Tag: Andhra Pradesh

  • ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರ ಮಗಳಿಗೆ ಮೆಡಿಕಲ್ ಸೀಟ್ ಕೊಡಿಸ್ತೀನೆಂದು ವಂಚನೆ

    ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರ ಮಗಳಿಗೆ ಮೆಡಿಕಲ್ ಸೀಟ್ ಕೊಡಿಸ್ತೀನೆಂದು ವಂಚನೆ

    ಹೈದರಾಬಾದ್: ಮೆಡಿಕಲ್ ಸೀಟ್ ಕೊಡಿಸ್ತೀನಿ ಅಂತಾ ಯಾರಾದ್ರು ನಿಮ್ಮನ್ನ ಕೇಳಿದ್ದಾರಾ? ಹಾಗಿದ್ರೆ ಹುಷಾರಾಗಿರಿ. ಮೆಡಿಕಲ್ ಸೇಟ್ ಕೊಡಿಸ್ತೀನಿ ಅಂತ ಹೇಳಿ, 40 ಲಕ್ಷ ರೂ. ಹಣ ಪಡೆದು ಪರಾರಿಯಾಗಿದ್ದ ಕಳ್ಳ ಈಗ ಪೊಲೀಸರು ಅಥಿತಿಯಾಗಿದ್ದಾನೆ.

    ಆರೋಪಿ ರೂಪೇಂದ್ರ ಕುಮಾರ್, ಆಂಧ್ರ ಪ್ರದೇಶದ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರ ಮಗಳಿಗೆ ಬೆಂಗಳೂರಿನಲ್ಲಿ ಸೀಟ್ ಕೊಡಿಸುವುದಾಗಿ ಹೇಳಿದ್ದಾನೆ. ನಂತರ ಸೀಟ್‍ಗಾಗಿ 40 ಲಕ್ಷ ರೂ. ಹಣವನ್ನು ಪಡೆದುಕೊಂಡು ಕರ್ನಾಟಕ ರಾಜ್ಯಪಾಲ ವಾಜುಭಾಯ್ ವಾಲಾ ಅವರ ನಕಲಿ ಶಿಫಾರಸು ಪತ್ರವನ್ನು ಅವರಿಗೆ ವಾಟ್ಸಾಪ್ ಮೂಲಕ ಕಳುಹಿದ್ದಾನೆ. ಹಣ ಕೈಗೆ ಬಂದ ತಕ್ಷಣ ಕುಮಾರ್ ಪರಾರಿಯಾಗಿದ್ದಾನೆ.

    ನಂತರ ಪ್ರಾಂಶುಪಾಲರು ಕುಮಾರ್ ವಿರುದ್ಧ ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಆಯೋಪಿಯನ್ನು ಹುಡುಕಿ ಬಂಧಿಸಿದ್ದಾರೆ. ಆರೋಪಿ ಬಳಿ ಇದ್ದ ರಾಜ್ಯಪಾಲರ ಹೆಸರಿನ ನಕಲಿ ವಿಸಿಟಿಂಗ್ ಕಾರ್ಡ್, ಹಾರ್ಡ್ ಡಿಸ್ಕ್, ಮೊಬೈಲ್ ಮತ್ತು ಕೆಲವು ಪೆನ್ ಡ್ರೈವ್‍ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

  • ವಿಡಿಯೋ: ಹಾಡಹಗಲೇ ವ್ಯಕ್ತಿಯನ್ನ ಅಟ್ಟಾಡಿಸಿ ಕುರಿ ಕಡಿಯುವಂತೆ ಕೊಚ್ಚಿ ಕೊಚ್ಚಿ ಕೊಂದ್ರು

    ವಿಡಿಯೋ: ಹಾಡಹಗಲೇ ವ್ಯಕ್ತಿಯನ್ನ ಅಟ್ಟಾಡಿಸಿ ಕುರಿ ಕಡಿಯುವಂತೆ ಕೊಚ್ಚಿ ಕೊಚ್ಚಿ ಕೊಂದ್ರು

    ಹೈದರಾಬಾದ್: ಹಾಡಹಗಲೇ ವ್ಯಕ್ತಿಯೊಬ್ಬರನ್ನ ನಾಲ್ವರು ದುಷ್ಕರ್ಮಿಗಳು ಭೀಕರವಾಗಿ ಕೊಚ್ಚಿ ಕೊಂದ ಘಟನೆ ಇಂದು ಬೆಳಗ್ಗೆ ಆಂಧ್ರಪ್ರದೇಶದಲ್ಲಿ ನಡೆದಿದೆ.

    ಕಡಪಾ ಜಿಲ್ಲೆಯ ಪ್ರೊದ್ದುಟೂರಿನ ಕೋರ್ಟ್ ವೊಂದರ ಬಳಿಯೇ ಈ ಆಘಾತಕಾರಿ ಘಟನೆ ನಡೆದಿದೆ. ಕೊಲೆಗೀಡಾದ ವ್ಯಕ್ತಿಯನ್ನು 32 ವರ್ಷದ ಮಾರುತಿ ರೆಡ್ಡಿ ಎಂದು ಗುರುತಿಸಲಾಗಿದೆ. ಮಾರುತಿ ಅವರು ಪ್ರಕರಣವೊಂದರ ಸಂಬಂಧ ನ್ಯಾಯಾಲಯಕ್ಕೆ ಹಾಜರಾಗಲು ತೆರಳುತ್ತಿದ್ದ ವೇಳೆ ಕೊಲೆ ನಡೆದಿದೆ.

    ಆಟೋ ರಿಕ್ಷಾದಿಂದ ಕೆಳಗಿಳಿಯುತ್ತಿದ್ದಂತೆ ಮಾರುತಿ ಅವರ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ. ಮಾರುತಿ ತಪ್ಪಿಸಿಕೊಂಡು ಹೋಗಲು ಯತ್ನಿಸಿದರಾದ್ರೂ ರೋಡ್ ಡಿವೈಡರ್ ಬಳಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಎಲ್ಲರೂ ನೋಡುತ್ತಿದ್ದಂತೆ ಮಚ್ಚಿನಿಂದ ಅನೇಕ ಬಾರಿ ಕೊಚ್ಚಿ ಕೊಚ್ಚಿ ಕೊಲೆ ಮಾಡಿದ್ದಾರೆ.

    ಕೆಲ ಸಾರ್ವಜನಿಕರು ಇದನ್ನ ನೋಡಿ ಭಯಗೊಂಡು ಓಡಿದ್ರೆ ಇನ್ನೂ ಕೆಲವರು ಕಣ್ಣ ಮುಂದೆಯೇ ವ್ಯಕ್ತಿ ಕೊಲೆಯಾಗೋದನ್ನ ನಿಂತು ನೋಡಿದ್ದಾರೆ. ಈ ಪ್ರದೇಶದ ಸಿಸಿಟಿವಿ ಕ್ಯಾಮೆರಾದಲ್ಲೂ ಕೂಡ ಘಟನೆಯ ದೃಶ್ಯ ಸೆರೆಯಾಗಿದೆ.

    ಈ ಭಯಾನಕ ಹತ್ಯೆಗೆ ಅನೈತಿಕ ಸಂಬಂಧವೇ ಕಾರಣ ಎನ್ನಲಾಗ್ತಿದೆ. ಮಾರುತಿ ಅವರನ್ನ ಕೊಲೆಗೈದ ನಾಲ್ವರಲ್ಲಿ ಒಬ್ಬರು ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯ ಸಂಬಂಧಿ ಎಂದು ವರದಿಯಾಗಿದೆ.

    ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.

    https://www.youtube.com/watch?v=yuXEI52u6j0

  • ಚಿತ್ತೂರಿನಲ್ಲಿ ದುರಂತ: ಅಂಗಡಿಗೆ ನುಗ್ಗಿದ್ದ ಲಾರಿಗೆ 20 ಬಲಿ

    ಚಿತ್ತೂರಿನಲ್ಲಿ ದುರಂತ: ಅಂಗಡಿಗೆ ನುಗ್ಗಿದ್ದ ಲಾರಿಗೆ 20 ಬಲಿ

    ಚಿತ್ತೂರು: ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ  ನಡೆದ ಭೀಕರ ರಸ್ತೆ ಅಪಘಾತಕ್ಕೆ 20 ಮಂದಿ ಬಲಿಯಾಗಿದ್ದಾರೆ.

    ಏಡುಪೇಡು ರೇಣುಕುಂಟ ಬಳಿ ಅಪಘಾತ ಸಂಭವಿಸಿದ್ದು 20 ಮಂದಿ ಸಾವನ್ನಪ್ಪಿದ್ದರೆ, 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

    ಬ್ರೇಕ್ ಫೇಲ್ ಆಗಿದ್ದ ಲಾರಿ ರಸ್ತೆ ಬದಿ ಅಂಗಡಿಗಳಿಗೆ ನುಗ್ಗಿದ ಪರಿಣಾಮ ಪೂತಲಪಟ್ಟು ನಾಯುಡು ಪೇಟ ಹೆದ್ದಾರಿಯಲ್ಲಿ ರಕ್ತಪಾತ ಸಂಭವಿಸಿದೆ.

    ಗಾಯಾಳುಗಳು ತಿರುಪತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತಪಟ್ಟವರಲ್ಲಿ ಹೆಚ್ಚಿನವರು ಬೀದಿಯಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳು ಎಂದು ವರದಿಯಾಗಿದೆ.

  • ರಾಯಚೂರಿನಿಂದ ಆಂಧ್ರಪ್ರದೇಶಕ್ಕೆ ಮಾರಾಟವಾಗ್ತಿದೆ ಜೀವ ಜಲ

    ರಾಯಚೂರಿನಿಂದ ಆಂಧ್ರಪ್ರದೇಶಕ್ಕೆ ಮಾರಾಟವಾಗ್ತಿದೆ ಜೀವ ಜಲ

    -ಕುಡಿಯಲು ನೀರಿಲ್ಲದಿದ್ದರೂ ಜೋರಾಗಿದೆ ತುಂಗಭದ್ರೆಯಲ್ಲಿ ನೀರಿನ ವ್ಯಾಪಾರ

    -ಖಾಸಗಿ ಬೋರ್‍ವೆಲ್‍ಗಳ ಮೇಲೆ ಹಿಡಿತ ಸಾಧಿಸುವ ಜಿಲ್ಲಾಡಳಿತದ ಉದ್ದೇಶ ವಿಫಲ

    ರಾಯಚೂರು: ಜಿಲ್ಲೆಯಲ್ಲಿ ಹರಿಯುವ ತುಂಗಾಭದ್ರ ನದಿ ಸಂಪೂರ್ಣ ಬತ್ತಿಹೋಗಿದೆ. ನದಿ ಪಾತ್ರದ ಗ್ರಾಮಗಳಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ದಿನೇ ದಿನೇ ಉಲ್ಭಣಿಸುತ್ತಿದೆ. ಪರಸ್ಥಿತಿ ಹೀಗಿದ್ದರೂ ನದಿ ತಟದಲ್ಲಿ ಖಾಸಗಿ ಬೋರ್‍ವೆಲ್ ಕೊರೆದಿರುವ ರೈತರು ನೀರನ್ನ ಆಂಧ್ರಪ್ರದೇಶಕ್ಕೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಖಾಸಗಿ ಬೋರ್‍ವೆಲ್, ಕೆರೆಗಳನ್ನ ಸ್ವಾಧೀನಕ್ಕೆ ಪಡೆದು ಬರಗಾಲ ನಿರ್ವಹಣೆಗೆ ಮುಂದಾಗಿರುವ ಜಿಲ್ಲಾಡಳಿತಕ್ಕೆ ಹಿನ್ನೆಡೆಯಾಗಿದೆ.

    ರಾಯಚೂರಲ್ಲಿ ನೀರಿನ ಸಮಸ್ಯೆ ಹೇಳತೀರದ ಮಟ್ಟಕ್ಕೆ ಇದ್ರೂ ಜಿಲ್ಲೆಯಿಂದ ಆಂಧ್ರಪ್ರದೇಶದ ಗಡಿಯ ಜಮೀನುಗಳಿಗೆ ನೀರು ಮಾರಾಟವಾಗುತ್ತಿದೆ. ಅದೂ ಬತ್ತಿ ಹೋಗಿರೋ ತುಂಗಾಭದ್ರಾ ನದಿಯ ಮೂಲಕ ನೀರನ್ನ ಸರಬರಾಜು ಮಾಡಲಾಗುತ್ತಿದೆ. ರಾಜ್ಯದ ನದಿಯ ಈ ದಡದಿಂದ ಆಂಧ್ರಪ್ರದೇಶದ ಆ ದಡದವರೆಗೆ ಪೈಪ್‍ಲೈನ್ ಅಳವಡಿಸಿ ಬೋರ್‍ವೆಲ್ ನೀರನ್ನ ಹರಿಸಲಾಗುತ್ತಿದೆ. ಇನ್ನೂ ಕೆಲ ರೈತರು ನದಿಯಲ್ಲಿ ಹೊಂಡಗಳನ್ನ ನಿರ್ಮಿಸಿ ಅದಕ್ಕೆ ನೀರನ್ನ ಬಿಡುತ್ತಿದ್ದಾರೆ. ಆಂಧ್ರ ರೈತರು ಆ ಹೊಂಡಗಳಿಂದ ನೀರನ್ನ ಪಂಪ್ ಸೆಟ್ ಮೂಲಕ ಪಡೆದುಕೊಳ್ಳುತ್ತಿದ್ದಾರೆ.

    ನದಿ ತಟದಲ್ಲಿ ಬೋರ್‍ವೆಲ್ ಕೊರೆದಿರುವ ರೈತರಲ್ಲಿ ಕೆಲವರ ಬೆಳೆ ಕಟಾವಾಗಿದ್ದು, ಇನ್ನೂ ಕೆಲವು ರೈತರ ಬೆಳೆ ಹಾಳಾಗಿದ್ದರಿಂದ ಆಂಧ್ರಪ್ರದೇಶದ ರೈತರಿಗೆ ನೀರು ಮಾರುತ್ತಿದ್ದಾರೆ. ಭತ್ತ, ಮೆಕ್ಕೆಜೋಳ ಬೆಳೆದಿರುವ ಆಂಧ್ರದ ಕರ್ನೂಲ್ ಜಿಲ್ಲೆಯ ಮಾಧಾವರಂ, ಅಗಸನೂರು, ಕಂದಕನೂರು, ರಾಂಪುರ ಗ್ರಾಮಗಳ ರೈತರು ರಾಜ್ಯದ ಚಿಕ್ಕಮಂಚಾಲಿ, ತುಂಗಭದ್ರಾ, ಬುಳ್ಳಾಪುರ, ಎಲೆಬಿಚ್ಚಾಲಿ, ಕಮಲಾಪುರ ಗ್ರಾಮಗಳ ಬೋರ್‍ವೆಲ್‍ನಿಂದ ನೀರು ಪಡೆಯುತ್ತಿದ್ದಾರೆ.

    ಮೊದಲಿನಿಂದಲೂ ಬೇಸಿಗೆಯಲ್ಲಿ ನೀರಿನ ವ್ಯವಹಾರ ನಡೆಯುತ್ತಲೇ ಬಂದಿದೆ. ದಿನ, ವಾರದ ಲೆಕ್ಕದಲ್ಲಿ ನೀರನ್ನ ಮಾರಾಟ ಮಾಡುತ್ತಿದ್ದಾರೆ. ಆದ್ರೆ ಈ ವರ್ಷ ಜಿಲ್ಲೆಯಲ್ಲಿ ಭೀಕರ ಬರಗಾಲ ಎದುರಾಗಿರುವುದರಿಂದ ಖಾಸಗಿ ಬೋರ್‍ವೆಲ್‍ಗಳನ್ನ ವಶಕ್ಕೆ ಪಡೆದು ನೀರು ಸರಬರಾಜು ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಅಧಿಕಾರಿಗಳ ಕಣ್ಣು ತಪ್ಪಿಸಿ ನದಿ ತಟದ ಜನ ನೀರನ್ನ ಆಂಧ್ರಪ್ರದೇಶಕ್ಕೆ ಮಾರಾಟ ಮಾಡುತ್ತಿದ್ದಾರೆ. ಎಲ್ಲೆಲ್ಲಿ ನೀರಿನ ಮಾರಾಟ ನಡೆಯುತ್ತಿದೆ ಅನ್ನೋದನ್ನ ಪತ್ತೆಹಚ್ಚಿ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಬಗಾದಿ ಗೌತಮ್ ಹೇಳಿದ್ದಾರೆ.

    ಒಟ್ನಲ್ಲಿ, ಜಿಲ್ಲೆಯ ಕೆಲವೆಡೆ ದುಡ್ಡು ಕೊಟ್ರೂ ನೀರು ಸಿಗದ ಪರಸ್ಥಿತಿ ಎದುರಾಗಿರುವಾಗ ಜಿಲ್ಲೆಯ ರೈತರೇ ಆಂಧ್ರಕ್ಕೆ ನೀರು ಮಾರಾಟ ಮಾಡುತ್ತಿರುವುದು ವಿಪರ್ಯಾಸ. ಜಿಲ್ಲಾಡಳಿತ ಕೂಡಲೇ ಎಚ್ಚೆತ್ತು ಕ್ರಮ ಕೈಗೊಳ್ಳಬೇಕಿದೆ. ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಿಗೆ ನೀರನ್ನ ಒದಗಿಸಬೇಕಿದೆ.

     

  • ನದಿಗೆ ಬಿದ್ದ ಬಸ್ – 6 ಜನರ ಸಾವು, 30 ಪ್ರಯಾಣಿಕರಿಗೆ ಗಾಯ

    ನದಿಗೆ ಬಿದ್ದ ಬಸ್ – 6 ಜನರ ಸಾವು, 30 ಪ್ರಯಾಣಿಕರಿಗೆ ಗಾಯ

    ಹೈದರಾಬಾದ್: ಖಾಸಗಿ ಬಸ್‍ವೊಂದು ನದಿಗೆ ಬಿದ್ದ ಪರಿಣಾಮ 6 ಮಂದಿ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ವಿಜಯವಾಡ ಬಳಿ ನಡೆದಿದೆ.

    ಇಂದು ಬೆಳಿಗ್ಗೆ ಭುವನೇಶ್ವರದಿಂದ ಹೈದರಾಬಾದ್‍ಗೆ ತೆರಳುತ್ತಿದ್ದ ಬಸ್ ವಿಜಯವಾಡಾ ಬಳಿ ನದಿಗೆ ಉರುಳಿ ಬಿದ್ದಿದೆ. ಘಟನೆಯಲ್ಲಿ 6 ಮಂದಿ ಸಾವನ್ನಪ್ಪಿದ್ದು ಸುಮಾರು 30 ಜನ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ನಂದಿಗಾಮ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, 10 ಜನರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

    ಒಡಿಶಾದಿಂದ ತೆಲಂಗಾಣಕ್ಕೆ ಸುಮಾರು 1 ಸಾವಿರ ಕಿಮೀ ಕ್ರಮಿಸಬೇಕಿದ್ದ ಬಸ್ಸನ್ನು ವಿಜಯವಾಡ ಬಳಿ ನಿಲ್ಲಿಸಿ ಬೇರೊಬ್ಬ ಚಾಲಕ ಬಸ್ ಹತ್ತಿದ್ದರು. ಆದ್ರೆ ಬೆಳಿಗ್ಗೆ 5.30ರ ವೇಳೆಯಲ್ಲಿ ಮುಲ್ಲಪಾಡು ಬಳಿ ಸೇತುವೆಯ ಡಿವೈಡರ್‍ಗೆ ಬಸ್ ಡಿಕ್ಕಿ ಹೊಡೆದು ಮುಂದೆ ಹೋಗಿದ್ದು ಎರಡು ಪಥದ ಮಧ್ಯೆ ಇದ್ದ ಸಂದಿಯಲ್ಲಿ ನದಿಗೆ ಉರುಳಿ ಬಿದ್ದಿದೆ.

    ಗ್ಯಾಸ್ ಕಟ್ಟರ್‍ಗಳನ್ನು ಬಳಸಿ ಬಸ್‍ನಲ್ಲಿದ್ದ ಪ್ರಯಾಣಿಕರನ್ನ ರಕ್ಷಣೆ ಮಾಡಲಾಗಿದೆ. ಚಾಲಕ ನಿದ್ದೆಯ ಮಂಪರಿನಲ್ಲಿದ್ದು, ಆತನ ಅಜಾಗರೂಕತೆಯಿಂದಲೇ ಈ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

  • ಇಸ್ರೋ ಮೈಲಿಗಲ್ಲು- ಒಂದೇ ನೆಗೆತಕ್ಕೆ 104 ಉಪಗ್ರಹಗಳ ಉಡಾವಣೆ ಯಶಸ್ವಿ

    ಇಸ್ರೋ ಮೈಲಿಗಲ್ಲು- ಒಂದೇ ನೆಗೆತಕ್ಕೆ 104 ಉಪಗ್ರಹಗಳ ಉಡಾವಣೆ ಯಶಸ್ವಿ

    ಶ್ರೀಹರಿಕೋಟಾ: ಆಂಧ್ರಪ್ರದೇಶದ ಶ್ರೀಹರಿಕೋಟಾ ಉಡಾವಣಾ ನೆಲೆಯಿಂದ ಭಾರತದ ಬಹ್ಯಾಕಾಶ ಸಂಸ್ಥೆ ಏಕಕಾಲಕ್ಕೆ 104 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.

    ಬಾಹ್ಯಾಕಾಶ ಇತಿಹಾಸದಲ್ಲಿ ಮೊದಲ ಬಾರಿಗೆ ದೇಶವೊಂದು ಉಡಾವಣೆಯಲ್ಲಿ ಶತಕದ ಸಾಧನೆಯನ್ನು ಮಾಡಿದೆ. ಪ್ರತಿ ಉಪಗ್ರಹವೂ 4.7 ಕೆ.ಜಿ. ತೂಕ ಹೊಂದಿದ್ದು, ಗಂಟೆಗೆ 27 ಸಾವಿರ ಕಿ.ಮೀ. ಅಂದರೆ ಪ್ರಯಾಣಿಕ ವಿಮಾನಕ್ಕಿಂತ 40 ಪಟ್ಟು ಅಧಿಕ ವೇಗದಲ್ಲಿ 101 ಸಣ್ಣ ಉಪಗ್ರಹಗಳನ್ನು 600 ಸೆಕೆಂಡ್‍ಗಿಂತ ಕಡಿಮೆ ಅವಧಿಯಲ್ಲಿ ಕಕ್ಷೆಗೆ ಸೇರಿಸುವಲ್ಲಿಇಸ್ರೋ ಯಶಸ್ವಿಯಾಗಿದೆ.

    2014ರಲ್ಲಿ ರಷ್ಯಾ ಒಂದೇ ರಾಕೆಟ್‍ನಲ್ಲಿ 37 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ್ದೇ ಈವರೆಗಿನ ದಾಖಲೆ. 104 ಉಪಗ್ರಹಗಳ ಪೈಕಿ ಭಾರತದ 4, ಅಮೆರಿಕದ 96 ಉಪಗ್ರಹಗಳು ಸೇರಿವೆ. ಉಳಿದಂತೆ ಇಸ್ರೇಲ್, ಕಜಕಿಸ್ತಾನ, ನೆದರ್ಲೆಂಡ್, ಸ್ವಿಜರ್ಲೆಂಡ್ ಹಾಗೂ ಯುಎಇಯ ತಲಾ ಒಂದು ಉಪಗ್ರಹ ಇಸ್ರೋ ರಾಕೆಟ್‍ನಲ್ಲಿ ಬಾಹ್ಯಾಕಾಶ ಸೇರಲಿದೆ. ಅಮೆರಿಕದ ನಾಸಾಕ್ಕೆ ಹೋಲಿಸಿದರೆ ಇಸ್ರೋದ ಉಡಾವಣೆ ದರ ಅಗ್ಗವಾಗಿರುವ ಹಿನ್ನೆಲೆಯಲ್ಲಿ ವಿದೇಶಿ ಕಂಪನಿಗಳು ಉಪಗ್ರಹ ಉಡಾವಣೆಗೆ ಇಸ್ರೋವನ್ನು ಅವಲಂಬಿಸಿವೆ.