Tag: Anantnag Encounter

  • ನಾನು ಬದುಕುಳಿಯಲ್ಲ.. ಮಗುವನ್ನು ಚೆನ್ನಾಗಿ ನೋಡಿಕೊ: ಪತ್ನಿಗೆ ವೀಡಿಯೋ ಕಾಲ್‌ ಮಾಡಿ ಹಿರಿಯ ಪೊಲೀಸ್‌ ಆಡಿದ ಕೊನೆ ಮಾತು

    ನಾನು ಬದುಕುಳಿಯಲ್ಲ.. ಮಗುವನ್ನು ಚೆನ್ನಾಗಿ ನೋಡಿಕೊ: ಪತ್ನಿಗೆ ವೀಡಿಯೋ ಕಾಲ್‌ ಮಾಡಿ ಹಿರಿಯ ಪೊಲೀಸ್‌ ಆಡಿದ ಕೊನೆ ಮಾತು

    – ಭಯೋತ್ಪಾದಕರ ಗುಂಡೇಟಿಗೆ ಡಿಎಸ್ಪಿ ಹುಮಾಯೂನ್‌ ಭಟ್‌ ಹುತಾತ್ಮ
    – ಕೊನೆ ಕ್ಷಣದಲ್ಲಿ 1 ತಿಂಗಳ ಮಗು ನೋಡಲು ಪತ್ನಿಗೆ ವೀಡಿಯೋ ಕರೆ

    ಶ್ರೀನಗರ: ಅನಂತ್‌ನಾಗ್‌ನ ಕೋಕರ್‌ನಾಗ್ (Anantnag Encounter) ಪ್ರದೇಶದ ಗಡೋಲ್ ಅರಣ್ಯದಲ್ಲಿ ನಡೆದ ಭಯೋತ್ಪಾದಕರ ಎನ್‌ಕೌಂಟರ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪೊಲೀಸ್ ಉಪ ಅಧೀಕ್ಷಕ ಹುಮಾಯೂನ್ ಭಟ್ ಹತರಾಗಿದ್ದಾರೆ. ಸಾವಿಗೆ ಕೆಲವೇ ಕ್ಷಣಗಳ ಮೊದಲು ಡಿಎಸ್ಪಿ ಹುಮಾಯೂನ್ ಭಟ್ ತಮ್ಮ ಒಂದು ತಿಂಗಳ ಮಗುವನ್ನು ನೋಡುವುದಕ್ಕಾಗಿ ಕುಟುಂಬದವರಿಗೆ ವೀಡಿಯೋ ಕರೆ ಮಾಡಿದ್ದರು. ಆಗ ಅವರಾಡಿದ ಕೊನೆ ಮಾತು ಮನಕಲಕುವಂತಿತ್ತು.

    ಭಯೋತ್ಪಾದಕರ ಗುಂಡೇಟಿನಿಂದ ಗಂಭೀರ ಸ್ಥಿತಿಯಲ್ಲಿದ್ದ ಹುಮಾಯೂನ್ ಭಟ್ (Humayun Bhat) ಅವರು ಸಾವಿಗೆ ಕೆಲವೇ ಕ್ಷಣ ಇದ್ದಾಗ, ತಮ್ಮ ಪತ್ನಿ ಫಾತಿಮಾ ಅವರಿಗೆ ವೀಡಿಯೋ ಕರೆ ಮಾಡಿದರು. ಈ ವೇಳೆ ಪತ್ನಿಗೆ ‘ನಾನು ಬದುಕಿ ಉಳಿಯವುದಿಲ್ಲ’ ಎಂದು ಹೇಳಿದರು. ಕುಟುಂಬದ ಸದಸ್ಯರೊಂದಿಗೆ ಅವರಾಡಿದ ಕೊನೆ ಮಾತು ಇದು. ಇದನ್ನೂ ಓದಿ: ಟೆರರಿಸ್ಟ್‌ಗಳು ಎಸ್ಕೇಪ್‌ ಆಗಲು ಪಾಕ್‌ ಸೇನೆ ನೆರವು – ಮೂವರು ಭಯೋತ್ಪಾದಕರ ಹೊಡೆದುರುಳಿಸಿದ ಭಾರತೀಯ ಸೇನೆ

    ಅನಂತ್‌ನಾಗ್‌ನಲ್ಲಿ ಭಯೋತ್ಪಾದಕರ ವಿರುದ್ಧ ಸೇನಾ ಕಾರ್ಯಾಚರಣೆ ನಡೆಯುತ್ತಿದೆ. ಭಯೋತ್ಪಾದಕರು ಹಾರಿಸಿದ ಗುಂಡುಗಳು ಕಾಶ್ಮೀರದ ಹಿರಿಯ ಪೊಲೀಸ್ ಅಧಿಕಾರಿ ದೇಹವನ್ನು ಒಕ್ಕಿದ್ದವು. ಲಷ್ಕರ್-ಎ-ತೊಯ್ಬಾದ (ಎಲ್‌ಇಟಿ) ಆಫ್-ಶೂಟ್ ಆಗಿರುವ ಟಿಆರ್‌ಎಫ್‌ನ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರ ಗುಂಟೇಟಿನಿಂದ ಹುಮಾಯೂನ್‌ ಭಟ್‌ ಅವರಿಗೆ ತೀವ್ರ ರಕ್ತಸ್ರಾವವಾಗಿತ್ತು. ಹುಮಾಯೂನ್ ಭಟ್ ಅವರ ವಿವಾಹ ವಾರ್ಷಿಕೋತ್ಸವ ಸಂಭ್ರಮಕ್ಕೆ 15 ದಿನಗಳಷ್ಟೇ ಬಾಕಿ ಇದ್ದವು. ಆ ಹೊತ್ತಿಗಾಗಲೇ ಈ ದುರಂತ ನಡೆದು ಹೋಗಿತ್ತು.

    ಗುಂಡೇಟಿನಿಂದ ದೇಹಕ್ಕೆ ಗಂಭೀರ ಗಾಯಗಳಾಗಿವೆ. ನಾನು ಬದುಕಿ ಉಳಿಯುವುದಿಲ್ಲ. ಮಗುವನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಹುಮಾಯೂನ್‌ ಅವರು ಪತ್ನಿ ಫಾತಿಮಾಗೆ ವೀಡಿಯೋ ಕರೆ ಮಾಡಿ ಕೊನೆ ಮಾತುಗಳನ್ನು ಹೇಳಿದ್ದರು. ಪತ್ನಿಗೆ ಕರೆ ಮಾಡುವುದಕ್ಕೂ ಮುನ್ನ ಅವರು ತಮ್ಮ ತಂದೆ, ನಿವೃತ್ತ ಐಜಿ ಗುಲಾಮ್ ಹಸನ್ ಭಟ್ ಅವರಿಗೆ ಕರೆ ಮಾಡಿದ್ದರು. ತಮಗಾಗಿರುವ ಗಾಯದ ಪ್ರಮಾಣದ ಬಗ್ಗೆ ತಿಳಿಸಿದ್ದರು. ಇದನ್ನೂ ಓದಿ: ಕಾಶ್ಮೀರದಲ್ಲಿ 3ನೇ ದಿನಕ್ಕೆ ಕಾಲಿಟ್ಟ ಸೇನಾ ಕಾರ್ಯಾಚರಣೆ – ಉಗ್ರರ ಹುಟ್ಟಡಗಿಸಲು ವಿಳಂಬವಾಗ್ತಿರುವುದ್ಯಾಕೆ?

    ಅನಂತ್‌ನಾಗ್ ಜಿಲ್ಲೆಯ ಕೋಕೆರ್‌ನಾಗ್‌ನಲ್ಲಿ ಬುಧವಾರ ನಡೆದ ಭಯೋತ್ಪಾದಕರೊಂದಿಗಿನ ಗುಂಡಿನ ಚಕಮಕಿಯಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಉಪ ಅಧೀಕ್ಷಕ ಹುಮಾಯೂನ್‌ ಭಟ್‌, ಕರ್ನಲ್ ಮನ್‌ಪ್ರೀತ್ ಸಿಂಗ್, ಮೇಜರ್ ಆಶಿಶ್ ತೀವ್ರವಾಗಿ ಗಾಯಗೊಂಡು ನಂತರ ಹುತಾತ್ಮರಾದರು ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಯೋತ್ಪಾದಕರ ಗುಂಡೇಟಿನಿಂದ ಯೋಧ ಹುತಾತ್ಮ; ಸೆಲ್ಯೂಟ್‌ ಮಾಡಿ ತಂದೆಗೆ ಅಂತಿಮ ನಮನ ಸಲ್ಲಿಸಿದ ಪುಟ್ಟ ಮಕ್ಕಳು

    ಭಯೋತ್ಪಾದಕರ ಗುಂಡೇಟಿನಿಂದ ಯೋಧ ಹುತಾತ್ಮ; ಸೆಲ್ಯೂಟ್‌ ಮಾಡಿ ತಂದೆಗೆ ಅಂತಿಮ ನಮನ ಸಲ್ಲಿಸಿದ ಪುಟ್ಟ ಮಕ್ಕಳು

    ನವದಹೆಲಿ: ಭಯೋತ್ಪಾದಕರೊಂದಿಗಿನ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಕರ್ನಲ್‌ ಮನ್‌ಪ್ರೀತ್‌ ಸಿಂಗ್‌ (Colonel Manpreet Singh) ಪಾರ್ಥಿವ ಶರೀರಕ್ಕೆ ಅವರ 6 ವರ್ಷದ ಪುತ್ರ ಸೆಲ್ಯೂಟ್‌ ಮಾಡಿದ ಮನಕಲಕುವ ದೃಶ್ಯ ವೈರಲ್‌ ಆಗಿದೆ.

    ಕಾಶ್ಮೀರದ (Jammu Kashmir) ಅನಂತ್‌ನಾಗ್‌ನಲ್ಲಿ (Anantnag Encounter) ಭಯೋತ್ಪಾದಕರೊಂದಿಗಿನ ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರು ಹಾಗೂ ಒಬ್ಬ ಪೊಲೀಸ್‌ ಅಧಿಕಾರಿ ಹುತಾತ್ಮರಾದರು. ಅವರಲ್ಲಿ ಕರ್ನಲ್ ಮನ್‌ಪ್ರೀತ್ ಸಿಂಗ್ ಒಬ್ಬರು. ಪಂಜಾಬ್‌ನ ಮೊಹಾಲಿ ಜಿಲ್ಲೆಯ ಮುಲ್ಲನ್‌ಪುರದಲ್ಲಿ ಕರ್ನಲ್‌ ಮನ್‌ಪ್ರೀತ್‌ ಸಿಂಗ್‌ ಅವರ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇದನ್ನೂ ಓದಿ: ಸೇನೆ, ಉಗ್ರರ ನಡುವೆ ಗುಂಡಿನ ಚಕಮಕಿ- ಇದುವರೆಗೆ ನಾಲ್ವರು ಯೋಧರು ಹುತಾತ್ಮ

    ಮನ್‌ಪ್ರೀತ್‌ ಸಿಂಗ್‌ ಅವರ ಪಾರ್ಥಿವ ಶರೀರವನ್ನು ಮನೆಗೆ ತರುವ ವೇಳೆ ಅವರ 6 ವರ್ಷದ ಪುತ್ರ ಮಿಲಿಟರಿ ಡ್ರೆಸ್‌ನಲ್ಲಿ ತಂದೆಯ ಪಾರ್ಥಿವ ಶರೀರಕ್ಕೆ ಸೆಲ್ಯೂಟ್‌ ಮಾಡಿದ. ಪುಟ್ಟ ಬಾಲಕನ ಪಕ್ಕದಲ್ಲಿ ಆತನಿಗಿಂತ 2 ವರ್ಷ ಚಿಕ್ಕವಳಾದ ಸಹೋದರಿ ಕೂಡ ನಿಂತಿದ್ದಳು. ಆಕೆಯೂ ಅಣ್ಣನಂತೆ ತಂದೆಯ ಪಾರ್ಥಿವ ಶರೀರಕ್ಕೆ ಸೆಲ್ಯೂಟ್‌ ಮಾಡಿದಳು.

    ಇಬ್ಬರಿಗೂ ಕುಟುಂಬಕ್ಕೆ ಸಂಭವಿಸಿದ ದುರಂತದ ಬಗ್ಗೆ ತಿಳಿದಿರಲಿಲ್ಲ. ವೀರ ಯೋಧನಿಗೆ ಅಂತಿಮ ನಮನ ಸಲ್ಲಿಸಲು ಅಪಾರ ಜನಸ್ತೋಮ ನೆರೆದಿದ್ದರಿಂದ ಸ್ಥಳೀಯರು ಈ ಇಬ್ಬರು ಮಕ್ಕಳನ್ನು ಮೇಲಕ್ಕೆತ್ತಿ ತಂದೆಯ ಪಾರ್ಥಿವ ಶರೀರ ದರ್ಶನ ಮಾಡಿಸಿದರು. ಕರ್ನಲ್ ಮನ್‌ಪ್ರೀತ್ ಸಿಂಗ್ ಅವರ ಪತ್ನಿ, ಸಹೋದರಿ, ತಾಯಿ ಮತ್ತು ಇತರ ಕುಟುಂಬ ಸದಸ್ಯರು ತೀವ್ರ ದುಃಖದಿಂದಾಗಿ ಬಳಲಿದ್ದರು.

    19 ರಾಷ್ಟ್ರೀಯ ರೈಫಲ್ಸ್‌ನ (19 ಆರ್‌ಆರ್) ಕಮಾಂಡಿಂಗ್ ಆಫೀಸರ್ ಮತ್ತು ಪ್ರತಿಷ್ಠಿತ ಸೇನಾ ಪದಕ (ಶೌರ್ಯ) ಪುರಸ್ಕೃತ ಕರ್ನಲ್ ಮನ್‌ಪ್ರೀತ್ ಸಿಂಗ್ (41) ಬುಧವಾರ ರಾತ್ರಿ ಗುಂಡಿನ ದಾಳಿಯಿಂದಾಗಿ ಹುತಾತ್ಮರಾಗಿದ್ದರು. ಇದನ್ನೂ ಓದಿ: ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ಮುಂದುವರಿದ ಎನ್‌ಕೌಂಟರ್‌ – ಓರ್ವ ಯೋಧ ನಾಪತ್ತೆ

    ಬುಧವಾರ ಕಣಿವೆಯ ಕೊಕೊರೆನಾಗ್ ಪ್ರದೇಶದಲ್ಲಿ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಪೊಲೀಸ್‌ ಹಾಗೂ ಭಾರತೀಯ ಸೇನೆಯ ಇಬ್ಬರು ಯೋಧರು ಸೇರಿ ಮೂವರು ಅಧಿಕಾರಿಗಳು ಹುತಾತ್ಮರಾಗಿದ್ದರು. ಕರ್ನಲ್ ಮನ್‌ಪ್ರೀತ್‌ ಸಿಂಗ್‌, ಮೇಜರ್ ಆಶಿಶ್ ಧೋಂಚಕ್‌, ಡಿಎಸ್‌ಪಿ ಹುಮಾಯೂನ್ ಭಟ್ ಹುತಾತ್ಮರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]