Tag: andheri

  • ಬಾಲಿವುಡ್ ನಟ ವಿವೇಕ್ ಒಬೆರಾಯ್ ಗೆ ಕೋಟಿ ಕೋಟಿ ವಂಚನೆ

    ಬಾಲಿವುಡ್ ನಟ ವಿವೇಕ್ ಒಬೆರಾಯ್ ಗೆ ಕೋಟಿ ಕೋಟಿ ವಂಚನೆ

    ಬಾಲಿವುಡ್ (Bollywood) ನಟ ವಿವೇಕ್ ಒಬೆರಾಯ್ ವಂಚನೆಗೆ ಒಳಗಾಗಿದ್ದಾರೆ. ಕಾರ್ಯಕ್ರಮ ಮತ್ತು ಸಿನಿಮಾಗೆ ಬಂಡವಾಳ ಹೂಡಿದೆ ಹೆಚ್ಚಿನ ಲಾಭ ಕೊಡಲಾಗುವುದು ಎಂದು ಹೇಳಿ ಬರೋಬ್ಬರಿ 1.55 ಕೋಟಿ ರೂಪಾಯಿ ವಂಚಿಸಿದ್ದಾರೆ (Fraud). ಈ ಕುರಿತು ನಟ ವಿವೇಕ್ ಅವರ ಅಕೌಂಟೆಂಟ್ ಅಂಧೇರಿಯಲ್ಲಿ(Andheri) ಮೂವರ ವಿರುದ್ಧ ದೂರು ದಾಖಲಿಸಿದ್ದಾರೆ.

    ವಿವೇಕ್ ಒಬೆರಾಯ್ (Vivek Oberoi) ಅವರಿಂದ ಮೂವರು ಹಣ ಪಡೆದು ವೈಯಕ್ತಿಕವಾಗಿ ಬಳಸಿಕೊಂಡಿದ್ದಾರೆ. ಕಾರ್ಯಕ್ರಮ ಮತ್ತು ಸಿನಿಮಾ ನಿರ್ಮಾಣದಲ್ಲಿ ಹಣ ತೊಡಗಿಸಿರುವುದಾಗಿ ಸುಳ್ಳು ಹೇಳಿದ್ದಾರೆ. ಈ ಮೂವರಲ್ಲಿ ಒಬ್ಬರು ಸಿನಿಮಾ ನಿರ್ಮಾಪಕರು ಇದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ. ಆರೋಪಿಗಳ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ. ಇದನ್ನೂ ಓದಿ:ಜುಲೈ 23ಕ್ಕೆ ವಿಶ್ವಕುಂದಾಪ್ರ ಕನ್ನಡ ದಿನಕ್ಕೆ ಸಿಎಂ, ರಿಷಬ್ ಶೆಟ್ಟಿ- ಪ್ರಮೋದ್ ಶೆಟ್ಟಿ ಸಾಥ್

     

    ನಟರ ಹೆಸರಿನಲ್ಲಿ ವಂಚಿಸುವ ಹಲವು ರೀತಿಯ ಪ್ರಕರಣಗಳು ದಾಖಲಾಗುತ್ತಿವೆ. ಮೊನ್ನೆಯಷ್ಟೇ ಸಲ್ಮಾನ್ ಖಾನ್ ತಮ್ಮ ನಿರ್ಮಾಣ ಸಂಸ್ಥೆಯ ಹೆಸರಿನಲ್ಲಿ ಹಲವರು ಹಣ ಮಾಡುತ್ತಿದ್ದಾರೆ. ಆಡಿಷನ್ ಮಾಡುವುದಾಗಿ ಹೇಳಿ ಹಣ ಪಡೆದು ವಂಚಿಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದರು. ವಂಚಕರ ವಿರುದ್ಧ ಕಠಿಣ ಕ್ರಮಕ್ಕೂ ಅವರು ಆಗ್ರಹಿಸಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಫೋಟೋ: 6 ದಿನದ ಬಳಿಕ ನಾಪತ್ತೆಯಾಗಿದ್ದ 17ರ ವಿದ್ಯಾರ್ಥಿನಿ ಅಮ್ಮನ ಮಡಿಲು ಸೇರಿದ ಕ್ಷಣ

    ಫೋಟೋ: 6 ದಿನದ ಬಳಿಕ ನಾಪತ್ತೆಯಾಗಿದ್ದ 17ರ ವಿದ್ಯಾರ್ಥಿನಿ ಅಮ್ಮನ ಮಡಿಲು ಸೇರಿದ ಕ್ಷಣ

    ಮುಂಬೈ: ನಗರದ ವಿಲೇ ಪಾರ್ಲೆ ಮನೆಯಿಂದ ಕಳೆದ 6 ದಿನಗಳ ಹಿಂದೆ ಕಾಣೆಯಾಗಿದ್ದ 17 ವರ್ಷದ ಕಾಲೇಜು ವಿದ್ಯಾರ್ಥಿನಿ ಅಮ್ಮನ ಮಡಿಲು ಸೇರಿದ ಕ್ಷಣದ ಭಾವನಾತ್ಮಕ ಫೋಟೋವನ್ನು ಮುಂಬೈ ಪೊಲೀಸರು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

    ವಿದ್ಯಾರ್ಥಿನಿಯನ್ನು ಸ್ವಾತಿ ಕಂಗೆ ಎಂದು ಗುರುತಿಸಲಾಗಿದೆ. ಈಕೆ ಅಂಧೇರಿ ಕಾಲೇಜೊಂದರಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾಗಿದ್ದು, ಆಗಸ್ಟ್ 16ರಂದು ಕಾಲೇಜಿಗೆಂದು ಹೋದವಳು ಕಾಣೆಯಾಗಿದ್ದಳು. ಇದೀಗ ನಿನ್ನೆ ಪತ್ತೆಯಾಗಿದ್ದು, ಮಗಳಿಗಾಗಿ ಕಾಯುತ್ತಿದ್ದ ಪೋಷಕರ ಖುಷಿಯ ಕಣ್ಣೀರು ಮನಕಲಕುವಂತಿತ್ತು. ಈ ಫೋಟೋ ಮಗಳು ನಾಪತ್ತೆಯಾಗಿದ್ದಂದಿನಿಂದ ಕುಟುಂಬ ಎಷ್ಟು ಚಿಂತೆಗೀಡಾಗಿತ್ತೆಂದು ಸ್ಪಷ್ಟವಾಗಿ ತೋರಿಸುತ್ತಿದೆ.

    ಮಗಳು ನಾಪತ್ತೆಯಾಗಿರುವ ಕುರಿತು ಸ್ವಾತಿ ಪೋಷಕರು ಅಂಧೇರಿ ಪೊಲೀಸ್ ಠಾಣೆಯಲ್ಲಿ ಆಗಸ್ಟ್ 16ರಂದು ದೂರು ದಾಖಲಿಸಿದ್ದರು. ಅಂತೆಯೇ ಪೊಲೀಸರು ಸ್ವಾತಿಯ ಹುಡುಕಾಟಕ್ಕೆ 4 ತಂಡಗಳನ್ನು ರಚಿಸಿದ್ದರು. ಅಲ್ಲದೇ ಸುಮಾರು 7 ಸಿಸಿಟಿವಿ ಕ್ಯಾಮರಾಗಳನ್ನು ಪರಿಶಿಲಿಸಿದ್ದರು. ಅಲ್ಲದೇ ಆಕೆಯ ಸ್ನೇಹಿತರು ಸೇರಿದಂತೆ ಹಲವಾರು ಮಂದಿಯನ್ನು ತನಿಖೆ ಮಾಡಿದ್ದರು. ಅಂತೆಯೇ ಆಗಸ್ಟ್ 22ರಂದು ಬೆಳಗ್ಗಿನ ಜಾವ ಸುಮಾರು 4 ಗಂಟೆಯ ವೇಳೆಗೆ ಸ್ವಾತಿ ಥಾಣೆಯಲ್ಲಿರುವುದು ಬೆಳಕಿಗೆ ಬಂದಿದೆ ಅಂತ ಪೊಲಿಸರು ತಿಳಿಸಿದ್ದಾರೆ.

    ಮಂಗಳವಾರ ಅಂಧೇರಿ ಪೊಲೀಸ್ ಠಾಣೆಯಿಂದ ಇಬ್ಬರು ಅಧಿಕಾರಿಗಳಾದ ಚೇತನ್ ಪಚೆಲ್ವರ್ ಹಾಗೂ ಚವಾನ್, ಸ್ವಾತಿ ಥಾಣೆಯಲ್ಲಿರುವ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡು ಆಕೆಯನ್ನು ಅಂಧೆರಿಗೆ ಕರೆದುಕೊಂಡು ಬಂದಿದ್ದಾರೆ.

    `ಅಂಧೇರಿ ಪೊಲೀಸರ ತಂಡದ ಸತತ ಪ್ರಯತ್ನದಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿನಿಯ ಪತ್ತೆ ಮಾಡಲಾಗಿದೆ. ಪೊಲೀಸ್ ಠಾಣೆಯಲ್ಲಿ ವಿಚಾರಣೆಯ ಬಳಿಕ ವಿದ್ಯಾರ್ಥಿನಿಯನ್ನು ಪೋಷಕರಿಗೆ ಒಪ್ಪಿಸಲಾಗಿದೆ’ ಅಂತ ಅಂಧೇರಿ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್ ಪೆಕ್ಟರ್ ಪಂಡಿತ್ ತೊರಟ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಆಕೆ ಪೋಷಕರ ಕೈಗೆ ಸೇರುವುದಕ್ಕೂ ಮುನ್ನ ಮಾಧ್ಯಮಕ್ಕೆ ಸ್ವಾತಿ ತಾಯಿ ಪ್ರತಿಕ್ರಿಯಿಸಿ, `ನನ್ನ ಮಗಳು ಅಂಧೇರಿ ಪೊಲೀಸ್ ಠಾಣೆಯಲ್ಲಿದ್ದಾಳೆ. ಇನ್ನೇನು ಕೆಲ ಹೊತ್ತಲ್ಲೇ ಆಕೆಗೆ ಮನೆಗೆ ಬರುತ್ತಾಳೆ. ಘಟನೆಯ ಬಗ್ಗೆ ನನಗೇನೂ ಗೊತ್ತಿಲ್ಲ. ತನ್ನ ಕೆಲ ಸಹಪಾಠಿಗಳ ಜೊತೆ ಆಕೆ ಹೊರಗಡೆ ಹೋಗಿರುವುದು ಅಷ್ಟೇ ಗೊತ್ತಿದೆ. ಒಟ್ಟಿನಲ್ಲಿ 6 ದಿನಗಳ ಬಳಿಕ ಸುರಕ್ಷಿತವಾಗಿ ಮನೆಗೆ ಬರುತ್ತಿರುವುದೇ ನನಗೆ ಸಂತಸ’ ಅಂತ ಹೇಳಿ ಖುಷಿಯ ಕಣ್ಣೀರು ಸುರಿಸಿದ್ದರು.

  • ರೈಲ್ವೆ ನಿಲ್ದಾಣದ ಪ್ಲಾಟ್‍ಫಾರ್ಮ್‍ಗೆ ಕಾರು ನುಗ್ಗಿಸಿದ ಮಾಜಿ ಅಂಡರ್ 19 ಆಟಗಾರ

    ರೈಲ್ವೆ ನಿಲ್ದಾಣದ ಪ್ಲಾಟ್‍ಫಾರ್ಮ್‍ಗೆ ಕಾರು ನುಗ್ಗಿಸಿದ ಮಾಜಿ ಅಂಡರ್ 19 ಆಟಗಾರ

    ಮುಂಬೈ: ಕುಡಿದ ಮತ್ತಿನಲ್ಲಿ ಯುವಕನೊಬ್ಬ ರೈಲ್ವೇ ನಿಲ್ದಾಣದ ಪ್ಲಾಟ್‍ಫಾರ್ಮ್‍ಗೆ ಕಾರು ನುಗ್ಗಿಸಿದ ಘಟನೆ ಮುಂಬೈನ ಅಂಧೇರಿಯಲ್ಲಿ ನಡೆದಿದೆ.

    ಇಂದು ಬೆಳಿಗ್ಗೆ 25 ವರ್ಷದ ಯುವಕ ಹರ್ಮೀತ್ ಸಿಂಗ್ ಅಂಧೇರಿ ರೈಲ್ವೆ ವಿಲ್ದಾಣಕ್ಕೆ ಕಾರು ನುಗಿಸಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಇಂದು ಬೆಳಿಗ್ಗೆ 7.15ರ ವೇಳೆಗೆ ನಿಲ್ದಾಣದಲ್ಲಿ ಪ್ರಯಾಣಿಕರು ರೈಲಿಗಾಗಿ ಕಾಯುತ್ತಿದ್ದರು. ಈ ವೇಳೆ ಹರ್ಮೀತ್ ಸಿಂಗ್ ತನ್ನ ಹೂಂಡೇ ಕಾರನ್ನ ಪ್ಲಾಟ್‍ಫಾರ್ಮ್ ನಂಬರ್ 1ಕ್ಕೆ ನುಗ್ಗಿಸಿದ್ದಾನೆ. ವೇಗವಾಗಿ ಕಾರು ಬಂದಿದ್ದನ್ನು ನೋಡಿ ಜನ ಗಾಬರಿಗೊಂಡಿದ್ದಾರೆ. ಘಟನೆ ವೇಳೆ ಸ್ಥಳದಲ್ಲಿ ಗಲಾಟೆ ಕೂಡ ನಡೆದಿದೆ.

    ಸದ್ಯಕ್ಕೆ ಮುಂಬೈ ಪೊಲೀಸರು ಹರ್ಮೀತ್‍ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಹರ್ಮೀತ್‍ನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಆತ ಮದ್ಯ ಸೇವಿಸಿರುವುದು ದೃಢಪಟ್ಟಿದೆ ಎಂದು ಪೊಲೀಸರು ಹೇಳಿದ್ದಾರೆ.

    ಹರ್ಮೀತ್ ಅಂಡರ್ 19 ಕ್ರಿಕೆಟ್ ವಿಶ್ವಕಪ್‍ನಲ್ಲಿ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದ ಎಂದು ಮಾಧ್ಯಮಗಳು ವರದಿ ಮಾಡಿವೆ.