Tag: ambident company

  • ನಾಳೆ ಜನಾರ್ದನ ರೆಡ್ಡಿ ಸಿಸಿಬಿ ಮುಂದೆ ಹಾಜರಾಗ್ತಾರೆ: ಸಹೋದರ ಸೋಮಶೇಖರ್ ರೆಡ್ಡಿ

    ನಾಳೆ ಜನಾರ್ದನ ರೆಡ್ಡಿ ಸಿಸಿಬಿ ಮುಂದೆ ಹಾಜರಾಗ್ತಾರೆ: ಸಹೋದರ ಸೋಮಶೇಖರ್ ರೆಡ್ಡಿ

    ಬೆಂಗಳೂರು: ಅಂಬಿಡೆಂಟ್ ವಂಚನೆ ಆರೋಪ ಎದುರಿಸುತ್ತಿರುವ ಜನಾರ್ದನ ರೆಡ್ಡಿ ನಾಳೆ ಸಿಸಿಬಿ ವಿಚಾರಣೆ ಹಾಜರಾಗಲಿದ್ದಾರೆ ಎಂದು ಸಹೋದರ ಹಾಗೂ ಶಾಸಕ ಸೋಮಶೇಖರ್ ರೆಡ್ಡಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ನಮಗೆ ನ್ಯಾಯಾಲಯದ ಮೇಲೆ ನಂಬಿಕೆಯಿದ್ದು, ಕಾನೂನಿಗೆ ಗೌರವ ಕೊಡುತ್ತೇವೆ. ನಾವು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ಹೆದರುವ ಅವಶ್ಯಕತೆಯೇ ಇಲ್ಲ. ಆದರೆ ಪ್ರಕರಣದ ಮೂಲಕ ಜನಾರ್ದನ ರೆಡ್ಡಿ ಇಮೇಜ್‍ಗೆ ಮಸಿ ಬಳಿಯುವ ಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

    ನಾಯಕರ ಜೊತೆಗೆ ಸಾರ್ವಜನಿಕರು ಫೋಟೋ ತೆಗೆಸಿಕೊಳ್ಳುವುದು ಸಾಮಾನ್ಯ. ಅಂಬಿಡೆಂಟ್ ಕಂಪೆನಿಯ ಫರೀದ್ ಕೂಡ ಹೀಗೆ ಮಾಡಿದ್ದಾರೆ ಎಂದ ಅವರು, ನಮ್ಮ ಮನೆಯ ಸ್ವಾಮೀಜಿಯೊಬ್ಬರು ನಿಮಗೆ ಸದ್ಯದಲ್ಲಿಯೇ ಸಂಕಷ್ಟ ಎದುರಾಗಲಿದೆ ಎಂದಿದ್ದರು. ಅದು ನಿಜವಾಯಿತು. ಜನಾರ್ದನ ರೆಡ್ಡಿ ಮೇಲೆ ಇಲ್ಲದ ಆರೋಪಗಳನ್ನು ಹಾಕುತ್ತಿದ್ದಾರೆ. ಜೊತೆಗೆ ಅಂಬಿಡೆಂಟ್ ಕಂಪೆನಿಯೊಂದಿಗೆ ಜನಾರ್ದನ ರೆಡ್ಡಿ ಹೆಸರು ಸೇರಿಸುತ್ತಿದ್ದಾರೆ ಎಂದು ದೂರಿದರು.

    ಈ ಎಲ್ಲ ಬೆಳವಣಿಗೆಗೆ ಸೂಕ್ತ ಉತ್ತರ ನೀಡಲು ಜನಾರ್ದನ ರೆಡ್ಡಿ ನಾಳೆ ಸಿಸಿಬಿ ಅಧಿಕಾರಿಗಳನ್ನು ಭೇಟಿ ಆಗುತ್ತಾರೆ. ಸದ್ಯ ಸಹೋದರ ಎಲ್ಲಿದ್ದಾನೆ ಎನ್ನುವುದು ಗೊತ್ತಿಲ್ಲ. ಸಿಸಿಬಿಯಿಂದ ನಮಗೆ ಮೊದಲು ಯಾವುದೇ ನೋಟಿಸ್ ಬಂದಿಲ್ಲ. ನನಗೆ ಈ ಬಗ್ಗೆ ಹೆಚ್ಚು ಮಾಹಿತಿಯಿಲ್ಲ ಎಂದು ರೆಡ್ಡಿ ಸಹೋದರ ಸ್ಪಷ್ಟನೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಡೀಲ್ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಹೆಸ್ರು ಹೇಗೆ ಬಂದಿದ್ದು ಗೊತ್ತಾ?

    ಡೀಲ್ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಹೆಸ್ರು ಹೇಗೆ ಬಂದಿದ್ದು ಗೊತ್ತಾ?

    ಬೆಂಗಳೂರು: ಡೀಲ್ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಹೆಸರು ತುಳುಕು ಹಾಕಿಕೊಂಡಿದೆ. ಬಂಧನ ಭೀತಿ ಹಿನ್ನೆಲೆಯಲ್ಲಿ ಗಣಿ ಧಣಿ ನಾಪತ್ತೆಯಾಗಿದ್ದು, ಸಿಸಿಬಿ ಪೊಲೀಸರು ಜನಾರ್ದನ ರೆಡ್ಡಿ ಪತ್ತೆಗಾಗಿ ವಿಶೇಷ ನಾಲ್ಕು ತಂಡಗಳನ್ನು ರಚನೆ ಮಾಡಿದ್ದಾರೆ. ಆಂಬಿಡೆಂಟ್ ಕಂಪನಿಯ ಮೋಸದ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಹೆಸರು ಕೇಳಿಬಂದಿದ್ದು, ಹಲವು ಸ್ಫೋಟಕ ಮಾಹಿತಿಗಳು ಬೆಳಕಿಗೆ ಬಂದಿವೆ.

    15 ದಿನದ ಹಿಂದೆ ಅಂಬಿಡೆಂಟ್ ಪ್ರಕರಣ ಎಡಿಜಿಪಿ ಅಲೋಕ್ ಕುಮಾರ್ ಬಳಿ ಬಂದಿತ್ತು. ಅಂಬಿಡೆಂಟ್ ಕಂಪನಿ ನೂರಾರು ಕೋಟಿ ರೂ. ಮೋಸ ಮಾಡಿದೆ ಎಂದು ಪ್ರಕರಣ ದಾಖಲಾಗಿತ್ತು. ಎಫ್‍ಐಆರ್ ದಾಖಲಾಗುವ ಮುನ್ನವೇ ಅಂಬಿಡೆಂಟ್ ಕಂಪನಿ ಮಾಲೀಕ ಫರೀದ್ ನನ್ನು ಪೊಲೀಸರು ವಿಚಾರಣೆಗೆ ಕರೆಸಿಕೊಂಡಿದ್ದಾರೆ. ಈ ವೇಳೆ ಅಲೋಕ್ ಕುಮಾರ್ ಪ್ರಕರಣದ ಇಂಚಿಂಚೂ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಇದೇ ವೇಳೆ ಫರೀದ್ ಗೆ ಹೂಡಿಕೆದಾರರಿಗೆ ಹಣ ಹಿಂದಿರುಗಿ ಕೊಡಲಿಲ್ಲ ಅಂದ್ರೆ ನಿನ್ನ ಬಿಡಲ್ಲ ಅಂತಾ ಎಚ್ಚರಿಸಿದ್ದಾರೆ.

    ಪೊಲೀಸ್ ಭಾಷೆಗೆ ಹೆದರಿದ ಫರೀದ್ ಕೆಲವೇ ದಿನಗಳಲ್ಲಿ ಎಲ್ಲ ಹೂಡಿಕೆದಾರರ ಹಣವನ್ನು ಹಿಂದಿರುಗಿ ನೀಡುತ್ತೇನೆ ಅಂತಾ ಹೇಳಿದ್ದಾನೆ. ಒಂದು ವೇಳೆ ಇ.ಡಿ ವಶಕ್ಕೆ ಪಡೆದಿರುವ ಹಣ ನೀಡಿಲ್ಲ ಅಂದ್ರೆ ಏನ್ ಮಾಡ್ತೀಯಾ ಎಂದು ಪೊಲೀಸರು ಕೇಳಿದ್ದಾರೆ. ನಾನು ಕೆಲ ಪ್ರಭಾವಿ ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿದ್ದೇನೆ. ಆದಷ್ಟು ಬೇಗ ಇಡಿ ಪ್ರಕರಣದಿಂದ ಹೊರಬರುತ್ತೇನೆ ಎಂಬ ಸ್ಫೋಟಕ ಸತ್ಯವನ್ನು ಹೊರಹಾಕಿದ್ದಾರೆ.

    ಯಾರು ‘ಆ’ ಪ್ರಭಾವ ವ್ಯಕ್ತಿ?
    ನನಗೆ ಒಂದು ಕಾಂಟ್ಯಾಕ್ಟ್ ಇದೆ. ಆ ವ್ಯಕ್ತಿ ಆದಷ್ಟೂ ಬೇಗ ಹಣ ಕೊಡಿಸುತ್ತಾನೆ ಅಂತ ಫರೀದ್ ಹೇಳಿದ್ದಾನೆ. ಆರಂಭದಲ್ಲಿ ಹೆಸರು ಹೇಳಲು ಹಿಂದೇಟು ಹಾಕಿದಾಗ ಪೊಲೀಸ್ ಭಾಷೆಯಲ್ಲಿಯೇ ಕೇಳಿದ್ದಾರೆ. ಆವಾಗ ಅಲೋಕ್ ಕುಮಾರ್ ಬಳಿ ಜನಾರ್ದನರೆಡ್ಡಿ ಆಪ್ತ ಅಲಿಖಾನ್ ಹೆಸರನ್ನು ಫರೀದ್ ಖಾನ್ ರಿವೀಲ್ ಮಾಡ್ತಾನೆ. ಜನಾರ್ದನ ರೆಡ್ಡಿ ಹೆಸರು ಕೇಳುತ್ತಿದ್ದಂತೆ ಅಲೋಕ್ ಕುಮಾರ್ ಸಹ ಒಂದು ಕ್ಷಣ ಶಾಕ್ ಗೆ ಒಳಗಾಗಿದ್ದಾರೆ.

    ಜನಾರ್ದನ ರೆಡ್ಡಿ ಹೆಸರು ಕೇಳಿಬರುತ್ತಿದ್ದಂತೆ ಅಲೋಕ್ ಕುಮಾರ್ ನೇರವಾಗಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ತಿಳಿಸಿದ್ದಾರೆ. ಫರೀದ್ ಹೇಳಿಕೆ ಕೊಟ್ಟಾಗ ರಾಜ್ಯದಲ್ಲಿ ಉಪ ಚುನಾವಣೆಯ ಬಿಸಿ ಹೆಚ್ಚಾಗಿತ್ತು. ಒಂದು ವೇಳೆ ಈಗ ಜನಾರ್ದನ ರೆಡ್ಡಿಯನ್ನು ಬಂಧಿಸಿದ್ರೆ ಬೇರೆ ಅರ್ಥ ಬರಲಿದೆ. ಹಾಗಾಗು ಉಪ ಚುನಾವಣೆಯ ಬಳಿಕ ವಿಚಾರಣೆಯನ್ನು ಚುರುಕುಗೊಳಿಸಿ ಅಂತಾ ಸೂಚಿಸಿದ್ದಾರೆ. ಅದು ಹೇಗೂ ಸಿಸಿಬಿ ಪೊಲೀಸರಿಂದ ಮಾಹಿತಿ ಸೋರಿಕೆಯಾದ ಹಿನ್ನೆಲೆಯಲ್ಲಿ ಅಲಿ ಖಾನ್ ಜಾಮೀನು ಪಡೆದುಕೊಂಡಿದ್ದಾನೆ. ಇತ್ತ ಜನಾರ್ದನ ರೆಡ್ಡಿ ಮೊಳಕಾಲ್ಮೂರು ತೋಟದ ಮನೆಯಿಂದ ನಾಪತ್ತೆಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸ್ಫೋಟಕ ತಿರುವು : ರಾಜಕೀಯ ಒತ್ತಡಕ್ಕೆ ರೆಡ್ಡಿ ಮೇಲೆ ಸಿಸಿಬಿಯಿಂದ ನಕಲಿ ಕೇಸ್!

    ಸ್ಫೋಟಕ ತಿರುವು : ರಾಜಕೀಯ ಒತ್ತಡಕ್ಕೆ ರೆಡ್ಡಿ ಮೇಲೆ ಸಿಸಿಬಿಯಿಂದ ನಕಲಿ ಕೇಸ್!

    – ರೆಡ್ಡಿ ಆಪ್ತ ಅಲಿಖಾನ್‍ಗೆ ಜಾಮೀನು
    – ಅಲಿಖಾನ್ ವಕೀಲ ಚಂದ್ರಶೇಖರ್ ಗಂಭೀರ ಆರೋಪ
    – ಜನಾರ್ದನ ರೆಡ್ಡಿಗೂ ಜಾಮೀನು ಸಿಗೋ ಸಾಧ್ಯತೆ?

    ಬೆಂಗಳೂರು: ಅಂಬಿಡೆಂಟ್ ಕಂಪನಿ ಜೊತೆ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದ ಭೀತಿಯಿಂದ ಮಾಜಿ ಸಚಿವ ಗಣಿಧಣಿ ಜನಾರ್ದನ ರೆಡ್ಡಿ ಆಪ್ತ ಅಲಿಖಾನ್ ಬಚಾವ್ ಆಗಿದ್ದಾರೆ.

    ಪ್ರಕರಣದ ಆರೋಪಿ ಅಲಿಖಾನ್ ಗೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಈ ಮೂಲಕ ರೆಡ್ಡಿಗೂ ಬಿಗ್ ರಿಲೀಫ್ ಸಿಗೋ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

    ಅಲಿಖಾನ್ ಪರ ವಕೀಲ ಚಂದ್ರಶೇಖರ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಇದೊಂದು ಸುಳ್ಳು ಕೇಸ್ ಆಗಿದೆ. ಸಿಸಿಬಿಯವರು ಅಂಬಿಡೆಂಟ್ ಎಂಬ ಕೇಸನ್ನು ಉಪಯೋಗಿಸಿಕೊಂಡು ರಾಜಕೀಯ ಒತ್ತಡದಲ್ಲಿ ಇದನ್ನು ಅಲಿಖಾನ್ ಅವರನ್ನು ಸಿಕ್ಕಿಸಿಹಾಕಿದ್ದಲ್ಲದೇ ಜನಾರ್ದನ ರೆಡ್ಡಿಯವರ ಹೆಸರನ್ನೂ ಪ್ರಸ್ತಾಪ ಮಾಡಿದ್ದಾರೆ. ಯಾವುದೋ ಒಂದು ನಕಲಿ ಕೇಸ್ ನಲ್ಲಿ ಇವರ ಹೆಸರುಗಳನ್ನು ತರಬೇಕು ಅಂತ ಹೇಳಿ ಹುನ್ನಾರ ಹೂಡಿದ್ದಾರೆ ಅಂತ ಆರೋಪಿಸಿದ್ರು.

    ಈ ಹುನ್ನಾರದ ವಿರುದ್ಧವಾಗಿ ನಾವು ನ್ಯಾಯಾಲಯದ ಮೊರೆ ಹೋಗಿದ್ದೆವು. ಇಂದು ಕೋರ್ಟ್ ಅಲಿಖಾನ್ ಅವರಿಗೆ ಜಾಮೀನು ಮಂಜೂರು ಮಾಡಿದೆ. ಈ ಮೂಲಕ ಬಂಧನದ ಭೀತಿಯಿಂದ ಅಲಿಖಾನ್ ಪಾರಾಗಿದ್ದಾರೆ. ಇದು ಅಂಬಿಡೆಂಟ್ ನಿರ್ದೇಶಕರುಗಳ ವಿರುದ್ಧ ಇರುವಂತಹ ಕೇಸ್ ಆಗಿದ್ದು, ಆರೋಪಿ ನಂಬರ್ 1,2,3 ಈ ಮೂವರು ಕೂಡ ಕಂಪನಿಯ ನಿರ್ದೇಶಕರಾಗಿದ್ದಾರೆ ಅಂತ ಹೇಳಿದ್ರು.

    ಚಂದ್ರಶೇಖರ್ ಹೇಳಿದ್ದು ಏನು?
    ಅಂಬಿಡೆಂಟ್ ಕಂಪನಿಯವರು ಸಾರ್ವಜನಿಕರಿಗೆ ವಂಚನೆ ಮಾಡುತ್ತಿದ್ದರು. ಅವರು ಸಾರ್ವಜನಿಕರ ಆಸೆಗಳನ್ನು ಯಾವಾಗ ನೆರವೇರಿಸಲಿಲ್ಲವೋ ಆ ಸಂದರ್ಭದಲ್ಲಿ ಹೂಡಿಕೆದಾರರು ಕಂಪನಿ ವಿರುದ್ಧ ದೂರು ನೀಡಿದ್ದರು. ಹೀಗಾಗಿ ಸಿಟಿ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿತ್ತು. ಇವೆಲ್ಲವೂ ಸಿಸಿಬಿ ಪೊಲೀಸರಿಗೆ ವರ್ಗಾವಣೆಯಾಗಿತ್ತು. ಒಟ್ಟಿನಲ್ಲಿ ಆರೋಪಿ ಪಟ್ಟಿಯಲ್ಲಿರುವಂತವರು ಕಂಪನಿಯ ನಿರ್ದೇಶಕರಾಗಿದ್ದಾರೆ. ಹೀಗಾಗಿ ಕಂಪನಿ, ಅಲಿಖಾನ್ ಹಾಗೂ ಜನಾರ್ದನ ರೆಡ್ಡಿಗೂ ಯಾವುದೇ ಸಂಬಂಧವಿಲ್ಲ ಅಂತ ಸ್ಪಷ್ಟಪಡಿಸಿದ್ರು.

    ಕಂಪನಿ ವಿರುದ್ಧ ತನಿಖೆ ಮುಂದುವರಿಸಿ ದೋಷಾರೋಪ ಪಟ್ಟಿಗಳನ್ನು ಸಲ್ಲಿಸಬೇಕು. ಅದನ್ನು ಬಿಟ್ಟು ಇವರು ಯಾವುದೋ ಒಂದು ಇಲ್ಲಸಲ್ಲದ ಫೋಟೋಗಳನ್ನು ತೋರಿಸಿ, ಯಾವುದೋ ಸಂದರ್ಭದಲ್ಲಿ ವ್ಯಕ್ತಿ ಜೊತೆ ರೆಡ್ಡಿ ಇದ್ದಂತಹ ಫೋಟೋವನ್ನು ಸಿಸಿಬಿ ಪೊಲೀಸರು ದುರ್ಬಳಕೆ ಮಾಡಿಕೊಂಡಿದ್ದಾರೆ. ಅಂಬಿಡೆಂಟ್ ಕಂಪನಿಯಿಂದ ಹಣ ವರ್ಗಾವಣೆ ಮಾಡಿರುವ ವ್ಯಕ್ತಿ ರಮೇಶ್ ಎಂಬಾತನನ್ನು ಬಂಧಿಸುತ್ತಾರೆ.

    ಬಳ್ಳಾರಿ ರಾಜ್ ಮಹಲ್ ಪ್ಯಾಲೇಸ್ ಮಾಲೀಕರಾದಂತಹ ರಮೇಶ್ ನನ್ನು ಕಳೆದ ಶುಕ್ರವಾರ ಬಂಧಿಸಿ ಅಕ್ರಮವಾಗಿ ಕಸ್ಟಡಿಯಲ್ಲಿಟ್ಟುಕೊಂಡು, ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದರು. ಇದೀಗ ನಾವು ಎ1 ಆರೋಪಿ ರಮೇಶ್ ಗೂ ನೀಡಿದ್ದೇವೆ ಅಂತ ಹೇಳಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv