Tag: alchohol

  • ಗ್ಯಾಸ್ ಸಿಲಿಂಡರ್‌ನಲ್ಲಿ 50 ಲೀಟರ್ ಮದ್ಯ ಸಾಗಿಸುತ್ತಿದ್ದ ಚಾಲಾಕಿ ಬಂಧನ

    ಗ್ಯಾಸ್ ಸಿಲಿಂಡರ್‌ನಲ್ಲಿ 50 ಲೀಟರ್ ಮದ್ಯ ಸಾಗಿಸುತ್ತಿದ್ದ ಚಾಲಾಕಿ ಬಂಧನ

    ಪಾಟ್ನಾ: LPG ಸಿಲಿಂಡರ್‌ನಲ್ಲಿ ಮದ್ಯ ಸಾಗಿಸುತ್ತಿದ್ದ ಚಾಲಾಕಿಯೊಬ್ಬನನ್ನು ಬಿಹಾರದ ಪೊಲೀಸರು ಬಂಧಿಸಿದ್ದಾರೆ.

    ಭೂಷಣ್ ರೈ ಬಂಧಿತ ಆರೋಪಿ. ಮದ್ಯ ಸಾಗಣೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಕಂದಘಾಟ್ ಸಮೀಪ ದಾಳಿ ನಡೆಸಿ, ಸಿಲಿಂಡರ್‌ನಲ್ಲಿದ್ದ 50 ಲೀ. ಮದ್ಯವನ್ನು ಜಪ್ತಿ ಮಾಡಿದ್ದಾರೆ. ಇದನ್ನೂ ಓದಿ: ಮಗನನ್ನೇ ಕೊಡಲಿಯಿಂದ ಕೊಚ್ಚಿ ಕೊಂದ ತಾಯಿ

    spurious_liquor

    ವ್ಯಕ್ತಿಯು ಬಿಹಾರದ ಅಬಕಾರಿ ತಿದ್ದುಪಡಿ-2022ರ ಅಡಿಯಲ್ಲಿ ದಂಡ ಪಾವತಿಸಲು ನಿರಾಕರಿಸಿದ್ದಾನೆ. ಇದರಿಂದಾಗಿ ನಿಯಮ ಉಲ್ಲಂಘಿಸಿದವರಿಗೆ ಒಂದು ತಿಂಗಳ ಕಾಲ ಜೈಲುಶಿಕ್ಷೆ ವಿಧಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

  • ಕುಡಿದ ಮತ್ತಿನಲ್ಲಿ ಹಾವನ್ನ ಕಚ್ಚಿ ಕೊಂದ ಭೂಪ

    ಕುಡಿದ ಮತ್ತಿನಲ್ಲಿ ಹಾವನ್ನ ಕಚ್ಚಿ ಕೊಂದ ಭೂಪ

    -ಬಾಯಲ್ಲಿ ಬಾಟಲ್, ಕೊರಳಲ್ಲಿ ಹಾವು

    ಕೋಲಾರ: ಕುಡಿದ ಮತ್ತಿನಲ್ಲಿ ಭೂಪನೊಬ್ಬ ಹಾವನ್ನು ಬಾಯಿಂದ ಕಚ್ಚಿ ಸಾಯಿಸಿದ್ದಾನೆ. ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಮುಷ್ಟೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ.

    ಮಷ್ಟೂರು ಗ್ರಾಮದ ಕುಮಾರ್ ಹಾವನ್ನು ಸಾಯಿಸಿದ ಭೂಪ. ನಶೆಯಲ್ಲಿದ್ದ ಕುಡುಕ ದಾರಿಯಲ್ಲಿ ಹೋಗುತ್ತಿದ್ದ ಹಾವನ್ನು ಹಿಡಿದು ಕತ್ತಿಗೆ ಸುತ್ತಿಕೊಂಡು ಗ್ರಾಮ ಪ್ರವೇಶಿಸಿದ್ದಾನೆ. ಗ್ರಾಮದ ಮಧ್ಯೆ ಬರುತ್ತಿದ್ದಂತೆ ಕುತ್ತಿಗೆ ಹಾವನ್ನು ಬಾಯಿಂದ ಕಚ್ಚಿ ಸಾಯಿಸಿದ್ದಾನೆ. ಕುಮಾರ್ ಹಾವನ್ನು ಕಚ್ಚಿ ಸಾಯಿಸುತ್ತಿರುವ ದೃಶ್ಯಗಳನ್ನು ಸ್ಥಳೀಯರು ಮೊಬೈಲಿನಲ್ಲಿ ಸೆರೆಹಿಡಿದುಕೊಂಡಿದ್ದಾರೆ. ಆದ್ರೆ ಭಯದಿಂದ ಯಾರು ಕುಮಾರ್ ನನ್ನು ತಡೆಯಲು ಮುಂದಾಗಿಲ್ಲ.

    ಹಾವು ಸಾಯಿಸಿದ ಬಳಿಕ ಕುಮಾರ್ ಆರೋಗ್ಯವಾಗಿದ್ದು, ಗ್ರಾಮದಲ್ಲಿ ಓಡಾಡಿಕೊಂಡಿದ್ದಾನೆ. ಹಾವನ್ನ ಸಾಯಿಸಿದ್ದಕ್ಕೆ ಗ್ರಾಮಸ್ಥರು ಸಹ ಕ್ಲಾಸ್ ತೆಗೆದುಕೊಂಡಿದ್ದಾರೆ. ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಮದ್ಯ ಇಟ್ಟುಕೊಳ್ಳಲು ಮಠ ಬಾರ್ ಆಂಡ್ ರೆಸ್ಟೋರೆಂಟ್ ಅಲ್ಲ: ಶಿರೂರು ಶ್ರೀ ಬೆನ್ನಿಗೆ ನಿಂತ ಬಾರ್ಕೂರು ಶ್ರೀ

    ಮದ್ಯ ಇಟ್ಟುಕೊಳ್ಳಲು ಮಠ ಬಾರ್ ಆಂಡ್ ರೆಸ್ಟೋರೆಂಟ್ ಅಲ್ಲ: ಶಿರೂರು ಶ್ರೀ ಬೆನ್ನಿಗೆ ನಿಂತ ಬಾರ್ಕೂರು ಶ್ರೀ

    ಕಾರವಾರ: ಉಡುಪಿಯ ಶಿರೂರು ಶ್ರೀ ಮೃತಪಟ್ಟ ಐದು ದಿನಗಳಲ್ಲಿ ಮಠದಲ್ಲಿ ನಾಲ್ಕೂವರೆ ಲಕ್ಷ ರೂ. ಮದ್ಯ ಸಿಕ್ಕಿದೆ ಎಂಬುದು ಅಸಂಬದ್ಧ. ನಾಲ್ಕೂವರೆ ಲಕ್ಷದಷ್ಟು ಮದ್ಯ ಇಟ್ಟುಕೊಳ್ಳಲು ಅದೇನು ಬಾರ್ ಆಂಡ್ ರೆಸ್ಟೋರೆಂಟ್ ಅಲ್ಲ. ಇದು ಸಾಧ್ಯವೇ ಇಲ್ಲ ಅಂತ ಬಾರ್ಕೂರು ಮಠದ ಪೀಠಾಧಿಪತಿ ಸಂತೋಷ್ ಗುರೂಜಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

    ಅಂಕೋಲದ ಬಾಸ್ಗೋಡಿನಲ್ಲಿ ಪಹರೆ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉಡುಪಿಯ ಶಿರೂರು ಶ್ರೀ ವಿಧಿವಶರಾದ ಮೇಲೆ ಅವರ ಮೇಲೆ ಇರುವ ಹಗೆತನ ಕಡಿಮೆಯಾಗಿಲ್ಲ. ಶ್ರೀಗಳು ಸತ್ತಮೇಲೂ ಆರೋಪ ನಡೆಯುತ್ತಿದೆ ಎಂದರೆ ಅವರು ಸಾಯುವ ಮುಂಚೆ ಬೇರೆ ಶಕ್ತಿ ಕೆಲಸ ಮಾಡಿದೆ. ಯಾವ ಮಠದವರೂ ಮಾಡಿದ್ದಾರೋ ಅಥವಾ ಬೇರೆಯವರು ಮಾಡಿದ್ದಾರೋ ಗೊತ್ತಿಲ್ಲ. ಒಂದು ಸಮುದಾಯದವರಿಗೆ ಗುರುಗಳಾಗಿರುವ ಸ್ವಾಮೀಜಿ ಅವರ ಹತ್ಯೆಯಾಗಿದೆ. ಪೊಲೀಸರಿಗೆ ಅಷ್ಟ ಮಠಗಳು ಸಹಕಾರ ನೀಡಬೇಕೇ ವಿನಾಃ ಬೇರೆ ರೀತಿ ಮಾಡಬಾರದು ಅಂತ ಹಳಿದ್ರು.

    ರಮ್ಯ ಶಟ್ಟಿಯನ್ನು ಅಪರಾಧಿ ಎಂದು ಬಿಂಬಿತ ಮಾಡಲಾಗಿದೆ. ಆಕೆ ಆರೀತಿ ಇಲ್ಲ. ಆಕೆ ಒಂದು ಹೆಣ್ಣುಮಗಳಾಗಿ ಹೇಳಬೇಕೆಂದರೆ ಚಿನ್ನದ ಮೊಟ್ಟೆ ಇಡುವ ಕೋಳಿಯನ್ನ ಕುತ್ತಿಗೆ ಕೊಯ್ದು ಹಾಕುವಷ್ಟು ದಡ್ಡಿಯಲ್ಲ. ಮಠದಲ್ಲಿ ನಾಲ್ಕೂವರೆ ಲಕ್ಷದಷ್ಟು ಮದ್ಯ ಇಟ್ಟುಕೊಳ್ಳಲು ಅದೇನು ಬಾರ್ ಆಂಡ್ ರೆಸ್ಟೋರೆಂಟ್ ಅಲ್ಲ. ಇದು ಸಾಧ್ಯವೇ ಇಲ್ಲ. ಗಡಿಬಿಡಿಯಲ್ಲಿ ಎಲ್ಲರೂ ತಂದು ಅಲ್ಲಿ ಇಟ್ಟಿದ್ದಾರೆ. ಎಲ್ಲರೂ ಅಲ್ಲಿ ಬಾಟಲಿ ಇಡಲು ಹೋಗಿ ಅಸಂಬದ್ಧವಾಗಿದೆ. ಮಠದಲ್ಲಿ ತುಳಸಿದಳ ಬೀಳಿಸುವುದಕ್ಕಿಂತ ಹೆಚ್ಚಾಗಿ ಬಾಟಲಿ ಬೀಳಿಸಿದ್ದು, ಅವರನ್ನು ದೂಷಣೆ ಮಾಡುವುದಕ್ಕಿಂತ ಹೆಚ್ಚಾಗಿ ಹಿಂದೂ ಧರ್ಮದ ಮೇಲೆ ಬಿದ್ದಿರುವ ಆಘಾತ ಎಂದು ಟೀಕಿಸಿದ್ರು.

    ಪೇಜಾವರ ಶ್ರೀ ವಿರುದ್ಧ ಕಿಡಿ:
    ಪೇಜಾವರ ಶ್ರೀಗಳು ಶಿರೂರು ಶ್ರೀಗಳನ್ನು ಸ್ವಾಮಿಗಳೇ ಅಲ್ಲ ಎಂದಿದ್ದಾರೆ. ಮೊನ್ನೆ ನಡೆದ ಪರ್ಯಾಯದಲ್ಲಿ ಅವರನ್ನು ಯಾಕೆ ಕೂರಿಸಿದ್ದರು? 43 ವರ್ಷ ಪೀಠದಲ್ಲಿ ಶಿರೂರು ಶ್ರೀಗಳಿದ್ದರು ಇಲ್ಲಿವರೆಗೆ ಯಾಕೆ ಪೇಜಾವರ ಶ್ರೀಗಳು ಹೇಳಲಿಲ್ಲ. ಎಲ್ಲರೂ ಒಂದಲ್ಲ ಒಂದು ದಿನ ತಪ್ಪು ಮಾಡಿರಬಹುದು. ಆದರೇ ವಿಧಿವಶರಾದ ಮೇಲೆ ಎತ್ತಿ ಆಡುವುದು ಸೌಜನ್ಯವಲ್ಲ. ಶಿರೂರು ಶ್ರೀಗಳನ್ನು ಮುಂಚೆಯೇ ಸರಿಮಾಡಬೇಕಿತ್ತು. ಪೀಠದಿಂದ ಇಳಿಸಬೇಕಿತ್ತು. ಒತ್ತಡ ಹೇರಬೇಕಿತ್ತು. ಆಜ್ಞೆ ಹೊರಡಿಸಬಹುದಿತ್ತು. ಆದರೇ ಈಗ ಸನ್ಯಾಸಿಯಲ್ಲ ಎನ್ನುವುದು ಸರಿಯಲ್ಲ ಅಂದು ಪೇಜಾವರ ಶ್ರೀ ವಿರುದ್ಧ ಕಿಡಿಕಾರಿದ್ರು.

    ಕುಡುಕ ಅಂದ ಇತಿಹಾಸವೇ ಇಲ್ಲ:
    ಇಲ್ಲಿಯವರೆಗೆ ಅವರು ಬದುಕಿದ್ದಾಗ ಶಿರೂರು ಶ್ರೀ ಕುಡುಕ ಎಂದು ಹೇಳಿದ ಇತಿಹಾಸ ಉಡುಪಿಯಲ್ಲಿಲ್ಲ. ಶಿರೂರು ಶ್ರೀಗಳಿಗೆ ಆರೋಗ್ಯ ಸರಿಯಿಲ್ಲದ ಕಾರಣ ಪಟ್ಟದ ದೇವರನ್ನು ಬೇರೊಬ್ಬ ಸ್ವಾಮೀಜಿಗೆ ಕೊಟ್ಟದ್ದು ನಿಜ. ಆದರೇ ಮರಳಿ ನೀಡದ್ದಕ್ಕೆ ವಕೀಲ ರವಿ ಕಿರಣ್ ಮುರಡೇಶ್ವ ರನ್ನು ಭೇಟಿ ಮಾಡಿ ಕೇಸ್ ಹಾಕಲು ತೀರ್ಮಾನ ಆಗಿತ್ತು. ಅದು ಮಠಾಧೀಶರಿಗೆ ಸರಿಬರಲಿಲ್ಲ ಅಂತ ಹೇಳಿದ ಅವರು, ಶಿರೂರು ಮಠಕ್ಕೆ ಬಾಲ ಸನ್ಯಾಸಿಗಳನ್ನು ಪೀಠಾಧಿಪತಿ ಮಾಡುವ ಬದಲು ವಯಸ್ಕರನ್ನು ಪೀಠಾಧಿಪತಿ ಮಾಡುವ ಕುರಿತು ಪೇಜಾವರ ಶ್ರೀಗಳ ಮಾತಿಗೆ ಸಹಮತ ವ್ಯಕ್ತಪಡಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews