Tag: Andhra pradesh man

  • ವಿದೇಶಿ ಪ್ರಜೆಯೊಂದಿಗೆ ಕರ್ನಾಟಕದಲ್ಲಿ ಸಪ್ತಪದಿ ತುಳಿದ ಆಂಧ್ರ ಯುವಕ

    ವಿದೇಶಿ ಪ್ರಜೆಯೊಂದಿಗೆ ಕರ್ನಾಟಕದಲ್ಲಿ ಸಪ್ತಪದಿ ತುಳಿದ ಆಂಧ್ರ ಯುವಕ

    ಕೋಲಾರ: ಜಿಲ್ಲೆಯ ಮುಳಬಾಗಲು ಪಟ್ಟಣದ ಸೋಮೇಶ್ವರಸ್ವಾಮಿ ದೇವಸ್ಥಾನದಲ್ಲಿ ಇಂದು ಹಿಂದೂ ಸಂಪ್ರದಾಯದಂತೆ ವಿದೇಶಿ ಪ್ರಜೆಯೊಂದಿಗೆ ಆಂಧ್ರ ಪ್ರದೇಶದ ಯುವಕ ಸಪ್ತಪದಿ ತುಳಿದಿದ್ದಾನೆ.

    ಜರ್ಮನ್ ಮೂಲದ ಆರೋಗ್ಯ ಸಹಾಯಕಿ ಸ್ವಟ್ಲೋನಾ ಹಾಗೂ ಆಂಧ್ರ ಮೂಲದ ಎಂಜಿನಿಯರ್ ಜಸ್ಸಿ ಜೀವನ್ ವಿವಾಹವಾಗಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ಸ್ವಟ್ಲೋನಾ ಅವರು ಒಂದು ಪುಸ್ತಕ ಬರೆಯುವ ಸಲುವಾಗಿ ಕರ್ನಾಟಕಕ್ಕೆ ಬಂದಿದ್ದರು. ಈ ವೇಳೆ ಜೀವನ್ ಪರಿಚಯವಾಗಿತ್ತು. ಮೊದಲು ಇಬ್ಬರು ಸ್ನೇಹಿತರಾಗಿದ್ದರು, ಕೆಲ ದಿನಗಳ ಬಳಿಕ ಸ್ನೇಹ ಪ್ರೀತಿಗೆ ತಿರುಗಿ, ಇಬ್ಬರು ಮದುವೆಯಾಗಲು ನಿರ್ಧರಿಸಿದರು.

    ಈ ಜೋಡಿಗೆ ಹಿಂದೂ ಸಂಪ್ರದಾಯದಂತೆ ಮದುವೆ ಆಗಬೇಕೆಂದು ಆಸೆ ಇದ್ದ ಕಾರಣಕ್ಕೆ ಸೋಮೇಶ್ವರಸ್ವಾಮಿ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ಸಪ್ತಪದಿ ತುಳಿದಿದ್ದಾರೆ. ಈ ಅಪರೂಪದ ಪ್ರೀತಿಗೆ ಕರ್ನಾಟಕದಲ್ಲಿದ್ದ ಜೀವನ್ ಸ್ನೇಹಿತರು ಸಹಾಯ ಮಾಡಿದ್ದು, ಅವರೇ ಮುಂದೆ ನಿಂತು ಇಬ್ಬರ ಮದುವೆಯನ್ನು ಮಾಡಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ನವಜೋಡಿ, ಒಂದು ವರ್ಷದಿಂದ ಪ್ರೀತಿಸುತ್ತಿದ್ದೆವು. ಸ್ನೇಹಿತರ ಸಹಾಯದಿಂದ ಇಂದು ಇಬ್ಬರೂ ಒಂದಾಗಿದ್ದೇವೆ. ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಟ್ಟಿದ್ದೇವೆ ಎಂದು ಖುಷಿಯನ್ನು ಹಂಚಿಕೊಂಡರು.