Tag: all rounder

  • ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ – ರವೀಂದ್ರ ಜಡೇಜಾ ವಿಶ್ವ ನಂಬರ್ 1 ಆಲ್‍ರೌಂಡರ್

    ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ – ರವೀಂದ್ರ ಜಡೇಜಾ ವಿಶ್ವ ನಂಬರ್ 1 ಆಲ್‍ರೌಂಡರ್

    ದುಬೈ: ಟೀಂ ಇಂಡಿಯಾದ ಆಲ್‍ರೌಂಡರ್ ರವೀಂದ್ರ ಜಡೇಜಾ ಐಸಿಸಿಯ ನೂತನ ಟೆಸ್ಟ್ ಆಲ್‍ರೌಂಡರ್ ರ‍್ಯಾಂಕಿಂಗ್‌ನಲ್ಲಿ ನಂಬರ್ 1 ಸ್ಥಾನಕ್ಕೇರಿದ್ದಾರೆ.

    ಇಂದು ಐಸಿಸಿ ಬಿಡುಗಡೆ ಮಾಡಿರುವ ನೂತನ ಟೆಸ್ಟ್ ರ‍್ಯಾಂಕಿಂಗ್‌ನ ಆಲ್‍ರೌಂಡರ್ ವಿಭಾಗದಲ್ಲಿ ಜಡೇಜಾ 406 ಅಂಗಳೊಂದಿಗೆ ನಂಬರ್ 1 ಸ್ಥಾನ ಪಡೆದಿದ್ದಾರೆ. ಜಡೇಜಾ ಬಳಿಕ ಜೇಸನ್ ಹೋಲ್ಡರ್ ಇದ್ದು, 382 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಇದನ್ನೂ ಓದಿ: ರಾವಲ್ಪಿಂಡಿ ಮೈದಾನದಲ್ಲಿ ಭಾಂಗ್ರಾ ನೃತ್ಯ ಮಾಡಿದ ಡೇವಿಡ್ ವಾರ್ನರ್

    ಜಡೇಜಾ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಪರ ಬ್ಯಾಟಿಂಗ್‍ನಲ್ಲಿ 175 ರನ್ ಮತ್ತು ಬೌಲಿಂಗ್‍ನಲ್ಲಿ 9 ವಿಕೆಟ್ ಕಿತ್ತು ಮಿಂಚಿದ್ದರು. ಈ ಭರ್ಜರಿ ಪ್ರದರ್ಶನದ ಬಳಿಕ ರ‍್ಯಾಂಕಿಂಗ್‌ನಲ್ಲಿ ಏರಿಕೆ ಕಂಡು ನಂಬರ್ 1 ಸ್ಥಾನಕ್ಕೇರಿದ್ದಾರೆ. ಈ ಹಿಂದೆ ಜೇಸನ್ ಹೋಲ್ಡರ್ 2021ರ ಫೆಬ್ರವರಿ ಬಳಿಕ ಆಲ್‍ರೌಂಡರ್ ಪಟ್ಟಿಯಲ್ಲಿ ನಂಬರ್ 1 ಸ್ಥಾನದಲ್ಲಿದ್ದರು. ಇದೀಗ ಜಡೇಜಾ ನಂಬರ್ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ಇದನ್ನೂ ಓದಿ: ಮಹಿಳಾ ದಿನಾಚರಣೆ ಪ್ರಯುಕ್ತ ಶಭಾಷ್ ಮಿಥು ಚಿತ್ರದ ಪೋಸ್ಟರ್ ಹಂಚಿಕೊಂಡ ತಾಪ್ಸಿ ಪನ್ನು

    ಜಡೇಜಾ ಈ ಹಿಂದೆ 2017ರಲ್ಲಿ ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನ ನಂಬರ್ 1 ಆಲ್‍ರೌಂಡರ್ ಆಗಿ ಗುರುತಿಸಿಕೊಂಡಿದ್ದರು. ಇದೀಗ ಮತ್ತೆ ರ‍್ಯಾಂಕಿಂಗ್‌ನ ಪ್ರಗತಿ ಕಂಡು ನಂಬರ್ 1 ಆಲ್‍ರೌಂಡರ್ ಆಗಿ ಜಡೇಜಾ ಕಾಣಿಸಿಕೊಂಡಿದ್ದಾರೆ.

  • ಐಪಿಎಲ್ ಆರಂಭಕ್ಕೂ ಮೊದಲೇ ಆರ್​ಸಿಬಿ ತಂಡದಿಂದ ಆಲ್‍ರೌಂಡರ್ ಔಟ್

    ಐಪಿಎಲ್ ಆರಂಭಕ್ಕೂ ಮೊದಲೇ ಆರ್​ಸಿಬಿ ತಂಡದಿಂದ ಆಲ್‍ರೌಂಡರ್ ಔಟ್

    ಬೆಂಗಳೂರು: ಕೊರೊನಾದಿಂದಾಗಿ ಮೂಂದೂಡಲ್ಪಟ್ಟ 14ನೇ ಆವೃತ್ತಿಯ ಐಪಿಎಲ್‍ಗೆ ಬಿಸಿಸಿಐ ಈಗಾಗಲೇ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ನಡುವೆ ಆರ್​ಸಿಬಿ  ತಂಡದ ಸ್ಟಾರ್ ಆಲ್‍ರೌಂಡರ್ ಈ ಬಾರಿಯ ಸೆಕೆಂಡ್ ಇನ್ನಿಂಗ್ ಐಪಿಎಲ್‍ನಿಂದ ಹೊರಗುಳಿಯುವುದಾಗಿ ವರದಿಯಾಗಿದೆ.

    ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದ ಯುವ ಆಟಗಾರ, ವಾಷಿಂಗ್ಟನ್ ಸುಂದರ್ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದರು. ಇದೀಗ ದುಬೈನಲ್ಲಿ ನಡೆಯಲಿರುವ ದ್ವೀತಿಯ ಆವೃತ್ತಿಯ ಐಪಿಎಲ್‍ನಿಂದ ಕೂಡ ಹೊರ ಬಿದ್ದಿದ್ದಾರೆ. ಇದರಿಂದ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಲ್‍ರೌಂಡರ್ ಸೇವೆಯಿಂದ ವಂಚಿತವಾಗಿದೆ.

    ಸುಂದರ್, ಭಾರತ ಹಾಗೂ ಕೌಂಟಿ ಇಲೆವೆನ್ ತಂಡಗಳ ನಡುವಿನ ಅಭ್ಯಾಸ ಪಂದ್ಯದಲ್ಲಿ ಕೈ ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಬಳಿಕ ಭಾರತಕ್ಕೆ ಮರಳಿದ್ದಾರೆ. ಇದೀಗ ವೈದ್ಯರು ತಿಳಿಸಿರುವಂತೆ 6 ವಾರಕ್ಕೂ ಹೆಚ್ಚು ಕಾಲ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿದ್ದಾರೆ. ಹಾಗಾಗಿ ಬಿಸಿಸಿಐ, ಸುಂದರ್ ಅವರು ಈ ಬಾರಿ ಐಪಿಎಲ್‍ನ ಮುಂದಿನ ಪಂದ್ಯದಲ್ಲಿ ಆಡದೆ ಇರಲು ಸೂಚಿಸಿದ್ದೇವೆ. ಅವರು ಮುಂದಿನ ಟಿ20 ವಿಶ್ವಕಪ್ ವೇಳೆ ಫಿಟ್ ಆಗಿ ಭಾರತ ತಂಡಕ್ಕೆ ಮರಳಿ ಬರುವ ನಿರೀಕ್ಷೆ ಇದೆ ಎಂದು ತಿಳಿಸಿದೆ. ಇದನ್ನೂ ಓದಿ: ಸೆಪ್ಟೆಂಬರ್‌ನಿಂದ ನಡೆಯಲಿವೆ ಮುಂದೂಡಲ್ಪಟ್ಟ ಐಪಿಎಲ್ ಪಂದ್ಯಗಳು- ಬಿಸಿಸಿಐ ಘೋಷಣೆ

    ಬಿಸಿಸಿಐ ಈ ನಿರ್ಧಾರದಿಂದ ಸೆಪ್ಟೆಂಬರ್ 19ರಿಂದ ಅಕ್ಟೋಬರ್ 15ರವರೆಗೆ ನಡೆಯಲಿರುವ ಐಪಿಎಲ್‍ನಲ್ಲಿ ಆರ್​ಸಿಬಿ ತಂಡ ಸ್ಟಾರ್ ಆಟಗಾರರನ್ನು ಕಳೆದುಕೊಂಡಂತಾಗಿದೆ. ಆರ್​ಸಿಬಿ ಪರ ವಾಷಿಂಗ್ಟನ್ ಸುಂದರ್ 42 ಪಂದ್ಯಗಳಿಂದ 217ರನ್ ಮತ್ತು 27 ವಿಕೆಟ್ ಪಡೆದು ಮಿಂಚಿದ್ದರು. ಆದರೆ ಇದೀಗ ತಂಡದಿಂದ ಹೊರಬಿದ್ದಿರುವುದು ಆರ್​ಸಿಬಿಗೆ ದೊಡ್ಡ ಹೊಡೆತ ಬಿದ್ದಂತಾಗಿದೆ.

  • ಕ್ರಿಕೆಟ್‍ಗೆ ವಿದಾಯ ಹೇಳಿದ ರಜತ್ ಭಾಟಿಯಾ – 2 ದಶಕಗಳ ಆಟಕ್ಕೆ ಬ್ರೇಕ್

    ಕ್ರಿಕೆಟ್‍ಗೆ ವಿದಾಯ ಹೇಳಿದ ರಜತ್ ಭಾಟಿಯಾ – 2 ದಶಕಗಳ ಆಟಕ್ಕೆ ಬ್ರೇಕ್

    – ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ ಸ್ಟಾರ್ ಆಲ್‍ರೌಂಡರ್ ಆಗಿದ್ದ ಭಾಟಿಯಾ

    ನವದೆಹಲಿ: ಭಾರತದ ಪ್ರಥಮ ದರ್ಜೆ ಕ್ರಿಕೆಟ್‍ನ ಸ್ಟಾರ್ ಆಲ್‍ರೌಂಡರ್ ರಜತ್ ಭಾಟಿಯಾ ಎಲ್ಲ ಮಾದರಿಯ ಕ್ರಿಕೆಟ್‍ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ.

    ತನ್ನ ನಿವೃತ್ತಿ ವಿಚಾರವಾಗಿ ಬುಧವಾರ ಮಾತನಾಡಿರುವ 40 ವರ್ಷದ ರಜತ್ ಭಾಟಿಯಾ ಅವರು, ಎಲ್ಲ ಮಾದರಿಯ ಕ್ರಿಕೆಟ್‍ಗೆ ನಿವೃತ್ತಿ ಘೋಷಣೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಈ ಮೂಲಕ ಎರಡು ದಶಕಗಳ ತಮ್ಮ ಪ್ರಥಮ ದರ್ಜೆ ಕ್ರಿಕೆಟ್ ಜೀವನಕ್ಕೆ ಭಾಟಿಯಾ ಬ್ರೇಕ್ ಹಾಕಿದ್ದಾರೆ. ಭಾಟಿಯಾ ಐಪಿಎಲ್‍ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರವಾಗಿ ಆಡುತ್ತಿದ್ದರು.

    ಮಧ್ಯಮ ವೇಗದ ಬೌಲರ್ ಆಗಿದ್ದ ಭಾಟಿಯಾ ಅವರು, ತನ್ನ ಪ್ರಥಮ ದರ್ಜೆ ವೃತ್ತಿಜೀವನದಲ್ಲಿ 137 ವಿಕೆಟ್ ಮತ್ತು 6,482 ರನ್ ಗಳಿಸಿದ್ದಾರೆ. 112 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಭಾಟಿಯಾ 17 ಶತಕ ಮತ್ತು 50 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಅವರ ಕೊನೆಯ ಪ್ರಥಮ ದರ್ಜೆ ಪಂದ್ಯವನ್ನು 2019ರ ಜನವರಿಯಲ್ಲಿ ಮಿಜೋರಾಂ ವಿರುದ್ಧ ಆಡಿದ್ದರು. ಈ ಪಂದ್ಯದಲ್ಲಿ ಅವರು ಪ್ರತಿನಿಧಿಸುತ್ತಿದ್ದ ಉತ್ತರಾಖಂಡ ತಂಡ ಇನ್ನಿಂಗ್ಸ್ ಮತ್ತು 56 ರನ್‍ಗಳಿಂದ ಜಯಗಳಿಸಿತ್ತು.

    ರಜತ್ ಭಾಟಿಯಾ 2000ದಲ್ಲಿ ತಮಿಳುನಾಡು ತಂಡದ ಪರವಾಗಿ ದೇಶೀಯ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದರು. ನಂತರ 2003ರಲ್ಲಿ ತನ್ನ ತವರು ತಂಡವಾದ ದೆಹಲಿ ತಂಡದಲ್ಲಿ ಸ್ಥಾನ ಪಡೆದರು. 2007-08ರಲ್ಲಿ ದೆಹಲಿ ರಣಜಿ ಟ್ರೋಫಿ ಗೆದ್ದ ತಂಡದಲ್ಲಿದ್ದ ಭಾಟಿಯಾ ಅದ್ಭುತವಾಗಿ ಆಡಿ ಆ ಆವೃತ್ತಿಯಲ್ಲಿ 525 ರನ್ ಮತ್ತು 26 ವಿಕೆಟ್‍ಗಳು ಗಬಳಿಸಿದ್ದರು. ಜೊತೆಗೆ ಉತ್ತರ ಪ್ರದೇಶ ವಿರುದ್ಧದ ಫೈನಲ್‍ನಲ್ಲಿ 139 ರನ್ ಗಳಿಸಿ ದೆಹಲಿ ತಂಡ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

    ದೆಹಲಿ ತಂಡದಲ್ಲಿ 81 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ ರಜತ್ ಭಾಟಿಯ ನಂತರ, ರಾಜಸ್ಥಾನ ಮತ್ತು ಉತ್ತರಾಖಂಡ ತಂಡಗಳಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ದೆಹಲಿ ಡೇರ್ಡೆವಿಲ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕಾತ್ತ ನೈಟ್ ರೈಡರ್ಸ್ ತಂಡಗಳ ಪರ ಆಡಿದ್ದರು. 2012ರ ಐಪಿಎಲ್‍ನಲ್ಲಿ ಗೌತಮ್ ಗಂಭೀರ್ ನಾಯಕತ್ವದಲ್ಲಿ ಕೋಲ್ಕಾತ್ತ ತಂಡ ಟ್ರೋಫಿ ಗೆದ್ದ ಸಮಯದಲ್ಲಿ ಭಾಟಿಯಾ ತಂಡದಲ್ಲಿ ಇದ್ದರು.

  • ಎಲ್ಲಾ ಮಾದರಿಯ ಕ್ರಿಕೆಟ್‍ನಿಂದ  ಇರ್ಫಾನ್ ಪಠಾಣ್ ನಿವೃತ್ತಿ

    ಎಲ್ಲಾ ಮಾದರಿಯ ಕ್ರಿಕೆಟ್‍ನಿಂದ ಇರ್ಫಾನ್ ಪಠಾಣ್ ನಿವೃತ್ತಿ

    ಮುಂಬೈ: ಟೀಂ ಇಂಡಿಯಾ ಆಲ್‍ರೌಂಡರ್ ಇರ್ಫಾನ್ ಪಠಾಣ್ ಎಲ್ಲಾ ಮಾದರಿಯ ಕ್ರಿಕೆಟ್‍ಗೆ ತಕ್ಷಣದಿಂದ ಅನ್ವಯವಾಗುವಂತೆ ನಿವೃತ್ತಿ ಘೋಷಣೆ ಮಾಡಿದ್ದಾರೆ.

    2003ರಲ್ಲಿ ಟೀಂ ಇಂಡಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ್ದ ಇರ್ಫಾನ್, 16 ವರ್ಷಗಳ ಕಾಲ ತಂಡದ ಪರ ಆಡಿದ್ದರು. 2012ರಲ್ಲಿ ಇರ್ಫಾನ್ ತಮ್ಮ ಅಂತಿಮ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದು, 2019ರ ಫೆಬ್ರವರಿವರೆಗೂ ದೇಶಿಯ ಕ್ರಿಕೆಟ್ ಪಂದ್ಯದಲ್ಲಿ ಆಡಿದ್ದರು.

    2019ರ ಫೆ.27ರಂದು ಸೈಯದ್ ಅಲಿ ಮುಷ್ತಾಕ್ ಟ್ರೋಫಿಯ ಭಾಗವಾಗಿ ನಡೆದ ಕೇರಳ ವಿರುದ್ಧ ಟಿ20 ಪಂದ್ಯದಲ್ಲಿ  ಇರ್ಫಾನ್, ಜಮ್ಮು ಕಾಶ್ಮೀರ ತಂಡದ ಪರ ಆಡಿದ್ದರು. ಕ್ರಿಕೆಟ್‍ನಿಂದ ದೂರವಾದ ಬಳಿಕ ಕ್ರಿಕೆಟ್ ವಿಶ್ಲೇಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಕಳೆದ ವರ್ಷದ ಏಪ್ರಿಲ್‍ನಲ್ಲಿ ಜಮ್ಮು ಕಾಶ್ಮೀರದ ರಣಜಿ ಟ್ರೋಫಿ ಟೂರ್ನಿಯ ಸಂದರ್ಭದಲ್ಲಿ ತಂಡಕ್ಕೆ ಕೋಚ್ ಹಾಗೂ ಮೆಂಟರ್ ಸೇರಿಕೊಂಡಿದ್ದರು.

    2007ರ ಮೊದಲ ಟಿ-20 ವಿಶ್ವಕಪ್ ಗೆದ್ದ ಟೀಂ ಇಂಡಿಯಾ ತಂಡದಲ್ಲಿ ಇರ್ಫಾನ್ ಆಡಿದ್ದರು. ಟೂರ್ನಿಯಲ್ಲಿ ಪಾಕ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಇದುವರೆಗೂ ಇರ್ಫಾನ್ 29 ಟೆಸ್ಟ್ ಗಳಲ್ಲಿ 100 ವಿಕೆಟ್, 120 ಏಕದಿನಗಳಿಂದ 173 ವಿಕೆಟ್ ಹಾಗೂ 24 ಟಿ20 ಪಂದ್ಯಗಳಿಂದ 172 ವಿಕೆಟ್ ಗಳನ್ನು ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಇರ್ಫಾನ್ ಒಟ್ಟಾರೆ 301 ವಿಕೆಟ್ ಪಡೆದಿರುವ ಇರ್ಫಾನ್ 2,821 ರನ್ ಗಳಿಸಿದ್ದಾರೆ.

  • ‘ಪ್ಲೆಸೆಂಟ್ ಸರ್ಪ್ರೈಸ್ ಹಾರ್ದಿಕ್’: ಕೊಹ್ಲಿ

    ‘ಪ್ಲೆಸೆಂಟ್ ಸರ್ಪ್ರೈಸ್ ಹಾರ್ದಿಕ್’: ಕೊಹ್ಲಿ

    ನವದೆಹಲಿ: ಕಳೆದ ಕೆಲ ಸಮಯದಿಂದ ಒಟ್ಟಿಗೆ ಓಡಾಡುತ್ತಿದ್ದ ಟೀಂ ಇಂಡಿಯಾ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ಸರ್ಬಿಯನ್ ಮಾಡೆಲ್, ನಟಿ ನತಾಶಾ ಸ್ಟಾಂಕೋವಿಕ್ ವರ್ಷದ ಮೊದಲ ದಿನವೇ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಈ ಕುರಿತ ವಿಡಿಯೋ ಹಾಗೂ ಫೋಟೋವನ್ನು ಹಂಚಿಕೊಂಡು ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದರು.

    ಹೊಸ ವರ್ಷದ ಶುಭಾಶಯಗಳನ್ನು ಗೆಳೆತಿಯೊಂದಿಗೆ ತಿಳಿಸಿದ್ದ ಹಾರ್ದಿಕ್, ಆ ಬಳಿಕ ಕೆಲವೇ ಗಂಟೆಗಳಲ್ಲಿ ನಿಶ್ಚಿತಾರ್ಥದ ಫೋಟೋಗಳನ್ನ ಹಂಚಿಕೊಂಡಿದ್ದರು. ಸದ್ಯ ಹಾರ್ದಿಕ್‍ರ ನಿಶ್ಚಿತಾರ್ಥಕ್ಕೆ ಶುಭ ಕೋರಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಪ್ಲೆಸೆಂಟ್ ಸರ್ಪ್ರೈಸ್. ನಿಮ್ಮ ಭವಿಷ್ಯ ಮತ್ತಷ್ಟು ಉತ್ತಮವಾಗಿರಲಿ ಎಂದು ಕಾಮೆಂಟ್ ಮಾಡಿದ್ದಾರೆ. ಕೊಹ್ಲಿರೊಂದಿಗೆ ಹಲವು ಕ್ರಿಕೆಟ್ ಆಟಗಾರರು, ಬಾಲಿವುಡ್ ನಟರು ಕೂಡ ಹಾರ್ದಿಕ್ ಪಾಂಡ್ಯ ಜೋಡಿಗೆ ಶುಭಕೋರಿದ್ದಾರೆ.

     

    View this post on Instagram

     

    Mai tera, Tu meri jaane, saara Hindustan. ???????? 01.01.2020 ❤️ #engaged

    A post shared by Hardik Pandya (@hardikpandya93) on

    ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ  ನಡೆದ ದಕ್ಷಿಣ ಆಫ್ರಿಕಾ ಸಿರೀಸ್ ಬಳಿಕ ಬೆನ್ನು ನೋವಿನ ಸಮಸ್ಯೆಯಿಂದ ಹಾರ್ದಿಕ್ ಕ್ರಿಕೆಟ್ ನಿಂದ  ದೂರವಾಗಿದ್ದರು. ಆ ಬಳಿಕ ಲಂಡನ್‍ನಲ್ಲಿ ಶಸ್ತ್ರ ಚಿಕಿತ್ಸೆಗೂ ಒಳಗಾಗಿದ್ದರು. ಇತ್ತೀಚೆಗೆ ಕ್ರಿಕೆಟ್ ತರಬೇತಿಗೆ ಮರಳಿದ್ದ ಹಾರ್ದಿಕ್ ತಂಡಕ್ಕೆ ವಾಪಸಾಗುವ ಸಿದ್ಧತೆಯಲ್ಲಿದ್ದಾರೆ.

  • ಮಾನಸಿಕ ಆರೋಗ್ಯ ಸಮಸ್ಯೆ – ಕ್ರಿಕೆಟ್‍ನಿಂದ ವಿರಾಮ ಪಡೆದ ಮ್ಯಾಕ್ಸ್‌ವೆಲ್

    ಮಾನಸಿಕ ಆರೋಗ್ಯ ಸಮಸ್ಯೆ – ಕ್ರಿಕೆಟ್‍ನಿಂದ ವಿರಾಮ ಪಡೆದ ಮ್ಯಾಕ್ಸ್‌ವೆಲ್

    ಸಿಡ್ನಿ: ಆಸ್ಟ್ರೇಲಿಯಾದ ಸ್ಫೋಟಕ ಆಲ್‍ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಮಾನಸಿಕ ಆರೋಗ್ಯದ ತೊಂದರೆಯಿಂದ ಬಳಲುತ್ತಿದ್ದು, ಸ್ವಲ್ಪ ಕಾಲ ಕ್ರಿಕೆಟ್‍ನಿಂದ ದೂರ ಸರಿಯಲಿದ್ದಾರೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ತಿಳಿಸಿದೆ.

    ಭಾನುವಾರ ಶ್ರೀಲಂಕಾ ವಿರುದ್ಧ ಅಡಿಲೇಡ್ ಮೈದಾನದಲ್ಲಿ ನಡೆದ ಮೊದಲ ಟಿ-20 ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ್ದ ಮ್ಯಾಕ್ಸ್‌ವೆಲ್ ಸ್ಫೋಟಕ ಅರ್ಧ ಶತಕ ಸಿಡಿಸಿ ಆಸ್ಟ್ರೇಲಿಯಾ 134 ರನ್‍ಗಳ ಅಂತರದಲ್ಲಿ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಮಾನಸಿಕ ಆರೋಗ್ಯ ತೊಂದರೆಯಿಂದ ಬಳಲುತ್ತಿರುವ ಮ್ಯಾಕ್ಸ್ ವೆಲ್ ಸ್ವಲ್ಪ ಸಮಯದ ಕಾಲ ಕ್ರಿಕೆಟ್‍ಗೆ ಅಲ್ಪವಿರಾಮ ಹಾಕಲಿದ್ದಾರೆ ಎಂದು ಆಸಿಸ್ ಮಂಡಳಿ ತಿಳಿಸಿದೆ.

    ಈಗ ಸದ್ಯ ಆಸ್ಟ್ರೇಲಿಯಾ ಶ್ರೀಲಂಕಾ ವಿರುದ್ಧ 3 ಪಂದ್ಯಗಳ ಟಿ-20 ಸರಣಿ ಆಡುತ್ತಿದ್ದು, ಎರಡರಲ್ಲಿ ಭರ್ಜರಿ ಜಯ ಸಾಧಿಸಿದೆ. ಈಗ ಉಳಿದ ಒಂದು ಪಂದ್ಯಕ್ಕೆ ಮ್ಯಾಕ್ಸ್‌ವೆಲ್ ಅವರು ಅಲಭ್ಯರಾಗಲಿದ್ದು, ಅವರ ಜಾಗಕ್ಕೆ ಮೊತ್ತೊಬ್ಬ ಆಲ್‍ರೌಂಡರ್ ಡಿಆರ್ಸಿ ಶಾರ್ಟ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಹೇಳಿದೆ.

    ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಆಸ್ಟ್ರೇಲಿಯಾ ತಂಡದ ಮನಶಾಸ್ತ್ರಜ್ಞ ಡಾ. ಮೈಕೆಲ್ ಲಾಯ್ಡ್, ಗ್ಲೆನ್ ಮ್ಯಾಕ್ಸ್ ವೆಲ್ ಅವರ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಕೆಲವು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಅವರು ಸ್ವಲ್ಪ ಸಮಯ ಆಟದಿಂದ ದೂರು ಉಳಿಯಲಿದ್ದು, ಚಿಕಿತ್ಸೆ ಪಡೆಯಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

    ಕ್ರಿಕೆಟ್ ಮಂಡಳಿಯಿಂದ ಮ್ಯಾಕ್ಸ್‌ವೆಲ್ ಗೆ ಸಂಪೂರ್ಣ ಬೆಂಬಲ ಸಿಗಲಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಕಾರ್ಯನಿರ್ವಾಹಕ ಜನರಲ್ ಮ್ಯಾನೇಜರ್ ಬೆನ್ ಆಲಿವರ್ ಹೇಳಿದ್ದಾರೆ. ನಮಗೆ ನಮ್ಮ ತಂಡದ ಆಟಗಾರರ ಮತ್ತು ಸಿಬ್ಬಂದಿ ಯೋಗಕ್ಷೇಮ ಮುಖ್ಯ. ಆದ್ದರಿಂದ ಸದ್ಯ ಮಾನಸಿಕ ಆರೋಗ್ಯದ ಸಮಸ್ಯೆ ಎದುರಿಸುತ್ತಿರುವ ಗ್ಲೆನ್ ಮ್ಯಾಕ್ಸ್‌ವೆಲ್ ಗೆ ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಆಲಿವರ್ ತಿಳಿಸಿದ್ದಾರೆ.

    ನಮ್ಮ ಆಸ್ಟ್ರೇಲಿಯಾ ತಂಡದಲ್ಲಿ ಮ್ಯಾಕ್ಸ್‌ವೆಲ್ ತುಂಬ ವಿಶೇಷ ಆಟಗಾರ ಮತ್ತು ನಮ್ಮ ತಂಡದ ಪ್ರಮುಖ ಭಾಗವಾಗಿದ್ದಾರೆ. ಮುಂದಿನ ಬೇಸಿಗೆ ಸಮಯದಲ್ಲಿ ಅವರನ್ನು ನಾವು ಮತ್ತೆ ತಂಡದಲ್ಲಿ ನೋಡಲು ಬಯಸುತ್ತೇವೆ. ಅವರು ಮತ್ತೆ ಕ್ರಿಕೆಟ್‍ಗೆ ಮರಳಲು ನಿರ್ಧಾರ ಮಾಡಿದಾಗ ಅದಕ್ಕೆ ಸಂಪೂರ್ಣ ಬೆಂಬಲ ನೀಡುವಂತೆ ಮ್ಯಾಕ್ಸ್‌ವೆಲ್ ಅವರ ರಾಜ್ಯ ತಂಡ ವಿಕ್ಟೋರಿಯಾ ಕ್ರಿಕೆಟ್ ಮಂಡಳಿಯೊಂದಿಗೆ ಮಾತನಾಡಿದ್ದೇವೆ ಎಂದು ಆಲಿವರ್ ಹೇಳಿದ್ದಾರೆ.

  • ವಿವಾಹದ ನಂತರವೂ ಐದಾರು ಮಹಿಳೆಯರ ಜೊತೆ ಸಂಬಂಧ ಹೊಂದಿದ್ದೆ – ಅಬ್ದುಲ್ ರಜಾಕ್

    ವಿವಾಹದ ನಂತರವೂ ಐದಾರು ಮಹಿಳೆಯರ ಜೊತೆ ಸಂಬಂಧ ಹೊಂದಿದ್ದೆ – ಅಬ್ದುಲ್ ರಜಾಕ್

    ನವದೆಹಲಿ: ನಾನು ವಿವಾಹದ ನಂತರವೂ ಐದಾರು ಮಹಿಳೆಯರ ಜೊತೆ ಸಂಬಂಧ ಹೊಂದಿದ್ದೆ ಎಂದು ಪಾಕಿಸ್ತಾನದ ಮಾಜಿ ಆಲ್‍ರೌಂಡರ್ ಅಬ್ದುಲ್ ರಜಾಕ್ ಹೇಳಿದ್ದಾರೆ.

    ಪಾಕ್‍ನ ಸ್ಥಳೀಯ ಟೆಲಿವಿಷನ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಬ್ದುಲ್ ರಜಾಕ್ ತನಗೆ ಐದರಿಂದ ಆರು ವಿವಾಹೇತರ ಸಂಬಂಧಗಳು ಇದ್ದವು ಎಂದು ಹೇಳಿಕೊಂಡಿದ್ದಾರೆ ಮತ್ತು ಅವುಗಳಲ್ಲಿ ಒಂದು ಒಂದೂವರೆ ವರ್ಷಗಳ ಕಾಲ ಇತ್ತು ಎಂದು ಹೇಳಿದ್ದಾರೆ.

    ಈ ಸಮಯದಲ್ಲಿ ಈ ಕಾರ್ಯಕ್ರಮದ ನಿರೂಪಕಿ ಈ ಎಲ್ಲಾ ಸಂಬಂಧಗಳು ವಿವಾಹದ ಮುಂಚೆ ಇದ್ದವೋ ಇಲ್ಲ ವಿವಾಹದ ನಂತರ ಇತ್ತೆ ಎಂದು ಕೇಳಿದ್ದಕ್ಕೆ, ವಿವಾಹದ ನಂತರವೂ ನಾನು ಸಂಬಂಧವನ್ನು ಹೊಂದಿದ್ದೆ ಎಂದು ಉತ್ತರಿಸಿದ್ದಾರೆ.

    ವಿಶ್ವಕಪ್ ವೇಳೆ ಭಾರತದ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಬಗ್ಗೆ ಟ್ವೀಟ್ ಮಾಡಿದ್ದ ರಜಾಕ್ ಅವರು, ನಾನು ಹಾರ್ದಿಕ್ ಪಾಂಡ್ಯ ಅವರನ್ನು ವಿಶ್ವದ ಉತ್ತಮ ಆಲ್‍ರೌಂಡರ್ ಆಗಿ ಮಾಡುತ್ತೇನೆ ಎಂದು ಹೇಳಿದ್ದರು.

    ವಿಶ್ವಕಪ್‍ನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ಪಂದ್ಯದ ನಂತರ ಟ್ವೀಟ್ ಮಾಡಿದ್ದ ರಜಾಕ್ “ನಾನು ಇಂದು ಹಾರ್ದಿಕ್ ಪಾಂಡ್ಯ ಅವರ ಆಟವನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಅವರು ದೊಡ್ಡ ಹೊಡೆತಗಳನ್ನು ಬಾರಿಸುವಾಗ ಅವರ ಬಾಡಿ ಬ್ಯಾಲೆನ್ಸ್ ಆಗುತ್ತಿಲ್ಲ. ನಾನು ಅವರು ಆಡುವಾಗ ಅವರ ಫೂಟ್ ವರ್ಕ್ ಕೂಡ ಗಮನಿಸಿದ್ದೇನೆ. ಅದರಲ್ಲಿ ದೋಷ ಇದೆ ಅದು ಅವರನ್ನು ನಿರಾಸೆಗೊಳಿಸಿದೆ” ಎಂದು ಹೇಳಿದ್ದರು.

    ನಾನು ಹಾರ್ದಿಕ್ ಪಾಂಡ್ಯಗೆ ಕೋಚಿಂಗ್ ನೀಡಲು ಸಾಧ್ಯವಾದರೆ, ನಾನು ಅವರನ್ನು ವಿಶ್ವದಲ್ಲಿ ಅತ್ಯುತ್ತಮ ಆಲ್‍ರೌಂಡರ್ ಗಳಲ್ಲಿ ಒಬ್ಬನನ್ನಾಗಿ ಮಾಡುತ್ತೇನೆ. ಬಿಸಿಸಿಐ ಅವರನ್ನು ಉತ್ತಮ ಆಲ್‍ರೌಂಡರ್ ಮಾಡಲು ಬಯಸಿದರೆ ನಾನು ಕೋಚ್ ನೀಡಲು ಯಾವಾಗಲೂ ಲಭ್ಯವಿರುತ್ತೇನೆ ಎಂದು ತಿಳಿಸಿದ್ದರು.

    ಪಾಕಿಸ್ತಾನ ಪರ 265 ಏಕದಿನ ಪಂದ್ಯಗಳನ್ನು ಆಡಿರುವ ರಜಾಕ್, ಮೂರು ಶತಕ ಮತ್ತು 23 ಅರ್ಧಶತಕಗಳೊಂದಿಗೆ 5,080 ರನ್ ಗಳಿಸಿದ್ದಾರೆ. ಏಕದಿನ ಕ್ರಿಕೆಟ್‍ನಲ್ಲಿ 269 ವಿಕೆಟ್‍ಗಳನ್ನು ಕಿತ್ತಿರುವ ಅವರು ಒಂದು ಪಂದ್ಯದಲ್ಲಿ 35 ರನ್ ನೀಡಿ 6 ವಿಕೆಟ್ ಪಡೆದಿರುವುದು ಅವರ ಅತ್ಯುತ್ತಮ ಬೌಲಿಂಗ್ ಆಗಿದೆ.

    ಅಬ್ದುಲ್ ರಜಾಕ್ ಅವರು ಪಾಕಿಸ್ತಾನ ಆಯಿಷಾರನ್ನು ಮದುವೆಯಾಗಿದ್ದು ದಂಪತಿಗೆ ಓರ್ವ ಪುತ್ರ, ಪುತ್ರಿ ಇದ್ದಾಳೆ.

  • ಭಾರತದ ವಿಶ್ವಕಪ್ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಒಬ್ಬ ಪ್ರಮುಖ ಆಟಗಾರ – ಸುರೇಶ್ ರೈನಾ

    ಭಾರತದ ವಿಶ್ವಕಪ್ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಒಬ್ಬ ಪ್ರಮುಖ ಆಟಗಾರ – ಸುರೇಶ್ ರೈನಾ

    ನವದೆಹಲಿ: ಈ ಬಾರಿಯ ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗಿರುವ ಭಾರತದ ತಂಡದಲ್ಲಿ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಒಬ್ಬ ಪ್ರಮುಖ ಆಟಗಾರ ಎಂದು ಟೀಂ ಇಂಡಿಯಾದ ಆಟಗಾರ ಸುರೇಶ್ ರೈನಾ ಹೇಳಿದ್ದಾರೆ.

    ಐಪಿಎಲ್ 12 ಅವೃತ್ತಿಯಲ್ಲಿ ಉತ್ತಮ ಫಾರ್ಮ್‍ನಲ್ಲಿದ್ದ ಹಾರ್ದಿಕ್ ಪಾಂಡ್ಯ ಅವರು ಇದೇ ಆಟವನ್ನು ವಿಶ್ವಕಪ್‍ನಲ್ಲಿ ತೋರಿದರೆ ಅದು ಭಾರತ ತಂಡಕ್ಕೆ ವರದಾನವಾಗಲಿದೆ ಎಂದು ರೈನಾ ಅಭಿಪ್ರಾಯಪಟ್ಟಿದ್ದಾರೆ.

    ಹಾರ್ದಿಕ್ ಪಾಂಡ್ಯ ಅವರ ಬಗ್ಗೆ ಮೆಚ್ಚುಗೆಯ ಮಾತನಾಡಿರುವ ರೈನಾ, ಮೇ 30 ರಿಂದ ಇಂಗ್ಲೆಂಡ್‍ನಲ್ಲಿ ಆರಂಭ ಆಗಲಿರುವ ವಿಶ್ವಕಪ್‍ನಲ್ಲಿ ಭಾರತ ತಂಡಕ್ಕೆ ಹಾರ್ದಿಕ್ ಪಾಂಡ್ಯ ಪ್ರಮುಖ ಆಟಗಾರನಾಗುತ್ತಾರೆ ಎಂದು ನನಗೆ ನಂಬಿಕೆ ಇದೆ. ಹಾರ್ದಿಕ್ ಪಾಂಡ್ಯ ತನೊಬ್ಬ ಉತ್ತಮ ಆಲ್ ರೌಂಡರ್ ಎಂದು ಐಪಿಎಲ್‍ನಲ್ಲಿ ಸಾಬೀತು ಮಾಡಿದ್ದಾರೆ. ಇದೇ ರೀತಿಯಲ್ಲಿ ಆಟವಾಡಿದರೆ ಈ ಬಾರಿಯ ವಿಶ್ವಕಪ್‍ನಲ್ಲಿ ಭಾರತ ತಂಡಕ್ಕೆ ಕೀ ಪ್ಲೇಯರ್ ಆಗುತ್ತಾರೆ ಎಂದು ಹೇಳಿದ್ದಾರೆ.

    ಐಪಿಎಲ್‍ನಲ್ಲಿ ಇದ್ದ ಲಯದಲ್ಲೇ ವಿಶ್ವಕಪ್‍ನಲ್ಲಿ ಬ್ಯಾಟ್ ಬೀಸಿದರೆ ಪಾಂಡ್ಯ ಭಾರತ ತಂಡದ ಗೇಮ್ ಚೇಂಜರ್ ಆಗಲಿದ್ದಾರೆ. ಫೀಲ್ಡಿಂಗ್‍ನಲ್ಲಿ ಮತ್ತು ಬ್ಯಾಟಿಂಗ್‍ನಲ್ಲಿ ತಂಡಕ್ಕೆ ಉತ್ತಮ ಕೊಡುಗೆ ನೀಡಲಿದ್ದಾರೆ ಮತ್ತು ಯಾವುದೇ ಸಮಯದಲ್ಲದರೂ ಬಂದ ಬ್ಯಾಟ್ ಬೀಸುವ ಸಾಮರ್ಥ್ಯ ವನ್ನು ಹೊಂದಿದ್ದಾರೆ. ತಂಡಕ್ಕೆ ಬೌಲರ್‍ಗಳ ಸಮಸ್ಯೆಯಾದಾಗ ನಿರ್ಣಾಯಕ ಓವರಗಳನ್ನು ಬೌಲ್ ಮಾಡಲು ಪಾಂಡ್ಯ ಸೂಕ್ತವಾದ ಬೌಲರ್. ಈ ಎಲ್ಲಾ ವಿಭಾಗದಲ್ಲೂ ಉತ್ತಮ ಆಟವಾಡುವ ಪಾಂಡ್ಯ ಭಾರತ ತಂಡಕ್ಕೆ ವರದಾನವಾಗಲಿದ್ದಾರೆ ಎಂದು ಹೇಳಿದ್ದಾರೆ.

    ಐಪಿಎಲ್‍ನಲ್ಲಿ ಮುಂಬೈ ಇಂಡಿಯನ್ಸ್ ಪರ ಮ್ಯಾಚ್ ವಿನ್ನಿಂಗ್ ಆಟವಾಡಿದ ಹಾರ್ದಿಕ್ ಪಾಂಡ್ಯ ಆಡಿದ 15 ಪಂದ್ಯಗಳಲ್ಲಿ 190 ಭರ್ಜರಿ ಸ್ಟ್ರೈಕ್ ರೇಟ್‍ನೊಂದಿಗೆ 402 ರನ್ ಸಿಡಿಸಿದ್ದರು ಇದರಲ್ಲಿ 38 ಬೌಡಂರಿ ಮತ್ತು 29 ಸಿಕ್ಸರ್ ಹೊಡೆದಿದ್ದರು. ಬೌಲಿಂಗ್‍ನಲ್ಲೂ ಮಿಂಚಿದ್ದ ಈ 25 ವರ್ಷದ ಆಲ್ ರೌಂಡರ್ 16 ಪಂದ್ಯಗಳಲ್ಲಿ 14 ವಿಕೆಟ್ ಸಾಧನೆ ಮಾಡಿದ್ದರು.