Tag: Amita Bachchan

  • ದೀಪಿಕಾ ಪಡುಕೋಣೆ ಆಸ್ಪತ್ರೆ ಸೇರಲು ಹಾರ್ಟ್ ಆರ್ಹೆತ್ಮಿಯಾ ಕಾರಣ: ಏನದು ಹಾಗೆಂದರೆ?

    ದೀಪಿಕಾ ಪಡುಕೋಣೆ ಆಸ್ಪತ್ರೆ ಸೇರಲು ಹಾರ್ಟ್ ಆರ್ಹೆತ್ಮಿಯಾ ಕಾರಣ: ಏನದು ಹಾಗೆಂದರೆ?

    ಮಿತಾಭ್ ಬಚ್ಚನ್ ನಟನೆಯ ‘ಕೆ’ ಸಿನಿಮಾದ ಶೂಟಿಂಗ್ ಗಾಗಿ ಹೈದರಾಬಾದ್ ಗೆ ಬಂದಿಳಿದಿದ್ದಾರೆ ಡಿಂಪಲ್ ಕ್ವೀನ್ ದೀಪಿಕಾ ಪಡುಕೋಣೆ. ಮೂರ್ನಾಲ್ಕು ದಿನಗಳಿಂದ ಈ ಸಿನಿಮಾದ ಶೂಟಿಂಗ್ ಸತತವಾಗಿ ಹೈದರಾಬಾದ್ ನಲ್ಲಿ ನಡೆಯುತ್ತಿದ್ದು, ಎರಡು ದಿನಗಳ ಹಿಂದೆಯಷ್ಟೇ ಹೃದಯ ಬಡಿತದಲ್ಲಿ ಏರು ಪೇರಾದ ಕಾರಣದಿಂದಾಗಿ ಆಸ್ಪತ್ರೆ ಸೇರಿಕೊಂಡಿದ್ದರು. ದಿಢೀರ್ ಅಂತ ದೀಪಿಕಾ ಆಸ್ಪತ್ರೆ ದಾಖಲಾಗಿದ್ದಕ್ಕೆ ಸಹಜವಾಗಿಯೇ ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳು ಆತಂಕವಾಗಿತ್ತು.

    ಅಷ್ಟಕ್ಕೂ ದೀಪಿಕಾ ಪಡುಕೋಣೆ ಆಸ್ಪತ್ರೆ ಸೇರಿಕೊಳ್ಳಲು ಕಾರಣ ಹಾರ್ಟ್ ಆರ್ಹೆತ್ಮಿಯಾ (Heart Arrhythmia) ಎನ್ನಲಾಗುತ್ತಿದೆ. ಉದ್ವೇಗಕ್ಕೆ ಒಳಗಾದಾಗ ಮತ್ತು ಆತಂಕ ಹೆಚ್ಚಾದಾಗ ಹೀಗೆ ಹೃದಯ ಬಡಿತ ಏರು ಪೇರಾಗುತ್ತದೆಯಂತೆ. ಅದು ಇನ್ನೂ ಹೆಚ್ಚಾದರೆ, ಲಘು ಹೃದಯಾಘಾತವೂ ಸಂಭವಿಸಬಹುದಂತೆ. ಹಾಗಾಗಿ ಕೂಡಲೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ ದೀಪಿಕಾ. ಯಾವುದೋ ಒಂದು ಕಾರಣದಿಂದಾಗಿ ಆತಂಕಗೊಂಡರೆ, ಹೀಗೆ ಹೃದಯ ಬಡಿತದಲ್ಲಿ ಏರುಪೇರಾಗುವುದು ಸಹಜವಂತೆ. ಆದರೆ, ಅದನ್ನು ನಿರ್ಲಕ್ಷ್ಯ ಮಾಡಬಾರದು ಎನ್ನುತ್ತಾರೆ ವೈದ್ಯರು. ಇದನ್ನೂ ಓದಿ : ಮುಂದಿನ ಚಿತ್ರಕ್ಕಾಗಿ ತೂಕ ಇಳಿಸ್ಕೊತಿರೋ ಯಶ್- ಗಡ್ಡಕ್ಕೂ ಬೀಳಲಿದೆಯಾ ಕತ್ತರಿ?

    ಅಂದು ಶೂಟಿಂಗ್ ಸ್ಪಾಟ್ ನಿಂದ ಹೈದರಾಬಾದ್ ಆಸ್ಪತ್ರೆಗೆ ದಾಖಲಾದ ದೀಪಿಕಾ, ಸೂಕ್ತ ಚಿಕಿತ್ಸೆ ಮತ್ತು ಸಲಹೆಗಳನ್ನು ಪಡೆದು ಮತ್ತೆ ಶೂಟಿಂಗ್ ಸ್ಪಾಟ್ ಗೆ ವಾಪಸ್ಸಾಗಿದ್ದಾರೆ. ಹಾಗಾಗಿ ಆತಂಕ ಪಡುವಂಥದ್ದು ಅವರಿಗೆ ಏನೂ ಆಗಿಲ್ಲ. ಮತ್ತೆ ಅವರು ಎಂದಿನಂತೆ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದಾರಂತೆ. ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಂದಾಗಿಯೇ ಹೆಚ್ಚು ಜನರ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಸಹಜವಾಗಿ ಎಲ್ಲರನ್ನೂ ಆತಂಕ ಮೂಡಿತ್ತು.

    Live Tv

  • ರಣ್‌ಬೀರ್ -ಆಲಿಯಾ ರಿಸೆಪ್ಷನ್‌ಗೆ ಬಚ್ಚನ್ ಕುಟುಂಬಕ್ಕೆ ಆಹ್ವಾನವಿರಲಿಲ್ಲವೇಕೆ?

    ರಣ್‌ಬೀರ್ -ಆಲಿಯಾ ರಿಸೆಪ್ಷನ್‌ಗೆ ಬಚ್ಚನ್ ಕುಟುಂಬಕ್ಕೆ ಆಹ್ವಾನವಿರಲಿಲ್ಲವೇಕೆ?

    ಬಾಲಿವುಡ್ ಗಲ್ಲಿ ಗಲ್ಲಿಯಲ್ಲೂ ಈಗ ಒಂದೇ ಸುದ್ದಿ, ರಣ್‌ಬೀರ್ ಆಲಿಯಾ ಮದುವೆ ವಿಚಾರ. ಏಪ್ರಿಲ್ 14ಕ್ಕೆ ರಣ್‌ಬೀರ್ ಮತ್ತು ಆಲಿಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈಗ ಇಬ್ಬರು ಸ್ಟಾರ್‌ಗಳು ಮದುವೆಯ ಬಳಿಕ ಒಪ್ಪಿಕೊಂಡಿದ್ದ ಚಿತ್ರಗಳತ್ತ ಬ್ಯುಸಿಯಾಗಿದ್ದಾರೆ. ಆದರೆ ಈಗ ಬಿಟೌನ್‌ನಲ್ಲಿ ಹೊಸ ವಿಚಾರವೊಂದು ಸಿಕ್ಕಾಪಟ್ಟೆ ಚರ್ಚೆಯಾಗ್ತಿದೆ. ರಣ್‌ಬೀರ್ ಮತ್ತು ಆಲಿಯಾ ರಿಸೆಪ್ಷನ್‌ನಲ್ಲಿ ಬಚ್ಚನ್ ಕುಟುಂಬಕ್ಕೆ ಯಾಕೆ ಆಹ್ವಾನವಿರಲಿಲ್ಲ ಅಂತಾ ಭಾರೀ ಚರ್ಚೆ ಆಗುತ್ತಿದೆ.

    ರಣ್‌ಬೀರ್ ಮತ್ತು ಆಲಿಯಾ ಪ್ರೀತಿಸಿ, ಹಿರಿಯರ ಸಮ್ಮತಿಯ ಮೇರೆಗೆ ಕಳೆದ ವಾರವಷ್ಟೇ ಹಸೆಮಣೆ ಏರಿದ್ದರು. ಮದುವೆಯಲ್ಲಿ ಕುಟುಂಬಸ್ಥರು ಆಪ್ತರಿಗಷ್ಟೇ ಆಹ್ವಾನವಿತ್ತು. ನಂತರ ಏಪ್ರಿಲ್ 16ರಂದು ನಡೆದ ರಿಸೆಪಕ್ಷನ್‌ನಲ್ಲಿ ಹಿಂದಿ ಚಿತ್ರರಂಗದ ಗಣ್ಯರಿಗೆ, ಸೆಲೆಬ್ರೆಟಿಗಳಿಗೆ ಆಹ್ವಾನ ನೀಡಲಾಗಿತ್ತು. ಆದರೆ ಬಚ್ಚನ್ ಕುಟುಂಬಕ್ಕೆಯೇಕೆ ಆಹ್ವಾನವಿರಲಿಲ್ಲ. ಬಿಗ್‌ಬಿ ಮಗಳು ಶ್ವೇತಾ ಬಚ್ಚನ್ ರಣ್‌ಬೀರ್ ಕಪೂರ್ ಅವರ ಸಂಬಂಧಿಯಾಗಿದ್ದು, ಅವರಿಗೆ ಇನ್‌ವೈಟ್ ಮಾಡಿದ್ದರೆ, ಉಳಿದ ಕುಟುಂಬದ ಸದಸ್ಯರಿಗೆ ಕರೆಯದೇ ಇರೋದು ಅಚ್ಚರಿ ಮೂಡಿಸಿದೆ.

    ಬಚ್ಚನ್ ಕುಟುಂಬಕ್ಕೆ ಕರೆಯದೇ ಇರುವುದು ಅಚ್ಚರಿ ಮೂಡಿಸಿದ್ದರೆ, ಇನ್ನೊಂದ್ ಕಡೆ `ಸಾವರಿಯಾ’ ಚಿತ್ರದ ಮೂಲಕ ರಣ್‌ಬೀರ್‌ ಕಪೂರ್ ಜರ್ನಿ ಶುರು ಮಾಡಿದ್ದರು. ಈ ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರು ಕೂಡ ರಿಸೆಪ್ಷನ್‌ನಲ್ಲಿ ಗೈರಾಗಿದ್ದರು. ಇತ್ತೀಚಿಗೆ ನಟಿ ಆಲಿಯಾ ಕೂಡ `ಗಂಗೂಬಾಯಿ ಕಾಠಿಯಾವಾಡಿ’ ಚಿತ್ರದಲ್ಲಿ ನಟಿಸಿದ್ದರು. ಇದನ್ನೂ ಓದಿ:ಪಟಾಕ ಪೋರಿ ನಭಾ ಮಸ್ತ್ ಮಸ್ತ್ ಫೋಟೋಶೂಟ್

    ಒಟ್ನಲ್ಲಿ ಅಮಿತಾಭ್‌ ಬಚ್ಚನ್ ಕುಟುಂಬ ಮತ್ತು ನಿರ್ದೇಶಕ ಬನ್ಸಾಲಿ ಅವರಿಗೆ ರಣ್‌ಬೀರ್ ಮತ್ತು ಆಲಿಯಾ ರಿಸೆಪಕ್ಷನ್‌ಗೆ ಆಹ್ವಾನ ಇಲ್ಲದೇ ಇರುವುದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಇವರಿಬ್ಬರ ನಡುವಿನ ಸ್ನೇಹ ಸಂಬಂಧದ ಬಗ್ಗೆ ಸಾಕಷ್ಟು ಕುತೂಹಲ ಹುಟ್ಟು ಹಾಕಿದೆ.‌

  • 850 ರೈತರ ಸಾಲಮನ್ನಾ ಮಾಡಲು ಮುಂದಾದ್ರು ಬಿಗ್ ಬಿ!

    850 ರೈತರ ಸಾಲಮನ್ನಾ ಮಾಡಲು ಮುಂದಾದ್ರು ಬಿಗ್ ಬಿ!

    ಮುಂಬೈ: ಬಾಲಿವುಡ್ ನಟ ಬಿಗ್ ಬಿ ಅಮಿತಾ ಬಚ್ಚನ್ ಅವರು ಉತ್ತರ ಪ್ರದೇಶದ 850 ಮಂದಿ ರೈತರ ಸಾಲಮನ್ನಾ ಮಾಡುವುದಾಗಿ ಹೇಳಿದ್ದಾರೆ.

    ನಮ್ಮ ದೇಶಕ್ಕೆ ಅವರು ಜೀವನವನ್ನೇ ತ್ಯಾಗ ಮಾಡುತ್ತಾರೆ. ಮಹಾರಾಷ್ಟ್ರದಲ್ಲಿ 44 ಕುಟುಂಬಗಳು 112 ಘಟಕಗಳಾಗಿ ವೈವಿಧ್ಯಗೊಂಡಿದ್ದು, ಹೀಗಾಗಿ ಸಣ್ಣ ರೀತಿಯಲ್ಲಿ ಸಹಾಯ ಮಾಡಲಾಗಿದೆ. ದೇಶದ ಇನ್ನಿತರ ಭಾಗಗಳಲ್ಲಿಯೂ ಹೆಚ್ಚಿನ ಅಗತ್ಯಗಳಿದ್ದು ಅವುಗಳನ್ನು ಪೂರೈಸಬೇಕಿದೆ ಎಂದರು.

    ಬಚ್ಚನ್ ಅವರು ಈ ಹಿಂದೆ ಮಹಾರಾಷ್ಟ್ರದ 350 ಕ್ಕೂ ಹೆಚ್ಚು ರೈತರ ಸಾಲವನ್ನು ಪಾವತಿ ಮಾಡುವ ಮೂಲಕ ಅವರುಗಳು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಅಮಿತಾಬ್ ತಡೆಗಟ್ಟಿದ್ದರು. ಅಷ್ಟೇ ಅಲ್ಲದೇ ಆಂಧ್ರ ಮತ್ತು ವಿದರ್ಭದ ರೈತರ ಸಾಲಮನ್ನಾ ಕೂಡ ಮಾಡಲಾಗಿತ್ತು. ಇದೀಗ ಉತ್ತರಪ್ರದೇಶದ ರೈತರ ಸಾಲಮನ್ನಾ ಮಾಡಲು ಸುಮಾರು 850 ರೈತರ ಪಟ್ಟಿಯನ್ನು ಗುರುತಿಸಲಾಗಿದೆ ಮತ್ತು 5.5 ಕೋಟಿ ರೂಪಾಯಿಗಳಷ್ಟು ಸಾಲವನ್ನು ತೀರಿಸುವುದಕ್ಕೆ ಸಂಬಂಧಿಸಿದ ಬ್ಯಾಂಕ್‍ಗಳೊಂದಿಗೆ ಮಾತನಾಡಲಿದ್ದೇನೆ ಎಂದು ತಮ್ಮ ಬ್ಲಾಗ್‍ನಲ್ಲಿ ಬರೆದು ಪೋಸ್ಟ್ ಮಾಡಿಕೊಂಡಿದ್ದಾರೆ.

    ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಜಿತ್ ಸಿಂಗ್ ಅವರಿಗೆ ಸಹಾಯ ಮಾಡಲಾಗುವುದು ಎಂದು ಅವರು ಬರೆದುಕೊಂಡಿದ್ದಾರೆ. ಬಲವಂತದಿಂದ ವೇಶ್ಯಾವೃತ್ತಿಗೆ ತಳ್ಳಲ್ಪಟ್ಟ ಮಹಿಳೆಯರ ರಕ್ಷಣೆಗಾಗಿ ದುಡಿಯುತ್ತಿರುವ ಸಾಮಾಜಿಕ ಕಾರ್ಯಕರ್ತ ಅಜಿತ್ ಸಿಂಗ್ ಅವರಿಗೆ ನನ್ನ ಕೊಡುಗೆ ಸಲ್ಲುತ್ತದೆ ಎಂದು ಅವರು ಹೇಳಿದ್ದಾರೆ.

    ಈ ಹಿಂದೆ ಬಿಗ್ ಬೀ ಮಹಾರಾಷ್ಟ್ರದ 350 ರೈತರಿಗೆ ಸಾಲಮನ್ನಾ ಮಾಡಲು ಸಹಾಯ ಮಾಡಿದ್ದರು. ಇದೀಗ ಉತ್ತರ ಪ್ರದೇಶದ 850 ರೈತರಿಗೆ ಸಹಾಯ ಮಾಡಲು ಮುಂದಾಗಿರುವುದು ಹೆಮ್ಮೆಯ ವಿಷಯವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv