Tag: andhrapradesh

  • ಆಂಧ್ರ, ತಮಿಳುನಾಡಲ್ಲೂ ಆನ್ ಆಗಲಿದೆ ಲೌಡ್ ಸ್ಪೀಕರ್!

    ಆಂಧ್ರ, ತಮಿಳುನಾಡಲ್ಲೂ ಆನ್ ಆಗಲಿದೆ ಲೌಡ್ ಸ್ಪೀಕರ್!

    ಡಾ.ಕೆ.ರಾಜು ನಿರ್ಮಾಣದ ಲೌಡ್ ಸ್ಪೀಕರ್ ಚಿತ್ರ ಇದೇ ತಿಂಗಳ 10ನೇ ತಾರೀಕಿನಂದು ಬಿಡುಗಡೆಯಾಗಲಿದೆ. ಈ ಹಂತದಲ್ಲಿ ಚಿತ್ರತಂಡ ಮತ್ತೊಂದು ಖುಷಿಯ ವಿಚಾರವನ್ನು ಹಂಚಿಕೊಂಡಿದೆ.

    ಕರ್ನಾಟಕದಲ್ಲಿ ಹೆಚ್ಚು ಸಂಖ್ಯೆಯ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವ ಲೌಡ್ ಸ್ಪೀಕರ್ ಹೊರರಾಜ್ಯಗಳಲ್ಲಿಯೂ ಬಿಡುಗಡೆಯಾಗಲಿದೆ. ಆಂಧ್ರ ಮತ್ತು ತಮಿಳುನಾಡುಗಳಲ್ಲಿಯೂ ಈ ಚಿತ್ರ ಬಿಡುಗಡೆಯಾಗುವುದು ಗ್ಯಾರೆಂಟಿ.

    ಇದು ಹೊಸ ಬಗೆಯ ಕಥಾ ಹಂದರ ಹೊಂದಿರುವ ಚಿತ್ರ. ಈವತ್ತಿಗೆ ಮೊಬೈಲ್ ಅಂದರೆ ಸರ್ವಂತರ್ಯಾಮಿ. ತೀರಾ ಹಳ್ಳಿಗಾಡುಗಳಲ್ಲಿಯೂ ಜನ ಮೊಬೈಲು ಬಿಟ್ಟು ಬದುಕಲಾರದಂಥಾ ವಾತಾವರಣ. ಆದರೆ, ಒಂದೇ ಒಂದು ದಿನದ ಮಟ್ಟಿಗೆ ಲೌಡ್ ಸ್ಪೀಕರ್ ಆನ್ ಮಾಡಿಕೊಂಡೇ ಮಾತಾಡುವ ಛಾಲೆಂಜನ್ನೇನಾದರೂ ಹಾಕಿದರೆ ಬಹುತೇಕರು ಎಸ್ಕೇಪಾಗುತ್ತಾರೆ. ಅದಕ್ಕೆ ಕಾರಣ ಪ್ರತೀ ಮನುಷ್ಯನೂ ಬಚ್ಚಿಟ್ಟುಕೊಂಡಿರೋ ರಹಸ್ಯಗಳು!

    ಅಂಥಾದ್ದರಲ್ಲೂ ಒಂದು ದಿನ ಪೂರ್ತಿ ಲೌಡ್ ಸ್ಪೀಕರ್ ಆನ್ ಮಾಡಿಕೊಂಡೇ ಮಾತಾಡಬೇಕಾಗಿ ಬಂದಾಗ ಅದೇನೇನು ಅವಘಡಗಳು ಸಂಭವಿಸುತ್ತವೆ ಎಂಬುದರ ಸುತ್ತ ಈ ಕಥೆ ಹೆಣೆಯಲ್ಪಟ್ಟಿದೆ. ಈ ಹಿಂದೆ ಧೈರ್ಯಂ ಎಂಬ ಚಿತ್ರವನ್ನು ನಿರ್ಮಾಣ ಮಾಡಿದ್ದ ಡಾ.ಕೆ.ಆರ್.ರಾಜು ಅವರು ಹೊಸತನದ ಕಾರಣದಿಂದಲೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಧೈರ್ಯಂ ಚಿತ್ರದ ಮೂಲಕ ಅಜೇಯ್ ರಾವ್ ಅವರಿಗೆ ಮಾಸ್ ಲುಕ್ಕು ಕೊಟ್ಟಿದ್ದ ಶಿವತೇಜಸ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

    ಇದೀಗ ಆಂಧ್ರ ಮತ್ತು ತಮಿಳುನಾಡುಗಳಲ್ಲಿಯೂ ಬಿಡುಗಡೆಗೆ ತಯಾರಾಗಿರುವ ಈ ಚಿತ್ರ ಬೇರೆ ಬೇರೆ ಭಾಷೆಗಳಿಗೆ ರೀಮೇಕ್ ಆಗುವ ಭರವಸೆಯನ್ನೂ ಕೂಡಾ ಚಿತ್ರ ತಂಡ ಇಟ್ಟುಕೊಂಡಿದೆ. ಈಗಾಗಲೇ ಹಾಡುಗಳು ಮತ್ತು ಟ್ರೇಲರ್ ಮೂಲಕ ಪ್ರೇಕ್ಷಕರನ್ನು ಸೆಳೆದುಕೊಂಡಿರೋ ಲೌಡ್ ಸ್ಪೀಕರ್ ಆನ್ ಆಗಲು ಕೆಲ ದಿನಗಳು ಮಾತ್ರ ಬಾಕಿ ಉಳಿದಿವೆ.

  • ಜೈಂಟ್ ವ್ಹೀಲ್ ಕುಸಿದು 10ರ ಬಾಲಕಿ ದುರ್ಮರಣ-ಮೂವರು ಮಕ್ಕಳು ಸೇರಿ 6 ಮಂದಿಗೆ ಗಾಯ

    ಜೈಂಟ್ ವ್ಹೀಲ್ ಕುಸಿದು 10ರ ಬಾಲಕಿ ದುರ್ಮರಣ-ಮೂವರು ಮಕ್ಕಳು ಸೇರಿ 6 ಮಂದಿಗೆ ಗಾಯ

    ಹೈದರಬಾದ್: ಜೈಂಟ್ ವ್ಹೀಲ್ ಕುಸಿದು 10 ವರ್ಷದ ಬಾಲಕಿ ದುರ್ಮರಣಕ್ಕೀಡಾದ ಆಘಾತಕಾರಿ ಘಟನೆಯೊಂದು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ನಡೆದಿದೆ.

    ಮೃತ ದುರ್ದೈವಿ ಬಾಲಕಿಯನ್ನು ಅಮೃತ ಎಂದು ಗುರುತಿಸಲಾಗಿದೆ. ಈಕೆ ಅನಂತಪುರ ಕಾಲೇಜು ಮೈದಾನದಲ್ಲಿ ಆಯೋಜಿಸಲಾದ ಮೋಜು ಮೇಳ ಪ್ರದರ್ಶನಕ್ಕೆ ತೆರಳಿದ್ದಳು. ವೀಕೆಂಡ್ ಹಾಗೂ ಶಾಲೆಗೆ ರಜಾ ಸಮಯವಾಗಿದ್ದರಿಂದ ಪ್ರದರ್ಶನ ಜನಜಂಗುಳಿಯಿಂದ ಕೂಡಿತ್ತು. ಈ ವೇಳೆ ಅಮೃತ ಅಲ್ಲಿದ್ದ ಜೈಂಟ್ ವ್ಹೀಲ್ ನಲ್ಲಿ ಕುಳಿತಿದ್ದಾಳೆ.

    ಜೈಂಟ್ ವ್ಹೀಲ್ ತಿರುಗುತ್ತಿದ್ದ ಸಂದರ್ಭದಲ್ಲಿ ಅದರ ಒಂದು ಟ್ರಾಲಿ ಕಾರ್ ನ ಬೋಲ್ಟ್ ಸಡಿಲವಾಗಿದೆ. ಪರಿಣಾಮ ಏಕಾಏಕಿ ಕುಸಿದುಬಿದ್ದಿದೆ. ಹೀಗಾಗಿ ಎತ್ತರದಿಂದ ಬಿದ್ದಿದ್ದರಿಂದ ಬಾಲಕಿ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾಳೆ. ಈ ಅಚ್ಚರಿ ಹಾಗೂ ಭಯಾನಕ ಘಟನೆಯಲ್ಲಿ ನೆರೆದಿದ್ದವರು ಕಣ್ಣಾರೆ ಕಂಡಿದ್ದಾರೆ.

    ಘಟನೆಯಲ್ಲಿ ಮೂವರು ಮಕ್ಕಳು ಸೇರಿ 6ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿವೆ. ಘಟನೆಯಲ್ಲಿ ಗಾಯಗೊಂಡವರನ್ನು ಅನಂತಪುರ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಜೈಂಟ್ ವ್ಹೀಲ್ ನ ಬೋಲ್ಟ್ ಸಡಿಲಗೊಂಡಿದ್ದನ್ನು ಗಮನಿಸಿದ ಕೂಡಲೇ ವ್ಹೀಲ್ ಆಪರೇಟರಿಗೆ ಮಾಹಿತಿ ರವಾನಿಸಿದ್ದಾರೆ. ಆದ್ರೆ ಆತ ಕುಡಿದ ಮತ್ತಿನಲ್ಲಿದ್ದರಿಂದ ತಕ್ಷಣವೇ ಸರಿಪಡಿಸಲು ಆಗಿಲ್ಲ. ಹೀಗಾಗಿ ಈ ದುರಂತ ಸಂಭವಿಸಿದೆ ಅಂತ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

    ದುರಂತ ಸಂಭವಿಸಿದ ಕೂಡಲೇ ಸ್ಥಳೀಯರು ವ್ಹೀಲ್ ಆಪರೇಟರನ್ನು ಹಿಡಿದು ಚೆನ್ನಾಗಿ ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

  • 2019 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಹಗಲು ಕನಸು: ಚಂದ್ರಬಾಬು ನಾಯ್ಡು

    2019 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಹಗಲು ಕನಸು: ಚಂದ್ರಬಾಬು ನಾಯ್ಡು

    ವಿಜಯವಾಡ: 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಇದು ಹಗಲು ಕನಸು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿಯವರು ಪ್ರಚಾರ ಪ್ರಿಯರು ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಟಿಡಿಪಿ ವಾರ್ಷಿಕ ಸಮ್ಮೇಳನ ಮಹಾನಾಡು ಉದ್ಘಾಟಿಸಿ ಮಾತನಾಡಿದ ಅವರು ಕೇಂದ್ರ ಸರ್ಕಾರಗಳ ರಚನೆಯಲ್ಲಿ ಟಿಡಿಪಿ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತಾ ಬಂದಿದೆ. ಪಕ್ಷಕ್ಕೆ ದೇಶದ ರಾಜಕೀಯ ಲೆಕ್ಕಾಚಾರವನ್ನು ಬದಲಿಸುವಷ್ಟು ಶಕ್ತಿ ಇದೆ. ಬಿಜೆಪಿಯನ್ನು ಕಟ್ಟಿಹಾಕಲು ಸಮಾನ ಮನಸ್ಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ತಯಾರಿದ್ದೇವೆ ಎಂದು ತಿಳಿಸಿದರು.

    ಹೊಸದಾಗಿ ನಿರ್ಮಾಣವಾದ ಆಂಧ್ರ ರಾಜ್ಯಕ್ಕೆ ಭರವಸೆಯಂತೆ ವಿಶೇಷ ಅನುದಾನವನ್ನು ಕೇಂದ್ರ ಸರ್ಕಾರ ನೀಡಲಿಲ್ಲ. ಕಾಂಗ್ರೆಸ್ ವಿರೋಧ ಪಕ್ಷದಲ್ಲಿದ್ದು ಹೆಚ್ಚಿನದನ್ನು ಮಾಡಲಿಕ್ಕೆ ಆಗುವುದಿಲ್ಲ ಎಂದು ಹೇಳಿ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡದಿದ್ದಕ್ಕೆ ಎನ್‍ಡಿಎ ಮೈತ್ರಿ ಕೂಟದಿಂದ ಪಕ್ಷ ಹೊರಬಂದಿದೆ. ರಾಜ್ಯದ ಜನತೆಗೆ ಮೋಸ ಮಾಡಿರುವ ಕೇಂದ್ರದ ಬಿಜೆಪಿ ಸರ್ಕಾರ ಈಗ ವೈಎಸ್‍ಆರ್ ಕಾಂಗ್ರೆಸ್ ಜೊತೆ ಸೇರಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳು ಮಾಡಲು ನೋಡುತ್ತಿದೆ ಎಂದು ಕಿಡಿಕಾರಿದರು.

    ಹೈದ್ರಾಬಾದ್ ತೆಲಂಗಾಣಕ್ಕೆ ಸೇರಿರುವುದರಿಂದ ಆಂಧ್ರ ಪ್ರದೇಶ ರಾಜ್ಯಕ್ಕೆ ವಿಶೇಷ ಅನುದಾನವನ್ನು ನೀಡುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತಾ ಬಂದಿದೆ. 2014 ರಲ್ಲಿ ಘೋಷಣೆಯಾದ ಆಂಧ್ರ ಪ್ರದೇಶ ರಾಜ್ಯಕ್ಕೆ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಮೊದಲ 5 ವರ್ಷಗಳ ಕಾಲ ವಿಶೇಷ ಅನುದಾನವನ್ನು ನೀಡಲಾಗುತ್ತದೆ ಎಂದು ಘೋಷಿಸಿದ್ದರು.

    14ನೇ ಹಣಕಾಸು ಆಯೋಗದಲ್ಲಿ ಆಂಧ್ರಕ್ಕೆ ವಿಶೇಷ ಅನುದಾನಕ್ಕೆ ನೀಡುವ ಸಂಬಂಧ ಯಾವುದೇ ಪ್ರಸ್ತಾಪ ಇಲ್ಲ ಎಂದು ಹೇಳಿ ಎನ್‍ಡಿಎ ಸರ್ಕಾರ ಆರ್ಥಿಕ ನೆರವು ನೀಡಲು ನಿರಾಕರಿಸಿತ್ತು.

  • 9ರ ಬಾಲಕಿ ಮೇಲೆ 50 ವರ್ಷದ ವ್ಯಕ್ತಿಯಿಂದ ಅತ್ಯಾಚಾರ- ಆರೋಪಿಯನ್ನು ನೇಣಿಗೇರಿಸುವಂತೆ ಪೋಷಕರ ಒತ್ತಾಯ

    9ರ ಬಾಲಕಿ ಮೇಲೆ 50 ವರ್ಷದ ವ್ಯಕ್ತಿಯಿಂದ ಅತ್ಯಾಚಾರ- ಆರೋಪಿಯನ್ನು ನೇಣಿಗೇರಿಸುವಂತೆ ಪೋಷಕರ ಒತ್ತಾಯ

    ಹೈದರಾಬಾದ್: ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ವಿಧಿಸುವುದಕ್ಕೆ ಕೇಂದ್ರ ಸಂಪುಟ ಅಸ್ತು ಅಂದ ಬಳಿಕವೂ ಅಪ್ರಾಪ್ತೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ಪ್ರತಿನಿತ್ಯ ನಡೆಯುತ್ತಲೇ ಇವೆ. ಇಂತದ್ದೇ ಒಂದು ಘಟನೆ ಇದೀಗ ಆಂಧ್ರಪ್ರದೇಶದಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಹೌದು. ಆಂಧ್ರಪ್ರದೇಶದ ಗುಂಟೂರು ಎಂಬಲ್ಲಿ 9 ವರ್ಷದ ಬಾಲಕಿ ಮೇಲೆ 50 ವರ್ಷದ ವ್ಯಕ್ತಿ ಅತ್ಯಾಚಾರ ಎಸಗಿದ್ದಾನೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ಪೋಷಕರು ಹಾಗೂ ಸ್ಥಳೀಯರು ಹೆದ್ದಾರಿ ತಡೆದು ಆರೋಪಿಯನ್ನು ಬಂಧಿಸಿ ನೇಣಿಗೆ ಹಾಕುವಂತೆ ಪ್ರತಿಭಟನೆ ಮಾಡುವ ಮೂಲಕ ಒತ್ತಾಯಿಸಿದ್ದಾರೆ.

    ಬೆಳಕಿಗೆ ಬಂದಿದ್ದು ಹೇಗೆ?: ಬುಧವಾರ ಮಧ್ಯಾಹ್ನ ಬಾಲಕಿಯ ಗುಪ್ತಾಂಗದಲ್ಲಿ ರಕ್ತಸ್ರಾವವಾಗುತ್ತಿದ್ದು, ಹೊಟ್ಟೆ ನೋವಿನಿಂದ ಬಳುತ್ತಿರುವುದಾಗಿ ಪೋಷಕರಿಗೆ ತಿಳಿಸಿದ್ದಾಳೆ. ಕೂಡಲೇ ಪೋಷಕರು ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಬಾಲಕಿಯನ್ನು ಪರೀಕ್ಷೆ ಮಾಡಿದ ವೈದ್ಯರು, ಆಕೆಯ ದೇಹದಲ್ಲಿ ಗಾಯಗಳಾಗಿವೆ. ಹೀಗಾಗಿ ಆಕೆಯ ಮೇಲೆ ಅತ್ಯಾಚಾರವಾಗಿದೆ ಅಂತ ತಿಳಿಸಿದ್ದಾರೆ.

    ಈ ಹಿನ್ನೆಲೆಯಲ್ಲಿ ಪೋಷಕರು ಬಾಲಕಿಯನ್ನು ಪ್ರಶ್ನಿಸಿದ್ದಾರೆ. ಆಗ ಬಾಲಕಿ ನೆರೆಮನೆಯ ಕೈಗಾಡಿ ಎಳೆಯುವ ವ್ಯಕ್ತಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಬಾಯ್ಬಿಟ್ಟಿದ್ದಾಳೆ. ಸದ್ಯ ಬಾಲಕಿ ಗುಂಟೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಅಂತ ವೈದ್ಯರು ಹೇಳಿದ್ದಾರೆ.

    ಪ್ರಕರಣ ಸಂಬಂಧ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದು, ಕೂಡಲೇ ಆತನನ್ನು ಬಂಧಿಸಲಾಗುವುದು ಅಂತ ಗುಂಟೂರು ಪೊಲೀಸ್ ಅಧೀಕ್ಷಕ ಅಪ್ಪಲ ನಾಯ್ಡು ಹೇಳಿದ್ದಾರೆ.

    ಇತ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿರುವುದನ್ನು ಖಂಡಿಸಿದ ಆಕೆಯ ಪೋಷಕರು ಹಾಗೂ ಸ್ಥಳೀಯರು ಹೆದ್ದಾರಿ ಬಂದ್ ಮಾಡಿ, ಟಯರ್ ಸುಡುವ ಮೂಲಕ ಮುಂಜಾನೆ 3 ಗಂಟೆಯವರೆಗೆ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ಪ್ರಕರಣದ ಬಳಿಕ ತಲೆಮರೆಸಿಕೊಂಡಿರುವ ಆರೋಪಿಯನ್ನು ಬಂಧಿಸಿ, ನೇಣಿಗೇರಿಸುವಂತೆ ಒತ್ತಾಯಿಸಿದ್ದಾರೆ. ಇದೇ ಸಂದರ್ಭದಲ್ಲಿ ಪ್ರತಿಭಟನಾ ನಿರತವಾಗಿದ್ದ ತಂಡವೊಂದು ಆರೋಪಿಯ ಮಗನನ್ನು ಹಿಡಿದು ಚೆನ್ನಾಗಿ ಥಳಿಸಿದ್ದಾರೆ. ಈ ವೇಳೆ ವ್ಯಕ್ತಿಯೊಬ್ಬರು ಬಂದು ಆತನನ್ನು ಅಲ್ಲಿಂದ ಪಾರು ಮಾಡಿದ್ದಾರೆ ಎಂಬುದಾಗಿ ವರದಿಯಾಗಿದೆ.

  • ಮಹಿಳೆಯರಿಗೆ ವಿಶೇಷ ಸ್ಥಾನಮಾನಕ್ಕೆ ಆಗ್ರಹಿಸಿ ಸೀರೆ ಧರಿಸಿ ಪ್ರತಿಭಟಿಸಿದ ಸಂಸದ!

    ಮಹಿಳೆಯರಿಗೆ ವಿಶೇಷ ಸ್ಥಾನಮಾನಕ್ಕೆ ಆಗ್ರಹಿಸಿ ಸೀರೆ ಧರಿಸಿ ಪ್ರತಿಭಟಿಸಿದ ಸಂಸದ!

    ನವದೆಹಲಿ: ಆಂಧ್ರಪ್ರದೇಶದ ಮಹಿಳೆಯರಿಗೆ ವಿಶೇಷ ಸವಲತ್ತುಗಳನ್ನು ನೀಡುವಂತೆ ಆಗ್ರಹಿಸಿ ತೆಲುಗು ದೇಶಂ ಪಕ್ಷದ(ಟಿಡಿಪಿ) ಸಂಸದ ಎನ್ ಶಿವಪ್ರಸಾದ್ ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ.

    ಮಹಿಳೆಯರಂತೆ ಸೀರೆ ಉಟ್ಟು ಸಂಸದರು ಕೇಂದ್ರ ಸಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ ಅವರು ಶಿವಪ್ರಸಾದ್ ಅವರಿಗೆ ಸಾಥ್ ನೀಡಿದ್ದಾರೆ.

    2018ರ ಕೇಂದ್ರ ಬಜೆಟ್ ನಲ್ಲಿ ಆಂಧ್ರಪ್ರದೇಶದ ಜನತೆಗೆ ಸಾಕಷ್ಟು ಫಂಡ್ ನೀಡಲಿಲ್ಲ ಎಂದು ಟಿಡಿಪಿ ಕಳೆದ ತಿಂಗಳಿನಿಂದಲೂ ಕೇಂದ್ರ ಸರ್ಕರದ ವಿರುದ್ಧ ವಿನೂತನ ರೀತಿಯಲ್ಲಿ ಪ್ರತಿಭಟಿಸುತ್ತಲೇ ಬಂದಿದೆ. ಇದರ ಹಿತೆಗೆ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕೊಡಬೇಕೆಂದು ಒತ್ತಾಯಿಸಿದ್ದಾರೆ. ಇಲ್ಲಿನ ಸರ್ಕಾರ 2018-19ರಲ್ಲಿ ಸುಮಾರು 416 ಕೋಟಿ ರೂ.ಗಳಷ್ಟು ಆದಾಯದ ಕೊರತೆ ಎದುರಿಸುತ್ತಿದೆ ಅಂತ ರಾಷ್ಟ್ರೀಯ ಪತ್ರಿಕೆಯೊಂದು ವರದಿ ಮಾಡಿದೆ.

    ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ನ್ಯಾಯ ಒದಗಿಸಬಹುದು ಅಂತ ಅಂದುಕೊಂಡಿದ್ವಿ. ಆದ್ರೆ ಇಲ್ಲಿಯವರೆಗೆ ನಮಗೆ ಯಾವುದೇ ರೀತಿಯ ನ್ಯಾಯ ದೊರಕಿಲ್ಲ. ಕಳೆದ 4 ವರ್ಷದಿಂದ ಕಾಯುತ್ತಿದ್ದೇವೆ. ಯಾವುದೇ ಪ್ರಯೋಜನವಿಲ್ಲ. 2018ರ ಬಜೆಟ್ ನಲ್ಲಾದರೂ ರಾಜ್ಯಕ್ಕೆ ಸರ್ಕಾರ ಕೊಡುಗೆ ನೀಡಬಹುದು ಅಂತ ಆಶಯ ವ್ಯಕ್ತಪಡಿಸಿದ್ವಿ. ಆದ್ರೆ ಈ ಬಾರಿಯ ಬಜೆಟ್ ನಲ್ಲೂ ರಾಜ್ಯಕ್ಕೆ ಕೊಡುಗೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಅಂತ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.

    ಈ ಹಿಂದೆ ಅಂದ್ರೆ 2016ರಲ್ಲಿ ನೋಟು ನಿಷೇಧವಾದ ಸಂದರ್ಭದಲ್ಲಿ ರಾಜ್ಯದ ಜನತೆ ಕಷ್ಟ ಅನುಭವಿಸಿದ್ದು, ಈ ವೇಳೆ ಸಂಸದ ಶಿಪ್ರಸಾದ್ ಅವರು ಕಪ್ಪು-ಬಿಳುಪಿನ ಉಡುಗೆ ತೊಟ್ಟು ಸಂಸತ್ತಿಗೆ ಆಗಮಿಸಿ ಪ್ರತಿಭಟಿಸಿದ್ದರು.

  • ಫಸ್ಟ್ ನೈಟಲ್ಲಿ ‘ನರಕ ದರ್ಶನ’ ಮಾಡಿಸಿದವನಿಗೆ ಇಂದು ಪುರುಷತ್ವ ಪರೀಕ್ಷೆ!

    ಫಸ್ಟ್ ನೈಟಲ್ಲಿ ‘ನರಕ ದರ್ಶನ’ ಮಾಡಿಸಿದವನಿಗೆ ಇಂದು ಪುರುಷತ್ವ ಪರೀಕ್ಷೆ!

    ಹೈದರಾಬಾದ್: ಮದುವೆಯ ಈ ಬಂಧಾ, ಅನುರಾಗದ ಅನುಬಂಧಾ, ಏಳೇಳು ಜನುಮದಲೂ ತೀರದ ಸಂಬಂಧ ಎಂಬಂತೆ ಮದುವೆಯ ಬಗ್ಗೆ ಅಪಾರ ಕನಸು ಕಟ್ಟಿಕೊಂಡು ತಾಳಿ ಕಟ್ಟಿಸಿಕೊಂಡು ಪತಿಯ ಕಿರಾತಕ ಕೃತ್ಯಗಳಿಂದ ಫಸ್ಟ್ ನೈಟಲ್ಲೇ ಚಿತ್ರ ಹಿಂಸೆ ಅನುಭವಿಸಿದ ಯುವತಿಯ ಪತಿಯ ಪುರುಷತ್ವ ಪರೀಕ್ಷೆ ಮಾಡುವಂತೆ ಚಿತ್ತೂರ್ ಕೋರ್ಟ್ ಆದೇಶ ನೀಡಿದೆ. ಹೈದರಾಬಾದ್ ನಲ್ಲಿರುವ ಮೆಡಿಕಲ್ ಬೋರ್ಡ್ ನಲ್ಲಿ ಪುರುಷತ್ವ ಪರೀಕ್ಷೆ ಮಾಡುವಂತೆ ನ್ಯಾಯಾಲಯ ಸೂಚಿಸಿದ್ದು, ಪೊಲೀಸರು ಆರೋಪಿಯನ್ನು ಇಂದು ಪುರುಷತ್ವ ಪರೀಕ್ಷೆಗೆ ಹಾಜರುಪಡಿಸಲಿದ್ದಾರೆ.

    ಫಸ್ಟ್ ನೈಟಲ್ಲಿ ಏನಾಗಿತ್ತು?: ಚಿತ್ತೂರು ಜಿಲ್ಲೆಯ ಗಂಗಾಧರ ನೆಲ್ಲೂರು ಮಂಡಲದ ಮೋತರಂಗನಪಲ್ಲಿಯ ರಾಜೇಶ್ ಎಂಬಾತನಿಗೆ ಚಿನ್ನದಮರಗುಂಟ ಎಂಬಲ್ಲಿನ ಶೈಲಜಾ ಎಂಬಾಕೆಯ ಜೊತೆಯ ಡಿಸೆಂಬರ್ 1ರಂದು ಶುಕ್ರವಾರ ಮದುವೆ ನಡೆದಿತ್ತು. ರಾಜೇಶ್ ವೃತ್ತಿಯಲ್ಲಿ ಸರ್ಕಾರಿ ಶಾಲಾ ಶಿಕ್ಷಕನಾಗಿದ್ದರೆ, ಶೈಲಜಾ ಎಂಬಿಎ ವ್ಯಾಸಂಗ ಮಾಡುತ್ತಿದ್ದಳು. ಮದುವೆ ಆದ ತಕ್ಷಣ ದಂಪತಿ ಕನಿಪಾಕಂನಲ್ಲಿ ಪೂಜೆ ಸಲ್ಲಿಸಲು ತೆರಳಿದ್ದರು. ಅಲ್ಲಿಯವರೆಗೆ ಎಲ್ಲವೂ ಸರಿಯಾಗಿತ್ತು. ಆದರೆ ರಾಜೇಶನ ಕರಾಳ ಮುಖದ ಪರಿಚಯ ಶೈಲಜಾಗೆ ರಾತ್ರಿಯಾಗುತ್ತಿದ್ದಂತೆಯೇ ಅರಿವಾಯಿತು. ಫಸ್ಟ್ ನೈಟ್‍ನಲ್ಲೇ ರಾಕ್ಷಸನಾದ ಪತಿ- ಚೂರಿಯಿಂದ ಇರಿದು, ಅಂಗಾಂಗ ಕಚ್ಚಿ ಹಲ್ಲೆ

    ಫಸ್ಟ್ ನೈಟ್ ಗೆಂದು ಸಿದ್ಧಳಾಗಿ ಬಂದ ಶೈಲಜಾ ಮುಂದೆ ರಾಜೇಶ್ ತನ್ನ ವೈಯಕ್ತಿಕ ವಿಚಾರಗಳನ್ನು ಹಂಚಿಕೊಂಡಿದ್ದಾನೆ. ನಾನು ನಪುಂಸಕ, ನನಗೆ ಪುರುಷತ್ವ ಇಲ್ಲ. ಆದರೆ ಇದನ್ನು ನೀನು ಯಾರಿಗೂ ಹೇಳಬೇಡ ಎಂದು ಬೆದರಿಕೆ ಹಾಕಿದ್ದಾನೆ. ಆದರೆ ಶೈಲಜಾ ಫೋನ್ ಮಾಡಿ ಈ ವಿಚಾರವನ್ನು ತನ್ನ ಪೋಷಕರಿಗೆ ತಿಳಿಸುತ್ತಾಳೆ. ಇದನ್ನೂ ಓದಿ: ಯುವಕರೊಂದಿಗೆ ಸೆಕ್ಸ್ ಮಾಡುವಾಗ ಪತ್ನಿ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಪತಿರಾಯ!

    ಇದರಿಂದ ತನ್ನ ಮರ್ಯಾದೆ ಹರಾಜಾಯಿತು ಎಂದು ಸಿಟ್ಟಿಗೆದ್ದ ಪತಿರಾಯ ಪತ್ನಿಯ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ್ದಾನೆ. ಆಕೆಯ ಮುಖಕ್ಕೆ ಹೊಡೆದಿದ್ದಾನೆ. ಕಣ್ಣು, ಕೆನ್ನೆ, ತಲೆ ಹಾಗೂ ದೇಹ ಪೂರ್ತಿ ಹಲ್ಲೆ ಮಾಡಿದ್ದಾನೆ. ಇಷ್ಟು ಸಾಲದೆಂಬಂತೆ ಆಕೆಯ ದೇಹ ಪೂರ್ತಿ ಕಚ್ಚಿ ತನ್ನ ವಿಕೃತಿ ಮೆರೆದಿದ್ದಾನೆ. ಆತನ ಹೊಡೆತದ ತೀವ್ರತೆ ಎಷ್ಟಿತ್ತೆಂದರೆ ಹಲ್ಲೆ ನಡೆದ ಕೆಲವೇ ಗಂಟೆಗಳಲ್ಲಿ ಸುಂದರವಾಗಿದ್ದ ಮುಖ ಹಾಗೂ ಕಣ್ಣು ಊದಿಕೊಂಡಿತ್ತು. ಕಣ್ಣಿನ ಕೆಳಭಾಗ ಕಪ್ಪು ಬಣ್ಣಕ್ಕೆ ತಿರುಗಿತ್ತು. ಇನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದಾದಾಗ ಶೈಲಜಾ ತನ್ನ ಪೋಷಕರಿಗೆ ಫೋನ್ ಮಾಡಿ ವಿವರಿಸುತ್ತಾಳೆ. ಇದನ್ನೂ ಓದಿ: ಪತಿಯನ್ನು ಕೊಂದು, ಪ್ರೇಮಿಯನ್ನೇ ತನ್ನ ಗಂಡ ಎಂದು ನಂಬಿಸಲು ಆತನ ಮುಖಕ್ಕೆ ಆ್ಯಸಿಡ್ ಸುರಿದ ಪತ್ನಿ

    ತಕ್ಷಣ ಆಕೆಯ ಮನೆಯವರು ರಾಜೇಶ್ ಮನೆಗೆ ಆಗಮಿಸುತ್ತಾರೆ. ಅದರೆ ಬೆಡ್ ರೂಂ ಬಾಗಿಲು ತೆಗೆಯಲು ನಿರಾಕರಿಸಿದಾಗ ಬಾಗಿಲು ಒಡೆದು ಒಳ ಹೋಗುವ ವೇಳೆ ರಾಜೇಶ್ ಪರಾರಿಯಾಗಿದ್ದ. ಇದನ್ನೂ ಓದಿ: ಸೆಕ್ಸ್, ಸೆಕ್ಸ್.. ಎಂದು ಹಾತೊರೆಯುತ್ತಿದ್ದ ಬಾಯ್ ಫ್ರೆಂಡ್ ನ ಕತ್ತುಹಿಸುಕಿ ಕೊಂದ್ಳು..!

    ಇದೇ ವೇಳೆ ನೋವಿನಿಂದ ನರಳಾಡುತ್ತಿದ್ದ ಆಕೆಯನ್ನು ಆಸ್ಪತ್ರೆಗೆ ಸೇರಿದ್ದಾರೆ. ಆದರೆ ತುಟಿಯನ್ನು ಕಚ್ಚಿ, ಹಲ್ಲೆ ಮಾಡಿದ್ದರಿಂದ ಆಕೆಯ ತುಟಿ ಊದಿಕೊಂಡಿದ್ದರಿಂದ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಸದ್ಯ ಶೈಲಜಾ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಪತ್ನಿಗೆ ಬ್ಲೂಫಿಲ್ಮ್ ತೋರಿಸಿ, ಮದ್ಯ ಕುಡಿಸಿ ಸೆಕ್ಸ್ ಗೆ ಬರುವಂತೆ ಟೆಕ್ಕಿ ಗಂಡನ ಕಿರಿಕ್

    ಬೆಡ್ ರೂಂನಿಂದ ಪರಾರಿಯಾಗಿದ್ದ ರಾಜೇಶನನ್ನು ಬಳಿಕ ಪೊಲೀಸರು ಬಂಧಿಸಿದ್ದರು. ಆದರೆ ಪುರುಷತ್ವ ಪರೀಕ್ಷೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಪೊಲೀಸರು ಕೋರ್ಟ್ ಮೊರೆ ಹೋಗಿದ್ದರು. ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಪುರುಷತ್ವ ಪರೀಕ್ಷೆ ನಡೆಸಲು ಸೂಚಿಸಿದೆ. ಇದನ್ನೂ ಓದಿ: ಕಾಲ್ ಮಾಡಿ ಸೆಕ್ಸ್ ಗೆ ಕರೀತಿದ್ದ ವ್ಯಕ್ತಿ ಅರೆಸ್ಟ್-ಆರೋಪಿಯನ್ನ ನೋಡಿದ ಮಹಿಳೆ ಶಾಕ್!

  • ನ್ಯೂಜೆರ್ಸಿಯಲ್ಲಿ ಆಂಧ್ರದ ಮಹಿಳಾ ಟೆಕ್ಕಿ, ಮಗ ಹತ್ಯೆ!

    ನ್ಯೂಜೆರ್ಸಿಯಲ್ಲಿ ಆಂಧ್ರದ ಮಹಿಳಾ ಟೆಕ್ಕಿ, ಮಗ ಹತ್ಯೆ!

    ನ್ಯೂಜೆರ್ಸಿ: ಆಂಧ್ರ ಮೂಲದ ಮಹಿಳಾ ಟೆಕ್ಕಿ ಮತ್ತು ಆಕೆಯ 7 ವರ್ಷದ ಪುತ್ರ ಅಮೆರಿಕದ ನ್ಯೂಜೆರ್ಸಿಯಲ್ಲಿರುವ ಮನೆಯಲ್ಲಿ ಹತ್ಯೆಯಾಗಿರುವ ಘಟನೆ ನಡೆದಿದೆ.

    ಮೃತ ಮಹಿಳೆಯನ್ನು 38 ವರ್ಷದ ಎನ್ ಶಶಿಕಲಾ ಎಂದು ಗುರುತಿಸಲಾಗಿದೆ. ಶಶಿಕಲಾ ಮತ್ತು ಅವರ ಮಗನನ್ನು ಚೂರಿಯಿಂದ ಹಲವು ಬಾರಿ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಕೆಲಸ ಮುಗಿಸಿ ಮನೆಗೆ ಹಿಂತಿರುಗಿದ ವೇಳೆ ತಾಯಿ ಮಗ ಇಬ್ಬರೂ ಕೊಲೆಯಾಗಿರೋದು ಗೊತ್ತಾಯಿತು ಅಂತಾ ಶಶಿಕಲಾ ಪತಿ ಹನುಮಂತ್ ರಾವ್ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

    ಈ ಬಗ್ಗೆ ಹೇಳಿಕೆ ನೀಡಿರೋ ಇಂಡೋ-ಅಮೆರಿಕನ್ ಸಮುದಾಯದ ಮುಖ್ಯಸ್ಥ ಪ್ರಸಾದ್ ತೊಟಕುರ, ಹನುಮಂತರಾವ್ ಅವರು ತನ್ನ ಹೆಂಡತಿ ಹಾಗೂ ಮಗ ರಕ್ತದ ಮಡುವಿನಲ್ಲಿ ಬಿದ್ದಿರೋದನ್ನ ನೋಡಿದ್ದರು. ಇಬ್ಬರ ಕತ್ತು ಸೀಳಿ ಕೊಲೆ ಮಾಡಲಾಗಿತ್ತು ಎಂದು ಹೇಳಿದ್ದಾರೆ. ಆದ್ರೆ ಭಾರತದಲ್ಲಿರುವ ಶಶಿಕಲಾ ತಾಯಿ ಕೃಷ್ಣ ಕುಮಾರಿ, ಅಮೆರಿಕದಲ್ಲಿ ನನ್ನ ಅಳಿಯನಿಗೆ ಬೇರೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧವಿತ್ತು. ಇದೇ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

    ಹನುಮಂತ್ ರಾವ್ ಹಾಗೂ ಶಶಿಕಲಾ ಇಬ್ಬರೂ ಸಾಫ್ಟ್‍ವೇರ್ ಉದ್ಯೋಗಿಗಳಾಗಿದ್ದು, ಕಳೆದ 12 ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿದ್ದರು. ಶಶಿಕಲಾ ಮನೆಯಿಂದಲೇ ಕೆಲಸ ಮಾಡುತ್ತಿದ್ದು, ಎಂದಿನಂತೆ ಸಂಜೆ ಶಾಲೆಗೆ ಹೋದ ಮಗನನ್ನು ಕರೆದುಕೊಂಡು ಮನೆಗೆ ಬಂದಿದ್ದರು.

    ಇನ್ನು ಈ ಪ್ರಕರಣ ಸಂಬಂಧ ಆಂಧ್ರದ ಸಂಸತ್ತಿನಲ್ಲಿ ಶುಕ್ರವಾರ ಚರ್ಚೆ ನಡೆದಿದೆ. ಇದು ತುಂಬಾ ಅಪಾಯಕಾರಿಯಾದುದು. ಎರಡು ವಾರಗಳ ಹಿಂದೆಯಷ್ಟೇ ಇಬ್ಬರು ಭಾರತೀಯರ ಕೊಲೆಯಾಗಿದ್ದು, ಇದೀಗ ಮತ್ತಿಬ್ಬರು ಭಾರತೀಯರ ಹತ್ಯೆಯಾಗಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಜೊತೆ ಈ ಬಗ್ಗೆ ಮಾತನಾಡಬೇಕು ಅಂತ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಟಿ ಸುಬ್ಬರಾಮಿ ರೆಡ್ಡಿ ಹೇಳಿದ್ದಾರೆ.

    ಇನ್ನು ಈ ಕೃತ್ಯ ಜನಾಂಗೀಯ ದ್ವೇಷದಿಂದ ನಡೆದಿರಬಹುದು ಎಂಬ ವಿಷಯವನ್ನ ಅಮೆರಿಕದ ಪೊಲೀಸ್ ಅಧಿಕಾರಿಗಳು ತಳ್ಳಿಹಾಕಿದ್ದಾರೆ. ಅವರು ಭಾರತೀಯರು ಎಂಬ ಕಾರಣಕ್ಕೆ ಜನಾಂಗೀಯ ದ್ವೇಷದಿಂದ ಕೊಲೆ ನಡೆದಿದೆ ಎಂದು ಹೇಳಲು ಯಾವುದೇ ಆಧಾರವಿಲ್ಲ ಎಂದಿದ್ದಾರೆ.