Tag: anchor

  • ಈ ಬಂಧ ‘ಅನು’ಬಂಧ- ಮಾತಿನ ಮಲ್ಲಿಯ ಮನದಾಳದ ಮಾತು

    ಈ ಬಂಧ ‘ಅನು’ಬಂಧ- ಮಾತಿನ ಮಲ್ಲಿಯ ಮನದಾಳದ ಮಾತು

    -ಸಂದರ್ಶನದಲ್ಲಿ ಅನುಶ್ರೀ ಮದುವೆ ಗುಟ್ಟು ರಟ್ಟು
    -ಹೇಗಿರಬೇಕು ಅನುಶ್ರೀ ಮದುವೆ ಆಗೋ ಹುಡುಗ..?

    ಬೆಂಗಳೂರು: ಮಾತಿನ ಮಲ್ಲಿ ಎಂದೇ ಪ್ರಖ್ಯಾತರಾಗಿರೋ ಖ್ಯಾತ ನಿರೂಪಕಿ ಅನುಶ್ರೀ ಅವರು ಗಣೇಶ ಹಬ್ಬ ಆಚರಣೆ, ಕುಟುಂಬ ಹಾಗೂ ಮದುವೆ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

    ಗೌರಿ-ಗಣೇಶ ಹಬ್ಬದ ವಿಶೇಷ ಕಾರ್ಯಕ್ರಮದಲ್ಲಿ ಪಬ್ಲಿಕ್ ಟಿವಿಗೆ ಸಂದರ್ಶನ ನೀಡಿದ್ದ ಅವರು, ಈ ವರ್ಷ ಹಬ್ಬ ತುಂಬಾ ಸರಳವಾಗಿ ಆಚರಿಸುತ್ತಿದ್ದೇವೆ. ಪ್ರತಿ ವರ್ಷ ಹಬ್ಬವನ್ನು ಮಂಗಳೂರಿನಲ್ಲಿ ಆಚರಿಸುತ್ತಿದ್ದೇವೆ. ಆರು ತಿಂಗಳಿನಿಂದ ಅಮ್ಮ ನಮ್ಮ ಜೊತೆ ಬೆಂಗಳೂರಿನಲ್ಲಿಯೇ ಇದ್ದಾರೆ. ಈ ಬಾರಿ ಬೆಂಗಳೂರಿನಲ್ಲಿ ಅಮ್ಮ, ತಮ್ಮ ಮತ್ತು ನನ್ನ ಎರಡು ಮುದ್ದು ಮಕ್ಕಳು( ಸಾಕು ನಾಯಿ ಮತ್ತು ಮೊಲ) ಜೊತೆ ಹಬ್ಬ ಮಾಡ್ತೀವಿ ಅಂದ್ರು.

    ಮದುವೆ ಗುಟ್ಟು..?
    ಇದೂವರೆಗೂ ನನ್ನ ಒಬ್ಬರೂ ಪ್ರಪೋಸ್ ಮಾಡಿಲ್ಲ. ಒಂದು ಸಲ ನನ್ನ ಫ್ರೆಂಡ್ಸ್ ಹತ್ತರ ಯಾಕೆ ಯಾರು ನನಗೆ ಪ್ರಪೋಸ್ ಮಾಡಲ್ಲ? ನಾನು ನೋಡೊದಕ್ಕೆ ಚೆನ್ನಾಗಿ ಇಲ್ವಾ? ಅಂತಾ ಕೇಳಿದ್ದಕ್ಕೆ ಸೋಶಿಯಲ್ ಆಗಿ ಎಲ್ಲರ ಜೊತೆ ಬೆರೆಯಬೇಕು ಅಂತಾ ಹೇಳಿದ್ರು. ಒಂದು ಸಾರಿ ಎಲ್ಲರ ಜೊತೆ ಪಬ್ ಗೆ ಹೋಗಿದ್ದಾಗ ಅಲ್ಲಿ ಫುಲ್ ಕತ್ತಲು. ಇದರಿಂದ ಗಾಬರಿಗೊಂಡ ನಾನು ಬಳಿಕ ಅಲ್ಲಿಗೆ ಹೋಗಲೇ ಇಲ್ಲ. ಹೀಗಾಗಿ ಶೂಟಿಂಗ್ ಮುಗಿದ ಕೂಡಲೇ ಮನೆಗೆ ಬಂದು ಬಿಡುತ್ತೇನೆ ಅಷ್ಟೇ ನನ್ನ ಜೀವನ ಅಂದ್ರು.

    ಒಮ್ಮೆ ಒಬ್ಬ ಮಹಿಳೆ ತನ್ನ ಮಗನ ಫೋಟೋ, ಜಾತಕ, ಉದ್ಯೋಗ ಮಾಹಿತಿ ಬರೆದು ಸಂಗೀತ ನಿರ್ದೇಶಕ ಅರ್ಜುನ್ ಜನ್ಯರಿಗೆ ಪತ್ರ ಬರೆದಿದ್ದರು. ಇದನ್ನು ಅನುಶ್ರೀ ಅವರಿಗೆ ತಲುಪಿಸಬೇಕೆಂದು ಪತ್ರದಲ್ಲಿ ಬರೆದಿದ್ದರು. ಅರ್ಜುನ್ ಸರ್ ಬಂದು, ಮೇಡಂ ಪತ್ರ ನೋಡಿ ಅಂತಾ ಕೊಟ್ಟರು. ಒಂದು ಕ್ಷಣ ತುಂಬಾ ನಗು ಬಂತು. ಎಲ್ಲೋ ದೂರದಲ್ಲಿರುವ ತಾಯಿ ನನ್ನಲ್ಲಿ ಅವರ ಸೊಸೆ ಆಗುವ ಗುಣಲಕ್ಷಣ ನೋಡಿದ್ದಾರೆ ಅಂದ್ರೆ ನನಗೆ ತುಂಬಾ ಹೆಮ್ಮೆ ಆಗುತ್ತದೆ. ಕಾರ್ಯಕ್ರಮಗಳ ಮೂಲಕ ನಾನು ಜನರಿಗೆ ಎಷ್ಟು ಹತ್ತಿರ ಅಗಿದ್ದೀನಿ ಎಂಬುದು ಪತ್ರದ ಮೂಲಕ ತಿಳಿಯಿತು ಅಂತ ಹೇಳಿದ್ರು.

    ಸ್ಕೂಲ್ ಟೈಮಲ್ಲಿ ತುಂಬಾನೇ ಪ್ರಪೋಸ್ ಬರುತ್ತಿತ್ತು. ಆದ್ರೆ ನಿರೂಪಕಿ ಆದ್ಮೇಲೆ ಒಂದು ಲೆಟರ್ ಸಹ ಬಂದಿಲ್ಲ. ಪರಿಚಯದಲ್ಲಿ ಗಂಡು ನೋಡಲಾ ಅಂತಾ ಅಮ್ಮ ಹೇಳ್ತಾ ಇರ್ತಾರೆ. ಆದ್ರೆ ಆಗಬೇಕಾದ ಸಮಯದಲ್ಲಿ ಎಲ್ಲವೂ ನಡೆಯುತ್ತದೆ ಅಂತಾ ಹೇಳಿದ್ದೀನಿ ಅಂದ್ರು.

    ಕೈ ಹಿಡಿಯೋ ಹುಡ್ಗ ಹೇಗಿರಬೇಕು..?
    ನನಗೆ ತುಂಬಾ ಬೆಳ್ಳಗಿರುವ ಹುಡಗರು ಇಷ್ಟ ಆಗಲ್ಲ. ಯಾಕೆಂದ್ರೆ ನಾನು ತುಂಬಾ ಬೆಳ್ಳಗಿಲ್ಲ. ತುಂಬಾನೇ ಚಲ್ ಚಲ್ ಆಗಿ ಹುಡಗರು ಇಷ್ಟ ಆಗಲ್ಲ. ನನ್ನ ಮದುವೆ ಆಗೋ ಹುಡಗ ನನ್ನನ್ನು ಇಗ್ನೋರ್ ಮಾಡಬೇಕು. ಅಂತಹ ಹುಡಗ ನನಗಿಷ್ಟ. ಪಬ್ಲಿಕ್ ಟಿವಿ ಕಾರ್ಯಕ್ರಮ ನೋಡಿದ ಮೇಲೆ ಪ್ರಪೋಸ್ ಬಂದರೂ ಬರಬಹುದು ಅಂತ ಹೇಳುವ ಮೂಲಕ ನಕ್ಕುಬಿಟ್ಟರು.

    ಹವ್ಯಾಸ ಏನು..?
    ಶೂಟಿಂಗ್ ಬಳಿಕ ಹೆಚ್ಚಿನ ಸಮಯವನ್ನು ಮನೆಯಲ್ಲಿ ಕಳೆಯುತ್ತೇನೆ. ನಾನು ಮನೆಯಲ್ಲಿ ಹೆಚ್ಚು ಸಿನಿಮಾಗಳನ್ನು ನೋಡುತ್ತೇನೆ. ಮನೆಯಲ್ಲಿ 800 ಸಿಡಿಗಳನ್ನು ಸಂಗ್ರಹ ಮಾಡಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳನ್ನು ನೋಡುತ್ತೇನೆ. ಬೆಳಗ್ಗೆ 4 ಗಂಟೆಗೆ ಎದ್ದು ರನ್ನಿಂಗ್ ಮಾಡ್ತೀನಿ. ನಂತ್ರ ಮನೆಗೆ ಬಂದು ಟೀ ಕುಡಿದು ಫ್ರೆಶ್ ಆಗ್ತೀನಿ. ಮನೆಯ ಪಕ್ಕದಲ್ಲಿಯ ಮಕ್ಕಳೊಂದಿಗೆ ಆಟ ಆಡ್ತೀನಿ. ಅಮ್ಮನೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತೇನೆ.

    ಹಬ್ಬದ ಸ್ಪೆಷಲ್ ಏನು..?
    ಹಬ್ಬಕ್ಕೆ ಸಿಹಿ ಮಾಡುತ್ತೇವೆ. ಮನೆಗೆ ಕಬ್ಬುಗಳನ್ನು ಕಟ್ಟಿ, ಬಳಿಕ ಎಲ್ಲರೂ ತಿನ್ನುತ್ತೇವೆ. ವಿಶೇಷವಾಗಿ ಮನೆಯಲ್ಲಿ ಪೂಜೆ ಮಾಡುತ್ತೇವೆ. ಅಣ್ಣಂದಿರು ಗೌರಿ ಹಬ್ಬಕ್ಕೆ ಕಪ್ಪು ಬಳೆಗಳನ್ನು ಕೊಟ್ಟು, ಒಂದಿಷ್ಟು ಹಣ ಸಹ ಕೊಡುತ್ತಾರೆ. ಗೌರಿ ಹಬ್ಬಕ್ಕೆ ಅಣ್ಣಂದಿರು ಕೊಟ್ಟಿದ್ದ ಕಪ್ಪು ಬಳೆಗಳನ್ನು ತೊಟ್ಟು ಸಂಭ್ರಮಿಸುತ್ತೇವೆ.

    ಕಳೆದ ವರ್ಷ ನಾನು ಏನೂ ಬಯಸಿರಲಿಲ್ಲ. ಈ ಬಾರಿ ಸರ್ಕಾರ ನನಗೆ `ನಾಡಪ್ರಭು ಕೆಂಪೇಗೌಡ’ ಪ್ರಶಸ್ತಿ ನೀಡಿ ಗೌರವಿಸಿದೆ. ಕೆಂಪೇಗೌಡರ ಕಟ್ಟಿದ ಊರಲ್ಲಿ ಇಂದು ನಾವು ನೆಮ್ಮದಿಯಿಂದ ಇದ್ದೇವೆ. ನಮಗೆ ಊಟ, ಮನೆ ಎಲ್ಲವೂ ಬೆಂಗಳೂರು ನೀಡಿದೆ. ಅದಕ್ಕಿಂತ ಖುಷಿ ನನಗೆ ಮತ್ತೊಂದಿಲ್ಲ. ಕೊಡಗು ಪುನರ್ ನಿರ್ಮಾಣಕ್ಕೆ ಎಲ್ಲರೂ ಒಂದಾಗೋಣ ಅಂತಾ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=tjMufAL6i9U

  • ರಿಯಾಲಿಟಿ ಶೋನಲ್ಲಿ ಕಣ್ಣೀರು ಹಾಕಿದ ನಿರೂಪಕಿ ಅನುಶ್ರೀ

    ರಿಯಾಲಿಟಿ ಶೋನಲ್ಲಿ ಕಣ್ಣೀರು ಹಾಕಿದ ನಿರೂಪಕಿ ಅನುಶ್ರೀ

    ಬೆಂಗಳೂರು: ಕನ್ನಡದ ಖ್ಯಾತ ನಿರೂಪಕಿ ಅಂತಾನೇ ಗುರುತಿಸಿಕೊಳ್ಳುವ ಅನುಶ್ರೀ ನಿರೂಪಣೆ ವೇಳೆ ಒಂದು ಕ್ಷಣ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.

    ಖಾಸಗಿ ವಾಹಿನಿಯ ಡಾನ್ಸಿಂಗ್ ರಿಯಾಲಿಟಿ ಶೋ ಕಾರ್ಯಕ್ರಮದ ನಿರೂಪಣೆ ಮಾಡುವುದು ಎಲ್ಲರಿಗೂ ಗೊತ್ತಿದೆ. ಶನಿವಾರ ಪ್ರಸಾರವಾದ ಸಂಚಿಕೆಯಲ್ಲಿ ತಮ್ಮ ಮುದ್ದು ಸಹೋದರನನ್ನು ನೆನಪಿಸಿಕೊಂಡು ಕಣ್ಣೀರು ಸುರಿಸಿದ್ದಾರೆ.

    ಸ್ವರ್ಧಿಗಳಾದ ಸೂರಜ್, ಶ್ರಾವ್ಯಾ ಮತ್ತು ಡ್ಯಾನ್ಸ್ ಮಾಸ್ಟರ್ ರುದ್ರ ಮೂವರು ಜಾಲಿಡೇಸ್ ಸಿನಿಮಾದ ಸ್ನೇಹತ್ವ ಸಾರುವ ಹಾಡಿಗೆ ಮನಮೋಹಕವಾಗಿ ಹೆಜ್ಜೆ ಹಾಕಿದ್ದರು. ಡ್ಯಾನ್ಸ್ ಮಧ್ಯೆ ತೀರ್ಪುಗಾರರ ನೆಚ್ಚಿನ ಸ್ನೇಹಿತರ ಫೋಟೋ ಸಹ ತೋರಿಸಿದರು. ರಕ್ಷಿತಾರ ಸ್ನೇಹಿತೆ ಪ್ರಶಾಂತಿ, ವಿಜಯ್ ರಾಘವೇಂದ್ರ ಗೆಳೆಯ ಕುಮಾರ್, ಅರ್ಜುನ್ ಜನ್ಯಾರ ಗೆಳೆಯ ಪ್ರಕಾಶ್ ಎಲ್ಲರ ಫೋಟೋಗಳನ್ನು ಡಿಸ್ ಪ್ಲೇ ಮಾಡಲಾಯಿತು. ಕೊನೆಗೆ ಅನುಶ್ರೀಯವರ ಫ್ರೆಂಡ್ ಬದಲಾಗಿ ತಮ್ಮ ಅಭಿಜಿತ್ ಫೋಟೋ ತೋರಿಸಲಾಯಿತು.

    ತೀರ್ಪುಗಾರರು ಎಲ್ಲರೂ ತಮ್ಮ ಸ್ನೇಹದ ಬಗ್ಗೆ ಹೇಳಿಕೊಂಡರು. ಕೊನೆಗೆ ಅನುಶ್ರೀ ತಮ್ಮನ ಬಗ್ಗೆ ಕೇಳಲಾಯಿತು. ಆ ವೇಳೆ ಭಾವುಕಾರದ ಅನುಶ್ರೀ, ಇವನು ನನ್ನ ಕನಸು, ತುಂಬಾ ವರ್ಷಗಳ ಹಿಂದೆ ಸೂಟ್‍ಕೇಸ್ ಹಿಡಿದುಕೊಂಡು ಬೆಂಗಳೂರಿಗೆ ಬಂದೆ. ನಾನು ಇಲ್ಲಿ ದುಡಿಯುತ್ತಿದ್ದರೆ, ಅಲ್ಲಿ ಅವನು ನನ್ನ ತಾಯಿಯನ್ನು 13 ವರ್ಷಗಳಿಂದ ಚೆನ್ನಾಗಿ ನೋಡಿಕೊಂಡಿದ್ದಾನೆ. ನಾನು ಏನು ಮಾಡಲು ಸಾಧ್ಯವಾಗಿಲ್ಲವೋ, ಅವೆಲ್ಲವನ್ನು ಅವನು ಇಂದು ಸಾಧಿಸಿದ್ದಾನೆ. ಒಳ್ಳೆಯ ಅಂಕಗಳೊಂದಿಗೆ ತೇರ್ಗಡೆಯಾಗಿ ತನ್ನ ಕಾಲ ಮೇಲೆ ನಿಂತುಕೊಂಡಿದ್ದಾನೆ. ದೇವರು ನನಗೆ ನೀಡಿರುವ ಎಲ್ಲ ಆಯಸ್ಸನ್ನು ಆತನಿಗೆ ನೀಡಲಿ ಎಂದು ಕೇಳಿಕೊಂಡು ಒಂದು ಕ್ಷಣ ಭಾವುಕರಾದ್ರು.

    ಕಾರ್ಯಕ್ರಮಗಳಲ್ಲಿ ತಮ್ಮ ಪಟಾಕಿ ಮಾತುಗಳಿಂದ ಎಲ್ಲರನ್ನು ನಗಿಸುವ ಅನುಶ್ರೀ ಕಣ್ಣೀರು ಹಾಕಿದ್ದರಿಂದ ಒಂದು ಕ್ಷಣ ತೀರ್ಪುಗಾರರು ಸೇರಿದಂತೆ ವೀಕ್ಷಕರು ಸಹ ಭಾವುಕರಾದರು. ಅದರಂತೆ ನಟಿ ರಕ್ಷಿತಾ ತಮ್ಮ ಸ್ನೇಹದ ಗೆಳೆತಿ ಪ್ರಶಾಂತಿಯವರ ಬಗ್ಗೆ ಹೇಳುವಾಗ ಕಣ್ಣಂಚಲಿ ಕಣ್ಣೀರು ಬಂತು.

  • ಮತ್ತೆ ನಾ ಹೇಳಲು ಅವರು ಕೇಳಲು ಇಲ್ಲ: ಚಂದನ್‍ಗೆ ಅನುಶ್ರೀ ಸಂತಾಪ

    ಮತ್ತೆ ನಾ ಹೇಳಲು ಅವರು ಕೇಳಲು ಇಲ್ಲ: ಚಂದನ್‍ಗೆ ಅನುಶ್ರೀ ಸಂತಾಪ

    ಬೆಂಗಳೂರು: ರಸ್ತೆ ಅಪಘಾತದಲ್ಲಿ ಮೃತಪಟ್ಟ ಖ್ಯಾತ ನಿರೂಪಕ ಚಂದನ್ ಅವರಿಗೆ ನಟಿ, ನಿರೂಪಕಿ ಅನುಶ್ರೀ ತಮ್ಮ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ಚಂದನ್ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.

    “ಕನ್ನಡದ ಕಂಪು ಇವರ ಕಂಠದಿಂದ ಬರುವ ಪದಗಳಲ್ಲಿ ಇತ್ತು. ಕನ್ನಡ ಕಿರುತೆರೆ ಕಂಡಂತೆ ಅಚ್ಚ ಕನ್ನಡ ನಿರೂಪಕರಲ್ಲಿ ಇವರು ಉನ್ನತ ಸ್ಥಾನದಲ್ಲಿದ್ದರು. ನಾನು ಕೂಡ ಇವರ ಅಭಿಮಾನಿ. ಅದನೊಮ್ಮೆ ಅವರಿಗೆ ಹೇಳಿದ್ದೆ ಕೂಡ. ಮತ್ತೆ ನಾ ಹೇಳಲು ಅವರು ಕೇಳಲು ಇಲ್ಲ. ಅವರ ಕುಟುಂಬಕ್ಕೆ ಆ ದೇವರು ಶಕ್ತಿ ನೀಡಲಿ. ಚಂದನ್ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಅನುಶ್ರೀ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿದ್ದಾರೆ.

    ಚಂದನ್ ನಿರೂಪಕ ಮಾತ್ರವಲ್ಲದೆ ಸಿನಿಮಾಗಳಲ್ಲಿ ಚಿಕ್ಕ ಪುಟ್ಟ ಪಾತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಡಾ, ರಾಜ್‍ಕುಮಾರ್ ಅವರ ಅಭಿಮಾನಿಯಾಗಿದ್ದ ಚಂದನ್ ರಾಜ್‍ಕುಮಾರ್ ಅವರ ಕಾರ್ಯಕ್ರಮಗಳಲ್ಲೂ ನಡೆಸಿಕೊಡುತ್ತಿದ್ದರು. ಆ ಕಾರ್ಯಕ್ರಮ ಸಾಕಷ್ಟು ಜನಪ್ರಿಯತೆ ಪಡೆದಿತ್ತು.

    ನಿಂತ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಖಾಸಗಿ ವಾಹಿನಿಯಲ್ಲಿ ನಿರೂಪಕರಾಗಿದ್ದ ಚಂದನ್ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಗ್ರಾಮದಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದರು. ಚಂದನ್ ಅವರ ಕನ್ನಡ ಉಚ್ಛಾರವನ್ನು ಕಂಡು ಸಾಕಷ್ಟು ಜನ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದರು.

  • ‘ನನ್ನ ಮನಸ್ಸೇ, ನನ್ನ ಶತ್ರು’ ಅಂತಾ ಬರೆದಿಟ್ಟು 5ನೇ ಮಹಡಿಯಿಂದ ಜಿಗಿದ ನಿರೂಪಕಿ

    ‘ನನ್ನ ಮನಸ್ಸೇ, ನನ್ನ ಶತ್ರು’ ಅಂತಾ ಬರೆದಿಟ್ಟು 5ನೇ ಮಹಡಿಯಿಂದ ಜಿಗಿದ ನಿರೂಪಕಿ

    ಹೈದರಾಬಾದ್: ನ್ಯೂಸ್ ನಿರೂಪಕಿ 5ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ಹೈದರಾಬಾದ್ ನ ಮೂಸಪೇಟ್‍ನಲ್ಲಿ ನಡೆದಿದೆ.

    ರಾಧಿಕಾ ರೆಡ್ಡಿ(36) ಆತ್ಮಹತ್ಯೆ ಮಾಡಿಕೊಂಡ ನಿರೂಪಕಿ. ರಾಧಿಕಾ ಖಿನ್ನತೆಯಿಂದ ಬಳಲುತ್ತಿದ್ದು, ಕೆಲಸ ಮುಗಿಸಿಕೊಂಡು ಮನೆಗೆ ಹಿಂದಿರುಗಿದ ನಂತರ ನೇರವಾಗಿ ಟೆರೇಸ್‍ಗೆ ಹೋಗಿ ಅಲ್ಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಕ್ಕಟ್ ಪಲ್ಲಿಯ ಸಬ್ ಇನ್ಸ್ ಪೆಕ್ಟರ್ ಮಜಿದ್ ತಿಳಿಸಿದ್ದಾರೆ.

    ರಾಧಿಕಾ 5ನೇ ಮಹಡಿಯಿಂದ ಜಿಗಿದ್ದಾಗ ಆಕೆಯ ತಲೆಗೆ ಗಂಭೀರ ಗಾಯಗಳಾಗಿದ್ದವು. ತೀವ್ರ ರಕ್ತಸ್ರಾವದಿಂದಾಗಿ ರಾಧಿಕಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಾಧಿಕಾ ಬ್ಯಾಗ್ ನಲ್ಲಿ ಡೆತ್ ನೋಟ್ ಸಿಕ್ಕಿದ್ದು, ನನ್ನ ಮನಸ್ಸೇ, ನನ್ನ ಶತ್ರು ಅಂತಾ ಬರೆದಿದ್ದಾರೆ ಎಂದು ಎಸ್‍ಐ ಮಜಿದ್ ಹೇಳಿದ್ದಾರೆ.

    6 ತಿಂಗಳ ಹಿಂದೆ ರಾಧಿಕಾ ಪತಿಯಿಂದ ವಿಚ್ಚೇದನ ಪಡೆದಿದ್ದರು. ವಿಚ್ಛೇದನದ ಬಳಿಕ ರಾಧಿಕಾ ತನ್ನ 14 ವರ್ಷದ ಬುದ್ಧಿಮಾಂದ್ಯ ಮಗನನ್ನು ತವರು ಮನೆಯಲ್ಲಿ ಬಿಟ್ಟು ಬಂದಿದ್ದರು. ಕೆಲಸದ ನಿಮಿತ್ತ ರಾಧಿಕಾ ಏಕಾಂಗಿಯಾಗಿ ಹೈದರಾಬಾದ್ ನಲ್ಲಿ ಉಳಿದುಕೊಂಡಿದ್ದರು. ವಿಚ್ಛೇದನದ ಬಳಿಕ ರಾಧಿಕಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಅಂತಾ ಪೊಲೀಸರು ತಿಳಿಸಿದ್ದಾರೆ.

    ಸದ್ಯ ಪೊಲೀಸರು ಈ ಕೇಸನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ರಿಯಾಲಿಟಿ ಶೋ ನಲ್ಲಿ ಶಾಲೆಯ ದಿನಗಳನ್ನು ನೆನಪಿಸಿಕೊಂಡ ಆ್ಯಂಕರ್ ಅನುಶ್ರೀ

    ರಿಯಾಲಿಟಿ ಶೋ ನಲ್ಲಿ ಶಾಲೆಯ ದಿನಗಳನ್ನು ನೆನಪಿಸಿಕೊಂಡ ಆ್ಯಂಕರ್ ಅನುಶ್ರೀ

    ಬೆಂಗಳೂರು: ಖಾಸಗಿ ಚಾನೆಲೊಂದರಲ್ಲಿ ಪ್ರಸಾರವಾಗುವ ಸರಿಗಮಪ ರಿಯಾಲಿಟಿ ಶೋ ನಲ್ಲಿ ಆ್ಯಂಕರ್ ಅನುಶ್ರೀ ಅವರು ಸ್ಪರ್ಧಿಯೊಬ್ಬರ ಹುಟ್ಟುವನ್ನು ಆಚರಿಸಿಕೊಳ್ಳುವ ಮೂಲಕ ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿಕೊಂಡಿದ್ದಾರೆ.

    ಬೆಳಗಾವಿ ಮೂಲದ ಲಕ್ಷ್ಮೀ ಎಂಬವರ ಹುಟ್ಟುಹಬ್ಬವನ್ನು ಶೋನಲ್ಲಿ ಆಚರಿಸಿಕೊಳ್ಳಲಾಯಿತು. ಈ ವೇಳೆ ಅನುಶ್ರೀ ಅವರು ಲಕ್ಷ್ಮೀ ಅವರಿಗೆ ಶಾಲೆಗೆ ಹೋಗಲು ಬ್ಯಾಗ್ ನೀಡಿ ಬಳಿಕ ತನ್ನ ಶಾಲೆಯ ದಿನಗಳ ಬಗ್ಗೆ ನೆನಪಿಸಿಕೊಂಡರು.

    ನಾನು ಶಾಲೆಗೆ ಹೋಗುವ ಸಮಯದಲ್ಲಿ ನನ್ನಲ್ಲಿ ಬ್ಯಾಗ್ ಇರಲಿಲ್ಲ. ಅವಾಗ ನಮಗೆ ಬ್ಯಾಗ್ ಕೊಡಿಸುವವರೂ ಯಾರೂ ಇರಲಿಲ್ಲ. ಹೀಗಾಗಿ ನಾನು ಪ್ಲಾಸ್ಟಿಕ್ ಚೀಲಗಳಲ್ಲಿ ಪುಸ್ತಕಗಳನ್ನು ಶಾಲೆಗೆ ಕೊಂಡೊಯ್ಯುತ್ತಿದ್ದೆ. ಆದ್ರೆ ಈಗ ಹಾಗೆ ಅಲ್ಲ. ಮಕ್ಕಳಿಗೆ ಬೇಕಾದಂತಹ ವೈರಟಿಯ ಬ್ಯಾಗ್ ಗಳು ಬಂದಿವೆ ಅಂತ ಹೇಳಿದ್ರು.

    ತನ್ನದೇ ಶೈಲಿಯಲ್ಲಿ ಹಾಡುತ್ತಾ ಜನರ ಮನಗೆದ್ದಿರುವ ಲಕ್ಷ್ಮೀ ಅವರ ಹುಟ್ಟುಹಬ್ಬವನ್ನು ಆಚರಿಸಿರುವುದು ನೆರೆದವರ ಕಣ್ಣಂಚಲ್ಲಿ ನೀರು ತರಿಸಿತ್ತು. ಅಲ್ಲದೇ ಇದೇ ಮೊದಲ ಬಾರಿಗೆ ನಾನು ಕೇಕ್ ಕಟ್ ಮಾಡುತ್ತಿರುವುದಾಗಿ ಹೇಳಿ ಲಕ್ಷ್ಮೀ ಕೂಡ ಭಾವುಕರಾದ್ರು. ಕೇಕ್ ಕಟ್ ಮಾಡಿದ ಬಳಿಕ ಸರಿಗಮಪದ ಜಡ್ಜ್ ಗಳು ಲಕ್ಷ್ಮೀ ಅವರಿಗೆ ಗಿಫ್ಟ್ ನೀಡಿದ್ದಾರೆ. ಹಾಗೆಯೇ ಲಕ್ಷ್ಮೀ ಅವರು ಪುಸ್ತಕಗಳನ್ನು ಪ್ಲಾಸ್ಟಿಕ್ ಕವರ್ ನಲ್ಲಿ ತೆಗೆದುಕೊಂಡು ಹೋಗುತ್ತಾರೆ ಅನ್ನೋ ಮಾಹಿತಿ ಪಡೆದಿದ್ದ ಅನುಶ್ರೀ ಬ್ಯಾಗ್ ಉಡುಗೊರೆಯಾಗಿ ನೀಡುವ ಮೂಲಕ ಮಾನವೀಯತೆ ಮೆರೆದರು.

  • ಲೈವ್ ನ್ಯೂಸ್ ನಡೆಯುತ್ತಿದ್ದಾಗ ಆ್ಯಂಕರ್ ಮೇಲೆ ಬಂದು ಕುಳಿತ ಪಕ್ಷಿ – ವಿಡಿಯೋ ವೈರಲ್

    ಲೈವ್ ನ್ಯೂಸ್ ನಡೆಯುತ್ತಿದ್ದಾಗ ಆ್ಯಂಕರ್ ಮೇಲೆ ಬಂದು ಕುಳಿತ ಪಕ್ಷಿ – ವಿಡಿಯೋ ವೈರಲ್

    ಕ್ಯಾಲಿಫೋರ್ನಿಯಾ: ಟಿವಿ ವಾಹಿನಿಯ ನೇರ ಪ್ರಸಾರದಲ್ಲಿ ತಮಾಷೆಯ ಸಂಗತಿಯೊಂದು ನಡೆದಿದ್ದು, ಪಕ್ಷಿಯೊಂದು ನೇರಪ್ರಸಾರದ ವೇಳೆ ನಿರೂಪಕಿಯ ತಲೆಯ ಮೇಲೆ ಬಂದು ಕುಳಿತುಕೊಂಡಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಮೃಗಾಲಯದ ಪಕ್ಷಿ ಇದಾಗಿದೆ. ಕಾರ್ಯಕ್ರಮಕ್ಕಾಗಿ ಪಕ್ಷಿಯನ್ನ ಸೆಟ್‍ಗೆ ತರಲಾಗಿತ್ತು. ಇಲ್ಲಿನ ಕೆಎಫ್‍ಎಂಬಿ ಟಿವಿಯಲ್ಲಿ ಬೆಳಗಿನ ಸುದ್ದಿ ಪ್ರಸಾರವಾಗುತ್ತಿತ್ತು. ಅಂದು “ಝೂ ಡೇ” ಎಂಬ ಕಾರ್ಯಕ್ರಮ ನಡೆಯುತ್ತಿತ್ತು. ನಿರೂಪಕರಾದ ನಿಚೆಲ್ ಮೆಡೆನಾ ಹಾಗೂ ಎರಿಕ್ ಕಹ್ನೆಟ್ ಸುದ್ದಿ ಓದುತ್ತಿದ್ದರು.

    ಇಬ್ಬರು ನಿರೂಪಕರು ಕಾರ್ಯಕ್ರಮದ ಮಧ್ಯೆ ಬ್ರೇಕ್ ತೆಗೆದುಳ್ಳಲು ಮುಂದಾಗುತ್ತಿದ್ದರು. ಈ ಸಂದರ್ಭದಲ್ಲಿ ಸ್ಕಾರ್ಲೆಟ್ ಹಕ್ಕಿ ಬಂದು ನಿರೂಪಕಿ ನಿಚೆಲ್ ತಲೆ ಮೇಲೆ ಕುಳಿತುಕೊಂಡಿದೆ. ಹಕ್ಕಿಯ ಅನಿರೀಕ್ಷಿತ ಪ್ರವೇಶದಿಂದ ಅಚ್ಚರಿಯಾದರೂ ಅವರು ಭಯಪಡಲಿಲ್ಲ. ಆದರೆ ಪಕ್ಕದಲ್ಲಿ ಕುಳಿತಿದ್ದ ಸಹ ನಿರೂಪಕ ಎರಿಕ್ ಕಹ್ನೆಟ್ ನಗು ತಡೆಯಲು ಸಾಧ್ಯವಾಗದೆ ಜೋರಾಗಿ ನಕ್ಕಿದ್ದಾರೆ. ಬಳಿಕ ಕೆಲವು ಸೆಂಕೆಡ್ ಆದ ನಂತರ ಆ ಪಕ್ಷಿ ಎರಿಕ್ ಕಹ್ನೆಟ್ ತಲೆ ಮೇಲೂ ಹಾರಿದೆ.

    ಈ ವಿಡಿಯೋವನ್ನು ಎರಿಕ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ವೈರಲ್ ಆಗಿದೆ.

     

  • ಪಾಕಿಸ್ತಾನ ಟಿವಿ ಆ್ಯಂಕರ್ ಗಳ ಫೈಟಿಂಗ್ -ವಿಡಿಯೋ ವೈರಲ್

    ಪಾಕಿಸ್ತಾನ ಟಿವಿ ಆ್ಯಂಕರ್ ಗಳ ಫೈಟಿಂಗ್ -ವಿಡಿಯೋ ವೈರಲ್

    ಕರಾಚಿ: ಪಾಕಿಸ್ತಾನದ ಮೂಲದ ಖಾಸಗಿ ಮಾಧ್ಯಮದ ನಿರೂಪಕರಿಬ್ಬರು ಪರಸ್ಪರ ಜಗಳ ಮಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಮೂಲಗಳ ಪ್ರಕಾರ ಲಾಹೋರ್ ಮೂಲದ ಖಾಸಗಿ ಮಾಧ್ಯಮದ ಆ್ಯಂಕರ್ ಗಳಾಗಿದ್ದು, ಪರಸ್ಪರ ಆಕ್ರೋಶ ವ್ಯಕ್ತಪಡಿಸಿ ಜಗಳವಾಡಿದ್ದಾರೆ.

    ವಿಡಿಯೋದಲ್ಲಿರುವ ಮಹಿಳಾ ನಿರೂಪಕಿ ಮೂರ್ಖ ಎಂಬ ಪದವನ್ನ ಬಳಕೆ ಮಾಡುತ್ತಾಳೆ. ಇದರಿಂದ ಆಕ್ರೋಶಗೊಂಡ ನಿರೂಪಕ ಇಂತಹವರ ಜೊತೆ ನಾನು ಹೇಗೆ ಬುಲೆಟಿನ್ ಮಾಡಲಿ. ಈಕೆ ನನ್ನೊಂದಿಗೆ ಸರಿಯಾಗಿ ಮಾತನಾಡುವುದೇ ಇಲ್ಲ ಎಂದು  ದೂರುತ್ತಾನೆ.

    ನಿರೂಪಕರ ನಡುವಿನ ಈ ಬಿಸಿ ಜಗಳದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರು ನೋಡಿದ್ದಾರೆ. ಈ ಹಿಂದೆಯೂ ಆನ್ ಸ್ಕ್ರೀನ್ ನಲ್ಲಿ ನಿರೂಪಕರ ನಡುವಿನ ಜಗಳ ಹೆಚ್ಚು ವೈರಲ್ ಆಗಿತ್ತು.

    ಕಳೆದ ಕೆಲ ದಿನಗಳ ಹಿಂದೆ ಪಾಕಿಸ್ತಾನ ನಿರೂಪಕಿಯೊಬ್ಬರು ತಮ್ಮ ಮಗಳನ್ನು ಕುರಿಸಿಕೊಂಡು ಸುದ್ದಿ ಓದುವ ಮೂಲಕ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಹಿಂಸಾಚಾರದ ವಿರುದ್ಧ ಪ್ರತಿಭಟನೆ ನಡೆಸಿದ್ದರು.

    https://www.youtube.com/watch?time_continue=17&v=cmNaKHppdGA

  • ವಿಡಿಯೋ: ತೆಂಗಿನ ಮರ ಬಿದ್ದು ದೂರದರ್ಶನದ ಮಾಜಿ ನಿರೂಪಕಿ ದುರ್ಮರಣ

    ವಿಡಿಯೋ: ತೆಂಗಿನ ಮರ ಬಿದ್ದು ದೂರದರ್ಶನದ ಮಾಜಿ ನಿರೂಪಕಿ ದುರ್ಮರಣ

    ಮುಂಬೈ: ಬೆಳಗ್ಗೆ ವಾಕಿಂಗ್ ಹೋಗುತ್ತಿದ್ದ ಸಂದರ್ಭದಲ್ಲಿ ತಲೆ ಮೇಲೆ ತೆಂಗಿನ ಮರ ಬಿದ್ದ ಪರಿಣಾಮ ದೂರದರ್ಶನದ ಮಾಜಿ ನಿರೂಪಕಿ ಹಾಗೂ ಯೋಗ ಶಿಕ್ಷಕಿ ಗಂಭೀರವಾಗಿ ಗಾಯಗೊಂಡು ಸಾವನಪ್ಪಿದ ಘಟನೆ ಮುಂಬೈನ ಚೆಂಬೂರ್‍ನಲ್ಲಿ ನಡೆದಿದೆ.

    58 ವರ್ಷದ ಕಂಚನ್ ನಾಥ್ ಮೃತ ದುರ್ದೈವಿ ಮಹಿಳೆ. ಈ ಘಟನೆ ಗುರುವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ನಡೆದಿದೆ. ಕಂಚನ್ ಎಂದಿನಂತೆ ಗುರುವಾರ ಬೆಳಗ್ಗೆ ಮನೆಯ ಬಳಿ ವಾಕಿಂಗ್ ಹೋಗಿದ್ದರು. ವಾಕಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಆಕೆಯ ತಲೆಯ ಮೇಲೆ ಹಠಾತ್ತನೆ ತೆಂಗಿನ ಮರವೊಂದು ಬಿದ್ದಿದೆ. ಪರಿಣಾಮ ಕಂಚನ್ ರಸ್ತೆಯಲ್ಲೇ ಕುಸಿದು ಬಿದ್ದಿದ್ದಾರೆ. ಅವರ ತಲೆಗೆ ಗಂಭೀರವಾಗಿ ಗಾಯಗಳಾಗಿದ್ದು, ಕೂಡಲೇ ಸ್ಥಳೀಯರು ಕಂಚನ್ ಅವರನ್ನು ತೆಂಗಿನ ಮರದಡಿಯಿಂದ ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಶನಿವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯ ಹತ್ತಿರದ ಅಂಗಡಿಯಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

    ಮುಂಬೈ ಮಹಾನಗರ ಪಾಲಿಕೆಯ ನಿರ್ಲಕ್ಷ್ಯದಿಂದ ಈ ಅವಘಡ ಸಂಭವಿಸಿದೆ. ಈ ಮರ ಯಾವ ಸಮಯದಲ್ಲಾದ್ರೂ ಬೀಳಬಹುದು ಎಂದು ತಿಳಿಸಿದ್ದರೂ ಕೂಡ ಮರವನ್ನು ಕಡಿಯಲು ಸೊಸೈಟಿಗೆ ಅವಕಾಶ ನೀಡಿರಲಿಲ್ಲ ಅಂತ ಕಂಚನ್ ಅವರ ಪತಿ ರಜತ್‍ನಾಥ್ ಹೇಳಿಕೆ ನೀಡಿದ್ದಾರೆ.

    ಆದ್ರೆ ಮರ ಒಳ್ಳೆಯ ಸ್ಥಿತಿಯಲ್ಲೇ ಇದ್ದಿದ್ದರಿಂದ ಅದನ್ನು ಕಡಿಯಲು ಅನುಮತಿ ನಿರಾಕರಿಸಲಾಗಿತ್ತು ಎಂದು ಸ್ಥಳೀಯ ಕಾರ್ಪೊರೇಟರ್ ಆಶಾ ಮರಾಠೆ ಹೇಳಿದ್ದಾರೆ.