Tag: Andhra Pradesh

  • ಲೋಕಸಭಾ ಚುನಾವಣೆಗೂ ಮೊದಲೇ ಯುದ್ಧ – ಬಿಜೆಪಿ ನನಗೆ ಹೇಳಿಲ್ಲ ಎಂದ ಪವನ್ ಕಲ್ಯಾಣ್

    ಲೋಕಸಭಾ ಚುನಾವಣೆಗೂ ಮೊದಲೇ ಯುದ್ಧ – ಬಿಜೆಪಿ ನನಗೆ ಹೇಳಿಲ್ಲ ಎಂದ ಪವನ್ ಕಲ್ಯಾಣ್

    ಹೈದರಾಬಾದ್: ಲೋಕಸಭೆ ಚುನಾವಣೆಗೂ ಮುನ್ನ ದೇಶದಲ್ಲಿ ಯುದ್ಧ ಆಗಲಿದೆ ಎಂದು 2 ವರ್ಷಗಳ ಹಿಂದೆಯೇ ಮಾಹಿತಿ ಇತ್ತು ಎಂದಿದ್ದ ಆಂಧ್ರಪ್ರದೇಶ ಜನಸೇನಾ ಪಕ್ಷದ ಸಂಸ್ಥಾಪಕ, ನಟ ಪವನ್ ಕಲ್ಯಾಣ್ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.

    ಆಂಧ್ರದ ಕಡಪ ಜಿಲ್ಲೆಯ ಸಾರ್ವಜನಿಕ ಸಮಾರಂಭದ ವೇಳೆ ಪವನ್ ಕಲ್ಯಾಣ್ ಪಾಕಿಸ್ತಾನ ಹಾಗೂ ಭಾರತದ ನಡುವಿನ ಸಂದಿಗ್ಧ ಸ್ಥಿತಿಯ ಬಗ್ಗೆ ಮಾತನಾಡಿದ್ದರು. ಈ ವೇಳೆ ಬಿಜೆಪಿ ನನಗೆ 2 ವರ್ಷದ ಹಿಂದೆಯೇ ಯುದ್ಧದ ಬಗ್ಗೆ ಹೇಳಿತ್ತು ಎಂದಿದ್ದರು. ಪವನ್‍ರ ಈ ಹೇಳಿಕೆ ರಾಷ್ಟ್ರ ರಾಜಕಾರಣದಲ್ಲಿ ಬಿಜೆಪಿ ವಿರುದ್ಧ ಮತ್ತಷ್ಟು ವಾಗ್ದಾಳಿ ನಡೆಸಲು ಕಾರಣವಾಗಿತ್ತು.

    ಈ ಹೇಳಿಕೆ ಬೆನಲ್ಲೇ ಸ್ಪಷ್ಟನೆ ನೀಡಿರುವ ಪವನ್ ಕಲ್ಯಾಣ್, ದೇಶದಲ್ಲಿ ಎಂತಹ ಪರಿಸ್ಥಿತಿ ನಿರ್ಮಾಣ ಆಗುತ್ತದೆ ಎಂಬ ಬಗ್ಗೆ ಕೆಲ ತಜ್ಞರು ತಮ್ಮ ವರಿದಿಗಳ ಮೂಲಕ ತಿಳಿಸುತ್ತಾರೆ. ಇಂತಹದ್ದೇ ರಾಜಕೀಯ ವಿಶ್ಲೇಷಣೆ ವೇಳೆ ಮಾಹಿತಿ ನನಗೆ ಹೇಳಿದ್ದರು. ಅಲ್ಲದೇ ಆರ್ಥಿಕತೆಯ ಬಗ್ಗೆಯೂ ಇಂತಹದ್ದೇ ಮಾಹಿತಿ ನೀಡಲಾಗುತ್ತದೆ. ನನಗೆ ಬಿಜೆಪಿ ಈ ಮಾತು ಹೇಳಿಲ್ಲ ಎಂದಿದ್ದಾರೆ.

    ಯುದ್ಧದ ಬಗ್ಗೆ ಕೆಲವರು ದೇಶದ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆದು ವಿಶ್ಲೇಷಣೆ ಮಾಡಿ ಭವಿಷ್ಯ ಹೇಳುತ್ತಾರೆ. 2 ವರ್ಷಗಳ ಹಿಂದೆಯೇ ಯುದ್ಧ ಬರುತ್ತದೆ ಎಂದು ಕೆಲ ವರದಿಗಳು ಬಂದಿದೆ. ನೀವು ಕೂಡ ಅವುಗಳನ್ನು ಓದಿದರೆ ತಿಳಿಯುತ್ತದೆ. ಯುದ್ಧದ ಬಗ್ಗೆ ನಾನು ಎಂದು ಭವಿಷ್ಯ ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಜ್ಯದ ಜನರನ್ನ ಕಡೆಗಣಿಸಿ ಮಗನ ಅಭಿವೃದ್ಧಿ ಮಾಡ್ತಿದ್ದಾರೆ ನಾಯ್ಡು: ಪ್ರಧಾನಿ ಮೋದಿ ಕಿಡಿ

    ರಾಜ್ಯದ ಜನರನ್ನ ಕಡೆಗಣಿಸಿ ಮಗನ ಅಭಿವೃದ್ಧಿ ಮಾಡ್ತಿದ್ದಾರೆ ನಾಯ್ಡು: ಪ್ರಧಾನಿ ಮೋದಿ ಕಿಡಿ

    – ಕಾಂಗ್ರೆಸ್ ಮುಕ್ತ ಎಂದಿದ್ದ ಎನ್‌ಟಿಆರ್‌ಗೆ ಚಂದ್ರಬಾಬು ನಾಯ್ಡು ಅವಮಾನ
    – ಪ್ರಜೆಗಳಿಗೆ ಕಣ್ಣೀರು ತರಿಸುವುದರಲ್ಲಿಯೂ ಆಂಧ್ರ ಸಿಎಂ ಸಿನಿಯರ್

    ಅಮರಾವತಿ: ಆಂಧ್ರಪ್ರದೇಶದ ಗುಂಟೂರುನಲ್ಲಿ ನಡೆದ ಬಿಜೆಪಿಯ ಬೃಹತ್ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಚಂದ್ರಬಾಬು ನಾಯ್ಡು ಹಾಗೂ ಅವರ ಕುಟುಂಬಸ್ಥರು ಆಂಧ್ರಪ್ರದೇಶದ ಅಭಿವೃದ್ಧಿಯನ್ನು ಕಡೆಗಣಿಸಿದ್ದಾರೆ. ಸೂರ್ಯ ಉದಯಿಸುವ ಚಿಹ್ನೆಯನ್ನು ತೆಲಗು ದೇಶಂ ಪಾರ್ಟಿ (ಟಿಡಿಪಿ) ಹೊಂದಿದೆ. ಆದರೆ ಚಂದ್ರಬಾಬು ನಾಯ್ಡು ಅವರು ರಾಜ್ಯದಲ್ಲಿ ಅಭಿವೃದ್ಧಿಯ ಸೂರ್ಯನ ಉದಯವನ್ನು ಕಡೆಗಣಿಸಿ ತಮ್ಮ ಮಗನ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ ಎಂದು ಕುಟುಕಿದರು.

    ಆಂಧ್ರಪ್ರದೇಶಕ್ಕೆ ವಿಶೇಷ ಮೀಸಲಾತಿ ಬೇಡಿಕೆಯ ನೆಪ ಒಡ್ಡಿ ಎನ್‍ಡಿಎಗೆ ನೀಡಿದ್ದ ಬೆಂಬಲವನ್ನು ಚಂದ್ರಬಾಬು ನಾಯ್ಡು ಕಳೆದ ವರ್ಷ ಹಿಂಪಡೆದರು. ಆದರೆ ಈಗ ಕಾಂಗ್ರೆಸ್ ಜೊತೆಗೆ ಸೇರಿ ಮಹಾಘಟಬಂಧನ್‍ಗೆ ಸಿದ್ಧತೆ ನಡೆಸಿದ್ದಾರೆ. ರಾಜ್ಯದ ಜನರಿಗೆ ಮೂಲಸೌಕರ್ಯ ಒದಗಿಸಿಲ್ಲ. ಅಭಿವೃದ್ಧಿ ಮರೆತಿದ್ದಾರೆ. ಸುಳ್ಳ ಹೇಳುತ್ತಾ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ಪ್ರಧಾನಿ ಕಿಡಿಕಾರಿದರು.

    ಪ್ರಧಾನಿ ನರೇಂದ್ರ ಮೋದಿ ಅವರಿಗಿಂತ ನಾನು ಸೀನಿಯರ್. ಪ್ರಧಾನಿ ಸ್ಥಾನದಲ್ಲಿ ಇರುವುದರಿಂದ ಅವರಿಗೆ ‘ಸರ್’ ಅಂತ ಕರೆಯುತ್ತೇನೆ ಎಂದು ಇತ್ತೀಚೆಗೆ ಚಂದ್ರಬಾಬು ನಾಯ್ಡು ವ್ಯಂಗ್ಯವಾಡಿದ್ದರು. ಇದಕ್ಕೆ ತಿರುಗೇಟು ನೀಡಿದ ಪ್ರಧಾನಿ ಮೋದಿ ಅವರು, ಅನೇಕ ವಿಚಾರದಲ್ಲಿ ಚಂದ್ರಬಾಬು ನಾಯ್ಡು ಸೀನಿಯರ್. ಕೆಲವು ಸಮಯದಲ್ಲಿ ಒಬ್ಬರನ್ನು ಹೊಗಳಿ ಮುಂದಿನ ಕ್ಷಣದಲ್ಲಿ ತಿರಸ್ಕಾರ ಮಾಡುವುದರಲ್ಲಿ ಸೀನಿಯರ್. ಪ್ರಜೆಗಳಿಗೆ ಕಣ್ಣೀರು ತರಿಸುವುದರಲ್ಲಿಯೂ ಅವರು ಸೀನಿಯರ್ ಎಂದು ವ್ಯಂಗ್ಯವಾಡಿದರು.

    ಟಿಡಿಪಿ ಸಂಸ್ಥಾಪಕ ಎನ್.ಟಿ.ರಾಮರಾವ್ ಅವರು ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಮಾಡಬೇಕು ಅಂತ ನಿರ್ಧರಿಸಿದ್ದರು. ಆದರೆ ಅಳಿಯ ಚಂದ್ರಬಾಬು ನಾಯ್ಡು ಈಗ ಕಾಂಗ್ರೆಸ್ ಜೊತೆಗೆ ಮಹಾಮೈತ್ರಿ ಮಾಡಿಕೊಳ್ಳುತ್ತಿದ್ದಾರೆ. ಇದು ಎನ್.ಟಿ.ರಾಮರಾವ್ ಅವರಿಗೆ ಮಾಡಿದ ಅವಮಾನವಾಗಿ ಎಂದು ಪ್ರಧಾನಿ ಮೋದಿ ಕಿಡಿಕಾರಿದರು.

    ಗುಂಟೂರು ಅನೇಕ ಸ್ವಾತಂತ್ರ್ಯ ಹೋರಾಟಗಾರರ್ನು ದೇಶಕ್ಕೆ ಕೊಡುಗೆ ನೀಡಿದೆ. ಇಷ್ಟು ಜನರು ಇಲ್ಲಿ ಸೇರಿದ್ದಿರಿ. ನಿಮ್ಮ ಬಲ ಕೆಲಸ ಮಾಡಲು ಪ್ರೋತ್ಸಾಹ ನೀಡುತ್ತದೆ. ಈ ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಮತದಾನ ಮಾಡುತ್ತಿರುವ ಯುವ ಜನತೆಗೆ ಧನ್ಯವಾದಗಳು. ವಿಶಾಖಪಟ್ಟಣದಲ್ಲಿ ಇಂದು ಬೃಹತ್ ಪ್ರಮಾಣದ ಇಂಧನ ಶುದ್ಧಿಕರಣ ಘಟಕ ಉದ್ಘಾಟನೆಯಾಗಿದೆ. ಇದರಂತೆ ಅನೇಕ ಯೋಜನೆಗಳು ಆಂಧ್ರಪ್ರದೇಶಕ್ಕೆ ಸಿಗಲಿದ್ದು, ಉದ್ಯೋಗ ಸಂಖ್ಯೆ ಹೆಚ್ಚಲಿದೆ. ದೇಶದಲ್ಲಿ ಅಭಿವೃದ್ಧಿ ಪಥದಲ್ಲಿ ನಡೆಯುತ್ತಿವೆ ಎಂದು ಪ್ರಧಾನಿ ಮೋದಿ ಹೇಳಿದರು.

    ಪ್ರಧಾನಿ ನರೇಂದ್ರ ಮೋದಿ ಅವರು ಆಂಧ್ರಪ್ರದೇಶಕ್ಕೆ ಬರುವುದನ್ನು ವಿರೋಧಿಸಿ ಬ್ಲ್ಯಾಕ್ ಬಲೂನ್‍ಗಳನ್ನು ಹಾರಿ ಬಿಡುವ ಮೂಲಕ ಟಿಡಿಪಿ ಕಾರ್ಯಕರ್ತರು ಹಾಗೂ ಕೆಲವು ಸಂಘಟನೆಗಳು ಪ್ರತಿಭಟನೆ ನಡೆಸಿದವು. ಜೊತೆಗೆ ರಾಜ್ಯಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸದೇ ಚಂದ್ರಬಾಬು ನಾಯ್ಡು ಅಸಮಾಧಾನ ಹೊರಹಾಕಿದರು. ಮುಖ್ಯಮಂತ್ರಿಗಳ ಅನುಪಸ್ಥಿತಿಯಲ್ಲಿ ರಾಜ್ಯಪಾಲ ಇಎಸ್‍ಎಲ್ ನರಸಿಂಹನ್ ವಿಜಯವಾಡ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಅವರನ್ನು ಸ್ವಾಗತಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಂಧ್ರ ಸರ್ಕಾರದಿಂದ ದೆಹಲಿ ಪ್ರತಿಭಟನೆಗೆ ಜನರನ್ನ ಕೊಂಡ್ಯೊಯಲು 1.12 ಕೋಟಿ ರೂ. ಖರ್ಚು

    ಆಂಧ್ರ ಸರ್ಕಾರದಿಂದ ದೆಹಲಿ ಪ್ರತಿಭಟನೆಗೆ ಜನರನ್ನ ಕೊಂಡ್ಯೊಯಲು 1.12 ಕೋಟಿ ರೂ. ಖರ್ಚು

    ಹೈದರಾಬಾದ್: ಕೇಂದ್ರ ಸರ್ಕಾರದ ವಿರುದ್ಧ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ಫೆ.11 ರಂದು ನಡೆಸಲು ಉದ್ದೇಶಿಸಿರುವ ಪ್ರತಿಭಟನೆಗೆ ಜನರನ್ನು ಕೊಂಡ್ಯೊಯಲು ಬರೋಬ್ಬರಿ 1.23 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿದೆ.

    ಆಂಧ್ರ ಪ್ರದೇಶ ಆಡಳಿತಾತ್ಮಕ ಇಲಾಖೆ ರಾಜ್ಯದಿಂದ ರೈಲುಗಳಲ್ಲಿ ಜನರನ್ನು ಕರೆದುಕೊಂಡು ಹೋಗಲು ಹಣವನ್ನು ಬಿಡುಗಡೆ ಮಾಡಿದೆ. ಅನಂತಪುರಂ, ಶ್ರೀಕಾಕುಳಂ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಪಕ್ಷದ ಕಾರ್ಯಕರ್ತರು, ವಿವಿಧ ಸಂಘಟನೆಗಳ ಸ್ವಯಂ ಸೇವಕರನ್ನು ದೆಹಲಿಗೆ ಕರೆತರಲಿದ್ದು, ಫೆ.11 ರಂದು ‘ದೀಕ್ಷಾ’ ಹೆಸರಿನಲ್ಲಿ ಬೃಹತ್ ಪ್ರತಿಭಟನೆಯನ್ನು ಚಂದ್ರಬಾಬು ನಾಯ್ಡು ಅವರು ಕೈಗೊಳ್ಳಲಿದ್ದಾರೆ.

    ಆಂಧ್ರ ಪ್ರದೇಶದಿಂದ ಹೊರಡುವ ಎರಡು ರೈಲುಗಳು ಭಾನುವಾರ 10 ಗಂಟೆಗೆ ದೆಹಲಿಯನ್ನು ತಲುಪಲಿದ್ದು, ಆಂಧ್ರ ಪ್ರದೇಶ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. 2014ರಲ್ಲಿ ಆಂಧ್ರಪ್ರದೇಶ ವಿಭಜನೆ ಕಾಯ್ದೆ ಆನ್ವಯ ಕೇಂದ್ರ ಸರ್ಕಾರ ತಮಗೇ ನೀಡಿರುವ ಆಶ್ವಾಸನೆಗಳನ್ನು ಈಡೇರಿಸಬೇಕು ಎಂಬುವುದು ಚಂದ್ರಬಾಬು ನಾಯ್ಡು ಸರ್ಕಾರದ ಪ್ರಮುಖ ಬೇಡಿಕೆ ಆಗಿದೆ.

    ಕೇವಲ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷ ಮಾತ್ರವಲ್ಲದೇ ವಿರೋಧಿ ಪಕ್ಷಗಳ ಸಹಕಾರವನ್ನು ಕೂಡ ಚಂದ್ರಬಾಬು ನಾಯ್ಡು ಅವರು ಕೋರಿದ್ದು, ಬಿಜೆಪಿ ಪಕ್ಷ ಹೊರತು ಪಡಿಸಿ ಉಳಿದೆಲ್ಲಾ ಪಕ್ಷಗಳು ಕೂಡ ಪ್ರತಿಭಟನೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಅಂದಹಾಗೇ ಕಳೆದ ವರ್ಷವಷ್ಟೇ ಟಿಡಿಪಿ ಪಕ್ಷ ಎನ್‍ಡಿಎ ಒಕ್ಕೂಟದಿಂದ ಹೊರ ಬಂದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಗನ ಮದುವೆಗೆ ಕೇವಲ 18 ಸಾವಿರ ರೂ. ವೆಚ್ಚ – ಐಎಎಸ್ ಅಧಿಕಾರಿ ನಿರ್ಧಾರ

    ಮಗನ ಮದುವೆಗೆ ಕೇವಲ 18 ಸಾವಿರ ರೂ. ವೆಚ್ಚ – ಐಎಎಸ್ ಅಧಿಕಾರಿ ನಿರ್ಧಾರ

    -ಒರ್ವ ಅತಿಥಿಗೆ 10 ರೂ. ಖರ್ಚು

    ವಿಶಾಖಪಟ್ಟಣಂ: ವಿವಾಹವನ್ನು ಅದ್ಧೂರಿಯಾಗಿ ಮಾಡಲು ಅನೇಕರು ಲಕ್ಷಾಂತರ ರೂ. ವೆಚ್ಚ ಮಾಡುತ್ತಾರೆ. ಆದರೆ ಐಎಎಸ್ ಅಧಿಕಾರಿಯೊಬ್ಬರು ಕೇವಲ 18 ಸಾವಿರ ರೂ. ವೆಚ್ಚದಲ್ಲಿ ಮಗನ ಮದುವೆಯನ್ನು ಮಾಡಲು ನಿರ್ಧರಿಸಿದ್ದಾರೆ.

    ಆಂಧ್ರಪ್ರದೇಶದ ವಿಶಾಖಪಟ್ಟಣ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ (ವಿಎಂಆರ್ ಡಿಎ) ಆಯುಕ್ತ ಪಿ. ಬಸಂತ್ ಕುಮಾರ್ ಅವರು ಇಂತಹ ಸರಳ ವಿವಾಹಕ್ಕೆ ಮುಂದಾಗಿದ್ದಾರೆ. ಈ ವಿವಾಹ ವಿಶಾಖಪಟ್ಟಣದಲ್ಲಿ ಫೆಬ್ರವರಿ 10 ರಂದು ನಡೆಯಲಿದೆ.

    ಪಿ. ಬಸಂತ್ ಕುಮಾರ್ ಅವರು 2017ರ ಸೆಪ್ಟೆಂಬರ್ ನಲ್ಲಿ ನಡೆದ ಪುತ್ರಿ ವಿವಾಹಕ್ಕೂ ಕೇವಲ 16,100 ಖರ್ಚು ಮಾಡಿದ್ದರು. ಅಷ್ಟೇ ಅಲ್ಲದೆ 1988ರಲ್ಲಿ ತಮ್ಮ ಮದುವೆಗೂ ಬಸಂತ್ ಅವರು 2,345 ರೂ. ವೆಚ್ಚ ಮಾಡಿದ್ದಾರೆ. ಐಎಎಸ್ ಅಧಿಕಾರಿಯಾಗಿ ಈ ರೀತಿಯ ಸರಳ ಮದುವೆ ಮಾಡುವ ಮೂಲಕ ಬಸಂತ್ ಅವರು ಅನೇಕರಿಗೆ ಮಾದರಿಯಾಗಿದ್ದಾರೆ.

    1988ರಲ್ಲಿ ನಾನು ಸರಳ ವಿವಾಹವಾಗುತ್ತೇನೆ ಎಂದು ಪತ್ನಿಯ ಪೋಷಕರಿಗೆ ತಿಳಿಸಿದ್ದೆ. ಅವರು ಕೆಲವು ವಾರಗಳ ಕಾಲ ಸಮಯ ತೆಗೆದುಕೊಂಡು ಯೋಚಿಸಿ ಒಪ್ಪಿಗೆ ಸೂಚಿಸಿದರು. ಹೀಗಾಗಿ ನಾನು ವಿಶೇಷ ಮದುವೆ ಕಾಯಿದೆ ಅಡಿಯಲ್ಲಿ ರಿಜಿಸ್ಟರ್ ವಿವಾಹವಾಗಿದ್ದೆ. ಆಗ ಕೇವಲ 25 ಅತಿಥಿಗಳು ಭಾಗವಹಿಸಿದ್ದರಿಂದ 2,345 ರೂ. ಖರ್ಚು ಮಾಡಿದ್ದೇವು ಎಂದು ಪಿ.ಬಸಂತ್ ಕುಮಾರ್ ತಮ್ಮ ಮದುವೆ ಬಗ್ಗೆ ಹೇಳಿಕೊಂಡಿದ್ದಾರೆ.

    ವಿಶಾಖಪಟ್ಟಣನಲ್ಲಿ ಫೆಬ್ರವರಿ 10ರಂದು ನಡೆಯುತ್ತಿರುವ ಪುತ್ರನ ಮದುವೆಯನ್ನು ಸಹೋದ್ಯೋಗಿಗಳು ಹಾಗೂ ರಾಧಾ ಸೋಮಿ ಸತ್ಯಂಗ ಸಭಾ ಸದಸ್ಯರ ಸಹಾಯದಿಂದ ಮಾಡುತ್ತಿರುವೆ. ಒಂದು ವೇಳೆ ಅವರ ಸಹಾಯವಿಲ್ಲದಿದ್ದರೆ 18 ಸಾವಿರ ರೂ. ವೆಚ್ಚದಲ್ಲಿ ವಿವಾಹ ನೆರವೇರಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.

    ಮದುವೆಗೆ ಬೇಕಾಗುವ ತರಕಾರಿಯನ್ನು ವಿಶಾಖಪಟ್ಟಣದ ದಯಾಳ್‍ಬಾಗ್ ನಗರದ ತೋಟದಿಂದ ತರಲಾಗುತ್ತದೆ. ಮದುವೆ ನಿಮಿತ್ತ ಫೆಬ್ರವರಿ 8ರಂದು ಸತ್ಸಂಗ ನೆಡೆಸುತ್ತೇವೆ. ಈ ಕಾರ್ಯಕ್ರಮಕ್ಕೆ ಆಗಮಿಸುವ ಅತಿಥಿಗಳಿಗೆ ಕೇವಲ 10 ರೂ. ವೆಚ್ಚ ಮಾಡಲಾಗುತ್ತದೆ. ಮದುವೆಯ ದಿನ 200 ಜನ ಸಂಬಂಧಿಕರು ಸೇರಲಿದ್ದು, ತಲಾ 7 ರೂ. ವೆಚ್ಚದಲ್ಲಿ ಅವರಿಗೆ ತಿಂಡಿ ವ್ಯವಸ್ಥೆ ಮಾಡಲಾಗಿದೆ. ಆಂಧ್ರಪ್ರದೇಶದ ಗವರ್ನರ್ ಇಎಸ್‍ಎಲ್ ನರಸಿಂಹನ್ ಅವರು ವಿವಾಹಕ್ಕೆ ಆಗಮಿಸಲಿದ್ದಾರೆ ಎಂದು ಆಯುಕ್ತ ಪಿ. ಬಸಂತ್ ಕುಮಾರ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಿರುದ್ಯೋಗಿ ಬ್ರಾಹ್ಮಣ ಸಮುದಾಯದ ಯುವಕರಿಗೆ `ಕಾರು ಭಾಗ್ಯ’

    ನಿರುದ್ಯೋಗಿ ಬ್ರಾಹ್ಮಣ ಸಮುದಾಯದ ಯುವಕರಿಗೆ `ಕಾರು ಭಾಗ್ಯ’

    ಹೈದರಾಬಾದ್: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲೇ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಮತದಾರರಿಗೆ ಭರ್ಜರಿ ಆಮಿಷವೊಡ್ಡಿದ್ದಾರೆ. ರಾಜ್ಯದ ನಿರುದ್ಯೋಗಿ ಬ್ರಾಹ್ಮಣ ಸಮುದಾಯದ ಯುವಕರಿಗೆ ಸ್ವಿಫ್ಟ್ ಡಿಸೈರ್ ಕಾರು ಹಂಚಿದ್ದಾರೆ.

    ಸ್ವಯಂ ಉದ್ಯೋಗ ಯೋಜನೆ ಅಡಿ ಕಾರು ವಿತರಣೆ ಮಾಡಲಾಗಿದ್ದು, ನಿರುದ್ಯೋಗಿ ಫಲಾನುಭವಿಗಳು ಶೇ.10ರಷ್ಟು ಮೊತ್ತವನ್ನು ಭರಿಸಿದರೆ ಸಾಕು, ಉಳಿದ ಹಣವನ್ನು ಆಂಧ್ರ ಪ್ರದೇಶ ಬ್ರಾಹ್ಮಣ ಸಹಕಾರ ಕ್ರೆಡಿಟ್ ಸೊಸೈಟಿ ಭರಿಸಲಿದೆ.

    ಯೋಜನೆಯ ಆರಂಭದ ಭಾಗವಾಗಿ ಸಿಎಂ ಚಂದ್ರಬಾಬು ನಾಯ್ಡು 30 ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಕಾರುಗಳನ್ನು ನಿರುದ್ಯೋಗಿ ಬ್ರಾಹ್ಮಣ ಯುವಕರಿಗೆ ವಿತರಿಸಿದ್ದಾರೆ. ಅಲ್ಲದೇ ಮೊದಲ ಹಂತವಾಗಿ ಐವತ್ತು ಕಾರುಗಳನ್ನು ವಿತರಿಸಲಾಗಿದೆ. ಕಾರು ಪಡೆದ ನಿರುದ್ಯೋಗಿಗಳಿಗೆ ಸಬ್ಸಿಡಿ 2 ಲಕ್ಷ ರೂ. ದೊರೆಯುತ್ತದೆ.

    ಆಂಧ್ರ ಪ್ರದೇಶ ಬ್ರಾಹ್ಮಣ ಪ್ರಾಧಿಕಾರ ಆರಂಭವಾಗಿ ಇದುವರೆಗೂ ಇದರಿಂದ 1 ಲಕ್ಷ ಮಂದಿ ಅನುಕೂಲ ಪಡೆದಿದ್ದು, ಕಾರುಗಳ ಮೂಲಕ ಸ್ವತಃ ಚಾಲಕರಾಗಿ ವೃತ್ತಿ ಆರಂಭಿಸಬಹುದಾಗಿದೆ. ಈ ಯೋಜನೆಗೂ ಮುನ್ನ ಆಂಧ್ರ ಪ್ರದೇಶ ಸರ್ಕಾರ ಎಲ್ಲರ ಮನೆಗಳಿಗೂ ಸ್ಮಾರ್ಟ್ ಫೋನ್ ಹಂಚಿಕೆಯ ಯೋಜನೆಯನ್ನು ಘೋಷಣೆ ಮಾಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 3 ಕೋಟಿ ರೂ. ಮಾಣಿಕ್ ಚಾಂದ್ ಮಾಲ್‍ಗಾಗಿ ಕೈ, ಕಾಲು ಕಟ್ಟಿ ಕ್ಯಾಂಟರ್ ಡ್ರೈವರ್ ಕೊಲೆ!

    3 ಕೋಟಿ ರೂ. ಮಾಣಿಕ್ ಚಾಂದ್ ಮಾಲ್‍ಗಾಗಿ ಕೈ, ಕಾಲು ಕಟ್ಟಿ ಕ್ಯಾಂಟರ್ ಡ್ರೈವರ್ ಕೊಲೆ!

    ಚಿಕ್ಕಬಳ್ಳಾಪುರ: 3 ಕೋಟಿ ರೂ. ಮೌಲ್ಯದ ಮಾಣಿಕ್ ಚಾಂದ್ ಮಾಲ್ ಗಾಗಿ ಕ್ಯಾಂಟರ್ ವಾಹನದ ಚಾಲಕನನ್ನು ಕೈ ಕಾಲು ಕಟ್ಟಿ ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಾಪ್ತಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ರಸೂಲ್ ಸಾಬ್ ಕೊಲೆಯಾದ ವ್ಯಕ್ತಿಯಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ನಿವಾಸಿಯಾಗಿದ್ದಾರೆ. ರಸೂಲ್ ಸಾಬ್ ಸ್ವತಃ ಕ್ಯಾಂಟರ್ ಮಾಲೀಕರಾಗಿದ್ದು, ತಾವೇ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

    ಬೆಂಗಳೂರಿನಿಂದ ಹೈದರಾಬಾದ್‍ಗೆ 3 ಕೋಟಿ ರೂ. ಮೌಲ್ಯದ ಮಾಣಿಕ್ ಚಾಂದ್ ಗುಟ್ಕಾ ಪ್ಯಾಕೆಟಿನ ಬಾಕ್ಸ್ ಗಳನ್ನ ತುಂಬಿಕೊಂಡು ರಸೂಲ್ ಸಾಬ್ ಏಕಾಂಗಿಯಾಗಿ ಹೈದರಾಬಾದ್ ನತ್ತ ಹೊರಟಿದ್ದರು. ಆದರೆ ದಾರಿ ಮಧ್ಯೆ ಆಂಧ್ರದ ಅನಂತಪುರದ ರಾಪ್ತಾಡು ಬಳಿ ಇವರ ಮೇಲೆ ದಾಳಿ ನಡೆಸಿದ ಆಗಂತಕರು ಚಾಲಕ ರಸೂಲ್ ಸಾಬ್ ಕೈ ಕಾಲು ಕಟ್ಟಿ ಹಾಕಿ ಮನಬಂದಂತೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಬಳಿಕ ಮೃತದೇಹವನ್ನ ರಸ್ತೆ ಬದಿ ಬಿಸಾಡಿದ್ದಾರೆ.

    ರಸೂಲ್ ಸಾಬ್ ಕೊಲೆ ಮಾಡಿದ ಮಾಲ್ ಸಮೇತ ಕ್ಯಾಂಟರ್ ತೆಗೆದುಕೊಂಡು ಹೋದ ದುಷ್ಕರ್ಮಿಗಳು 3 ಕಿಲೋ ಮೀಟರ್ ಮುಂದೇ ಸಾಗಿ ರೈತರ ಜಮೀನೊಂದರಲ್ಲಿ ಮಾಣಿಕ್ ಚಾಂದ್ ಮಾಲನ್ನ ಬೇರೊಂದು ವಾಹನಕ್ಕೆ ಶಿಫ್ಟ್ ಮಾಡಲು ಮುಂದಾಗಿದ್ದಾರೆ. ಇದನ್ನ ಗಮನಿಸಿದ ಸ್ಥಳೀಯರು ಪ್ರಶ್ನೆ ಮಾಡಿದಾಗ ಅವರ ಮೇಲೆಯೇ ಹಲ್ಲೆ ನಡೆಸಿದ್ದಾರೆ.

    ಸ್ಥಳೀಯರ ಮೇಲೆ ಹಲ್ಲೆ ನಡೆಸಿದ ವಿಷಯ ತಿಳಿದು ಗ್ರಾಮಸ್ಥರು ಸ್ಥಳಕ್ಕೆ ಬರುವಷ್ಟರಲ್ಲಿ ಅರ್ಧ ಮಾಣಿಕ್ ಚಾಂದ್ ಪಾಕೆಟ್ ಬಾಕ್ಸ್ ತುಂಬಿಕೊಂಡ ದುಷ್ಕರ್ಮಿಗಳು ಬೇರೊಂದು ವಾಹನದಲ್ಲಿ ಎಸ್ಕೇಪ್ ಆಗಿದ್ದಾರೆ. ಈ ಕುರಿತು ಸ್ಥಳೀಯರಿಂದ ಮಾಹಿತಿ ಪಡೆದ ರಾಪ್ತಾಡು ಪೊಲೀಸರು ವಾಹನವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಮತ್ತೊಂದೆಡೆ ದುಷ್ಕರ್ಮಿಗಳು ಸ್ಥಳೀಯರ ಮೇಲೆ ಹಲ್ಲೆ ನಡೆಸಿದ್ದ ವೇಳೆ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾಗಿ ಮಾಹಿತಿ ಲಭಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • `ಬಂಡೆ’ಗೆ ತೆಲಂಗಾಣದಲ್ಲೂ ಡಿಚ್ಚಿ ಹೊಡೆಯಲು ಹೊರಟ ಕಮಲ `ನಾಯಕ’!

    `ಬಂಡೆ’ಗೆ ತೆಲಂಗಾಣದಲ್ಲೂ ಡಿಚ್ಚಿ ಹೊಡೆಯಲು ಹೊರಟ ಕಮಲ `ನಾಯಕ’!

    ಬೆಂಗಳೂರು: ಬಳ್ಳಾರಿ ಉಪಚುನಾವಣೆಯಲ್ಲಿ ಮುಖಾಮುಖಿಯಾಗಿ ಪೈಪೋಟಿ ನೀಡಿದ್ದ ಬಿಜೆಪಿ ಮುಖಂಡ, ಶಾಸಕ ಶ್ರೀರಾಮುಲು ಹಾಗೂ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ತೆಲಂಗಾಣದಲ್ಲೂ ಮುಖಾಮುಖಿಯಾಗುವ ಸಾಧ್ಯತೆಯಿದೆ.

    ಈಗಾಗಲೇ ಡಿಕೆ ಶಿವಕುಮಾರ್ ಅವರಿಗೆ ತೆಲಂಗಾಣ ವಿಧಾನಸಭಾ ಚುನಾವಣೆಯ ಉಸ್ತುವಾರಿಯನ್ನು ನೀಡಲಾಗಿದ್ದು ಪಕ್ಷದ ಮೈತ್ರಿ ಕಾರ್ಯದಲ್ಲಿ ತೊಡಗಿದ್ದಾರೆ. ಅಲ್ಲದೇ ಅಲ್ಲಿನ ತೆಲುಗು ದೇಶಂ ಪಕ್ಷ(ಟಿಡಿಪಿ)ದ ಜೊತೆಗಿನ ಮೈತ್ರಿ ವೇಳೆ ಕಾಂಗ್ರೆಸ್ ಪಕ್ಷದಲ್ಲಿ ಉಂಟಾದ ಅಸಮಾಧಾನವನ್ನು ಶಮನ ಮಾಡುವ ಕಾರ್ಯದಲ್ಲಿದ್ದಾರೆ. ಈಗಾಗಲೇ ಡಿಕೆ ಶಿವಕುಮಾರ್ ಅವರು ಒಂದು ಹಂತದ ಪ್ರಚಾರವನ್ನು ಪೂರ್ಣಗೊಳಿಸಿದ್ದಾರೆ.

    ಇತ್ತ ತೆಲಂಗಾಣದಲ್ಲಿ ಡಿಕೆ ಶಿವಕುಮಾರ್ ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಂಡ ಬೆನ್ನಲ್ಲೇ ಬಿಜೆಪಿ ಟಾಂಗ್ ನೀಡಲು ಮುಂದಾಗಿದ್ದು, ಈ ದೃಷ್ಟಿಯಿಂದ ಬಿಜೆಪಿ ಪರ ಪ್ರಚಾರದಲ್ಲಿ ತೊಡಗುವಂತೆ ಶ್ರೀರಾಮುಲುಗೆ ಹೈಕಮಾಂಡ್ ಸೂಚನೆ ನೀಡಿದೆ. ಡಿಸೆಂಬರ್ ಮೊದಲ ವಾರದಲ್ಲಿ ತೆಲಂಗಾಣದಲ್ಲಿ ಪ್ರಚಾರದಲ್ಲಿ ಶ್ರೀರಾಮುಲು ಭಾಗವಹಿಸಲಿದ್ದು, ಸದ್ಯ ಮೂರು ದಿನಗಳ ಕಾಲ ರಾಮುಲು ಅವರ ಪ್ರಚಾರದ ವೇಳಾಪಟ್ಟಿ ನಿಗದಿಯಾಗಿದೆ.

    ಬಳ್ಳಾರಿಯಲ್ಲಿ ಡಿಕೆ ಶಿವಕುಮಾರ್ ಪಕ್ಷದ ಅಭ್ಯರ್ಥಿ ಉಗ್ರಪ್ಪ ಅವರನ್ನು ನಿರೀಕ್ಷೆಗೂ ಹೆಚ್ಚಿನ ಮತಗಳಿಂದ ಜಯಗಳಿಸುವಂತೆ ಮಾಡಿದ್ದರು. ಈ ಮೂಲಕ ಬಳ್ಳಾರಿಯಲ್ಲಿ ಶಾಸಕ ಶ್ರೀರಾಮುಲು ಅವರಿಗೆ ಅಣ್ಣ ಎನ್ನುತ್ತಲೇ ಸೋಲಿನ ರುಚಿ ತೋರಿಸಿದ್ದರು. ಈಗ ತೆಲಂಗಾಣದಲ್ಲಿ ಇಬ್ಬರ ನಡುವಿನ ಫೈಟ್ ಹೇಗೆ ಸಾಗಲಿದೆ ಎನ್ನುವ ಕುತೂಹಲ ಹೆಚ್ಚಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • 31 ಉಪಗ್ರಹ ಹೊತ್ತ ಪಿಎಸ್‍ಎಲ್‍ವಿ-ಸಿ43 ರಾಕೆಟ್ ಯಶಸ್ವಿ ಉಡಾವಣೆ

    31 ಉಪಗ್ರಹ ಹೊತ್ತ ಪಿಎಸ್‍ಎಲ್‍ವಿ-ಸಿ43 ರಾಕೆಟ್ ಯಶಸ್ವಿ ಉಡಾವಣೆ

    ಹೈದರಾಬಾದ್: ವಿದೇಶಿ ಸೇರಿದಂತೆ ಒಟ್ಟು 31 ಉಪಗ್ರಹಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪಿಎಸ್‍ಎಲ್‍ವಿ-ಸಿ43 ಮೂಲಕ ಇಂದು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.

    ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಯಶಸ್ವಿಯಾಗಿ ಬೆಳಿಗ್ಗೆ 9.58ಕ್ಕೆ ನಭಕ್ಕೆ ಚಿಮ್ಮಿತು. ಇದರಲ್ಲಿ ಇಸ್ರೋ ಅಭಿವೃದ್ಧಿಪಡಿಸಿರುವ ಹೈಪರ್ ಸ್ಪೆಕ್ಟ್ರಲ್ ಇಮೇಜಿಂಗ್ (ಹೈಸಿಸ್) ಉಪಗ್ರಹವು ಉಡ್ಡಯನದ ಪ್ರಧಾನ ಉಪಗ್ರಹವಾಗಿದೆ.

    ಉಪಯೋಗವೇನು?:
    ಭೂಮಿಯ ಮೇಲ್ಮೈನ ಅಧ್ಯಯನ, ಸಂವಹನ ಸೇವೆ, ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ), ವೈಜ್ಞಾನಿಕ ಸಂಶೋಧನೆ ಸೇರಿ ಮಾಹಿತಿ ಕ್ರಾಂತಿಯನ್ನು ಸೃಷ್ಟಿಸಬಲ್ಲ ಉಪಗ್ರಹಗಳು ಇವಾಗಿವೆ.

    ಹೈಪರ್ ಸ್ಪೆಕ್ಟ್ರಲ್ ಇಮೇಜಿಂಗ್ (ಹೈಸಿಸ್) ಉಪಗ್ರಹವು 380 ಕೆ.ಜಿ. ತೂಕ ಹೊಂದಿದೆ. ಇದು ಭೂಮಿಯಿಂದ 636 ಕಿ.ಮೀ. ಅಂತರದ ಕಕ್ಷೆಯನ್ನು ಸೇರಲಿದೆ. ಒಟ್ಟು 5 ವರ್ಷಗಳ ಕಾಲ ಕಾರ್ಯನಿರ್ವಹಿಸಲಿದೆ. ಉಳಿದ 30 ಉಪಗ್ರಹಗಳು 504 ಕಿ.ಮೀ. ಕಕ್ಷೆಯಲ್ಲಿ ಕಾರ್ಯನಿರ್ವಹಿಸಲಿವೆ ಎಂದು ಇಸ್ರೋ ತಿಳಿಸಿದೆ.

    ವಿದೇಶಿ ಉಪಗ್ರಹ ಎಷ್ಟು?:
    ಅಮೆರಿಕದ 23 ಉಪಗ್ರಹ ಸೇರಿದಂತೆ ಸ್ಪೇನ್, ಕೆನಡಾ, ಫಿನ್‍ಲ್ಯಾಂಡ್, ಮಲೇಷ್ಯಾ, ಆಸ್ಟ್ರೇಲಿಯಾ, ಕೊಲಂಬಿಯಾ, ನೆದರ್ಲೆಂಡ್ ದೇಶಗಳ ತಲಾ ಒಂದು ಉಪಗ್ರಹ ಇದರಲ್ಲಿ ಸೇರಿವೆ. ಇವುಗಳಲ್ಲಿ ಒಂದು ಮೈಕ್ರೊ ಹಾಗೂ 29 ನ್ಯಾನೋ ಉಪಗ್ರಹಗಳಿವೆ. ಇದೇ ತಿಂಗಳಲ್ಲಿ ಇಸ್ರೋ ನಡೆಸುತ್ತಿರುವ ಎರಡನೇ ಉಡ್ಡಯನ ಇದಾಗಿದೆ. ನವೆಂಬರ್ 14ರಂದು ಜಿಸ್ಯಾಟ್-29 ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಲಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಸಿಎಂ ಚಂದ್ರಬಾಬು ನಾಯ್ಡು ಆಸ್ತಿಗಿಂತ 3 ವರ್ಷದ ಮೊಮ್ಮಗನ ಆಸ್ತಿಯೇ 6 ಪಟ್ಟು ಹೆಚ್ಚು!

    ಸಿಎಂ ಚಂದ್ರಬಾಬು ನಾಯ್ಡು ಆಸ್ತಿಗಿಂತ 3 ವರ್ಷದ ಮೊಮ್ಮಗನ ಆಸ್ತಿಯೇ 6 ಪಟ್ಟು ಹೆಚ್ಚು!

    ಹೈದರಾಬಾದ್: ಆಂಧ್ರಪ್ರದೇಶ ಸಿಎಂ, ತೆಲುಗುದೇಶಂ (ಟಿಡಿಪಿ) ಪಕ್ಷದ ಮುಖ್ಯಸ್ಥರಾಗಿರುವ ಚಂದ್ರಬಾಬು ನಾಯ್ಡು ಸತತವಾಗಿ 8ನೇ ವರ್ಷ ತಮ್ಮ ಆಸ್ತಿ ವಿವರಗಳನ್ನು ಘೋಷಣೆ ಮಾಡಿದ್ದು, ಅವರಿಗಿಂತ ಮೊಮ್ಮಗ 6 ಪಟ್ಟು ಹೆಚ್ಚು ಆಸ್ತಿಯನ್ನು ಹೊಂದಿದ್ದಾನೆ.

    ಚಂದ್ರಬಾಬು ನಾಯ್ಡು ತನ್ನ ಬಳಿ 2.99 ಕೋಟಿ ರೂ. ಆಸ್ತಿ ಇದೆ ಎಂದು ಘೋಷಣೆ ಮಾಡಿಕೊಂಡಿದ್ದಾರೆ. ಆದರೆ ಅವರ 3 ವರ್ಷದ ಮೊಮ್ಮದ ನಾರಾ ದೇವಾಂಶ್ 18.71 ಕೋಟಿ ಆಸ್ತಿಯನ್ನು ಹೊಂದಿದ್ದಾನೆ.

    ಕಳೆದ ವರ್ಷಕ್ಕಿಂತ ಈ ಬಾರಿ ನಾಯ್ಡು ಅವರ ಆಸ್ತಿ 46 ಲಕ್ಷ ರೂ. ಹೆಚ್ಚಾಗಿದೆ. ಆದರೆ ಕಳೆದ ಬಾರಿ ಹೂಡಿಕೆ ಮಾಡಿದ್ದ 5.64 ಕೋಟಿ ರೂ. ಮೊತ್ತ 5.31 ಕೋಟಿ ರೂ.ಗೆ ಇಳಿಕೆ ಆಗಿದೆ.

    ನಾಯ್ಡು ಅವರ ಮೊಮ್ಮಗ 16.17 ಕೋಟಿ ರೂ. ಮೌಲ್ಯದ ಮನೆಯನ್ನು ಹೈದರಾಬಾದ್‍ನ ಜುಬ್ಲಿ ಹಿಲ್ಸ್ ನಲ್ಲಿ ಹೊಂದಿದ್ದು, 2.49 ಕೋಟಿ ರೂ. ಠೇವಣಿ ಇಟ್ಟಿದ್ದಾರೆ. ಹೆರಿಟೇಜ್ ಫುಡ್ಸ್ ಸಂಸ್ಥೆಯ ಮುಖ್ಯಸ್ಥರಾಗಿರುವ ನಾಯ್ಡು ಅವರ ಪತ್ನಿ ಭುವನೇಶ್ವರಿ ಅವರು ಕುಟುಂಬದಲ್ಲಿ ಹೆಚ್ಚು ಆಸ್ತಿಯನ್ನು ಹೊಂದಿದ್ದಾರೆ. ಕಳೆದ ಬಾರಿ 25.41 ಕೋಟಿ ರೂ. ಇದ್ದ ಅವರ ಆಸ್ತಿ ಈಗ 31.01 ಕೋಟಿ ರೂ.ಗೆ ಏರಿಕೆಯಾಗಿದೆ.

    ಅಂದಹಾಗೇ ದೇವಾಂಶ್, ಚಂದ್ರಬಾಬು ನಾಯ್ಡು ಮಾತ್ರವಲ್ಲದೇ ತಂದೆ ನಾರಾ ಲೋಕೇಶ್ ಅವರಗಿಂತಲೂ ಹೆಚ್ಚಿನ ಆಸ್ತಿಯನ್ನು ಹೊಂದಿದ್ದಾನೆ. ಲೋಕೇಶ್ ಟಿಡಿಪಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದು, ಈ ಬಾರಿ ಅವರ ಆಸ್ತಿಯಲ್ಲಿ 15.21 ಕೋಟಿ ರೂ. ಹೆಚ್ಚಳವಾಗಿದೆ. 2017 ರಲ್ಲಿ ಲೋಕೇಶ್ 21.40 ಕೋಟಿ ರೂ. ಆಸ್ತಿ ಹೊಂದಿದ್ದರು. ಉಳಿದಂತೆ ಲೋಕೇಶ್ ಅವರ ಪತ್ನಿ ಬ್ರಹ್ಮಣಿ ಅವರ ಆಸ್ತಿ ಕಳೆದ ಬಾರಿಗಿಂತ ಕಡಿಮೆ ಆಗಿದ್ದು, 15.01 ಕೋಟಿ ರೂ. ಆಸ್ತಿ ಹೊಂದಿದ್ದ ಅವರು ಈ ಬಾರಿ 7.72 ಕೋಟಿ ರೂ. ಆಸ್ತಿ ಹೊಂದಿರುವುದಾಗಿ ಘೋಷಣೆ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಸಿಬಿಐಗೆ ಶಾಕ್ ನೀಡಿದ ಚಂದ್ರಬಾಬು ನಾಯ್ಡು

    ಸಿಬಿಐಗೆ ಶಾಕ್ ನೀಡಿದ ಚಂದ್ರಬಾಬು ನಾಯ್ಡು

    ಹೈದರಾಬಾದ್: ಕೇಂದ್ರ ಸರ್ಕಾರವೂ ರಾಜ್ಯಗಳಲ್ಲಿ ತನಿಖೆ ನಡೆಸಲು ಸಿಬಿಐಗೆ ನೀಡಿದ್ದ ಒಪ್ಪಿಗೆಯ ಅನುಮತಿಯನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಹಿಂತೆಗೆದುಕೊಂಡಿದ್ದು, ಈ ಮೂಲಕ ಕೇಂದ್ರ ಸರ್ಕಾರ ರಾಜ್ಯದಲ್ಲಿ ನಡೆಸುತ್ತಿದ್ದ ತನಿಖೆಗಳಿಗೆ ಬ್ರೇಕ್ ಹಾಕಿದ್ದಾರೆ.

    ದೆಹಲಿ ವಿಶೇಷ ಪೊಲೀಸ್ ಸಂಸ್ಥೆಯ ಕಾಯಿದೆ (1946) ಅಡಿಯಲ್ಲಿ ಬರುವ ಸೆಕ್ಷನ್ 6ರ ಅನುಸಾರ ರೂಪಿಸಲಾಗಿರುವ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಸಿಬಿಐ ಗೆ ನೀಡಿದ್ದ ಅಧಿಕಾರವನ್ನು ಹಿಂಪಡೆಯಲಾಗಿದ್ದು, ಆಂಧ್ರ ಪ್ರದೇಶದಲ್ಲಿ ಸಿಬಿಐ ಅಧಿಕಾರಿಗಳು ಇನ್ನು ಮುಂದೆ ಯಾವುದೇ ರೀತಿಯ ತನಿಖೆ, ದಾಳಿ ನಡೆಸಿದರೂ ಅದಕ್ಕೆ ರಾಜ್ಯ ಸರ್ಕಾರದ ಅನುಮತಿ ಪಡೆಯವುದು ಕಡ್ಡಾಯವಾಗಿದೆ. ಇದರ ಪರಿಣಾಮ ಆಂಧ್ರಪ್ರದೇಶದಲ್ಲಿ ಸರ್ಕಾರದ ಅನುಮತಿ ಇಲ್ಲದೆ ಸಿಬಿಐ ತನಿಖೆ ನಡೆಸುವಂತಿಲ್ಲ ಎಂದು ಆದೇಶ ಹೊರಡಿಸಿದೆ.

    ಆಂಧ್ರಪ್ರದೇಶದ ಮುಖ್ಯಮಂತ್ರಿಯಾದ ಚಂದ್ರಬಾಬು ನಾಯ್ಡು ಅವರು ಸಿಬಿಐ, ಜಾರಿ ನಿರ್ದೇಶನಾಲಯ (ಇಡಿ), ಅದಾಯ ತೆರಿಗೆ ಇಲಾಖೆ (ಐಟಿ) ತನಿಖಾಧಿಕಾರಿಗಳು ತಮ್ಮ ಅಧಿಕಾರವನ್ನ ದುರುಪಯೋಗ ಪಡಿಸಿಕೊಂಡು, ತಮ್ಮ ರಾಜಕೀಯ ವೈರಿಗಳ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದರ ಬೆನ್ನಲ್ಲೇ, ರಾಜ್ಯದಲ್ಲಿ ಸಿಬಿಐ ಅಧೀನದಲ್ಲಿರುವ ಎಲ್ಲಾ ಪ್ರಕರಣಗಳ ತನಿಖೆಯನನ್ನು ನಡೆಸಲು ಸಿಬಿಐ ಬದಲಾಗಿ ಎಸಿಬಿ (ಭ್ರಷ್ಟಚಾರ ನಿಗ್ರಹ ದಳ)ಗೆ ಜವಾಬ್ದಾರಿಯನ್ನ ವರ್ಗಾವಣೆ ಮಾಡಲಾಗಿದೆ ಎಂದು ಆಂಧ್ರ ಪ್ರದೇಶ ಸರ್ಕಾರ ಅಧಿಸೂಚನೆ ಹೊರಡಿಸಿದೆ.

    ಇದೇ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆ ನಡೆಸುವ ದಾಳಿಗಳಿಗೆ ರಾಜ್ಯ ಸರ್ಕಾರವೂ ಯಾವುದೇ ಪೊಲೀಸ್ ಭದ್ರತೆಯನ್ನು ಒದಗಿಸುವುದಿಲ್ಲ ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews