Tag: Ajay Devgan

  • ಖಾನ್ ಸಿನಿಮಾಗಳನ್ನು ಮೀರಿಸಿ ಗೆಲುವಿನ ನಗೆ ಬೀರಿದ ಅಕ್ಷಯ್ ಕುಮಾರ್

    ಖಾನ್ ಸಿನಿಮಾಗಳನ್ನು ಮೀರಿಸಿ ಗೆಲುವಿನ ನಗೆ ಬೀರಿದ ಅಕ್ಷಯ್ ಕುಮಾರ್

    ಮುಂಬೈ: ಬಾಲಿವುಡ್ ಎಂದರೆ ನಮಗೆ ನೆನಪಾಗುವುದು ಖಾನ್ ಗಳ ಸಿನಿಮಾ. ಶಾರುಖ್, ಸಲ್ಮಾನ್ ಮತ್ತು ಅಮಿರ್ ಸಿನಿಮಾಗಳ ಬಾಕ್ಸ್ ಆಫೀಸ್ ನಲ್ಲಿ ಯಾವಾಗಲೂ ಸದ್ದು ಮಾಡುತ್ತವೆ. ಆದರೆ ಇಂದು ಅಕ್ಷಯ್ ಕುಮಾರ್ ನಟನೆಯ ‘ಸೂರ್ಯವಂಶಿ’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸಖತ್ ಸದ್ದು ಮಾಡುತ್ತಿದೆ.

     

    View this post on Instagra

    wrap;”>A post shared by Akshay Kumar (@akshaykumar

    ಅಕ್ಷಯ್ ಕುಮಾರ್, ಅಜಯ್ ದೇವಗನ್ ಮತ್ತು ರಣವೀರ್ ಸಿಂಗ್ ಮುಖ್ಯ ಭೂಮಿಕೆಯಲ್ಲಿ ಸಿದ್ಧವಾಗಿರುವ ‘ಸೂರ್ಯವಂಶಿ’ ಸಿನಿಮಾ ನ.5ರಂದು ರಿಲೀಸ್ ಆಗಿದ್ದು, ರಿಲೀಸ್ ಆದ 9 ದಿನಗಳಲ್ಲಿ ವಿಶ್ವಾದ್ಯಂತ 209 ಕೋಟಿ ರೂ. ಆದಾಯವನ್ನು ಗಳಿಸಿದೆ. ಭಾರತೀಯ ಮಾರುಕಟ್ಟೆಯಲ್ಲಿ 164.10 ಕೋಟಿ ರೂ. ಹಾಗೂ ವಿದೇಶಿ ಬಾಕ್ಸ್ ಆಫೀಸ್‍ನಲ್ಲಿ 45.40 ಕೋಟಿ ರೂ. ಆದಾಯವನ್ನು ಗಳಿಸಿದೆ. ಈ ಹಿನ್ನೆಲೆ ‘ಸೂರ್ಯವಂಶಿ’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸಖತ್ ಸದ್ದು ಮಾಡಿದ್ದು, ಇದನ್ನು ನೋಡಿದ ಅಕ್ಕಿ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ಇದನ್ನೂ ಓದಿ: ಮಗಳ ಹುಟ್ಟುಹಬ್ಬವನ್ನು ವಿಲ್ಲಾದಲ್ಲಿ ಆಚರಿಸುತ್ತಿರೋ ಅಭಿ, ಐಶ್ – ದಿನಕ್ಕೆ ಇದರ ಬೆಲೆ ಎಷ್ಟು ಗೊತ್ತಾ?

    ಸೂರ್ಯವಂಶಿ ಸಿನಿಮಾ ಬಿಡುಗಡೆಯಾಗಿ ವಾರ ಕಳೆದರು ಉತ್ತಮ ಪ್ರದರ್ಶನವನ್ನು ಕಾಣುತ್ತಿದ್ದು, ಈ ಹಿಂದೆ ಅಕ್ಷಯ್ ನಟನೆಯ ‘ಬೆಲ್ ಬಾಟಂ’ ಸಿನಿಮಾ ನಿರೀಕ್ಷೆ ಮಟ್ಟವನ್ನು ತಲುಪಿರಲಿಲ್ಲ. ಆದರೆ ಈ ಸಿನಿಮಾದ ಕಲೆಕ್ಷನ್ ನೋಡಿ ಅಕ್ಕಿ ಗೆಲುವಿನ ನಗೆಯನ್ನು ಬೀರಿದ್ದಾರೆ.

    ಕೊರೊನಾ ಸಮಸ್ಯೆ ಇಲ್ಲದೇ ಹೋಗಿದ್ದರೆ ಈ ಹಿಂದೆಯೇ ಸಿನಿಮಾ ಬಿಡುಗಡೆಯಾಗಬೇಕಿತ್ತು. ಈ ಸಿನಿಮಾವನ್ನು ಓಟಿಟಿಗೆ ಬಿಡುವಂತೆ ಕೆಲವರು ಆಫರ್ ಸಹ ಮಾಡಿದ್ದರು. ಆದರೆ ನಿರ್ಮಾಪಕರು ಇದಕ್ಕೆ ಒಪ್ಪಿಕೊಳ್ಳದೆ, ಚಿತ್ರಮಂದಿರದಲ್ಲಿಯೇ ಸಿನಿಮಾವನ್ನು ರಿಲೀಸ್ ಮಾಡಿದ್ದು, ಈಗ ತಮ್ಮ ನಿರ್ಧಾರಕ್ಕೆ ಶಭಾಷ್ ಎನ್ನುವ ಮಟ್ಟಿಗೆ ‘ಸೂರ್ಯವಂಶಿ’ ಸಿನಿಮಾ ಯಶಸ್ಸನ್ನು ಕಾಣುತ್ತಿದೆ.

     

    View this post on Instagram

     

    A post shared by Akshay Kumar (@akshaykumar)

    ಅದು ಅಲ್ಲದೇ ಈ ಸಿನಿಮಾವನ್ನು ನೋಡಲು ಹಲವು ಕಾರಣಗಳಿದ್ದು, ಅವುಗಳು, ಹಲವು ದಿನಗಳು ಬಳಿಕ ಚಿತ್ರಮಂದಿರದಲ್ಲಿ ಒಂದು ಬಿಗ್ ಬಜೆಟ್ ಸಿನಿಮಾ ರಿಲೀಸ್ ಮಾಡಲಾಗಿದ್ದು, ಈ ಪರಿಣಾಮ ಜನರು ಮುಗಿಬಿದ್ದು ನೋಡುತ್ತಿದ್ದಾರೆ. ಅಕ್ಷಯ್ ಮತ್ತು ಕತ್ರಿನಾ ಕೈಫ್ ಕಾಂಬಿನೇಷನ್ ಹೇಗೆ ಇರುತ್ತೆ ಎಂಬ ಕುತೂಹಲದಿಂದಲೂ ಈ ಸಿನಿಮಾ ಯಶಸ್ಸು ಆಗಿದೆ. ಇವರಿಬ್ಬರನ್ನು ತೆರೆ ಮೇಲೆ ನೋಡಿ ಫ್ಯಾನ್ಸ್ ಗಳು ಸಹ ಫಿದಾ ಆಗಿದ್ದಾರೆ. ಇದನ್ನೂ ಓದಿ: ಬೃಂದಾವನದಲ್ಲಿ ಅನುಮತಿ ಇಲ್ಲದೇ ರಾತ್ರಿ ಶೂಟಿಂಗ್ – ಯುಟ್ಯೂಬ್ ಅಡ್ಮಿನ್ ಅರೆಸ್ಟ್

    ಈ ಸಿನಿಮಾಗೆ ರೋಹಿತ್ ಶೆಟ್ಟಿ ಆಕ್ಷನ್ ಕಟ್ ಹೇಳಿದ್ದು, ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಜನರ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಸಾಹಸ ದೃಶ್ಯಗಳು ಅದ್ದೂರಿಯಾಗಿ ಮೂಡಿಬಂದಿದ್ದು, ಈ ಎಲ್ಲ ಕಾರಣಗಳಿಂದ ‘ಸೂರ್ಯವಂಶಿ” ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿದೆ.

  • ಸುಶಾಂತ್ ಪ್ರತಿಭಾವಂತ ನಟ- ಕಂಬನಿ ಮಿಡಿದ ಮೋದಿ, ಬಾಲಿವುಡ್ ನಟರು

    ಸುಶಾಂತ್ ಪ್ರತಿಭಾವಂತ ನಟ- ಕಂಬನಿ ಮಿಡಿದ ಮೋದಿ, ಬಾಲಿವುಡ್ ನಟರು

    ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಸುದ್ದಿ ಕೇಳಿ ಬಾಲಿವುಡ್ ಚಿತ್ರರಂದವರು ಶಾಕ್ ಆಗಿದ್ದು, ಎಲ್ಲರೂ ನಟನ ಸಾವಿಗೆ ಸಂತಾಪ ಸೂಚಿಸುತ್ತಿದ್ದಾರೆ.

    ನಟ ಅಕ್ಷಯ್ ಕುಮಾರ್, ಅನುಪಮ್ ಖೇರ್, ಅಜಯ್ ದೇವಗನ್, ನಟಿ ಬಿಪಾಶು ಬಸು ಸೇರಿದಂತೆ ಅನೇಕರು ಸೋಶಿಯಲ್ ಮೀಡಿಯಾದ ಮೂಲಕ ಸುಶಾಂತ್ ಸಾವಿಗೆ ಕಂಬನಿ ಮಿಡಿಯುತ್ತಿದ್ದಾರೆ.

    ನಟ ಅಕ್ಷಯ್ ಕುಮಾರ್, “ಈ ಸುದ್ದಿ ನನಗೆ ಆಘಾತವನ್ನೂಂಟು ಮಾಡಿದೆ. ಸುದ್ದಿ ತಿಳಿದು ಮಾತೇ ಬರುತ್ತಿಲ್ಲ. ನಾನು ಸುಶಾಂತ್ ಸಿಂಗ್ ಅಭಿನಯಿಸಿದ್ದ ‘ಚಿಚೋರ್’ ಸಿನಿಮಾ ನೋಡಿ ತುಂಬಾ ಆನಂದಿಸಿದ್ದೆ. ಆಗ ನನ್ನ ಸ್ನೇಹಿತ, ‘ಚಿಚೋರ್’ ಸಿನಿಮಾ ನಿರ್ಮಾಪಕ ಸಾಜಿದ್‍ಗೆ ನಾನು ಸಿನಿಮಾ ನೋಡಿ ಎಷ್ಟು ಸಂತಸಪಟ್ಟೆ ಎಂದು ಹೇಳಿದ್ದೆ. ಅಲ್ಲದೇ ಆ ಸಿನಿಮಾದಲ್ಲಿ ನಾನು ಒಂದು ಭಾಗವಾಗಿ ಅಭಿನಯಿಸಬೇಕಿತ್ತು ಎಂದು ಹೇಳಿದ್ದೆ. ಸುಶಾಂತ್ ಪ್ರತಿಭಾವಂತ ನಟ. ದೇವರು ಈ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅವರ ಕುಟುಂಬಕ್ಕೆ ಕೊಡಲಿ ಎಂದು ನಾನು ಪ್ರಾರ್ಥಿಸುತ್ತೇನೆ” ಎಂದು ದುಃಖದಿಂದ ಬರೆದುಕೊಂಡಿದ್ದಾರೆ.

    “ಸುಶಾಂತ್ ಸಿಂಗ್ ರಜಪೂತ್ ಸಾವಿನ ಸುದ್ದಿ ನಿಜಕ್ಕೂ ದುಃಖಕರವಾಗಿದೆ. ಎಂತಹ ದುರಂತ, ಅವನ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಸುಶಾಂತ್ ಕುಟುಂಬದವರಿಗೆ ನಟ ಅಜಯ್ ದೇವಗನ್ ಸಂತಾಪ ಸೂಚಿಸಿದರು.

    “ನಿಜಕ್ಕೂ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಸುದ್ದಿ ಕೇಳಿ ಶಾಕ್ ಆಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ನಟಿ ಬಿಪಾಶಾ ಬಸು ಸಂತಾಪ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂತಾಪ ಸೂಚಿಸಿದ್ದಾರೆ.

  • ಶಾರ್ಟ್ಸ್​​ನಲ್ಲಿ ದೇಗುಲಕ್ಕೆ ತೆರೆಳಿದ್ದ ಅಜಯ್ ದೇವಗನ್ ಟ್ರೋಲ್

    ಶಾರ್ಟ್ಸ್​​ನಲ್ಲಿ ದೇಗುಲಕ್ಕೆ ತೆರೆಳಿದ್ದ ಅಜಯ್ ದೇವಗನ್ ಟ್ರೋಲ್

    ಮುಂಬೈ: ಶಾರ್ಟ್ಸ್ ಧರಸಿ ದೇಗುಲಕ್ಕೆ ತೆರಳಿದ್ದ ಬಾಲಿವುಡ್ ನಟ ಅಜಯ್ ದೇವಗನ್ ಅವರನ್ನು ನೆಟ್ಟಿಗರು ಸಖತ್ ಟ್ರೋಲ್ ಮಾಡುತ್ತಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಅಜಯ್ ಕಾಲೆಳೆದು ಮಜಾ ಪಡೆಯುತ್ತಿದ್ದಾರೆ.

    ಹೌದು. ದೇವರ ದರ್ಶಕ್ಕೆ ದೇವಾಲಯಗಳಿಗೆ ತೆರೆಳುವಾಗ ಸಾಮಾನ್ಯವಾಗಿ ಸಾಪ್ರದಾಯಿಕವಾಗಿ ಹೋಗುತ್ತಾರೆ. ಆದರೆ ನಟ ಅಜಯ್ ಅವರು ಶಾರ್ಟ್ಸ್​​ನಲ್ಲಿ ದೇಗುಲಕ್ಕೆ ಹೋಗಿ ಟ್ರೋಲ್ ಆಗುತ್ತಿದ್ದಾರೆ. ಮಾಂಧ್ವಿಯ ಶ್ರೀ ರಂಗನಾಥ ಮಹಾದೇವ ದೇವಾಲಯಕ್ಕೆ ಅಜಯ್ ಅವರು ಭೇಟಿ ನೀಡಿದ್ದರು. ಈ ವೇಳೆ ಸಾಂಪ್ರದಾಯಿಕ ಉಡುಗೆಯಲ್ಲಿ ಧರಿಸಿ ದೇವರ ದರ್ಶನ ಪಡೆದಿದ್ದರೆ ತೊಂದರೆಯಾಗುತ್ತಿರಲಿಲ್ಲ. ಆದರೆ, ಅವರು ಶಾರ್ಟ್ಸ್​​ ಹಾಕಿಕೊಂಡು ದೇವರ ದರ್ಶನ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿವಾದ ಸೃಷ್ಟಿಸಿದೆ. ಅಲ್ಲದೆ ನೆಟ್ಟಿಗರಿಗೂ ಟ್ರೋಲ್ ಮಾಡಲು ಹೊಸ ವಿಷಯ ಸಿಕ್ಕಿದಂತಾಗಿದೆ.

    ನೀಲಿ ಟೀ ಶರ್ಟ್ ಮತ್ತು ಡೆನಿಮ್ ಶಾರ್ಟ್ಸ್​​ ಧರಿಸಿ ಶಿವ ಲಿಂಗದ ಮುಂದೆ ಕುಳಿತು ಅಜಯ್ ಪೂಜೆ ನೆರವೇರಿಸಿದ್ದಾರೆ. ಈ ಫೋಟೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಲ್ಲದೆ ಅಜಯ್ ಅವರ ಈ ನಡೆಗೆ ಕೆಲವರು ವ್ಯಂಗ್ಯವಾಡಿದ್ದರೆ, ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.

    ಅಜಯ್ ದೇವಗನ್ ಅವರು ಯಾವುದೇ ಉಡುಪು ಧರಿಸಿ ಕುಳಿತು ಪೂಜೆ ಮಾಡುವ ಸ್ವಾತಂತ್ರ್ಯ ಅವರಿಗೆ ಇದೆ. ಆದರೆ, ಇದೇ ದೇವಾಲಯದಲ್ಲಿ ಜನಸಾಮಾನ್ಯರಿಗೆ ಇಂತಹ ಹಕ್ಕು ಇರುವುದಿಲ್ಲ. ಇದು ಸತ್ಯದ ಸಂಗತಿಯಾಗಿದ್ದು, ನೋವುಂಟು ಮಾಡುತ್ತದೆ ಎಂದು ಒಬ್ಬರು ಕಮೆಂಟ್ ಮಾಡಿದರೆ, ಇನ್ನೊಬ್ಬರು ಅಜಯ್ ಅವರು ಶಾರ್ಟ್ಸ್​​ ಧರಿಸಿ ಮಹದೇವನ ಪೂಜೆ ನೆರವೇರಿಸಿರುವುದರಿಂದ ಪಾಪ ಬರುತ್ತದೆ. ಕನಿಷ್ಠ ಪಕ್ಷವಾದರೂ ಅವರು ದೇವರಿಗೆ ಗೌರವ ಕೊಡಬೇಕಿತ್ತು ಎಂದು ಕಿಡಿಕಾರಿದ್ದಾರೆ.

  • ಅಜಯ್ ದೇವಗನ್ ಡೇಂಜರಸ್ ಸ್ಟಂಟ್ ನಕಲು ಮಾಡಿದ ಗಿಳಿ

    ಅಜಯ್ ದೇವಗನ್ ಡೇಂಜರಸ್ ಸ್ಟಂಟ್ ನಕಲು ಮಾಡಿದ ಗಿಳಿ

    ಮುಂಬೈ: ಬಾಲಿವುಡ್ ಸಿಂಗಂ ಅಜಯ್ ದೇವಗನ್ ಅವರ ಪ್ರತಿ ಸಿನಿಮಾಗಳಲ್ಲಿ ಸ್ಪೆಷಲ್ ಸ್ಟಂಟ್ ಸೀನ್ ಇದ್ದೇ ಇರುತ್ತದೆ. ನೋಡಲು ಸರಳವಾಗಿ ಕಂಡರೂ, ಸ್ಟಂಟ್ ಪ್ರಯತ್ನ ಮಾಡಲು ಹೋದ್ರೆ ಅಪಾಯ ಕಟ್ಟಿಟ್ಟ ಬುತ್ತಿ. ಸಿನಿಮಾಗಳಿಂದ ಪ್ರೇರಿತಗೊಂಡ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಫಾಲೋ ಮಾಡುತ್ತಾರೆ. ಇದೀಗ ಗಿಳಿಯೊಂದು ಅಜಯ್ ದೇವಗನ್ ಅವರನ್ನ ನಕಲು ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಅಜಯ್ ದೇವಗನ್ ತಮ್ಮ ಮೊದಲ ಸಿನಿಮಾದಲ್ಲಿ ಎರಡು ಬೈಕ್ ಗಳ ಮೇಲೆ ನಿಂತು ಎಂಟ್ರಿ ನೀಡಿದ್ದರು. ಹಾಗೆಯೇ ಮುಂದಿನ ಕೆಲವು ಚಿತ್ರಗಳಲ್ಲಿ ಇದೇ ರೀತಿಯ ಎಂಟ್ರಿ ಪಡೆದಿದ್ದರು. ಕೆಲವು ವರ್ಷಗಳ ಹಿಂದೆ ಬಿಡುಗಡೆಗೊಂಡ ಸನ್ ಆಫ್ ಸರ್ದಾರ್ ಸಿನಿಮಾದಲ್ಲಿ ಎರಡು ಕುದುರೆಗಳ ಮೇಲೆ ನಿಂತು ಸ್ಟಂಟ್ ಮಾಡುವ ಮೂಲಕ ನೋಡುಗರ ಹುಬ್ಬೇರುವಂತೆ ಮಾಡಿದ್ದರು. ಗೋಲ್ಮಾಲ್ ಸಿನಿಮಾದಲ್ಲಿ ಎರಡು ಕಾರುಗಳ ಮೇಲೆ ನಿಂತು ಅಜಯ್ ಎಂಟ್ರಿ ನೀಡಿದ್ದರು.

    ಏನದು ವಿಡಿಯೋ?
    ಗಿಳಿಯೊಂದು ಎರಡು ಪುಟಾಣಿ ಕಾರುಗಳ ಮೇಲೆ ನಿಂತು ಹೋಗುತ್ತದೆ. ಇದು ಅಜಯ್ ದೇವಗನ್ ಗಿಳಿ ಎಂದು ಬರೆದು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಲಾಗಿತ್ತು. ಈ ವಿಡಿಯೋವನ್ನು ರಿಟ್ವೀಟ್ ಮಾಡಿಕೊಂಡಿರುವ ಅಜಯ್ ದೇವಗನ್, ಮೆಚ್ಚುಗೆ ಸೂಚಿಸಿದ್ದಾರೆ. ಗಿಳಿ ಕಾರಿನ ಮೇಲೆ ಸ್ಟಂಟ್ ಮಾಡಿದ್ದನ್ನು, ಹಾರೋದನ್ನ ಮರೆತ ಹಾಗಿದೆ ಎಂದು ಬರೆದುಕೊಂಡಿದ್ದಾರೆ.

    ಅಜಯ್ ದೇವಗನ್ ಅಭಿನಯದ ‘ದೇ ದೇ ಪ್ಯಾರ್ ದೇ’ ಚಿತ್ರ ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ಚಿತ್ರದಲ್ಲಿ 50 ವರ್ಷದ ಉದ್ಯಮಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಜಯ್ ದೇವಗನ್‍ಗೆ 24 ವರ್ಷದ ಯುವತಿಯೊಂದಿಗೆ ಪ್ರೇಮಾಂಕುರವಾಗುತ್ತದೆ. ಈ ಸಿನಿಮಾದಲ್ಲಿ ಅಜಯ್ ದೇವಗನ್ ಅವರ ಮಾಜಿ ಪತ್ನಿ ಪಾತ್ರದಲ್ಲಿ ತಬ್ಬು ಕಾಣಿಸಿಕೊಂಡಿದ್ದಾರೆ.

  • ನನ್ನ, ಕಾಜೋಲ್‍ನ ಜಡ್ಜ್ ಮಾಡಿ, ನನ್ನ ಮಕ್ಕಳನ್ನ ಅಲ್ಲ: ಟ್ರೋಲರ್ಸ್ ವಿರುದ್ಧ ಸಿಡಿದ ಅಜಯ್

    ನನ್ನ, ಕಾಜೋಲ್‍ನ ಜಡ್ಜ್ ಮಾಡಿ, ನನ್ನ ಮಕ್ಕಳನ್ನ ಅಲ್ಲ: ಟ್ರೋಲರ್ಸ್ ವಿರುದ್ಧ ಸಿಡಿದ ಅಜಯ್

    ಮುಂಬೈ: ತಮ್ಮ ಮಕ್ಕಳನ್ನು ಟ್ರೋಲ್ ಮಾಡುತ್ತಿದ್ದ ಟ್ರೋಲರ್ಸ್ ವಿರುದ್ಧ ಬಾಲಿವುಡ್ ನಟ ಅಜಯ್ ದೇವಗನ್ ರೊಚ್ಚಿಗೆದ್ದಿದ್ದಾರೆ.

    ಅಜಯ್ ದೇವಗನ್ ಹಾಗೂ ಕಾಜೋಲ್ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. 15 ವರ್ಷದ ಮಗಳು ನೈಸಾ ಹಾಗೂ 8 ವರ್ಷದ ಮಗ ಯುಗ್‍ನನ್ನು ಟ್ರೋಲ್ ಮಾಡುತ್ತಿದ್ದಕ್ಕೆ ಅಜಯ್ ದೇವಗನ್ ಗರಂ ಆಗಿದ್ದಾರೆ.

    ವಿಮಾನ ನಿಲ್ದಾಣದಲ್ಲಿ ನೈಸಾ ಧರಿಸಿದ ಉಡುಪಿನ ಬಗ್ಗೆ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದರು. ಈ ಬಗ್ಗೆ ದೆಹಲಿಯಲ್ಲಿ ‘ಟೋಟಲ್ ಧಮಾಲ್’ ಚಿತ್ರದ ಪ್ರಮೋಶನ್ ವೇಳೆ ಮಾಧ್ಯಮದೊಂದಿಗೆ ಅಜಯ್ ದೇವಗನ್ ಮಾತನಾಡಿ. “ನೀವು ಬೇಕಾದರೆ ನನ್ನ ಮತ್ತು ಕಾಜೋಲ್ ಬಗ್ಗೆ ಜಡ್ಜ್ ಮಾಡಿ. ಅದನ್ನು ಬಿಟ್ಟು ನಮ್ಮ ಮಕ್ಕಳನ್ನು ಜಡ್ಜ್ ಮಾಡಬೇಡಿ. ನಾನು ಹಾಗೂ ಕಾಜೋಲ್ ಕಲಾವಿದರಾದ ಕಾರಣ ನಮ್ಮ ಮಕ್ಕಳು ಕ್ಯಾಮೆರಾಗೆ ಕಾಣಿಸಿಕೊಳ್ಳುತ್ತಿರುತ್ತಾರೆ” ಎಂದು ಹೇಳಿದ್ದಾರೆ.

     

    View this post on Instagram

     

    Thank you babies for 57k ????????❤️ • #nysadevgan

    A post shared by nysa devgan ♡ (@nysadevganx) on

    ಒಬ್ಬರ ಬಗ್ಗೆ ಈ ರೀತಿ ಮಾತನಾಡುವುದು ಸರಿಯಲ್ಲ. ನಾನು ಬೇರೆ ವ್ಯಕ್ತಿಗಳ ಬಗ್ಗೆ ಮಾತನಾಡಲು ಶುರು ಮಾಡಿದರೆ, ಆ ವ್ಯಕ್ತಿ ಹೇಗೆ ಬೇಸರವಾಗುತ್ತೋ, ಹಾಗೆ ನನ್ನ ಮಕ್ಕಳಿಗೂ ಬೇಸರವಾಗುತ್ತೆ. ನಿಜ ಹೇಳಬೇಕೆಂದರೆ ನಾನು ಟ್ರೋಲ್ ಮಾಡುವ ವ್ಯಕ್ತಿಗಳ ಬಗ್ಗೆ ಯೋಚಿಸುವುದಿಲ್ಲ. ಆದರೆ ನನ್ನ ಮಕ್ಕಳು ಇಂತಹ ಟ್ರೋಲ್‍ಗೆ ಒಳಗಾಗುವುದು ನನಗೆ ಇಷ್ಟವಿಲ್ಲ. ಅದು ನನಗೆ ಬೇಸರವಾಗುತ್ತದೆ ಎಂದು ತಿಳಿಸಿದ್ದಾರೆ.

     

    View this post on Instagram

     

    ???????? • #nysadevgan

    A post shared by nysa devgan ♡ (@nysadevganx) on

    ಆರಂಭದಲ್ಲಿ ನನ್ನ ಮಗಳು ಮೊದಲಿಗೆ ಈ ಟ್ರೋಲ್‍ಗಳನ್ನು ನೋಡಿ ಬೇಸರಪಡುತ್ತಿದ್ದಳು. ಆದರೆ ಈಗ ಆಕೆ ಇಂತಹ ಟ್ರೋಲ್‍ಗಳಿಗೆ ಹೆಚ್ಚು ಗಮನ ಕೊಡುವುದಿಲ್ಲ. ನನ್ನ ಮಗಳಿಗೆ ಇದನ್ನು ಹೇಗೆ ನಿಭಾಯಿಸಬೇಕು ಎನ್ನುವುದು ತಿಳಿದಿದೆ. ನಾವು ಏನೇ ಮಾಡಿದರೂ ಕೆಲವರು ನಮ್ಮನ್ನು ಜಡ್ಜ್ ಮಾಡಲು ಕಾಯುತ್ತಿರುತ್ತಾರೆ. ನಾವು ಪ್ರತಿಕ್ರಿಯೆ ನೀಡಿದರೆ, ಅವರು ಇನ್ನಷ್ಟು ಹೆಚ್ಚಾಗಿ ಪ್ರತಿಕ್ರಿಯಿಸುತ್ತಾರೆ ಎಂದು ಅಜಯ್ ತಮ್ಮ ಮಗಳ ಬಗ್ಗೆ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಭಿಮಾನಿಗಳಿಗೆ ಕಾಜೋಲ್ ವಾಟ್ಸಪ್ ನಂಬರ್ ಕೊಟ್ಟ ಅಜಯ್ ದೇವಗನ್!

    ಅಭಿಮಾನಿಗಳಿಗೆ ಕಾಜೋಲ್ ವಾಟ್ಸಪ್ ನಂಬರ್ ಕೊಟ್ಟ ಅಜಯ್ ದೇವಗನ್!

    ನವದೆಹಲಿ: ಬಾಲಿವುಡ್ ನಟ ಅಜಯ್ ದೇವಗನ್ ಅಭಿಮಾನಿಗಳ ಕಾಳೆಯಲು ಹೋಗಿ ಪತ್ನಿ ಕಾಜೋಲ್ ಅವರ ವಾಟ್ಸಪ್ ನಂಬರ್ ಅನ್ನು ಟ್ವಿಟ್ಟರ್‌ನಲ್ಲಿ ಹರಿಬಿಟ್ಟಿದ್ದಾರೆ.

    ಅಭಿಮಾನಿಗಳ ಜೊತೆಗಿನ ಚರ್ಚೆಯ ವೇಳೆ ಅಜಯ್, ಕಾಜೋಲ್ ಈಗ ದೇಶದಲ್ಲಿ ಇಲ್ಲ. ಅವರನ್ನು ಸಂಪರ್ಕಿಸಲು ಈ ನಂಬರ್ ಬಳಸಿ ಎಂದು ವಾಟ್ಸಪ್ ನಂಬರ್ ಟೈಪ್ ಮಾಡಿ ಎಂದು  ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿದ್ದರು.

    ಅಭಿಮಾನಿಗಳು ಕಾಜೋಲ್ ನಂಬರ್ ಸಿಕ್ಕಿದ್ದೇ ತಡ ಟ್ವೀಟ್ ಮಾಡಿದ್ದನ್ನು ಸ್ಕ್ರೀನ್‍ಶಾರ್ಟ್ ಮಾಡಿಕೊಂಡು ಕಾಜೋಲ್ ಅವರಿಗೆ ನಿಮ್ಮ ಪತಿ ನಂಬರ್ ನೀಡಿದ್ದಾರೆ ಎಂದು ಫೋಟೋವನ್ನು ಸೆಂಡ್ ಮಾಡಿದ್ದಾರೆ.

    ಸಿನಿಮಾ ಸೆಟ್‍ನಲ್ಲಿ ತಮಾಷೆಗಳು ಮಾಡಿ ಸಾಕಾಗಿತ್ತು. ಹೀಗಾಗಿ ಅಭಿಮಾನಿಗಳ ಮೂಲಕ ಕಾಲೆಳೆಯಲು ಪತ್ನಿಯ ನಂಬರ್ ಹಾಕಿದ್ದೇನೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಕಾಜೋಲ್ ಪ್ರತಿಕ್ರಿಯಿಸಿ, ನಿಮ್ಮ ಚೇಷ್ಟೆಗಳು ಸಿನಿಮಾ ಸೆಟ್‍ನಿಂದ ಹೊರಗೆ ಬಂದಂತೆ ಕಾಣುತ್ತಿದೆ. ಈ ರೀತಿಯ ಚೇಷ್ಟೆಗಳಿಗೆ ಮನೆಯಲ್ಲಿ ಪ್ರವೇಶವಿಲ್ಲ ಎಂದು ಬರೆದು ಕೊನೆಯಲ್ಲಿ ಕೋಪದ ಎಮೋಜಿಯನ್ನು ಹಾಕಿದ್ದಾರೆ.

    ಸದ್ಯ ಅಜಯ್ ದೇವಗಾನ್ ಅವರು ‘ತಾನಾಜೀ’ ಎಂಬ ಹೊಸ ಸಿನಿಮಾ ಚಿತ್ರಿಕರಣದಲ್ಲಿ ಬ್ಯುಸಿಯಾಗಿದ್ದಾರೆ. ನಟಿ ಕಾಜೋಲ್ ಅವರು ಕೂಡಾ ಬಹಳ ದಿನಗಳ ನಂತರ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಮ್ಮ ಬಂದಿದ್ದಾರೆ, ಯಾರು ಮನೆಗೆ ಕರೆದುಕೊಂಡು ಹೋಗ್ತೀರಾ: ಕಾಜೋಲ್

    ಅಮ್ಮ ಬಂದಿದ್ದಾರೆ, ಯಾರು ಮನೆಗೆ ಕರೆದುಕೊಂಡು ಹೋಗ್ತೀರಾ: ಕಾಜೋಲ್

    ಮುಂಬೈ: ಬಾಲಿವುಡ್ ನಟಿ ಕಾಜೋಲ್ ತನ್ನ ಪತಿ ಅಜಯ್ ದೇವ್‍ಗನ್ ನಟಿಸಿದ್ದ ‘ರೇಡ್’ ಚಿತ್ರದಲ್ಲಿ 85 ವರ್ಷದ ಸಹನಟಿ ಪುಷ್ಪಾ ಜೋಶಿ ಅವರ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

    ವಿಡಿಯೋದಲ್ಲಿ ಪುಷ್ಪಾ ಅವರು ವಯಸ್ಸಾದ ಕಾಲದಲ್ಲಿ ಮಕ್ಕಳ ಪದ್ಯವನ್ನು ಹಾಡುತ್ತಿದ್ದು, ಕಾಜೋಲ್ ಇದ್ದಕ್ಕೆ, “ಈಗ ಬಂದರು ಅಮ್ಮ.. ಇವರನ್ನು ಯಾರು ಮನೆಗೆ ಕರೆದುಕೊಂಡು ಹೋಗುತ್ತೀರಾ ಎಂದು ಬರೆದು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

    ಈ ಚಿತ್ರವನ್ನು ನಿರ್ದೇಶಕ ರಾಜ್‍ಕುಮಾರ್ ನಿರ್ದೇಶಿಸಿದ್ದು, ಬಿಡುಗಡೆಯಾದ 2 ದಿನದಲ್ಲಿ ಬಾಕ್ಸ್ ಆಫೀಸ್ ನಲ್ಲಿ 23 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈ ಚಿತ್ರದಲ್ಲಿ ಅಜಯ್ ದೇವ್‍ಗನ್ ಜೊತೆ ಸೌರಬ್ ಶುಕ್ಲಾ ಹಾಗೂ ಇಲಿಯಾನಾ ಡಿಕ್ರೂಜ್ ನಟಿಸಿದ್ದು, ಪ್ರೇಕ್ಷಕರಿಂದ ಮೆಚ್ಚುಗೆಗಳಿಸಿದೆ.

    ಚಿತ್ರದಲ್ಲಿ ಅಜಯ್ ಹಾಗೂ ಸೌರಭ್ ಮೆಚ್ಚುಗೆ ಪಡೆದರೆ, ಅಮ್ಮ(ಪುಷ್ಪಾ) ಚಿತ್ರದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ಅಜಯ್ ದೇವಗನ್ ಈ ಚಿತ್ರದಲ್ಲಿ ಲಕ್ನೋ ಆದಾಯ ತೆರಿಗೆ ಇಲಾಖೆಯ ಉಪ ಕಮಿಷನರ್ ಆಗಿ ನಟಿಸಿದ್ದು, ಪುಷ್ಪಾ ಅವರು ಈ ಚಿತ್ರದಲ್ಲಿ ಸೌರಭ್ ಅವರ ತಾಯಿಯಾಗಿ ನಟಿಸಿದ್ದಾರೆ. 1980ರಲ್ಲಿ ನಡೆದ ದೇಶದ ಅತೀ ದೊಡ್ಡ ರೇಡ್‍ನನ್ನು ಈ ಚಿತ್ರದಲ್ಲಿ ಚಿತ್ರಿಸಲಾಗಿದೆ.

    Here comes Amma… you will want to take her home. #Raid

    A post shared by Kajol Devgan (@kajol) on

  • ಅಜಯ್ ಜೊತೆ ನಟಿಸಲು ಸ್ಕ್ರಿಪ್ಟ್ ಓದದೇ ಚಿತ್ರಕ್ಕೆ ಸಹಿ ಹಾಕಿದ ನಟಿ

    ಅಜಯ್ ಜೊತೆ ನಟಿಸಲು ಸ್ಕ್ರಿಪ್ಟ್ ಓದದೇ ಚಿತ್ರಕ್ಕೆ ಸಹಿ ಹಾಕಿದ ನಟಿ

    ಮುಂಬೈ: ರೋಹಿತ್ ಶೆಟ್ಟಿ ನಿರ್ದೇಶನದ ಗೋಲ್‍ಮಾಲ್ ಚಿತ್ರದಲ್ಲಿ ಅಜಯ್ ದೇವಗನ್ ಜೊತೆ ಮತ್ತೆ ನಟಿಸುವ ಅವಕಾಶ ಸಿಕ್ಕಿದ್ದರಿಂದ ಕಥೆ ಓದದೇ ಚಿತ್ರಕ್ಕೆ ಸಹಿ ಹಾಕಿದ್ದೇನೆ ಎಂದು ಬಾಲಿವುಡ್ ನಟಿ ತಬು ಹೇಳಿಕೊಂಡಿದ್ದಾರೆ.

    ಮುಂಬೈನಲ್ಲಿ ಗೋಲ್‍ಮಾಲ್-4 ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ನಡೆಯಿತು. ಬಹುದಿನಗಳ ನಂತರ ರೋಹಿತ್ ಶೆಟ್ಟಿ ಮತ್ತೆ ನಿರ್ದೇಶನಕ್ಕೆ ಇಳಿದಿದ್ದಾರೆ. ಗೋಲ್‍ಮಾಲ್ ಸರಣಿಯ ಭಾಗ 4 ಸದ್ಯ ಬರುತ್ತಿದ್ದು, ಬಹುದಿನಗಳ ಮೇಲೆ ಬಾಲಿವುಡ್ ನಟಿ ತಬು ಬಣ್ಣ ಹಚ್ಚಿದ್ದಾರೆ.

    ನಾನು ತುಂಬಾ ದಿನಗಳಿಂದ ಬಣ್ಣ ಹಚ್ಚಿರಲಿಲ್ಲ. ಗೋಲ್‍ಮಾಲ್‍ನ ಒಂದನೇ ಸೀರಿಸ್ ನಲ್ಲಿ ನಾನು ನಟಿಸಿದ್ದೆ. ಚಿತ್ರ ಈಗ ನೋಡಿದರೂ ಅಷ್ಟೇ ನಗು ಬರುತ್ತದೆ. ಅಲ್ಲದೇ ಅಜಯ್ ದೇವಗನ್ ಮುಖ್ಯ ಪತ್ರದಲಿ ನಟಿಸಿದ್ದು, ಅವರ ಜೊತೆ ತುಂಬಾ ದಿನಗಳ ಕಾಲ ನಟಿಸಿರಲಿಲ್ಲ. ಆದರೆ ಈ ಚಿತ್ರದ ಮೂಲಕ ಮತ್ತೆ ಒಂದೇ ತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದೇವೆ ಎಂದು ತಬು ತಿಳಿಸಿದರು.

    ಈಗಾಗಲೇ ಮೂರು ಆವೃತ್ತಿಗಳಲ್ಲಿ ತೆರೆಕಂಡಿರೋ ಗೋಲ್ಮಾಲ್ ಈಗ ನಾಲ್ಕನೇಯ ಬಾರಿಗೆ ಮತ್ತೊಮ್ಮೆ ಅಭಿಮಾನಿಗಳನ್ನು ರಂಜಿಸಲು ಬರಲಿದೆ. ಸಿನಿಮಾ ಸೆಟ್ಟೇರಿದಾಗಿನಿಂದಲೂ ಕುತೂಹಲ ಹುಟ್ಟಿಸಿರುವ ಚಿತ್ರದ ಮೊದಲ ಟ್ರೇಲರ್ ಸೆಪ್ಟಂಬರ್ 29ರಂದು ಬಿಡುಗಡೆಯಾಗಲಿದೆ. 2006ರಲ್ಲಿ ಮೊದಲ ಬಾರಿಗೆ ಗೋಲ್ಮಾಲ್ ತೆರೆಕಂಡು ನೋಡುಗರನ್ನು ನಗಿಸುವ ಮೂಲಕ ಯಶಸ್ವಿಯಾಗಿತ್ತು. ಮುಂದೆ ಗೋಲ್ಮಾಲ್ ರಿಟರ್ನ್ (2008) ಮತ್ತು ಗೋಲ್ಮಾಲ್ (2010) ರಲ್ಲಿ ತೆರೆಕಂಡಿದ್ದವು. ಈಗ ಇದೇ ಸಿನಿಮಾದ ಮುಂದುವರೆದ ಭಾಗ ದೀಪಾವಳಿಯಂದು ದೇಶಾದ್ಯಂತ ಬಿಡುಗಡೆಯಾಗಲಿದೆ.

    ಗೋಲ್ಮಾಲ್ ಅಗೇನ್ ಸಿನಿಮಾದಲ್ಲಿ ಅಜಯ್ ದೇವಗನ್‍ಗೆ ಜೊತೆಯಾಗಿ ಪರಿಣೀತಿ ಚೋಪ್ರಾ ಜೋಡಿಯಾಗಿದ್ದಾರೆ. ಇನ್ನುಳಿದಂತೆ ಮೊದಲಿನ ಆವೃತ್ತಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಅರ್ಷದ್ ವಾರ್ಸಿ, ತುಶಾರ್ ಕಪೂರ್, ಕುನಾಳ್ ಕೇಮು ಸೇರಿದಂತೆ ದೊಡ್ಡ ತಾರಗಣವನ್ನು ಚಿತ್ರ ಹೊಂದಿದೆ. ಗೋಲ್ಮಾಲ್ ಅಗೇನ್‍ಗೆ ರೋಹಿತ್ ಶೆಟ್ಟಿ ಆ್ಯಕ್ಷನ್ ಕಟ್ ಹೇಳುವ ಜೊತೆಗೆ ಅಜಯ್ ದೇವಗನ್ ಜೊತೆಗೆ ಬಂಡವಾಳನ್ನೂ ಹೂಡಿದ್ದಾರೆ.

    https://www.instagram.com/p/BY93WjHFs_9/?tagged=golmaalagain

    https://www.instagram.com/p/BXuocLljX-c/?tagged=golmaalagain

    https://www.instagram.com/p/BY5yGhPH5io/?tagged=golmaalagain

    https://www.instagram.com/p/BY52bHEDCLo/?tagged=golmaalagain

    https://www.instagram.com/p/BY1bgkYDLZm/?tagged=golmaalagain

    https://www.instagram.com/p/BYtZV6slBaO/?tagged=golmaalagain

    https://www.instagram.com/p/BYflPLODeFW/?tagged=golmaalagain

    https://www.instagram.com/p/BYOIx7_Fef6/?tagged=golmaalagain

    https://www.instagram.com/p/BY9_5HJgSEz/?tagged=golmaalagain

  • ಅಭಿಮಾನಿಗಳಿಗೆ ದಸರಾ ಗಿಫ್ಟ್ ಕೊಡಲಿದ್ದಾರೆ ಅಜಯ್ ದೇವಗನ್!

    ಮುಂಬೈ: ನಟ ಅಜಯ್ ದೇವಗನ್ ತಮ್ಮ ದಸರಾ ಹಬ್ಬದಂದು ತಮ್ಮ ಮುಂಬರುವ `ಗೋಲ್ಮಾಲ್ ಅಗೇನ್’ ಚಿತ್ರದ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಿಗೆ ಹಬ್ಬದ ಗಿಫ್ಟ್ ಕೊಡಲಿದ್ದಾರೆ.

    ಕಳೆದ ವಾರ ತೆರೆಕಂಡಿರೋ ಅಜಯ್ ನಟನೆಯ `ಬಾದ್ ಶಾಹೋ’ ಬಾಕ್ಸ್ ಆಫೀಸ್ ನಲ್ಲಿ ಹಣ ದೋಚುತ್ತಿದೆ. ಸಿನಿಮಾ ಇದೂವರೆಗೂ ಬರೋಬ್ಬರಿ 70 ಕೋಟಿ ರೂ.ಗೆ ಅಧಿಕ ಸಂಪಾದನೆ ಮಾಡಿದೆ ಎಂದು ಚಿತ್ರದ ಮೂಲಗಳು ಸ್ಪಷ್ಟಪಡಿಸಿವೆ.

    ಈಗಾಗಲೇ ಮೂರು ಆವೃತ್ತಿಗಳಲ್ಲಿ ತೆರೆಕಂಡಿರೋ ಗೋಲ್ಮಾಲ್ ಈಗ ನಾಲ್ಕನೇಯ ಬಾರಿಗೆ ಮತ್ತೊಮ್ಮೆ ಅಭಿಮಾನಿಗಳನ್ನು ರಂಜಿಸಲು ಬರಲಿದೆ. ಸಿನಿಮಾ ಸೆಟ್ಟೇರಿದಾಗಿನಿಂದಲೂ ಕುತೂಹಲ ಹುಟ್ಟಿಸಿರುವ ಚಿತ್ರದ ಮೊದಲ ಟ್ರೇಲರ್ ಸೆಪ್ಟಂಬರ್ 29ರಂದು ಬಿಡುಗಡೆಯಾಗಲಿದೆ. 2006ರಲ್ಲಿ ಮೊದಲ ಬಾರಿಗೆ ಗೋಲ್ಮಾಲ್ ತೆರೆಕಂಡು ನೋಡುಗರನ್ನು ನಗಿಸುವ ಮೂಲಕ ಯಶಸ್ವಿಯಾಗಿತ್ತು. ಮುಂದೆ ಗೋಲ್ಮಾಲ್ ರಿಟರ್ನ್ (2008) ಮತ್ತು ಗೋಲ್ಮಾಲ್ (2010) ರಲ್ಲಿ ತೆರೆಕಂಡಿದ್ದವು. ಈಗ ಇದೇ ಸಿನಿಮಾದ ಮುಂದುವರೆದ ಭಾಗ ದೀಪಾವಳಿಯಂದು ದೇಶಾದ್ಯಂತ ಬಿಡುಗೆಯಗಾಲಿದೆ.

    ಗೋಲ್ಮಾಲ್ ಅಗೇನ್ ಸಿನಿಮಾದಲ್ಲಿ ಅಜಯ್ ದೇವಗನ್‍ಗೆ ಜೊತೆಯಾಗಿ ಪರಿಣೀತಿ ಚೋಪ್ರಾ ಜೋಡಿಯಾಗಿದ್ದಾರೆ. ಇನ್ನುಳಿದಂತೆ ಮೊದಲಿನ ಆವೃತ್ತಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಅರ್ಷದ್ ವಾರ್ಸಿ, ತುಶಾರ್ ಕಪೂರ್, ಕುನಾಳ್ ಕೇಮು ಸೇರಿದಂತೆ ದೊಡ್ಡ ತಾರಗಣವನ್ನು ಚಿತ್ರ ಹೊಂದಿದೆ. ಗೋಲ್ಮಾಲ್ ಅಗೇನ್‍ಗೆ ರೋಹಿತ್ ಶೆಟ್ಟಿ ಆ್ಯಕ್ಷನ್ ಕಟ್ ಹೇಳುವ ಜೊತೆಗೆ ಅಜಯ್ ದೇವಗನ್ ಜೊತೆಗೆ ಬಂಡವಾಳನ್ನೂ ಹೂಡಿದ್ದಾರೆ.

    https://www.instagram.com/p/BY93WjHFs_9/?tagged=golmaalagain

    https://www.instagram.com/p/BY9_5HJgSEz/?tagged=golmaalagain

    https://www.instagram.com/p/BXuocLljX-c/?tagged=golmaalagain

    https://www.instagram.com/p/BY5yGhPH5io/?tagged=golmaalagain

    https://www.instagram.com/p/BY52bHEDCLo/?tagged=golmaalagain

    https://www.instagram.com/p/BY1bgkYDLZm/?tagged=golmaalagain

    https://www.instagram.com/p/BYtZV6slBaO/?tagged=golmaalagain

    https://www.instagram.com/p/BYflPLODeFW/?tagged=golmaalagain

    https://www.instagram.com/p/BYOIx7_Fef6/?tagged=golmaalagain

  • ಕಪಿಲ್ ಶರ್ಮಾ ಶೋದಿಂದ ಹೊರ ಬಂದ ಅಜಯ್ ಹೇಳಿದ್ದೇನು?

    ಕಪಿಲ್ ಶರ್ಮಾ ಶೋದಿಂದ ಹೊರ ಬಂದ ಅಜಯ್ ಹೇಳಿದ್ದೇನು?

    ಮುಂಬೈ: ಇತ್ತೀಚಿಗೆ ಅಜಯ್ ದೇವ್‍ಗನ್ ತಮ್ಮ ಬಾದ್‍ಶಾವೋ ಚಿತ್ರದ ಪ್ರಮೋಷನ್‍ಗಾಗಿ ಕಪಿಲ್ ಶರ್ಮಾ ಶೋಗೆ ತೆರಳಿದ್ದರು. ಕಪಿಲ್ ಅನಾರೋಗ್ಯದ ಕಾರಣದಿಂದಾಗಿ ಶೂಟಿಂಗ್‍ನನ್ನು ರದ್ದುಗೊಳಿಸಿದ್ದರಿಂದ ಅಜಯ್ ದೇವ್‍ಗನ್ ಕೋಪಗೊಂಡಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಈ ಸುದ್ದಿಗೆ ನಟ ಅಜಯ್ ದೇವ್‍ಗನ್ ಪ್ರತಿಕ್ರಿಯಿಸಿದ್ದಾರೆ.

    ಅಜಯ್ ದೇವ್‍ಗನ್ ತಮ್ಮ ಮುಂಬರುವ ‘ಬಾದ್‍ಶಾವೋ’ ಚಿತ್ರದ ಪ್ರಮೋಷನ್‍ಗಾಗಿ ಕಪಿಲ್ ಶರ್ಮಾ ಶೋಗೆ ಹೋಗಿದ್ದರು. ಕೊನೆಯ ನಿಮಿಷದಲ್ಲಿ ಕಪಿಲ್ ಶೋವನ್ನು ರದ್ದುಗೊಳಿಸಿದ ಕಾರಣ ಅಜಯ್ ಕೋಪದಿಂದ ಕಪಿಲ್ ಶರ್ಮಾ ಶೋನಿಂದ ಹೊರಟು ಹೋದರು ಎಂದು ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು.

     

    ಅಲ್ಲಿ ಏನಾಯಿತು ಎಂದು ನನಗೆ ಸರಿಯಾಗಿ ಗೊತ್ತಿಲ್ಲ. ಆದರೆ ಪತ್ರಿಕೆಗಳಲ್ಲಿ ನಾವು ಕೋಪದಿಂದ ಹೊರಟು ಹೋದೆವು ಎಂದು ಹೇಳಲಾಗಿತ್ತು. ಇದು ನಿಜವಲ್ಲ ಕಪಿಲ್ ಶೋನ ಸೆಟ್‍ಗೆ ಇನ್ನೂ ಬಂದಿಲ್ಲದ ಕಾರಣ ನಾವು ಹೊರ ಬಂದಿದ್ದೇವೆ. ಕಪಿಲ್ ನನಗೆ ಒಳ್ಳೆಯ ಸ್ನೇಹಿತ. ಮುಂದಿನ ಬಾರಿ ಕಪಿಲ್‍ನನ್ನು ಭೇಟಿಯಾದಾಗ ಏನಾಯಿತು ಎಂದು ಕೇಳುತ್ತೇನೆ. ಕಪಿಲ್ ಯಾವುದೋ ತೊಂದರೆಯಲ್ಲಿ ಇದ್ದಾರೆ ಎಂದು ಅಜಯ್ ಸ್ಪಷ್ಟಪಡಿಸಿದ್ದಾರೆ.

    ಈ ಮೊದಲು ಶಾರೂಖ್ ಖಾನ್ ಮತ್ತು ಅನುಷ್ಕಾ ಶರ್ಮಾ ಜಬ್ ಹ್ಯಾರಿ ಮೇಟ್ ಸೆಜಲ್ ಚಿತ್ರದ ಪ್ರಮೋಷನ್‍ಗಾಗಿ ಕಪಿಲ್ ಶರ್ಮಾ ಶೋಗೆ ತೆರಳಿದ್ದ ವೇಳೆಯೂ ಇದೇ ರೀತಿಯಾಗಿ ಶೋ ರದ್ದಾಗಿತ್ತು. ಆದರೆ ಈ ಬಗ್ಗೆ ಶಾರೂಖ್ ಖಾನ್ ಇದೂವರೆಗೂ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಆದರೆ ಕಪಿಲ್ ಮಾತ್ರ ತಮ್ಮ ಟ್ವಿಟರ್ ನಲ್ಲಿ ಅನಾರೋಗ್ಯದ ಕಾರಣ ಕೊನೆಯ ಕ್ಷಣದಲ್ಲಿ ಕಾರ್ಯಕ್ರಮ ರದ್ದಾಯಿತು ಎಂದು ತಿಳಿಸಿದ್ದರು.

    ಇದನ್ನೂ ಓದಿ: ಕಪಿಲ್ ಶರ್ಮಾ ಶೋನಿಂದ ಕೋಪಗೊಂಡು ಹೊರಬಂದ ಅಜಯ್ ದೇವ್‍ಗನ್