Tag: akbar

  • ಮೊಘಲ್‌ ಚಕ್ರವರ್ತಿ ಅಕ್ಬರ್‌, ಜೋಧಾ ಬಾಯಿರನ್ನ ಮದುವೆ ಆಗಿದ್ದರು ಅನ್ನೋದು ಸುಳ್ಳು: ರಾಜಸ್ಥಾನ ರಾಜ್ಯಪಾಲ

    ಮೊಘಲ್‌ ಚಕ್ರವರ್ತಿ ಅಕ್ಬರ್‌, ಜೋಧಾ ಬಾಯಿರನ್ನ ಮದುವೆ ಆಗಿದ್ದರು ಅನ್ನೋದು ಸುಳ್ಳು: ರಾಜಸ್ಥಾನ ರಾಜ್ಯಪಾಲ

    – ಬ್ರಿಟಿಷರ ಪ್ರಭಾವಿತ ಭಾರತೀಯ ಇತಿಹಾಸದಲ್ಲಿ ಸುಳ್ಳು ಕಥೆ ಕಟ್ಟಲಾಗಿದೆ ಎಂದ ಹರಿಭಾವು

    ಜೈಪುರ: ಬ್ರಿಟಿಷರ ಪ್ರಭಾವಿತ ಭಾರತೀಯ ಇತಿಹಾಸದಲ್ಲಿ ಜೋಧಾ ಬಾಯಿ ಅವರನ್ನು ಅಕ್ಬರ್‌ ಮದುವೆಯಾಗಿದ್ದರು ಎಂದು ಸುಳ್ಳು ಕಥೆ ಕಟ್ಟಲಾಗಿದೆ ಎಂದು ರಾಜಸ್ಥಾನ ರಾಜ್ಯಪಾಲ ಹರಿಭಾವು ಬಗಾಡೆ (Haribhau Bagade) ಹೇಳಿಕೆ ನೀಡಿದ್ದಾರೆ.

    ಜೋಧಾ ಬಾಯಿ ಮತ್ತು ಮೊಘಲ್ ಚಕ್ರವರ್ತಿ ಅಕ್ಬರ್ (Akbar) ಅವರ ವಿವಾಹದ ಬಗ್ಗೆ ವ್ಯಾಪಕವಾಗಿ ಉಲ್ಲೇಖಿಸಲಾದ ಕಥೆಯೂ ಸೇರಿದಂತೆ, ಬ್ರಿಟಿಷ್ ಇತಿಹಾಸಕಾರರ ಆರಂಭಿಕ ಪ್ರಭಾವದಿಂದಾಗಿ ಭಾರತೀಯ ಇತಿಹಾಸದಲ್ಲಿ ಹಲವಾರು ತಪ್ಪುಗಳು ದಾಖಲಾಗಿವೆ. ಅಕ್ಬರ್‌ನಾಮದಲ್ಲಿ ಜೋಧಾ ಮತ್ತು ಅಕ್ಬರ್ ಅವರ ವಿವಾಹದ ಬಗ್ಗೆ ಯಾವುದೇ ಉಲ್ಲೇಖವಿಲ್ಲ ಎಂದು ಬಗಾಡೆ ಹೇಳಿದ್ದಾರೆ. ಇದನ್ನೂ ಓದಿ: ಭಾರತದ ಬ್ರಹ್ಮೋಸ್‌ ನಮ್ಮ ಪ್ಲ್ಯಾನ್‌ಗಳನ್ನೆಲ್ಲಾ ತಲೆಕೆಳಗೆ ಮಾಡಿತು – ಸತ್ಯ ಒಪ್ಪಿಕೊಂಡ ಪಾಕ್‌ ಪ್ರಧಾನಿ

    ಜೋಧಾ ಮತ್ತು ಅಕ್ಬರ್ ವಿವಾಹವಾದರು. ಈ ಕಥೆಯ ಮೇಲೆ ಒಂದು ಚಲನಚಿತ್ರವನ್ನು ಸಹ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಇತಿಹಾಸ ಪುಸ್ತಕಗಳು ಸಹ ಅದನ್ನೇ ಹೇಳುತ್ತವೆ. ಆದರೆ ಅದು ಸುಳ್ಳು ಎಂದು ತಿಳಿಸಿದ್ದಾರೆ.

    ಬ್ರಿಟಿಷರು ನಮ್ಮ ವೀರರ ಇತಿಹಾಸವನ್ನು ಬದಲಾಯಿಸಿದರು. ಅವರು ಇತಿಹಾಸವನ್ನು ಸರಿಯಾಗಿ ಬರೆಯಲಿಲ್ಲ. ಅವರ ಇತಿಹಾಸದ ಆವೃತ್ತಿಯನ್ನು ಆರಂಭದಲ್ಲಿ ಸ್ವೀಕರಿಸಲಾಯಿತು. ನಂತರ ಕೆಲವು ಭಾರತೀಯರು ಇತಿಹಾಸವನ್ನು ಬರೆದರು. ಆದರೆ ಅದು ಇನ್ನೂ ಬ್ರಿಟಿಷರಿಂದ ಪ್ರಭಾವಿತವಾಗಿತ್ತು ಎಂದಿದ್ದಾರೆ. ಇದನ್ನೂ ಓದಿ:

    ರಜಪೂತ ದೊರೆ ಮಹಾರಾಣಾ ಪ್ರತಾಪ್, ಅಕ್ಬರ್‌ಗೆ ಒಪ್ಪಂದ ಪತ್ರ ಬರೆದಿದ್ದಾರೆ ಎಂಬ ಐತಿಹಾಸಿಕ ಹೇಳಿಕೆಯನ್ನೂ ಹರಿಭಾವು ಪ್ರಶ್ನಿಸಿದ್ದಾರೆ. ಅದು ಸಂಪೂರ್ಣವಾಗಿ ದಾರಿ ತಪ್ಪಿಸುವಂತಿದೆ. ಮಹಾರಾಣಾ ಪ್ರತಾಪ್ ತನ್ನ ಸ್ವಾಭಿಮಾನದೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳಲಿಲ್ಲ. ಇತಿಹಾಸದಲ್ಲಿ ಅಕ್ಬರ್ ಬಗ್ಗೆ ಹೆಚ್ಚು ಕಲಿಸಲಾಗುತ್ತದೆ. ಮಹಾರಾಣಾ ಪ್ರತಾಪ್ ಬಗ್ಗೆ ಕಡಿಮೆ ಕಲಿಸಲಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಆದರೆ, ಈಗ ಪರಿಸ್ಥಿತಿ ಸುಧಾರಿಸುತ್ತಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ, ನಮ್ಮ ಸಂಸ್ಕೃತಿ ಮತ್ತು ಅದ್ಭುತ ಇತಿಹಾಸವನ್ನು ಸಂರಕ್ಷಿಸುವುದರೊಂದಿಗೆ ಭವಿಷ್ಯದ ಸವಾಲುಗಳಿಗೆ ಹೊಸ ಪೀಳಿಗೆಯನ್ನು ಸಿದ್ಧಪಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

  • ಸಿಂಹಗಳಿಗೆ ಅಕ್ಬರ್-ಸೀತಾ ನಾಮಕರಣ ಮಾಡಿದ್ದ ಅಧಿಕಾರಿ ಅಮಾನತು

    ಸಿಂಹಗಳಿಗೆ ಅಕ್ಬರ್-ಸೀತಾ ನಾಮಕರಣ ಮಾಡಿದ್ದ ಅಧಿಕಾರಿ ಅಮಾನತು

    ಅಗರ್ತಲಾ: ತ್ರಿಪುರಾದ ಮೃಗಾಲಯದಲ್ಲಿ ಸಿಂಹ ಮತ್ತು ಸಿಂಹಿಣಿಗೆ ಅಕ್ಬರ್-ಸೀತಾ ಎಂದು ನಾಮಕರಣ ಮಾಡಿದ ಅಧಿಕಾರಿಯನ್ನು ಸರ್ಕಾರ ಇದೀಗ ಅಮಾನತುಗೊಳಿಸಿದೆ.

    ನಾಮಕರಣದ ವಿವಾದದ ನಡುವೆ, ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಬಿನ್ ಲಾಲ್ ಅಗರ್ವಾಲ್ ರನ್ನು ಸರ್ಕಾರ ಅಮಾನತುಗೊಳಿಸಿದೆ. ಈ ಹೆಸರುಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿವೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಕಲ್ಕತ್ತಾ ಹೈಕೋರ್ಟ್‌ನಲ್ಲಿ ದೂರಿನ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ.

    ಫೆಬ್ರವರಿ 12 ರಂದು ತ್ರಿಪುರಾದ ಸೆಪಹಿಜಾಲಾ ಝೂಲಾಜಿಕಲ್ ಪಾರ್ಕ್‌ಗೆ ಎರಡು ಸಿಂಹಗಳನ್ನು ತರಲಾಯಿತು. ಉತ್ತರ ಬಂಗಾಳದ ಸಿಲಿಗುರಿಯ ಬೆಂಗಾಲ್ ಸಫಾರಿಯಿಂದ ಪ್ರಾಣಿ ವಿನಿಮಯ ಕಾರ್ಯಕ್ರಮದಡಿಯಲ್ಲಿ ಈ ಹುಲಿಗಳನ್ನು ತರಲಾಯಿತು. ಆ ಬಳಿಕ ಈ ಎರಡೂ ಸಿಂಹಗಳನ್ನು ಒಂದೇ ಆವರಣದಲ್ಲಿ ಹಾಕಲಾಗಿದೆ ಎನ್ನುವುದರ ಜೊತೆ ಅವುಗಳ ಹೆಸರು ಭಾರೀ ಚರ್ಚೆಗೆ ಗ್ರಾಸವಾಯಿತು.

    ಇತ್ತ ಹೆಸರು ಬದಲಾವಣೆಗೆ ಒತ್ತಾಯಿಸಿ ವಿಎಚ್‌ಪಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಇದರಿಂದ ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು. ಎರಡೂ ಪ್ರಾಣಿಗಳಿಗೆ ಆಯ್ಕೆ ಮಾಡಿರುವ ಹೆಸರುಗಳ ಬಗ್ಗೆ ನ್ಯಾಯಮೂರ್ತಿ ಭಟ್ಟಾಚಾರ್ಯ ಅಸಮ್ಮತಿ ವ್ಯಕ್ತಪಡಿಸಿ ಹೆಸರು ಬದಲಾವಣೆ ಮಾಡುವಂತೆ ಸೂಚಿಸಿದ್ದರು.

  • ಅಕ್ಬರ್‌, ಸೀತಾ ಸಿಂಹಗಳಿಗೆ ಮರುನಾಮಕರಣ ಮಾಡಿ- ಕೋಲ್ಕತ್ತಾ ಹೈಕೋರ್ಟ್‌ ಸೂಚನೆ

    ಅಕ್ಬರ್‌, ಸೀತಾ ಸಿಂಹಗಳಿಗೆ ಮರುನಾಮಕರಣ ಮಾಡಿ- ಕೋಲ್ಕತ್ತಾ ಹೈಕೋರ್ಟ್‌ ಸೂಚನೆ

    ಕೋಲ್ಕತ್ತಾ: ಸಿಲಿಗುರಿಯ ಬೆಂಗಾಲ್ ಸಫಾರಿ ಪಾರ್ಕ್‌ನಲ್ಲಿ (Bengal Safari Park in Siliguri) ಎರಡೂ ಸಿಂಹಗಳನ್ನು ಒಂದೇ ಆವರಣದಲ್ಲಿ ಇರಿಸಿದ ನಂತರ ವಿವಾದಕ್ಕೆ ಕಾರಣವಾದ ಅಕ್ಬರ್ ಮತ್ತು ಸೀತಾ ಸಿಂಹಗಳಿಗೆ ಮರುನಾಮಕರಣ ಮಾಡುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಕೋಲ್ಕತ್ತಾ ಹೈಕೋರ್ಟ್ (Calcutta High Court) ಸೂಚಿಸಿದೆ.

    ತ್ರಿಪುರಾದಿಂದ ಪಶ್ಚಿಮ ಬಂಗಾಳಕ್ಕೆ ಇತ್ತೀಚೆಗೆ ವರ್ಗಾವಣೆಗೊಂಡ ಸಿಂಹಗಳ ಹೆಸರನ್ನು ಬದಲಾಯಿಸುವಂತೆ ವಿಶ್ವ ಹಿಂದೂ ಪರಿಷತ್ (Vishwa Hindu Parishad) ಸಲ್ಲಿಸಿದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಇಂದು ಕೈಗೆತ್ತಿಕೊಂಡಿತು. ಬಳಿಕ ನ್ಯಾಯಮೂರ್ತಿ ಸೌಗತ ಭಟ್ಟಾಚಾರ್ಯ ಅವರ ಏಕಸದಸ್ಯ ಪೀಠವು ವಿವಾದದಿಂದ ದೂರವಿರಲು ಮತ್ತು ಪ್ರಾಣಿಗಳ ಮರುನಾಮಕರಣವನ್ನು ಪರಿಗಣಿಸುವಂತೆ ಮೌಖಿಕ ನಿರ್ದೇಶನ ನೀಡಿತು. ಇದನ್ನೂ ಓದಿ: ಹುಲಿ ಬೇಟೆಯಾಡಿ ಹಲ್ಲಿನ ಪೆಂಡೆಂಟ್‌ ಧರಿಸಿದ್ದೇನೆ- ವಿವಾದಕ್ಕೀಡಾದ ಶಾಸಕ

    ನೀವು ಸಿಂಹಕ್ಕೆ ಹಿಂದೂ ದೇವತೆ, ಮುಸ್ಲಿಂ ಪ್ರವಾದಿ, ಕ್ರಿಶ್ಚಿಯನ್ ದೇವರು, ಸ್ವಾತಂತ್ರ್ಯ ಹೋರಾಟಗಾರ ಅಥವಾ ನೊಬೆಲ್ ಪ್ರಶಸ್ತಿ ವಿಜೇತರ ಹೆಸರನ್ನು ಇಡುತ್ತೀರಾ? ರಾಜ್ಯ ಸರ್ಕಾರ ಇದನ್ನು ಯಾಕೆ ಪ್ರಶ್ನಿಸಿಲ್ಲ. ಇದು ಜಾತ್ಯಾತೀತ ರಾಜ್ಯವಾಗಿದ್ದು, ಸೀತಾ ಮತ್ತು ಅಕ್ಬರ್ ಹೆಸರನ್ನು ಸಿಂಹಕ್ಕೆ ಹೆಸರಿಸಿ ವಿವಾದವನ್ನು ಏಕೆ ಮೈಮೇಲೆ ಎಳೆದುಕೊಳ್ಳಬೇಕು? ಈ ವಿವಾದವನ್ನು ತಪ್ಪಿಸಬೇಕಾಗಿತ್ತು. ಸೀತೆ (Sita) ಮಾತ್ರವಲ್ಲ, ಅಕ್ಬರ್ (Akbar) ಹೆಸರನ್ನೂ ನಾನು ಬೆಂಬಲಿಸುವುದಿಲ್ಲ ಎಂದು ನ್ಯಾಯಮೂರ್ತಿ ಭಟ್ಟಾಚಾರ್ಯ ಛಾಟಿ ಬೀಸಿದರು.

    ಈ ವೇಳೆ ಪಶ್ಚಿಮ ಬಂಗಾಳ (West Bengal) ಸರ್ಕಾರದ ಪರ ವಕೀಲರು, ಈಗಾಗಲೇ ಸಿಂಹಗಳಿಗೆ ಮರುನಾಮಕರಣ ಮಾಡಲು ಯೋಚಿಸುತ್ತಿರುವುದಾಗಿ ತಿಳಿಸಿದರು. ಬಳಿಕ ಕೋರ್ಟ್‌, ವಿಶ್ವ ಹಿಂದೂ ಪರಿಷತ್ ಸಲ್ಲಿಸಿರುವ ಅರ್ಜಿಯನ್ನು ಪಿಐಎಲ್ ಎಂದು ಮರು ವರ್ಗೀಕರಿಸಲು ನಿರ್ದೇಶಿಸಿದೆ. ಜೊತೆಗೆ ಪಿಐಎಲ್‌ಗಳನ್ನು ಆಲಿಸುವ ಸಾಮಾನ್ಯ ಪೀಠಕ್ಕೆ ಮರುನಿರ್ದೇಶನ ನೀಡಿದೆ.

  • ಸಿಂಹಗಳಿಗೆ ಸೀತಾ, ಅಕ್ಬರ್ ನಾಮಕರಣ ವಿವಾದ- ಅರಣ್ಯ ಇಲಾಖೆ ಹೇಳಿದ್ದೇನು?

    ಸಿಂಹಗಳಿಗೆ ಸೀತಾ, ಅಕ್ಬರ್ ನಾಮಕರಣ ವಿವಾದ- ಅರಣ್ಯ ಇಲಾಖೆ ಹೇಳಿದ್ದೇನು?

    ಕೋಲ್ಕತಾ: ಪಶ್ಚಿಮ ಬಂಗಾಳದ ಸಿಲಿಗುರಿಯ ಸಫಾರಿ ಪಾರ್ಕ್‌ ನಲ್ಲಿ ಸಿಂಹಗಳಿಗೆ ನಾಮಕರಣ ಮಾಡಿರುವುದು ಇದೀಗ ಭಾರೀ ವಿವಾದಕ್ಕೀಡಾಗಿದೆ. ಈ ಬೆನ್ನಲ್ಲೇ ಅರಣ್ಯ ಇಲಾಖೆ ಸ್ಪಷ್ಟನೆ ಕೂಡ ನೀಡಿದೆ.

    ಹೌದು. ಇತ್ತೀಚೆಗೆ ಸಫಾರಿ ಪಾರ್ಕ್‌ಗೆ ಒಡಿಶಾದಿಂದ ಒಂದು ಗಂಡು ಹಾಗೂ ಮತ್ತೊಂದು ಹೆಣ್ಣು ಸಿಂಹಗಳನ್ನು ತರಲಾಗಿತ್ತು. ಅವುಗಳಲ್ಲಿ ಹೆಣ್ಣು ಸಿಂಹಕ್ಕೆ ʼಸೀತಾʼ (Sita) ಮತ್ತು ʼಅಕ್ಬರ್‌ʼ (Akbar) ಎಂದು ನಾಮಕರಣ ಮಾಡಿರುವುದು ಬಯಲಾಗಿದೆ. ಈ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ವಿಶ್ವ ಹಿಂದೂ ಪರಿಷದ್‌ (VHP) ಮುಖಂಡರು ರೊಚ್ಚಿಗೆದ್ದಿದ್ದಾರೆ. ಇದನ್ನೂ ಓದಿ: ತಂಗಿಯ ನಿಶ್ಚಿತಾರ್ಥಕ್ಕೆ ಬಂದಿಲ್ಲವೆಂದು ಪತ್ನಿಗೇ ಚಾಕು ಇರಿದ!

    ಹೈಕೋರ್ಟ್‌ ಮೆಟ್ಟಿಲೇರಿದ ವಿಹೆಚ್‌ಪಿ: ಅರಣ್ಯಾಧಿಕಾರಿಗಳು ಹೆಣ್ಣು ಸಿಂಹಕ್ಕೆ ‘ಸೀತಾ’ ಹಾಗೂ ಗಂಡು ಸಿಂಹಕ್ಕೆ ‘ಅಕ್ಟ‌ರ್’ ಎಂದು ನಾಮಕರಣ ಮಾಡಿದ್ದಾರೆ. ಜೊತೆಗೆ ಅದನ್ನು ಸಫಾರಿ ವಲಯದಲ್ಲಿ ಒಂದೇ ಪ್ರದೇಶದೊಳಗೆ ಇರಿಸಿದ್ದಾರೆ. ಇದರಿಂದ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ. ಕೂಡಲೇ ಪ್ರಾಣಿಗಳ ಹೆಸರು ಬದಲಿಸಬೇಕು. ಸಿಂಹಗಳನ್ನು ಬೇರೆ ಬೇರೆ ಕಡೆ ಇಡಬೇಕು ಎಂದು ಆಗ್ರಹಿಸಿ ವಿಹೆಚ್‌ಪಿ ನಾಯಕರು ಕೋಲ್ಕತ್ತಾ ಹೈಕೋರ್ಟ್ ಮೊರೆ ಹೋಗಿದ್ದಾರೆ. ಈ ಅರ್ಜಿ ಫೆ.20ರಂದು ವಿಚಾರಣೆಗೆ ಬರಲಿದೆ.

    ಅರಣ್ಯ ಇಲಾಖೆ ಸ್ಪಷ್ಟನೆ: ಸಿಂಹಗಳನ್ನು ಇತ್ತೀಚೆಗೆ ತ್ರಿಪುರಾದ ಸೆಪಹಿಜಾಲಾ ಝೂಲಾಜಿಕಲ್ ಪಾರ್ಕ್‌ನಿಂದ (Sepahijala Zoological Park in Tripura) ಸ್ಥಳಾಂತರಿಸಲಾಗಿದೆ ಮತ್ತು ಫೆಬ್ರವರಿ 13 ರಂದು ಸಫಾರಿ ಪಾರ್ಕ್‌ಗೆ ಬಂದ ನಂತರ ಮರುನಾಮಕರಣ ಮಾಡಲಾಗಿಲ್ಲ ಎಂದು ವಿವಾದದ ಕುರಿತು ಅರಣ್ಯ ಇಲಾಖೆ ಸ್ಪಷ್ಟನೆ ನೀಡಿದೆ.

  • ಕುಬ್ಜರಾದ್ರೂ ಸ್ವಾಭಿಮಾನದ ಬದುಕು – ಮೀಟರ್‌ಗಿಂತ ಹೆಚ್ಚಿನ ಹಣ ಪಡೀತಿಲ್ಲ ಬೆಂಗ್ಳೂರಿನ ಅಕ್ಬರ್

    ಕುಬ್ಜರಾದ್ರೂ ಸ್ವಾಭಿಮಾನದ ಬದುಕು – ಮೀಟರ್‌ಗಿಂತ ಹೆಚ್ಚಿನ ಹಣ ಪಡೀತಿಲ್ಲ ಬೆಂಗ್ಳೂರಿನ ಅಕ್ಬರ್

    ಬೆಂಗಳೂರು: ಕೈಕಾಲು ನೆಟ್ಟಗಿದ್ರೂ ಕೆಲವು ಮಂದಿ ದುಡಿದು ತಿನ್ನೋಕೆ ಆಗದೆ ಮಾಡಬಾರದ ಕೆಲಸ ಮಾಡ್ತಾರೆ. ಆದ್ರೆ, ಕುಬ್ಜತೆಗೆ ಒಳಗಾಗಿರೋ ಬೆಂಗಳೂರಿನ ಎಚ್‍ಎಸ್‍ಆರ್ ಲೇಔಟ್‍ನ ಅಕ್ಬರ್ ಸ್ವಾಭಿಮಾನದ ಜೀವನ ನಡೆಸ್ತಿದ್ದಾರೆ.

    ಬೆಂಗಳೂರಿನ ಎಚ್‍ಎಸ್‍ಆರ್ ಲೇಔಟ್‍ನಲ್ಲಿ ಆಟೋ ಓಡಿಸಿ ಹೊಟ್ಟೆ ತುಂಬಿಸಿಕೊಳ್ತಿದ್ದಾರೆ ಅಕ್ಬರ್. ಇವರು ಮೂಲತಃ ತಮಿಳುನಾಡಿನವರು. 10 ವರ್ಷಗಳಿಂದ ಹೊಸರೋಡಿನಲ್ಲಿ ನೆಲೆಸಿದ್ದಾರೆ. 7 ವರ್ಷಗಳ ಹಿಂದೆ ಅಪ್ಪ ನಿಧನರಾದ ಮೇಲೆ ಅಕ್ಬರ್ ತಾನೇ ದುಡಿಯಬೇಕಾಯಿತು. ಹುಟ್ಟಿನಿಂದಲೂ ಕುಬ್ಜತೆಗೆ ಒಳಗಾಗಿರುವ 31 ವರ್ಷದ ಅಕ್ಬರ್ 3 ಅಡಿ ಎತ್ತರ ಇದ್ದಾರೆ. ಆದರೆ, ಜೀವನೋತ್ಸಾಹ ಮಾತ್ರ ನೂರ್ಮಡಿಯಾಗಿದೆ.

    ಸಾಲ ಮಾಡಿ ಸೆಕೆಂಡ್ ಹ್ಯಾಂಡ್ ಆಟೋ ಖರೀದಿಸಿ ಬಾಡಿಗೆಗೆ ಬಿಟ್ಟು ಅದರಿಂದ ಬರೋ ಹಣವನ್ನು ಜೀವನೋಪಾಯಕ್ಕೆ ಬಳಸೋಣ ಅಂತ ಯೋಜಿಸಿದ್ದರು. ಆದರೆ, ಆಸಾಮಿಯೋರ್ವ ಆಟೋ ಪಡೆದರೂ ಬಾಡಿಗೆ ಹಣ ಕೊಡದೆ ಎಸ್ಕೇಪ್ ಆದ. ಆಗ ಎಚ್ಚೆತ್ತ ಅಕ್ಬರ್ ನಾನೇ ಏಕೆ ಆಟೋ ಓಡಿಸಬಾರದು ಅಂತ ಬ್ರೇಕ್ ಆಲ್ಟ್ರೇಷನ್ ಮಾಡಿಸಿಕೊಂಡು ಆಟೋ ಓಡಿಸ್ತಿರೋದಾಗಿ ಅಕ್ಬರ್ ಹೇಳಿದ್ದಾರೆ.

    ಓಡಾಡಲೂ ಕಷ್ಟ ಆಗಿರೋದ್ರಿಂದ ಮನೆಯವರು, ಸ್ನೇಹಿತರ ಸಹಾಯದಿಂದ ಆಟೋ ಓಡಿಸ್ತಿದ್ದಾರೆ. ಕೆಲವು ಪ್ರಯಾಣಿಕರು ಅಕ್ಬರ್ ಆಟೋವನ್ನೇ ಹುಡುಕಿ ಬರ್ತಾರೆ. ಆದರೆ, ಕರುಣೆ ತೋರಿಸಿ ಹೆಚ್ಚಿಗೆ ಹಣ ಕೊಟ್ರೆ ಬಿಲ್‍ಗಿಂತ ಹೆಚ್ಚಿಗೆ ನಯಾಪೈಸೆಯನ್ನು ಸುತರಾಂ ಸ್ವೀಕರಿಸಲ್ಲ. ಅಕ್ಬರ್ ಸ್ವಾಭಿಮಾನ ನೋಡಿ ಇಲ್ಲಿನ ಆಟೋಚಾಲಕರೂ ಭೇಷ್ ಅಂತಿದ್ದಾರೆ.


    ಅಕ್ಬರ್ ಆಟೋಗೆ ಪ್ರಯಾಣಿಕರು ತಾವಾಗೇ ಬಂದರೂ ಪೊಲೀಸರು ಅಡ್ಡಿ ಪಡಿಸ್ತಿದ್ದಾರೆ. ನಿನಗೆ ನಿನ್ನ ಮೇಲೆಯೇ ನಂಬಿಕೆ ಇಲ್ಲ. ಪ್ರಯಾಣಿಕರನ್ನು ಹೇಗೆ ಕರ್ಕೊಂಡು ಹೋಗ್ತೀಯಾ ಅಂತ ದಬಾಯಿಸ್ತಿದ್ದಾರೆ. ಇದಕ್ಕೆ ತನ್ನ ಕೆಲಸದ ಮೂಲಕವೇ ಅಕ್ಬರ್ ಉತ್ತರ ಕೊಡ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv