Tag: Andola Sri

  • ಹಿಂದೂಗಳನ್ನು ಕೆಣಕಿದ್ರೆ ಕರ್ನಾಟಕ ಎರಡನೇ ಗೋದ್ರಾ ಆಗುತ್ತೆ- ಆಂದೋಲಶ್ರೀ ವಿವಾದಾತ್ಮಕ ಹೇಳಿಕೆ

    ಹಿಂದೂಗಳನ್ನು ಕೆಣಕಿದ್ರೆ ಕರ್ನಾಟಕ ಎರಡನೇ ಗೋದ್ರಾ ಆಗುತ್ತೆ- ಆಂದೋಲಶ್ರೀ ವಿವಾದಾತ್ಮಕ ಹೇಳಿಕೆ

    – ಮೋದಿ ಇಲ್ಲದೇ ಭಾರತವಿಲ್ಲ ಯತ್ನಾಳ್ ಇಲ್ಲದೇ ಕರ್ನಾಟಕವಿಲ್ಲ

    ಯಾದಗಿರಿ: ಶಿವಮೊಗ್ಗದಲ್ಲಿ (Shivamogga) ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾದಗಿರಿಯಲ್ಲಿ ನಡೆದ ಹಿಂದೂ ಮಹಾಗಣಪತಿ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಆಂದೋಲಶ್ರೀ (Andola Shri) ಶಿವಮೊಗ್ಗ ಘಟನೆಯನ್ನ ಖಂಡಿಸುತ್ತಾ ಎರಡು ಬಾರಿ ಹೊಡೆದ್ರೆ ಎರಡು ತುಂಡು ಆಗ್ತೀರಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಶಿವಮೊಗ್ಗದಲ್ಲಿ ಹಿಂದೂ ಮನೆಗಳ ಮೇಲೆ ಕಲ್ಲು ತೂರಾಟ ಆಗಿದೆ. ಜೊತೆಗೆ ಹಿಂದೂ ಮಹಿಳೆಯರಿಗೆ ಎಚ್ಚರಿಕೆ ಕೊಡ್ತಾರೆ. ನೀವು ಸುಮ್ನೆ ಇದ್ದರೆ ಸರಿ, ಇಲ್ಲದಿದ್ರೆ ರೇಪ್ ಮಾಡ್ತೀವಿ ಅಂತಾ ಎಚ್ಚರಿಕೆ ಕೊಡ್ತಾರೆ. ಅಂತಹ ದುಷ್ಟ ಸಾಬ್ರೆ ನಿಮ್ಮ ಹತ್ರ ಮಂಡ್ ತಲ್ವಾರ್ ಇರಬಹುದು. ಮಂಡ್ ತಲ್ವಾರ್ ನಿಂದ ಎದುರಿಸಲು ಬಂದ್ರೆ, ನಮ್ಮಲ್ಲಿ ಕಿತ್ತೂರು ರಾಣಿ ಚೆನ್ನಮ್ಮಳ ಖಡ್ಗ, ಛತ್ರಪತಿ ಶಿವಾಜಿ ಖಡ್ಗವಿದೆ. ನಮ್ದೂ ಏಕ್ ಮಾರ್ ದೋ ತುಕಡಾ. ಒಂದು ಬಾರಿ ಹೊಡೆದ್ರೆ ಎರಡು ತುಕಡಿಯಾಗುತ್ತೀರಿ. ಒಂದು ದೇಹ ಪಾಕಿಸ್ತಾನಕ್ಕೆ ಹೋಗಬೇಕು. ಇನ್ನೊಂದು ದೇಹ ಬಾಂಗ್ಲಾದೇಶಕ್ಕೆ ಹೋಗಬೇಕು ಎಂದು ವಿವಾದಾತ್ಮಕ ಮಾತುಗಳನ್ನಾಡಿದ್ರು.

    ಹಿಂದೂಗಳನ್ನು ಕೆಣಕಬೆಡಿ, ಕೆಣಕಿದ್ರೆ ಕರ್ನಾಟಕ ಎರಡನೇ ಗೋದ್ರಾ ಆಗುತ್ತದೆ. ಹಿಂದೂಗಳ ಮೇಲೆ ಟಾರ್ಗೆಟ್ ಮಾಡುತ್ತಿದ್ರು, ಇಲ್ಲಿ ನರಸತ್ತ ಸರ್ಕಾರವಿದೆ. ಕ್ರಮಕೈಗೊಳ್ಳಲು ಮುಂದೆ ಬರುತ್ತಿಲ್ಲ. ಹಿಂದೂ ಜಾಗೃತನಾದರೆ ಭಾರತ ಉಳಿಯಲು ಸಾಧ್ಯ. 2024ರಲ್ಲಿ ಮತ್ತೆ ಮೋದಿ ಅವರನ್ನು ಪಿಎಂ ಮಾಡಬೇಕು. ಮೋದಿ ಇಲ್ಲದೇ ಭಾರತವಿಲ್ಲ ಯತ್ನಾಳ್ ಇಲ್ಲದೇ ಕರ್ನಾಟಕವಿಲ್ಲ. ಪಾಕಿಸ್ತಾನಕ್ಕೆ ಸದೆ ಬಡಿಯುವ ನೇತಾರರು ಬೇಕಾಗಿದ್ದಾರೆ. ಭಾರತ, ಹಿಂದೂ ಸುರಕ್ಷಿತವಾಗಿ ಇರಬೇಕಾದರೆ ಭಗತ್ ಸಿಂಗ್ ಹೇಳಿದ ಹಾಗೆ ಪ್ರತಿಯೊಬ್ಬರ ಮನೆಯಲ್ಲಿಯೂ ಬಂದೂಕು ಇಟ್ಟುಕೊಳ್ಳಬೇಕು. ಬಂದೂಕು ಮನೆಯಲ್ಲಿ ಇಟ್ಟುಕೊಂಡರೆ ಭಾರತ ಸುರಕ್ಷಿತವಾಗಿ ಇರುತ್ತದೆ ಎಂದು ಹೇಳಿದರು.

    ಇದೇ ವೇಳೆ ಗೃಹ ಸಚಿವ ಜಿ.ಪರಮೇಶ್ವರ್ ಉಡಾಫೆ ಮಾತಿಗೆ ಆಕ್ರೋಶ ವ್ಯಕ್ತಪಡಿಸಿದ ಆಂದೋಲನ ಶ್ರೀ, ಶಿವಮೊಗ್ಗದಲ್ಲಿ ಸಣ್ಣ ಘಟನೆಯಾಗಿದೆ ಅಂದಿದ್ದಾರೆ. ಪರಮೇಶ್ವರ್ ಅವರೇ, ಇದೇ ಮುಸ್ಲಿಮರು ನಿಮ್ಮ ಮನೆಗೆ ಬಂದು ನಿಮ್ಮ ಹೆಣ್ಮಕ್ಕಳಿಗೆ ಬೆದರಿಕೆ ಹಾಕಿದ್ರೆ ನಿಮ್ಮ ಸ್ಥಿತಿ ಏನಿರುತಿತ್ತು?. ಅವರ ಗುರಿ ಒಂದೇ 2047ಕ್ಕೆ ಭಾರತವನ್ನು ಇಸ್ಲಾಂ ಮಾಡುವುದಾಗಿದೆ. ಮೋದಿ, ಯೋಗಿ ಈ ದೇಶದಲ್ಲಿದ್ರೆ ನಿಮ್ಮ ಕನಸು ನನಸಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿಎಂ ತ್ರೀ ಈಡಿಯಟ್ಸ್ ಗಳನ್ನು ತಯಾರು ಮಾಡಿದ್ದಾರೆ- ಅವರಿಂದ ಧರ್ಮ ಒಡೆಯಲು ಸಾಧ್ಯವಿಲ್ಲ: ಆಂದೋಲ ಶ್ರೀ

    ಸಿಎಂ ತ್ರೀ ಈಡಿಯಟ್ಸ್ ಗಳನ್ನು ತಯಾರು ಮಾಡಿದ್ದಾರೆ- ಅವರಿಂದ ಧರ್ಮ ಒಡೆಯಲು ಸಾಧ್ಯವಿಲ್ಲ: ಆಂದೋಲ ಶ್ರೀ

    ಗದಗ: ಸಿಎಂ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ತ್ರೀ ಈಡಿಯಟ್ಸ್ ಗಳನ್ನು ತಯಾರು ಮಾಡಿದ್ದು ಅವರಿಂದ ಧರ್ಮವನ್ನು ಒಡೆಯಲು ಸಾಧ್ಯವಿಲ್ಲ ಎಂದು ಆಂದೋಲ ಶ್ರೀಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಇಂದು ಗದಗ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ವೀರಶೈವ ಲಿಂಗಾಯತ ಜನಜಾಗೃತಿ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ವೀರಶೈವ ಧರ್ಮ ಒಡೆಯಲು ಸಿಎಂ ತ್ರೀ ಈಡಿಯಟ್ಸ್ ನಾಯಕರನ್ನು ತಯಾರು ಮಾಡಿದ್ದಾರೆ ಎಂದು ಸಚಿವ ಎಂ.ಬಿ.ಪಾಟೀಲ್, ಬಸವರಾಜ್ ಹೊರಟ್ಟಿ, ವಿನಯ್ ಕುಲಕರ್ಣಿ ಅವರನ್ನು ತ್ರೀ ಈಡಿಯಟ್ಸ್ ಎಂದು ಜರಿದರು. ಆದರೆ ಇವರಿಂದ ಧರ್ಮ ಒಡೆಯಲು ಸಾಧ್ಯವಿಲ್ಲ. ಮತ ವಿಭಜಿಸಿ ಮತ್ತೆ ಅಧಿಕಾರ ಹಿಡಿಯುವ ಸಂಚು ಫಲಿಸಲ್ಲ. ಗುರು ಮುನಿದರೆ ಸಿಎಂ ಸಿದ್ದರಾಮಯ್ಯ ಅವರನ್ನು ಯಾರು ಕಾಯಲ್ಲ ಎಂದು ಎಚ್ಚರಿಕೆ ನೀಡಿದರು.

    ಇದೇ ವೇಳೆ ಗದಗನಲ್ಲಿ ಸಮಾವೇಶ ನಡೆಸಿದರೆ ರಾವಣರಂತಹ ರಾಕ್ಷಸರ ಕಾಟ ಬಹಳವಯ್ಯ, ಗದುಗಿನಲ್ಲಿ ಕೆಲವು ರಾವಣರಿದ್ದಾರೆ. ಮನೆಯಲ್ಲಿ ಕೊಳ್ಳಿ ಇಟ್ಟು ಧರ್ಮ ವಿಭಜನೆಯ ಪ್ರಯತ್ನ ಫಲಿಸದು ಎಂದು ಗದಗ ತೋಂಟದ ಸಿದ್ಧಲಿಂಗ ಶ್ರೀಗಳ ವಿರುದ್ಧ ವಾಗ್ದಾಳಿ ನಡೆಸಿದರು.

    ಇನ್ನು ವೀರಶೈವ-ಲಿಂಗಾಯತ ಎರಡೂ ಒಂದೇ ಎಂಬ ಸಂದೇಶ ಸಾರುವ ಸಲುವಾಗಿ ಜನಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದ್ದು. ಈ ಸಮಾವೇಶದಲ್ಲಿ ಪಂಚಪೀಠ ಪೀಠಾಧಿಪತಿಗಳು, ನಿರಂಜ ವಿರಕ್ತ ಸ್ವಾಮಿಜಿಗಳು ಸೇರಿದಂತೆ ಸುಮಾರು 12 ನೂರು ವೀರಶೈವ ಧರ್ಮದ ಹರಗುರು ಚರಮೂರ್ತಿ ಸ್ವಾಮಿಜಿಗಳು ಭಾಗವಹಿಸಿದ್ದರು.

    ಕಾರ್ಯಕ್ರಮದ ವಿಶೇಷ ಭಾಗವಾಗಿ ಹಿಂದೂ ಮುಸ್ಲಿಂ ಭಾವೈಕ್ಯ ಮೆರೆಯಲು ಗದಗ ನಗರದ ಹಲವು ಮುಸ್ಲಿಂ ಸಮುದಾಯದವರು ಒಟ್ಟಾಗಿ ಬೃಹತ್ ಹೂ ಮಾಲೆ ಅರ್ಪಿಸಿ ಮಾನವ ಧರ್ಮ ಒಂದೆ, ಮಾನವ ಧರ್ಮಕ್ಕೆ ಜೈವಾಗಲಿ ಎಂದು ಘೋಷಣೆ ಕೂಗಿದರು.