Tag: Ananth Kumar Hegde Public TV

  • ಕೊಡಲಿಯಿಂದ ಹೊಡೆದು ಪತ್ನಿ, ಮಗ, ಮಗಳನ್ನ ಕೊಂದ ಪೊಲೀಸ್

    ಕೊಡಲಿಯಿಂದ ಹೊಡೆದು ಪತ್ನಿ, ಮಗ, ಮಗಳನ್ನ ಕೊಂದ ಪೊಲೀಸ್

    -ಪತ್ನಿ ಶವದ ಪಕ್ಕ ಕುಳಿತು ಸೋದರಿಗೆ ಫೋನ್ ಮಾಡ್ದ
    -ನಶೆಯ ಮತ್ತಿನಲ್ಲಿ ಮೂವರ ಬರ್ಬರ ಕೊಲೆ
    -ಕೊಲೆಯ ಬಳಿಕ ಆತ್ಮಹತ್ಯೆಗೆ ಯತ್ನ

    ರಾಂಚಿ: ವ್ಯಕ್ತಿಯೋರ್ವ ನಶೆಯ ಮತ್ತಿನಲ್ಲಿ ಕೊಡಲಿಯಿಂದ ಹೊಡೆದು ಪತ್ನಿ, ಮಗಳು ಮತ್ತು ಮಗನನ್ನು ಕೊಲೆಗೈದಿರುವ ಆಘಾತಕಾರಿ ಘಟನೆ ಜಾರ್ಖಂಡ್ ರಾಜ್ಯದ ಬಢಗಾಯಿ ಇಲಾಖೆಯ ಚಂದ್ರಗುಪ್ತ ನಗರದಲ್ಲಿ ನಡೆದಿದೆ.

    40 ವರ್ಷದ ಬ್ರಿಜೇಶ್ ತಿವಾರಿ ಕುಟುಂಬಸ್ಥರನ್ನು ಕೊಲೆಗೈದ ಪೊಲೀಸ್. ಬ್ರಿಜೇಶ್ ಪತ್ನಿ ರಿಂಕಿ ದೇವಿ (35), ಪುತ್ರಿ ಖುಷ್ಬೂ (15) ಮತ್ತು ಪುತ್ರ ಬಾದಲ್ (10) ಕೊಲೆಯಾದ ಕುಟುಂಬಸ್ಥರು. ಆರೋಪಿ ಬ್ರಿಜೇಶ್ ವಿಶೇಷ ತನಿಖಾದಳ ತಂಡದ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಮೂಲತಃ ಪಲಾಮೂ ಜಿಲ್ಲೆಯನಾದ ಬ್ರಿಜೇಶ್ ಕೆಲಸದ ನಿಮಿತ್ತ ಚಂದ್ರಗುಪ್ತ ನಗರದ ಬಾಡಿಗೆ ಮನೆಯಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದನು.

    ರಾತ್ರಿ ನಡೆದಿದ್ದೇನು?: ಶುಕ್ರವಾರ ರಾತ್ರಿ ಪಾನಮತ್ತನಾಗಿ ಬಂದ ಬ್ರಿಜೇಶ್ ಪತ್ನಿ ಜೊತೆ ಜಗಳ ಮಾಡಿದ್ದಾನೆ. ಕುಡಿದು ಬಂದಿದ್ದರಿಂದ ಪತ್ನಿ ಸಹಜವಾಗಿ ಗಂಡನ ಮೇಲೆ ಕೂಗಾಡಿದ್ದಾರೆ. ಕೋಪಗೊಂಡ ಬ್ರಿಜೇಶ್ ಮನೆಯಲ್ಲಿದ್ದ ಕೊಡಲಿಯಿಂದ ಹಲ್ಲೆ ನಡೆಸಿದ್ದಾನೆ. ತಾಯಿಯ ಮೇಲೆ ಹಲ್ಲೆಗೆ ಮುಂದಾಗುತ್ತಿದ್ದಂತೆ ಮಕ್ಕಳಾದ ಖುಷ್ಬೂ ಮತ್ತು ಬಾದಲ್ ಅಮ್ಮನ ರಕ್ಷಣೆಗೆ ಮುಂದಾಗಿದ್ದಾರೆ. ನಶೆಯಲ್ಲಿದ್ದ ಬ್ರಿಜೇಶ್ ಪತ್ನಿ ಜೊತೆ ಮಕ್ಕಳ ಮೇಲೆಯೂ ಹಲ್ಲೆ ನಡೆಸಿ ಕೊಲೆಗೈದಿದ್ದಾನೆ.

    ಸೋದರಿಗೆ ಪೋನ್ ಮಾಡ್ದ: ಕೊಲೆಯ ಬಳಿಕ ಪತ್ನಿಯ ಶವದ ಪಕ್ಕ ಕುಳಿತು ರಾಂಚಿಯ ಪಂಡಾರದಲ್ಲಿರುವ ಸೋದರಿಗೆ ಬ್ರಿಜೇಶ್ ಫೋನ್ ಮಾಡಿದ್ದಾನೆ. ನಾನು ಮೂವರನ್ನು ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾನೆ ಎಂದು ವಿಷಯ ತಿಳಿಸಿದ್ದಾನೆ. ಸೋದರನ ಮಾತು ಕೇಳಿ ಭಯಗೊಂಡ ಸೋದರಿ ನೆರೆಹೊರೆಯವರೊಂದಿಗೆ ರಾತ್ರಿ ಸುಮಾರು 12 ಗಂಟೆಗೆ ಅಣ್ಣನ ಮನೆ ತಲುಪಿದ್ದಾರೆ. ಮನೆಗೆ ಬಂದು ಮೊದಲು ಮನೆಯ ಮಾಲೀಕನನ್ನು ಎಚ್ಚರಿಸಿ, ತನ್ನ ಸೋದರ ಅತ್ತಿಗೆಯೊಂದಿಗೆ ಜಗಳ ಮಾಡ್ತಿದ್ದಾನೆ ಎಂದು ಹೇಳಿ ಕರೆದುಕೊಂಡು ಹೋಗಿದ್ದಾರೆ. ಮನೆಯ ಬಾಗಿಲು ತೆಗೆದಾಗ ಬೆಡ್ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ರಿಂಕಿ ದೇವಿ ಮೃತದೇಹ ಕಾಣಿಸಿದೆ. ಶವದ ಪಕ್ಕದಲ್ಲಿಯೇ ಬ್ರಿಜೇಶ್ ಕುಳಿತಿದ್ದಾನೆ. ಬೆಡ್ ಕೆಳಗಡೆ ಮಕ್ಕಳಿಬ್ಬರ ಶವ ಕಾಣಿಸಿವೆ.

    ಕೊಲೆಯ ವಿಷಯ ಗೊತ್ತಾಗುತ್ತಿದ್ದಂತೆ ಮನೆಯ ಮಾಲೀಕ ಸ್ಥಳೀಯ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಇತ್ತ ಸೋದರಿ ಮತ್ತು ನೆರೆಹೊರೆಯವರು ಬರುತ್ತಿದ್ದಂತೆ ಬ್ರಿಜೇಶ್ ಮದ್ಯದ ಬಾಟಲಿ ಚುಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಆತನನ್ನು ರಾಂಚಿಯ ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಸಾವಿನ ಸುತ್ತ ಅನುಮಾನ: ಆರೋಪಿ ಜಗಳ ವಿಕೋಪಕ್ಕೆ ತಿರುಗಿದಾಗ ಕೊಲೆ ಮಾಡಿದೆ ಎಂದು ಹೇಳಿಕೊಂಡಿದ್ದಾನೆ. ಆದ್ರೆ ಮನೆಯ ಮಾಲೀಕರ ಜಗಳ ನಡೆದಿರುವ ಬಗ್ಗೆ ಮಾಹಿತಿ ಇಲ್ಲ. ಇಬ್ಬರ ಮಧ್ಯೆ ಜಗಳ ನಡೆದಿದ್ದರೆ ಹತ್ತಿರದಲ್ಲಿದ್ದ ನಮಗೆ ಗಲಾಟೆ ಕೇಳಿಸಬೇಕಿತ್ತು. ಆ ರೀತಿಯ ಸದ್ದು ನಮಗೆ ಕೇಳಿಸಿಲ್ಲ ಎಂದು ಮನೆಯ ಮಾಲೀಕ ಹೇಳಿಕೆ ನೀಡಿದ್ದಾರೆ. ಆರೋಪಿ ಬ್ರಿಜೇಶ್ ಕೊಲೆಗೂ ಮುನ್ನ ಮತ್ತು ಬರುವ ಔಷಧಿ ನೀಡಿದ ಬಳಿಕ ಕೊಲೆ ಮಾಡಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

    ಮೃತ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಶವ ಪರೀಕ್ಷೆಯಲ್ಲಿ ಕೊಲೆ ಹೇಗೆ ನಡೆದಿದೆ ಎಂಬುವುದು ತಿಳಿದು ಬರಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

  • ಸೋತ ಜಂಪಿಂಗ್ ಸ್ಟಾರ್ಸ್‍ ಗಿಲ್ಲ ಮಿನಿಸ್ಟ್ರಿಗಿರಿ – ಬಿಎಸ್‍ವೈ ಹೇಳಿಕೆಗೆ ಮಿತ್ರ ಮಂಡಳಿ ಕೊತಕೊತ

    ಸೋತ ಜಂಪಿಂಗ್ ಸ್ಟಾರ್ಸ್‍ ಗಿಲ್ಲ ಮಿನಿಸ್ಟ್ರಿಗಿರಿ – ಬಿಎಸ್‍ವೈ ಹೇಳಿಕೆಗೆ ಮಿತ್ರ ಮಂಡಳಿ ಕೊತಕೊತ

    – ಇವತ್ತು 17 ಶಾಸಕರ ದೊಡ್ಡ ಮೀಟಿಂಗ್

    ಬೆಂಗಳೂರು: ಉಪಚುನಾವಣೆಯಲ್ಲಿ ಸೋತವರಿಗೆ ಸಚಿವ ಸ್ಥಾನ ಇಲ್ಲ ಎಂಬ ಸಿಎಂ ಯಡಿಯೂರಪ್ಪ ಹೇಳಿಕೆಗೆ ಮಿತ್ರ ಮಂಡಳಿ ಕೆಂಡಾಮಂಡಲವಾಗಿದೆ. ಈ ಹಿನ್ನೆಲೆಯಲ್ಲಿ ಮಿತ್ರಮಂಡಳಿಯ 17 ಶಾಸಕರು ಇಂದು ಸಭೆ ನಡೆಸಲಿದ್ದು, ತಮ್ಮ ನಡೆ ಏನು ಎಂಬುವುದನ್ನು ಸ್ಪಷ್ಟಪಡಿಸುವ ಸಾಧ್ಯತೆಗಳಿವೆ.

    ಅಂದು ಮುಂಬೈನಲ್ಲಿ ಮನೆ, ಹೆಂಡತಿ, ಕ್ಷೇತ್ರವನ್ನು ಬಿಟ್ಟು ಇದ್ದವರು, ಇಂದು ಬೆಂಗಳೂರಿನಲ್ಲಿ ಕೊತ ಕೊತ ಕುದಿಯುತ್ತಿದ್ದಾರೆ. ಬಿಜೆಪಿಯ ನಡೆಗೆ ಮಿತ್ರಮಂಡಳಿ ಬೆಂಕಿಯುಂಡೆಯಾಗಿದ್ದು, ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ಹೊರ ಹಾಕದಿದ್ದರೂ, ಆಪ್ತರ ಮುಂದೆ ಹೇಳಿಕೊಂಡಿದ್ದಾರೆ ಎಂಬ ಚರ್ಚೆಗಳು ಕೇಳಿ ಬರುತ್ತಿವೆ. ಉಪಚುನಾವಣೆಯಲ್ಲಿ ಸೋತಿರುವ ಅನರ್ಹ ಶಾಸಕರಾದ ಹೆಚ್.ವಿಶ್ವನಾಥ್ ಮತ್ತು ಎಂಟಿಬಿ ನಾಗರಾಜ್, ನಮಗೆ ಸಿಎಂ ಮೇಲೆ ನಂಬಿಕೆಯಿದ್ದು, ಕೊಟ್ಟ ಮಾತನ್ನು ಅವರು ಉಳಿಸಿಕೊಳ್ಳುತ್ತಾರೆ ಎಂದು ಹೇಳುತ್ತಿದ್ದಾರೆ.

    ಸಿಎಂ ಯಡಿಯೂರಪ್ಪ ಚುನಾವಣೆ ಗೆದ್ದ 24 ಗಂಟೆಯಲ್ಲಿ ಮಂತ್ರಿ ಮಾಡ್ತೀವಿ ಅಂದಿದ್ದರು. 24 ಗಂಟೆಯಲ್ಲ, 24 ದಿನ ಕಳೆದರೂ ಮಂತ್ರಿನೂ ಇಲ್ಲ, ಕ್ಯಾರೇಯೂ ಅಂತಿಲ್ಲ. ದಾರಿ ತಪ್ಪಿದ ಮಕ್ಕಳಾದಂತೆ ಆದ ಮಿತ್ರಮಂಡಳಿ ಸದಸ್ಯರ ಗೋಳಾಟದ ಬಗ್ಗೆ ಸಿಎಂ ಮಾತ್ರ ಮಾತನಾಡುತ್ತಾರೆ. ಆದರೆ ಯಾವುದೇ ಬಿಜೆಪಿ ನಾಯಕರು ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಉಪ ಚುನಾವಣೆ ಗೆದ್ದ ಬಳಿಕ ಮೌನಕ್ಕೆ ಶರಣಾಗಿರುವ ಬೆಳಗಾವಿ ಸಾಹುಕಾರ ರಮೇಶ್ ಜಾರಕಿಹೊಳಿ, ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಒಳಗೊಳಗೆ ಅಸಮಾಧಾನ ಹೊಂದಿದ್ದಾರೆ. ಇತ್ತ ಎಸ್.ಟಿ.ಸೋಮಶೇಖರ್, ಬಿ.ಸಿ.ಪಾಟೀಲ್, ವಿಶ್ವನಾಥ್, ಎಂ.ಟಿ.ಬಿ ಬೆಂಕಿಯುಂಡೆಯಾಗಿದ್ದಾರೆ ಎಂಬ ಮಾತುಗಳು ಬಿಜೆಪಿ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ.

  • ಮೂರು ಪಕ್ಷಗಳಿಗೆ ರಾಜಕೀಯ ಬೇಕಿದೆ, ರೈತರ ಬಗ್ಗೆ ಮೋದಿಗೆ ಕಾಳಜಿ ಇಲ್ಲ: ಚೇತನ್

    ಮೂರು ಪಕ್ಷಗಳಿಗೆ ರಾಜಕೀಯ ಬೇಕಿದೆ, ರೈತರ ಬಗ್ಗೆ ಮೋದಿಗೆ ಕಾಳಜಿ ಇಲ್ಲ: ಚೇತನ್

    ಬೆಂಗಳೂರು: ಮಹದಾಯಿ ಹೋರಾಟವನ್ನು ರಾಜಕೀಯ ಪಕ್ಷಗಳು ಪತ್ರ ರಾಜಕೀಯ ನಡೆಸಲು ಬಳಸಿಕೊಳ್ಳುತ್ತಿದ್ದು, ರಾಜ್ಯದ ಪ್ರಮುಖ ಮೂರು ಪಕ್ಷಗಳು ಸಮಸ್ಯೆಯನ್ನು ಬಗೆಹರಿಸಲು ವಿಫಲವಾಗಿವೆ ಎಂದು ನಟ ಚೇತನ್ ವಾಗ್ದಾಳಿ ನಡೆಸಿದ್ದಾರೆ.

    ಮಲ್ಲೇಶ್ವರಂ ನಲ್ಲಿರುವ ಬಿಜೆಪಿ ಕಚೇರಿ ಮುಂಭಾಗ ಮಹದಾಯಿ ಹೋರಾಟಗಾರರ ಪ್ರತಿಭಟನೆಗೆ ಬೆಂಬಲ ನೀಡಿ ಮಾತನಾಡಿದ ಅವರು, ಮೂರು ಪಕ್ಷಗಳು ಮಹದಾಯಿ ಇತ್ಯರ್ಥ ಮಾಡುವಲ್ಲಿ ವಿಫಲವಾಗಿವೆ. ಇವರಿಗೆ ರೈತರ ಸಮಸ್ಯೆ ಬಗೆಹರಿಸುವ ಚಿಂತೆ ಇಲ್ಲ. ಕೇವಲ ಅಧಿಕಾರದ ಆಸೆ ಇದೆ. ಅದ್ದರಿಂದ ಜನ ಸಾಮಾನ್ಯರ ಹೋರಾಟಕ್ಕೆ ಪರ್ಯಾಯ ಶಕ್ತಿ ಬೇಕಿದೆ ಎಂದರು.

    ಮಹದಾಯಿ ಸಮಸ್ಯೆ ಬರೀ ಪಕ್ಷದ ಸಮಸ್ಯೆ ಮಾತ್ರವಲ್ಲ. ಈ ಸಮಸ್ಯೆ ಕರ್ನಾಟಕದ ಮೂಲಭೂತ ಹಕ್ಕು. ಯಡಿಯೂರಪ್ಪ ಅವರು 15 ದಿನಗಳಲ್ಲಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಮಾತು ಕೊಟ್ಟಿದ್ದರು. ಆದರೆ ಅವರು ತಮ್ಮ ಮಾತನ್ನು ಉಳಿಸಿಕೊಳ್ಳದೇ ಈಗ ವಚನ ಭ್ರಷ್ಟರಾಗಿದ್ದಾರೆ ಎಂದು ಕಿಡಿಕಾರಿದರು.

    ಇದೇ ವೇಳೆ ಪ್ರಧಾನಿ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಪ್ರಧಾನಿ ಮೋದಿ ಹಲವು ಬಾರಿ ಕರ್ನಾಟಕಕ್ಕೆ ಭೇಟಿ ನೀಡಿದ್ದಾರೆ. ಆದರೆ ಒಮ್ಮೆಯೂ ಮಹದಾಯಿ ಕುರಿತು ಮಾತನಾಡಿಲ್ಲ. ಕೇವಲ ಬುಲೆಟ್ ರೈಲು, ಸ್ಮಾಟ್ ಸಿಟಿ, ಡಿಜಿಟಲ್ ಇಂಡಿಯಾ ಬಗ್ಗೆ ಮಾತನಾಡುತ್ತಾರೆ. ಅವರಿಗೆ ರೈತರು, ಜನಸಾಮಾನ್ಯರ ಬಗ್ಗೆ ಕಳಜಿ ಇಲ್ಲ. ಕೂಡಲೇ ಪ್ರಧಾನಿ ನರೇಂದ್ರ ಮೋದಿ ಮಹದಾಯಿ ವಿಚಾರವಾಗಿ ಮಧ್ಯ ಪ್ರವೇಶ ಮಾಡಬೇಕೆಂದು ಎಂದು ಆಗ್ರಹಿಸಿದರು.

    ರಾಜ್ಯಸರ್ಕಾರವು ಕೇವಲ ಪತ್ರ ಬರೆದು ಕೈತೊಳೆದುಕೊಂಡಿದೆ. ಆದರೆ ಸರ್ಕಾರದ ಪ್ರತಿನಿಧಿಗಳನ್ನು ರಾಷ್ಟ್ರಪತಿಗಳ ಬಳಿ ಕಳುಹಿಸಿ ಮನವಿ ಮಾಡಬೇಕು. ರಾಜಕೀಯ ಬಿಟ್ಟು ಕೆಲಸ ಮಾಡಿದರೆ ಈ ವಿಚಾರವನ್ನು ಕೆಲವೇ ನಿಮಿಷಗಳಲ್ಲಿ ಬಗೆಹರಿಸಬಹುದು. ಆದರೆ ಅವರಿಗೆ ಈ ಸಮಸ್ಯೆಯನ್ನು ಪರಿಹರಿಸುವ ಅವಶ್ಯಕತೆ ಇಲ್ಲ ಎಂದು ಆರೋಪಿಸಿದರು. ಇದನ್ನೂ ಓದಿ: ಬಿಜೆಪಿಗೆ ತಿರುಗುಬಾಣವಾದ ಮಹದಾಯಿ ವಿವಾದ – ಉಸ್ತುವಾರಿಗಳ ಮೇಲೆ ಶಾ ಗರಂ

    ಕನ್ನಡ ಚಿತ್ರರಂಗ ನಿರಂತರವಾಗಿ ರೈತರ ಪರ ಹೋರಾಟಕ್ಕೆ ಬೆಂಬಲ ಸೂಚಿಸುತ್ತದೆ. ಕೇವಲ ಯಾವುದೇ ಒಂದು ಸ್ಥಳಕ್ಕೆ ಭೇಟಿ ನೀಡಿ ಮೆರವಣಿಗೆ ಮಾಡಿದರೆ ಸಮಸ್ಯೆ ಬಗೆ ಹರಿಯುವುದಿಲ್ಲ. ನಿರಂತರವಾಗಿ ಸಮಸ್ಯೆ ಬಗೆ ಹರಿಯುವವರೆಗೆ ನಾವು ಹೋರಾಟಗಾರರ ಪರ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.

    ಹೆಗ್ಡೆಗೆ ತಿರುಗೇಟು: ಕೇಂದ್ರ ಸಚಿವರೊಬ್ಬರು ಕೆಲಸಕ್ಕೆ ಬಾರದ ವಿಷಗಳ ಕುರಿತು ಮಾತನಾಡುತ್ತಾರೆ. ಆದರೆ ರೈತರ ಪರವಾಗಿ ಧ್ವನಿ ಎತ್ತಲಿ. ಅದನ್ನು ಬಿಟ್ಟು ಸಮಾಜವನ್ನು ಒಡೆಯುವ ಕೆಲಸ ಮಾಡಬಾರದು ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಅವರ ಹೆಸರು ಪ್ರಸ್ತಾಪಿಸದೇ ಪರೋಕ್ಷವಾಗಿ ಟಾಂಗ್ ನೀಡಿದರು. ಇದನ್ನೂ ಓದಿ: Exclusive ಮಹದಾಯಿ ಪ್ರತಿಭಟನೆ, ಅನಂತ್‍ ಕುಮಾರ್ ಭಾಷಣ: ಬಿಜೆಪಿ ಸಭೆಯ ಇನ್‍ಸೈಡ್ ಸ್ಟೋರಿ ಇಲ್ಲಿದೆ

    https://www.youtube.com/watch?v=hzIeun7Lix8