Tag: and public TV

  • ಈ ಕಾರಣಕ್ಕೆ `ಐ ಲವ್ ಅನುಷ್ಕಾ’ ಅಂದ್ರು ವಿರಾಟ್ ಕೊಹ್ಲಿ

    ಈ ಕಾರಣಕ್ಕೆ `ಐ ಲವ್ ಅನುಷ್ಕಾ’ ಅಂದ್ರು ವಿರಾಟ್ ಕೊಹ್ಲಿ

    ಮುಂಬೈ: ಟೀಂ ಇಂಡಿಯಾ ನಾಯಕ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಅವರ ರಿಲೇಷನ್‍ಶಿಪ್ ಬಗ್ಗೆ ಈಗಾಗಲೇ ಸಾಮಾಜಿಕ ತಾಣಗಳಲ್ಲಿ ಸುದ್ದಿ ಹರಿದಾಡುತ್ತಿವೆ. ಈಗ ವಿರಾಟ್ ಕೊಹ್ಲಿ ತಮ್ಮ ಗೆಳತಿ ಅನುಷ್ಕಾರನ್ನು ನಾನು ಯಾವ ಕಾರಣಕ್ಕೆ ಇಷ್ಟಪಡುತ್ತೇನೆ ಎನ್ನುವುದನ್ನು ಬಹಿರಂಗಪಡಿಸಿದ್ದಾರೆ.

    ದೀಪಾವಳಿ ಹಬ್ಬದ ಪ್ರಯುಕ್ತ ಖಾಸಗಿ ವಾಹಿನಿಯ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ ಮತ್ತು ಅಮೀರ್ ಖಾನ್ ಭಾಗವಹಿಸಿದ್ದರು. ‘ಅಮೀರ್ ಔರ್ ವಿರಾಟ್ ಕೇ ಸಾಥ್’ ಕಾರ್ಯಕ್ರಮದಲ್ಲಿ ಕೊಹ್ಲಿ ಅನುಷ್ಕಾಳ ಬಗ್ಗೆ ತಮ್ಮ ಮನದಾಳದ ಮಾತನ್ನು ಆಡಿದ್ದು, ಅವಳ ಪ್ರಾಮಾಣಿಕತೆಗೆ `ಐ ಲವ್ ಅನುಷ್ಕಾ’ ಎಂದು ಹೇಳಿದ್ದಾರೆ.

    ಅನುಷ್ಕಾರನ್ನು ನಾನು ದೀರ್ಘಕಾಲದಿಂದಲೂ ನೋಡಿದ್ದೇನೆ. ನಾವಿಬ್ಬರು ಒಟ್ಟಿಗೆ ಕೆಲಸ ಮಾಡಿದ್ದೇವೆ. ಆದ್ದರಿಂದ ಆಕೆ ಏನು ಎಂದು ನನಗೆ ಚೆನ್ನಾಗಿ ಗೊತ್ತು. ಆಕೆ ಒಬ್ಬ ದೊಡ್ಡ ವ್ಯಕ್ತಿ ಎಂದು ಬಣ್ಣಿಸಿದ್ದಾರೆ.

    ಈ ವೇಳೆ ನೀವು ಅವರಲ್ಲಿ ಇಷ್ಟ ಪಡುವ ಒಂದು ಗುಣವನ್ನು ಹೇಳಿ ಎಂದು ಅಮೀರ್ ಖಾನ್ ಪ್ರಶ್ನೆ ಮಾಡಿದಾಗ, ಆಕೆಯಲ್ಲಿ ಬಹಳಷ್ಟು ಉತ್ತಮ ಗುಣ ಇದೆ. ಅದೇ ನನಗೆ ತುಂಬ ಇಷ್ಟ. ಆಕೆಯ ಪ್ರಾಮಾಣಿಕತೆ ನನಗೆ ತುಂಬಾ ಇಷ್ಟ. ಅವರಿಂದ ನಾನು ಕಲಿಯುವುದು ತುಂಬಾ ಇದೆ ಎಂದು ತಮ್ಮ ಪ್ರೀತಿಯನ್ನು ಕೊಹ್ಲಿ ಹೇಳಿಕೊಂಡಿದ್ದಾರೆ.

    https://www.instagram.com/p/BaL6GSJgd2r/?taken-by=virushka_slayz

    https://www.instagram.com/p/BaG3kbPAgsM/?taken-by=virushka_slayz

    https://www.instagram.com/p/BaEKoW6APKn/?taken-by=virushka_slayz

    https://www.instagram.com/p/BZ-W1s4AnHO/?taken-by=virushka_slayz

    https://www.instagram.com/p/BZ9LGKDAGDg/?taken-by=virushka_slayz

    https://www.instagram.com/p/BZ1Ht0bguK4/?taken-by=virushka_slayz

    https://www.instagram.com/p/BZrSdyBA8yB/?taken-by=virushka_slayz

    https://www.instagram.com/p/BZqmYwZAKvO/?taken-by=virushka_slayz

    https://www.instagram.com/p/BZqDne_ARAG/?taken-by=virushka_slayz

    https://www.instagram.com/p/BZnyoZWgL__/?taken-by=virushka_slayz

    https://www.instagram.com/p/BZjLyWzAqOH/?taken-by=virushka_slayz

    https://www.instagram.com/p/BZd5m_SAksf/?taken-by=virushka_slayz

    https://www.instagram.com/p/BZfkpf9AQJ9/?taken-by=virushka_slayz

    https://www.instagram.com/p/BZYWWK2gy5U/?taken-by=virushka_slayz

    https://www.instagram.com/p/BZQLfbmgnDr/?taken-by=virushka_slayz

    https://www.instagram.com/p/BZL0jVHApMk/?taken-by=virushka_slayz

    https://www.instagram.com/p/BZH5FqiALw7/?taken-by=virushka_slayz

    https://www.instagram.com/p/BY9fht1AA8z/?taken-by=virushka_slayz

    https://www.instagram.com/p/BY3jv_1gf-B/?taken-by=virushka_slayz

    https://www.instagram.com/p/BY2TmCwgLGz/?taken-by=virushka_slayz

    https://www.instagram.com/p/BY0NcNkADkz/?taken-by=virushka_slayz

    https://www.instagram.com/p/BYsa_MCAQ3R/?taken-by=virushka_slayz

  • ಚಡ್ಡಿ ಹಾಕಿರೋ ಮಹಿಳೆಯರನ್ನ ನೋಡಿದ್ದೀರಾ: ರಾಹುಲ್ ಹೇಳಿಕೆಗೆ ಆರ್‍ಎಸ್‍ಎಸ್ ತಿರುಗೇಟು

    ಚಡ್ಡಿ ಹಾಕಿರೋ ಮಹಿಳೆಯರನ್ನ ನೋಡಿದ್ದೀರಾ: ರಾಹುಲ್ ಹೇಳಿಕೆಗೆ ಆರ್‍ಎಸ್‍ಎಸ್ ತಿರುಗೇಟು

    ಭೋಪಾಲ್: ಆರ್‍ಎಸ್‍ಎಸ್ ಸ್ವಯಂ ಸೇವಾ ಸಂಘಟನೆಯು ಮಹಿಳೆಯರಿಗೆ ಉತ್ತಮ ಸ್ಥಾನಮಾನವನ್ನು ನೀಡುವುದಿಲ್ಲ ಎನ್ನುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಆರೋಪಕ್ಕೆ ಆರ್‍ಎಸ್‍ಎಸ್ ತಿರುಗೇಟು ನೀಡಿದೆ.

    ರಾಹುಲ್ ಗಾಂಧಿ ತಪ್ಪು ತಪ್ಪು ಪ್ರಶ್ನೆಗಳನ್ನು ಕೇಳುತ್ತಿದ್ದು, ಸೇಬು ಹಣ್ಣನ್ನು ಕಿತ್ತಳೆ ಹಣ್ಣಿನೊಂದಿಗೆ ಹೋಲಿಸುತ್ತಿದ್ದಾರೆ ಎಂದು ಆರ್‍ಎಸ್‍ಎಸ್‍ನ ಹಿರಿಯ ನಾಯಕ ಮನಮೋಹನ್ ವೈದ್ಯ ತಿಳಿಸಿದ್ದಾರೆ.

    ಇದು ರಾಹುಲ್ ಗಾಂಧಿ ಅವರ ತಪ್ಪಲ್ಲ. ರಾಹುಲ್ ಭಾಷಣವನ್ನು ಬರೆದುಕೊಡುತ್ತಿರುವವರ ತಪ್ಪು. ಬರಹಗಾರರ ಭಾಷಣ ಇವರಿಗೆ ಅರ್ಥವಾಗುತ್ತಿಲ್ಲ. ರಾಹುಲ್ ಅವರಿಗೆ ಮತ್ತಷ್ಟು ಉತ್ತಮ ಬರಹಗಾರರ ಅವಶ್ಯಕತೆ ಇದೆ ಎಂದು ಮನಮೋಹನ್ ವೈದ್ಯ ಬುಧವಾರ ಮಧ್ಯಪ್ರದೇಶದ ಭೋಪಾಲ್‍ನಲ್ಲಿ ಹೇಳಿದರು.

    ರಾಹುಲ್ ಹೇಳಿಕೆ ಪುರುಷ ಹಾಕಿ ಪಂದ್ಯದಲ್ಲಿ ಮಹಿಳಾ ಆಟಗಾರ್ತಿಯರನ್ನು ಹುಡುಕಿದಂತೆ. ಮಹಿಳಾ ಆಟಗಾರ್ತಿಯರನ್ನು ನೋಡ ಬೇಕಾದರೆ ಮಹಿಳಾ ಹಾಕಿ ಪಂದ್ಯಗಳಿಗೆ ಹೋಗಬೇಕು. ಹಾಗೆಯೇ ಆರ್‍ಎಸ್‍ಎಸ್ ಸಂಘಟನೆ ಪುರುಷರಿಗಾಗಿ ಮಾತ್ರ ಕ್ಯಾಂಪ್‍ಗಳನ್ನು ನಡೆಸುತ್ತದೆ, ಅಂದರೇ ಮಹಿಳೆಯರೊಂದಿಗೆ ಇದು ಕೆಲಸ ಮಾಡುವುದಿಲ್ಲ ಎಂದರ್ಥವಲ್ಲ ಎಂದು ಮನಮೋಹನ್ ಹೇಳಿದರು.

    ಇದೇ ವೇಳೆ ಆರ್‍ಎಸ್‍ಎಸ್ ಸಂಘಟನೆಯನ್ನು ಬೇರ ಯಾವ ರಾಜಕೀಯ ಪಕ್ಷದೊಂದಿಗೂ ಹೋಲಿಸುವ ಅಗತ್ಯವಿಲ್ಲ ಎಂದರು.

    ಗುಜರಾತ್‍ನ ಅಕೋಟಾದ ಸಭೆಯೊಂದರಲ್ಲಿ ಮಂಗಳವಾರ ಭಾಗವಹಿಸಿದ ರಾಹುಲ್ ಗಾಂಧಿ, ಮಹಿಳೆಯರ ವಿರುದ್ಧ ಬಿಜೆಪಿ ಮತ್ತು ಆರೆಸ್ಸೆಸ್ ತಾರತಮ್ಯವೆಸಗುತ್ತಿವೆ. ಅಲ್ಲದೇ ಬಿಜೆಪಿ ಪ್ರಧಾನ ಸಂಘಟನೆಯಾ ಆರ್‍ಎಸ್‍ಎಸ್‍ನಲ್ಲಿ ಎಷ್ಟು ಮಂದಿ ಮಹಿಳೆಯರಿದ್ದಾರೆ? ಆರೆಸ್ಸೆಸ್ ಶಾಖೆಗಳಲ್ಲಿ ಚಡ್ಡಿ ಧರಿಸಿದ ಮಹಿಳೆಯರನ್ನು ಯಾರಾದರೂ ನೋಡಿದ್ದೀರಾ? ನಾನಂತೂ ನೋಡಿಲ್ಲ ಎಂದು ಹೇಳಿದ್ದರು. ಅಲ್ಲದೇ ಕಾಂಗ್ರೆಸ್‍ಗೆ ಮತ್ತೆ ಅಧಿಕಾರ ನೀಡಿದರೆ ಮಹಿಳೆಯರ ಸಬಲೀಕರಣಕ್ಕೆ ಆದ್ಯತೆ ನೀಡುತ್ತೇವೆ. ಶಿಕ್ಷಣ, ಆರೋಗ್ಯ ಪಾಲನೆ ನಮ್ಮ ಆದ್ಯತೆ ಎಂಬ ಆಶ್ವಾಸನೆಯನ್ನು ನೀಡಿದ್ದರು.

  • ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಟಿ-20 ಸರಣಿಯಿಂದ ಔಟ್

    ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಟಿ-20 ಸರಣಿಯಿಂದ ಔಟ್

    ನವದೆಹಲಿ: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಸ್ಟೀವ್ ಸ್ಮತ್ ಗಾಯದ ಸಮಸ್ಯೆಯಿಂದ ಭಾರತ ವಿರುದ್ಧದ ಟಿ-20 ಸರಣಿಯಿಂದ ಹೊರ ನಡೆದಿದ್ದಾರೆ.

    ಈ ಕುರಿತು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಸ್ಪಷ್ಟಪಡಿಸಿದ್ದು, ಭಾರತ ವಿರುದ್ಧ ಐದನೇ ಏಕದಿನ ಪಂದ್ಯದಲ್ಲಿ ಸ್ಮಿತ್ ಬಲ ಭುಜಕ್ಕೆ ಗಾಯವಾಗಿರುವ ಕಾರಣ ಭಾರತದ ಪ್ರವಾಸದಿಂದ ಮೊಟಕುಗೊಳಿಸಲಾಗಿದೆ ಎಂದು ವೈದ್ಯರಾದ ರಿಚರ್ಡ್ ಸಾ ತಿಳಿಸಿದ್ದಾರೆ. ನಾಯಕ ಸ್ಮಿತ್ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಡೇವಿಡ್ ವಾರ್ನರ್ ಮುನ್ನಡೆಸಲಿದ್ದಾರೆ. ಸ್ಮಿತ್ ಸ್ಥಾನವನ್ನು ತಂಡದಲ್ಲಿ ಮಾರ್ಕಸ್ ಸ್ಟೊಯಿನಿಸ್ ಪಡೆದಿದ್ದಾರೆ.

    ಶುಕ್ರವಾರ ಅಭ್ಯಾಸದ ವೇಳೆ ಸ್ಮಿತ್ ಸ್ವಲ್ಪ ಸಮಯದ ಕಾಲ ಮೈದಾನದಲ್ಲಿ ಅಭ್ಯಾಸವನ್ನು ನಡೆಸಿದ್ದರು. ನಂತರ ತಂಡದ ವೈದ್ಯರ ಬಳಿ ಮಾತನಾಡಿ ವಿಶಾಂತ್ರಿಯನ್ನು ಪಡೆಯುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಆದರೆ ಸ್ಮಿತ್ ಅವರಿಗೆ ಗಂಭೀರ ಗಾಯವಾಗಿಲ್ಲ. ಆಸ್ಟ್ರೇಲಿಯಾ ತಂಡದ ಮುಂದಿನ ಆಶಸ್ ಸರಣಿಯಿಂದ ಅವರು ದೂರ ಉಳಿಯುವುದಿಲ್ಲ ಎಂದು ವರದಿಯಾಗಿದೆ.

    ತಂಡದ ಬ್ಯಾಟಿಂಗ್ ಆರ್ಡರ್ ಉತ್ತಮವಾಗಿದ್ದು, ಗ್ಲೆನ್ ಈ ಹಿಂದೆ ತಂಡದಕ್ಕೆ ಉತ್ತಮ ಆರಂಭವನ್ನು ಒದಗಿಸಿಕೊಟ್ಟಿದ್ದಾರೆ. ಆದರೆ ಫಿಂಚಿ ಮತ್ತು ವಾರ್ನರ್ ಉತ್ತಮ ಆರಂಭವನ್ನು ನೀಡುವ ಅದ್ಭುತವಾದ ಜೋಡಿಯಾಗಿದೆ. ತಂಡವು ಯಾವುದೇ ಬದಲಾವಣೆಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಎಂದು ಆಸ್ಟ್ರೇಲಿಯಾ ತಂಡದ ವಿಕೆಟ್ ಕೀಪರ್ ಟಿಮ್ ಪೈನೆ ಹೇಳಿದ್ದಾರೆ.

  • ಉತ್ತರ ಕರ್ನಾಟಕ ಆಳುವ, ಆಯ್ಕೆಯಾಗುವ ಕನಸು ಕೇವಲ ಭ್ರಮೆ: ಬಿಎಸ್‍ವೈಗೆ ಎಚ್.ಕೆ ಪಾಟೀಲ್ ಟಾಂಗ್

    ಉತ್ತರ ಕರ್ನಾಟಕ ಆಳುವ, ಆಯ್ಕೆಯಾಗುವ ಕನಸು ಕೇವಲ ಭ್ರಮೆ: ಬಿಎಸ್‍ವೈಗೆ ಎಚ್.ಕೆ ಪಾಟೀಲ್ ಟಾಂಗ್

    ಗದಗ: ಉತ್ತರ ಕರ್ನಾಟಕದಲ್ಲಿ ಆಳುವ, ಆಯ್ಕೆಯಾಗುವ ಕನಸು ಕೇವಲ ಭ್ರಮೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಎಚ್.ಕೆ ಪಾಟೀಲ್ ಟಾಂಗ್ ನೀಡಿದ್ದಾರೆ.

    ಉತ್ತರ ಕರ್ನಾಟಕದಲ್ಲಿ ಬಿಎಸ್‍ವೈ ಸ್ಪರ್ಧಿಸಲಿದ್ದಾರೆಂಬ ಹಿನ್ನಲೆಯಲ್ಲಿ ಇಂದು ಗದಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಉತ್ತರ ಕರ್ನಾಟಕ ನಾಯಕರನ್ನ ಅವಮಾನಿಸುವ ಕೆಲಸ ಬಿಜೆಪಿ ಮಾಡ್ತಿದೆ. ಈ ಹಿಂದೆ ಸ್ಪರ್ಧಿಸಿದ್ದ ಘಟಾನುಘಟಿಗಳು ಉತ್ತರ ಕರ್ನಾಟಕದಲ್ಲಿ ಸೋತು ಸುಣ್ಣವಾಗಿದ್ದಾರೆ. ಇದೇ ಇತಿಹಾಸ ಮುಂದೇಯೂ ಮರುಕಳಿಸಲಿದೆ ಅಂದ್ರು.

    ಉತ್ತರ ಕರ್ನಾಟಕ ಆಳುವ, ಆಯ್ಕೆಯಾಗುವ ಕನಸು ಕೇವಲ ಭ್ರಮೆ. ಉತ್ತರ ಕರ್ನಾಟಕ ರಾಜಕೀಯದಲ್ಲಿ ಲಘುವಾಗಿ ಪರಿಣಮಿಸಬಾರದು. ಲಘುವಾಗಿ ಕಂಡವರಿಗೆ ಉತ್ತರ ಕರ್ನಾಟಕ ಉತ್ತರ ನೀಡುತ್ತೆ. ಇಲ್ಲಿ ಹಣ ಇದ್ದ ರಾಜಕಾರಣಿಗಳು ಕಡಿಮೆ. ಆದ್ರೆ ಜನಪ್ರೀಯತೆ ಪಡೆದ ಜನಪ್ರತಿನಿಧಿಗಳು ಹೆಚ್ಚು ಅಂತ ಹೇಳಿದ್ರು.

  • ವಿಧಾನಸಭಾ ಚುನಾವಣೆಗೆ ಗರಿಗೆದರಿದ ಚಟುವಟಿಕೆ- ಇಂದು ಅಮಿತ್ ಷಾ, ರಾಹುಲ್ ಗಾಂಧಿ ಕರ್ನಾಟಕಕ್ಕೆ

    ವಿಧಾನಸಭಾ ಚುನಾವಣೆಗೆ ಗರಿಗೆದರಿದ ಚಟುವಟಿಕೆ- ಇಂದು ಅಮಿತ್ ಷಾ, ರಾಹುಲ್ ಗಾಂಧಿ ಕರ್ನಾಟಕಕ್ಕೆ

    ಬೆಂಗಳೂರು: ಇಂದಿನಿಂದ ರಾಜ್ಯದಲ್ಲಿ ರಾಜಕೀಯ ಸುಗ್ಗಿ ಪ್ರಾರಂಭವಾಗಿದೆ. ಕಮಲ ಮನೆಯಲ್ಲಿ ಸುಗ್ಗಿ ಸಂಭ್ರಮ ಮನೆ ಮಾಡಿದೆ. ಬಿಜೆಪಿ ಚಾಣಕ್ಯ ಅಮಿತ್ ಷಾ, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ.

    ಇಂಧನ ಸಚಿವ ಡಿಕೆಶಿ ಮನೆ ಮೇಲಿನ ಐಟಿ ದಾಳಿ, ವೀರಶೈವ-ಲಿಂಗಾಯತ ಸ್ವತಂತ್ರ ಧರ್ಮ ಗೊಂದಲದ ಗದ್ದಲ, ಪ್ರತ್ಯೇಕ ಕನ್ನಡ ಧ್ವಜ ವಿಚಾರಗಳು ಬಿಸಿ ಆಗಿರುವಾಗಲೇ ಎರಡು ಪಕ್ಷಗಳ ರಾಷ್ಟ್ರೀಯ ನಾಯಕರ ಆಗಮನದ ಸಾಕಷ್ಟು ಕುತೂಹಲ ಹುಟ್ಟುಹಾಕಿದೆ.

    ರಾಯಚೂರಿನಲ್ಲಿ ನಡೆಯಲಿರುವ ಕಾಂಗ್ರೆಸ್ ಸಮಾವೇಶದಲ್ಲಿ ರಾಹುಲ್ ಗಾಂಧಿ ಭಾಗವಹಿಸಲಿದ್ದು, ಬಿಜೆಪಿಗೆ ಟಾಂಗ್ ಕೊಡುವ ಸಾಧ್ಯತೆ ಇದೆ. ಇನ್ನೊಂದೆಡೆ ಅಮಿತ್ ಷಾ ಅವರು ಮೂರು ದಿನಗಳ ಬೆಂಗಳೂರು ಪ್ರವಾಸದಲ್ಲಿ 25ಕ್ಕೂ ಹೆಚ್ಚು ಸಭೆಗಳನ್ನು ನಡೆಸಲಿದ್ದಾರೆ. ಅಷ್ಟೇ ಅಲ್ಲ ಉತ್ತರ ಪ್ರದೇಶ ಮಾದರಿಯ ಸ್ಟ್ರಾಟಜಿಯನ್ನ ಸಿದ್ಧಗೊಳಿಸಿದ್ದಾರೆ ಎನ್ನಲಾಗಿದೆ.

    ಈ ನಡುವೆ ಅಮಿತ್ ಷಾ ಅವರ ತಂತ್ರಗಾರಿಗೆ ಬಹಳ ದೊಡ್ಡದಿವೆ ಎನ್ನಲಾಗುತ್ತಿದೆ. ಇಂದು ಬೆಳಗ್ಗೆ 10.45ಕ್ಕೆ ಬಂದಿಳಿಯುವ ಅಮಿತ್ ಷಾ, ವಿಮಾನ ನಿಲ್ದಾಣದಿಂದ ಬಿಜೆಪಿ ಕಚೇರಿಗೆ ಪಕ್ಷದ ಶಾಸಕರು,ಪದಾಧಿಕಾರಿಗಳ ಜತೆ ಸಭೆ ನಡೆಸುತ್ತಾರೆ. ನಾಳೆ ಸಂಜೆ ಖಾಸಗಿ ಹೋಟೆಲ್‍ನಲ್ಲಿ 600 ಜನ ಚಿಂತಕರ ಜತೆ ಷಾ ಸಭೆ ನಡೆಸಲಿದ್ದಾರೆ ಎಂಬುವುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

    ಆ ಸಭೆಗೆ ರಿಯಲ್‍ಸ್ಟಾರ್ ಉಪ್ಪಿಗೂ ಆಹ್ವಾನ ಇರೋದು ಸಾಕಷ್ಟು ಕುತೂಹಲ ಮೂಡಿಸಿದ್ದು, ಉಪ್ಪಿ ಬಿಜೆಪಿ ಸೇರ್ತಾರಾ ಅನ್ನೋ ಕುತೂಹಲ ಗರಿಗೆದರಿದೆ. ಇನ್ನೊಂದೆಡೆ ಭಾನುವಾರ ಆದಿಚುಂಚನಗಿರಿ ಶ್ರೀಗಳ ಭೇಟಿ ಬಹಳ ಮಹತ್ವದಾಗಿದ್ದು, ಒಕ್ಕಲಿಗ ಸಮುದಾಯವನ್ನು ಸೆಳೆಯುವ ತಂತ್ರವೇನಾದ್ರೂ ಇದೆಯಾ ಅನ್ನೋದನ್ನು ಕಾದುನೋಡಬೇಕಿದೆ.

    ಕೆಲವು ರಾಜಜಕೀಯ ತಂತ್ರಗಾರಿಕೆಗಳ ಜತೆಗೆ ಪಕ್ಷ ಸಂಘಟನೆಯ ಕೆಲ ಮಹತ್ವದ ನಿರ್ಧಾರಗಳನ್ನ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಅಷ್ಟೇ ಅಲ್ಲ ರಾಜ್ಯ ಬಿಜೆಪಿ, ಆರ್‍ಎಸ್‍ಎಸ್ ನಡುವಿನ ಸಂಬಂಧವನ್ನ ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕಡೇ ದಿನ ಗುಪ್ತ ಸಭೆ ನಡೆಸಲು ಫ್ಲ್ಯಾನ್ ನಡೆದಿದೆ ಎನ್ನಲಾಗಿದೆ.

  • ಜಮೀನಿನಲ್ಲೇ ಮರಕ್ಕೆ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ

    ಜಮೀನಿನಲ್ಲೇ ಮರಕ್ಕೆ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ

    ಹುಬ್ಬಳ್ಳಿ: ಸಾಲಬಾಧೆಯಿಂದ ಬೇಸತ್ತು ರೈತರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಂದಗೋಳ ತಾಲೂಕಿನ ನೆಲಗುಡ್ಡ ಗ್ರಾಮದಲ್ಲಿ ನಡೆದಿದೆ.

    ರಾಯನಗೌಡ ಪಾಟೀಲ್(45) ಎಂಬುವರು ಆರು ಏಕರೆ ಜಮೀನು ಹೊಂದಿದ್ದರು. ಹಾಗಾಗಿ ವಿವಿಧ ಬ್ಯಾಂಕ್‍ಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಸಾಲ ಮಾಡಿದ್ದರು. ಅಲ್ಲದೆ ಮುಂಗಾರು ಮಳೆ ಕೈ ಕೊಟ್ಟ ಹಿನ್ನೆಲೆಯಲ್ಲಿ ಜಮೀನಿನಲ್ಲಿ ಬೆಳದ ಬೆಳೆಯೂ ಬಾರದ ಕಾರಣ ಜಮೀನಿನಲ್ಲಿಯೇ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಈ ಸಂಬಂಧ ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.