಗಳ ಮಗನನ್ನು ಮಾರಿ ಮೊಬೈಲ್ ಫೋನ್, ಸೀರೆ, ಬೆಳ್ಳಿ ಕಾಲ್ಗೆಜ್ಜೆ ಖರೀದಿಸಿದ!

    11 ತಿಂಗಳ ಮಗನನ್ನು ಮಾರಿ ಮೊಬೈಲ್ ಫೋನ್, ಸೀರೆ, ಬೆಳ್ಳಿ ಕಾಲ್ಗೆಜ್ಜೆ ಖರೀದಿಸಿದ!

     

    ಭುವನೇಶ್ವರ್: ವ್ಯಕ್ತಿಯೊಬ್ಬ ತನ್ನ 11 ತಿಂಗಳ ಮಗುವನ್ನ 25 ಸಾವಿರ ರೂಪಾಯಿಗೆ ಮಾರಾಟ ಮಾಡಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ಇದರಿಂದ ಬಂದ ಹಣದಲ್ಲಿ ಆತ ಮೊಬೈಲ್ ಫೋನ್, ಬೆಳ್ಳಿ ಕಾಲ್ಗೆಜ್ಜೆ, ಸೀರೆ ಹಾಗೂ ಮದ್ಯವನ್ನ ಖರೀದಿಸಿದ್ದಾನೆ.

    ಮಗುವನ್ನು ಮಾರಾಟ ಮಾಡಿದ ತಂದೆ ಬಲರಾಮ್ ಮುಖಿಯನ್ನು ಮಂಗಳವಾರದಂದು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಹೇಳುವ ಪ್ರಕಾರ, ಬಲರಾಮ್ ತನ್ನ 11 ತಿಂಗಳ ಮಗನನ್ನು 25 ಸಾವಿರ ರೂ.ಗೆ ಮಾರಾಟ ಮಾಡಿದ್ದಾನೆ. 25 ಸಾವಿರ ರೂಪಾಯಿಯಲ್ಲಿ 2 ಸಾವಿರ ರೂ.ಗೆ ಒಂದು ಮೊಬೈಲ್ ಫೋನ್ ಖರೀದಿಸಿದ್ದಾನೆ. ಜೊತೆಗೆ ತನ್ನ 7 ತಿಂಗಳ ಮತ್ತೊಬ್ಬ ಮಗಳಿಗಾಗಿ 1500 ರೂ.ನ ಬೆಳ್ಳಿ ಕಾಲ್ಗೆಜ್ಜೆ, ಹೆಂಡತಿ ಸುಕುತಿಗಾಗಿ ಒಂದು ಸೀರೆ ಹಾಗೂ ಉಳಿದ ಹಣದಲ್ಲಿ ಮದ್ಯವನ್ನ ಖರೀದಿಸಿದ್ದಾನೆ.

    ಪೊಲೀಸರು ಬಲರಾಮ್ ಹಾಗೂ ಆತನ ಪತ್ನಿ ಸುಕುತಿ ಇಬ್ಬರನ್ನೂ ವಿಚಾರಣೆ ಮಾಡಿದ್ದಾರೆ. ಬಲರಾಮ್ ದಂಪತಿಗೆ 10 ವರ್ಷದ ಮತ್ತೊಬ್ಬ ಮಗನಿದ್ದಾನೆ. ಬಲರಾಮ್‍ಗೆ ಯಾವುದೇ ಆದಾಯವಿರಲಿಲ್ಲ. ಆತ ಸ್ವೀಪರ್ ಕೆಲಸ ಮಾಡಿಕೊಂಡಿದ್ದು ಮದ್ಯಪಾನದ ಚಟವಿತ್ತು ಎಂದು ಭದ್ರಕ್‍ನ ಎಸ್‍ಎಸ್‍ಪಿ ಅನೂಪ್ ಸಾಹೋ ಹೇಳಿದ್ದಾರೆ.

    ಪೊಲೀಸರು ಹೇಳುವ ಪ್ರಕಾರ ಬಲರಾಮ್‍ನ ಸಂಬಂಧಿಯಾದ ಬಲಿಯಾ ಅಂಗನವಾಡಿ ನೌಕರನಾಗಿದ್ದು ಮಗುವಿನ ಮಾರಾಟದಲ್ಲಿ ಭಾಗಿಯಾಗಿದ್ದಾನೆ. 60 ವರ್ಷದ ದಂಪತಿಯನ್ನು ಭೇಟಿ ಮಾಡಿದಾಗ ಬಲರಾಮ್, ಸುಕುತಿ ಹಾಗೂ ಬಲಿಯಾಗೆ ಹಣ ಮಾಡಿಕೊಳ್ಳುವ ಅವಕಾಶ ಸಿಕ್ಕಿದೆ. ಸೋಮನಾಥ್ ಸೇತಿ ನಿವೃತ್ತ ಸರ್ಕಾರಿ ನೌಕರರಾಗಿದ್ದು, ದಂಪತಿ 2012ರಲ್ಲಿ ತಮ್ಮ 24 ವರ್ಷದ ಮಗನನ್ನು ಕಳೆದುಕೊಂಡಿದ್ದರು. ಸೋಮನಾಥ್ ಅವರ ಪತ್ನಿ ಖಿನ್ನತೆಗೊಳಗಾಗಿದ್ದರಿಂದ ಒಂದು ಗಂಡು ಮಗುವನ್ನು ದತ್ತು ತೆಗೆದುಕೊಳ್ಳಲು ಹುಡುಕುತ್ತಿದ್ದರು. ಬಲಿಯಾಗೆ ಸೇತಿ ದಂಪತಿ ಗೊತ್ತಿದ್ದರಿಂದ ಆತ ಬಲರಾಮ್‍ಗೆ ಇವರ ಪರಿಚಯ ಮಾಡಿಸಿ ಮಗುವಿನ ಮಾರಾಟಕ್ಕೆ ಡೀಲ್ ಮಾಡಿಕೊಂಡಿದ್ರು.

    ನನ್ನ ಪತಿ ಕುಡಿದ ಮತ್ತಿನಲ್ಲಿದ್ರು. ಇದೊಂದು ಅಕ್ರಮ ಸಂಬಂಧಕ್ಕೆ ಹುಟ್ಟಿದ ಮಗು. ಇದನ್ನು ಇಟ್ಟುಕೊಳ್ಳಲು ನನಗೆ ಇಷ್ಟವಿಲ್ಲ. ಅದಕ್ಕಾಗಿ ಯಾರಿಗಾದ್ರೂ ಕೊಡಬೇಕೆಂದಿದ್ದೇನೆ ಎಂದು ದಂಪತಿಗೆ ಹೇಳಿದ್ರು ಎಂದು ಬಲರಾಮ್ ಪತ್ನಿ ಹೇಳಿದ್ದಾಳೆ. ನಾನು ಮಗುವಿನ ಮಾರಾಟವನ್ನು ವಿರೋಧಿಸಿದೆ. ಈಗಾಗಲೇ ಇಬ್ಬರು ಮಕ್ಕಳ ಜವಾಬ್ದಾರಿ ಹೊತ್ತಿದ್ದು ಈ ಮಗುವನ್ನೂ ನೋಡಿಕೊಳ್ಳುತ್ತೇನೆ ಎಂದು ಹೇಳಿದೆ. ಆದ್ರೆ ಅವರು ನನಗೆ ಹೊಡೆದು ಬಲವಂತವಾಗಿ ಮಗುವನ್ನು 25 ಸಾವಿರ ರೂಪಾಯಿಗೆ ಮಾರಾಟ ಮಾಡಿ ಮೊಬೈಲ್ ಫೋನ್, ಸೀರೆ ಮತ್ತು ಬೆಳ್ಳಿ ಕಾಲ್ಗೆಜ್ಜೆ ತಂದರು ಎಂದು ಹೇಳಿದ್ದಾಳೆ.

    ಆದ್ರೆ ಆರೋಪಿ ತಂದೆ ಹೇಳೋದೇ ಬೇರೆ. ನಾನು ಮತ್ತು ಆಕೆ ಇಬ್ಬರೂ ಕುಡಿದಿದ್ದೆವು. ಇಬ್ಬರ ಮಧ್ಯೆ ಜಗಳವಾಗಿ ಒಬ್ಬರಿಗೊಬ್ಬರು ಹೊಡೆದೆವು. ನಂತರ ಜಗಳದ ಮಧ್ಯೆ ನಾನು ಮಗುವನ್ನ ಎತ್ತಿಕೊಂಡು ಹೋಗಿ ಮಾರಿಬಿಟ್ಟೆ ಎಂದು ಹೇಳಿದ್ದಾನೆ.