Tag: animal

  • ಮೋರಿಗೆ ಎಸೆದಿದ್ದ ನಾಯಿ ಮರಿಗೆ ಆಸರೆಯಾದ ರೆಬಲ್!

    ಮೋರಿಗೆ ಎಸೆದಿದ್ದ ನಾಯಿ ಮರಿಗೆ ಆಸರೆಯಾದ ರೆಬಲ್!

    -ವಾಕಿಂಗ್ ಬಂದಿದ್ದಾಗ ನಾಯಿಮರಿಯನ್ನು ರಕ್ಷಿಸಿ ಮಾಲೀಕನಿಗೆ ನೀಡಿದ ಶ್ವಾನ

    ಬೆಂಗಳೂರು: ಆಗತಾನೇ ಹುಟ್ಟಿದ ಬೀದಿನಾಯಿಮರಿಯನ್ನು ಗೋಣಿಚೀಲದಲ್ಲಿ ಕಟ್ಟಿ ಮೋರಿಗೆ ಎಸೆದ ಪಾಪಿಗಳಿಗೆ ಮೂಕಪ್ರಾಣಿಯೊಂದು ಅದನ್ನು ಬದುಕಿಸಿ ಪ್ರೀತಿ ಕಲಿಸಿದ ರೋಚಕ ಘಟನೆ ಕುರುಬರಹಳ್ಳಿಯಲ್ಲಿ ನಡೆದಿದೆ.

    ಹೌದು. ಆಗ ತಾನೆ ಅಮ್ಮನ ಗರ್ಭದಿಂದ ಹೊರಬಂದಿದ್ದ ನಾಯಿ ಮರಿಗೆ ಹೊಟ್ಟೆ ಹಸಿವು ಹೊಸ ಪ್ರಪಂಚ ಏನು ಗೊತ್ತಾಗುತ್ತಿರಲಿಲ್ಲ. ಅಮ್ಮನ ಮಡಿಲಿಗೆ ತಡಕಾಡುತ್ತಿತ್ತು. ಆದರೆ ಮರಿಗೆ ಅಮ್ಮ ಯಾಕೆ ಸಿಗುತ್ತಿರಲಿಲ್ಲ. ಹಾಲು ಬೇಕು ಆದ್ರೇ ಅಮ್ಮನ ಕೂಗೋಣ ಅಂದರೆ ಗಂಟಲಿನಿಂದ ಸ್ವರನೇ ಹೊರಬರುತ್ತಿರಲಿಲ್ಲ. ಅಷ್ಟರಲ್ಲಿ ಅದ್ಯಾರೋ ನಾಯಿ ಮರಿಯನ್ನು ಎತ್ತುಕೊಂಡ್ರು. ನಾಯಿ ಮರಿ ನಂಗಿನ್ನು ಕಣ್ಣುಬಿಡೋಕೆ ಆಗಿತ್ತಿಲ್ಲ ಅದಕ್ಕೆ ಇವರು ನನ್ನ ಎತ್ತು ಕೊಂಡಿದ್ದಾರೆ ಎಂದು ಭಾವಿಸಿಕೊಂಡಿದೆ. ಆದರೆ ಅಮ್ಮನ ಹಾಲು ಕುಡಿಯುವ ಭಾಗ್ಯವೂ ಇಲ್ಲದ ನಾಯಿ ಮರಿಯನ್ನು ಆ ಮನುಷ್ಯ ಚೀಲದೊಳಗೆ ಹಾಕಿಕೊಂಡು ಎಲ್ಲೋ ಕರೆದುಕೊಂಡು ಹೋದನು.

    ಚೀಲದಲ್ಲಿ ಕಟ್ಟಿದ್ದರಿಂದ ನಾಯಿ ಮರಿಗೆ ಉಸಿರಾಡಲು ಅಸಾಧ್ಯವಾಗಿತ್ತು. ಅಲ್ಲದೇ ಗಬ್ಬುನಾಥ ಬೀರೋ ಮೋರಿ ಪಕ್ಕ ಎಸೆದು ಹೋಗಿದ್ದರು. ಪಾಪ ನಾಯಿ ಮರಿ ಅಮ್ಮನ ನೆನೆದು ನಾನೇನು ತಪ್ಪು ಮಾಡ್ದೆ ಅಂತಾ ಎಸೆದುಹೋಗಿದ್ದಾರೆ. ನಂಗೆ ಯಾಕೆ ಹಿಂಸೆ ಕೊಡ್ತಿದ್ದಾರೆ ಎಂದು ಪರಿತಪಿಸುತ್ತಿತ್ತು. ಅಷ್ಟರಲ್ಲಿ ಮರಿಗೆ ಹೊಸ ಅಮ್ಮನಾಗಿ ಈ ಕ್ಯೂಟ್ ರೆಬಲ್ ಬಂದಿದೆ. ಮಾಲೀಕನೊಂದಿಗೆ ಮರಿಯನ್ನು ಎಸೆದ ದಾರಿಯಲ್ಲಿಯೇ ವಾಕಿಂಗ್ ಬಂದ ರೆಬಲ್ ಅದ್ಯಾಗೋ ಏನೋ ನಾಯಿ ಮರಿಯ ಬಳಿ ಬಂದಿದೆ. ಅವನದು ಅಮ್ಮನ ಮನಸು ಅನಿಸುತ್ತೆ. ನಾಯಿ ಮರಿಯನ್ನು ಕಚ್ಚಿ ಕೊಂದು ಬಿಡ್ತಾನೆ ಎಂದು ಅನ್ನಿಸುತ್ತಿತ್ತು. ಆದರೆ ರೆಬಲ್ ಮೆಲ್ಲನೆ ಮರಿಯನ್ನು ಗೋಣಿಚೀಲ ಬಾಯಲ್ಲಿ ಕಚ್ಚಿ ಮೋರಿಯಿಂದ ಹೊರತಂದು ದೂರದಲ್ಲಿ ನಿಂತಿದ್ದ ಆತನ ಮಾಕಲೀಕನಿಗೆ ತಂದೊಪ್ಪಿಸುತ್ತದೆ.

    ನಾಯಿಮರಿಯನ್ನು ಬದುಕಿಸಿದ ರೆಬಲ್ ಈಗ ಅದಕ್ಕೆ ತಾಯಿಯಾಗಿದೆ. ಮರಿಯನ್ನು ಹಾಲು ಕುಡಿಯದಂತೆ ಬೀದಿಲಿ ಎಸೆದ ಮಾನವೀಯತೆ ಮರೆತ ಮನುಷ್ಯ ಜೀವಗಳಿಗೆ ರೆಬಲ್ ಚಾಟಿಬೀಸಿದ್ದಾನೆ. ಮರಿಯನ್ನು ಪರಮೇಶ್ ಎಂಬವರು ಸಾಕ್ತೀನಿ ಅಂತಾ ಮುಂದೆ ಬಂದಿದ್ದಾರೆ. ಮರಿಗೆ ಅಮ್ಮನ ನೆನಪಾದ್ರೂ ಮುದ್ದು ಮುದ್ದಾಗಿ ಆಡುವ ರೆಬಲ್ ಎಲ್ಲವನ್ನು ಮರೆಸುತ್ತಾನೆ. ಇದೀಗ ಬ್ರೀಡ್ ನಾಯಿ ರೆಬಲ್, ಬೀದಿನಾಯಿಮರಿಗೆ ಆಸರೆಯಾಗಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜೋಡುಪಾಲ ದುರಂತ: ಶೋಚನೀಯ ಸ್ಥಿತಿಯಲ್ಲಿ ಮೂಕಪ್ರಾಣಿಗಳು-ಸಾವಿನ ದಾರಿ ಹಿಡಿದ ಜಾನುವಾರುಗಳು

    ಜೋಡುಪಾಲ ದುರಂತ: ಶೋಚನೀಯ ಸ್ಥಿತಿಯಲ್ಲಿ ಮೂಕಪ್ರಾಣಿಗಳು-ಸಾವಿನ ದಾರಿ ಹಿಡಿದ ಜಾನುವಾರುಗಳು

    ಮಡಿಕೇರಿ: ಕೊಡಗಿನ ಜೋಡುಪಾಲದಲ್ಲಿ ಸಂತ್ರಸ್ತ ಜನರ ಸ್ಥಿತಿ ಮನಕಲವಂತಿದ್ದರೆ ಮತ್ತೊಂದೆಡೆ ಮೂಕಪ್ರಾಣಿಗಳ ಸ್ಥಿತಿ ಶೋಚನೀಯವಾಗಿದ್ದು, ಜಾನುವಾರುಗಳು ಸಾವಿನ ದಾರಿ ಹಿಡಿದಿದೆ.

    ಮಹಾಮಳೆಗೆ ತತ್ತರಿಸಿದ್ದ ಮಡಿಕೇರಿಯ ನಿವಾಸಿಗಳು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದು, ಮಳೆ ಪ್ರಮಾಣ ಕಡಿಮೆಯಾದ ಕಾರಣ ತಾವು ವಾಸವಿದ್ದ ಪ್ರದೇಶದ ಕಡೆ ತೆರಳಿದ್ದರು. ಆದರೆ ತಾವು ವಾಸವಿದ್ದ ಮನೆಗಳ ಸ್ಥಿತಿ ಕಂಡು ಕಾಂಗಾಲಾದ ಅವರು, ಜಾನುವಾರುಗಳ ಸಾವಿನ ದಾರಿ ಹಿಡಿದಿರುವುದನ್ನು ಕಂಡು ಕಣ್ಣೀರು ಹಾಕಿದ್ದಾರೆ.

    ಜೋಡುಪಾಲ ಜಂಕ್ಷನ್ ಬಳಿಯಿಂದ ಬೆಟ್ಟಗಳ ಮಧ್ಯೆ ಮೂರು ಕಿಲೋಮೀಟರ್ ಕ್ರಮಿಸಿದಾಗ ಸಿಕ್ಕ ದೃಶ್ಯ ಮನಕಲಕುವಂತಿತ್ತು. ಕಾಲುದಾರಿಯಲ್ಲೇ ಎರಡು ದನಗಳು ಅಂಗಾತ ಬಿದ್ದು ಸಾವನ್ನಪ್ಪಿದ್ದವು. ಹಲವು ದಿನಗಳ ಹಿಂದೆಯೇ ಮೃತಪಟ್ಟ ಕಾರಣ ಸತ್ತು ಕೊಳೆತು ದುರ್ನಾತ ಇಡೀ ಪ್ರದೇಶದಲ್ಲಿ ಹರಡಿತ್ತು. ಸಾವನ್ನಪ್ಪಿರುವ ಜಾನುವಾರ ಮಣ್ಣು ಮಾಡಲು ಯಾವುದೇ ವ್ಯವಸ್ಥೆ ಇಲ್ಲದೇ ಸ್ವಯಂ ಸೇವಕರು ಇವುಗಳ ಮಣ್ಣು ಮಾಡಲು ಮುಂದಾಗಿದ್ದಾರೆ. ಹಲವು ಮನೆಗಳಲ್ಲಿ ಕುಸಿದು ಬಿದ್ದಿದ್ದರೂ ಕೂಡ ಅವಶೇಷಗಳ ಮೇಲೆ ನಿಂತ ಪ್ರಾಣಿಗಳು ಮಾಲೀಕರ ದಾರಿ ಕಾಯುತ್ತಾ ಕುಳಿತಿತ್ತು. ಇದನ್ನು ಓದಿ: ಜೋಡುಪಾಲ ದುರಂತ: ಶೋಚನೀಯ ಸ್ಥಿತಿಯಲ್ಲಿ ಮೂಕಪ್ರಾಣಿಗಳು-ಸಾವಿನ ದಾರಿ ಹಿಡಿದ ಜಾನುವಾರುಗಳು

    ಈ ಪ್ರದೇಶದ ಹಲವು ಮನೆಗಳು ಗುಡ್ಡ ಕುಸಿದ ಕಾರಣ ಸಂಪೂರ್ಣ ನೆಲ ಸಮವಾಗಿದ್ದನ್ನು ಕಂಡ ಮನೆ ಮಾಲೀಕರು ಕಣ್ಣೀರು ಹಾಕಿದ್ದರು. ಅವರೊಂದಿಗೆ ರಕ್ಷಣಾ ಕಾರ್ಯಕ್ಕೆ ಬಂದಿದ್ದ ಸ್ವಯಂ ಸೇವಕರು ಏನು ಮಾಡುವುದೆಂದು ತೋಚದೆ ಸುಮ್ಮನಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಿಧಿಗಾಗಿ ಮೂಕ ಪ್ರಾಣಿಯನ್ನೇ ಬಲಿ ಕೊಟ್ಟ ದುಷ್ಕರ್ಮಿಗಳು

    ನಿಧಿಗಾಗಿ ಮೂಕ ಪ್ರಾಣಿಯನ್ನೇ ಬಲಿ ಕೊಟ್ಟ ದುಷ್ಕರ್ಮಿಗಳು

    ರಾಮನಗರ: ನಿಧಿಯಾಸೆಗೆ ಪಾಳು ಮಂಟಪದಲ್ಲಿ ದಿಗ್ಬಂಧನ ಹಾಕಿ, ಪ್ರಾಣಿಬಲಿ ನೀಡಿರುವ ಘಟನೆ ಜಿಲ್ಲೆಯ ಕನಕಪುರ ತಾಲೂಕಿನ ಪಿಚ್ಚನಕೆರೆ ಗ್ರಾಮದಲ್ಲಿ ನಡೆದಿದೆ.

    ಯಾರೋ ದುಷ್ಕರ್ಮಿಗಳು ನಿಧಿಯಾಸೆಗೆ ಪಾಳುಬಿದ್ದ ಗುಡಿಯಲ್ಲಿ ನಾಲ್ಕು ಅಡಿಯಷ್ಟು ಗುಂಡಿ ತೋಡಿ, ವಾಮಾಚಾರ ನಡೆಸಿದ್ದಾರೆ. ಗ್ರಾಮಸ್ಥರಲ್ಲಿ ಭಯದ ವಾತಾವರಣ ಮೂಡಿದ್ದು, ಗುಡಿಯ ಸುತ್ತಲಿನ ದಿಗ್ಬಂಧನದ ಗೆರೆಗಳನ್ನು ದಾಟಲು ಹೆದರುತ್ತಿದ್ದಾರೆ.

    ಗುಡಿಯ ಸುತ್ತಲಿನ ದಿಗ್ಬಂಧನದ ಗೆರೆಗಳನ್ನು ದಾಟಲು ಕೂಡ ಹೆದರುತ್ತಿರುವ ಗ್ರಾಮಸ್ಥರು ಗುಂಡಿಯಲ್ಲಿ ನಿಧಿ ಸಿಕ್ಕಿರಬಹುದೇ ಎಂಬ ಪ್ರಶ್ನೆ ಮೂಡಿದೆ. ಇನ್ನೊಂದೆಡೆ ಅಲ್ಲೊಂದು ಹಾವು ನಿಧಿ ಕಾವಲು ಕಾಯುತ್ತಿದೆ. ಈ ಗುಡಿಯಲ್ಲಿ ನಿಧಿ ಇದೆ ಎಂಬ ವಿಷಯ ಗ್ರಾಮಸ್ಥರಲ್ಲಿ ತಲೆಮಾರುಗಳಿಂದಲೂ ಚರ್ಚೆಯಾಗುತ್ತಿತ್ತು.

  • ಮರಿ ಶ್ವಾನ ಬದುಕಿನ ನೊಗಕ್ಕೆ ಹೆಗಲು ಕೊಡುತ್ತಿದೆ ಹಂದಿ

    ಮರಿ ಶ್ವಾನ ಬದುಕಿನ ನೊಗಕ್ಕೆ ಹೆಗಲು ಕೊಡುತ್ತಿದೆ ಹಂದಿ

    ಯಾದಗಿರಿ: ತಾಯಿಯನ್ನು ಕಳೆದು ಕೊಂಡ ನಾಯಿ ಮರಿಯೊಂದು ಬದುಕಲು ಪರದಾಟ ನಡೆಸಿದ್ದ ವೇಳೆ ಹಂದಿಯೊಂದು ಹಾಲು ಉಣಿಸಿ ತಾಯಿ ವಾತ್ಸಲ್ಯ ತೋರುತ್ತಿರುವ ಘಟನೆ ಜಿಲ್ಲೆಯ ಶಹಾಪುರ ಪಟ್ಟಣದ ಆಶ್ರಯ ಕಾಲೋನಿ ಘಟನೆ ನಡೆದಿದೆ.

    ಸುಮಾರು ಒಂದು ತಿಂಗಳಿಂದ ನಾಯಿ ಮರಿಗೆ ಹಂದಿ ನಿತ್ಯವು ಹಾಲು ಉಣಿಸುತ್ತಿದ್ದು, ಮಾತೃ ಹೃದಯ ನೋಡುಗರನ್ನು ನಿಬ್ಬೆರಗಾಗಿ ನೋಡುವಂತೆ ಮಾಡಿದೆ. ನಾಯಿ ತನ್ನ ಮರಿಗೆ ಜನ್ಮ ನೀಡಿದ ಬಳಿಕ ಅಪಘಾತದಲ್ಲಿ ಸಾವನಪ್ಪಿದೆ. ಹೀಗಾಗಿ ತಬ್ಬಲಿಯಾದ ನಾಯಿ ಮರಿಗೆ ಹಂದಿ ತಾಯಿ ಮಮಕಾರ ತೋರಿಸಿ ಹಾಲುಣಿಸುತ್ತಿದೆ.

    ಸಾಮಾನ್ಯವಾಗಿ ನಾಯಿ ಹಾಗೂ ಹಂದಿ ಮಧ್ಯೆ ಹೆಚ್ಚು ಕಿತ್ತಾಟ ನಡೆಯುತ್ತಿರುತ್ತದೆ. ಆದರೆ ಇಲ್ಲಿ ಹಂದಿ ನಾಯಿಗೆ ಹಾಲುಣಿಸುವ ಮೂಲಕ ಮಾನವೀಯತೆ ಮೆರೆದಿದೆ. ಸಮಾಜದಲ್ಲಿ ಪ್ರೀತಿ ಪ್ರೇಮ ವಿಶ್ವಾಸದಿಂದ ಬದುಕು ಸಾಧಿಸಬಹುದು ಎಂದು ಪ್ರಾಣಿಗಳು ತೋರಿಸಿಕೊಟ್ಟಿದೆ. ಎಂಥಾ ಕಷ್ಟವನ್ನು ಬಂದರು ಬದುಕಬೇಕು ಎನ್ನುವುದು ಕೇವಲ ಮಾನವನಿಗೆ ಮಾತ್ರ ಸೀಮಿತವಲ್ಲ ಪ್ರಾಣಿ ಪಕ್ಷಿಗಳಿಗೂ ಅನ್ವಯವಾಗುತ್ತೆ ಎನ್ನುವುದಕ್ಕೆ ಈ ದೃಶ್ಯವೇ ಸಾಕ್ಷಿಯಾಗಿದೆ.

  • ಶೂ ಬಾಕ್ಸ್ ಒಳಗಡೆ ಪತ್ತೆಯಾದ್ವು ಮೂರು ಉಡಗಳು!

    ಶೂ ಬಾಕ್ಸ್ ಒಳಗಡೆ ಪತ್ತೆಯಾದ್ವು ಮೂರು ಉಡಗಳು!

    ಬೆಂಗಳೂರು: ಕೊರಿಯರ್ ಮೂಲಕ ತಮಿಳುನಾಡಿಗೆ ಅಕ್ರಮವಾಗಿ ಉಡ ಕಳುಹಿಸುತ್ತಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ಬೆಂಗಳೂರಿನ ಮೈಸೂರ್ ರಸ್ತೆಯ ಮಹಾಲಕ್ಷ್ಮೀ ಕೊರಿಯರ್ ಆಫೀಸ್ ಬಳಿ ಇಂದು ಸಂಜೆ ನಾಲ್ಕು ಗಂಟೆಗೆ ಅನಾಮಿಕ ವ್ಯಕ್ತಿಯೊಬ್ಬ ಶೂ ಬಾಕ್ಸ್ ನೀಡಿ ತಮಿಳುನಾಡಿನ ಬಸ್ ಗೆ ಪಾರ್ಸಲ್ ಕಳಿಸುವಂತೆ ಹೇಳಿದ್ದ.

    ಪಾರ್ಸೆಲ್ ಒಳಗಡೆ ಉಡವನ್ನು ಅಕ್ರಮವಾಗಿ ಸಾಗಾಣಿಕೆ ಮಾಡಲಾಗುತ್ತಿದೆ ಎನ್ನುವ ಖಚಿತ ಮಾಹಿತಿ ಮೇರೆಗೆ ಸಿಐಡಿ ಅರಣ್ಯ ಘಟಕದ ಅಧಿಕಾರಿಗಳಾದ ಪಿ.ಐ ಪುರುಷೋತ್ತಮ್, ಎಂ.ಎಸ್ ರಾಮಮೂರ್ತಿ, ಮುಂಕುಂದ ಅವರು ಕೊರಿಯರ್ ಆಫೀಸ್ ಮೇಲೆ ದಾಳಿ ಮಾಡಿ ಬಾಕ್ಸ್ನಲ್ಲಿದ್ದ ಮೂರು ಉಡಾಗಳು ಪತ್ತೆಮಾಡಿ ವಶಕ್ಕೆ ಪಡೆದಿದ್ದಾರೆ. ನಂತರ ಕೊರಿಯರ್ ಬಾಯ್ ವಿಚಾರಣೆಗೆ ಒಳಪಡಿಸಿದಾಗ ಯಾರೋ ಅನಾಮಿಕ ವ್ಯಕ್ತಿ ನೀಡಿರುವುದಾಗಿ ತಿಳಿಸಿದ್ದಾನೆ.

    ಮೂರು ಉಡಾಗಳು ರಾಜಸ್ಥಾನ ಜಾತಿಗೆ ಸೇರಿದ ಉಡಾಗಳು ಎಂದು ಪತ್ತೆ ಹಚ್ಚಿದ್ದಾರೆ. ಘಟನೆಯ ಕುರಿತು ಬ್ಯಾಟರಾಯನಪುರ ಪೊಲೀಸ್ ಠಾಣೆ ದೂರು ದಾಖಲಿಸಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

  • ಇನ್ನು ಮುಂದೆ ಕಸಾಯಿಖಾನೆಗಳಿಗೆ ಗೋವುಗಳನ್ನು ಮಾರಾಟ ಮಾಡುವಂತಿಲ್ಲ

    ಇನ್ನು ಮುಂದೆ ಕಸಾಯಿಖಾನೆಗಳಿಗೆ ಗೋವುಗಳನ್ನು ಮಾರಾಟ ಮಾಡುವಂತಿಲ್ಲ

    ನವದೆಹಲಿ: ಮೋದಿ ಸರ್ಕಾರ ಕಸಾಯಿಖಾನೆಗಳಿಗೆ ಜಾನುವಾರುಗಳ ಮಾರಾಟವನ್ನು ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಮೂರನೇ ವರ್ಷದ ಸಂಭ್ರಮದ ಹೊತ್ತಲ್ಲೇ ಕೇಂದ್ರ ಸರ್ಕಾರ ಈ ಕ್ರಮವನ್ನು ಕೈಗೊಂಡಿದೆ.

    ಜಾನುವಾರುಗಳನ್ನು ಮಾರುವುದಾದರೆ ರೈತರಿಗೆ ಅಥವಾ ಕೃಷಿ ಭೂಮಿ ಇರುವವರಿಗೆ ಮಾತ್ರ ಮಾರಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ. ದನ, ಗೂಳಿ, ಎತ್ತು, ಕೋಣ, ಹೋರಿ ಮತ್ತು ಒಂಟೆ ಮಾರಾಟಕ್ಕೆ ಈ ನಿಯಮ ಅನ್ವಯವಾಗಲಿದೆ.

    ಪರಿಸರ ಖಾತೆ ಸಚಿವಾಲಯ, ಅರಣ್ಯ ಮತ್ತು ಹವಾಮಾನ ಬದಲಾವಣೆ, ಭಾರತ ಸರ್ಕಾರ ಒಮ್ಮತದಿಂದ ಈ ಹೊಸ ನಿಯಮವನ್ನು  ಜಾರಿಗೊಳಿಸಲು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಜಾನುವಾರುಗಳನ್ನು ಕೃಷಿ ಉಪಯೋಗಕ್ಕೆ ಮಾತ್ರ ಮಾರಾಟ ಮಾಡಬೇಕು, ಕಸಾಯಿಖಾನೆಗೆ ಮಾರುವಂತಿಲ್ಲ ಎಂದು ಪ್ರಾಣಿ ಹಿಂಸೆ ತಡೆ (ಪಿಸಿಎ) ಕಾಯ್ದೆಯ 1960ರ ಸೆಕ್ಷನ್ ಅಡಿಯಲ್ಲಿ ಈ ನಿರ್ಬಂಧ ಹೇರಲಾಗಿದೆ.

    ಹೊಸ ನಿಯಮದಲ್ಲಿರುವ ಪ್ರಮುಖ ಅಂಶಗಳು
    ಇನ್ನು ಮುಂದೆ ಜಾನುವಾರುಗಳನ್ನು ವ್ಯಾಪಾರ ಮಾಡುವ ಮಾರಾಟಗಾರರು ಮತ್ತು ಖರೀದಿ ಮಾಡುವವರು ಗುರುತಿನ ಚೀಟಿ ಮತ್ತು ಮಾಲೀಕತ್ವದ ದಾಖಲೆಗಳನ್ನು ತೋರಿಸಬೇಕಾಗುತ್ತದೆ.

    ಖರೀದಿಸಿದ ಜಾನುವಾರನ್ನು 6 ತಿಂಗಳೊಳಗೆ ಮತ್ತೊಮ್ಮೆ ಮಾರಾಟ ಮಾಡುವಂತಿಲ್ಲ. ರೈತರಿಗೆ ಮಾತ್ರ ಜಾನುವರನ್ನು ಮಾರಾಟ ಮಾಡಬೇಕು. ಖರೀದಿಸುವಾಗ ಕಡ್ಡಾಯವಾಗಿ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಎಳೆ ಕರುಗಳನ್ನು ಅಥವಾ ಅನಾರೋಗ್ಯ ಪೀಡಿತ ಹಸುಗಳನ್ನು ಮಾರಾಟ ಮಾಡುವಂತಿಲ್ಲ.

    ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ತೆಗೆದುಕೊಂಡು ಹೋಗುವಾಗ ಆ ರಾಜ್ಯ ಸರ್ಕಾರದ ವಿಶೇಷ ಅನುಮತಿಯನ್ನು ಪಡೆಯಬೇಕು. ಧಾರ್ಮಿಕ ಕಾರ್ಯಕ್ರಮದಲ್ಲೂ ಈ ಮೇಲೆ ತಿಳಿಸಿದ ಜಾನುವಾರುಗಳ ಹತ್ಯೆಯನ್ನು ನಿಷೇಧಿಸಲಾಗಿದೆ.

    ಮ್ಯಾಜಿಸ್ಟ್ರೇಟ್ ಅಧ್ಯಕ್ಷತೆ ವಹಿಸಿರುವ ಜಿಲ್ಲಾ ಜಾನುವಾರು ಮಾರಾಟ ಸಮಿತಿಯ ಅನುಮತಿಯಿಂದಲೇ ಜಾನುವಾರು ವ್ಯಾಪಾರ ಕೇಂದ್ರಗಳನ್ನು ನಡೆಸಬೇಕು. ಸರ್ಕಾರ ಅಂಗೀಕೃತ ಪ್ರಾಣಿ ರಕ್ಷಣಾ ಸಂಘಟನೆಯ ಇಬ್ಬರು ಸದಸ್ಯರು ಈ ಸಮಿತಿಯಲ್ಲಿರಬೇಕು.

    5 ಪ್ರತಿಗಳನ್ನು ಇಟ್ಟುಕೊಳ್ಳಬೇಕು:
    ಒಂದು ಹಸುವನ್ನು ಕೊಂಡುಕೊಂಡರೆ, ಜಾನುವಾರು ವ್ಯಾಪಾರಿಯು ಮಾರಾಟ ಮಾಡಿದ ದಾಖಲೆಗಳ 5 ಪ್ರತಿಗಳನ್ನು ಇಟ್ಟುಕೊಳ್ಳಬೇಕಾಗುತ್ತದೆ. ಒಂದು ಪ್ರತಿಯನ್ನು ಸ್ಥಳೀಯ ಕಂದಾಯ ಅಧಿಕಾರಿಗೆ, ಎರಡನೇ ಪ್ರತಿಯನ್ನು ಹಸು ಖರೀದಿ ಮಾಡಿದ ವ್ಯಕ್ತಿಯ ಜಿಲ್ಲೆಯ ಸ್ಥಳೀಯ ಪಶು ವೈದ್ಯರಿಗೆ, ಮೂರನೇ ಪ್ರತಿಯನ್ನು ಜಾನುವಾರು ಮಾರುಕಟ್ಟೆ ಸಮಿತಿಗೆ ನೀಡಬೇಕಾಗುತ್ತದೆ. ಮಾರಾಟಗಾರ ಮತ್ತು ಖರೀದಿಸಿದ ವ್ಯಕ್ತಿಯೂ ಒಂದೊಂದು ಪ್ರತಿಗಳನ್ನು ಇಟ್ಟುಕೊಳ್ಳಬೇಕಾಗುತ್ತದೆ.