Tag: airtel

  • ಚೀನಾ ಗಡಿ ಸಂಘರ್ಷ – ಮೊಬೈಲ್ ಸಂಪರ್ಕ ಸುಧಾರಣೆಗೆ ತವಾಂಗ್‌ನಲ್ಲಿ 22 ಟವರ್

    ಚೀನಾ ಗಡಿ ಸಂಘರ್ಷ – ಮೊಬೈಲ್ ಸಂಪರ್ಕ ಸುಧಾರಣೆಗೆ ತವಾಂಗ್‌ನಲ್ಲಿ 22 ಟವರ್

    ಇಟಾನಗರ: ಭಾರತ-ಚೀನಾ (India – China) ಬೆನ್ನಲ್ಲೇ ಅರುಣಾಚಲ ಪ್ರದೇಶದ (Arunachal Pradesh) ತವಾಂಗ್ ಜಿಲ್ಲೆಯ ಚೀನಾ ಗಡಿರೇಖೆ (LAC) ಬಳಿ ಉತ್ತಮ ಸಂಪರ್ಕಕ್ಕಾಗಿ 22 ಮೊಬೈಲ್ ಟವರ್‌ಗಳನ್ನು (Mobile Towers) ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ.

    ಈ ಕುರಿತು ಮಾತನಾಡಿದ ತವಾಂಗ್ ಜಿಲ್ಲಾಧಿಕಾರಿ ಕೆಸಾಂಗ್ ಗ್ನುರುಪ್ ದಾಮೊ, `ಈಗಿರುವ ಟವರ್‌ಗಳು ನಿರೀಕ್ಷಿತ ಸೇವೆ ನೀಡುತ್ತಿಲ್ಲ. ರಕ್ಷಣಾ ಪಡೆ ಮಾತ್ರವಲ್ಲದೇ ನಾಗರಿಕರಿಗೂ ಇದರಿಂದ ತೊಂದರೆಯುಂಟಾಗುತ್ತಿದೆ. ಹಾಗಾಗಿ ಗಡಿ ಪ್ರದೇಶಗಳಲ್ಲಿ ಮೊಬೈಲ್ ಸಂಪರ್ಕವನ್ನು ಸುಧಾರಿಸಲು 22 ಟವರ್‌ಗಳ ಸ್ಥಾಪನೆಗೆ ಸರ್ಕಾರ ಮುಂದಾಗಿದೆ. ಒಟ್ಟು 43 ಟವರ್‌ಗಳ ಸ್ಥಾಪನೆಗೆ ಬೇಡಿಕೆ ಸಲ್ಲಿಸಲಾಗಿತ್ತು. ಈ ಪೈಕಿ ಕೇಂದ್ರ ಸರ್ಕಾರ 22 ಟವರ್ ಸ್ಥಾಪಿಸಲು ಅನುಮತಿಸಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಅಫ್ಘಾನ್‌ ವಿದ್ಯಾರ್ಥಿನಿಯರಿಗೆ ವಿಶ್ವವಿದ್ಯಾನಿಲಯ ಶಿಕ್ಷಣಕ್ಕೂ ಅವಕಾಶವಿಲ್ಲ

    ಚುನಾ, ಯಾಂಗ್‌ಟ್ಸೆ, ದಮ್‌ಟೆಂಗ್ ಬುಮ್ಲಾ, ಕ್ಲೆಮ್ಟಾ, ವೈ ಜಂಕ್ಷನ್, ಟಿ ಗೊಂಪಾ ಪ್ರದೇಶ, ಲುಂಪೊ, ಜೆಮಿತಾಂಗ್ ಗಡಿ ಪ್ರದೇಶಗಳಲ್ಲಿ ಏರ್‌ಟೇಲ್ ಹಾಗೂ ಬಿಎಸ್‌ಎನ್‌ಎಲ್ ಸಂಸ್ಥೆಗಳಿಗೆ ಟವರ್ ನಿರ್ಮಾಣ ಮಾಡುವ ಜವಾಬ್ದಾರಿ ನೀಡಿದೆ. ಈ ಪೈಕಿ ಬಿಎಸ್‌ಎನ್‌ಎಲ್ (BSNL) 18 ಟವರ್ ಹಾಗೂ ಏರ್‌ಟೆಲ್ (Airtel) 4 ಟವರ್‌ಗಳನ್ನು ನಿರ್ಮಾಣ ಮಾಡಲಿದೆ ಎಂದು ದಾಮೊ ತಿಳಿಸಿದ್ದಾರೆ. ಇದನ್ನೂ ಓದಿ: ಆಸ್ಪತ್ರೆಗಳು ಭರ್ತಿ, ಸ್ಮಶಾನದಲ್ಲಿ ಶವಗಳ ರಾಶಿ – ಚೀನಾದಲ್ಲಿ ಕೋವಿಡ್‌ ಸುನಾಮಿಗೆ ಕಾರಣ ಏನು?

    Live Tv

    [brid partner=56869869 player=32851 video=960834 autoplay=true]

  • ಏರ್‌ಟೆಲ್‌ ಪ್ಯಾಕ್‌ ದರ ಏರಿಕೆ: ಶೀಘ್ರವೇ ಮೊಬೈಲ್‌ ರಿಚಾರ್ಜ್‌ ದುಬಾರಿ

    ಏರ್‌ಟೆಲ್‌ ಪ್ಯಾಕ್‌ ದರ ಏರಿಕೆ: ಶೀಘ್ರವೇ ಮೊಬೈಲ್‌ ರಿಚಾರ್ಜ್‌ ದುಬಾರಿ

    ನವದೆಹಲಿ: ಶೀಘ್ರವೇ ಟೆಲಿಕಾಂ(Telecom) ಕಂಪನಿಗಳು ತಮ್ಮ ಪ್ಯಾಕ್‌ಗಳ ದರಗಳನ್ನು ಏರಿಸುವ ಸಾಧ್ಯತೆಯಿದೆ.

    ಈಗಾಗಲೇ ಏರ್‌ಟೆಲ್‌(Airtel) ಕಂಪನಿ ಎರಡು ಸರ್ಕಲ್‌ನಲ್ಲಿ ಶೇ.57ರಷ್ಟು ದರವನ್ನು ಏರಿಸಿದ್ದು ಉಳಿದ ಕಂಪನಿಗಳು ಏರ್‌ಟೆಲ್‌ ಕ್ರಮವನ್ನು ಅನುಸರಿಸುವ ಸಾಧ್ಯತೆಯಿದೆ. ಇದನ್ನೂ ಓದಿ: ಶೀಘ್ರವೇ ಭಾರತದ ಎಲ್ಲಾ ಸ್ಮಾರ್ಟ್‌ಫೋನ್‌ಗಳಿಗೆ ಏಕರೂಪದ ಚಾರ್ಜರ್

    ಹರ್ಯಾಣ ಮತ್ತು ಒಡಿಶಾ ಸರ್ಕಲ್‌ನಲ್ಲಿ ಏರ್‌ಟೆಲ್‌ ಕನಿಷ್ಟ ರಿಚಾರ್ಚ್‌ ದರವನ್ನು ಶೇ.57ರಷ್ಟು ಏರಿಕೆ ಮಾಡಿದೆ. ಈ ಮೊದಲು 99 ರೂ. ರಿಚಾರ್ಜ್‌ ಮಾಡಿದರೆ 28 ದಿನಗಳ ವ್ಯಾಲಿಡಿಟಿ, 99 ರೂ. ಟಾಕ್‌ ಟೈಂ ಮತ್ತು 200 ಎಂಬಿ ಡೇಟಾ ಸಿಗುತ್ತಿತ್ತು. ಈಗ ಈ ಪ್ಯಾಕ್‌ ದರವನ್ನು155 ರೂ.ಗೆ ಏರಿಕೆ ಮಾಡಲಾಗಿದೆ.  28 ದಿನಗಳ ವ್ಯಾಲಿಡಿಟಿಯ ಜೊತೆಗೆ ಹೆಚ್ಚುವರಿಯಾಗಿ ಅನ್‌ಲಿಮಿಟೆಡ್‌ ಕಾಲ್‌ ಮತ್ತು 1 ಜಿಬಿ ಡೇಟಾ ಮತ್ತು 300 ಉಚಿತ ಎಸ್‌ಎಂಎಸ್‌ ನೀಡಿದೆ.

    Live Tv
    [brid partner=56869869 player=32851 video=960834 autoplay=true]

  • ದೇಶದಲ್ಲಿ 5G ಸೇವೆಗೆ ಚಾಲನೆ – ಯಾವ ನಗರಗಳಲ್ಲಿ ಆರಂಭದಲ್ಲಿ ಸಿಗುತ್ತೆ? ಎಷ್ಟು ಸ್ಪೀಡ್ ಇರುತ್ತೆ?

    ದೇಶದಲ್ಲಿ 5G ಸೇವೆಗೆ ಚಾಲನೆ – ಯಾವ ನಗರಗಳಲ್ಲಿ ಆರಂಭದಲ್ಲಿ ಸಿಗುತ್ತೆ? ಎಷ್ಟು ಸ್ಪೀಡ್ ಇರುತ್ತೆ?

    ನವದೆಹಲಿ: ಬಹು ನಿರೀಕ್ಷಿತ ನೆಟ್‍ವರ್ಕ್ ಕ್ರಾಂತಿ 5ಜಿ (5G) ಸೇವೆಗಳು ಇಂದಿನಿಂದ ಭಾರತದಲ್ಲಿ ಆರಂಭವಾಗಿದೆ. ಇಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 5ಜಿ ಸೇವೆಗೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.

    6ನೇ ಆವೃತ್ತಿಯ ಇಂಡಿಯಾ ಮೊಬೈಲ್ ಕಾಂಗ್ರೆಸ್ 2022  (6th Edition of India Mobile Congress 2022 Event) ಈವೆಂಟ್‍ನಲ್ಲಿ 5ಜಿ ಸೇವೆಗಳನ್ನು ಉದ್ಘಾಟಿಸಲಾಯಿತು. ದೆಹಲಿಯ ಪ್ರಗತಿ ಮೈದಾನದಲ್ಲಿ 4 ದಿನಗಳ ಕಾಲ ಇಂಡಿಯಾ ಮೊಬೈಲ್ ಕಾಂಗ್ರೆಸ್ ನಡೆಯುತ್ತಿದೆ. 5ಜಿ ಉದ್ಘಾಟನೆಯ ಬಳಿಕ ಭಾರತದಲ್ಲಿ 5ಜಿ ತಂತ್ರಜ್ಞಾನದ ಸಾಮರ್ಥ್ಯವನ್ನು ತೋರಿಸಲು ದೇಶದ ಮೂರು ಪ್ರಮುಖ ಟೆಲಿಕಾಂ ಆಪರೇಟರ್‌ಗಳು ಪ್ರಾತ್ಯಕ್ಷಿಕೆ ನೀಡಿದವು. ರಿಲಯನ್ಸ್ ಜಿಯೋ ಮುಂಬೈನ ಶಾಲೆಯೊಂದರ ಶಿಕ್ಷಕರನ್ನು ಮಹಾರಾಷ್ಟ್ರ, ಗುಜರಾತ್ ಮತ್ತು ಒಡಿಶಾದ ಮೂರು ವಿಭಿನ್ನ ಸ್ಥಳಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಸಂಪರ್ಕಿಸಿ ಶಿಕ್ಷಕರನ್ನು ವಿದ್ಯಾರ್ಥಿಗಳಿಗೆ ಹತ್ತಿರ ತರುವ ಮೂಲಕ, ಅವರ ನಡುವಿನ ಭೌತಿಕ ಅಂತರವನ್ನು ಕಡಿಮೆ ಮಾಡುವ ಮೂಲಕ 5ಜಿ ಶಿಕ್ಷಣವನ್ನು ಹೇಗೆ ಸುಗಮಗೊಳಿಸುತ್ತದೆ ಎಂಬುದನ್ನು ಇದು ತೋರಿಸಿದೆ. ಇದನ್ನೂ ಓದಿ: ನಾಗಾಲ್ಯಾಂಡ್‌ನ 9 ಜಿಲ್ಲೆಗಳಲ್ಲಿ AFSPA ಜಾರಿ

    ಸ್ಕ್ರೀನ್ ಮೇಲೆ ವರ್ಧಿತ ರಿಯಾಲಿಟಿ ಎಆರ್ ಶಕ್ತಿಯನ್ನು ಪ್ರದರ್ಶಿಸುತ್ತದೆ. ಎಆರ್ ಸಾಧನದ ಅಗತ್ಯವಿಲ್ಲದೆ ದೂರದಿಂದಲೇ ದೇಶಾದ್ಯಂತ ಮಕ್ಕಳಿಗೆ ಕಲಿಸಲು ಅದನ್ನು ಹೇಗೆ ಬಳಸಲಾಗುತ್ತಿದೆ ಎಂಬುದನ್ನು ಇದು ತೋರಿಸಿದೆ. ಏರ್‍ಟೆಲ್ ಆಪರೇಟರ್ ಉತ್ತರ ಪ್ರದೇಶದ ಹುಡುಗಿಯೊಬ್ಬಳು ವರ್ಚುವಲ್ ರಿಯಾಲಿಟಿ ಮತ್ತು ಆಗ್ಮೆಂಟೆಡ್ ರಿಯಾಲಿಟಿ ಸಹಾಯದಿಂದ ಸೌರವ್ಯೂಹದ ಬಗ್ಗೆ ಕಲಿಯವ ಶಿಕ್ಷಣದ ಅನುಭವವನ್ನು ವೀಕ್ಷಿಸುತ್ತಾಳೆ. ಹಾಲೊಗ್ರಾಮ್ ಮೂಲಕ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಹುಡುಗಿ ತನ್ನ ಕಲಿಕೆಯ ಅನುಭವವನ್ನು ಪ್ರಧಾನಿಯೊಂದಿಗೆ ಹಂಚಿಕೊಂಡಿದ್ದಾಳೆ. ವೊಡಾಫೋನ್ ಐಡಿಯಾವು (Vodafone Idea) ದೆಹಲಿ ಮೆಟ್ರೋದ ನಿರ್ಮಾಣ ಹಂತದಲ್ಲಿರುವ ಸುರಂಗದಲ್ಲಿ ಸುರಂಗದ ಡಿಜಿಟಲ್ ಟ್ವಿನ್ ಅನ್ನು ಡಯಾಸ್‍ನಲ್ಲಿ ರಚಿಸುವ ಮೂಲಕ ಕಾರ್ಮಿಕರ ಸುರಕ್ಷತೆಯನ್ನು ಪ್ರದರ್ಶಿಸಿದೆ. ದೂರದ ಸ್ಥಳದಿಂದ ನೈಜ ಸಮಯದಲ್ಲಿ ಕಾರ್ಮಿಕರಿಗೆ ಸುರಕ್ಷತೆ ಎಚ್ಚರಿಕೆಗಳನ್ನು ನೀಡಲು ಡಿಜಿಟಲ್ ಟ್ವಿನ್ ಸಹಾಯ ಮಾಡುತ್ತದೆ. ವಿಆರ್ ಮತ್ತು ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ನೈಜ ಸಮಯದಲ್ಲಿ ಕೆಲಸವನ್ನು ಮೇಲ್ವಿಚಾರಣೆ ಮಾಡುವ ಬಗ್ಗೆ ಇರುವ ಪ್ರಾತ್ಯಕ್ಷಿಕೆ ಇದಾಗಿತ್ತು. ಇದನ್ನೂ ಓದಿ: ಹೈಕೋರ್ಟ್ ವಕೀಲ ಆತ್ಮಹತ್ಯೆ- ಕೋರ್ಟ್ ಕೊಠಡಿ ಧ್ವಂಸ

    ಯಾವೆಲ್ಲ ನಗರದಲ್ಲಿ 5ಜಿ?:
    ದೇಶದ ಒಟ್ಟು 12 ನಗರಗಳಾದ ದೆಹಲಿ, ಬೆಂಗಳೂರು, ಅಹಮದಾಬಾದ್, ಚಂಡೀಗಢ, ಚೆನ್ನೈ, ಕೋಲ್ಕತ್ತಾ, ಪುಣೆ, ಗಾಂಧಿನಗರ, ಗುರುಗ್ರಾಮ್, ಹೈದರಾಬಾದ್, ಜಾಮನಗರ, ಲಕ್ನೋದಲ್ಲಿ ಸೇವೆ ಆರಂಭಗೊಂಡಿದೆ. ಇದನ್ನೂ ಓದಿ: ಸಿಮ್ ಕಾರ್ಡ್, ಒಟಿಟಿ ಸೇವೆಗೆ ನಕಲಿ ದಾಖಲೆ ಕೊಟ್ರೆ ಬೀಳುತ್ತೆ 50 ಸಾವಿರ ದಂಡ,1 ವರ್ಷ ಜೈಲು

    5ಜಿ ಲಾಭಗಳೇನು?:
    5ಜಿ ತಂತ್ರಜ್ಞಾನವು ಸಾಮಾನ್ಯ ಜನರಿಗೆ ತಡೆರಹಿತ ಇಂಟರ್‌ನೆಟ್‌ ಸೇವೆ ನೀಡಲಿದೆ. ಕಡಿಮೆ ಸುಪ್ತತೆ ಮತ್ತು ಹೆಚ್ಚು ವಿಶ್ವಾಸಾರ್ಹ ಸಂವಹನಗಳನ್ನು ಒದಗಿಸಲು ಸಹಾಯ ಮಾಡಲಿದೆ. 5ಜಿ ಶತಕೋಟಿ ಇಂಟರ್‌ನೆಟ್‌ ಆಫ್ ಥಿಂಗ್ಸ್ ಡಿವೈಸ್‍ಗಳನ್ನು ಸಂಪರ್ಕಿಸಲು ಸಹಾಯ ಮಾಡುತ್ತದೆ. ಹೆಚ್ಚಿನ ವೇಗದಲ್ಲಿ ಚಲನಶೀಲತೆಯೊಂದಿಗೆ ಉತ್ತಮ ಗುಣಮಟ್ಟದ ವೀಡಿಯೋ ಸೇವೆಗಳನ್ನು, ಟೆಲಿ-ಸರ್ಜರಿ ಮತ್ತು ಆಟೋನಾಮಸ್ ಕಾರುಗಳಂತಹ ನಿರ್ಣಾಯಕ ಸೇವೆಗಳ ವಿತರಣೆಯನ್ನು ಅನುಮತಿಸುತ್ತದೆ. 5ಜಿ ಸೇವೆ ವಿಪತ್ತುಗಳ ನೈಜ ಸಮಯದ ಮೇಲ್ವಿಚಾರಣೆ, ನಿಖರವಾದ ಕೃಷಿ, ಆಳವಾದ ಗಣಿಗಳಲ್ಲಿ, ಕಡಲಾಚೆಯ ಚಟುವಟಿಕೆಗಳಲ್ಲಿ ಅಪಾಯಕಾರಿ ಕೈಗಾರಿಕಾ ಕಾರ್ಯಾಚರಣೆಗಳಲ್ಲಿ ಮಾನವರ ಪಾತ್ರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈಗಿರುವ ಮೊಬೈಲ್ ಸಂವಹನ ನೆಟ್‍ವರ್ಕ್‍ಗಳಿಗಿಂತ ಭಿನ್ನವಾಗಿ, 5ಜಿ ನೆಟ್‍ವರ್ಕ್‍ಗಳು ಒಂದೇ ನೆಟ್‍ವರ್ಕ್‍ನಲ್ಲಿ ಈ ಪ್ರತಿಯೊಂದು ವಿಭಿನ್ನ ಬಳಕೆಯ ಸಂದರ್ಭಗಳಿಗೆ ತಕ್ಕಂತೆ ಕಾರ್ಯನಿರ್ವಹಿಸುತ್ತವೆ.

    5ಜಿ ವಿಶೇಷತೆ?:
    4ಜಿ (4G) ಗರಿಷ್ಠ ವೇಗವು 100 ಎಂಬಿಪಿಎಸ್ (ಮೆಗಾ ಬಿಟ್ಸ್ ಪರ್ ಸೆಕೆಂಡ್) ಇದ್ದರೆ, 5ಜಿಯಲ್ಲಿ ಗರಿಷ್ಠ ವೇಗವು 20ಜಿಬಿಪಿಎಸ್ (ಸೆಕೆಂಡಿಗೆ 20 ಗಿಗಾಬಿಟ್ಸ್) ವರೆಗೂ ಇದೆ. 5ಜಿ ಹೊಸ ಆರ್ಥಿಕ ಅವಕಾಶಗಳು ಮತ್ತು ಸಾಮಾಜಿಕ ಪ್ರಯೋಜನಗಳನ್ನು ನೀಡಲಿದೆ. ಭಾರತೀಯ ಸಮಾಜಕ್ಕೆ ಪರಿವರ್ತನಾ ಶಕ್ತಿಯಾಗುವ ಸಾಮರ್ಥ್ಯವನ್ನು ನೀಡುತ್ತದೆ.

    ಏರ್‌ಟೆಲ್‌ (Airtel)  ಇಂದು 8 ನಗರಗಳಲ್ಲಿ 5ಜಿ ಸೇವೆಗಳನ್ನು ಪ್ರಾರಂಭಿಸುತ್ತಿದೆ. ಶನಿವಾರ ನಾಲ್ಕು ಮಹಾನಗರಗಳು ಸೇರಿದಂತೆ ಎಂಟು ನಗರಗಳಲ್ಲಿ 5ಜಿ ಟೆಲಿಕಾಂ ಸೇವೆಗಳನ್ನು ಪ್ರಾರಂಭಿಸುತ್ತಿದೆ. ಮತ್ತು ಮಾರ್ಚ್ 2024ರ ವೇಳೆಗೆ ಇಡೀ ದೇಶದಲ್ಲಿ ಹಂತಹಂತವಾಗಿ ಆವರಿಸಲಿದೆ ಎಂದು ಅಧ್ಯಕ್ಷ ಸುನಿಲ್ ಭಾರ್ತಿ ಮಿತ್ತಲ್ (Sunil Bharti Mittal) ಭರವಸೆ ನೀಡಿದರು. ಇದನ್ನೂ ಓದಿ: ಶೀಘ್ರವೇ 5G ಸೇವೆ ಆರಂಭ – ನಿಮ್ಮ ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

    ಜಿಯೋ ಮುಖ್ಯಸ್ಥ ಮುಖೇಶ್ ಅಂಬಾನಿ (Mukesh Ambani) ಮಾತನಾಡಿ, ತಮ್ಮ ಟೆಲಿಕಾಂ ಸಂಸ್ಥೆ ರಿಲಯನ್ಸ್ ಜಿಯೋ (Reliance Jio) ಡಿಸೆಂಬರ್ 2023ರ ವೇಳೆಗೆ ದೇಶಾದ್ಯಂತ 5ಜಿ ಸೇವೆಗಳನ್ನು ಪ್ರಾರಂಭಿಸಲಿದೆ ಎಂದು ಘೋಷಿಸಿದರು.

    Live Tv
    [brid partner=56869869 player=32851 video=960834 autoplay=true]

  • 10 ಸಾವಿರ ಟವರ್‌ ಮಾರಾಟಕ್ಕೆ ಮುಂದಾದ ಬಿಎಸ್‌ಎನ್‌ಎಲ್‌

    10 ಸಾವಿರ ಟವರ್‌ ಮಾರಾಟಕ್ಕೆ ಮುಂದಾದ ಬಿಎಸ್‌ಎನ್‌ಎಲ್‌

    ನವದೆಹಲಿ: ಭಾರತ್ ಸಂಚಾರ್ ನಿಗಮ್ ಲಿಮಿಟೆಡ್(BSNL) ತನ್ನ 10 ಸಾವಿರ ಟೆಲಿಕಾಂ ಟವರ್‌ಗಳನ್ನು ಮಾರಾಟ ಮಾಡಲು ಮುಂದಾಗಿದೆ.

    ಕೇಂದ್ರ ಸರ್ಕಾರದ ರಾಷ್ಟ್ರೀಯ ಆಸ್ತಿ ನಗದೀಕರಣ(NMP) ಭಾಗವಾಗಿ ನಿಗದಿ ಪಡಿಸಿದ ಗುರಿಗಳನ್ನು ಪೂರೈಸಲು ಟವರ್‌ ಮಾರಾಟ ಮಾಡುವ ಪ್ರಕ್ರಿಯೆಯನ್ನು ಬಿಎಸ್‌ಎನ್‌ಎಲ್‌ ಆರಂಭಿಸಿದೆ ಎಂದು ವರದಿಯಾಗಿದೆ.

    ಟವರ್‌ ಮಾರಾಟದಿಂದ 4 ಸಾವಿರ ಕೋಟಿ ರೂ. ಆದಾಯವನ್ನು ಬಿಎಸ್‌ಎನ್‌ಎಲ್‌ ನಿರೀಕ್ಷಿಸುತ್ತಿದೆ. ಮಾರಾಟ ನಿರ್ವಹಣೆಗೆ ಹಣಕಾಸು ಸಲಹೆ ಪಡೆಯಲು ಹಣಕಾಸು, ವ್ಯಾಪಾರ, ತೆರಿಗೆ ಇತ್ಯಾದಿ ಸೇವೆಗಳನ್ನು ನೀಡುತ್ತಿರುವ ಜಾಗತಿಕ ಕೆಪಿಎಂಜಿ(KPMG) ಕಂಪನಿ ಜೊತೆ ಬಿಎಸ್‌ಎನ್‌ಎಲ್‌ ಈಗ ಮಾತುಕತೆ ನಡೆಸುತ್ತಿದೆ.

    ಮುಂಬೈ ಮತ್ತು ದೆಹಲಿ ಹೊರತುಪಡಿಸಿ ದೇಶದ ಎಲ್ಲಾ ಭಾಗಗಳಲ್ಲಿ ಟೆಲಿಕಾಂ ಸೇವೆಗಳನ್ನು ಒದಗಿಸುವ ಬಿಎಸ್‌ಎನ್‌ಎಲ್‌ 68 ಸಾವಿರ ಟೆಲಿಕಾಂ ಟವರ್‌ಗಳನ್ನು ಹೊಂದಿದೆ. ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್‌ನಂತಹ ಥರ್ಡ್ ಪಾರ್ಟಿ ಟೆಲಿಕಾಂ ಸೇವಾ ಪೂರೈಕೆದಾರರೊಂದಿಗೆ ಸಹ-ಸ್ಥಳ ವ್ಯವಸ್ಥೆಯನ್ನು ಹೊಂದಿರುವ ಟವರ್‌ಗಳನ್ನು ಮಾತ್ರ ಮಾರಾಟ ಮಾಡಲು ಬಿಎಸ್‌ಎನ್‌ಎಲ್‌ ಮುಂದಾಗಿದೆ. ಇದನ್ನೂ ಓದಿ: ಕೆಲ್ಸ ಮಾಡಿ, ಇಲ್ದೇ ಇದ್ರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ : BSNL ಉದ್ಯೋಗಿಗಳಿಗೆ ಅಶ್ವಿನಿ ವೈಷ್ಣವ್‌ ಲಾಸ್ಟ್‌ ವಾರ್ನಿಂಗ್‌

    ಈ ವಿಚಾರದ ಬಗ್ಗೆ ಬಿಎಸ್‌ಎನ್‌ಎಲ್‌ ಮತ್ತು ಕೆಪಿಎಂಜಿಯನ್ನು ಸಂರ್ಪಕಿಸಲಾಗಿದ್ದು ಯಾವುದೇ ಪ್ರತಿಕ್ರಿಯೆಗಳನ್ನು ನೀಡಿಲ್ಲ. ಬಿಎಸ್‌ಎನ್‌ಎಲ್‌ನ ಟವರ್ ಪೋರ್ಟ್‌ಫೋಲಿಯೊ ದೇಶದಲ್ಲೇ ಅತ್ಯುತ್ತಮವಾದದ್ದು ಎಂದು ಹೇಳಲಾಗುತ್ತದೆ. ಯಾಕೆಂದರೆ ಅದರ ಸುಮಾರು ಶೇ.70 ಟವರ್‌ಗಳು ಫೈಬರ್ ಆಗಿದ್ದು 4G ಮತ್ತು 5G ಸೇವೆಗಳ ನಿಯೋಜನೆಗೆ ಸಿದ್ಧವಾಗಿವೆ.

    ಎನ್‌ಎಂಪಿ ಗುರಿಗಳ ಭಾಗವಾಗಿ ಬಿಎಸ್‌ಎನ್‌ಎಲ್‌ 2025 ರ ಹಣಕಾಸು ವರ್ಷದ ಒಳಗಡೆ 13,567 ಟವರ್‌ಗಳನ್ನು ಮಾರಾಟ ಮಾಡಬೇಕಾಗಿದೆ ಮತ್ತು ದೆಹಲಿ ಮತ್ತು ಮುಂಬೈನಲ್ಲಿ ಕಾರ್ಯನಿರ್ವಹಿಸುವ ಎಂಟಿಎನ್‌ಎಲ್‌ 1,350 ಟವರ್‌ಗಳನ್ನು ಮಾರಾಟ ಮಾಡಬೇಕಾಗಿದೆ. ಒಟ್ಟಾರೆಯಾಗಿ ಎರಡು ಸರ್ಕಾರಿ ಸ್ವಾಮ್ಯದ ಟೆಲಿಕಾಂಗಳು 14,917 ಟವರ್‌ಗಳನ್ನು ಹಂತ ಹಂತವಾಗಿ ಮಾರಾಟ ಮಾಡಲಿವೆ.

    Live Tv
    [brid partner=56869869 player=32851 video=960834 autoplay=true]

  • No Follow Up, ಯಾವುದೇ ಕಾರಿಡಾರ್‌ ಸುತ್ತಿಲ್ಲ, 30 ವರ್ಷದಲ್ಲಿ ಇದು ಫಸ್ಟ್‌ – ಕೇಂದ್ರವನ್ನು ಹೊಗಳಿದ ಸುನಿಲ್‌ ಮಿತ್ತಲ್‌

    No Follow Up, ಯಾವುದೇ ಕಾರಿಡಾರ್‌ ಸುತ್ತಿಲ್ಲ, 30 ವರ್ಷದಲ್ಲಿ ಇದು ಫಸ್ಟ್‌ – ಕೇಂದ್ರವನ್ನು ಹೊಗಳಿದ ಸುನಿಲ್‌ ಮಿತ್ತಲ್‌

    ನವದೆಹಲಿ: ಯಾವುದೇ ಗಡಿಬಿಡಿ ಇಲ್ಲ, ಯಾವುದೇ ಫಾಲೋ ಅಪ್‌ ಇಲ್ಲ. ಯಾವುದೇ ಕಾರಿಡಾರ್ ಸುತ್ತದೇ ನಮಗೆ ಹಂಚಿಕೆ ಪತ್ರ ಸಿಕ್ಕಿದೆ. 30 ವರ್ಷದಲ್ಲಿ ಮೊದಲ ಬಾರಿಗೆ ಈ ಅನುಭವವಾಗಿದೆ ಎಂದು ಭಾರತಿ ಎಂಟರ್‌ಪ್ರೈಸಸ್‌ ಮುಖ್ಯಸ್ಥ ಸುನಿಲ್‌ ಮಿತ್ತಲ್‌ ಕೇಂದ್ರ ಸರ್ಕಾರವನ್ನು ಹೊಗಳಿದ್ದಾರೆ.

    5G ಸ್ಪೆಕ್ಟ್ರಮ್‌ಗಾಗಿ ಮೊದಲ ಕಂತು ಪಾವತಿಸಿದ ಕೆಲವೇ ಗಂಟೆಗಳಲ್ಲಿ ಟೆಲಿಕಾಂ ಕಂಪನಿಗಳಿಗೆ ಹಂಚಿಕೆ ಪತ್ರಗಳನ್ನು ದೂರಸಂಪರ್ಕ ಸಚಿವಾಲಯ ನೀಡಿದೆ. ಕೇಂದ್ರ ಸರ್ಕಾರ ವೇಗವಾಗಿ ಹಂಚಿಕೆ ಪತ್ರ ನೀಡಿದ್ದಕ್ಕೆ ಸುನಿಲ್‌ ಮಿತ್ತಲ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    “ಯಾವುದೇ ಗಡಿಬಿಡಿಯಿಲ್ಲ, ಯಾವುದೇ ಫಾಲೋ ಅಪ್‌ ಇಲ್ಲ. ಯಾವುದೇ ಕಾರಿಡಾರ್‌ ಸುತ್ತಿಲ್ಲ. ದೂರಸಂಪರ್ಕ ಇಲಾಖೆಯ 30 ವರ್ಷಗಳ ವ್ಯವಹಾರದಲ್ಲಿ ಮೊದಲ ಬಾರಿಗೆ ಈ ರೀತಿಯ ಅನುಭವವಾಗಿದೆ. Ease of doing business ಅಂದ್ರೆ ಇದು. ವ್ಯವಹಾರ ಅಂದರೆ ಹೀಗಿರಬೇಕು” ಎಂದು ಶ್ಲಾಘಿಸಿದ್ದಾರೆ.

    5G ಸ್ಪೆಕ್ಟ್ರಮ್ ಖರೀದಿ ಸಂಬಂಧ ಏರ್‌ಟೆಲ್‌ ಬುಧವಾರ 8,312.4 ಕೋಟಿ ರೂ. ಪಾವತಿಸಿದೆ. ಇದನ್ನೂ ಓದಿ: 12 ಸಾವಿರಕ್ಕಿಂತ ಕಡಿಮೆ ಬೆಲೆಯ ಚೀನಿ ಫೋನ್‌ ಬ್ಯಾನ್‌? – ಭಾರತದಲ್ಲಿ ಯಾವ ಕಂಪನಿಯ ಪಾಲು ಎಷ್ಟಿದೆ?

    ಕೆಲಸದಲ್ಲಿ ನಾಯಕತ್ವ. ಏನು ಬದಲಾವಣೆ! ಇದು ರಾಷ್ಟ್ರವನ್ನು ಪರಿವರ್ತಿಸುವ ಬದಲಾವಣೆ. ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಅದರ ಕನಸುಗಳಿಗೆ ಇದು ಶಕ್ತಿ ನೀಡುತ್ತದೆ ಎಂದು ಮಿತ್ತಲ್‌ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಈ ತಿಂಗಳ ಕೊನೆಯಲ್ಲಿ 5G ಸೇವೆಯನ್ನು ನೀಡಲು ಏರ್‌ಟೆಲ್‌ ಮುಂದಾಗಿದೆ. 5G ತರಂಗಾಂತರ ಹರಾಜಿನಲ್ಲಿ 43,084 ಕೋಟಿ ರೂ. ಮೌಲ್ಯದ ವಿವಿಧ ಬ್ಯಾಂಡ್‌ಗಳಲ್ಲಿ 19,867 MHz ಸ್ಪೆಕ್ಟ್ರಮ್ ಅನ್ನು ಏರ್‌ಟೆಲ್‌ ಖರೀದಿಸಿದೆ.

    ಇಂದು ಬೆಳಿಗ್ಗೆ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್‌ ಕೂ ಮಾಡಿ, 5G ಅಪ್‌ಡೇಟ್: ಸ್ಪೆಕ್ಟ್ರಮ್ ನಿಯೋಜನೆ ಪತ್ರವನ್ನು ನೀಡಲಾಗಿದೆ. 5G ಆರಂಭಿಸಲು ಸಿದ್ಧವಾಗುವಂತೆ  ಟೆಲಿಕಾಂ ಕಂಪನಿಗಳನ್ನು ವಿನಂತಿಸಲಾಗುತ್ತಿದೆ ಎಂದಿದ್ದರು.

    Live Tv
    [brid partner=56869869 player=32851 video=960834 autoplay=true]

  • 5G ನೆಟ್‌ವರ್ಕ್ ರೋಲ್‌ಔಟ್ ಸ್ಪರ್ಧೆಯಲ್ಲಿ ಟೆಲಿಕಾಂ ದೈತ್ಯಗಳು

    5G ನೆಟ್‌ವರ್ಕ್ ರೋಲ್‌ಔಟ್ ಸ್ಪರ್ಧೆಯಲ್ಲಿ ಟೆಲಿಕಾಂ ದೈತ್ಯಗಳು

    ನವದೆಹಲಿ: 5ಜಿ ನೆಟ್‌ವರ್ಕ್ ಹರಾಜು ಪ್ರಕ್ರಿಯೆ ಮುಗಿದು ಇದೀಗ ಟೆಲಿಕಾಂ ಕಂಪನಿಗಳು ರೋಲ್‌ಔಟ್ ಸ್ಪರ್ಧೆಗೆ ಇಳಿದಿವೆ. ಈಗಾಗಲೇ ರಿಲಯನ್ಸ್ ಜಿಯೋ ಹಾಗೂ ಭಾರ್ತಿ ಏರ್‌ಟೆಲ್ ಈ ತಿಂಗಳ ಒಳಗಾಗಿಯೇ ನೆಟ್‌ವರ್ಕ್‌ಗಳನ್ನು ಸ್ಥಾಪಿಸುವುದಾಗಿ ತಿಳಿಸಿವೆ.

    ಆಗಸ್ಟ್ 15ರಂದು ಭಾರತ 75ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಿಕೊಳ್ಳಲಿದ್ದು, ಜಿಯೋ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಿಹಿ ಗಳಿಗೆಯಲ್ಲೇ 5ಜಿ ಸೇವೆಗಳನ್ನು ಪ್ರಾರಂಭಿಸುವ ಬಗ್ಗೆ ಯೋಜಿಸಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: 4Gಗಿಂತ 5G ಎಷ್ಟು ಭಿನ್ನ, ಪರಿಣಾಮಕಾರಿ? ಇಲ್ಲಿದೆ ಮಾಹಿತಿ..

    ಇದರ ನಡುವೆಯೇ ಭಾರ್ತಿ ಏರ್‌ಟೆಲ್ ಕೂಡಾ ಆಗಸ್ಟ್ ಅಂತ್ಯದ ವೇಳೆಗೆ ಭಾರತದಲ್ಲಿ 5ಜಿ ನೆಟ್‌ವರ್ಕ್ ಪ್ರಾರಂಭಿಸುವುದಾಗಿ ಘೋಷಿಸಿದೆ. ಆಗಸ್ಟ್ ತಿಂಗಳಿನಲ್ಲಿಯೇ 5ಜಿ ಯೋಜನೆಯನ್ನು ಪ್ರಾರಂಭಿಸಲು ಎರಿಕ್ಸನ್, ನೋಕಿಯಾ ಹಾಗೂ ಸ್ಯಾಮ್‌ಸಂಗ್ ಕಂಪನಿಗಳೊಂದಿಗೆ 5ಜಿ ನೆಟ್‌ವರ್ಕ್ ಒಪ್ಪಂದಗಳಿಗೆ ಸಹಿ ಹಾಕಿರುವುದಾಗಿ ಏರ್‌ಟೆಲ್ ಘೋಷಿಸಿದೆ.

    ಕಳೆದ ವಾರ ಟೆಲಿಕಾಂ ಇಲಾಖೆ ನಡೆಸಿದ 5ಜಿ ಸ್ಪೆಕ್ಟ್ರಂ ಹರಾಜಿನಲ್ಲಿ ಭಾರ್ತಿ ಏರ್‌ಟೆಲ್, ರಿಲಯನ್ಸ್ ಜಿಯೋ, ವಿಐ(ವೊಡಾಫೋನ್ ಐಡಿಯಾ), ಹಾಗೂ ಅದಾನಿ ಎಂಟರ್‌ಪ್ರೈಸಸ್‌ಗಳು ಭಾಗವಹಿಸಿದ್ದವು. ಜುಲೈ 26ರಂದು ಪ್ರಾರಂಭವಾಗಿದ್ದ ಹರಾಜು ಪ್ರಕ್ರಿಯೆ ಆಗಸ್ಟ್ 1 ರಂದು ಮುಕ್ತಾಯಗೊಂಡು, ಒಟ್ಟು ಬಿಡ್ ಮೊತ್ತ 1.5 ಲಕ್ಷ ಕೋಟಿ ರೂ. ತಲುಪಿತ್ತು. ಇದನ್ನೂ ಓದಿ: 5ಜಿ ಹರಾಜು – ಸ್ಪೀಡ್ ಎಷ್ಟಿರುತ್ತೆ ಗೊತ್ತಾ?

    ಹರಾಜಿನಲ್ಲಿ ರಿಲಯನ್ಸ್ ಜಿಯೋ 700 MHz, 800 MHz, 1800 MHz, 3300 MHz ಮತ್ತು 26 GHz ಬ್ಯಾಂಡ್‌ಗಳಲ್ಲಿ 5ಜಿ ಸ್ಪೆಕ್ಟ್ರಂ ಖರೀದಿಸಿದೆ. ಏರ್‌ಟೆಲ್, 900 MHz, 1800 MHz, 2100 MHz, 3300 MHz ಮತ್ತು 26 GHz ಸ್ಪೆಕ್ಟ್ರಂನಲ್ಲಿ 19867.8 MHz ಸ್ಪೆಕ್ಟ್ರಂ ಅನ್ನು ಬಿಡ್ ಮಾಡಿ ಖರೀದಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಏರ್‌ಟೆಲ್‌ನಲ್ಲಿ 7 ಸಾವಿರ ಕೋಟಿ ಹೂಡಿಕೆ ಮಾಡಲಿದೆ ಗೂಗಲ್

    ಏರ್‌ಟೆಲ್‌ನಲ್ಲಿ 7 ಸಾವಿರ ಕೋಟಿ ಹೂಡಿಕೆ ಮಾಡಲಿದೆ ಗೂಗಲ್

    ನವದೆಹಲಿ: ಅಮೆರಿಕಾ ತಂತ್ರಜ್ಞಾನ ದೈತ್ಯ ಗೂಗಲ್ ಟೆಲಿಕಾಂ ಕಂಪನಿ ಏರ್‌ಟೆಲ್‌ನೊಂದಿಗೆ ಒಂದು ಮಹತ್ತರ ಒಪ್ಪಂದ ನಡೆಸಿದೆ. ಈ ಮೂಲಕ ಗೂಗಲ್ ಏರ್‌ಟೆಲ್‌ನಲ್ಲಿ 7 ಸಾವಿರ ಕೋಟಿ ರೂ. ಹೂಡಿಕೆ ಮಾಡುವುದಾಗಿ ಘೋಷಿಸಿದೆ.

    ಗೂಗಲ್ ಭಾರತದ ಪ್ರಮುಖ ಟೆಲಿಕಾಂ ಸಂಸ್ಥೆ ಭಾರತಿ ಏರ್‌ಟೆಲ್‌ನಲ್ಲಿ ಮುಂದಿನ 5 ವರ್ಷಗಳ ಅವಧಿಯಲ್ಲಿ 1 ಬಿಲಿಯನ್ ಡಾಲರ್(7,400 ಕೋಟಿ ರೂ.) ಹೂಡಿಕೆ ಮಾಡಲಿದೆ ಎಂದು ವರದಿಯಾಗಿದೆ. ಈ ಒಪ್ಪಂದದ ಪ್ರಕಾರ ಗೂಗಲ್ ಸಂಸ್ಥೆ ಏರ್‌ಟೆಲ್‌ ಕಂಪನಿಯ ಶೇ. 1.28ರಷ್ಟು ಪಾಲುದಾರಿಕೆಯನ್ನು ತಲಾ ಷೇರಿಗೆ 734 ರೂ.ಯಂತೆ ಪಡೆದುಕೊಳ್ಳಲಿದೆ ಹಾಗೂ 300 ಮಿಲಿಯನ್ ಡಾಲರ್ ವಾಣಿಜ್ಯ ಒಪ್ಪಂದಗಳಿಗೆ ಹೂಡಿಕೆ ಮಾಡಲಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಶೀಘ್ರವೇ 50 ದೇಶಗಳಲ್ಲಿ ಲಭ್ಯವಾಗಲಿದೆ ಡಿಸ್ನಿ ಪ್ಲಸ್

    ಈ ಒಪ್ಪಂದದ ಮೂಲಕ ಏರ್‌ಟೆಲ್‌ ಹಾಗೂ ಗೂಗಲ್ ಒಟ್ಟಾಗಿ ಗ್ರಾಹಕರಿಗೆ ಕೈಗೆಟಕುವಂತಹ ಹೊಸ ಕೊಡುಗೆಗಳನ್ನು ನೀಡಲು ಮುಂದಾಗುತ್ತಿದೆ. 5ಜಿ ಹಾಗೂ ಇತರ ಸಂಬಂಧಿತ ಸೌಲಭ್ಯಗಳ ಬಳಕೆಗೆ ನೆಟ್‍ವರ್ಕ್ ಡೊಮೈನ್ ರಚನೆಗೆ ಹೆಚ್ಚಿನ ಮಹತ್ವ ನೀಡಲಿದೆ ಎಂದು ಏರ್‌ಟೆಲ್‌ ತಿಳಿಸಿದೆ. ಇದನ್ನೂ ಓದಿ: ಮಿಲ್ಕಿ ವೇಯಲ್ಲಿ 18 ನಿಮಿಷಗಳಿಗೊಮ್ಮೆ ಸ್ಫೋಟವಾಗುವ ವಸ್ತು ಪತ್ತೆ

    ಡಿಜಿಟೈಸೇಶನ್ ಫಂಡ್‍ನ ಮುಂದುವರಿಕೆಯಾಗಿ ಹೊಸ ವ್ಯಾಪಾರ ಮಾದರಿಯನ್ನು ಬೆಂಬಲಿಸಲು ಹಾಗೂ ಸಂಪರ್ಕವನ್ನು ಹೆಚ್ಚಿಸಲು ಏರ್‌ಟೆಲ್‌ನಲ್ಲಿ ನಮ್ಮ ಹೂಡಿಕೆ ಪ್ರಾರಂಭಿಸಿದ್ದೇವೆ ಎಂದು ಗೂಗಲ್ ಹಾಗೂ ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ತಿಳಿಸಿದ್ದಾರೆ.

  • ಏರ್‌ಟೆಲ್‌ ಪ್ರಿಪೇಯ್ಡ್‌ ಕರೆ, ಡೇಟಾ ಶುಲ್ಕ ಹೆಚ್ಚಳ – ಹೀಗಿದೆ ಪರಿಷ್ಕೃತ ದರ

    ಏರ್‌ಟೆಲ್‌ ಪ್ರಿಪೇಯ್ಡ್‌ ಕರೆ, ಡೇಟಾ ಶುಲ್ಕ ಹೆಚ್ಚಳ – ಹೀಗಿದೆ ಪರಿಷ್ಕೃತ ದರ

    ನವದೆಹಲಿ: ಆರ್ಥಿಕ ಮಟ್ಟವನ್ನು ಸುಧಾರಿಸಲು ಪ್ರಿಪೇಯ್ಡ್‌ ಕರೆ, ಡೇಟಾ ಶುಲ್ಕಗಳಲ್ಲಿ ಶೇ. 20-25ರಷ್ಟು ಹೆಚ್ಚಳ ಮಾಡುತ್ತಿರುವುದಾಗಿ ಭಾರ್ತಿ ಏರ್‌ಟೆಲ್‌ ಘೋಷಿಸಿದೆ.

    ವಾಯ್ಸ್‌ ಕರೆ, ಡೇಟಾ, ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌ನ ವಿವಿಧ ಪ್ಲಾನ್‌ಗಳ ದರ ಹೆಚ್ಚಿಸಲಾಗಿದೆ. ಎಂಟ್ರಿ ಲೆವೆಲ್‌ ವಾಯ್ಸ್‌ ಕರೆ ಪ್ಲಾನ್‌ನ ಶುಲ್ಕ ಹಾಗೂ ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌ ಶುಲ್ಕದಲ್ಲಿ ಶೇ. 25ರಷ್ಟು ಹೆಚ್ಚಿಸಲಾಗಿದೆ. ಇದು ನವೆಂಬರ್‌ 26ರಿಂದ ಜಾರಿಗೆ ಬರಲಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ. ಇದನ್ನೂ ಓದಿ: ಕೊಹ್ಲಿ ಪುತ್ರಿಯನ್ನು ರೇಪ್ ಮಾಡ್ತಿನಿ ಅಂದಿದ್ದ ಐಐಟಿ ಪದವೀಧರನಿಗೆ ಜಾಮೀನು

    ಎಷ್ಟು ಏರಿಕೆ?
    28 ದಿನಗಳ ವ್ಯಾಲಿಡಿಟಿ ಇದ್ದ 79 ರೂ. ಅನ್ನು 99 ರೂ.ಗೆ ಹೆಚ್ಚಿಸಲಾಗಿದೆ. ಅನ್‌ಲಿಮಿಟೆಡ್ ‌ವಾಯ್ಸ್‌ ಕರೆ ಸೌಲಭ್ಯದಲ್ಲಿ ಈಗಿರುವ 149 ರೂ. ಪ್ಯಾಕ್‌ ಅನ್ನು 179 ರೂ.ಗೆ ಹೆಚ್ಚಿಸಿದೆ. 219 ರೂ. ಯೋಜನೆಯು 265 ರೂ.ಗೆ ಏರಿಕೆಯಾಗಿದೆ. 249 ರೂ. ಪ್ಯಾಕ್ 299 ರೂ.ಗೆ ಹಾಗೂ 298 ರೂ. ಯೋಜನೆಯು 359 ರೂ.ಗೆ ಹೆಚ್ಚಳವಾಗಿದೆ.

    56 ದಿನಗಳ ವ್ಯಾಲಿಡಿಟಿ ಇದ್ದ 449 ರೂ. ಪ್ಯಾಕ್ 549 ರೂ.ಗೆ ಏರಿ 84 ದಿನಗಳ ವ್ಯಾಲಿಡಿಟಿ ಇದ್ದ 379 ರೂ.ಯ ಪ್ಯಾಕ್ 455 ರೂ.ಗೆ ಏರಿಕೆಯಾಗಿದೆ. 598 ರೂ. ಪ್ಯಾಕ್‌ 719 ರೂ. ಆಗಿದೆ. 698 ರೂ. ಯೋಜನೆ 839 ರೂ.ಗೆ ಏರಿಕೆಯಾಗಿದೆ. ಇದನ್ನೂ ಓದಿ: ರೈತರ ಸಮಸ್ಯೆಗೆ ಪರಿಹಾರ ಸಿಗುವವರೆಗೆ ಪತ್ರಿಭಟನೆ ಮುಂದುವರಿಯುತ್ತದೆ: ಟಿಕಾಯತ್

    365 ದಿನಗಳ ವ್ಯಾಲಿಡಿಟಿ ಹೊಂದಿದ್ದ ಪ್ಯಾಕ್‍ಗಳು 1,498 ರೂ.ನಿಂದ 1,799 ರೂ.ಗೆ ಹೆಚ್ಚಿಸಲಾಗಿದೆ. 2,498 ರೂ. ಪ್ಯಾಕ್ 2,999 ರೂ.ಗೆ ಹೆಚ್ಚಳವಾಗಿದೆ. ಇನ್ನೂ ಇತರ ರೀಚಾರ್ಜ್‌ಗಳಿಗೆ ಅನ್ವಯವಾಗದ ಎನ್‍ಎ(ನಾಟ್ ಅಪ್ಲಿಕೇಬಲ್) ಪ್ಯಾಕ್ ಗಳೂ ಏರಿಕೆಯಾಗಿವೆ. 3ಜಿಬಿ ಡೇಟಾ ಪ್ಯಾಕ್ 48 ರೂ.ನಿಂದ 58 ರೂ.ಗೆ ಹೆಚ್ಚಳಗೊಂಡಿದೆ. 12ಜಿಬಿಯ ಪ್ಯಾಕ್ 98 ರೂ.ನಿಂದ 118 ರೂ.ಗೆ ಏರಿಕೆಯಾಗಿದೆ ಹಾಗೂ 50ಜಿಬಿ ಡೇಟಾದ ಪ್ಯಾಕ್ 251 ರೂ.ನಿಂದ 301 ರೂ.ಗೆ ಹೆಚ್ಚಳವಾಗಿದೆ.

  • ತಿಂಗಳಿಗೆ 160 ರೂ.ಗೆ 16 ಜಿಬಿ ಡೇಟಾ ಸಿಗುತ್ತಿರುವುದು ದುರಂತ – ಏರ್‌ಟೆಲ್‌ ಮುಖ್ಯಸ್ಥ

    ತಿಂಗಳಿಗೆ 160 ರೂ.ಗೆ 16 ಜಿಬಿ ಡೇಟಾ ಸಿಗುತ್ತಿರುವುದು ದುರಂತ – ಏರ್‌ಟೆಲ್‌ ಮುಖ್ಯಸ್ಥ

    ನವದೆಹಲಿ: ವಿಶ್ವದಲ್ಲೇ ಕಡಿಮೆ ಬೆಲೆಗೆ ಸಿಗುತ್ತಿದ್ದ ಡೇಟಾ ಮುಂದಿನ ದಿನಗಳಲ್ಲಿ ದುಬಾರಿಯಾಗಲಿದೆ ಎಂಬುದನ್ನು ಏರ್‌ಟೆಲ್‌ ಮುಖ್ಯಸ್ಥ ಸುನಿಲ್‌ ಭಾರ್ತಿ ಮಿತ್ತಲ್‌ ಸೂಚ್ಯವಾಗಿ ಹೇಳಿದ್ದಾರೆ.

    ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ತಿಂಗಳಿಗೆ 160 ರೂ. ದರದಲ್ಲಿ 16 ಜಿಬಿ ಡೇಟಾ ಲಭ್ಯವಾಗುತ್ತಿರುವುದು ದುರಂತ ಎಂದು ನೇರವಾಗಿಯೇ ಹೇಳಿದ್ದಾರೆ.

    ಈಗ ನೀವು ಪೂರ್ಣವಾಗಿ 1.6 ಜಿಬಿ ಡೇಟಾವನ್ನು ಬಳಕೆ ಮಾಡುತ್ತಿರೋ ಇಲ್ಲವೋ ಗೊತ್ತಿಲ್ಲ. ಆದರೆ ದರದ ಲೆಕ್ಕಾಚಾರ ಹಾಕಿದರೆ ನೀವು ಹೆಚ್ಚು ದರ ಪಾವತಿಸಲು ಸಿದ್ಧರಾಗಿ. ನಾವು ಅಮೆರಿಕ ಯುರೋಪ್‌ನಲ್ಲಿ ಇರುವಂತೆ 50-60 ಅಮೆರಿಕ ಡಾಲರ್‌ ಏರಿಕೆ ಆಗಬೇಕೆಂದು ಹೇಳುತ್ತಿಲ್ಲ. ಆದರೆ ತಿಂಗಳಿಗೆ 2 ಡಾಲರ್‌ ಬೆಲೆಯಲ್ಲಿ 16 ಜಿಬಿ ನೀಡುವುದು ಸಮಂಜಸವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

     

    ಓರ್ವ ಗ್ರಾಹಕನಿಂದ ಕಂಪನಿಗೆ ಸಿಗುವ ಸರಾಸರಿ ಆದಾಯವನ್ನು ಎಆರ್‌ಪಿಯು ಎಂದು ಕರೆಯಲಾಗುತ್ತದೆ. ನಮಗೆ ಎಆರ್‌ಪಿಯುನಿಂದ 300 ರೂ. ಬಂದರೆ ಸಹಾಯವಾಗುತ್ತದೆ. ಟೆಲಿಕಾಂ ಒಂದೇ ಉದ್ಯಮವಲ್ಲ. ಡಿಜಿಟಲ್‌ ಕ್ಷೇತ್ರದಲ್ಲೂ ಹೂಡಿಕೆ ಮಾಡಬೇಕು. ಕಂಪನಿ ಉಳಿಯಬೇಕಾದರೆ ಡೇಟಾ ಬೆಲೆ ಏರಿಕೆ ಅನಿವಾರ್ಯ ಎಂದು ಎಂದು ಹೇಳಿದರು.

    ಜೂನ್‌ 30ಕ್ಕೆ ಅಂತ್ಯಗೊಂಡ ಮೊದಲ ತ್ರೈಮಾಸಿಕದಲ್ಲಿ ಏರ್‌ಟೆಲ್‌ 157 ರೂ. ಎಆರ್‌ಪಿಯು ಗಳಿಸಿತ್ತು. ಬಹಳ ಕಠಿಣ ಸಮಯದಲ್ಲಿ ನಾವು ಸೇವೆ ನೀಡಿದ್ದೇವೆ. ಅಷ್ಟೇ ಅಲ್ಲದೇ 5ಜಿ, ಅಪ್ಟಿಕಲ್‌ ಕೇಬಲ್‌, ಸಬ್‌ಮರೀನ್‌ ಕೇಬಲ್‌ಗಳಿಗೆ ಹೂಡಿಕೆ ಮಾಡಲು ಎಆರ್‌ಪಿಯು ಹೆಚ್ಚಾಗಬೇಕು ಎಂದು ಅಭಿಪ್ರಾಯಪಟ್ಟರು.

     

     

    ಕೋವಿಡ್‌ 19 ನಿಂದಾಗಿ‌ ಕಳೆದ 6 ತಿಂಗಳಿನಲ್ಲಿ ಡಿಜಿಟಲ್‌ ಕಂಟೆಂಟ್‌ ಬಳಕೆ ಹೆಚ್ಚಾದ ಕಾರಣ ಎವರೆಜ್‌ ರೆವೆನ್ಯೂ ಪರ್‌ ಯೂಸರ್(ಎಆರ್‌ಪಿಯು) 200 ರೂ. ಗಿಂತಲೂ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಮಿತ್ತಲ್‌ ಹೇಳಿದ್ದಾರೆ.

    ಏರ್‌ಟೆಲ್‌ ಅತೀ ಹೆಚ್ಚಿನ ಎಆರ್‌ಪಿಯು ಹೊಂದಿದ್ದು ಪ್ರತಿ ಗ್ರಾಹಕನಿಂದ ಪ್ರತಿ ತಿಂಗಳು ಸರಾಸರಿ 157 ರೂಪಾಯಿ ಆದಾಯ ಸಂಗ್ರಹಿಸುತ್ತಿದೆ. ಜಿಯೋ 140 ರೂ., ವೊಡಾಫೋನ್‌ 114 ರೂ. ಎಆರ್‌ಪಿಯು ಗಳಿಸುತ್ತಿದೆ.

    ಎಜಿಆರ್‌ ಶುಲ್ಕ ವಿಚಾರವಾಗಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್‌ನ ಎಜಿಆರ್‌ ಆದೇಶದಿಂದ ಏರ್‌ಟೆಲ್‌ಗೆ ಬಹಳ ಸಮಸ್ಯೆಯಾಗಿದೆ. ಆದರೂ ನಾವು ಸ್ವಲ್ಪ ಪ್ರಮಾಣ ಹಣ ಪಾವತಿಸಿ ಬಗೆ ಹರಿಸಲು ಯತ್ನಿಸಿದ್ದೇವೆ. ಈ ಹಣ ಪಾವತಿಯಿಂದಾಗಿ ನಮಗೆ 4ಜಿ, 5ಜಿ ನೆಟ್‌ವರ್ಕ್‌ ಹೂಡಿಕೆಗೆ ಸಮಸ್ಯೆಯಾಗಿದೆ ಎಂದು ತಿಳಿಸಿದರು.

    ಭಾರತಿ ಏರ್‌ಟೆಲ್‌ ಎಜಿಆರ್‌ ಶುಲ್ಕವಾಗಿ 43,980 ಕೋಟಿ ರೂ.ಪಾವತಿಸಬೇಕಿದ್ದು, ಸದ್ಯ 18,004 ಕೋಟಿ ರೂ. ಪಾವತಿಸಿದೆ. ಈಗ ಕಂಪನಿ ಉಳಿದ ಮೊತ್ತವನ್ನು ಪಾವತಿಸಲು 15 ವರ್ಷ ಸಮಯವನ್ನು ಕೇಳಿದೆ.

    ವೊಡಾಫೋನ್‌ ಐಡಿಯಾ 58,254 ಕೋಟಿ ರೂ. ಪಾವತಿಸಬೇಕಿದ್ದು, ಈಗ 7,854 ಕೋಟಿ ರೂ. ಎಜಿಆರ್‌ ಶುಲ್ಕ ಪಾವತಿಸಿದೆ. ಏರ್‌ಟೆಲ್‌ನಂತೆ ವೊಡಾಫೋನ್‌ ಉಳಿದ 50,400 ಕೋಟಿ ರೂ. ಪಾವತಿಸಲು 15 ವರ್ಷ ಸಮಯ ನೀಡುವಂತೆ ಕೇಳಿಕೊಂಡಿದೆ.

    ಏನಿದು ಎಜಿಆರ್?
    ಹೊಂದಾಣಿಕೆ ಮಾಡಲಾದ ನಿವ್ವಳ ಆದಾಯ (ಅಡ್ಜಸ್ಟೆಡ್ ಗ್ರಾಸ್ ರೆವೆನ್ಯೂ- ಎಜಿಆರ್) ಪ್ರಕರಣದಲ್ಲಿ ಕಳೆದ ವರ್ಷ ಕೇಂದ್ರ ಸರ್ಕಾರದ ಪರವಾಗಿ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು.

    ದೇಶದ ಹೊಸ ಟೆಲಿಕಾಂ ನೀತಿ ಪ್ರಕಾರ, ದೂರಸಂಪರ್ಕ ಆದಾಯದ ಜತೆಗೆ ಬಾಡಿಗೆ, ಲಾಭಾಂಶ, ನಿಶ್ಚಿತ ಠೇವಣಿಯಿಂದ ಬರುವ ಲಾಭ ಹಾಗೂ ಇನ್ನಿತರೆ ಆದಾಯಗಳನ್ನು ಎಜಿಆರ್ ಎಂದು ಪರಿಗಣಿಸಲಾಗುತ್ತದೆ. ಕೇಂದ್ರ ಸರ್ಕಾರದ ಅನುಮತಿ ಪಡೆದು ಕಾರ್ಯನಿರ್ವಹಿಸುವ ಕಂಪನಿಗಳು ತಮ್ಮ ಎಜಿಆರ್ ನಲ್ಲಿ ಒಂದಷ್ಟು ಪಾಲನ್ನು ಕೇಂದ್ರ ಸರ್ಕಾರಕ್ಕೆ ನೀಡಬೇಕಾಗುತ್ತದೆ. ಅದನ್ನು ವಾರ್ಷಿಕ ಲೈಸೆನ್ಸ್ ಶುಲ್ಕ ಎಂದು ಕರೆಯಲಾಗುತ್ತದೆ. ಇದರ ಜತೆಗೆ ತಮಗೆ ಹಂಚಿಕೆಯಾದ ಸ್ಪೆಕ್ಟ್ರಂ ಅನ್ನು ಬಳಕೆ ಮಾಡಿದ್ದಕ್ಕೆ ಬಳಕೆ ಶುಲ್ಕವನ್ನೂ ಪಾವತಿಸಬೇಕಾಗಿದೆ.

  • ಸರ್ಕಾರ ಸಹಾಯ ಮಾಡದಿದ್ದರೆ ವೊಡಾಫೋನ್, ಐಡಿಯಾ ಮುಚ್ಚುತ್ತೇವೆ- ಬಿರ್ಲಾ

    ಸರ್ಕಾರ ಸಹಾಯ ಮಾಡದಿದ್ದರೆ ವೊಡಾಫೋನ್, ಐಡಿಯಾ ಮುಚ್ಚುತ್ತೇವೆ- ಬಿರ್ಲಾ

    ನವದೆಹಲಿ: ಕೇಂದ್ರ ಸರ್ಕಾರ ನಮಗೆ ಪರಿಹಾರೋಪಾಯಗಳನ್ನು ಕಲ್ಪಿಸದಿದ್ದಲ್ಲಿ ವೊಡಾಫೋನ್ ಹಾಗೂ ಐಡಿಯಾ ಕಂಪನಿಗಳನ್ನು ಮುಚ್ಚುತ್ತೇವೆ ಎಂದು ಸಂಸ್ಥೆಯ ಅಧ್ಯಕ್ಷ ಕುಮಾರ್ ಮಂಗಳಂ ಬಿರ್ಲಾ ಹೇಳಿದ್ದಾರೆ.

    ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನವರಿ ಅಂತ್ಯದ ವೇಳೆಗೆ ಕಂಪನಿಯು ಬಾಕಿ ಉಳಿಸಿಕೊಂಡಿರುವ ಹೊಂದಾಣಿಕೆ ಮಾಡಲಾದ ನಿವ್ವಳ ಆದಾಯ (ಅಡ್ಜಸ್ಟೆಡ್ ಗ್ರಾಸ್ ರೆವೆನ್ಯೂ- ಎಜಿಆರ್) ಹಣವನ್ನು ಪಾವತಿಸಬೇಕಿದ್ದು, ಈ ಕುರಿತು ಕೇಂದ್ರ ಸರ್ಕಾರದ ನಮಗೆ ಏನಾದರೂ ಪರಿಹಾರ ಕಲ್ಪಿಸಬೇಕು. ಇಲ್ಲವಾದಲ್ಲಿ ವೊಡಾಫೋನ್, ಐಡಿಯಾದ ಅಧ್ಯಾಯ ಮುಕ್ತಾಯವಾಗಲಿದೆ. ದಿವಾಳಿಯಾದ ನಂತರವೂ ನಾವು ಹಣ ಹೂಡುವುದರಲ್ಲಿ ಅರ್ಥವಿಲ್ಲ ಹೀಗಾಗಿ ನಾವು ಮಳಿಗೆಗಳನ್ನು ಮುಚ್ಚುತ್ತೇವೆ ಎಂದು ಬಿರ್ಲಾ ಸ್ಪಷ್ಟಪಡಿಸಿದ್ದಾರೆ.

    ಮುಖೇಶ್ ಅಂಬಾನಿಯವರ ರಿಲಾಯನ್ಸ್ ಜಿಯೋ ಕಡಿಮೆ ಬೆಲೆಯ ಡೇಟಾ ಹಾಗೂ ಕರೆಯ ಸೌಲಭ್ಯ ನೀಡುವ ಮೂಲಕ ಟೆಲಿಕಾಂ ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿದೆ. ಹೀಗಾಗಿ ಜಿಯೋಗೆ ಸ್ಪರ್ಧೆಯೊಡ್ಡಲು ಇತರೆ ಕಂಪನಿಗಳು ಸಹ ದರ ಕಡಿಮೆ ಮಾಡಬೇಕಾಯಿತು. ಇದರ ಭಾಗವಾಗಿ ಬಿರ್ಲಾ ಅವರ ಐಡಿಯಾ ಹಾಗೂ ಬ್ರಿಟಿಷ್ ಮೂಲದ ಟೆಲಿಕಾಂ ಕಂಪನಿ ವೊಡಾಫೋನ್ ಕಳೆದ ವರ್ಷ ವಿಲೀನಗೊಂಡಿತ್ತು. ನಂತರ ಕರೆ ಹಾಗೂ ಡೇಟಾ ದರಗಳನ್ನು ಕಡಿಮೆ ಮಾಡಿದ್ದವು. ಇದನ್ನೂ ಓದಿ: ಯಾವುದೇ ದಿನದಲ್ಲಿ ಭಾರತವನ್ನು ತೊರೆಯಬಹುದು ವೊಡಾಫೋನ್

    ಈ ವೇಳೆ ಕಂಪನಿಗೆ 1.17 ಲಕ್ಷ ರೂ. ನಷ್ಟ ಉಂಟಾಗಿತ್ತು. ಈ ಮಧ್ಯೆ 14 ವರ್ಷಗಳಿಂದ ತೆರಿಗೆ ಹಾಗೂ ಸ್ಪೆಕ್ಟ್ರಂ ಶುಲ್ಕವನ್ನು ಬಾಕಿ ಉಳಿಸಿಕೊಂಡಿರುವುದನ್ನು ಕಂಪನಿಗಳು ಪಾವತಿಸಬೇಕೆಂಬ ಸರ್ಕಾರದ ನಿಲುವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು. ನಂತರ ಸರ್ಕಾರಕ್ಕೆ ಹಣ ಪಾವತಿಸುವಂತೆ ಸುಪ್ರೀಂ ಟೆಲಿಕಾಂ ಕಂಪನಿಗಳಿಗೆ ಸೂಚಿಸಿದೆ. ಕೆಲವು ವಾರಗಳ ಹಿಂದೆ ಟೆಲಿಕಾಂ ವಲಯ ಅತಿ ಹೆಚ್ಚು ನಷ್ಟವನ್ನು ದಾಖಲಿಸಿದೆ. ಹೀಗಾಗಿ ಇಷ್ಟು ಪ್ರಮಾಣದ ಮೊತ್ತವನ್ನು ಗಡುವಿನೊಳಗೆ ಸರ್ಕಾರಕ್ಕೆ ಹೇಗೆ ಪಾವತಿಸುವುದು ಎಂಬುದು ಕಂಪನಿಗಳ ಮುಖ್ಯಸ್ಥರನ್ನು ಚಿಂತೆಗೀಡು ಮಾಡಿದೆ.

    ಭಾರೀ ನಷ್ಟದ ನಡುವೆಯೂ ಇಷ್ಟೊಂದು ಮೊತ್ತದ ಹಣವನ್ನು ನಮ್ಮಿಂದ ಪಾವತಿಸಲು ಸಾಧ್ಯವಿಲ್ಲ. ಹೀಗಾಗಿ ದಂಡ ಹಾಗೂ ಬಡ್ಡಿಯನ್ನು ಕೇಂದ್ರ ಸರ್ಕಾರ ಮನ್ನಾ ಮಾಡಬೇಕೆಂದು ಟೆಲಿಕಾಂ ಸಂಸ್ಥೆಗಳಾದ ಏರ್‍ಟೆಲ್ ಹಾಗೂ ವೊಡಾಫೊನ್ ಕೋರ್ಟ್ ಮೊರೆ ಹೋಗಿವೆ. ಅಲ್ಲದೆ ಸುಪ್ರೀಂ ಕೋರ್ಟ್‍ನಲ್ಲಿ ಮರು ಪರಿಶೀಲನಾ ಅರ್ಜಿಯನ್ನು ಸಹ ಸಲ್ಲಿಸಿವೆ. ಇದನ್ನೂ ಓದಿ: ಕೇಂದ್ರದಿಂದ ಟೆಲಿಕಾಂ ಕಂಪನಿಗಳಿಗೆ ಬಿಗ್ ರಿಲೀಫ್

    ಎಜಿಆರ್ ಪ್ರಕರಣದಲ್ಲಿ ಅಕ್ಟೋಬರ್ 26 ರಂದು ಕೇಂದ್ರ ಸರ್ಕಾರದ ಪರ ತೀರ್ಪು ನೀಡಿರುವ ಸುಪ್ರೀಂಕೋರ್ಟ್ 92 ಸಾವಿರ ಕೋಟಿ ರೂ. ಹಣವನ್ನು ಟೆಲಿಕಾಂ ಕಂಪನಿಗಳಿಂದ ವಸೂಲು ಮಾಡಲು ಅನುಮತಿ ನೀಡಿತ್ತು. ಅಷ್ಟೇ ಅಲ್ಲದೇ ಕೋರ್ಟ್ 3 ತಿಂಗಳ ಒಳಗಡೆ ಈ ಹಣವನ್ನು ಪಾವತಿಸುವಂತೆ ಟೆಲಿಕಾಂ ಕಂಪನಿಗಳಿಗೆ ಗಡುವು ನೀಡಿತ್ತು.

    ಏನಿದು ಎಜಿಆರ್?:
    ದೇಶದ ಹೊಸ ಟೆಲಿಕಾಂ ನೀತಿ ಪ್ರಕಾರ, ದೂರಸಂಪರ್ಕ ಆದಾಯದ ಜತೆಗೆ ಬಾಡಿಗೆ, ಲಾಭಾಂಶ, ನಿಶ್ಚಿತ ಠೇವಣಿಯಿಂದ ಬರುವ ಲಾಭ ಹಾಗೂ ಇನ್ನಿತರೆ ಆದಾಯಗಳನ್ನು ಎಜಿಆರ್ ಎಂದು ಪರಿಗಣಿಸಲಾಗುತ್ತದೆ. ಕೇಂದ್ರ ಸರ್ಕಾರದ ಅನುಮತಿ ಪಡೆದು ಕಾರ್ಯನಿರ್ವಹಿಸುವ ಕಂಪನಿಗಳು ತಮ್ಮ ಎಜಿಆರ್ ನಲ್ಲಿ ಒಂದಷ್ಟು ಪಾಲನ್ನು ಕೇಂದ್ರ ಸರ್ಕಾರಕ್ಕೆ ನೀಡಬೇಕಾಗುತ್ತದೆ. ಅದನ್ನು ವಾರ್ಷಿಕ ಲೈಸೆನ್ಸ್ ಶುಲ್ಕ ಎಂದು ಕರೆಯಲಾಗುತ್ತದೆ. ಇದರ ಜತೆಗೆ ತಮಗೆ ಹಂಚಿಕೆಯಾದ ಸ್ಪೆಕ್ಟ್ರಂ ಅನ್ನು ಬಳಕೆ ಮಾಡಿದ್ದಕ್ಕೆ ಬಳಕೆ ಶುಲ್ಕವನ್ನೂ ಪಾವತಿಸಬೇಕಾಗಿದೆ.

    ಭಾರತಿ ಏರ್ಟೆಲ್ 21,682 ಕೋಟಿ ರೂ., ವೊಡಾಫೋನ್ ಜೊತೆ ಐಡಿಯಾ ವಿಲೀನಗೊಂಡಿದ್ದರಿಂದ 28,300 ಕೋಟಿ ರೂ., ರಿಲಯನ್ಸ್ ಕಮ್ಯೂನಿಕೇಷನ್ಸ್ 16,456 ಕೋಟಿ ರೂ., ಬಿಎಸ್‍ಎನ್‍ಎಲ್ 2,098 ಕೋಟಿ ರೂ. ಹಾಗೂ ಎಂಟಿಎನ್‍ಎಲ್ 2,537 ಕೋಟಿ ರೂ. ಪಾವತಿಸಬೇಕಾಗಿದೆ.